ಒಟ್ಟು 182 ಕಡೆಗಳಲ್ಲಿ , 48 ದಾಸರು , 170 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ತಿಳಿಯದವನೇಕೆ ಇನ್ನವನನು ಸುಡಬೇಕು ಪ ವೇದಾರ್ಥಿಯು ತಾನಾಗಿ ವಾದಿಸುತಿಹನೀ ಗೂಗೆಓದಿದ ಓದದು ವ್ಯರ್ಥ ಒಳ್ಳಿತಾಗಿ ಗಳಿಸಿದನರ್ಥ 1 ಆಚಾರದಿ ಒದ್ದಾಡಿ ಅಡವಿಯ ಹಿಡಿದನು ಖೋಡಿಕುಚಾಳಿಯೆ ವ್ಯವಹಾರ ಕುಮಂತ್ರಕೆ ಬಲು ಧೀರ 2 ಮಾನ್ಯರ ಕೋಪದಿ ಝಡಿವಾ ಅವಮಾನ್ಯರ ಕೊಂಡಾಡಿ ನುಡಿವಾಜ್ಞಾನದ ಹಾದಿಯ ಕಾಣ ಗೋಣಿಯ ಹೊರುವ ಕೋಣ3 ಮುಕ್ತಿಯ ತಿಳಿಯಲು ಬಾರ ಮುಂದಿನ ಭವಿತವ ನೋಡಭಕ್ತಿಯೆಂಬುದಿಲ್ಲ ಈ ಕತ್ತೆಗೇನು ಸಲ್ಲ 4 ಕಲ್ಲನೆ ದೇವರು ಎಂಬ ಕಡಮೆಯಲಿಲ್ಲವು ಎಂಬಒಳ್ಳಿತಲ್ಲವು ಅವನಿರವು ಒಲಿದವನೇ ಚಿದಾನಂದ ಗುರುವು 5
--------------
ಚಿದಾನಂದ ಅವಧೂತರು
ತುತಿಸಬಲ್ಲೆನೆ ನಾ ನಿನ್ನೆ ವೆಂಕಟರನ್ನ ಪ ಪತಿ ನಿನ್ನ ಬ್ರಹ್ಮ ಪಾ ರ್ವತಿ ಪತ್ಯಾದ್ಯಳವಡದುತುಳ ಮಹಿಮೆಗಳ ಅ.ಪ. ನಮಿಪ ಜನರ ಕಲ್ಪದ್ರುಮ ದುಷ್ಟದಾನವ ದಮನ ದಿವಿಜಕುಲೋತ್ತಮ ಲಕ್ಷ್ಮೀ ಪವನಾದಿ ಸುಮನಸಾರ್ಚಿತ ಪಾದಕಮಲ ಯುಗ್ಮನೆ ಅನು ಕಾಯ ಹೃ ತ್ತಿಮಿರ ಭಾಸ್ಕರ ಶ್ರೀ ಭೂರಮಣ ಸರ್ವಗ ಸದಾ ಗಮವೇದ್ಯ ವೇದವ್ಯಾಸ ಕಪಿಲ ದತ್ತ ಕುಮುದಾಪ್ತ ಕೋಟಿ ಭಾಸಾ ತದ್ಭಕ್ತರ ಸಮುದಾಯಕೀಯೋ ಲೇಸಾ ಆನತ ಬಂಧು ಸುಮುಖ ಸುಲಭನೆಂದಾ ನಮಿಪೆ ಎನ್ನರಸಾ 1 ಘನಮಹಿಮನೆ ವೃಂದಾವನವಾಸಿ ಸ್ವಪ್ರಯೋ ಜನವಿವರ್ಜಿತ ಗೋವರ್ಧನಧಾರಿ ಗೋ ಗೋಪೀ ಜನ ಮನೋರಂಜನ ಜನಕಜಾರಮಣ ಪೂ ತನಿ ಪ್ರಾಣಾಂತಕ ವೇದವಿನುತ ಶ್ರೀ ವತ್ಸಲಾಂ ಕೌಸ್ತುಭ ಮಣಿ ವೈಜಯಂತೀ ಸ ದ್ವನ ಮಾಲಾಂಚಿತ ಕಂಧರಾ ಸತ್ಕಲ್ಯಾಣ ಗುಣ ಜ್ಞಾನಾತ್ಮಕ ಶರೀರಾ ಸಂತತ ನಿಷ್ಕಿಂ ಚನ ಭಕ್ತಜನಮಂದಾರಾ ವಂದಿಸುವೆ ಮ ನ್ಮನದಲಿ ನಿಲಿಸೋ ಕರುಣಾ ಪಾರಾವಾರಾ 2 ಕವಿಭಿರೀಡಿತ ಪುಣ್ಯ ಶ್ರವಣ ಕೀರ್ತನ ಮತ್ಸ್ಯಾ ದ್ಯವತಾರಂತರ್ಯಾಮಿ ಪ್ರವಿವಿಕ್ತ ಭುಗ್ವಿಭು ಭುವನ ನಿಧಿಯ ಪೆತ್ತ ಸವನ ತ್ರಯಾಹ್ವಯ ಶಿವರೂಪಿ ಶಿವದ ಭೂರ್ಭೂವಸ್ವಸ್ಥ ಸ್ವಶ ಭಾ ರ್ಗವ ನಿನ್ನೊಳಿಪ್ಪ ದಾನವನ ಸಂಹರಿಸುವ ನೆವದಿಂದ ದಾಶರಥೀ ಸಂಗಡ ಯುದ್ಧ ತವಕದಿ ಮಾಡಿ ಭೀತಿ ಬಟ್ಟವನಂತೆ ಅವನಿಗೆ ತೋರ್ದ ರೀತಿ ವರ್ಣಿಸಲಿನ್ನು ಪವನಮುಖಾದ್ಯರಿಗವಶ ನಿನ್ನಯ ಖ್ಯಾತಿ3 ಗತಶೋಕ ಗಾಯಿತ್ರಿ ಪ್ರತಿಪಾದ್ಯ ತತ್ವಾಧಿ ಪತಿಗಳೆನಿಸುವ ದೇವತೆಗಳೊಳಗಿದ್ದು ಮಾ ರುತನಿಂದ ಒಡಗೂಡಿ ಪ್ರತಿದೇಹಗಳಲಿ ಯೋ ಗ್ಯತೆಯನರಿತು ಕರ್ಮಗತಿಗಳನೀವೆ ಸಾಂ ಪ್ರತ ಬೇಡಿಕೊಂಬೆ ಆನತರ ಸಂತೈಸೆಂದು ಪ್ರಥಮಾಂಗ ಪ್ರಿಯ ಸತ್ತಮ ಸೌಭಾಗ್ಯ ಸಂ ಭೃತಸಾರ ಸರ್ವೋತ್ತಮ ನೀನೆ ಪಾಂಡು ಸುತರಾದ ಧರ್ಮ ಭೀಮಾ ಪಾರ್ಥರ ಕಾಯ್ದೆ ಪ್ರತಿಗಾಣೆ ನಿನಗೆ ಸಂತತ ಪರಂಧಾಮಾ 4 ಕಲಿ ಮುಖ್ಯ ದೈತ್ಯ ಗಂಟಲಗಾಣ ಗುರುತಮ ಬಲಿಬಂಧಮೋಚಕ ಸುಲಭ ಚೆತ್ಸುಖದಾಯಿ ಫಲ ಚತುಷ್ಟಯನಾಮ ಫಲಸಾರ ಭೋಕ್ತø ಶಂ ಬಲನಾಗಿ ಭಕತರ ಸಲಹುವ ಕರುಣಿ ಶಂ ಫಲಿಪುರವಾಸಿ ಬಾಂಬೊಳೆಯ ಜನಕ ಲಕ್ಷ್ಮೀ ನಿಲಯ ನಿರ್ಗತ ದುರಿತಾ ಮನ್ಮನದ ಚಂ ಚಲವ ಬಿಡಿಸೋ ನಿರುತಾ ಬೇಡಿಕೊಂಬೆ ತಲೆ ಬಾಗಿ ಸರ್ವಗತಾ ನೀನಹುದೆಂದು ತಿಳಿಸೋ ತೀವ್ರದಿ ಮುಪ್ಪೊಳಲುರಿಗನ ತಾತಾ 5 ಉದಿತ ಭಾಸ್ಕರನಂತೆ ಸುದತೇರಿಂದೊಡಗೂಡಿ ಉದರ ನಾಮಕ ನೀನು ಉದರದೊಳಿದ್ದೆನ್ನ ಉದಕಗಳಿಗೆ ನಿತ್ಯಾಸ್ಪದನಾಗಿ ಜೀವರ ಹೃದಯದೊಳಿರುತಿಪ್ಪೆ ಸದಸದ್ವಿಲಕ್ಷಣಾ ವಿಧಿಭವ ಶಕ್ರಾದಿ ತ್ರ್ರಿದಶರೊಂದಿತ ಪಾದ ಬದಿಗನಾಗಿರಲು ಪಾಪ ಕರ್ಮಗಳು ಬಂ ದೊದಗುವುವೇನೋ ಶ್ರೀ ಪಾ ಬಿನ್ನೈಸುವೆ ಬುಧ ಜನರಂತಸ್ತಾಪಾ ಕಳೆದು ನಿತ್ಯ ಬೆದರದಂದದಲಿ ಮಾಳ್ಪುದು ದೋಷ ನಿರ್ಲೇಪಾ 6 ಪಣಿಗಣ್ಣ ಸ್ವರದಿಂದಾಗ್ರಣಿಯಾದ ದುಷ್ಟ ರಾ ವಣನ ಬಾಹುಬಲ ಗಣಿಸಿದೆ ನಿಶಿತ ಮಾ ರ್ಗಣದಿ ಸದೆದು ವಿಭೀಷಣಗೆ ನೀ ಲಂಕಾಪ ಟ್ಟಣ ಭೋಗ ತತ್ಕಾಲ ಉಣಲಿತ್ತು ಭಕ್ತಗೆ ಪ್ರಣತ ಕಾಮದನೆಂಬೋ ಗುಣ ನಿನ್ನಲ್ಲಿದ್ದ ಕಾ ರÀಣದಿ ಪ್ರಾರ್ಥಿಸುವೆ ನಿನ್ನಾ ದಾಸರೊಳು ಗಣಿಸು ನೀ ದಯದಿ ಎನ್ನಾ ತಪ್ಪುಗಳ ನೀ ನೆಣಿಸಲಾಗದು ಪ್ರಸಾನ್ನಾ ಪಾಲಕನೆ ಕುಂ ಭಿಣಿಸುರರನು ಕಾಯೊ ಕ್ಷಣಾ ಲಕ್ಷ್ಮನಣ್ಣಾ 7 ಬಿಸಜ ಸಂಭವನ ನಿರ್ಮಿಸಿ ನಾಭಿಕಮಲದಿ ಸಶರೀರದೊಳು ಸುಮನಸರ ಪಡೆದು ನಿನ್ನಾ ಪೆಸರಿಟ್ಟು ಅವರವರೊಶನಾದೋಪಾದಿ ತೋ ರಿಸಿದಿ ನೀ ಸ್ವಾತಂತ್ಯ ಅಸಮನೆಸಿಕೊಂಡು ಬಸಿರೊಳಗಿಟ್ಟು ಪೊಂಬಸರಾದಿ ಸುರರ ಪಾ ಲಿಸುವಿ ನೀ ಪ್ರತಿ ಕಲ್ಪದಿ ನರಕ ಸ್ವರ್ಗ ವಸುಮತಿ ಯಮ ಲೋಕದಿ ನರಕ ಸ್ವರ್ಗ ವಸುಮತಿ ಯಮ ಲೋಕದಿ ವಾಸಿಸುತ ರ ಕ್ಕಸರನಂಧಂತಮದಿ ದಣಿಸುತಿಪ್ಪ ಪ್ರಸವಿತ್ತ ನಾಮ ವಂದಿಸುವೆ ಪ್ರಮೋದೀ 8 ಆಪದ್ಭಾಂಧವ ಬಹುರೂಪಾ ರುಕ್ಮಿಣೀಶಾ ತಾಪಸ ಜನರ ಹೃತ್ತಾಪದರ ಧರ್ಮ ಸುಜನ ಲೋ ಕೋಪಕಾರಕ ಧರ್ಮ ವ್ಯೂಪ ಊಧ್ರ್ವಗ ನಿರ್ಗು ಣೋಪಾಸಕರ ಸಲಹಲೋಸುಗದಿ ಸ ಲ್ಲಾಪದಿ ಬಹ ಕಲಹಾ ಮನ್ನಿಸೋ ಭವಾ ಕೂಪಾರ ನಾವಿಕ ಭೂಪತಿ ವರಹಾ 9 ಕೂರ್ಮ ಕ್ರೋಡ ವಪುಷ ಹಿರಣ್ಯಕ ಶಿಪುವಿನ ಸೀಳ್ದ ಕಾಶ್ಯಪಿಯಾಚಿಕನೆ ದುಷ್ಟ ನೃಪರ ಸಂಹರಿಸಿದ ಕಪಿವರ ಪೂಜಿತ ದ್ರುಪದಾತ್ಮಜೆಯ ಕಾಯ್ದ ತ್ರಿಪುರಾರಿ ಕಲಿಮುಖ್ಯ ರುಪಟಳ ಬಿಡಿಸಿದ ಕೃಪಣವತ್ಸಲ ಕಲ್ಕಿ ಅಮಿತ ರೂಪಾತ್ಮಕ ಸುಫಲ ಚಿತ್ಸುಖ ಭರಿತಾ ತ್ರೈ ಲೋಕಕ್ಕೆ ಪ್ರಪಿತಾಮಹನೆ ನಿರುತಾ ಪ್ರಾರ್ಥಿಸುವೆ ನಿ ನ್ನಪರೋಕ್ಷವಿತ್ತು ಪಾಲಿಪುದೆಮ್ಮ ಸ್ವರತಾ 10 ವಟಪತ್ರಶಯನ ವೆಂಕಟಗಿರಿ ನಿಲಯ ನಿ ಷ್ಕುಟಿಲ ದುರ್ವಿಷಯ ಲಂಪಟವ ಸದೆದು ನಿನ್ನ ಭಟಜನರಿಗೆ ಧರ್ಮ ಘಟಕನಾಗುವೆ ನಿತ್ಯ ವಟುರೂಪಿ ಎಡಪಾದಂಗುಟದಿ ಅಬ್ಬಜಾಂಡ ಕಟಾಹ ಭೇದಿಸಿ ದೇವ ತಟನೀಯ ಪಡಿಯೋ ಧೂ ರ್ಜಟಿ ತಲೆಯೊಳು ಧರಿಸಿ ನಿನ್ನ ನಾಮ ಪರಿಸುತ್ತ ಸತಿಗೆರಸಿ ಕುಣಿದನೆಂದು ತ್ಕಟದಿ ಕೈಗಳ ಬಾರಿಸಿ ಜಗನ್ನಾಥ ವಿಠಲ ಸರ್ವೋತ್ತಮ ದಿಟನೆಂದುದ್ಫಟಸೀ11
--------------
ಜಗನ್ನಾಥದಾಸರು
ದಾವನು ಗುರುಸಹವಾಸಿ ಅವನಿದ್ದದ್ದೇ ಸ್ಥಳ ಕಾಶಿ ಧ್ರುವ ಕೂಡಿದವರ ತ್ರಿತಾಪಭಂಗಾ ರೂಢಿಗೆ ಮೆರೆವಳು ಙÁ್ಞನಗಂಗಾ ಮೂಡಿಹ ಆತ್ಮಜ್ಯೋತಿ ಲಿಂಗಾ ಕಂಡಿಹ ಗುಣರಾಸೀ 1 ವಿವರಿಸಿ ತಾರಕಮಂತ್ರದ ನೆಲಿಯಾ ಕಿವಿಯೊಳು ಹೇಳಲು ಗುರುರಾಯಾ ಭವ ಭಯಾ ಸ್ವಾನಂದವ ಬೆರೆಸೀ2 ಜನದಲಿ ನಾನಾ ಸಾಧನ ಜರಿದು ಮನದಲಿ ಒಂದೇ ನಿಷ್ಠಿಯ ಹಿಡಿದು ಅನುಮಾನದ ಸಿದ್ಧಾಂತಗಳದು ಸದ್ಭಾವನೆ ಒಲಿಸೀ 3 ಪ್ರೇಮಿಯ ನಿಜಸುಖ ಪ್ರೇಮಿಕ ಬಲ್ಲಾ ಈ ಮನುಜರಿಗಿದು ಭೇದಿಸುದಲ್ಲಾ ಶ್ರೀ ಮಹಿಪತಿ ಬೋಧಿಸಿದನು ಸೊಲ್ಲಾಪೂರಿಸಿ ಮನದಾಸಿ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾಸಗುರೂ | ದಾಸಗುರೂ | ವಾಸವ ನಾಮಕ ಪ ಭೂಸುರರಿಗೆ ಧನರಾಶಿ ಸಮರ್ಪಿಸಿ ವ್ಯಾಸರಾಯರುಪದೇಶಗೊಂಡ ಹರಿ ಅ.ಪ ಜಲಜಭವನ ಪಿತನಾಜ್ಞೆಯಲಿ ಕಲಯುಗದಲಿ ಜನ್ಮ ತಾಳುತಲಿ ಅಲವ ಬೋಧಾಮೃತ ನೆಲೆಯನು ಸುಲಭದಿ ತಿಳಿಗನ್ನಡದಲ್ಲಿ ತಿಳಿಸಿ ಸಲುಹಿದ 1 ಪವನದೇವನ ಒಲಿಸುತಲಿ | ಮಾ ಧವನ ಸ್ತುತಿಸಿ ಸಲೆ ಕುಣಿಯುತಲಿ ಕವನದಿ ಭಕುತಿಯ ನವವಿಧ ಮಾರ್ಗವ ಅವನಿಗೆ ಬೀರಿದ ದಿವಜ ಮೌನಿವರ 2 ಕಾಮಿತ ಫಲಗಳ ಗರಿಯುತಲಿ ಬಲು ಪಾಮರ ಜನರನು ಸಲಹುತಲಿ ಶ್ರೀಮನೋವಲ್ಲಭ ಶಾಮುಂದರ ನಾಮಾಮೃತವನು ಪ್ರೇಮದಿಂದುಣಿದ 3
--------------
ಶಾಮಸುಂದರ ವಿಠಲ
ದಾಸನಾದವನಿಗೆ ಭವಭೀತಿಯುಂಟೆ ಆಸೆಬಿಟ್ಟವನಿಗೆ ಘಾಸಿಯಿನ್ನುಂಟೆ ಪ ವನಿತೆಯರಾಸ್ಯಳಿದವಗೆ ಮನಸಿಜನರ ಭೀತಿಯೆ ಮಣ್ಣಿನಾಸೆ ಪೋದವಗೆ ಅವನಿಪರ ಭಯವೆ ಧನದಾಸೆ ಪೋದವಗೆ ಬಿನುಗುಜನರಂಜಿಕೆಯೆ ತನುಮೋಹ ಬಿಟ್ಟವಗೆ ಮರಣದ ಭಯವೆ 1 ನಿಂದೆಯನು ಬಿಟ್ಟವಗೆ ಬಂಧಸೋಂಕುವ ಭಯವೆ ಸಂದೇಹವಳಿದವಗೆ ಕರ್ಮಗಳ ಭಯವೆ ಮಂದಿಗೋಷ್ಠಿಯಿಲ್ಲದವಗೆ ಅಪವಾದ ಭೀತಿಯೆ ಸಿಂಧುಶಯನನರ್ಚಕಗೆ ಕಾಲನ ಭಯವೆ 2 ಪರಮ ಧಾರ್ಮಿಕನಿಗೆ ಬಡತನದ ಭೀತಿಯೆ ಪರವ ಸಾಧಿಪನಿಗೆ ಕಷ್ಟಗಳ ಭಯವೆ ಅರಿವಿಟ್ಟು ನಡೆವವಗೆ ದುರಿತದ ಭಯವಿಹುದೆ ಶರಣರೊಳಾಡುವಗೆ ನರಕಂದಜಿಕೆಯೆ 3 ತತ್ವದರ್ಥಿಕನಿಗೆ ಮಿಥ್ಯಶಾಸ್ತ್ರದ ಭಯವೆ ನಿತ್ಯನಿರ್ಮಲನಿಗೆ ಮಡಿ ಮುಟ್ಟು ಭಯವೆ ಸತ್ಯಸನ್ಮಾರ್ಗಿಕಗೆ ಮತ್ರ್ಯದವರಂಜಿಕೆಯೆ ಸತ್ಯರೊಳಾಡುವಗೆ ಮೃತ್ಯುವಿನ ಭಯವೆ 4 ಕೊಟ್ಟು ಹುಟ್ಟಿದವಗೆ ಹೊಟ್ಟೆ ಬಟ್ಟೆಯ ಭಯವೆ ಇಟ್ಟು ಹಂಗಿಸದವಗೆ ಹೊಟ್ಟೆ ಬೇನೆ ಭಯವೆ ಸೃಷ್ಟಿಯೊಳಗೆ ನಮ್ಮ ದಿಟ್ಟ ಶ್ರೀರಾಮನಡಿ ಮುಟ್ಟಿ ಭಜಿಪಗೆ ಮತ್ತೆ ಹುಟ್ಟುವ ಭಯವೆ 5
--------------
ರಾಮದಾಸರು
ದುರಿತ ವಿನಾಶನಾ ದುರಿತ ಇಂದು ಪುರಂದರನ ಪೊಂದುತಲಿ ಅತಿ ಭಕುತಿಯಿಂದ ಸ್ಮರಿಸುವ ಜನರ ಉದ್ಧಾರ ಸಂದೇಹ ಸಲ್ಲದಿದಕೆ ಪ ದ್ವಾರಕಾಪುರದಲ್ಲಿ ಶ್ರೀರಮಣ ಸಭೆಯೊಳಗೆ ಚಾರು ಮಂಡಿತನಾಗಿ ಇರುತಿರಲು ಯದು ಪರಿ ವಾಲಗ ಗೋಪಿಕಾ ನಾರಿಯರ ಖ್ಯಾಲದಲ್ಲಿ ವಾರ ಕಾಂತೆಯರು ಮದವೇರಿ ನೃತ್ಯವ ಮಾಡೆ ಭೋರೆಂಬ ವಾದ್ಯವಿಳೆಯೊಳು ಮೊಳಗೆ ದೇವತತಿ ನಾರದನು ಧರೆಗಿಳಿದನು 1 ಬರುತಲೇ ವೈಕುಂಠಪುರದರಸಗೆರಗಿದನು ಕರಗಳನು ಮುಗಿದು ಕಿನ್ನರಿಯನ್ನು ತಾ ಧರಿಸಿ ಮೂವತ್ತೆರಡು ರಾಗಗಳಲಿದಿರುನಿಂದು ಎರಡು ಕಂಗಳಧಾರೆ ಸುರಿಯೆ ಪುಳುಕೋತ್ಸಹದಿ ಕೊರುಳುಟ್ಟಿ ತೊದಲುನುಡಿ ಮೈಸ್ಮರಣೆ ಹಾರೆ ಶ್ರೀ ಸುರರು ಶಿರವನೆ ತೂಗಲು2 ಅಚ್ಚುತನು ಪರಮ ಭಾಗವತನ್ನ ಭಕುತಿಗೆ ಮೆಚ್ಚಿದನು ಬೇಡುವುದು ವರವಧಿಕವೆಂದೆನಲು ಗೀರ್ವಾಣಮುನಿ ಎಚ್ಚರಿಕೆಯನು ಪೇಳುತ ಅಚ್ಚಗನ್ನಿಕೆ ರಮಣ ದೀನನನು ಮನ್ನಿಪುದು ನಿಚ್ಚಟೆನ್ನಯ ಕೂಡೆ ಬಿಡದೆ ಆಡೆನಲು ಕಲಿ- ಕೀರ್ತಿಗಳು ಬಿಚ್ಚಿ ತೋರಿಸುವೆನೆಂದ 3 ವರ ಪಡೆದು ನಾರದನು ಇರುತಿರಲು ತಾವಿತ್ತ ಬರಲು ಕಲಿ ದೊರೆತನವು ಕೆಲವು ಕಾಲಾಂತರಕೆ ಪುರಂದರವೆಂಬ ನಗರಿಯಲ್ಲಿ ಚರಿಸಿದರು ಕೆಲವು ದಿನ ಸಂಸಾರ ವೃತ್ತಿಯಲಿ ಜರಿದು ವೈರಾಗ್ಯವನು ತೊಟ್ಟು ದೃಢಮನಸಿನಲಿ ಕಿಷ್ಕಿಂಧಗಿರಿ-ತುಂಗ ಪಂಪದಲ್ಲಿ 4 ಅಂದು ಭಕುತಗೆ ಇತ್ತ ಭಾಷೆ ತಪ್ಪಲಿಬಾರ- ದೆಂದು ಇಂದಿರೆಪತಿಯು ದಯದಿಂದ ವಲಿದವರ ಕುಣಿಕುಣಿದು ನಂದವನೆ ತೋರಿಕೊಳು ಮಂದಭಾಗ್ಯರಿಗೆ ಈ ಪರಿಯ ಸೊಬಗುಂಟೆ ನಾ ಪರ ಬೊಮ್ಮ ಬಂದು ಸಿಲುಕಿದನೆಂಬುವುದೆ ಇದಕೆ ಪ್ರಾಮಾಣ್ಯವೆಂದು ತಿಳಿದು ಸುಜನರು 5 ವಾಸವನೆ ಮಾಡಿದರು ಪ್ರಹ್ಲಾದನವತಾರ ವ್ಯಾಸರಾಯರ ಬಳಿಯ ಮುದ್ರೆ ಗುರುಮಂತ್ರ ಉಪ ಪುರಂದರ ದಾಸರೆಂಬುವ ಪೆಸರಲಿ ದೇಶಗಳ ತಿರುಗಿ ಪುಣ್ಯಕ್ಷೇತ್ರಗಳ ಮೆಟ್ಟಿ ಲೇಸಾಗಿ ಅಲ್ಲಲ್ಲಿ ಮಹಿಮೆಗಳ ಪೇಳುತ ದು ವಸಿಸಿದರು ಧರ್ಮಬಿಡದೆ 6 ಉಪಾದಾನವ ಬೇಡಿ ವಿಪ್ರರಿಗೆ ಮೃಷ್ಟಾನ್ನ ಅಪರಿಮಿತವಾಗಿ ಉಣಿಸುತ್ತಿರಲು ಅವರಲ್ಲಿ ತಟಿನಿಗಳು ತಪಸು ಫಲವಾಯಿತೆಂದು ತಪನ ಕಾಲದಲೆದ್ದು ದಾಸರಾ ಸದನದಲಿ ಜಪಿಸಿ ತಮ ತಮ ತಕ್ಕ ತಾರತಮ್ಯಗಳಿಂದ ಸುಪಥವನು ಇಚ್ಛಿಸುವರು 7 ಅವರೆಂದ ವಚನಗಳೆÀಲ್ಲ ವೇದಾರ್ಥವಾಗಿ ಅವನಿಯೊಳು ತುಂಬಿದುವು ಬಂದರೇ ಗ್ರಹಿಸಿದರ ಭುವನ ನಿಧಿಯೊಳಗೆ ಮುಳುಗಿ ಪವನ ಮತವಿಡಿದು ಪರಿಪೂರ್ಣಮಾಚಾರದಲಿ ತವಕದಿಂದಲಿ ಹರಿಯ ಪಾದವನೆ ಪಡಕೊಂಡು ನವರೂಪಿನಲಿ ಇಪ್ಪರು 8 ಏನು ಇದು ಎಂತೆಂದು ದೂಷಿಸದಿರಿ ದಾಸರ ಸೂನು ಪೇಳಿದನು ಗುರು ವ್ಯಾಸಮುನಿ ರಾಯರಿಗೆ ಪುರಂದರ ದಾಸರೆಂಬಂಥ ಸೂನೃತದ ಸಿದ್ಧಾಂತದ ಧ್ಯಾನದಲಿ ತಿಳಿದು ಸುಜ್ಞಾನಿಗಳ ವದನಖದ ರೇಣಿನವನಾಗಿ ಬಿನ್ನೈಸಿದನು ಜ್ಞಾನಮಯ ಕಾಣುವಾ ಜನ ಲಾಲಿಸೆ 9
--------------
ವಿಜಯದಾಸ
ದೇವ ಫಣಿಭೂಷಣನೆ ಬಾ ಸಕಲ ಜನ ಜೀವಚೈತನ್ಯ ಬಾರೈ ದೇವತೆಗಳುಯ್ಯಲೆಯನು ಭಯಭಕ್ತಿ ಭಾವದಿಂ ತೂಗತಿಹರು ಪ ಅವನಿಯೊಳಗಯನವೆರಡು ಸರಪಣಿಗೆ ಭುವನವೇಳರ ಪೀಠವು ಶಿವನೆ ತೊಡಿಸಿರಲು ಮೇಲೆ ಕುಣಿಕೆ ತಾ ಧ್ರುವನ ಕೈಲಿಹುದುಯ್ಯಲೆ 1 ಧರಣಿಯಿದು ಮೇಲುಮಣೆಯು ಗಗನದಿ ಸ್ಫುರಿಸುತಿಹ ಶಶಿಸೂರ್ಯರು ದೀಪವಾ ಗಿರಲೊಪ್ಪುತಿಹದುಯ್ಯಲೆ 2 ಇಂದ್ರಾದಿ ದಿಕ್ಪಾಲಕರು ಮಿಕ್ಕಾದ ಗಂಧರ್ವ ಸುರ ಸಿದ್ಧರು ವಂದಿಸುತ ಸ್ತುತಿಗೈಯುತ ಸಂದಣಿಸಿ ಮುಂದೆ ನಿಂದಿಹರು ಮುದದಿ 3 ಕುಸುಮಮಾಲೆಗಳಾಗಿವೆ ನಕ್ಷತ್ರ ವೆಸೆದು ಗಗನದಲೊಪ್ಪುತ ಅಸಮತೇಜೋರಾಶಿಯೆ ಮದನಹರ ನಸುನಗುತ ಬಂದು ನೆಲೆಸು 4 ಮಂಗಳ ಮಹಾಮಹಿಮನೆ ಶಿವಗಂಗೆ ಗಂಗಾಧರೇಶ ನೀನೆ ಲಿಂಗವೆಂದೆನಿಸುತಿಲ್ಲಿ ತಿರುಪತಿಯ ರಂಗ ವೆಂಕಟನೆನಿಸುವೆ 5
--------------
ತಿಮ್ಮಪ್ಪದಾಸರು
ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ ಪ ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡು ಸೋಮನ ಕೊಂದಾನ್ಮ್ಯಾಗುಂಗಾಡು ಸೋಮನ ಕೊಂದು ವೇದವನುಬಂಗಾರದೊಡಲನಿಗಿತ್ತಾನ್ಮ್ಯಾ1 ದೊಡ್ಡ ಮಡುವಿನೊಳಗೆ ನಮ ರಂಗಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾಗುಡ್ಡವ ಹೊತ್ಕೊಂಡು ನಿಂತು ಸುರರನುದೊಡ್ಡವರನ್ನ ಮಾಡ್ಯಾನ್ಮ್ಯಾ 2 ಚೆನ್ನ ಕಾಡಿನ ಹಂದಿಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಮ್ಯಾಚಿನ್ನದ ಕಣ್ಣನ ಕೊಂದು ಭೂಮಿಯವನಜಸಂಭವಗಿತ್ತಾನ್ಮ್ಯಾ 3 ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಮ್ಯಾಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ4 ಹುಡುಗ ಹಾರುವನಾಗಿ ನಮ ರಂಗಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ 5 ತಾಯ ಮಾತನು ಕೇಳಿ ಸಾಸಿರ ತೋಳಿನಆವಿನ ಕಳ್ಳನ ಕೊಂದಾನ್ಮ್ಯಾಆವಿನ ಕಳ್ಳನ ಕೊಂದು ಭೂಮಿಯಅವನಿಸುರರಿಗೆ ಇತ್ತಾನ್ಮ್ಯಾ 6 ಪಿಂಗಳ ಕಣ್ಣಿನ ಕೊಂಗಗಳ ಕೂಡಿಛಂಗನೆ ಲಂಕೆಗೆ ಪೋದಾನ್ಮ್ಯಾಛಂಗನೆ ಲಂಕೆಗೆ ಪೋಗಿ ನಮ ರಂಗಹೆಂಗಸುಗಳ್ಳನ ಕೊಂದಾನ್ಮ್ಯಾ7 ಕರಿಯ ಹೊಳೆಯ ಬಳಿ ತುರುಗಳ ಕಾಯುತಉರಗನ ಮಡುವ ಧುಮುಕ್ಯಾನ್ಮ್ಯಾಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗವರವ ನಾರೇರ್ಗೆ ಕೊಟ್ಟಾನ್ಮ್ಯಾ 8 ಭಂಡನಂದದಿ ಕುಂಡೆಯ ಬಿಟುಗೊಂಡುಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ 9 ಚೆಲುವ ಹೆಂಡತಿಯ ಕುದುರೆಯ ಮಾಡಿಒಳ್ಳೆ ರಾಹುತನಾದಾನ್ಮ್ಯಾಒಳ್ಳೆ ರಾಹುತನಾಗಿ ಮ್ಲೇಚ್ಛರಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ 10 ಡೊಳ್ಳಿನ ಮ್ಯಾಲ್ ಕೈ ಭರಮಪ್ಪ ಹಾಕ್ಯಾನುತಾಳವ ಶಿವನಪ್ಪ ತಟ್ಟಾನ್ಮ್ಯಾಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನುಚೆಲುವ ಕನಕಪ್ಪ ಕುಣಿದಾನ್ಮ್ಯಾ11
--------------
ಕನಕದಾಸ
ಧನವಂತನಾದವನೆ ಘನವಂತ ಜಗದಿ ಧನವಂತನಾಗದವ ಹೆಣಕೆ ಕಡೆ ಇಹ್ಯದಿ ಪ ಧನಿಕನ ಮನೆಮುಂದೆ ದಿನಕರನ ಪ್ರಭೆಯಂತೆ ಜನಸಮೂಹ ನೆರೆಯುತಿಹ್ಯದನುದಿನವು ಬಿಡದೆ ಮಣಿದು ಅವನಿಗೆ ತಮ್ಮ ಮನೆಯ ಪರಿವ್ಯಿಲ್ಲದೇ ಮನ್ನಿಪರು ಅವನೊಚನ ಘನಭಕುತಿಲಿಂದ 1 ಸಿರಿಯಿಲ್ಲದವ ಬಂದು ಶರಣೆಂದು ಕರಮುಗಿಯೆ ಗರುವದಿಂ ಕೂಡ್ರುವರು ಶಿರವೆತ್ತಿ ನೋಡದೆ ತಿರುಕುದೆ ಇವನು ಹೆರಕೊಂಡು ತಿನಲಿಕ್ಕೆ ತಿರುಗುವನು ಎಂದೆನುತ ತಿರಿಸುವರು ಹೀನ 2 ಬಂಧುಬಳಗವುಯೆಂದು ಬಂದು ಕರೆಯಲವನ ಮುಂದೆ ನುಡಿಯುವರು ನಿನ್ನ ಮಂದಿರಕೆ ಬಂದು ಚಂದದಿಂದುಂಡೇವೇನೆಂದು ಜರೆವರು ಮನಕೆ ಬಂದ ತೆರದವನ ಮನನೊಂದಳಲುವಂತೆ 3 ಹತ್ತಿರದವರಾರು ಹತ್ತಿರಕೆ ಬಾರರು ಸತ್ತ್ಹೆಣನ ಕಂಡಂತೆ ಮತ್ತಿವನ ಕಂಡು ಅತ್ತಿತ್ತ ಪೋಗುವರು ಸುತ್ತಿ ಪಥಸೇರುವರು ಆರ್ಥಿಲ್ಲದವನಿರವು ವ್ಯರ್ಥ ಮತ್ರ್ಯದೊಳು 4 ಹರಿದ್ಹೋಗ ಸಿರಿಯೆಂದು ಅರಿಯದೆ ಗರುವದಿ ಚರಿಸುವ ಅಧಮಜನರಿರವೇನು ಜಗದಿ ಗರುವಿಕರ ಸಿರಿಗಿಂತ ಶರಣರ ಬಡತನವೇ ಪಿರಿದೆಲೋ ಶ್ರೀರಾಮ ಅರಿದು ನಾನು ಬೇಡ್ವೆ 5
--------------
ರಾಮದಾಸರು
ಧರೆಯೊಳಗೆ ವ್ಯಾಸಮುನಿವರನ ಸಂಸ್ಥಾನಕಿ ನ್ನೆರಡನೆಯದಾವುದುಂಟು ಪ. ಪರಿಪರಿಯಲಿ ನೋಡೆ ಪರಮ ವೈಭವದಿಂದ ಧರಣಿಯೊಳು ಮೆರೆಯುತಿಹುದು ಇಹುದುಅ.ಪ. ಹಂಸನಾಮಕನಿಂದ ಹರಿದು ಬಂದಂಥ ಯತಿ ಸಂಸ್ಥಾನ ಸುರನದಿಯೊ ಕಂಸಾರಿಪ್ರಿಯ ಶ್ರೀ ಮಧ್ವಮುನಿ ಮತ ಸಾರ ಹಂಸಗಳು ಸುರಿಯುತಿರಲು ಸಂಶಯವ ಪರಿಹರಿಸಿ ಸದ್ಗ್ರಂಥಗಳ ಸ- ದ್ವಂಶರಿಗೆ ಸಾರುತಿರಲು ಅಂಶ ಹರಿಪರ್ಯಂಕ ಸಹಿತ ಬಾಹ್ಲೀಕ ಯತಿ ವಂಶದಲಿ ಉದಿಸಿ ಬರಲು ಬರಲು 1 ಬನ್ನೂರು ಸ್ಥಳದಲ್ಲಿ ಜನ್ಮವೆತ್ತುತಲಿ ಬ್ರ ಹ್ಮಣ್ಯರಾ ಕರದಿ ಬೆಳೆದು ಚಿಣ್ಣತನದಲಿ ಮೌಂಜಿಧರಿಸಿ ಕಿತ್ತೊಗೆಯುತಲಿ ಧನ್ಯಯತಿಯಾಗಿ ಮೆರೆದು ಘನ್ನ ಶ್ರೀಪಾದರಾಯರಲಿ ಸದ್ಗ್ರಂಥಗಳ ಚನ್ನಾಗಿ ಮನನಗೈದು ಸಣ್ಣ ಪೆಟ್ಟಿಗೆಯೊಳಡಗಿದ್ದ ಶ್ರೀ ಕೃಷ್ಣನ ತನ್ನ ಭಕ್ತಿಯೊಳ್ ಕುಣಿಸಿ ನಲಿದು 2 ಪಡೆದು ಪರಿಪರಿಯ ಮಹಿಮೆಗಳ ತೋರುತಲಿ ದುರ್ವಾದಿ ದುರುಳ ಮತಗಳನೆ ಮುರಿದು ಮರುತ ಮತ ಶೀತಾಂಶುಕಿರಣ ಚಂದ್ರಿಕೆಯನ್ನು ಹರಹಿ ಪ್ರಕಾಶಗೈದು ಸರ್ವ ಸಜ್ಜನರ ಮನದಂದಕಾರವ ಕಳೆದು ಸಿರಿವರನ ಪ್ರೀತಿ ಪಡೆದು ತಿರುವೆಂಗಳೇಶನ ಪರಮ ಮಂಗಳ ಪೂಜೆ ವರುಷ ದ್ವಾದಶವಗೈದು ಮೆರೆದು 3 ಆರಸನಿಗೆ ಬಂದಂಥ ಆಪತ್ಕುಯೋಗ ಪರಿ ಹರಿಸಿ ಸಂಸ್ಥಾನ ಪಡೆದು ಪರಮ ಸಾಮ್ರಾಜ್ಯ ಪಟ್ಟಾಭಿಷೇಕವ ತಳೆದು ಪರಮ ವೈಭವದಿ ಮೆರೆದು ಚಿರಕಾಲ ವಿಜಯನಗರವು ಮೆರೆಯಲೆಂದ್ಹರಸಿ ಅರಸನಿಗೆ ರಾಜ್ಯವೆರೆದು ಕರುಣಾಳುವೆನಿಸಿ ವೈರಾಗ್ಯ ಶಿಖರದಿ ಮೆರೆದು ಮೊರೆಪೊಂದಿದವರ ಪೊರೆದು ಬಿರುದು 4 ಎಲ್ಲೆಲ್ಲಿ ನೋಡಲಲ್ಲಲ್ಲಿ ಶ್ರೀ ಮರುತನ್ನ ನಿಲ್ಲಿಸುತ ಪೂಜೆಗೈದು ನಿಲ್ಲದಿರೆ ಹಂಪೆಯಲಿ ಪ್ರಾಣಾರಾಯನು ಯಂತ್ರ ದಲ್ಲಿ ಬಂಧನವಗೈದು ಚಲ್ಲಾಡಿ ಸುವರ್ಣವೃಷ್ಟಿಯಿಂ ದುರ್ಭಿಕ್ಷ ನಿಲ್ಲಿಸದೆ ದೂರಗೈದು ಎಲ್ಲ ಕ್ಷೇತ್ರಗಳ ಸಂಚರಿಸಿ ಬಹುದಿನ ಹಂಪೆ ಯಲ್ಲಿ ಶಿಷ್ಯರನು ಪಡೆದು ನಿಂದು 5 ನವಕೋಟಿ ಧನಿಕ ವೈರಾಗ್ಯ ಧರಿಸುತ ಭವದ ಬವಣೆಯಲಿ ನೊಂದು ಬಂದು ನವ ಜನ್ಮಕೊಟ್ಟು ಉದ್ಧರಿಸಬೇಕೆಂದೆರಗೆ ಅವನಂತರಂಗವರಿದು ಪವಮಾನ ಮತವರುಹಿ ತಪ್ತ ಮುದ್ರಾಂಕಿತದಿ ನವ ಜನ್ಮವಿತ್ತು ಪೊರೆದು ಪವನ ಗ್ರಂಥಾಂಬುಧಿಯೊಳಡಗಿದ್ದ ದಾಸ್ಯ ರ ತ್ನವ ಪೂರ್ವಗುರುವಿಗೊರೆದು ಸುರಿದು 6 ಪುರಂದರ ಕನಕರೆಂ ಬತುಲ ಶಿಷ್ಯರ ಕೂಡುತಾ ಸತತ ಹರಿ ಚರ್ಯ ಮಹಿಮಾದಿಗಳ ಸ್ಮರಿಸುತ್ತ ಸ್ಮøತಿ ಮರೆದು ಕುಣಿದಾಡುತಾ ರತಿಪಿತನ ಗಾನ ಭಕ್ತಿಯಲಿ ಕನ್ನಡ ಕವನ ಮತಿಯೊಳ್ ನಾಲ್ವರುಗೈಯುತಾ ಕ್ಷಿತಿಯಲ್ಲಿ ದಾಸಪದ್ಧತಿ ಬಾಳಲೆಂದೆನುತ ಯತಿವರರ ಸೃಷ್ಟಿಸುತ್ತಾ | ಸತತ 7 ಅಂದು ವಿಜಯೀಂದ್ರರನು ಯತಿವರರು ಬೇಡÉ ಆನಂದದಲಿ ಭಿಕ್ಷವಿತ್ತ ಬಂದು ಕೈ ಸೇರಿದಾ ರಾಜ್ಯವನು ಕ್ಷಿತಿಪನಿಗೆ ಮುಂದಾಳಲೆನುತಲಿತ್ತ ಪತಿ ವೆಂಕಟೇಶನ್ನ ಪೂಜೆ ವರ ಕಂದನಿಗೆ ಒಲಿದು ಇತ್ತ ಒಂದೊಂದು ವೈಭವವು ಕೈ ಸೇರೆ ವೈರಾಗ್ಯ ತಂದು ಅಭಿರೂಪ ಬಿಡುತಾ | ಕೊಡುತ 8 ನವವಿಧದÀ ಭಕ್ತಿಯಲಿ ಜ್ಞಾನ ವೈರಾಗ್ಯದಲಿ ಕವನದಲಿ ಶಾಂತತೆಯಲಿ ನವಗ್ರಂಥ ನಿರ್ಮಾಣ ಪವನ ಗ್ರಂಥೋದ್ಧಾರ ಸವಿನಯವು ಸದ್ಗುಣದಲೀ ಸುವಿವೇಕ ಸತ್ಕರ್ಮ ಅಂತರ್ಮುಖ ಧ್ಯಾನ ಅವನಿ ಸಂಚಾರದಲ್ಲಿ ಇವರ ಸರಿಯಿಲ್ಲ ದಾಸ ವ್ಯಾಸ ಕೂಟದಲಿ ಭುವನದಲಿ ಮೆರೆದ ಧನ್ಯಾ | ಮಾನ್ಯ 9 ಪಾಪಿಗಳ ಸಲಹಿ ಪಾವನ್ನಗೈಯುತ ಭವದ ಕೂಪದಿಂದುದ್ಧರಿಸಿದಾ ಆಪಾರ ಮಹಿಮೆ ಆದ್ಯಂತ ವರ್ಣಿಸಲಳವೆ ಶ್ರೀಪಾದ ಪದುಮ ರಜದಾ ವ್ಯಾಪಾರವೆನ್ನ ಗುರು ದಯದಿ ಎನ್ನೊಳು ನಿಂದು ತಾ ಪಾಲಿಸುತ ನುಡಿಸಿದ ಗೋಪಾಲಕೃಷ್ಣವಿಠಲ ಧ್ಯಾನದಲಿ ಹಂಪೆ ಗೋಪ್ಯಸ್ಥಳದಲಡಗಿದಾ 10
--------------
ಅಂಬಾಬಾಯಿ
ನಂಬಿ ಭಜಿಸಿರೋ _ ಜನರೆಲ್ಲರೂ _ ನಂಬಿ ಭಜಿಸಿರೊ ಪ ಅಂಬುಜಾಕ್ಷ ಪ್ರಿಯಾ _ ನಮ್ಮ ಜಯರಾಯರಾ ಅ.ಪ ಕ್ಲೇಶ ಯಾತಕೇ ಕಾಸು ಕಳಕೊಂಡು _ ಅತಿಘಾಸಿ ಯಾತಕೇ ಶ್ರೀಶನಂಘ್ರಿ ಭಜಕರಾದ _ ವಾಸವಾವೇಶರಿವರ ಪಾದ ಆಶೆಯಿಂದ ಭಜಿಸಲೂ _ ವಾಸುದೇವನೊಲಿವನು 1 ನೇಮ ಯಾತಕೇ _ ನಿಷ್ಠೆ ಯಾತಕೇ ಹೋಮ ಯಾತಕೇ _ ಕಷ್ಟಯಾತಕೇ ಪ್ರೇಮದಿಂದಲೀ _ ಇವರ ಭಜಿಸಲೂ ತಾಮಸಗುಣ _ ತಾನೇ ಓಡೋದು 2 ಮಧ್ವಶಾಸ್ತ್ರದ _ ಚಂದ್ರರಿವರು ಅದ್ವೈತವಾದವ _ ಗೆದ್ದಸಿಂಹರು ಮಧ್ವರಾಯರಾ _ ಮುದ್ದುಮೊಮ್ಮಗ ಸಿದ್ಧಸೇವ್ಯರು _ ಸುಧೆಯ ಕರ್ತರು 3 ಇವರ ಧ್ಯಾನವೂ _ ಜ್ಞಾನದಾಯಕಾ ಇವರ ಪೂಜೆಯೂ _ ಪಾಪನಾಶನ ಇವರ ಸ್ಮರಣೆ _ ಕಲಿವಿ ಭಂಜನೆ ಇವರ ಸೇವೆಯು _ ಮುಕ್ತಿಸೋಪಾನ 4 ಶ್ರೀಕಳತ್ರನಾ _ ಆಜ್ಞೆಯಿಂದಲಿ ನಾಕದಿಂದಲೀ _ ಇಲ್ಲಿ ಬಂದರು ಏಕಮನದಿ _ ಶರಣು ಹೋಗಲು ಪಾಪನಾಶನ _ ಪುಣ್ಯವೆಗ್ಗಳಾ 5 ಮಳಖೇಡದೀ _ ನೆಲಸಿ ಇಪ್ಪರೂ ನಳಿನನಾಭನ _ ಒಲಿಸುತನುದಿನಾ ನಲಿಸಿ ಮನದೊಳು _ ಒಲಿಸುವಾತನೆ ಶೀಲವಂತನು _ ಧನ್ಯ ಮಾನ್ಯನು6 ನರನ ವೇಷದಿ _ ಸುರರ ಒಡೆಯನೊ ಹರಿಯ ಕರುಣದಿ _ ಮೆರೆಯುತಿರ್ಪರು ಶರಣಜನರ _ ದುರಿತರಾಶಿಯ ತರಿದು ಶೀಘ್ರದಿ _ ಪೊರೆಯುತಿಪ್ಪರು7 ಎತ್ತಿನ್ವೇಷದಿ _ ವಾತದೇವನ ಪ್ರೀತಿ ಪಡೆದು _ ಖ್ಯಾತಿಆದರು ಮತ್ತೆ ಯತಿಯಾಗಿ _ ಕೀರ್ತಿಯಿಂದಲಿ ಬಿತ್ತರಿಸಿದರು, ತತ್ತ್ವಶಾಸ್ತ್ರವ 8 ಕಾಗಿನೀನದೀ _ ತೀರವಾಸರು ವಿಗತರಾಗರು _ ನಿತ್ಯತೃಪ್ತರು ಜಾಗರೂಕದಿ _ ಪೊಗಳಿ ಪಾಡಲು ನಿಗಮವೇದ್ಯನು _ ಬೇಗ ಪೊರೆಯುವ 9 ಶೇಷಾವೇಷದಿ _ ವಾಸಿಸುವರು ಶೇಷಶಯನನ _ ದಾಸರೀವರು ಬೆಸರಿಲ್ಲದೆ _ ಆಸೆ ತೊರೆದು ದಾಸನೆನ್ನಲು _ ಪೋಷಿಸೂವರು 10 ಕೆರೆಯ ಏರಿಯು _ ಬಿರಿದು ಪೋಗಲು ಮೊರೆಯ ಇಟ್ಟರು _ ಇವರ ಅಡಿಗೆ ಭರದಿ ಕರುಣದಿ ಹರಿಯ ಸ್ತುತಿಸಿ ಕರದಿ ಮುಟ್ಟಲು _ ಏರಿ ನಿಂತಿತು 11 ಯರಗೋಳದ _ ಗುಹೆಯ ಒಳಗೆ ಮರುತದೇವನ _ ಕರುಣದಿಂದಲಿ ಪರಿಪರಿಯಲಿ _ ಬರೆದು ಟೀಕೆಯ ಕರೆದು ಸುರಿದರು _ ತತ್ತ್ವಕ್ಷೀರವ 12 ಇವರ ನಾಮವು _ ವಿಜಯ ಸೂಚಕ ಇವರ ಕೀರ್ತನೆ _ ಭವಕೆ ಔಷಧ ಇವರ ಕರುಣದಿ _ ಅನಿಲನೊಲಿವನು ಇವರ ಶಿಷ್ಯರೇ _ ಅವನಿಶ್ರೇಷ್ಠರು 13 ಸರ್ವಕ್ಷೇತ್ರದ _ ಯಾತ್ರೆಯಾ ಫಲ ಸರ್ವದಾನವ _ ಮಾಡಿದ ಫಲ ಇವರ ಪಾದವ _ ನಂಬಿ ಭಜಿಸಲು ತವಕದಿಂದಲಿ _ ತಾನೇ ಬರುವುದು 14 ಜಯತೀರ್ಥರ _ ಹೃದಯವಾಸಿಯು ವಾಯುಹೃದಯಗ _ ಕೃಷ್ಣವಿಠ್ಠಲನು ದಯದಿ ನುಡಿಸಿದಾ _ ಪರಿಯು ಪೇಳಿದೆ ಜೀಯ ಕೃಷ್ಣನೆ _ ಸಾಕ್ಷಿ ಇದಕ್ಕೆ15
--------------
ಕೃಷ್ಣವಿಠಲದಾಸರು
ನಮಿಸುವೆನು ನಮಿಸುವೆನು | ವಿಜಯದಾಸರಿಗೇ ಪ ಅಮಮ ಮಹಿಮೆಗಳ್ನಿಮ್ಮ | ವರ್ಣಿಸಲು ಅಳವೇ ಅ.ಪ. ಕವಚ ವಿಜಯವ ಪಠಿಸಿ | ಅವನಿಯೊಳು ಸಜ್ಜನರುಬವಣೆಗಳ ಕಳಕೊಂಡು | ಸುಖದಿಂದ ಜೀವಿಪರೋ |ಅವರನುಗ್ರಹದಿಂದ | ಭವಣೆ ಎನೆ ಮದ್ಭಯವುಸವೆದು ಪೋಗುತ ಗ್ರಂಥ | ಮುದ್ರಣವ ಮುಂಬರಿಸಿದೆ 1 ಹಯಾಸ್ಯ ನಂಘ್ರಿಯಲಿಕಾರ್ಯಮುಂಬರಿಸಿರುವ | ಮಹ ಕಾರುಣ್ಯ ಮೂರ್ತೇ 2 ಹರಿಗುರು ಗೋವಿಂದ | ವಿಠಲ ಚರಣಬ್ಜವನುಪರಿಪರಿಯಲಿಂದತುತಿಸಿ | ಮರಳಿ ಕಾಂಬುವ ಸುಹವನಾವರ ವಿಜಯ ದಾಸಾರ್ಯಾ | ಕರುಣಿಸೆನೆ ಬಿನ್ನಪವಕರಗತವ ಮಾಡುವುದು | ಉರುಕರುಣ ಸಂಪನ್ನಾ 3
--------------
ಗುರುಗೋವಿಂದವಿಠಲರು
ನವ ಸುವರ್ಣದಾ ಪರಿಯ ಹೊಳೆವ ಕೆಂಜೆಡೆಯಲೀ ದಿವಿಜ ನದಿಯ ನಿರುತ ಧರಿಸೀ ಮುಂದಲಿಯ ಲೀ ತವ ಶೀತಾಂಶೂನಾ ಕಳೆಯ ತಿಲಕಾ ಮಾಡಿ ಮೆರೆವಾ ಭವ ಭಯ ನಿವಾರಿಸಿ ಹೊರೆವಾ 1 ಮದನ ನಳಿದಾ ಭಾಲನಯನಾ ಸುವಿಧ್ಯದಿ ಮೊರೆಹುಗಲು ವಲುವಾನಂದನಯನಾ ಫಣಿ ಭೂಷಣ ಮಾರಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 2 ಠವ ಠವಿಸುವ ಮುನಿಯ ಮನೋಹರ ಪಂಚ ವದನಾ ರವಿ ಕೋಟಿ ತೇಜದಿರುವಾಘನ ಕಾರುಣ್ಯ ಸದನಾ ಭವಾನೀ ಯಡದ ತೋಡಿಯಲಿರಿಸೀ ಕೊಂಡು ಮೆರೆವಾ ಭವ ಭಯ ನಿವಾರಿಸಿ ಹೊರೆವಾ 3 ಧವಲೀಸುತಿಹ ತನು ರೂಚಯ ಕರ್ಪೂರ ಪರಿಯಾ ತವಕದಿಂದುಟ್ಟಾ ಉಡುಗಿ ಹರನಾ ಚರ್ಮ ಕರಿಯಾ ಸವಿಭೂತಿಯ ಸುಧರಿಸಿ ತಪವೇಷದಿ ಮೆರೆ ವಾ ಭವ ಭಯ ನಿವಾರಿಸಿ ಹೊರೆವಾ 4 ಭುವನತೃಯದಾ ಸುರನರೋರಗ ಪೂಜಿಸುತಿಹಾ ಪಾದ ದ್ವಿತೀಯಾ ಅವಿನಾವಾ ದೇವರ ಜನಗಿರಿ ವಾಸವಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 5 ತ್ರಿವಿಧ ತಾಪವಾಹರಿಸುವದು ಹರಯಂದ ಭರವಿದೀ ಭವಯನ್ನ ಲಾಗಾ ಸುಖಗರೆವ ಸಾನಂದ ವರದೀ ಭವ ಭಯ ನಿವಾರಿಸಿ ಹೊರೆ ವಾ 6 ಸವಾರೀಧರನಾವರಣದಿರುವಾ ಕಪ್ಪುಗೋರಳಾ ತ್ರಿವಿಷ್ಟಾಪರಿಯಾ ಪದವ ಮುನಿವಾ ತ್ರಿಶೂಲ ಸರಳಾ ಕವಿಬೋಧಿಸುವಾ ಡುವರ ಸೂತ್ರದ ಕೈಯ್ಯಾ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 7 ಶಿವಷ್ಟಕವನು ಹೃದಯ ಪತ್ರ ಮ್ಯಾಲ ಬರವಾ ಅವನಿಷ್ಟಾರ್ಥವಾ ಕುಡುತ ದುಷ್ಕøತ ಮೂಲಹರಿವಾ ಅವಿದ್ಯೋಡಿ ಸುವಾ ಗುರು ಮಹಿಪತಿಯಾಗಿ ಮೆರೆ ವಾ ಭವ ಭಯ ನಿವಾರಿಸಿ ಹೊರೆ ವಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಾಥದೀನಾನಾಥ ಸದ್ಗತಿ|ದಾತ ನೋಡಿರೋ|ಭವ| ಭೀತರ ಪತಿತರೆ ಪುನೀತಮಾಡುವ ನೀತನೆ|ರಘು| ಪ ಹವಣದಿ ತಾನಾರೆ ಸವಿಧ್ಹಣ್ಣುಗಳನ್ನು| ತವಕದಿ ಜಾನಕಿಧಮಗರ್ಪಿತವೆನೆ| ಅವನಿಲಿ ಶಬರಿಗೆ ಘವಿಘವಿಸುತ್ತಿಹ| ಅವಿರಳ ಪದದನುಭವ ನೀಡಿದ|ರಘು...... 1 ದಾವನ ಶ್ರುತಿಗಳು ಭಾವಸಿ ನುಡಿಯಲು| ದೇವನ ಹಿತಕುಜ ಕೇವಲ ವನಜರ| ಜೀವರೊಳಾಡುತ ಸೇವೆಗೆ ನಲಿಯುತ| ಕೈವಿಡಿದಿತ್ತನು ಕೈವಲ್ಯವ|ರಘು...... 2 ಕುಂದದೆ ಬಾಂಧವ ನಿಂದಿಸಿ ನೂಕಲು| ನೊಂದುವಿಭೀಷಣ ಬಂದರೆ ಶರಣವ| ತಂದೆ ಮಹೀಪತಿ ನಂದನ ಪ್ರಭು ಆ| ನಂದದ ಸ್ಥಿರಪದ ಹೊಂದಿಸಿದಾ|ರಘು..... 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿ ತಾನಾಗಿ ಶ್ರೀರಾಘವೇಂದ್ರಯತಿ ಒಲಿದ ಪ ಪೋರತನದವನು ಎರೆಡು ತೆರೆಗಳಲ್ಲಿ ದೂರಾಗಿ ಮೊರೆಯು ಅಲ್ಲವೆಂದು ಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿ ಧೀರ ತಾ ಕರವನು ಪಿಡಿದ ಬಳಿಕ 1 ಜಗದೊಳಗೆ ಪದಾರ್ಥಗಳು ಗುಣದಿ ಭುಂಜಿಸುವಂಗೆ ಅಗದಂಕರನು ತಾನು ಬಳಿಗೆ ಬಂದು ಬಗೆಬಗೆಯಿಂದಲಿ ಸುರಸ ಪದಾರ್ಥಗಳು ಸೊಗಸಾಗಿ ಉಣಿಸಲು ಚಿಂತೆಯುಂಟೆ2 ಪೂರ್ಣಜಲ ಹರಿವ ವಾಹಿನಿ ಕಂಡು ಬೆದರುವಗೆ ಕರ್ಣಧಾರನು ತಾನೆ ಬಂದು ನಿಂದು ತೂರ್ಣದಲಿ ಕರಪಿಡಿದು ಹರಿಗೋಲ ಒಳಗಿಟ್ಟು ಫೂರ್ಣಿಸಲು ಅವನಿಗೆ ಚಿಂತೆಯುಂಟೆ 3 ತನ್ನಯ ಹಿತವು ತಾ ವಿಚಾರಿಸಲವಂಗೆ ಚನ್ನಾಗಿ ಪರಮ ಗುರು ತಾನೆ ಬಂದು ಸನ್ಮಾರ್ಗವನು ತಾನೆ ಪೇಳುವೆನೆನಲು ಇನ್ನು ಆಯಾಸವುಂಟೆ ಅವನಿಗೆ 4 ಏಸು ಜನ್ಮದಲಿ ಅರ್ಚಿಸಿದೆನೊ ನಾ ಇನ್ನು ಪಾದ ಪದುಮ ಲೇಸಾಗಿ ಈ ಸುಕೃತದಿಂದೆನ್ನ ಹರಿದಾಸ ಈ ಸುಗುಣ ಗುರುರಾಯ ಎನಗೆ ಒಲಿದ 5
--------------
ವ್ಯಾಸತತ್ವಜ್ಞದಾಸರು