ಒಟ್ಟು 56 ಕಡೆಗಳಲ್ಲಿ , 25 ದಾಸರು , 51 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆ ಬೆಟ್ಟವನೇರಿ ನಿಂದೆಅವನಿವೈಕುಂಠವೆಂದೆ ಆವಿಧಿಸ್ಮರರ ತಂದೆಪ.ತಮನೆಂಬರಿಯ ತರಿದು ತರಿದು ನಿಗಮವ ತಂದುಕ್ರಮದಿ ಕಮಲೋದ್ಭವಗೆ ಕೊಡುವೆನೆಂದೇರಿದೆಯೊಕಮಲವ್ವೆ ಬರೆ ಕಂಡು ಕಲ್ಲ ಭಾರವನಿಳುಹಿಭ್ರಮಿಸಿರುವಭಾವತೋರಿದೆಯೊ ಖಳೋತ್ತಮನ ದಾಡೆಯಲರಿದು ಈ ತಾಣವೇರಿದೆಯೊ 1ಧೀರ ಶಿಶುವಿನಹಗೆವಿದಾರಿಸುತ ದಶದಿಶದಿಸಾರಿದ ನಿಜರ ನೋಡಿ ಸಲಹಲಿಲ್ಲೇರಿದೆಯೊಮೀರಿ ಮೆರೆವನ ತಲೆಯ ಮೆಟ್ಟಿ ಪಾತಾಳಕಿಳುಹಿತೋರಿದೆಯೊ ತ್ವತ್ಪಾದದಿರವ ಧರೆಯಪಾರುವರಿಗೊಲಿದಿತ್ತ ಪರಿಯಲೇರಿದೆಯೊ 2ಅಸುರ ನೊಯಿದರಸಿಯಳ ಅರಸ ತಂದೇರಿದೆಯೊಪಶುಗಾವಿ ಯೋಗಗಳ ಪುರವ ಪೊಗಲೇರಿದೆಯೊಹೊಸಧರ್ಮಹೊಲಬುತೋರಿದೆಯೊ ಇದರಪೆಸರರುಹಿ ಪೊರೆಯೆನ್ನ ಪ್ರಸನ್ವೆಂಕಟೇಶ 3
--------------
ಪ್ರಸನ್ನವೆಂಕಟದಾಸರು
ಯೋಗಿಬಿಟ್ಟರೆ ಬಿಡದು ನಾದವುಯೋಗಿಬಿಟ್ಟರೆ ಬಿಡದು ನಾದವುಕೂಗುತಿಹುದು ಸರ್ವಕಾಲದಿಜಾಗಟೆ ಕೊಳಲು, ತಮ್ಮಟೆಚಂಗು ಕೊಂಬು ತಾಳರವಗಳಿಂದಪಮಲಗೆ ಕುಳಿತರೆ ಕೂಗುತಿಹುದುನಿಲಲು ನಡೆಯೆ ಕೂಗುತಿಹುದುಒಲಿದು ಮಾತುಗಳಿರಲಿಕೆಬಲಿದು ಧುಂಧುಂ ಎಂದು ಭೇರಿಯ ಶಬ್ದರವಗಳಿಂದನಿಲದೆ ಮುರಿದು ಮದವಸುಲಭ ಸುಖವ ಸುರಿಸುತ1ಕಣ್ಣು ಮುಚ್ಚಲು ಕೂಗುತಿಹುದುಕಣ್ಣು ತೆರೆಯೆ ಕೂಗುತಿಹುದುಉಣ್ಣುತಲಿ ತಾನು ಇರಲಿಕೆಘಣ್ಣ ಘಣ್ಣ ಘಣ್ಣಲು ಎಂದು ಘಂಟೆ ಶಬ್ದದ ರವಗಳಿಂದಮಣ್ಣಗೂಡಿಸಿಶೋಕಮೋಹವಪುಣ್ಯರವವ ಬೀರುತ2ಸುಮ್ಮನಿರಲು ಕೂಗುತಿಹುದು ಸುಳಿದಾಡೆ ಕೂಗುತಿಹುದುಬಮ್ಮನೊಮ್ಮೆ ಮರೆತು ಇರಲಿಕೆಘಮ್ಮ ಘಮ್ಮ ಘಮ್ಮ ಎಂದು ಶಂಖ ಶಬ್ದದ ರವಗಳಿಂದಹಮ್ಮುವಾಸನ ಕ್ಷಯವಮಾಡಿನಿರ್ಮಲತ್ವವ ತೋರುತ3ಅರುಣಕಾಲದಿ ಅಸ್ತಕಾಲದಿ ಅವಸ್ಥಾತ್ರಯ ಕಾಲದಿಅರಗಳಿಗೆ ಕ್ಷಣ ಮೂಹೂರ್ತದಿಸರಿಗರಿ ಗಮಪ ಎಂದು ಸ್ವರಮಂಡಲರವಗಳಿಂದತರಿದು ಜನನ ಮರಣವನ್ನುತೇಜಬಿಂದು ಸುರಿವುತ4ಇಂತುನಿತ್ಯಕಾಲದಿ ಬಿಡದೆಸಂತತದಲಿ ಹಾಡಿಪಾಡಿನಿಂತು ಚಾಕರಿಯನೆ ಮಾಡುತಚಿಂತಕರನುತಾ ಚಿದಾನಂದನಾಗಿ ತೋರ್ಪ ಯೋಗಿಯನ್ನುಅಂತ್ಯವಿಲ್ಲದಾನಂದಪಡಿಸಿ ಆಶೀರ್ವಾದವ ಪಡೆಯುತ5
--------------
ಚಿದಾನಂದ ಅವಧೂತರು
ರಂಭೆ-ಊರ್ವಸಿ ರಮಣಿಯರೆಲ್ಲರು ||ಚೆಂದದಿಂ ಭರತನಾಟ್ಯವ ನಟಿಸೆ |ಝಂತಕ ತಕಧಿಮಿ ತದಿಗಣತೋಂ ಎಂದು |ಝಂಪೆತಾಳದಿ ತುಂಬುರನೊಪ್ಪಿಸೆ ||ಧಾಪಮಪಧಸರಿ ಎಂದು ಧ್ವನಿಯಿಂದ |ನಾರದ ತುಂಬುರು ಗಾನವ ಮಾಡಲು |ನಂದಿಯು ಚೆಂದದಿ ಮದ್ದಲೆ ಹಾಕಲು 1ಫಣಿಯ ಮೆಟ್ಟಿ ಬಾಲವ ಕೈಯಲಿ ಪಿಡಿದು |ಫಣಘಣಿಸುತ ನಾಟ್ಯವನಾಡೆ |ದಿನಪಮಂಡಲದಂತೆ ಪೊಳೆಯುವ ಮುಖದೊಳು ||ಚಲಿಸುತ ನೀಲಕೇಶಗಳಾಡೆ |ಕಾಲಲಂದಿಗೆ ಗೆಜ್ಜೆ ಘುಲುಘುಲು ಘುಲುಘುಲು |ಘುಲುರೆಂದು ಉಡಿಗೆಜ್ಜೆ ಗಂಟೆಗಳಾಡೆ ||ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ |ಪುಟ್ಟಿ ಪಾದವನು ಇಟ್ಟ ಶ್ರೀಕೃಷ್ಣನು |ಮೆಟ್ಟಿದ ತದ್ಧಿಮಿ ತಧಿಗಣತೋಂ ಎಂದು 2ಸುರರುಪುಷ್ಪದ ವೃಷ್ಟಿಯ ಕರೆಯಲು |ಸುದತಿಯರೆಲ್ಲರು ಪಾಡಲು |ನಾಗಕನ್ನೆಯರು ನಾಥನ ಬೇಡಲು |ನಾನಾವಿಧ ಸ್ತುತಿ ಮಾಡಲು ||ರಕ್ಕಸರೆಲ್ಲರು ಕಕ್ಕಸವನೆ ಕಂಡು |ದಿಕ್ಕಿದಿಕ್ಕುಗಳಿಗೋಡಲು ||ಚಿಕ್ಕವನಿವನಲ್ಲ ಪುರಂದರವಿಠಲ |ವೆಂಕಟರಮಣನ ಬೇಗ ಯಶೋದೆ |ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ 3
--------------
ಪುರಂದರದಾಸರು
ಶುಭವು ಶ್ರೀಹರಿಯ ನಾಮವು ಸುಜನರಿಗೆಲ್ಲಶುಭವು ಶ್ರೀಹರಿಯ ನಾಮವು ಪಶುಭವು ಶ್ರೀಹರಿಯ ನಾಮವಿಭವದಿಂ ಪೊಗಳಲುಶುಭಕೃತು ನಾಮ ಸಂವತ್ಸರದಲಿಶುಭಶುಭವೆನ್ನುತ ಪಾಡುವರನು ಸಲಹುವಅ.ಪಸಿಂಧುಶಯನ ಹರಿಯಇಂದಿರೆಸಹಿತಚಂದದಿ ಭಜಿಸುವರಮಂದರಧರಅರವಿಂದನಯನ ಶ್ರೀಮು-ಕುಂದಭಕ್ತರ ಭವಬಂಧನ ಬಿಡಿಸುವಪೊಂದಿ ಭಜಿಸುವರಾನಂದದಿ ಸಲಹುವಸುಂದರವದನಶುಭಾಂಗನು ಮುದದಲಿಇಂದ್ರಾದಿಗಳು ಆನಂದದಿ ಪೊಗಳೆ ಗೋ-ವಿಂದ ಆನಂದ ಹೃನ್ಮಂದಿರ ವಾಸನು 1ಶುಭವು ಭಕ್ತರಕಾರ್ಯಕೆ ಶ್ರೀಹರಿಯನಾಮಶುಭವು ಮುಕ್ತಿಸಾಧನಕೆಶುಭವು ಬಂಧುಗಳಿಂದ ಸದನದಿ ವೆÀುರೆಯಲುಶುಭವು ಭಕ್ತರ ವೃಂದ ಕೂಡಿ ನಲಿದಾಡಲುಶುಭಗುಣ ಶೀಲನ ಶುಭಗುಣಗಳು ಸ-ನ್ಮುದದಲಿ ಪಾಡಲು ಶುಭಕೊಡುವನುಶುಭಶುಭಶುಭವೆನ್ನುತ ನಲಿದಾಡೆ ಅ-ಶುಭಗಳನೋಡಿಸಿ ಶುಭವೀವನುಹರಿ2ಶುಭವು ಶೋಭನ ಶ್ರೀಶಗೆ ಶ್ರೀ ಸಹಿತದಿವೆÀುರೆವ ಮಹಾನುಭಾವಗೇಶುಭವೆಂದು ಪಾಡಲುಅಗಣಿತಮಹಿಮನಬಗೆಬಗೆಯಿಂದವರಘ ಪರಿಹರಿಸುವಖಗವಾಹನಶ್ರೀ ಕಮಲನಾಭ ವಿಠ್ಠಲನನು ಪಾಡುವ ಸುಜನರ ಸಲಹುವಹಗಲಿರುಳೆನ್ನದೆ ಭಜಿಸುತ ಪಾಡಿರೊಕಡಲೊಡೆಯನಪಾದಧೃಡ ಭಕುತಿಯಲಿ3
--------------
ನಿಡಗುರುಕಿ ಜೀವೂಬಾಯಿ
ಷಷ್ಠಿಯ ದಿವಸ(ಶ್ರೀ ವೆಂಕಟೇಶನ ಅವಭೃಥ ಸ್ನಾನ)ಮುಕುತಿದಾಯಕ ಮೂಲಪುರುಷಗೆ 1ಭೇರಿಶಬ್ದವು ನಗಾರಿಘರ್ಜನೆಮೌರಿತಾಳವು ಮೃದಂಗಶಬ್ದವು 2ಉದಯಕಾಲದಿ ಒದಗಿ ಭಕುತರುಪದುಮನಾಭನ ಪಾಡಿ ಪೊಗಳ್ವರು 3ಭೂರಿಮಂಗಲಕರದ ಶಬ್ದವುಸೇರಿ ಕಿವಿಯೊಳು ತೋರುವುದಲ್ಲೆ 4ನಿದ್ದೆಬಾರದು ನಿಮಿಷಮಾತ್ರಕೆಎದ್ದು ಪೇಳೆಲೆ ಏಣಲೋಚನೆ 5ಸುಮ್ಮನೀನಿರು ಸುಳಿಯಬೇಡೆಲೆಎಮ್ಮುವುದು ನಿದ್ರೆ ಏನ ಪೇಳಲಿ 6ಬೊಮ್ಮಸುರರಿಗು ಪೊಗಳತೀರದುತಿಮ್ಮರಾಯನ ಮಹಿಮೆ ದೊಡ್ಡಿತು 7ನಿನ್ನೆ ದಿವಸದ ನಿದ್ರೆವಿಹುದೆಲೆಕಣ್ಣಿಗಾಲಸ್ಯ ಕಾಂಬುವದಲ್ಲೇ 8ಬಣ್ಣಿಸುವದೆಲೆ ಬಹಳವಿಹುದಲೆಪನ್ನಗವೇಣಿ ಪವಡಿಸೆ ನೀನು 9ಏಳು ಏಳಮ್ಮ ಅಲಸ್ಯವ್ಯಾತಕೆಕಾಲಿಗೆರಗುವೆ ಹೇಳಬೇಕಮ್ಮ 10ಜಯಜಯ ವಾಧಿಶಯನಜಯಜಯ ದೈತ್ಯವಿನಾಶ ಜಯಜಯ ಶ್ರೀನಿವಾಸ 1ಗಂಧಕಸ್ತೂರಿಪುಣುಗಚಂದನಪನ್ನೀರುಗಳಹೊಂದಿಸಿ ತೋಷದಿ ಮಂದರಧರಗೆ 2ಆಕಾಶರಾಯನ ಮಗಳು ಹರುಷದಿಂದೊಡಗೂಡಿಶ್ರೀಕರ ವೆಂಕಟಪತಿಯು ಸರಸವಾಡಿ 3ಶ್ರೀದೇವಿ ಭೂದೇವಿಮಾಧವಸಹಿತಲಿಸಾದರದಿಂದಲಿ ಸರಸವಾಡಿ 4ಬಡನಡು ಬಳುಕುತಲಿ ಎಡಬಲದಲಿ ಸುಳಿದುಕಡಲೊಡೆಯಗೆ ಲಕ್ಷ್ಮಿ ಚೆಲ್ಲಿದಳಾಗ 5ಛಲದಿ ಪದ್ಮಾವತಿಯು ಜಲಜನಾಭನ ಮೇಲೆಒಲವಿನಿಂದಲಿ ಬಂದು ಚೆಲ್ಲಿದಳಾಗ 6ಭರದಿ ಶ್ರೀದೇವಿಯು ಸರಸಿಜಮುಖದಲ್ಲಿಪರಮಸುಸ್ನೇಹದಿ ಬೆರಸಿದಳಾಗ7ಭೂದೇವಿ ಭುಲ್ಲವಿಸಿ ಮಾಧವನ ಮುಖದೊಳಗೆಮೋದದಿಂದಲಿ ಬಂದು ಚೆಲ್ಲಿದಳಾಗ 8ಸುತ್ತುಮುತ್ತಲು ಇವರ ಆರ್ತಿಯಿಂದಲಿ ಹರಿಯುವೃತ್ತಕುಚವ ನೋಡಿ ಚೆಲ್ಲಿದನಾಗ 9ಝಣಝಣಾಕೃತಿಯಿಂದ ಮಿನುಗುವಾಭರಣದಧ್ವನಿಯ ತೋರುತ ಬಲು ಸರಸವಾಡಿ 10ಓಕುಳಿಯಾಡಿದ ನೀರಾನೇಕಭಕ್ತರು ಮಿಂದುಏಕಮಾನಸರಾಗಿ ಪೊರಟರು ಕಾಣೆ 11* * *ಆಡಿದರೋಕುಳಿಯ ಶರಣರೆಲ್ಲಆಡಿದರೋಕುಳಿಯ ಪ.ಕಾಡುವ ಪಾಪವ ಓಜಿಸಿ ಹರಿಯೊಳ-ಗಾಡಿನಿತ್ಯಸುಖಬೀಡಿನ ಮಧ್ಯದಿ1ಅಬ್ಬರದಿಂದಲಿ ಉಬ್ಬಿ ಸಂತೋಷದಿಒಬ್ಬರ ಮೈಗಿನ್ನೊಬ್ಬರು ಚೆಲ್ಲುತ 2ಚೆಂಡು ಬುಗರಿನೀರುಂಡೆಗಳಿಂದಲಿಹಿಂಡುಕೂಡಿ ಮುಂಕೊಂಡು ಪಿಡಿಯುವರು3ಸುತ್ತುಮುತ್ತ ಒತ್ತೊತ್ತಿ ಮುತ್ತಿ ಜಲ-ವೆತ್ತಿ ಚಿತ್ತತನುನೆತ್ತಿಗೆ ಸೂಸುತ್ತ 4ರಂಭೆ : ನಾರಿ ಕೇಳೀಗ ಭೂರಿಭಕುತರುಶ್ರೀರಮಾಧವ ಸಹಿತ ಬಂದರು 1ಭಾವಶ್ರೀಹರಿ ಪ್ರತಿರೂಪದೋರುತದೇವ ತಾನೆ ನಿದ್ರ್ವಂದ್ವನೆನ್ನುತ 2ಹೇಮಖಚಿತವಾದಂದಣವೇರಿಪ್ರೇಮಿಯಾಗುತ ಪೊರಟು ಬರುವನು 3ವಲ್ಲಭೆಯರ ಕೂಡಿ ಈ ದಿನಫುಲ್ಲನಾಭನು ಪೊರಟನೆತ್ತಲು 4ಊರ್ವಶಿ : ನಾರಿ ನೀ ಕೇಳಿದರಿಂದ ಈಗಭೂರಿಭಕುತರಾನಂದಶ್ರೀರಮಾಧವ ಮಿಂದ ನೀರಿನೊಳಾಡುತ್ತಓರಂತೆ ತುಳಸಿಮಾಲೆಯ ಧರಿಸುತ್ತಭೇರಿಡಂಕನಗಾರಿಶಬ್ದ ಗಂ-ಭೀರದೆಸಕವ ತೋರಿಸುತ್ತ ವೈ-ಯಾರದಿಂದಲಿ ರಾಮವಾರ್ಧಿಯತೀರದೆಡೆಗೆಲೆ ಸಾರಿ ಬಂದರು 1ವರದಭಿಷೇಕವ ರಚಿಸಿ ಬಕು-ತರ ಸ್ನಾನವನನುಕರಿಸಿಭರದಿಂದ ಪೂಜಾಸತ್ಕಾರ ಸೇವೆ ಕೈಗೊಂಡುತ್ವರಿತದಿ ನಗರಾಂತರಕನುವಾದನುಬರುತ ದಿವ್ಯಾರತಿಗೊಳ್ಳುತಚರಣಸೇರಿದ ಭಕ್ತರಿಷ್ಟವನಿರುತ ಪಾಲಿಸಿ ಮೆರೆವ ಕರುಣಾ-ಕರಮನೋಹರ ಗರುಡವಾಹನ2ರಂಭೆ : ಸರಸಿಜಾನನೆ ಈ ಸೊಲ್ಲ ಲಾಲಿಸೆಕರವಮುಗಿಯುತ್ತಕೈಯ ತೋರುತ1ಪರಮಪುರುಷ ಗೋವಿಂದ ಎನುತಲಿಹೊರಳುತುರಳುತ ಬರುವದೇನಿದು 2ಭಂಗಿಪ ಸೇವೆಯೆಂಬುದನುಅಂಗಜಪಿತಚರಣಂಗಳ ರಜದಲಿ 1ಹೊಂಗಿ ಧರಿಸಿ ಲೋಟಾಂಗಣ ಎಂಬರುರಂಗನಾಥನ ಸೇವೆಗೈದ ಜ-ನಂಗಳಿಗೆ ಭಯವಿಲ್ಲವದರಿಂ-ದಂಗವಿಪ ಲೋಲೋಪ್ತಿ ಕೋಲಾ-ಟಂಗಳನು ನೀನೋಡುಸುಮನದಿ2* * *ಕೋಲು ಕೋಲೆನ್ನಿರೊ ರನ್ನದಕೋಲು ಕೋಲೆನ್ನಿರೊ ಪ .ಪಾಲಾಬ್ಧಿಶಯನ ನಮ್ಮಾಲಯಕೆದ್ದು ಬಂದಲೀಲೆಗಳಿಂದ ಜನಜಾಲಗಳೆಲ್ಲರು 1ಗುಂಗಾಡಿತಮನನ್ನು ಕೊಂದು ವೇದವ ತಂದುಬಂಗಾರದೊಡಲನಿಗಿಟ್ಟನು ನಮ್ಮ ದೇವ 2ಅಡ್ಡಿಮಾಡದೆ ಸುರವಡ್ಡಿಗೆ ಸುಧೆಯಿತ್ತುಗುಡ್ಡೆಯ ಬೆನ್ನಿಲಿ ಧರಿಸಿದ ನಮ್ಮ ದೇವ 3ರೂಢಿಯ ಕದ್ದನ ಓಡಿಸಿ ತನ್ನಯದಾಡೆಯಿಂದಲೆ ಸೀಳ್ದ ಕಾಡವರಾಹನಮ್ಮ 4ಸಿಂಗನ ರೂಪತಾಳಿ ಹೊಂಗಿ ಕಂಬದಿ ಬಂದುಬಂಗಾರಕಶ್ಯಪುವಂಗವ ಕೆಡಹಿದ 5ಗಿಡ್ಡನಾಗುತ ಕೈಯೊಡ್ಡಿ ದಾನಕೆ ಮನ-ಸಡ್ಡಿಮಾಡದೆ ಮೇಣು ದೊಡ್ಡವನಾದನಮ್ಮ 6ಕಾಮಧೇನುವಿಗಾಗಿ ಕಾರ್ತವೀರ್ಯನ ಕೊಂದುಭೂಮಿಯ ಬುಧರಿಗೆ ಪ್ರೇಮದಿನಿತ್ತನಮ್ಮ 7ಬೆಟ್ಟಗಳೆಲ್ಲ ತಂದೊಟ್ಟಿಸಿ ಶರಧಿಯಕಟ್ಟಿದೈತ್ಯರ ತಲೆ ಕುಟ್ಟಿದ ನಮ್ಮ ದೇವ8ಚಂಡಗೊಲ್ಲತಿಯರ ಹಿಂಡುಗಳೊಳು ಕೂಡಿಉಂಡ ಪಾಲ್‍ಬೆಣ್ಣೆಯ ಪುಂಡ ಗೋಪಾಲನಮ್ಮ 9ಯುವತಿಯರ ವ್ರತವ ತವಕದಿ ಖಂಡಿಸಿಶಿವನ ರಕ್ಷಿಸಿ ತ್ರಿಪುರವನು ಕೆಡಹಿಸಿದ 10ಕುದುರೆಯ ಮೇಲೇರಿ ಕುಮತಿ ಮ್ಲೇಂಛರನೆಲ್ಲಸದೆಬಡಿಯುವ ನಮ್ಮ ಮಧುಕೈಟಭಾರಿ ದೇವ 11ಕಲಿಯುಗದೊಳು ಬಂದು ನೆಲೆಯಾಗಿ ತಿರುಪತಿ-ಯೊಳಗೆ ಭಕ್ತರನೆಲ್ಲ ಸಲಹುವ ನಮ್ಮ ದೇವ 12ದುಷ್ಟರ ಬೇಗ ಕಂಗೆಟ್ಟು ಓಡುವ ಭಕ್ತ-ರಿಷ್ಟವ ಕೊಡುವರೆ ದೃಷ್ಟಿಗೋಚರನಾದ 13ತಪ್ಪದೆ ಸ್ವಪ್ನದಿ ಬಪ್ಪೆನೆನ್ನುತ ಪೇಳಿಸರ್ಪಪರ್ವತದಿಂದ ಒಪ್ಪಿಲ್ಲಿ ಬಂದನಮ್ಮ 14ಸೃಷ್ಟಿಯೊಳುತ್ತಮ ಶ್ರೇಷ್ಠ ಕಾರ್ಕಳದಲ್ಲಿಪಟ್ಟದರಸ ತಿಮ್ಮ ಸೆಟ್ಟಿಯೆಂದೆನಿಸಿದ 15ಊರ್ವಶಿ :ನಾರೀರನ್ನಳೆ ಕೇಳಿದ್ಯಾ ಶ್ರೀಹರಿನಿತ್ಯಭೂರಿಸೇವೆಗೆ ಸಾನ್ನಿಧ್ಯತೋರುತ ಆರತಿಯ ಶೃಂಗಾರದೋರುತ ಕಾಣಿಕೆಯ ಕಪ್ಪುವು ಸೇರಿತುಸೇರಿದಾನತಜನರ ಮನಸಿನಕೋರಿಕೆಗಳನ್ನಿತ್ತು ಸಲಹುವವೀರವೆಂಕಟಪತಿಯ ಸದನ-ದ್ವಾರ ದಾಟುತ ಸಾರಿಬಂದನು 1ಬಳಿಕಲ್ಲಿ ತುಲಾಭಾರದ ಹರಕೆಯನ್ನು ಕೈ-ಗೊಳುತಲೀಪರಿ ಮೋದವನಲವಿನಲಿ ಮಂಗಲದ ವಿಭವದಗೆಲುವಿನಲಿ ವಿಧಕಲಶ ವೇದದನಲವಿನಲಿ ಸುಲಲಿತಭಿಷೇಕವನು ಕೊಳುತಲಿಜಲಜನಾಭನು ಸುರಚಿರದ ನಿ-ಶ್ಚಲಿತ ಸಿಂಹಾಸನದಿ ಮಂಡಿಸಿಒಲಿದ ವಂದಿತ ಜನರ ಭಕ್ತಿಗೆ 2ವಲ್ಲಭೆಯರ ಸಹಿತ ಸಮರ್ಪಿಸಿ-ದೆಲ್ಲ ಸ್ವೀಕರಿಸಿ ಮತ್ತಾಪಲ್ಲವಪಾದಗಳ ತೋರಿಸಿಎಲ್ಲವ ರಕ್ಷಿಸಿ ದಯಾರಸವುಳ್ಳವಫುಲ್ಲನಾಭನು ಪೂರ್ಣಕಾಮ ಶ್ರೀ-ವಲ್ಲಭನು ನರನಾಟಕದಿ ಜಗ-ಎಲ್ಲ ರಕ್ಷಿಸಿ ಮೆರೆವ ಭಕ್ತರಸುಲ್ಲಭನು ಸುಮನೋನುರಾಗನು 3ಶರದಿಯೇಳರ ಮಧ್ಯದ ಧಾರಿಣಿಯೊಳುಮೆರೆವ ಹೇಮಾಚಲದಸ್ಫುರಿತದಾ ಮಹಾಜಂಬುದ್ವೀಪ ವಿ-ಸ್ತರಿತದಾ ಭರತಾಖ್ಯ ಖಂಡದಿಹರುಷದಿ ನಿರುತ ತೌಳವದೇಶಮಧ್ಯದಿಮೆರೆವ ಕಾರ್ಕಳಪುರವರವೆ ಪಡುತಿರುಪತಿಯು ಎಂದೆನಿಸಿ ಭಕುತರನೆರವಿಯನು ಪರಿಪಾಲಿಸುವನೆಲೆ 4ಈಪರಿವಿಭವದಲಿ ಪ್ರತಿವರುಷಕೆಶ್ರೀಪರಮ್ಮಾತನಲ್ಲಿವ್ಯಾಪಿಸಿ ಭಕ್ತರನುಕಾವನಿ-ರೂಪಿಸಿ ಸೇವೆಯನು ಕೈಕೊಂಡೊಪ್ಪಿಸಿಪಾಪವೆಲ್ಲವ ಪರಿಹರಿಸಿ ಚಿ-ದ್ರೂಪನಂದದಿ ಹೊಳೆವ ಪರತರ-ರೂಪಕರುಣಾಲಾಪ ಸದ್ಗುಣ-ದೀಪ ಚಪ್ಪರ ಶ್ರೀನಿವಾಸನು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹೇಗೆ ಮಾಡಲಿ ಮಗುವಿಗೇನಾಯಿತೊ - ಇದರ - |ಆಗಮವ ಬಲ್ಲವರು ತಿಳಿದೆಲ್ಲ ಪೇಳಿ ಪ.ತೂಗಿ ಮಲಗಿಸೆ ಕಣ್ಣ ಮುಚ್ಚಲೊಲ್ಲನು, ಬೆನ್ನ - |ಮೇಗೆ ಬುಗುಟಿಯು, ಎದೆಯು ಕಲ್ಲಾಗಿದೆ |ರೋಗವನೆ ಕಾಣೆ ದಾಡೆಯಲಿ ನೀರಿಳಿಯುತಿದೆ |ಕೂಗುವ ಧ್ವನಿಯೊಮ್ಮೆ ಕುಂದಲಿಲ್ಲ 1ಖಂಡಸಕ್ಕರೆ ಹಣ್ಣ ಕೊಟ್ಟರೊಲ್ಲದೆ ಮಣ್ಣ |ಹೆಂಡೆಯನು ಬೇಡಿ ತಾ ಪಿಡಿವ ಕೊಡಲಿ ||ಮಂಡೆ ಜಡೆಗಟ್ಟಿಹುದು ಮಾಡಲಿನ್ನೇನಿದಕೆ |ಹಿಂಡುಸತಿಯರ ದೃಷ್ಟಿ ಘುನವಾಯಿತೇನೊ2ಮೊಲೆಯನುಂಬಾಗ ಮೈಯಂಬರವನೊದೆಯುತಿದೆ |ಕಲಕಿತದಲಿ ಎನ್ನ ಕೊಲುವುದೇಕೋ ||ತಿಳಿದಿದರ ನೆಲೆಯನರಿತವರನೊಬ್ಬರ ಕಾಣೆ |ಚೆಲುವಸಿರಿಪುರಂದರವಿಠಲ ತಾ ಬಲ್ಲ3
--------------
ಪುರಂದರದಾಸರು