ಒಟ್ಟು 169 ಕಡೆಗಳಲ್ಲಿ , 52 ದಾಸರು , 143 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರ ದೂಷಿಪರೊ ಕುಜನರು ಹರಿ- ದಾಸರ ನಿಂದಿಪರೊ ಪ ಏಸೇಸು ಜನುಮದ ದೋಷರಾಶಿಗಳೆಲ್ಲ ನಾಶವಗೈÀವ ಶ್ರೀಕೇಶವನಣುಗರ ಅ.ಪ ಮಂದಮತಿಗಳೆಲ್ಲರೂ ಸಜ್ಜನರ ನಿಂದನೆಯೊಳಗಿಹರೊ ಮುಂದಿನ ಬವಣೆಗಳೊಂದೆಣಿಸದಲೆ ಮು- ಕುಂದನ ಭಕುತರ ಸಂದಣಿ ಸೇವಿಪ 1 ಇಂದಿರೇಶನ ಗುಣವ ಪಾಡುತಲಿ ಆ- ನಂದದೊಳೋಲ್ಯಾಡುವ ನಂದಕಂದನ ಲೀಲೆಯಿಂದ ಹಗಲಿರುಳು ಮು- ಕುಂದನ ಕುಣಿಸುವರೊ ದಣಿಯುವರೊ 2 ಆರು ಮಂದಿಗಳ ಗೆದ್ದು ಹೃದಯದಲ್ಲಿ ಶ್ರೀ- ಮಾಧವನನು ಕಾಂಬರ ಶ್ರೀಧರನಂಘ್ರಿಗಳಾದರದಿಂ ಭಜಿಸಲು ಸಾಧು ಗುರುಗಳು ಇವರು ಸುಂದರರು 3 ಸುರಮುನಿವರ ಪ್ರಿಯನ ಭಕ್ತರಿಗೆಲ್ಲ ವರಗಳ ಕೊಡುತಿಹನ ಪರಮಪಾವನ ಮೂರುತಿಯನೆ ಕೊಂಡಾಡುತ ದುರಿತಗಳಳಿಯುವರ ಪಾವನರ 4 ಕರೆದು ಭಕ್ತರ ಸಲಹುವ ಕರುಣದೊಳು ಮೂ- ಪರಮ ಗುರುಗಳ ಮುಖ್ಯ ಕಾರಣವು ಪಡೆದವರು ಶ್ರೀ-ಕಮಲನಾಭ ವಿಠ್ಠಲನೆನ್ನುವರು5
--------------
ನಿಡಗುರುಕಿ ಜೀವೂಬಾಯಿ
ದಾಸರ ಮೊರೆ ಲಾಲಿಸೋ ವೆಂಕಟಾಚಲ ವಾಸ ಬಿನ್ನಪ ಲಾಲಿಸೊ ಪ ಲೇಸು ಭಕುತಿಯು ಮಾಡದಲೆ ಬಲು ಘಾಸಿಯಾಗುತ ಮನದಿ ನೊಂದು ದಾಸನಾಗದೆ ಕ್ಲೇಶಪಟ್ಟೆನೊ ಈಸುದಿನಗಳ ಕಳೆದೆನೊ ವೃಥಾ1 ತಳಿರು ಪೋಲುವ ನಿನ್ನಯ ಪಾದ- ಕ್ಕೆರಗದೆನ್ನಯ ಸಿರವು ದಣಿಯನೋಡದೆ ನಿನ್ನನು ಮಹಾಪಾಪ ಗಳನೆ ಮಾಡುತ ನೊಂದೆನು 2 ಅನಿಮಿಷೇಶನೆ ನಿನ್ನ ಮಹಿಮೆಯ ಕ್ಷಣಬಿಡದೆ ಧ್ಯಾನವನೆ ಮಾಡುವ ಅನಲಸಖತನಯನಿಗೆ ನಮಿಸುವೆ ಕ್ಷಣ ಬಿಡದೆ ಎನ್ನ ಪೊರೆವ ಕರುಣಿ3 ಕಟಿಯ ಕಾಂಜಿಯ ದಾಮವು ನವರತ್ನದ ಸ್ಫ್ಪಟಿಕ ಮುತ್ತಿನ ಹಾರವು ಲಕುಮಿ ಧರಿಸಿದ ವಕ್ಷ ಕೌಸ್ತುಭಹಾರ ಸ್ಫುಟದಿ ಶೋಭಿಪ ಉರವು 4 ವಟುವಿನಂದದಿ ಪ್ರಕಟನಾಗುತ ಕುಟಿಲ ದಿತಿಜರಿಗಖಿಳ ವಿಧ ಸಂ- ಕಟಗಳನೆ ಸಂಘಟನೆ ಮಾಡುವ ನಟನ ತೆರ ವಟಪತ್ರಶಾಯಿ 5 ನೊಸಲ ಕಸ್ತೂರಿ ತಿಲಕ ರಂಜಿಸುವ ಚಂ- ಪಕವ ಪೋಲುವ ನಾಸಿಕ ಎಸೆದು ಶೋಭಿಪ ಮೌಕ್ತಿಕ ಪೋಲುವ ದಂತ ನಸುನಗುತಿಹ ಹಸನ್ಮುಖ6 ಶಶಿಯ ಧರಿಸಿದ ಅಸಮ ಭಕುತನು ನಿಶಿಹಗಲು ತನ್ನ ಸತಿಗೆ ಬೆಸಸಿದ ಅತಿಶಯದ ಮಹಿಮೆಯನೆ ಕೇಳುವ ಮತಿಯ ಕೊಡು ಮನ್ಮಥನ ಪಿತನೆ 7 ಚಿತ್ತದೊಳಗೆ ನಿನ್ನಯ ಪಾದಾಂಬುಜ ಭಕ್ತಿಯಿಂದಲಿ ಕಾಂಬುವ ಭಕ್ತಜನರ ವೃಂದವ ಕರುಣದಿ ಕಾಯ್ವ ವಿಷ್ಣು ಮೂರುತಿ ಕೇಶವ 8 ಎತ್ತನೋಡಿದರಿಲ್ಲ ನಿನ್ನ ಸಮ ಉತ್ತಮರ ಕಾಣುವುದೆ ಮಿಥ್ಯವೊ ಸತ್ಯವಿದು ಪುರುಷೋತ್ತಮನೆ ಎನ್ನ ಚಿತ್ತದಲಿ ನಲಿನಲಿದು ಶ್ರೀಶ 9 ಕಮಲಸಂಭವ ಪಿತನೆ ಪ್ರಾರ್ಥಿಸುವೆ ಶ್ರೀ- ರಮೆಧರೆಯರಿಂ ಸೇವ್ಯನೆ ಕ್ಷಣಬಿಡದಲೆ ನಿನ್ನನೆ ಚಿಂತನೆ ಮಾಳ್ಪ ಸುಜನರಿಗೊಲಿಯುವನೆ 10 ಶ್ರವಣ ಮನನಕೆ ಒಲಿವ ದೇವನೆ ದಿನದಿನದಿ ನಿನ್ನ ಮಹಿಮೆ ತೋರು ಶ್ರೀ- ಕಮಲನಾಭ ವಿಠ್ಠಲನೆ ಕರುಣದಿ ಶ್ರಮವ ಹರಿಸುಸುಧಾಮ ಸಖನೆ11
--------------
ನಿಡಗುರುಕಿ ಜೀವೂಬಾಯಿ
ಧ್ರುವತಾಳ ಬಂದೆನ್ನ ಕಾಯೊ ಕರುಣದಿಂದ ಕೈಪಿಡಿದು ದೀನ ಬಂಧುವೆ | ಒಂದೂರು ಮಂದಿರಾರ್ಯ | ಸಂದೇಹವ್ಯಾಕೆ ನಿನ್ನ ಪೊಂದಿದ ಸತ್ಯಶಿಷ್ಯವೃಂದದೊಳಗೆ ನಾ ಕಡೆಯವನೋ ತಂದೆ ನೀನಗಲಿದಕೆ ನೊಂದೆನೊ ನಾ ಭವ ಬಂಧದೊಳಗೆ ಬಿದ್ದು ಬಹುವಿಧದಿ ನಮಗಿನ್ನು ಹಿಂದು ಮುಂದು ಮನಕೆ ನೀ ತಾರದಲೆ ಕಣ್ಣೆರೆದು ಈಕ್ಷಿಸಿ ಎನ್ನೊಳಿದ್ದ | ಮಂದಮತಿಯ ಬಿಡಿಸಿ ಮಧ್ವಶಾಸ್ತ್ರವ ತಿಳಿಸೋ | ಮಂದರಕುಜ ಭಕ್ತಸಂದೋಹಕೆ | ಹಿಂದೆ ವರದಾತನೆಂದೆನಿಸಿದ ಕರ್ಮಂದಿಗಳರಸರ ಕ್ಷೇತ್ರದಲ್ಲಿ | ಬಂದ ಸಮಯವೆನ್ನ ಬಿನ್ನಪ ಚಿತ್ತಕೆ | ತಂದು ತವಕದಿಂದ ಭೂಸುರರ ಸಂದಣಿಯಲ್ಲಿ ನಿನ್ನ ಮಹಿಮೆ ಪ್ರಕಟಿಸಿ ಇಂದುವಿನಂತೆ ಪೊಳೆದು ಮೆರೆದ ಕರುಣೀ ಅಂದಿನಾರಭ್ಯ ನೀನೆ ಸ್ವರೂಪೋದ್ಧಾರಕರ್ತನೆಂದು ದೃಢನಾಗಿ ನಂಬಿ ತ್ವತ್ವಾದಕೆ ವಂದಿಸಿ ಮೊರೆ ಇಡೆ ಇಂದು ನೀನು ನಮ್ಮ ಛಾತ್ರಮಾಲೆಯಲ್ಲಿ ಸಂದವನೆಂದು ಮನದಿ ಭಾವಿಸಿದೆವು | ಎನುತ ಛಂದದಿ ಸಿಂಧು ಪೋಲುವ ಕರುಣಿ ಸುಜ್ಞಾನ ಸದ್ಭಕ್ತಿ ಕುಂದದ ವೈರಾಗ್ಯ ಭಾಗ್ಯವ ಕೊಟ್ಟು ಧಾಮ ಶಾಮಸುಂದರವಿಠಲನ ಒಂದೇ ಮನದಿ ಭಜಿಪಾನಂದ ಭಾಗ್ಯವ ನೀಡೋ 1 ಮಟ್ಟತಾಳ ಅನುಪಮಸುಚರಿತ್ರ | ಅನುದಿನದಲಿ ಎನ್ನ ಅಣುಗನೆಂದರಿತೊಂದು ಕ್ಷಣವಗಲದೆ ಇದ್ದು ಬಿನುಗು ಬುದ್ಧಿಯ ಕಳದು | ಧನದಾಶೆಯ ಕಡಿದು ಮನದ ಚಂಚಲ ಬಿಡಿಸಿ | ಹನುಮ ಭೀಮಾನಂದ ಮುನಿಕೃತ ಪಾದವನಜ ಸೇವಿಪುದಕೆ ತನುವಿಗೆ ಬಲವಿತ್ತು ದಿನದಿನದಲಿ ನೆನೆಯುವ ಸಂಪದ ಗುಣನಿಧಿಯನುಗ್ರಹಿಸೋ 2 ತ್ರಿವಿಡತಾಳ ಭವ ಮೊದಲಾದ ಬುಧರು ಹರಿಯಾಜ್ಞೆಯಲಿ ಮದಡಾರುದ್ಧರಿಸಲು ಜಗದಿ ಬಂದು | ಸುಧೆಯಂತೆ ಸವಿಯಾದ ಮಧುರ ಕನ್ನಡದಲ್ಲಿ | ಮುದದಿ ರಚಿಸಿದಂಥ | ಪದಸುಳಾದಿಗಳಲ್ಲಿ ಹುದುಗಿದ ವೇದಾರ್ಥ ತ್ವತ್ವಾದಾಶ್ರಿತರಿಗೆ | ವಿಧ ವಿಧದಿಂದಲಿ ಬೋಧಿಸುತಾ | ವದಗಿದ ಅಜ್ಞಾನ ಸದೆದು ಸುಮತಿ ಕೊಟ್ಟು ಸದಾಚಾರ ಸಂಪನ್ನನೆನಿಸಿ | ಅವರ ಬದಿಗನು ನೀನಾಗಿ ಸುಕ್ಷೇಮ ಚಿಂತಿಸಿ | ಅಧಮರಿಂದಲಿ ಬಾಧೆ ಬಾರದಂತೆ ಸದಯನೆ ಸಲಹಿದ ಕಾರಣದಿಂದಲಿ | ವಿದಿತವಾಯಿತು ನಿನ್ನ ಮಹಿಮೆ ಮನಕೆ ಪದೆ ಪದೆ ಪ್ರಾರ್ಥಿಪೆ ಸದಮಲಗಾತ್ರನೆ ಅಧೋಗತಿ ತಪ್ಪಿಸಿ ಬಿಡದೆ ಒಲಿದು | ಯದುಕುಲೋದ್ಭವ ಪೊಳೆವಂತೆ ಕೃಪೆಮಾಡು 3 ಅಟ್ಟತಾಳ ಗುರುವರ ಶ್ರೀ ನರದ್ವಿರದಾರಿ ನಾಮಕ | ವರ್ಣಿಸಲಳವಲ್ಲ ನಿನ್ನುಪಕಾರವು | ಜ್ವರಬಹುಜನರಿಗೆ ಪರಿಹಾರ ಮಾಡಿದಿ ತುರಗ ಕಚ್ಚಿದ ಘಾಯ ತಕ್ಷಣ ಮಾಯಿಸಿದಿ | ಶರಣಗೆ ಬಂದಪಮೃತ್ಯು ಓಡಿಸಿದಿ | ಅರಿಯದರ್ಭಕಿ ಹೋಮಕುಂಡದಿ ಬೀಳೆ | ತ್ವರಿತಭಿಮಂತ್ರಿಸಿ | ಭಿಸ್ಮವಲೇಪಿಸಿ ಉರಿತಂಪುಗೈಸಿದಿ || ಪುರದವರ ಮೊರೆ ಕೇಳಿ ಮಾರಿಯ ಭಯ ಕಳೆದಿ | ತರುಳರು ದಕ್ಕದ ದೀನಕುಟುಂಬಕ್ಕೆ ಚಿರಕಾಲ ಬಾಳುವ ಸಂತಾನ ನೀಡಿದಿ | ಸ್ಮರದೂರ ನಿಮ್ಮಾಜ್ಞೆ ಮೀರದ ಕಿಂಕರನ ತರುಣಿಗೆ ಸೋಂಕಿದ ಭೂತವ ಬಿಡಿಸಿದಿ | ನೆರೆನಿನ್ನ ಪದವನುಸರಿಸೀದ ಸುಜನಕ್ಕೆ ವರಭಾಗವತಶಾಸ್ತ್ರ ಅರುಹೀದಿ ಸಲುಹೀದಿ | ಹರಿಕಥಾಮೃತಸಾರವ ಸಾರೀದಿ | ತರತಮದ ಭೇದಜ್ಞಾನವ ಬೀರಿದಿ | ವರದಾಯಕ ಸತ್ಯದೇವನ ಪಾವನ ಚರಿತೆ ವಿಚಿತ್ರವಾಗಿ ಪರಿಪರಿ ಪೇಳುತ್ತ ಪೊರೆದೆ ನಿನ್ನವರನ್ನು ಧರೆ ಋಣ ತೀರಿದ ಕುರುಹು ಅರಿತು ಒಬ್ಬರಿಗೆ ಸೂಚಿಸದೆ ಪರಲೋಕಯಾತ್ರೆಗೆ ತೆರಳಿದದಕೆ ನಿನ್ನ ಪರಿವಾರದ ನಾವೆಲ್ಲರೂ ನಿತ್ಯಸಿರಿಯ ಕಳೆದುಕೊಂಡ ಲೋಭಿಗಳಂದದಿ ಶರಧಿ ಕಾಯ ತೊರೆದರೇನಾಯಿತು ಮರೆಯಾದೆ ಗೋವತ್ಸನ್ಯಾಯದಂತೆ ನೀ ದರುಶನ ಸ್ವಪ್ನದಿಗರೆದು ಸಂತೈಸುತ ನಿರಯಕೆ ನಮ್ಮನು ಗುರಿಮಾಡದೆ ಪೊರೆ ತರುಳಗೊಲಿದ ಶಾಮಸುಂದರವಿಠಲ ಸರಸಿಜಾಂಘ್ರಿಯುಗ್ಮ ಮಧುಪನೆಂದೆನಿಸಿ 4 ಆದಿತಾಳ ಭೂಮಿ ವಿಬುಧವರ ರಾಮವಿಠಲಾರ್ಯರ ಶ್ರೀ ಮುಖದಿಂದ ಸಕಲಶಾಸ್ತ್ರಮನನಮಾಡಿ | ಶ್ರೀಮತ್ಸು ಶೀಲೇಂದ್ರಸ್ವಾಮಿಗಳಿಂದಲಿ ನೀ ಮಾನಿತನಾಗಿ ಕಾಮಿತಫಲಪ್ರದ ರಾಯರ ದಯಪಡೆದು ಕಾಮಾದಿ ಷಡ್ರಿಪುವರ್ಗ ಜಯಿಸುತಲಿ | ನೇಮನಿಷ್ಟೆಯಲಿ ಜಪತಪಾಚರಿಸುತ ಹೇಮರಜತಧನ ತೃಣಸಮಾನೆನಿಸುತ ಸಾಮಜವರದನ ಕಳೆಯದೆ ಪಾಮರ ಜನರನು ಪ್ರೇಮದಿಂದದ್ಧರಿಸಿ | ಸಾಮಗಾನಪ್ರೇಮ ಶಾಮಸುಂದರನ ಧಾಮವ ಸೇರಿದ ಹೇ ಮಹಾಮಹಿಮನೆ 5 ಜತೆ ನಿನ್ನೊಡೆಯನ ದ್ವಾರಾ ಶ್ರೀ ಶಾಮಸುಂದರನ ಎನ್ನಂತರಂಗದಿ ನೋಳ್ವಂತೆ ಕರುಣಿಸೋ ||
--------------
ಶಾಮಸುಂದರ ವಿಠಲ
ನವವಿಧ ಭಕುತಿ ಶ್ರವಣದಿಂದಲಿ ಪಾಪಹರಣವಾಗುವುದೆಂದು ಕವಿಗಳೆಲ್ಲರು ಕೂಗಿ ಒದರುತಿಹರು ಕಿವಿಗಳಿಗಾನಂದದಾಭರಣದಂತಿಹುದು ಶ್ರೀ- ಹರಿಯ ದಿವ್ಯನಾಮಾಮೃತದರಸವು ಮಾಧವನ ಮೂರ್ತಿಯನು ನೋಡದಿಹ ಕಂಗಳು ನವಿಲು ಕಣ್ಣುಗಳೆಂದು ಪೇಳುತಿಹರು ಕಮಲನಾಭ ವಿಠ್ಠಲನ ಮಹಿಮೆ ಪೊಗಳೆ ಫಣಿರಾಜನಿಗೆ ವಶವಲ್ಲ ದೇವಾ 1 ಕೀರ್ತನವು ಮಾಡಲು ಪಾತಕವು ಪರಿಹರವು ಮಾತುಳಾಂತಕನ ಮಹಿಮೆ ಘನವು ಶ್ರೀಶನನು ಮನದಣಿಯ ಸ್ತೋತ್ರವನು ಮಾಡಲು ನಾಶಗೈವನು ದುರಿತರಾಶಿಗಳನು ಮಾಡಿದಪರಾಧಗಳ ಮಾಧವನು ಮನ್ನಿಸುವ ಶ್ರೀಧರನ ಸ್ತುತಿಸಿ ಕೊಂಡಾಡುತಿಹರ ಕರುಣಾಕರ ಕಮಲನಾಭವಿಠ್ಠಲ ದುರಿತದೂರನು ಕಾಯ್ವ ಶರಣಜನರ 2 ಸ್ಮರಣೆಯನು ಮಾಡುತಿಹ ಮನುಜರಿಗೆ ಇಹಪರದಿ ಪರಮ ಮಂಗಳನೀವ ಪರಮಾತ್ಮನು ದುರಿತ ದೂರನ ಪಾದಸ್ಮರಣೆ ಮಾಡುವರಿಗೆ ಪರಿಪರಿಯ ಸೌಖ್ಯಗಳ ಕೊಡುವ ದೇವ ಮಧುವೈರಿಯನು ಸ್ಮರಿಸೆ ಮುದದಿ ಸಂಪದವೀವ ಮೂರ್ತಿ ಶ್ರೀಮಾಧವ ಕನಕಗರ್ಭನ ಪಿತನು ಕರುಣಾನಿಧಿಯು ಕಮಲನಾಭ ವಿಠ್ಠಲ ಕಾಯ್ವ ಸುಜನರ3 ಶಿಲೆಯಾದ ಅಹಲ್ಯೆಯ ಪರಿಪಾಲಿಸಿದ ಪಾದ ಧರಣಿ ಈರಡಿಗೈದ ದಿವ್ಯಪಾದ ಫಣಿ ಹೆಡೆಯ ತುಳಿದ ಪಾದ ವರ ಋಷಿಗಳೆಲ್ಲ ವಂದಿಸುವ ಪಾದ ಇಂದಿರಾದೇವಿ ಬಹುಚಂದದಿಂದೊತ್ತುತ ಕಂದರ್ಪನಯ್ಯನಿಗೆ ಪಾದಸೇವ ಚಂದದಿಂದಲಿ ಮಾಡಿ ಮಾಧವನಿಗೆ ನಂದಗೋಪಿಯ ಕಂದ ಸಲಹುಎನಲು ಸುಂದರ ಶ್ರೀ ಕಮಲನಾಭ ವಿಠ್ಠಲನು ಒಲಿವ 4 ಅರ್ಚಿಸುತ ಮೆಚ್ಚಿಸುತ ಸಚ್ಚಿದಾನಂದನನು ಸ್ವಚ್ಛ ಭಕುತಿಲಿ ಸ್ತೋತ್ರ ಮಾಡುತಿಹರ ಅಷ್ಟ ಐಶ್ವರ್ಯಪ್ರದನು ನಿತ್ಯಮುಕ್ತಳ ಕೂಡಿ ಭಕ್ತರ ಹೃದಯದಲಿ ಪೊಳೆವ ದೇವ ಸತ್ಯ ಸಂಕಲ್ಪನಿಗೆ ಕಸ್ತೂರಿ ತಿಲಕವು ಮತ್ತೆ ಪಾವಡಿ ಥಳಥಳನೆ ಹೊಳೆಯೆ ಸುತ್ತ ಬ್ರಹ್ಮಾದಿಗಳ ಸ್ತುತಿಗೆ ದೇವ ಚಿತ್ತವಿಟ್ಟು ಕೇಳ್ವ ಮಾಧವನು ಮುದದಿ ಕರ್ತೃ ಕಮಲನಾಭ ವಿಠ್ಠಲನು ಕಾಯ್ವ 5 ವಂದನೆಯನು ಮಾಡೆ ಮುಕುಂದನು ಒಲಿವನು ಮುದದಿ ಕಂದರ್ಪನಯ್ಯ ಕಮಲಾಕ್ಷ ಹರಿಯೂ ಸುಂದರಾಂಗ ಶ್ರೀಹರಿಗೆ ಗಂಧ ಪೂಸಿದಳಾಗ ಇಂದೀವರಾಕ್ಷಿ ನಸುನಗುತ ಬೇಗ ಇಂದ್ರಾದಿ ಸುರರೆಲ್ಲ ಕೊಂಡಾಡೆ ಮಾಧವನ ವಂದಿಸುತ ಸಿರಬಾಗಿ ಚಂದದಿಂದ ಮಂದಾರ ಪಾರಿಜಾತಗಳ ತಂದು ತಂದೆ ಕಮಲನಾಭ ವಿಠ್ಠಲನ ಮುಡಿಗೆ ಸಂಭ್ರಮದಿ ಮಳೆಗರೆಯೆ ಚಂದದಿಂದ 6 ದಾಸ್ಯವನು ಕೈಕೊಂಬ ದಾಸ್ಯಜನರನು ಪೊರೆವ ಮೀಸಲಾಗಿಹನು ಹರಿದಾಸ ಜನಕೆ ಪೋಷಿಸೆಂದೆನುವವರ ದೋಷಗಳನೀಡಾಡಿ ದೋಷರಹಿತನು ಪೊರೆವ ಸರ್ವಜನರ ಪೂಸಿ ಪರಿಮಳ ದ್ರವ್ಯ ಶ್ರೀಸಹಿತ ಮೆರೆವ ವಾಸುಕೀಶಯನ ಸಜ್ಜನರ ಪೊರೆವ ಮುರಳೀಧರ ಮಾಧವನು ಕರುಣದಿಂದ ಶರಣ ಜನರನು ಪೊರೆವ ಮರೆಯದೀಗ ಕಮಲನಾಭವಿಠ್ಠಲನು ಕಾಯ್ವದೇವ 7 ಸಖ್ಯ ಸ್ನೇಹಗಳಿಂದ ಮುತ್ತಿನ್ಹಾರಗಳನು ಕೃಷ್ಣನ ಕೊರಳಿಗ್ಹಾಕುತಲಿಬೇಗ ಅರ್ಥಿಯಿಂದಲಿ ರತ್ನ ಮುತ್ತಿನ ಚಂಡುಗಳ ವಿಚಿತ್ರದಿಂದಾಡುತಿರೆ ನೋಡಿ ಸುರರು ಮುತ್ತಿನಕ್ಷತೆಗಳನು ಮಾಧವನ ಸಿರಿಮುಡಿಗೆ ಅರ್ಥಿಯಿಂದ ಸುರಿಸುತಿರೆ ಹರುಷದಿಂದ ಅಪ್ರಮೇಯನು ಶ್ರೀಶ ಶ್ರೀನಿವಾಸ ಸರ್ಪಶಯನನು ಕಮಲನಾಭ ವಿಠ್ಠಲ ನಿತ್ಯ ತೃಪ್ತನು ಪೊಳೆವ ಭಕ್ತರ ಹೃದಯದಲಿ 8 ನಿತ್ಯ ತೃಪ್ತಗೆ ಮಾಡಿ ಅರ್ಥಿಯಲಿ ಅಪ್ರಮೇಯನನು ಸ್ತುತಿಸಿ ಮುತ್ತು ಮಾಣಿಕ್ಯ ಬಿಗಿದ ತಟ್ಟೆಯಲಿ ತಾಂಬೂಲ ಅಚ್ಚುತಾನಂತನಿಗೆ ಅರ್ಪಿಸುತಲಿ ಭಕ್ತಿಯಲಿ ವಂದನೆಯ ಭಕ್ತವತ್ಸಲನಿಗೆ ನಿತ್ಯ ಮುಕ್ತಳು ಮಾಡಿ ಹರುಷದಿಂದ ಸತ್ಯ ಸಂಕಲ್ಪ ಶ್ರೀ ಮಾಧವನಿಗೆ ಮುತ್ತಿನಾರತಿ ಬೆಳಗಿ ಅರ್ಥಿಯಿಂದ ಕರ್ತೃ ಶ್ರೀ ಕಮಲನಾಭ ವಿಠ್ಠಲನ ಕೊಂಡಾಡಿ9
--------------
ನಿಡಗುರುಕಿ ಜೀವೂಬಾಯಿ
ನಾನೆಲ್ಲಿ ಜ್ಞಾನಿಯು ನಾನೆಲ್ಲಿ ಸುಜನನು ಹೀನ ವಿಷಯಗಳುಂಬ ಶ್ವಾನನಂತಿರುವೆ ಪ ಗಾತ್ರ ಬಳಲಿಸಿ ಮದನಸೂತ್ರ ಬೊಂಬೆಯು ಎನಿಸಿ ನೇತ್ರದಿಂದಪಾತ್ರದವರನು ನೋಡಿ ಸ್ತೋತ್ರಮಾಡುತ ಹಿಗ್ಗಿರಾತ್ರೆ ಹಗಲು ಕೆಟ್ಟ ವಾರ್ತೆಯಲ್ಲಿರುವೆ 1 ಧನದಾಸೆ ಘನವಾಗಿ ಅಣು ಮಹತ್ಕಾರ್ಯದೊಳುತಣಿಸಿ ದಣಿಯಲು ತೃಣವು ದೊರೆಯದಿರಲುಮನೆ ಮನೆಗೆ ಬಾಯ್ದೆರೆದು ಶುನಕನಂತೆ ದಿನಗಳೆವೆಮನುಜ ಪಶುವಿಗೆ ಇನ್ನು ಮುನಿಯೆಂಬಿರೆಂತೋ2 ನಾಲಗೆಯ ರುಚಿಯಿಂದ ಸಾಲದಾಯಿತು ಬಯಕೆಕಾಲ ಕಾಲಕೆ ನೆನಸಿ ಹಾಳಾದರೂಶೀಲಗಳ ಕಳಕೊಂಡು ಚಾಲುವರಿಯುತ ಪರರಆಲಯದ ಉಚ್ಚಿಷ್ಠ ಮೇಲಾದ ಸವಿಯ3 ಸ್ನಾನಧ್ಯಾನವನರಿಯೆ ಸಾನುರಾಗದಿ ಭಕ್ತಿಕೂನ(ಗುರುತು)ವಿಲ್ಲದೆ ಡಂಭ ಮೌನಿಯೆನಿಸಿನಾನಾ ವಿಷಯ ಮನದಿ ನಾ ನೆನೆಸುವೆ ನಿತ್ಯಏನಾದರೂ ಕಷ್ಟ ಕಾಣದಂತಿರುತಿಪ್ಪೆ 4 ಪತಿತರೊಳು ಎನ್ನಂಥ ಪತಿತರೊಬ್ಬರ ಕಾಣೆಗತಿಯು ನೀನಲ್ಲದೆ ಅನ್ಯರಿಲ್ಲಪತಿತ ಪಾವನನೆಂಬೊ ಬಿರುದುಂಟುಮಾಡುವಕ್ಷಿತಿಪತಿ ಶ್ರೀಕೃಷ್ಣರಾಯ ನೀನಹುದೋ5
--------------
ವ್ಯಾಸರಾಯರು
ನಿತ್ಯ ಸಲಹೆ ಜನರನು ಅನ್ನಪೂರ್ಣೆ ಪ ಉಲ್ಲಾಸದಿಂದಲಿ ಪಲ್ಲಕ್ಕಿಯ ಮೇಲೆ ನೀ ಕುಳ್ಳಿರ್ದು ಛತ್ರ ಚಾಮರ ವ್ಯಜನಗಳಿಂದ ಅಲ್ಲಿ ಗಲ್ಲಿಗೆ ನೃತ್ಯಗೀತ ವಾದ್ಯುಪಚಾರ ದಲ್ಲಿ ಉತ್ಸವದಿ ಬರುವ ಸಂಭ್ರಮವಕಂಡೆ 1 ಹಾಡಿ ಪಾಡಿಸಿ ಕೊಳುತ ಚತುರ್ವಿಧ ಗೂಡಿದ ಮಂತ್ರ ಸ್ತುತಿಗಳಿಂದಲಿ ಕೂಡಿದ ಜನರ ಸಂದಣಿಯಲ್ಲಿ ಮನೆಯಲ್ಲಿ ಬೇಡಿದ ಜನರಿಂಗಿಷ್ಟಾರ್ಥವ ನೀವುದ ಕಂಡೆ 2 ಮೂರು ಮೂರುತಿ ನೀನೆ ನಿರ್ಮಿಸಿ ಮತ್ತೆ ಮೂರು ಗುಣಂಗಳ ಧರಿಸಿ ತಾರಣ ರೂಪೆ ಸೃಷ್ಟಿಸ್ಥಿತಿಗಳನು ಸಂಹಾರವ ಮಾಳ್ಪ ಚೈತನ್ಯ ರೂಪೆಯಕಂಡೆ 3 ಬಿಂಕವ ಮುರಿದೆ ಜನರ ಸಾಕಿನ್ನು ಭಯಂಕರವನು ಬೀರದಿರು ತಾಯೆ ಎನ್ನ ಮಾಡಲ ಮನೆಯೊಳು ನೆಲಸಿ ಭಕುತರನು ಶಂಕರಿ ಸಲಹೆ ದಯದೊಳನ್ನಪೂರ್ಣೆ 4 ಎಲ್ಲ ಜೀವರಿಗು ಜೀವಳು ನೀನು ಇಲ್ಲಿನ್ನು ನಿನಗಿಂತ ಬಲ್ಲಿದರು ಇಲ್ಲಮ್ಮ ವಿಜಯದಶಮಿಯೊಳು ನೀ ಬಂದು ಕೊಲ್ಲೂರ ಮೂಕಾಂಬೆಯೊಳಿರ್ದುದ ಕಂಡೆ 5
--------------
ಕವಿ ಪರಮದೇವದಾಸರು
ನಿಲುನಿಲು ಘನಲೀಲಾ ನಲಿನಲಿ ಗೋಪಾಲ ಪ ಕಿಲಕಿಲನಗು ಬಾಲಾ ಒಲಿಒಲಿ ಶ್ರೀಲೋಲಾ ಅ.ಪ ಅಡಿಯಿಡು ಸಡಗರದಿ ನುಡಿನುಡಿ ಕಡುಮುದದಿ ಪಿಡಿಕೊಳಲನು ಕರದಿ ನುಡಿಸಿ ಮುದ್ದಾಡುವೆ ನಾನು 1 ತೊದಲುನುಡಿಗೆ ನಲಿವೆನು ಬಾ ಬಾ ಚದುರತನವ ನೀ ತೋರುತೆ ಬಾ ಬಾ ಮುದದಿ ಕುಣಿಯುತೆ ಮಣಿಯುತೆ ಬಾ ಬಾ ಇದೆಗೋ ಎತ್ತಿಕೊಂಡೊಯ್ವೆನು 2 ಜೋಗುಳಗಳ ಹಾಡಿ ರಾಗದಿ ಕೊಂಡಾಡಿ ಬಾಗಿ ಬಿಗಿದು ಕುಣಿದಾಡಿ ನಾಗಸಂಪಿಗೆ ಸೂಡಿ3 ಸಂತಸದಿಂದೋಡು ಅಂತರಿಕ್ಷವ ನೋಡು ಕಂತುಕವೆಸೆದಾಡು ಶಾಂತಿಯ ಮನಕೆ ಕೊಡು 4 ಚಂದಿರನಂದದ ಕಂದಾ ನೊಂದಿಹ ಮನಕಾನಂದಾ ಸುಂದರ ಮುಖಾರವಿಂದಾ ಅಂದದ ನಗು ಮಿಗಿಲಾನಂದಾ5 ಗೋಲಿಯನಾಡುವೆ ಬಾ ಗಾಲಿಯನೋಡಿಸು ಬಾ ಬಾಲಭಾಷೆಯ ಪೇಳುವ ಬಾ ಲೀಲೆಯನೀಕ್ಷಿಸಿ ದಣಿವೆ 6 ಕುಣಿ ಕುಣಿ ಅರಗಿಣಿಯೆ | ಅಣಕಿಸು ಮನದಣಿಯೆ ಮಣಿ ಕಣ್ಮಣಿಯೆ | ತಣಿಯುವ ಮನಕೆಣೆಯೆ7 ಬಣ್ಣದ ಹೂಮುಡಿವೆ ಹಣ್ಣನು ಮೆಲಗುಡುವೆ 8 ನೊರೆಹಾಲ್ಕುಡಿ ನೀಲಾಂಗ ಮರೆಹೊಕ್ಕರ ಪೊರೆ ರಂಗಾ ಕರುಣಿಸೊ ಶಿರಬಾಗುವೆನಾಂ ಮಾಂಗಿರಿಯ ರಂಗಾ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೆಲೆಯಗೊಳ್ಳಿರೊ ಮನವ ಬಲಿದು ನೆಲೆಯಗೊಳ್ಳಿರೊ ನೆಲೆಯಗೊಳ್ಳಿರಯ್ಯ ನೀವು ಬಲಿದು ಭಾವಭಕ್ತಿಯಿಂದ ಧ್ರುವ ಹಲವು ಮಾತಾಡಿ ನಿಮ್ಮ ಕುಲವ ಚಲವವೆಂದು ಎನಿಸಬ್ಯಾಡಿ ಹೊಲಬು ತಿಳಿದು ನಿಮ್ಮ ನೆಲೆಯನಿಭವನರಿತು ನೋಡಿರೊ 1 ಗುಟ್ಟು ತಿಳಿಯಲರಿಯದೆ ಬೊಟ್ಟೆಣಿಸಿ ದಣಿಯಬ್ಯಾಡಿ ಮಟ್ಟಮಾಡಿ ಮನವ ನಿಜಗಟ್ಟಿಗೊಳ್ಳಿರೊ 2 ನಿಲವು ತಿಳಿದು ನೆಲಯಗೊಂಡು ಇಳಿಯೊಳಗೆ ಮಹಿಪತಿಯು ಒಲಿದು ದಯಮಾಡಿ ಸಲಹುತಿಹ ಗುರು ಕಾಣಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿ ದಣಯೆನೊ ರಂಗ ನಾ ಹಾಡಿ ದಣಿಯೆನೊ ನಾ ಜೋಡು ಕುಂಡಲಧರ ನೀನಾಡಿದಾಟಗಳೆಲ್ಲ ಪ. ದೇವಕಿ ನಿನ್ನ ಬಾಲಲೀಲೆ ತೋರೆನಲಾದೇವ ಮೊಸರ ಭಾಂಡವನೊಡೆದ ಭಾವಜನ್ನಯ್ಯ ಕಡೆಗೋಲು ನೇಣಿನ ಸಹ ರುಕ್ಮಿಣೀದೇವಕಿಗ್ಹರುಷವನಿತ್ತು 1 ಅಂದು ಯಶೋದೆ ನಿನ್ನ ಅಂದದ ಮದುವೆಯ ತಂದು ತೋರೆನೆ ವೇಂಕಟನಾಗಿ ಕಂದನೆನಿಸಿ ಬಕುಳೆಗೆ ಮದುವೆಯ ಅಂದದಿ ತೋರಿದೆ ತಂದೆಯಾದವ ಕೃಷ್ಣ 2 ತೊಡೆಯಲೆತ್ತಿ ನಿನ್ನ ಸಡಗರದಿಂದಲಿ ಇಡುವಳೊ ಸಕಲಾಭರಣಗಳ ಮೃಢಸಖ ಶ್ರೀ ಶ್ರೀನಿವಾಸನೆ ಎನ್ನನು ಕಡೆಹಾಯಿಸೆಂದು ಬಿಡದೆ ಧ್ಯಾನಿಪಳೊ 3
--------------
ಸರಸ್ವತಿ ಬಾಯಿ
ನೋಡಿ ದಣಿಯದೊ ನಯನ ಪಾಡಿ ದಣಿಯದೊ ಜಿಹ್ವೆ ನಾಡಿಗೊಡೆಯನೆ ರಂಗ ದೇವ ದೇವ ಪ. ಬೇಡಲೇನನೊ ಸ್ವಾಮಿ ಕಾಡಲ್ಯಾತಕೊ ದೇವ ನೀಡೊ ನಿನ್ನ ಪದಕಮಲ ಶ್ರೀ ಶ್ರೀನಿವಾಸ ಅ.ಪ. ಶಿರದಲ್ಲಿ ಮಕುಟ ವರ ಫಣೆಯಲ್ಲಿ ತಿಲುಕವು ಉರದಲ್ಲಿ ಸಿರಿವತ್ಸ ಹಾರ ಪದಕಗಳು ಕರ ಶಂಖ ಚಕ್ರಯುತ ನೆರಿಗೆ ಪೀತಾಂಬರವು ಪಾದ ಕಮಲಗಳ 1 ಮಂದಹಾಸ ಮುಖಾರವಿಂದದಲಿ ಕಿರುನಗೆಯು ಬಂದ ಭಕ್ತರಿಗಭಯ ತೋರ್ಪಕರವೊ ನಿಂದು ಸ್ತುತಿಸುವರಿಗಾನಂದ ತೋರುವ ದಿವ್ಯ ಒಂದೊಂದು ಅವಯವದ ಸುಂದರಾಕೃತಿಯ 2 ವೇದವನೆ ತಂದು ಸುತಗಾದರದಿ ಇತ್ತೆ ಕ್ಷೀ- ರೋದಧಿಯ ಮಥಿಸಿ ಸುಧೆಯ ಸುರರಿಗುಣಿಸಿದೆಯೊ ಭೂದೇವಿಯನೆ ಪೊರೆದು ಉದ್ಭವಿಸಿ ಕಂಭದೊಳು ಪಾದದಲಿ ಭೂಮಿಯನು ಅಳೆದ ವಟುರೂಪಿ 3 ದುಷ್ಟ ಕ್ಷತ್ರಿಯರನೆ ಕುಟ್ಟಿ ಕೆಡಹಿದ ಶೌರಿ ದಿಟ್ಟತನದಲಿ ಅನ್ನ ಬಟ್ಟೆಯನೆ ತೊರೆದೆÀ ಕೊಟ್ಟು ಗೋಪಿಗೆ ಮುದವ ಮೆಟ್ಟಿ ಕಾಳಿಂಗನ ಬಿಟ್ಟು ವಸನವ ಕಲಿದುಷ್ಟರನೆ ಕೊಂದೆ 4 ಅಪದ್ರಕ್ಷಕ ನಿನ್ನ ವ್ಯಾಪಾರ ರೂಪಗಳು ತಾಪ ಪರಿಹರಗೈದು ಕಾಪಾಡೆಲೊ ಶ್ರೀಪತಿಯೆ ಅಂತರ್ಬಹಿವ್ರ್ಯಾಪ್ತ ನಿರ್ಲಿಪ್ತನೇ ತಾಪ ಪರಿಹಾರನೆ 5
--------------
ಅಂಬಾಬಾಯಿ
ನೋಡಿ ದಣಿಯವೆನ್ನ ಕಂಗಳು ಈ ಸೋದೆಲಿರುವ ಈಡು ಇಲ್ಲದುತ್ಸವಂಗಳ ಬೇಡಿದವಗೀ ಧ್ವಜಬುತ್ತಿ (?) ನೀಡಿ ದಯಸೂರ್ಯಾಡುವರ ಪ ಯತಿಗಳ ಸಮೂಹವೆಷ್ಟು ಮಿತಿಯಿಲ್ಲದ ಬ್ರಾಹ್ಮಣ್ಯವೆಷ್ಟು ಮತಿಹೀನರಿಗೆ ಗತಿಯ ಕೊಡುವ ಪೃಥಿವಿಗಧಿಕ ಗುರುಗಳನ್ನು 1 ಭೂತನಾಥಗೆರಗಿ ನಿಂತು ವಾತಸುತಗೆ ಕೈಯ ಮುಗಿದು ಆತ ನಾರಾಯಣಭೂತನೆಂಬೋ ನೀತವಾದ ದೂತನಂತೆ2 ಕೊಳಲ ಕೃಷ್ಣ ಧವಳಗಂಗಾ ಹೊಳೆಯೊ ಮುತ್ತಿನ ಗದ್ದಿಗೆ ಮ್ಯಾಲೆ ಕಳೆಯು ಸುರಿವೊ ಕಮಲಪಾದ ಇಳೆಯೊಳ್ ಇಲ್ಲೀಳಿಗೆಯ ಪೂಜೆ 3 ಸನಕಾದಿ ಸುರೇಶನೆದುರು ಕಣಕ ಹ್ವಾಲಗ (ಹೋಳಿಗೆ?)ವನ್ನೆ ಮಾಡಿ ಮನಕೆ ಬಂದ ಮೃಷ್ಟಾನ್ನವನು ಜನಕೆ ತೃಪ್ತಿಬಡಿಸುತಿರಲು 4 ಸುತ್ತ ವೃಂದಾವನದ ಮಧ್ಯೆ ಉತ್ತಮರಾದ ವಾದಿರಾಜರು ಸತ್ಯವತಿಯ ಸುತರ ಎದುರು ನಿತ್ಯಾನಂದಭರಿತರಾಗಿ 5 ಸೃಷ್ಟಿಗಧಿಕಾನಂತಾಸನವು ಶ್ವೇತದ್ವೀಪ್ವೈಕುಂಠವೆಂಬೊ ಮುಕ್ತಸ್ಥಳದಲ್ವಾಸವಾದ ಲಕ್ಕುಮಿ ತ್ರಿವಿಕ್ರಮನ 6 ನೇಮನಿಷ್ಠ ಸೇವಕ ಜನಕೆ ಬೇಡಿದ ಇಷ್ಟಾರ್ಥ ಕೊಡುವೊ ಭೀಮೇಶಕೃಷ್ಣ ದಯದಿ ನೋಡಿದೆ ಹಯವದನನಂಘ್ರಿ 7
--------------
ಹರಪನಹಳ್ಳಿಭೀಮವ್ವ
ನೋಡಿ ನಿನ್ನನು ಧನ್ಯಳಾದೆನು ಮಾಡಿ ಕೃಪೆಯನು ಮನ್ನಿಸೂಬೇಡಿಕೊಂಬೆನು ಭವವ ಮುಂದಕೆ ನೀಡದಂಘ್ರಿಯೊಳೊಂದಿಸೂ ಪಕೃಷ್ಣ ನಿನ್ನನು ಮುದ್ದನಾಡುತ ಕಷ್ಟವನು ಕಡೆಗಾಂಬೆನೂಇಷ್ಟದೈವವು ನನ್ನ ಜಠರದಿ ಪುಟ್ಟೆ ನಿನ್ನನು ಕಂಡೆನೂದುಷ್ಟಕರ್ಮಗಳೆಲ್ಲವನು ನೆರೆ ನಷ್ಟಗೈಯುವ ದೇವನೂಪುಟ್ಟಮಗುವಾಗಿರಲು ಕೇಶವ ಮುಟ್ಟಿಲಾಲಿಪಳಾದೆನೂ 1ಬಟ್ಟಚೆಲು'ನ ರತ್ನದರಳೆಲೆ ಕಟ್ಟಿ ಬೊಪ್ಪದೊಳೊಲೆಯಲೂಪುಟ್ಟ ಮಾಗಾುಗಳು ಕಿ'ಗಳವಟ್ಟು ಕದಪುಗಳೊಪ್ಪಲೂನಟ್ಟನಡು ಪಣೆಯಲ್ಲಿ ಕತ್ತುರಿಬಟ್ಟು ಬೆಡಗನು ಬೀರಲೂಇಟ್ಟ ಕಪ್ಪಿನ ಕಣ್ಗಳೆಸೆಯಲು ಬಿಟ್ಟಬಾಯಲಿ ಸ'ಯಲು 2ಮುತ್ತು ರತ್ನಗಳನ್ನು ತೆತ್ತಿಸಿ ಸುತ್ತಕಾಂತಿಯ ಬೀರುವಉತ್ತಮದ ಮಕುಟವನು ನಿನ್ನಯ ನೆತ್ತಿಗಿಡುವೆನು ಕೇಶವಮತ್ತು ಕಂಕಣಗಳನು ಕರಗಳಿಗಿತ್ತು ಕಟ್ಟುವೆ ಪವಳವಾಸತ್ಯವಂತನೆ ನೀನು ಶಿಶುತನವೆತ್ತೆ ಪಡೆದೆನು ಭಾಗ್ಯವಾ 3ಸನ್ನುತನೆ ಪದಕಗಳ ಸರಗಳ ನಿನ್ನ ಕೊರಳಿಗೆ ಕಟ್ಟಿಚಿನ್ನ ಮುಕ್ತದಿ ಪೊಳೆವ ಕೌಸ್ತುಭವನ್ನು ಉರಕಳವಡಿಸುವಾರನ್ನ ಮಾಣಿಕದುಡಿಯ ಸೂತ್ರಗಳನ್ನು ಕಟಿಯಲಿ ರಚಿಸುವಾಇನ್ನು ಬಹು'ಧವಾಗಿ ಮನ್ನಿಪುದನ್ನು ವ'ಸಿದೆ ದಾಸ್ಯವಾ 4ಕಟ್ಟಿ ಘಂಟೆಯ ಸರವ ಕಟಿಯಲಿ ಪುಟ್ಟ ಶ್ರೀಮೃದುಪಾದವಾಮುಟ್ಟಿ ಕೈುಂದಂದುಗೆಗಳ ನಾನಿಟ್ಟು ಘಲಿಘಲಿಗುಟ್ಟುವಾಬಟ್ಟಗೆಜ್ಜೆಯ ಸಣ್ಣಸಾಲ್ಗಳ ದಟ್ಟಗೊಳಿಸೀಯೆಂದವಾನೆಟ್ಟದ್ಟೃಯಲೀಕ್ಷಿಸುತ ಹೊರಗಟ್ಟಿಬಿಟ್ಟೆನು ಕ್ಲೇಶವಾ 5ಒಂದು ಸ್ತನವನು ಸ'ಯುತಲೆ ಮತ್ತೊಂದು ಸ್ತನವನು ಕರದಲಿತಂದು ವದನದೊಳಿಟ್ಟು ದಣಿಯುತ ಮಂದಹಾಸದ ಮುಖದಲಿಇಂದಿರೇಶನೆ ನಿನ್ನ ನೋಡುತ ಇಂದು ಸಲ'ದೆ ಕೃಪೆಯಲಿವಂದಿಪರು ನಿನ್ನಡಿಗೆ ಸುರಮುನಿವೃಂದ ಭಾ'ಸಿ ಮನದಲಿ 6ಸಕಲ ಲೋಕಾಧಾರನಾಗಿಯೆ ಸಕಲ ಜೀವರ ಸಾಕ್ಷಿಯೆಪ್ರಕಟವಾಗೆನಗೀಗ ತೋರಿದೆ ಮುಕುತಿದಾಯಕ ಮೂರ್ತಿಯೆಭೃಕುಟಿಯಲಿ ನಿರ್'ುಸಿದ ಮಾಯೆಯ 'ಕರಿಸುವನುಸಾರಿಯೆಚಕಿತಳಿಗೆ ನನಗೊಲಿದೆ ತಿರುಪತಿ ವೆಂಕಟನಡಿಗೆ ಸ್ವಾ'ುಯೆ7
--------------
ತಿಮ್ಮಪ್ಪದಾಸರು
ನೋಡಿದೆ ನಾ ನೋಡಿದೆ ಮಾಡಿದೆ ನಾ ಮಾಡಿದೆ ಪ ಬೆಟ್ಟವ ಕಂಡೆನು ಸೋಪಾನಂಗಳು ನಿಟ್ಟುಸುರಿಕ್ಕದೆ ಏರಿದೆ ಕಟ್ಟ ಕಡಿಯಣ ಗೋಪುರ ಶಿಖರ ದಿಟ್ಟಿಸಿ ಕಣ್ಣಿಲಿ ನೋಡಿದೆ 1 ಈ ಸಮಸ್ತರ ಗುರುವಾದ ಭಾರತಿ ಈಶನ ಪಾದಕ್ಕೆ ಎರಗಿದೆ ಕ್ಲೇಶನ ಕಳೆದು ಎದುರಾಗಿ ಪೊಳೆವ ಶ್ರೀಶನ ಮಹದ್ವಾರ ನೋಡಿದೆ 2 ಬಲವಾಗಿ ಬಂದು ಸ್ವಾಮಿ ಪುಷ್ಕರಣಿ ಒಳಗೆ ವರಹನ ನೋಡಿದೆ ಜಲದಲಿ ಮಿಂದು ವೇಗದಲಿ ತಿರುವೆಂ ಗಳ ದೇವನ ನೋಡ ಸಾಗಿದೆ 3 ಗುಡಿಯ ಪೊಕ್ಕೆನು ಗರುಡಗಂಬದ ಸಡಗರವನು ನಾ ನೋಡಿದೆ ಒಡನೆ ಪ್ರಾಣಾಚಾರದವರು ಪಡೆದ ವರಗಳ ಕೇಳಿದೆ 4 ಮುನ್ನ ಅವಸರ ಮನಿಯೊಳಗೆ ಅನ್ನಪೂರ್ಣಿಯ ನೋಡಿದೆ ಚನ್ನಾಗಿ ಮಂಟಪದೊಳು ಶ್ರೀನಿವಾ ಸನ್ನ ಮೂರುತಿಯ ನೋಡಿದೆ 5 ತೊಟ್ಟಲ ತೀರ್ಥವ ಕೊಂಡು ಪ್ರಸಾದ ಇಟ್ಟು ಮಾರುವದು ನೋಡಿದೆ ಇಷ್ಟ ಭಕ್ತರು ಸಮ್ಮುಖದಲಿ ಮುಟ್ಟಿ ಪಾಡುವದು ನೋಡಿದೆ6 ದ್ವಾರಪಾಲಕರಿಗೆ ಸಾಷ್ಟಾಂಗದಲಿ ನಮ ಸ್ಕಾರವನು ಮಾಡಿದೆ ಭೋರನೆ ಕಟಾಂಜನದ ಫಲ್ಗುಣಿ ಬಂ ಗಾರ ಬಾಗಿಲವ ನೋಡಿದೆ 7 ಇಂದು ರವಿ ಶತಕೋಟಿ ತೇಜದ ವಿಂದ ಯುಗ್ಮವ ಪುಳಕೋತ್ಸಹÀದಿಂದ ಸಂದರುಶನ ನಾ ಮಾಡಿದೆ 8 ಇಟ್ಟಿದ್ದ ಅಂದಿಗೆ ಉಟ್ಟ ಪೀತಾಂಬರ ಕಟ್ಟಿದ್ದ ಧಟ್ಟಿ ವಢ್ಯಾಣ ಝಟಿ ಕಂಕಣಾಕಾರದಾಲಾಯುಧ ಇಟ್ಟ ಕಸ್ತೂರಿಯ ನೋಡಿದೆ 9 ಮಾಸದಾ ಪೂವು ಪೂಸಿದ ಗಂಧ ಭೂಷಣಾ ನಾನಾ ಪರಿವಿಧ ಏಸು ಬಗೆಯಲ್ಲಿಟ್ಟು ಶ್ರೀನಿ ವಾಸನ ಶೃಂಗಾರ ನೋಡಿದೆ 10 ಜಯಜಯ ಜಗದೀಶ ಜಗನ್ನಿವಾಸ ಜಯ ಜಯ ಲಕುಮಿ ಪರಿತೋಷ ಜಯ ಜಯ ವಿನಾಶ ಜಯ ಜಯ ಸರ್ವೇಶ ಜಯವೆಂದು ಸ್ತೋತ್ರವ ಮಾಡಿದೆ11 ಕೇಸಕ್ಕಿ ದಧ್ಯೋದನ ಪರಮಾನ್ನ ದೋಶಿ ಬಿಸಿಬಿಸಿ ಮನೋಹರ ಲೇಸಾಗಿ ಚತುರ್ವಿಧ ಪ್ರಸಾದವನ್ನು ಈಸು ಅವಸರ ನೋಡಿದೆ 12 ಕರ್ಪೂರದಾರತಿ ವಪ್ಪಿನಿಂದಲಿ ತಂದು ತಪ್ಪದಲಿ ಬೆಳಗೋದು ನೋಡಿದೆ ರೆಪ್ಪೆಯವಿ ಹಾಕದೆ ಮನದಣಿಯ ತಿ ಮ್ಮಪ್ಪನ ವಿಗ್ರಹ ನೋಡಿದೆ 13 ಹಿಮಋತು ಪ್ರಥಮ ಮಾಸÀ ದಶಮಿ ಹಿಮಕರ ವಾರದದಿನದಲ್ಲಿ ಕ್ರಮದಿಂದಲಿ ಪೋಗಿ ಬಿಂಬ ಮೂರುತಿಯ ವಿಮಲ ಚಾರಿತ್ರವ ನೋಡಿದೆ 14 ಶತ ಅಪರಾಧವ ಮಾಡಲು ಕಳೆದು ಪತಿ ವಿಜಯವಿಠ್ಠಲ ಪುರಂದರನ ಸಂ ಗತಿಯಲ್ಲಿ ಸತತ ಸಾಕಿದಾ15
--------------
ವಿಜಯದಾಸ
ನೋಡಿದೆ ಮನದಣಿಯೆ ಶ್ರೀನಿವಾಸನ ನೋಡಿದೆ ಮನದಣಿಯೆಪ. ನೋಡಿದೆನು ಶೇಷಾದ್ರಿಯಿಂದೊಡ- ಗೂಡಿ ಭಕ್ತರ ಬೀಡಿನೊಳು ನಲಿ ದಾಡಿ ಮೆರೆವ ಸಗಾಢ ದೈತ್ಯವಿ ಭಾಡ ಶ್ರೀಹರಿ ರೂಢಿಗೊಡೆಯನ ಅ.ಪ. ಶರಣರಪೇಕ್ಷೆಯನು ಕೊಟ್ಟುಳುಹಲು ಕರುಣಾಳು ನಿಜದಿ ತಾನು ಸ್ಥಿರತೆಯೊಳು ಸ್ವಪ್ನದಲಿ ತಾ ಗೋ ಚರಿಸಿ ಭರವಸೆಯಿತ್ತು ವೆಂಕಟ ಗಿರಿಯವೋಲ್ ಸಾನ್ನಿಧ್ಯ ವದನಾಂ- ಬುರುಹದಲಿ ಮೆರೆದಿಹನ ಚರಣವ 1 ಲಲನೆ ಲಕ್ಷ್ಮಿಯು ಬಲದಿ ಶೋಭಿಪ ವಾಮ ದೊಳಗೆ ಗಣಪ ಮುದದಿ ಒಲವಿನಿಂ ಗರುಡಾಂಕ ಮೃದುಪದ ನಳಿನದಾಶ್ರಯದಿಂದ ವಾಯುಜ ಬಳಗ ಚಾತುರ್ದೇವತೆಯರಿಂ- ದೊಳಗೆ ಪೂಜೆಯಗೊಂಬ ದೇವನ 2 ಕುಂಡಿಲಕೊಳದೊಳಿಹ ಪ್ರಾಣೇಶ ಮುಂ- ಕೊಂಡು ಪಟ್ಟಣಕೆ ಬಹ ಕೆಂಡದಂದದೊಳುರಿವ ಶತಮಾ- ರ್ತಾಂಡದೀಪ್ತಾ ಮುಖಂಡ ಭೃತ್ಯನ ಕೊಂಡುಯಿದಿರಲಿ ಮಂಡಿಸಿದನಖಿ ಳಾಂಡಕೋಟಿ ಬ್ರಹ್ಮಾಂಡನಾಥನ 3 ನೀಲಮೇಘಶ್ಯಾಮಲ ಕೌಸ್ತುಭವನ ಮಾಲಕಂಧರಶೋಭನ ವಜ್ರ ಮುತ್ತಿ ಸಾಲ ಸರ ಪೂಮಾಲೆಗಳ ಸುಖ ಲೀಲೆಯಿಂದೊಪ್ಪಿರುವ ಭಕ್ತರ ಕೇಳಿಯಲಿ ನಲಿದಾಡುತಿಹನನು 4 ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ- ಕ್ಷ್ಮೀನಾರಾಯಣ ಹರಿಯ ಕಾಣಿಕೆಯ ಕಪ್ಪಗಳ ತರಿಸುತ ಮಾನಿಸುತ ಭಕ್ತಾಭಿಮತವನು ತಾನೆ ಪಾಲಿಸಿ ಮೆರೆವ ಕಾರ್ಕಳ ಶ್ರೀನಿವಾಸ ಮಹಾನುಭಾವನ 5
--------------
ತುಪಾಕಿ ವೆಂಕಟರಮಣಾಚಾರ್ಯ
ನೋಡಿದೆ ವಿಠಲನ ನೋಡಿದೆ ಪ ನೋಡಿದೆನು ಕಂಗಳಲಿ ತನುವೀ ಡಾಡಿದೆನು ಚರಣಾಬ್ಜದಲಿ ಕೊಂ ಡಾಡಿದೆನು ವದನದಲಿ ವರಗಳ ಬೇಡಿದೆನು ಮನದಣಿಯ ವಿಠಲನ ಅ.ಪ. ಇಂದಿರಾವಲ್ಲಭನ ತಾವರೆ ಗಂದನಂಜಿಸಿ ತಪತÀಪಾವೆಂ ತೆಂದು ಪೇಳ್ದನ ಯುವತಿ ವೇಷದಿ ಕಂದು ಗೊರಳನ ಸ್ತುತಿಸಿದನ ಪು ರಂದರಾನುಜನಾಗಿ ದಿವಿಯೊಳು ಕುಂದದರ್ಚನೆಗೊಂಬ ಸನಕ ಸ ನಂದನಾದಿ ಮುನೀಂದ್ರ ಹೃದಯ ಸು ಮಂದಿರನ ಮಮ ಕುಲದ ಸ್ವಾಮಿಯ 1 ಭಾರ ತಾಳದೆ ಭೂತರುಣಿ ಗೋರೂಪಳಾಗಿ ಸ ನಾತನನ ತುತಿಸಲ್ಕೆ ಶೇಷ ಫ ಣಾತ ಪತ್ರನು ನಂದಗೋಪ ನಿ ಕೇತನದಲವತರಿಸಿ ವೃಷ ಬಕ ಪೂತನಾದ್ಯರ ಸದೆದು ಬಹುವಿಧ ಚೇತನರಿಗೆ ಗತಿನೀಡಲೋಸುಗ ಜಾತಿಕರ್ಮಗಳೊಹಿಸಿ ಮೆರೆದನ 2 ತನ್ನತಾಯ್ತಂದೆಗಳ ಹೃದಯವೆ ಪನ್ನಗಾರಿಧ್ವಜಗೆ ಸದನವೆಂ ದುನ್ನತ ಭಕುತಿ ಭರದಿ ಅರ್ಚಿಪ ಧನ್ಯಪುರುಷನ ಕಂಡು ನಾರದ ಬಿನ್ನಯಿಸಿ ತುತಿಸಲ್ಕೆ ಕೇಳಿ ಪ್ರ ಪನ್ನ ವತ್ಸಲ ಬಿರಿದು ಮೆರೆಯಲು ಜೊನ್ನೊಡಲು ಭಾಗದಿ ನೆಲೆಸಿದ ಜ ಗನ್ನಾಥ ವಿಠ್ಠಲನ ಮೂರ್ತಿಯ 3
--------------
ಜಗನ್ನಾಥದಾಸರು