ಒಟ್ಟು 260 ಕಡೆಗಳಲ್ಲಿ , 59 ದಾಸರು , 244 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ ತುಂಗೆ ಕಾರುಣ್ಯ ಪಾಂಗೆ ಅಸಿತಾಂಗೆ ತಿಂಗಳಾನನೆ ಪ ಪರಮೇಷ್ಟಿ ಪಾತ್ರಜಾತೆ ವರುಣನ್ನ ನಿಜದೈಯಿತೆ ಸುರ ಮುನಿಗಣವಿನುತೆ ವರದಾತೆ ಸರ್ವಖ್ಯಾತೆ ತರಣಿಸುತನ ಉದ್ಧರಿಸಿದೆ ಕರುಣದಿ ಧರೆಯೊಳು ನಿನಗೆ ಎ ದುರುಗಾಣೆ ಶರಣಾ 1 ಭಯ ಪಾಪ ತಾಪದೊರೆ ಜಯ ಜಯ ಗುಣಸಾರೇ ತ್ರಯಭುವನ ಉದ್ಧಾರೆ ಆಯುತಾರ್ಕವರ್ನ ನೀರೆ ನಯವ ಭಕುತಿ ಹೃ ದಯದೊಳಗಿತ್ತು ಸಹಾಯ ದಿನ ದಿನ ನಯನ ಶ್ರವಣವೇಣಿ 2 ಘನ್ನ ವಾರಣಾಸಿ ಕಾಸಿವನ ಆನಂದ ನಿವಾಸಿ ಪ್ರಣತ ಜನರಘನಾಶ ಮಣಿಭೂಷೆ ಸೌಖ್ಯರಾಸಿ ಅನನುತ ವಿಜಯವಿಠ್ಠಲನ ಮನಸಿನಲಿ ನೆನೆಸುವ ಸಾಧನ ಕೊಡು ವಿರಜೇ 3
--------------
ವಿಜಯದಾಸ
ಗುರು ಪಾಂಡುರಂಗ ವಿಠಲ | ಪರಿಪಾಲಿಸಿವನಾ ಪ ಕರಣ ನೀಯಾಮಕನೆ | ಕರುಣವನೆ ತೋರೀ ಅ.ಪ. ಕರ್ಮ ಸ್ವಾಮಿ | ಎತ್ತಿಕರ ಪಿಡಿಯೋ 1 ಕರ್ಮ ನೆರವಾಗಲಿವನೀಗೆಪರಮ ಪಾವನ ಮೂರ್ತೆ ಹರಿ ಪಾಂಡುರಂಗಾ 2 ಭವ ಕಳೆಯೋ 3 ಪದ್ಧತಿಯ ತಪ್ಪದಲೆ | ಮಧ್ವಮತದಂಗವನುಉದ್ಧರಿಸೊ ಇವನಲ್ಲಿ | ಪದ್ಮನಾಭಾಖ್ಯಾಈ ಧರೆಯ ಸಂಸಾರ | ಬದ್ಧ ಲೌಕೀಕಗಳತಿದ್ದಿ ವೈದಿಕವೆನಿಸೋ | ಹದ್ದು ವಾಹನನೇ4 ಕೃದ್ಧಖಳ ಸಂತತಿಯ | ಒದ್ದು ಕಳೆಯುತ ಹರಿಯೆಹೃದ್ಗುಹದಿ ಮೈದೋರೊ | ಶಬ್ಧಗೋಚರನೇಮಧ್ವಾಂತರಾತ್ಮ ಗುರು | ಗೋವಿಂದ ವಿಠ್ಠಲನೆಮದ್ವಚನ ಸಲಿಸೆಂದು | ಪ್ರಾರ್ಥಿಸುವೆ ಹರಿಯೇ 5
--------------
ಗುರುಗೋವಿಂದವಿಠಲರು
ಗುರು ಪ್ರಸನ್ನ ವಿಠಲ | ಪೊರೆಯ ಬೇಕಿವನಾ ಪ ದುರಿತ ದುಷ್ಕøತ ನಿಚಯ | ಪರಿಹರಿಸಿ ವರ್ಯಾ ಅ.ಪ. ಮಧ್ವ ಮತದಲಿ ಶ್ರದ್ಧೆ | ವೃದ್ಧಿಗೈ ಸಿವನಲ್ಲಿಶ್ರದ್ಧೆ ಪತಿನುತ ಹರಿಯೆ | ಮಧ್ವಾಂತರಾತ್ಮಾಬುದ್ಧಿ ಜೀವಿಯು ಇವನು | ಸಾಧನದಿ ಶಕ್ತನಿಹನಿದ್ರೆಯಿಂದೆಚ್ಚರಿಸಿ | ಉದ್ಧರಿಸೊ ಇವನಾ 1 ಅಂಕಿತದ ಉಪದೇಶ ಕಾಂಕ್ಷಿಸುತ್ತಿಹ ಇವಗೆಬಿಂಕದಲಿ ತೈಜಸನು | ಗುರು ರೂಪಿಲಿಂದಾಲೆಂಕಕನ ಸ್ವೀಕರಿಸಿ | ಆಶಿಷವ ನಿತ್ತಿಹನುಪಂಕಜಾಸನ ವಂದ್ಯ | ಅಂಕಿತವ ನಿತ್ತೇ 2 ಸಂಸಾರ ಕ್ಲೇಶಪದ | ಪಾಂಸು ಭಜಿಪುದರಿಂದೆಸಂಶಯವು ರಹಿತಾಗಿ | ದೂರ ಓಡುವುದೋಕಂಸಾರಿ ನಿನ ಅಂಶಿ | ಅಂಶಾವತಾರಗಳಶಂಸನದಿ ಸಾಧನವ | ಗೈಸೊ ಶ್ರೀಹರಿಯೇ 3 ಭವ ವಂದ್ಯಾ 4 ಯೋಗೀಶ ಶ್ರೀ ಕೃಷ್ಣ | ಯೋಗ ಸಾಧನೆಯಿತ್ತುನೀಗು ಭವವನು ಇವಗೆ | ಭಾಗವತರೊಡೆಯಬಾಗಿ ಬೇಡುವೆ ದಯಾ | ಸಾಗರನೆ ಉದ್ಧರಿಸೊಯೋಗಿ ಜನ ವಂದ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಗುರು ರಾಜ ಹರಿ ವಿಠಲ | ಪೊರೆಯ ಬೇಕಿವಳಾ ಪ ಗರುಡ ಗಮನನೆ ದೇವ | ಸರ್ವಾಂತರಾತ್ಮ ಅ.ಪ. ಪತಿಯೆ ಪರದೈವ ವೆಂ | ಬತಿಶಯದ ಮತಿಯಿತ್ತುರತಳೆನಿಸು ಗುರು ಹಿರಿಯ | ಹಿತಸೇವೆಯಲ್ಲೀಕೃತ ಕೃತ್ಯಳೆಂದೆನಿಸೊ | ಗೃಹ ಮೇಧಿ ಎಂಬಲ್ಲಿಕೃತಿ ರಮಣ ಪ್ರದ್ಯುಮ್ನ | ವಿತತ ಮಂಗಳನೇ 1 ಮಧ್ವಮತದನುಯಾಯಿ | ಶುದ್ಧ ಭಕುತಿ ಜ್ಞಾನ ಉದ್ಧರಿಸಿ ಇವಳಲ್ಲಿ | ಸಾಧನವ ಗೈಸೋಅಢ್ಯರೇಡ್ಯನೆ ಹರಿಯೆ | ಶ್ರದ್ಧಾಳು ತನದಲ್ಲಿಬುದ್ಧಿ ಓಡಲಿ ದೇವ | ಮಧ್ವಾಂತರಾತ್ಮಾ 2 ಸಾರ | ತರಳೆ ಬುದ್ಧಿಗೆ ನಿಲುಕಿಪರಮ ಸತ್ಸಾಧನವ | ಚರಿಸುವಂತೆಸಗೋಮೊರೆಯಿಡುವೆ ನಿನ್ನಲ್ಲಿ | ಕರುಣಿಸೀ ಬಿನ್ನಪವಗುರುವಂತರಾತ್ಮ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಗುರುರಾಘವೇಂದ್ರ ಶರಣರ ಸುರ ತರುವೆ ಕರುಣಸಾಂದ್ರ ಪ ಧರೆಯೊಳು ನಿನ್ನ ಶ್ರೀ ಚರಣಕಮಲ ಪ್ರಭೆ ಪರಿ ಉದ್ಧರಿಸು ಈ ಶರಣನ್ನ ಅ.ಪ. ಸುಕೃತ ಸ್ವರೂಪ ದರುಶನ ಮಾತ್ರದಿ ಭವ ಶ್ರಮ ಹರಿಸುವ ಪ್ರತಾಪ ರಮೆ ಅರಸನ ಗುಣ ಸಮುದಾಯದೊಳು ಮಗ್ನ ಭ್ರಮೆರಹಿತ ಸ್ಥಿರಚಿತ್ತ ನಮೋ ನಮೋ ನಿನಗೆ ಅಮಿತ ಮತಿಯ ಕರುಣ ಕವಚವ ಅಮಿತಕಾಲದಿ ಕೊಟ್ಟು ಮೆರೆಯುವ ಅಮಿತ ಮಂಗಳದಾಯಿ ತತ್ವದ ಕಮಲ ವೈಭವ ಸಲಹಲೆನ್ನನು 1 ಪಾವನ ಸುಯತಿ ರನ್ನ ಲಾಲಿಸು ವಾಕು ಸಾವಧಾನದಿ ಘನ್ನ ಭವ ಭವಣೆ ದಾವಾಗ್ನಿಯೊಳು ನೊಂದೆ ಶ್ರೀ ವರನ ದಾಸ ಕಾವ ದೃಷ್ಟಿಯಲಿ ನೋಡೊ ನಿತ್ಯ ಮಂಗಳ ಭಾವರೂಪ ಗುಣತ್ರಯಗಳ ಆವ ಕಾಲಕು ಬಿಡದೆ ನೋಡುವ ಭೂವಿ ಬುಧಮಣಿ ಪಾಲಿಸೆನ್ನನು 2 ತುಂಗಾತೀರ ನಿವಾಸ ರಾಘವೇಂದ್ರ ಗುರು ತುಂಗ ಮಹಿಮ ನಿರ್ದೋಷ ಮಂಗಳಾಸಮಹರಿ ಗಂಗಾಪಿತನ ಕೂಡಿ ತುಂಗಪೂಜೆಯ ಕೊಂಡ್ವರಂಗಳ ಬೀರುವ ಪಾದ ತೀರ್ಥದಿ ಭವ ಭಂಗ ಬಗೆಯನು ಬಲ್ಲ ಮಹಾತ್ಮ ರಂಗ ಜಯೇಶವಿಠಲ ದೇವನ ಸಂಗ ನೀಡುವ ಕೃಪೆಯ ಮಾಳ್ಪ 3
--------------
ಜಯೇಶವಿಠಲ
ಗುರುವೆ ನಮ್ಮ ತಾಯಿ ತಂದೆ | ಗುರುವೆ ನಮ್ಮ ಬಂಧುಬಳಗಗುರುವೆ ನಮ್ಮ ಸರ್ವಸ್ವವು ಗತಿಗೋತ್ರರಯ್ಯಾ ಪ ತಂದೆ ತಾಯಿ ಮಗುವಿಗಾಗಿ | ನೊಂದಿ ಬಳಲಿ ಸಾಕುವಂತೆಎಂದೆಂದು ಅವರೆ ನಮ್ಮ ಸದುಪದೇಶದೀ |ಬಂಧನಕ್ಕೊಳಗಾಗದಂತೆ | ಮಂದರೋದ್ಧರನ ನಾಮಅಂದದಿಂದ ಬೋಧಿಸುತ್ತ | ಉದ್ಧರಿಸುವರಯ್ಯಾ 1 ಮುದ್ದು ಮೋಹನದಾಸರಿಂದ | ಬದ್ಧಶಿಷ್ಯರೆನಿಸಿಕೊಂಡುಶುದ್ಧರು ಅವಧೂತರು | ಹರಿಯನ್ನೆ ಕಂಡೂ |ಗೆದ್ದು ತಾವು ಬಂಧದಿಂದ | ಉದ್ಧರಿಸಲನ್ಯರನುಸಿದ್ಧರಾಗಿ ಕರಿಗಿರೀಲಿ | ದಾಸಕೂಟ ನೆರೆಸೀದ 2 ಸನ್ನುತ ಪರ | ವಸ್ತುವೆಂದು ಬೋಧಿಸಿದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗುರುಸ್ತುತಿ ರಾಘವೇಂದ್ರ ಸಲಹೊ ಗುಣಸಾಂದ್ರ ಪ ಭಗವದ್ಗೀತಾ ವಿವರಣ ತಂತ್ರದೀಪ ನಿಗಮತತಿಗೆ ಖಂಡಾರ್ಥವ ರಚಿಸಿ ಖಗರ್ಥಗಳನು ಅತಿ ಸ್ಫುಟವಾಗಿ ವಿವರಿಸಿ ಖಗವಾಹನ ತೋರಪಡಿಸಿದ ಧೀರ 1 ಧರಣಿ ವಿಜರರಿಗೆ ವರಗಳ ಕೊಡುವಂಥ ಸುರತರುವೆ ನಿಂಗೆ ಕರಗಳ ಮುಗಿದು ಪರಮಪುರುಷ ಹರಿಚರಣ ಕಮಲದಲಿ ಸ್ಥಿರವಾದ ಭಕುತಿಯ ಬೇಡುವೆ ಧೀರ 2 ಚಂಡ ಕುಮತಗಳ ಖಂಡಿಸಿ ಬುಧಜನ ಮಂಡಲದೊಳಗೆ ಪ್ರಚಂಡನೆಂದೆನಿಸಿ ಕುಂಡಲಿಶಯನ ಪಾದಮಂಡಿತ ಹೃದಯ ಭೂ ಮಂಡಲದೊಳಗೆ ಅಖಂಡಲನಾದ 3 ಶ್ರದ್ಧೆಯಿಂದಲಿ ವರ ಮಧ್ವಾಚಾರ್ಯರ ಮತ ಪದ್ಧತಿ ಬಿಡದಂತ ಬುದ್ಧಿಯನಿತ್ತು ಉದ್ಧರಿಸಯ್ಯ ಕೃಪಾಬ್ಧಿಯೇ ಬುಧಜನಾ ರಾದ್ಯಚರಣ ಪರಿಶುದ್ಧ ಚರಿತ್ರ 4 ಕಾಮಜನಕನಾದ ನಾಮಗಿರೀಶ್ವರಿ ಸ್ವಾಮಿ ನೃಹರಿಪಾದ ತಾಮರಸಂಗಳ ಪ್ರೇಮದಿ ಪೂಜಿಪೆನೆಂಬೊ ಕಾಮಿತವರ ನೀಡೊ ಶ್ರೀ ಮತ್ಸುಧೀಂದ್ರಕರ ತಾಮರಸಭವನೆ 5
--------------
ವಿದ್ಯಾರತ್ನಾಕರತೀರ್ಥರು
ಗೋಪಾಲ ಬಾಲಾ ತ್ರಿಭುವನ ಪಾಲಾ ಕರುಣಾಲವಾಲ ಗೋಪಾಲ ಬಾಲಾ ಗೋಪೀ ಬಾಲಾ ಭಕುತಾನುಕೂಲ ಪ ಪಾಪಕುಲಾನಲ ತಾಪಸ ಸಂಕುಲ ಶ್ರೀಪತೆ ಮಾಂಗಿರಿನಿಲಯ ಶುಭಾಕುಲ ತಾಪತ್ರಯ ಕುಲಜಾಲ ನಿರ್ಮೂಲ ಗೋಪಗೋಪಿಕಾನಂದದುಕೂಲಾಅ.ಪ ಮುರಳೀಧರ ಘನಸುಂದರ ಭಾವ ದೇವಾದಿದೇವ ಸರಸೀರುಹದಳನಯನ ಸ್ವಭಾವಾ ಜೀವಾದಿಜೀವ ವರದಾಯಕ ಶರಣರ ಸಂಜೀವಾ ಮೃದುಮಧುರಸ್ವಭಾವ ಸ್ವರನಾದದಿ ಘಲು ಘಲ್ಲೆನುತಿರುವಾ ವರನೂಪುರದುಂಗುರ ಝಣ ಝಣರವ ಹರುಷದೊಳೆಲ್ಲೆಡೆಯೊಳು ನಲಿನಲಿದಾಡುವ 1 ಮುದ್ದಾಡಿ ನಲಿಯಳೆ ನಿನ್ನ ಯಶೋದಾ ಅಘರೂಪವಾದ ಮುದ್ದೆ ಬೆಣ್ಣೆಯ ಮೆಲುವಾತುರದಿಂದ ಕರಯುಗಗಳಿಂದ ಕದ್ದು ನೀ ನೋಡುವುದೇ ಅತಿಚೆಂದ ಭಕ್ತರಾನಂದಾ ಮದ್ದುಣಿಸಿದಳ ಒದ್ದು ಸಂಹರಿಸಿದ ಮೆದ್ದು ಉದ್ಧರಿಸೊ ಗೋವಿಂದ ನಂದನಕಂದ 2 ಅಕ್ಕೋ ಬೃಂದಾವನದಾನಂದ ಹೊಂಗೊಳಲಿಂದಾ ಇಕ್ಕೋ ಚೆಂದದ ಗಾನಾನಂದ ಕಿರುನಗೆಯಿಂದ ಕಕ್ಕುಲತೆಯ ಮದದಿಕ್ಕೆಗೆ ಸಿಲುಕದ ಠಕ್ಕುಗಾರ ಸೊಬಗಿಂದ ರಾಧೆಗೆ ಮುದ ವಿಕ್ಕಿ ಮಡುವ ಧುಮ್ಮಿಕ್ಕಿ ನರ್ತನಗೈದ 3 ವೈರಿ ಕಂಸಾರಿ ಶೌರಿ ಬಾ ಬಾರೋ ಪಾಂಡವ ಪಕ್ಷ ವಿಹಾರೀ ಶಿಶುಪಾಲ ಸಂಹಾರೀ ಭವ ಬಂಧನ ಪರಿಹಾರಿ ಶರಣರಿಗುಪಕಾರೀ ಇಭಕುಲಕೇಸರಿ ಘನ ಗಿರಿಧಾರೀ ಅಭಯಪ್ರದ ಹರಿ ಗೂಢಸಂಚಾರಿ ನಭಚರಹರಿ ಮಾಂಗಿರಿ ಸುವಿಹಾರೀ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚರ್ಯನಾಮುಗಿವೆನು ಕೈಯ್ಯಾ ಪ ಮಂತ್ರಸದನ ಪದ ಚಿಂತಕ ಶ್ರೀ ರಘು ಕಾಂತಕರಜ ರಘು ದಾಂತ ಯತೀಂದ್ರರ ಅ.ಪ ಅಂತರಂಗದಿ ಸಂತತ ಶ್ರೀಹರಿಯ ಚಿಂತಿಸುತಲಿ ಭೂಮಿಯ ಕಾಂತ ದಂಷ್ಟ್ರದಿ ಸಂಜನಿಸಿದ ನದಿಯ ಸಂಗಮ ಶುಭನಿಲಯ ವಿಶ್ರಾಂತ ಸುಮಹಿಮರ 1 ಪತಿ ಲಕ್ಷ್ಮಣರ ಪಾದಾಂಬುಜ ಮಧುಪರ ಮೋದಾಶ್ರು ಸುರಿಸುತ ಪೂಜಿಸಿದವರ ಪುಲಕೀತ ವಿಗ್ರಹರ ವಾದಿವಾರಣ ಮೃಗಾಧಿಪರೆನಿಸುತ ಮೋದತೀರ್ಥ ಸುಮ ತೋದಧಿ ಚಂದಿರ 2 ಇಳಿಯೊಳು ಚರಿಸುತ ಬುಧ ಜನರನ್ನು ಚಲಿಸುತ ಛಾತ್ರರನು ತಿಳಿಸೀ ಸಚ್ಛಾಸ್ತ್ರವ ಮರ್ಮಗಳನ್ನು ಉದ್ಧರಿಸ್ಯವರನ್ನು ಯಳಮೇಲಾರ್ಯರ ಒಲುಮೆ ಪಡೆದು ಭವ ಕಲುಷ ವಿದೂರರ 3 ದಾಸರ ಶುಭಚರಿಯ ಸ್ತುತಿಸಿ ಶೇವಿಸಿ ಪಡೆದರು ಗುರುಕೃಪೆಯ ನೋಳ್ಪರಿಗಾಶ್ಚರ್ಯ ನತ ಜನರಘ ಪರ್ವತ ಪವಿ ಸನ್ನಿಭ ಕ್ಷಿತಿ ಸುರತತಿ ಸೇವಿತ ಪದ ಪದ್ಮರ 4 ಜಾಣ ಮಾನವರನ ಸಾನುರಾಗದಿ ಧ್ಯಾನಿಸಲಿವರನ್ನ ಕಾಮಿತ ಗರಿವರನ ಶ್ರೀನಿಧಿ ಕಾರ್ಪರ ಸ್ಥಾನಗ ನರಪಂಚನನನೊಲಿಸಿದ ಮೌನಿವರೇಣ್ಯರ 5
--------------
ಕಾರ್ಪರ ನರಹರಿದಾಸರು
ಜಯ ಜಯ ಭೀಮಸೇನ ಪ. ಜಯ ಭೀಮಸೇನ ದುರ್ಜಯ ಪರಾಕ್ರಮ ಧೀರಾದಯಾಪಯೋನಿಧಿಯೆ ನಿರ್ಭಯ ವೈಷ್ಣವಾಗ್ರಣಿಅ.ಪ. ಅಂಬ ಪಾವಕ ದೀನೋದ್ಧಾರಿ1 ವೃಕೋದರ ವಿಷ್ಣುಸೇವಕ ವಿಜ್ಞಾನಾಂಬುಧಿಬಕಮದಧ್ವಂಸಿ ಜಟಾಸುರಾಂತಕ ಹಿಡಿಂ-ಬಕಾಸುರಗರ್ವಪರ್ವತ ಪವಿಧರ ಹಿಡಿಂಬಕಿ ಚಿತ್ತಕುಮುದಕೋರಕ ಪೂರ್ಣೋಡುಪರಾಜಅಕಳಂಕ ಧನುರಾಗಮಾಚಾರ್ಯ ನಿಪುಣ ಕೀ-ಚಕ ಬಲ ನಿರ್ಮೂಲನ ದ್ರೋಣಾದಿ ಸೈ-ನ್ಯ ಕುಮನ ಅಸುಹರಣ ಧಾರ್ತರಾಷ್ಟ್ರನಿಕರವಾರಣ ವಿದಾರಣ ಪಂಚವದನಾ 2 ಮಣಿಮಯರಥವೇರಿ ಫಣಿಕೇತನನನುಜನುನೆಣನು ದುರ್ಗುಣನು ಮಾರ್ಗಣಗಣದಿಂದಲಿರಣಾಂಗಣದಿ ನಿನ್ನ ಸೆಣಸಲಾಕ್ಷಣ ನೋಡಿತೃಣಮಾಡಿ ಗದೆಯಿಂದ ಹಣಿದು ಹಣೆಯ ಮೆಟ್ಟಿಪಣದಿ ನುಡಿದವರ ರಣವ ತಿದ್ದಿ ಅತ್ಯು-ಲ್ಬಣದಿಂದವಗೆ ಲಂಘಿಸಿ ವಕ್ಷದಿ ರಕ್ತಕೊಣನ ಶಸ್ತ್ರದಿ ನಿರ್ಮಿಸಿ ಕದಡಿಗೂಡಿರಣದೊಳೊಪ್ಪಿದ್ಯೊ ನಿನಗೆಣೆಯಿಲ್ಲವೆನಿಸಿ 3 ಮದ್ದಾನೆ ರೂಪ ಧರಿಸಿ ಮಾಯದಲಿ ಬಂದಾರುದ್ರಾನ ಯುದ್ಧದಿ ಗೆದ್ದುವೋಡಿಸಲಾಗಕೃದ್ಧನಾಗಿ ವ್ಯಾಘ್ರಸಿಂಹರೂಪದಿ ಬರೆಗುದ್ದಿ ಕೆಡಹಿ ವೇಗಕೆ ದಾರಿ ಕಟ್ಟಿದೆಯಿದ್ಧರೆಯೊಳು ನಿಮಗೆಣೆಯಾರು ಮಹಾಬಲಿಮದ್ರಾಧಿಪತಿಯ ಅಂಬರಕಟ್ಟಿ ರಾಜಸೂ-ಯಾಧ್ವರದಲಿ ಮಾಗಧನ ಸಂಹರಿಸಿದತಿಶುದ್ಧ ಸ್ವಭಾವ ಶೂರ ಸತತ ಸಾಧ್ಯಸಿದ್ಧೇಶನಿಲ ಕುಮಾರ ನಮಿಪೆಯೆನ್ನಉದ್ಧರಿಸುವುದಯ್ಯ ಶುದ್ಧ ಮನೋಹರ 4 ಸೂತ್ರ ಅಮಿತ ರೂಪ ಸದ್ಗುಣಗಣಧಾಮ ವೀರಪ್ರತಾಪ ಭಕುತಿ ಜ್ಞಾನಕಾಮಿತಾರ್ಥಗಳಿತ್ತು ಪೊರೆಯಯ್ಯ ಅಸುವ 5
--------------
ಗೋಪಾಲದಾಸರು
ಜಯಜಯತು ಶುಭಕಾಯ ಜಯಜಯತು ಹರಿಪ್ರೀಯಜಯತು ಜೀಯ ಮಧ್ವಾಖ್ಯಮುನಿರಾಯಪ. ರಾಮಾವತಾರದಲಿ ಹನುಮಂತನಾಗಿ ನೀತಾಮಸನ ಪುರವ ಅನಲಗಾಹುತಿಯನಿತ್ತೆಭೂಮಿಜೆಯ ಕುಶಲವನು ರಘುನಾಥಗರುಹಿದೆಸ್ವಾಮಿಕಾರ್ಯವ ವಹಿಸಿ ಖಳರ ನೀ ತರಿದೆ 1 ದ್ವಾಪರಾಂತ್ಯದಲಿ ಶ್ರೀಕೃಷ್ಣನಂಘ್ರಿಯ ಭಜಿಸಿಪಾಪಿಮಾಗಧ ಬಕ ಕೀಚಕಾದಿಗಳಕೋಪದಿಂದಲಿ ತರಿದು ಕುರುಕುಲವ ನೀನಳಿದೆ ಪ್ರ-ತಾಪದಿಂದಲಿ ಮೆರೆದೆ ಖಳರ ನೀ ಮುರಿದೆ 2 ಮಾಯಿಗಳು ಹೆಚ್ಚಿ ಮತವೆಲ್ಲ ಸಂಕರವಾಗಿತಾಯಿಗಳಿಲ್ಲದ ಶಿಶುಗಳಂತೆ ಸುಜನರಿರಲುನೀಯವತರಿಸಿ ಮತವೆಲ್ಲ ಉದ್ಧರಿಸಿ ನಾ-ರಾಯಣನೆ ಮೂಜಗಕೆ ಪರದೈವವೆಂದೊರೆದೆ 3 ದುರುಳ ವಾದಿಗಳಿಗುತ್ತರವ ಕೊಡಬೇಕೆನುತಸರುವ ಶಾಸ್ತ್ರಾಮೃತವ ಸೃಜಿಸಿ ವಾಕ್ಯಗಳ ಕ್ರೋಡಿಸಿದರುಶನ ಗ್ರಂಥಗಳ ರಚಿಸಿ ಶಿಷ್ಯರಿಗಿತ್ತೆಪರಮ ತತ್ವದ ಖಣಿಯೆ ಗುರುಶಿರೋಮಣಿಯೆ 4 ನಿನ್ನ ಮತವೇ ವೇದಶಾಸ್ತ್ರಗಳ ಸಮ್ಮತವುನಿನ್ನ ಮತವೇ ಇಹಪರಕೆ ಸಾಧನವುಪನ್ನಂಗಶಯನ ಶ್ರೀ ಹಯವದನದಾಸರೊಳುನಿನ್ನ ಪೋಲುವರುಂಟೆ ಮಧ್ವಮುನಿರಾಯ 5
--------------
ವಾದಿರಾಜ
ಜಯಜಯಾ ಶ್ರೀನಿವಾಸಾ ಜಗದೀಶಾ ವೆಂಕಟೇಶಾ ದಯದಿಂದಲಿ ಪಾಲಿಸೆನ್ನಾ ದೋರಿನಿಜ ಪ್ರಕಾಶಾ ಪ ಉರಗಾದ್ರಿಯಲ್ಲಿ ಬಂದು ಭೂವೈಕುಂಠಿದೇಯಂದು ಕರದಿಂದ ಮಹಿಮೆದೋರಿ ತಾರಿಸುವ ಜನದಿಂದು 1 ಧರ್ಮಾರ್ಥ ಕಾಮ್ಯ ಚತುರ್ವಿಧಮುಕ್ತಿಗಳು ಧರ್ಮವರಿತೆಸಾಧುರಿಗೆ ನೀಡುತಿಹೆ ದಯಾಳು 2 ಕುಲಧರ್ಮದಿಂದಲೆನೆಗೆ ಮಾನ್ಯತಾನಬಂದ್ಹಾಂಗೆ ವಲಮೆಯಿಂದ ಪರಗತಿಗೆ ಕುಡುಮಾನ್ಯತೆನವೀಗ 3 ಮಂದರೊಳು ಮಂದನಾನು ಜ್ಞಾನಭಕ್ತಿಯರಿಯೆನು ತಂದೆ ಮಹಿಪತಿಸ್ವಾಮಿ ಇಂದು ಉದ್ಧರಿಸುನೀನು 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯತೀರ್ಥ ಮುನಿವರ್ಯ ಪ ದಯತೋರಿ ಪೊರೆಯಯ್ಯ ವಿಜಯಸಾರಥಿಪ್ರಿಯ ಅ.ಪ ಶ್ರೀಶಶಯನಾವೇಶ ಮಹೇಶ ಪ್ರತಿಬಿಂಬ ಸು ರೇಶ ಯತಿಕುಲಾಧೀಶ ಪಾಲಿಸಯ್ಯ ಏಸು ನಿನ್ನಯ ಕರುಣರಾಶಿ ಎಂತಿಹುದಯ್ಯ ಆಸೆ ಸಲಿಸಲು ಮನೆಗೆ ಲೇಸಾಗಿ ನೀ ಬಂದೆ 1 ಪಶುಪತಿಯ ಮತ ದಹಿಸಿ ಅಸುಪತಿಯ ಮತ ಮೆರೆದೆ ವಸುಮತಿಯ ಸುರನಾಗಿ ಬಂದು ನಿಂದೆ ಪಶುಪ್ರಾಯನೆಂದೆನ್ನ ಉದ್ಧರಿಸಲೋಸುಗದಿ ಬಿಸಜತವಪಾದ ಪಾಂಸವನಿತ್ತೆ 2 ಜಯಗುರುವೆ ಶ್ರೀ ವಿಜಯದಾಸರಲ್ಲೆನ್ನ ಮನೋ ಜಯವು ಪುಟ್ಟಿಸಿದ ನಿನ್ನ ಕರುಣವೆಂತೊ ಸೃಜಿಸಿ ತೋರಿದ ಸ್ವಪ್ನ ನಿಜವು ಆಗಲಿ ಎಂದು ಬಿಜಯ ಮಾಡಿದೆ ನಿನ್ನ ನಿಜದಾಸರೊಡನೆ 3 ಜಯಗುರುವೆ ನಿಮ್ಮ ಹುದ್ಗುಹದಲಿ ನಲಿಯುತಿಹ ವಾಯುವಂತರ್ಗತ ಕೃಷ್ಣನ ತೋರೋ ಜಯತು ಶ್ರೀ ವೇಣುಗೋಪಾಲ ಮೂರ್ತೇ ಜಯತು ಶ್ರೀ ವೇಣುಗೋಪಾಲನೆಂದೆನಿಸಿಯ್ಯ 4 ಸೃಷ್ಟಿಗೆ ಬಂದು ನಾನೆಷ್ಟು ಜನ್ಮವ ಕಳೆದೆ ಪುಟ್ಟಿದೆನೋ ನಾನೀಗ ಈ ಜನ್ಮದಿ ಪುಟ್ಟಲಿಲ್ಲವೋ ಜ್ಞಾನ ಹರಿ ಗುರುಸ್ಮರಣೆಗೆ ಇಟ್ಟಕಡೆಗಣ್ಣÂನೋಳಿಷ್ಟು ನೋಡಯ್ಯ5 ವಾದಿಮಸ್ತಕ ಭೇದಿ ಮೋದತೀರ್ಥರ ತತ್ತ್ವ ಛೇದಿಸಿ ವಾಕ್ ಯುದ್ದ ಯೂಥಪಗಳನೆಲ್ಲ ಗೆದ್ದು ಸತ್ತತ್ತ್ವದಾ ಸಿಂಹನಾದವ ಮಾಡ್ದೆ 6 ಮಧ್ವರಾಯರಿಗೆ ನೀ ಮುದ್ದುಮೊಮ್ಮಗನಯ್ಯ ಸದ್ವಿದ್ವದ್ಗ್ರಂಥ ಭಾರವನೆ ವಹಿಸಿ ಮುದ್ದು ತೊತ್ತೆನಿಸಿ ಎತ್ತಾಗಿ ಸೇವಿಸಿ ಯತಿಯಾಗಿ ನಿಂದ ತತ್ತ್ವಮುತ್ತಿನ ಖಣಿಯೆ 7 ಇಳೆಯೊಳಗೆ ನಿನ್ನಂಥ ಕರುಣಾಳುಗಳ ಕಾಣೆ ಅಳವಲ್ಲ ವರ್ಣಿಸಲು ನಿನ್ನ ಗುಣಗಳನು ಮಳಖೇಡವಾಸ ಯತಿಕುಲಾಧೀಶಾ 8 ಗುರುವೆ ನಿನ್ನಯ ಕರುಣಕವಚ ತೊಟ್ಟವರ ಚರಣಕಮಲದೊಳಿಹ ಮಧುಪನೆಂದೆನಿಸೋ ನಿರುತ ದೃಢಭಕುತಿ ಶ್ರೀ ವೇಂಕಟೇಶನೊಳಿಟ್ಟುಪೊರೆಯೊ ಶ್ರೀ ಗುರುವರಾಗ್ರಣಿಯೆ ನಮೋ ಎಂಬೆ9
--------------
ಉರಗಾದ್ರಿವಾಸವಿಠಲದಾಸರು
ಜಯತೀರ್ಥರಾಯಾ ಗುರುವರ್ಯಾ ಮುಗಿವೆನು ಕೈಯ್ಯಾ ಪ ತೋಯಜಾಕ್ಷನಂಘ್ರಿ ಪ್ರೀಯ - ಜೀಯ ಮಳಬೇಡ ನಿಲಯ ಅ.ಪ ಮೋದ ತೀರ್ಥಗ್ರಂಥ ಕ್ಷೀರ ವಾರಿಧಿಯನ್ನು ಮಥಿಸಿ ಧೀರ ಸಾಧುಗಳಿಗೆ ಸುಧೆಯನೆರದೆ - ವಾದಿಗಳೆದಯ ಮುರಿದೇ 1 ಅದ್ವೈತಾರಣ್ಯದಹನ - ಮಧ್ವ ಪಂಥಸುಜನಸದನ ಪೊದ್ದಿದೆನೋ ನಿನ್ನ ಚರಣ - ಉದ್ಧರಿಸೋ ದೀನೋದ್ಧರಣ 2 ಅಕ್ಷಯಮಾಲಾ ದಂಡ ಧಾರೀ - ಭಿಕ್ಷುಶ್ರೇಷ್ಠನಧಿಕಾರಿ ಅಕ್ಷೋಭ್ಯ ಮುನಿಪ ತನಯ - ಲಕ್ಷ್ಮೀಕಾಂತ ಭಜಕ ಸದಯ 3
--------------
ಲಕ್ಷ್ಮೀನಾರಯಣರಾಯರು
ಜಯರಾಯ ಜಯರಾಯ ದಯವಾಗೆಮಗನುದಿನ ಸುಪ್ರೀಯಾ ಪ ಧರಣಿಯೊಳಗೆ ಅವತರಿಸಿ ದಯದಿ 1 ವಿದ್ವನ್ಮಂಡಲಿ ಸದ್ವಿನುತನೆ ಪಾ ದದ್ವಯಕೆರಗುವೆ ಉದ್ಧರಿಸೆನ್ನನು 2 ವಿದ್ಯಾರಣ್ಯನಾ ವಿದ್ಯಮತದ ಕು ಸಿದ್ಧಾಂತಗಳ ಅಪದ್ಧವೆನಿಸಿದೆ 3 ಅವಿದಿತನ ಸತ್ಕವಿಗಳ ಮಧ್ಯದಿ ಸುವಿವೇಕಿಯ ಮಾಡವನಿಯೊಳೆನ್ನನು 4 ಗರುಪೂರ್ಣಪ್ರಜ್ಞರ ಸನ್ಮತವನು ಉದ್ಧರಿಸಿ ಮೆರೆದೆ ಭುಸುರವರ ವರದಾ 5 ಸಭ್ಯರ ಮಧ್ಯದೊಳಭ್ಯಧಿಕ ವರಾ ಕ್ಷೋಭ್ಯ ಮುನಿಕರಾಬ್ಜಾಭ್ಯುದಿತ ಗುರು 6 ನಿನ್ನವರವ ನಾನನ್ಯಗನಲ್ಲ ಜ ಗನ್ನಾಥವಿಠಲನೆನ್ನೊಳಗಿರಿಸೋ 7
--------------
ಜಗನ್ನಾಥದಾಸರು