ವಾಗ್ದೇವಿ ಭಾರತಿ ನೀಡೆನಗೆ ಸುಮತಿ
ನಂದಸುತನ ಪದದಿ ಕೊಡು ರತಿ ಪ
ಕಳೆದು ಮನದಿ-
ಗರಿಯೆ ಬಂದು ಬೇಗ ಅ.ಪ
ಇಂದು ಮೌಲಿ ಮುಖ್ಯ ಸುರಗಣ ವಂದಿತಳೆ ಎನ್ನ
ಅನುದಿನ ನಂದ ಮುನಿಯ ಶಾಸ್ತ್ರವಚನ
ಛಂದದಿಂದ ಪಠಣ ಶ್ರವಣಾನಂದವಾಗುವಂದದಿ ಗುರು
ಗಂಧ ವಾಹನರಾಣಿ ನಿನಗೆ1
ಪೇಳಲಳವೆ ನಿಮ್ಮ ಮಹಿಮೆಯ ಕಾಲಭಿಮಾನಿ
ಕೇಳುವೆ ಸುಜ್ಞಾನ ಭಕುತಿಯ ಕಾಲಕಾಲಗಳಲ್ಲಿ ಎನ್ನ
ಶುಭ ಲೀಲೆಗಳನು
ಪಾಡಿ ಪೊಗಳುವಂತೆ ಜನನಿ 2
ಚಾರು ಕೃಷ್ಣಾತೀರಸಂಸ್ಥಿತಾ ಉದಾರ ಚರಿತ
ನೀರಜಾಸನಾದಿಸುರನುತಾÀ ಶೇರಿದ ಭಕುತರಿಗೆ ತ್ರಿದಶ
ಭೂರುಹ ವೆಂದೆನಿಸಿದಂಥಾ ಪಾರ ಮಹಿಮ ಕಾರ್ಪರಸಿರಿ
ನಾರಸಿಂಹನ ಸೊಸೆಯೆ ನಿನಗೆ 3