ಸಂಜೀವರಾಯ ಸಾಧುಜನಪ್ರಿಯ ಪ
ಭುಂಜಿಪ ಸದ್ಭಕ್ತರ ಸೇವೆಯೊಳಿರಿಸೆನ್ನನು ಅ.ಪ
ರಾಮನಾಜ್ಞೆಯಲಿ ಶರಧಿಯದಾಟುತಲಿ | ರಾವಣನ ಪಟ್ಟಣದಿ
ಭೂಮಿಜಾತೆಗುಂಗುರವನು ನೀಡುತಲಿ
ಆ ಮಹಾಶಿರೋ ಮಾಣಿಕ್ಯವ ಸೀ-
ತಾ ಮಹಾದೇವಿಯಿಂದ ಕೈಕೊಂಡ 1
ವನವ ಕೀಳುತಕ್ಷಾದಿ ರಾಕ್ಷಸರನು ವಧಿಸಿ | ಮುದದಿ ದಶಕಂ-
ಠನ ತೃಣೀಕರಿಸಿ ವರಪುರವನುದಹಿಸಿ
ಇನಕುಲಂಗೆ ವಾರ್ತೆಯ ತಿಳುಹಿಸಿ ನೀ
ವನಜ ಸಂಭವನ ಪಟ್ಟವ ಪಡೆದೆ 2
ಕೋಲಾಹಲನಗರ ನಿವಾಸವಗೈಯ್ವೆ ಕುಜನರನು ತರಿವೆ | ಕರು-
ಣಾಲವಾಲ ಭಕ್ತರಿಗೀಪ್ಸಿತವೀವೆ
ಶ್ರೀಲತಾಂಗಿಪತಿ ಗುರುರಾಮವಿಠಲ
ನೋಲಗಿಸುವ ಭಾಗ್ಯವಂತರೊಡೆಯನೆ 3