ಒಟ್ಟು 14277 ಕಡೆಗಳಲ್ಲಿ , 133 ದಾಸರು , 6728 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಂಡಭೆಟ್ಟಿ ಭೂಮಂಡಲಾಧೀಶನುಪಾಂಡವರ ಉದ್ದಂಢಗಳಿಂದ ಪ.ಚಂದ್ರನಂತೊಪ್ಪುತ ವಂದಿಸಿ ಐವರುಆನಂದಬಾಷ್ಪಗಳು ದೇವದುಂದುಭಿಆಗ1ತೋಳ ಭಾಪುರಿಯವರು ಬಹಳೆ ಹಾರಗಳಿಂದವ್ಯಾಳಾಶÀಯನ ಒಪ್ಪ ಹೇಳಲು ವಶವಲ್ಲ 2ಶ್ರೀಶ ಇವರ ಭೆಟ್ಟಿ ದೇಶದ ಜನ ನೋಡಿಸೂಸು ಮಲ್ಲಿಗೆ ತಮ್ಮ ಆಸೆ ಪೂರೈಸಿಕೊಂಡು 3ಭೆಟ್ಟಿಯಾದ ಉತ್ಕರ್ಷ ನೋಡಿ ಪುಷ್ಪವೃಷ್ಟಿಯಗರೆದರು ಶ್ರೇಷ್ಠದಸುರರು4ಅಮ್ಮ ಇವರ ಮ್ಯಾಲೆ ರಮ್ಮಿ ಅರಸನ ಪ್ರೀತಿಬೊಮ್ಮಕಂಡು ಬೆರಗೊಮ್ಮೆ ಬಡುವ5
--------------
ಗಲಗಲಿಅವ್ವನವರು
ಕೊಂಡಾಡಲಳವೆ ಕರುಣಾನಿಧಿ ಕಾವನದಂಡ ಸಂಜಿತ ಗುರುಸತ್ಯನಾಥರ ಕೀರ್ತಿ ಪ.ಶ್ರೀ ವಾಸುದೇದ ತಾ ಭಾವಿಸಿ ಚಿತ್ತದಿಭೂವಲಯಕೆ ಸುಜನಾವಳಿಗಾಶ್ರಯವೀವೆನೆನುತ ಶುಭದೇವವೃಕ್ಷವನಟ್ಟೆಈವರ ಪರಮಹಂಸಾವಲಂಬನ ತಾಳ್ದುಶ್ರೀ ವಾಯುಮತದಿ ತತ್ವವೆ ಲಕ್ಷಿಸುವ ಪ್ರೇಕ್ಷಾವಂತರಾಗಿಹ ಜೀವಕೋಟಿಗಳ ಕೃಪಾವಲೋಕನದೊಳಿಟ್ಟ ಅಪೇಕ್ಷಿತಭಾವಾರ್ಥಗಳನೆ ಕೊಟ್ಟು ನಂಬಿದಸೇವಕರ್ಗಭಯವಿಟ್ಟ ಗುರುರಾಯನ 1ಭಾನುತೋರುವ ಮುನ್ನೆ ಸ್ನಾನವ ಮಾಡಿ ಸುಮ್ಮಾನದಿಂದಲಿ ನೇಮ ಮೌನದೊಳಿದ್ದು ಶ್ರೀಮಾನಾಥನಂಘ್ರಿಯ ಮಾನಸದಲಿ ದೃಢಧ್ಯಾನದಿಂ ಬಲಿದುಗೀರ್ವಾಣಭಾಷ್ಯಾಮೃತಪಾನವ ಜನರಿಗೆ ಸಾನುರಾಗದಲಿತ್ತುನಾನಾ ತತ್ವಾರ್ಥ ವ್ಯಾಖ್ಯಾನವ ಜನರಿಗೆತಾನಂದು ಬೋಧಿಸಿದತಾಮಸಜ್ಞಾನವನೋಡಿಸಿದ ಆ ಕಾಮಧೇನುವೆನಿಸಿ ಎಸೆದ ಗುರುರಾಯನ 2ಭೇದವರ್ಜಿತ ಮತ್ತವಾದ ಕುಂಭಿಯಕುಂಭಭೇದಕಸಿಂಗಹಲಾಧಾರಿಹರಿಸಗುಣೋದರ ಸಾಕಾರಮಾಧವಹರನುತಪಾದನೆನುತಸೂತ್ರವೇದ ಪುರಾಣದಿಸಾಧಿಸಿ ಕುತ್ಸಿತವಾದಿಗಳಪಾದಾಕ್ರಾಂತರ ಮಾಡಿ ಮೇದಿನಿಯೊಳು ಜಯನಾದಭೇರಿಯ ಹೊಯಿಸಿದ ಮುಕ್ತಿಯಸಾಧನ ತೋರಿಸಿದ ಭ್ರಷ್ಟಂಕುರೋದಯ ಮಾಣಿಸಿದ ಗುರುರಾಯನ 3ಕಾಲಕಾಲಕೆ ಧರ್ಮ ಪಾಲಿಸಿ ಯಾಚಕಜಾಲಕೆ ಮನ್ನಿಸಿ ಮೂಲ ಮಂತ್ರೋಪದೇಶಪೇಳಿ ಪೂತರ ಮಾಡಿ ಹಾಲು ಸಕ್ಕರೆ ತುಪ್ಪಹೋಳಿಗ್ಯನ್ನವನಿಕ್ಕಿ ಮೇಲೆ ದ್ರವ್ಯವನಿತ್ತುಪಾಲಿಸಿ ತಾಯಿತಂದೆಗಳ ಹಂಬಲ ಬಿಡಿಸಿ ಲೋಕದವರಿಗಭಿಲಾಷಾ ಪೂರ್ಣಾನುಕೂಲಚಿಂತಾಮಣಿಯ ಯತಿಕುಲಮೌಳಿಮಕುಟಮಣಿಯ ವಿರತಿಭಾಗ್ಯಶಾಲಿ ಸುಗುಣಖಣಿಯ ಗುರುರಾಯನ 4ಮಣ್ಣು ವನಿತೆಸತಿಹೊನ್ನಿನ ಬಯಕೆಯಘನ್ನತೆಜರಿದುಪಾವನ್ನಮಹಿಮನಾದಚೆನ್ನ ಸತ್ಯನಿಧಿ ತೀರಥನ್ನ ಕರೋದ್ಭವತನ್ನಾಕಷೆಂಬುವಭಿನ್ನವಚಂದ್ರಿಕೆಯನ್ನು ಪ್ರಕಾಶಿಸಿ ಪೂರ್ಣಚಂದ್ರಮನಂತೆಉನ್ನತ ಕಳೆಯುತ ಚಿನ್ಮಯ ವರದ ಪ್ರಸನ್ನ ವೆಂಕಟಾಧಿಪನ ಭಜಿಸಿನಿತ್ಯಧನ್ಯನೆನಿಸುತಿಪ್ಪನ ಸತ್ಯಾಭಿನವರನ್ನನ ಪೊರೆದÀಪ್ಪನ ಗುರುರಾಯನ 5
--------------
ಪ್ರಸನ್ನವೆಂಕಟದಾಸರು
ಕೊಡು ಕಂಡೆಯಾ ಹರಿಯೆ-ನಿನ್ನ ನಾಮ-|ಕೊಡು ಕಂಡೆಯಾ ಹರಿಯೆ ಪಬಡವ ನಾನೆಂದು ಕಾಡಲಿಲ್ಲ ಹರಿಯೆ ಅ.ಪಒಡಲುತುಂಬದು ಎಂದು ಬಳಲಿಸೆ ಬರಲಿಲ್ಲ |ಸಡಗರದಿಂ ಭಾಗ್ಯ ಬೇಡಲಿಲ್ಲ ||ಮಡದಿ-ಮಕ್ಕಳಿಗಾಗಿ ಕಡು ಮೋಹವೆನಗಿಲ್ಲ |ಬಿಡದೆ ನಾಮಸ್ಮರಣೆ ಕೊಡು ಒಂದೇ ಸಾಕೊ 1ಸ್ನಾನ-ಮೌನ ಜಪ-ತಪಗಳು ಎನಗಿಲ್ಲ |ನಾನಾಯೋನಿಗಳಲ್ಲಿ ಬಳಲಿ ಬಂದೆ ||ದೀನರಕ್ಷಕ ನೀನೆ ದಯದಿಂದಲೆನಗಿನ್ನು |ಧ್ಯಾನಸುಧೆಯನಿತ್ತು ಸಲಹಯ್ಯ ಹರಿಯೆ 2ಬಲೆಗೆ ಸಿಲುಕಿದ ಮೃಗದಂತೆ ಬಾಯ್ಬಿಡುತಲಿ |ಅಲಸಿ ಕೋಟಲೆಯ ಸಂಸಾರದಿಂದ |ತಲೆಹುಳಿತ ನಾಯಂತೆ ಬಯಲಾಸೆಗೆ ಸಿಲುಕಿದೆ |ಸಲಹೊ ದೇವರ ದೇವಪುರಂದರವಿಠಲ3
--------------
ಪುರಂದರದಾಸರು
ಕೊಡುವುದೆಂದು ಎನ್ನ ಕೊಂಬುದೆಂದು-ಕೈ-|ಪಿಡಿವುದೆಂದು ನೀ ಒಲಿವುದೆಂದು ಪಕೊಡುಕೊಂಬ ಮಹದನುಗ್ರಹದವನೆಂದು ನಿ-|ನ್ನಡಿಗೆ ಸೇರಿದೆನಯ್ಯ ಬಡತನಕೌಷಧ ಅ.ಪಶ್ವಾನಸೂಕರ ಜನ್ಮ ನಾನುಂಬೆ ನನ್ನಲ್ಲಿ |ನೀನೇ ತತ್ತದ್ರೂಪನಾದೆಯಲ್ಲ ||ಹೀನರೊಳ್ ನಾನತಿ ಹೀನನಾಗಿ-ಅಭಿ-|ಮಾನಿಯಾಗಿ ಕಾಲಕಳೆದೆನಲ್ಲ ||ವಾನರನಂಗೈಯ ಮಾಣಿಕ್ಯದಂತೆನ್ನ |ಮಾನದಂತರ್ಯಾಮಿ ಸಿಕ್ಕೆಯಲ್ಲ ||ಏನೇ ಆದರು ನಿನ್ನೊಳೆನಗೆ ಮುಂದೆ ಭಕ್ತಿ-|ಙ್ಞÕನ-ವೈರಾಗ್ಯ ಭಾಗ್ಯಗಳನು ದೇವ 1ಕಾಡಿನ ಮೃಗವು ತಾ ಹಾಡಿದರೆ ನಂಬಿ |ಆಡುವುದಲ್ಲದೆ ಓಡುವುದೆ? ||ಕಾಡುವ ಪಶುವಿನ ಬಾಲವ ಕಟ್ಟಿಸಿ |ಕೂಡೆ ಪಾಲ್ಗರೆಯಲು ಒದೆಯುವುದೆ? ||ಆಡುವ ಶಿಶು ತಪ್ಪಮಾಡಲು ಜನನಿ-ಕೊಂ-|ಡಾಡುವಳಲ್ಲದೆ ದೂಡುವಳೆ ||ಮೂಢ ಬುದ್ದಿಯೊಳು ಕೆಟ್ಟಿನೆಂದು-ಕೋಪ |ಮಾಡಬೇಡ ದಯೆಮಾಡಿ ನೀಡಿಷ್ಟವ 2ಹಣ್ಣಾದ ಹೊತ್ತು ಬಾಯ್ ಹುಣ್ಣಾದ ತೆರನಂತೆ |ನಿನ್ನ ಸೇರುವ ಯತ್ನ ಬಿಟ್ಟು ನಾನು ||ಹೆಣ್ಣು ಹೊನ್ನು ಮಣ್ಣಿಗಾಗಿಯೆ ಭ್ರಮೆಗೊಂಡೆ |ಸುಣ್ಣಕಿಕ್ಕಿದ ನೀರಿನಂತಾದೆನು ||ಎನ್ನಪರಾಧವನಂತ ಕ್ಷಮಿಸು ನೀನು |ಮನ್ನಿಸದಿರಲಾರಿಗೆ ಪೇಳ್ವೆನು ||ಓಂ ನಮೋ ಶ್ರೀಹರಿಎಂಬ ಪೂರ್ಣಙ್ಞÕನ-|ವನ್ನು ಪುರಂದರವಿಠಲನ ಎನ್ನಪ್ಪನೆ 3
--------------
ಪುರಂದರದಾಸರು
ಕೊಡುವೆನು ಕೊಡುವೆನು |ಕಡೆಗೆ ಬಂದು ಕೈ ಮುಗಿದರೆ ಸೀರೆಯ ಪಒಂದೇ ಮಾತು ಇನ್ನೊಂದನಾಡೆನಾ |ಮಂದಗಮನೆಯರೆ ಬಂದು ನಿಲ್ಲುವುದು1ವತ್ಸರವಾದರು ಮಚ್ಛಲ ಗೆಲಿಸುವೆ |ತುಚ್ಛವ ಮಾಡೆನು ಮತ್ಸಾಂಬಿಕಿಯರೇ 2ನಾ ಸರ್ವೋತ್ತಮನೇ ಸುಳ್ಳಾಡಿದರೇ |ಸಖಿಯರೆ ಪ್ರಾಣೇಶ ವಿಠಲನೇ 3
--------------
ಪ್ರಾಣೇಶದಾಸರು
ಕೋಪವಿದೇಕೆ ಗೋಪಾಲಕ |ರೂಪಮನದಿ |ಕಾಪಾಡು ನೀ ಕೃಪೆಯೊಳ್ ತಾಪಸರ | ಪಾಪಾರಿಯೆ ಪಚದುರೆಯರ್ ವಿಧ ವಿಧ ದೂರುವದನಾಲಿಸುತ |ದಧಿಘೃತ ಕದ್ದನೆಂದು ಬೈದಳೇ ಯಶೋದೆ ನಿನ್ನ 1ನಾರಿಯರ ಸೀರೆಯ ಕದ್ದು | ಏರಿದಾ ಮರವನೆಂದು |ದೂರುವುದಕೇಳಿಪಿತ | ಕ್ರೂರತ್ವವ ತೋರಿದನೇ ||ಕೋಪ| 2ಚಂದದಿಂದ ಬಂದು ಎನ | ಗಿಂದು ದಯತೋರಿಸಯ್ಯಾ |ಸುಂದರಾಂಗಮೂರ್ತಿಗೋವಿಂದ ದಾಸರ್ವಂದಿತನೆ 3
--------------
ಗೋವಿಂದದಾಸ
ಕೋಲೆಂದು ಪಾಡಿರೆ ಬಾಲೆ ದ್ರೌಪತಿ ದೇವಿಮೇಲಾದ ಗುಣವ ಕೊಂಡಾಡಿಕೋಲಪ.ಫುಲ್ಲನಯನೆಯರ ಕರಿಯೆ ನಲ್ಲೆ ದ್ರೌಪತಿ ದೇವಿಮೆಲ್ಲನೆ ಹೆಜ್ಜೆ ನಿಕ್ಕಿದಳುಕೋಲಉಲ್ಹಾಸವಾಗೋದು ನಿಲ್ಲದೆ ನಡೆಯಮ್ಮಹಲ್ಲಿ ಮಾತಾಡಿದವಾಗ ಕೋಲ 1ಬಡನÀಡ ಬಳುಕುತ ನಡೆದಳು ದ್ರೌಪತಿಅಡಿಗಳ ಘೆಜ್ಜಿ ಫಲಕೆಂದುಕೋಲಒಡೆÉಯ ರಂಗಯ್ಯ ನಿನಗೆ ಕಡು ಪ್ರೀತಿ ಮಾಡುವನಡೆಯೆಂದು ನುಡಿದರು ಹರುಷದಿ ಜನರು 2ಚಂದ್ರವದನೆಯರು ಕರಿಯೆ ಚಂದಾಗಿ ನಡೆಯಮ್ಮಒಂದೂಅನುಮಾನ ಬ್ಯಾಡವೆಕೋಲತಂದೆ ರಾಮೇಶ ಆನಂದವ ಪಡಿಸುವಎಂದು ಕುಂತೆಮ್ಮ ನುಡಿದಳುಕೋಲ3
--------------
ಗಲಗಲಿಅವ್ವನವರು
ಕೋಲೆಂದು ಪಾಡಿರೆಕೋಮಲೆಯರೆಲ್ಲಗೋಪಾಲರಾಯನಮಡದಿಯರುಕೋಲಪ.ಶ್ರೀದೇವಿಯರ ಕೂಡ ವಾದ ಸರಸವೆಆದರದಿ ಪಾದಕ್ಕೆರಗಿಕೋಲಮಾಧವನರಸಿಯರ ಮೋದದಿಕರೆಯೆ ವಿನೋದವ ನುಡಿದಾನುರಾಯ 1ಸರಿಯ ರಾಣಿಯರ ಕೂಡ ತರವೇನು ಸರಸವುಕರವಜೋಡಿಸಿ ಕಮಲಾಕ್ಷಿಕೋಲಎರಗಿ ದೇವಿಯರಿಗೆ ಕರಿಯೆ ಬ್ಯಾಗಎಂದುಹರದೆಯರಿಗೆ ನುಡಿದ ಭೀಮನು ಕೋಲ 2ಕೀರ್ತಿವಂತರ ಕೂಡ ಯಾತಕ್ಕೆ ಸರಸವುಮಾತಿನ ಸುಖದ ವಾಣಿಯರಕೋಲಸ್ತೋತ್ರವ ಮಾಡುತ ಪ್ರೀತಿಲೆ ಕರೆಯೆಂದುಪಾರ್ಥ ಮಾತಾಡಿದ ಸತಿಗೆ ಕೋಲ 3ಸಕಲ ಗುಣಾಢ್ಯರ ಸಖಳೆಂದು ಕರೆಸಿಕೊನಕಲಿ ಮಾತಾಡಬ್ಯಾಡಕೋಲಮುಖವ ನೋಡುತ ಅತಿ ಸುಖವ ಪಡಿರೆಂದುನಕುಲಮಾತಾಡಿದ ಸತಿಗೆಕೋಲ4ಇಂತು ರಾಮೇಶನ ಕಾಂತೆಯರ ಕರೆಯೆವೇದಾಂತ ವೇದ್ಯಳೆ ದ್ರೌಪತಿಕೋಲಪಂಥವ ಬಿಟ್ಟು ಸಂತೋಷದಿ ಕರೆಯೆಂದುಕಾಂತೆಗೆ ನುಡಿದ ಸಹದೇವ 5
--------------
ಗಲಗಲಿಅವ್ವನವರು
ಕೌತುಕಲಕುಮಿನಾಥನು ಒಲಿದದ್ದುಭೂತಳದೊಳಗÀಂಜೋದ್ಯಾತರ ಮಾತಿದು ಪ.ವೇದ ತಂದಾತನ ಪಾದವ ನೋಡಿ ನೋಡಿಮೋದಬಟ್ಟನುಬೊಮ್ಮಮಾಧವಅಂಜಿದ್ದು1ಮಂದಾರಗಿರಿಎತ್ತಿ ತಂದ ಅಮೃತವನ್ನುಆನಂದ ಬಟ್ಟನುಬೊಮ್ಮಇಂದೈವರು ಅಂಜಿದ್ದು2ಧರಣಿ ತಂದಾತನ ವರಹಾ ಸುರರರಿಗೆ ಸುಖವಿತ್ತುದೊರೆ ಧರ್ಮನ ಕಂಡುಪರಮಭೀತನಾದ3ನರಸಿಂಹ ದೈತ್ಯನ ವಧಿಸಿಬಿಟ್ಟನೆಂದುಹರುಷವಾದನುಬೊಮ್ಮಅರಸ ಅಂಜಿದ್ದು4ವಾಮನ ರೂಪಕ್ಕೆ ಕಾಮ ಮೋಹಿತರಾಗಿಶಾಮ ವರ್ಣನ ಕಂಡು ಭೀಮ ಭೀತನಾದ 5ಜ್ಞಾನಿಗಳು ಭಾರ್ಗವನ ಧೇನಿಸಿ ನಮಿಸೋರು ಏನೆಂಬೆಪಾರ್ಥನು ತಾ ನೋಡಿ ಅಂಜಿದ್ದು 6ಚಲ್ವರಾಯನಗುಣಎಲ್ಲ ಮೋಹಿಸಬೇಕುನಲ್ಲಿ ದ್ರೌಪತಿದೇವಿಯ ವಲ್ಲಭರಂಜಿದ್ದು 7ಕೃಷ್ಣಾವತಾರಗೆ ಎಷ್ಟು ಮೋಹಿಸುವವರುಧಿಟ್ಟ ನಕುಲರಾಯ ಇಷ್ಟೊಂದು ಅಂಜಿದ್ದು 8ಬೌದ್ಧನ್ನ ಧೇನಿಸಿ ಸಿದ್ಧಿ ಪಡೆದವರೆಷ್ಟುರುದ್ರಾದಿ ವಂದ್ಯಗೆ ಬುದ್ದಿವಂತರು ಬೆದರ 9ಚಲುವ ರಂಗಯ್ಯನು ಕುದುರೆ ಏರಿ ಬರಲುಬುದ್ಧರು ನಮಿಸುವರು ಹೆದರ ಸಹದೇವನು 10ತಂದೆ ರಾಮೇಶನ ಕೊಂಡಾಡೊ ಗುಣವಿಲ್ಲಪುಂಡರಿಕಾಕ್ಷಗೆ ಪಾಂಡವ ರಂಜಿಸಿದ್ದು 11
--------------
ಗಲಗಲಿಅವ್ವನವರು
ಕ್ಷಮಾ ಸಮುದ್ರ ನಿನ್ನ ಸಮಾನರಿಲ್ಲರಮಾ ಬ್ರಹ್ಮಾದಿಗಳು ಪೊಗಳೆ ಪಉಮೆಯರಸ ನಿನ್ನ ಚರಣಮಹಿಮೆ ತನ್ನತರುಣಿಯೊಡನೆ ಹಗಲಿರುಳು ಪೇಳುವ ದಿವ್ಯ ಅ.ಪಅರಿಯದೆ ಅಜಮಿಳತರಳನಾರಗನೆಂದುಮರಣ ಕಾಲದಿ ಒದರೆಸರಸೀಜಾಕ್ಷನು ತನ್ನ ಪರಿವಾರದವರೆಂದುಸಿರಿದೇವಿಯೊಳು ಪೇಳಿ ತ್ವರಿತದಿ ರಕ್ಷಿಸಿದ 1ನಕ್ರನ ಬಾಧೆಗೆ ಸಿಕ್ಕಿದ ಗಜರಾಜಚಕ್ರಪಾಣಿಯ ಭಜಿಸೆಆ ಕ್ಷಣದಿ ತನ್ನ ಚಕ್ರಕಾಙÉÕಯ ಮಾಡಿಲಕ್ಷ್ಮೀದೇವಿಗ್ಹೇಳದೆ ಪಕ್ಷಿ ಹೆಗಲೇರಿ ಬಂದ 2ಹಿರಣ್ಯಕಶ್ಯಪು ತನ್ನತರಳಪ್ರಹ್ಲಾದನಿಗೆಪರಿಪರಿ ಬಾಧೆ ಪಡಿಸೆಹರಿಯ ತೋರೆಂದು ಆರ್ಭಟಿಸಿ ನುಡಿಯೆ ದೈತ್ಯನರಮೃಗರೂಪನಾಗಿ ಭರದಿ ಕಂಬದಿ ಬಂದ3ಪತಿಗಳೈವರು ಲಕ್ಷ್ಮೀಪತಿಯ ಧ್ಯಾನದೊಳಿರೆಮತಿಹೀನನೆಳೆತರಲುಗತಿನೀನಲ್ಲದೆ ಮತ್ತೆ ಹಿತರೊಬ್ಬರಿಲ್ಲವೆನೆಅತಿಬೇಗದಿಂದ ಧರ್ಮಸತಿಗೆ ಅಕ್ಷಯವಿತ್ತ 4ಇದರಂತೆ ತರಳಧ್ರÀುವ ಒದಗಿದ ತಾಪದಿಂದಪದುಮನಾಭನÀ ಭಜಿಸೆಮುದದಿಂದಾತಗೆ ಧ್ರುವಪದವಿಯನಿತ್ತು ಕಾಯ್ದೆಪದುಮನಾಭನೆ ನಿನಗೆದುರುಂಟೆ ತ್ರಿಜಗದಿ 5ಘಣಿಶಾಯಿ ನಿನ್ನಗುಣಮಹಿಮೆಯ ಪೊಗಳಲುಅಹಿಭೂಷಣನಿಗಳವೆಕ್ಷಣ ಬಿಡದಲೆ ನಿನ್ನ ಚರಣಸೇವೆಯ ಮಾಳ್ಪಸಿರಿದೇವಿ ಅರಿಯೆನೆಂದೆನಲು ನಿನ್ನಯಗುಣ6ಕರುಣಾಸಾಗರ ದೇವ ವಿಮಲಸ್ವರೂಪನೆ ಕಮಲನಾಭ ವಿಠ್ಠಲಶರಣಜನರ ಬಹುತ್ವರದಿಂದ ಬಂದು ಕಾಯ್ದಪರಮದಯಾಳೊ ನಿನ್ನ ಚರಣಕ್ಕೆ ನಮೋ ಎಂಬೆ7
--------------
ನಿಡಗುರುಕಿ ಜೀವೂಬಾಯಿ
ಕ್ಷೀರಸಾಗರದಲೆರಡೀರೈದು ಯೋಜನದ |ಮೇರೆಯಲಿ ವರತ್ರಿಕೂಟಾದ್ರಿ ಶೃಂಗತ್ರಯದಿ |ರಾರಾಜಿಸುವ ತಾಮ್ರ-ರಜತ-ಕಾಂಚನದಿಂದನಾರಾಯಣಾಂಶದಿಂದ ||ಪಾರಿಜಾತಾಂಭೋಜ ಬಕುಳ ಮಲ್ಲಿಗೆ ಜಾಜಿ |ಸೌರಭದಲಶ್ವತ್ಥಪೂಗಪುನ್ನಾಗಜಂ |ಬೀರತರುಗುಲ್ಮಶಾಖಾಮೃಗಗಳೆಸೆವಲ್ಲಿವಾರಣೀಂದ್ರನು ಮೆರೆದನು 2ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲ್ಲಿ |ಕಾನನದಿ ತೊಳಲುತ್ತ ಬೇಸಗೆಯ ಬಿಸಿಲಲ್ಲಿ |ತಾನು ನೀರಡಿಸಿ ಬಂದೊಂದು ಸರಸಿಯ ತಟಕೆಪಾನಾಭಿಲಾಷೆಯಿಂದ ||ನಾನಾಪ್ರಕಾರದಿಂ ಜಲಕ್ರೀಡೆಯಾಡುತಿರ |ಲೇನಿದೆತ್ತಣ ರಭಸವೆಂದುಗ್ರಕೋಪದಿಂ |ಒತ್ತಿ ಪಿಡಿದೆಳೆಯುತಿರೆ ಎತ್ತಣದಿನೇನೆನುತ |ಮತ್ತಇಭರಾಜನೌಡೊತ್ತಿ ನೋಡುತ್ತಂಘ್ರಿ |ಎತ್ತಿ ತಂದನು ತಡಿಗೆ ಮತ್ತೆ ನಡುಮಡುವಿನೊಳುಅತ್ತಲೇ ತಿರುಗೆನೆಗಳೆ||ಇತ್ತಂಡದಿಂತು ಕಾದಿದರು ಸಾವಿರ ವರುಷ |ಉತ್ತರಿಸಿತೇನೆಂಬೆ ಮತ್ತಾ ಗಜೇದ್ರಂಗೆ |ಸತ್ತ್ವ ತಗ್ಗಿತು ತನ್ನ ಮನದೊಳಗೆ ಚಿಂತಿಸಿತುಮತ್ತಾರು ಗತಿಯೆನುತಲಿ 4ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ |ದಿಂದ ದಿವ್ಯಜಾÕನ ಕಣ್ದೆರೆದು ಮನದೊಳರ |ವಿಂದನಾಭಾಚ್ಯುತ ಮುಕುಂದಮಾಧವಕೃಷ್ಣನಿಖಿಲ ಮುನಿವೃಂದವಂದ್ಯ ||ಇಂದಿರಾರಮಣ ಗೋವಿಂದ ಕೇಶವ ಭಕ್ತ |ಬಂಧು ಕರುಣಾಸಿಂಧು ತಂದೆ ನೀ ಗತಿಯೆನಗೆ |ಇಂದುಸಿಲ್ಕಿದೆನು ಬಲು ದಂದುಗದಮಾಯಾಪ್ರ-ಬಂಧಕನೆ ನೆಗಳಿನಿಂದ 5ಪರಮಾತ್ಮ ಪರಮೇಶ ಪರತತ್ತ್ವ ಪರಿಪೂಜ್ಯ |ಪರತರ ಪರಂಜೋತಿಪರಮಪಾವನಮೂರ್ತಿ |ಪರಮೇಷ್ಟಿಪರಬ್ರಹ್ಮಪರಮಪರಮಾಕಾಶ |ಪರಿಪೂರ್ಣ ಪರಮಪುರುಷ ||ನಿರುಪಮ ನಿಜಾನಂದ ನಿರ್ಲಯ ನಿರಾಕಾರ |ನಿರವಧಿಕನಿರ್ಗುಣನಿರಂಜನನಿರಾಧಾರ |ನಿರವದ್ಯನಿಸ್ಸಂಗ ನಿಶ್ಚಿಂತ ನಿಖಿಲೇಶಇರದೆ ನೀ ಸಲಹೆಂದನು 6ಇಂತೆನುತ ಮೂಚ್ರ್ಛೆಯಲಿ ಗುಪ್ತಕಂಠಸ್ವರದ |ಕಾಂತ ನಡುನೀರೊಳಗೆ ತೇಲಿ ಮುಳುಗುತಲಿರೆ ಅ- |ನೆಗಳ ಬಾಯನು ಚಕ್ರದಲಿ ಸೀಳಿ ಕರಿವರದ |ಒಗುವ ಕರಣದಲಿ ಮೈದಡಹಲ್ಕೆ ಗಜಜನ್ಮ |ತೆಗೆದುದಾಕ್ಷಣಕೆ ಮಣಿಮುಕುಟ - ಕುಂಡಲದಿಂದನಗಧರನು ಓಲೈಸಿದ ||ವಿಗಡದೇವಲ ಮುನಿಯ ಶಾಪದಲಿ ದಾರುಣಿಯೊ- |ಳಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ |ಮಗುಳಿಪುರವನು ಕಂಡು ನಿಜಗತಿಗೆ ಐದಿದಿನುಕಮಲಾಕ್ಷಮಿಗೆ ಮೆರೆದನು 8ಮಣಿಮುಕುಟಕುಂಡಲಪದಕಹಾರ ಕಡಗಕಂ- |ಕಣ ಕೌಸ್ತು ಭೊಜ್ವ ್ಜಲಾಂಗದವೈಜಯಂತಿಭೂ- |ಷಣ ಶಂಖ-ಚಕ್ರ-ಗದೆ-ಪದ್ಮ ಧರಿಸಿಹಹಸ್ತಪಣಿಯ ಕಸ್ತುರಿ ತಿಲಕದಾ ||ಝಣಝಣಿಪ ನೂಪುರದ ದಂತಪಂಕ್ತಿಯ ಕೃಪೇ- |ಕ್ಷಣದ ಸಿರಿಮೊಗದ ಪೀತಾಂಬರದ ಮೂರುತಿಗೆ |ಮಣಿದು ಜಂiÀi ಜಯಜಯಾಎಂಬ ಸುರನರರಸಂ- |ದಣಿಯಿಂದೆಹರಿಮೆರೆದನು 9ಹರಹರಿಎನುತ್ತಂಘ್ರಿಗೆರಗಲಿಭವರನನಾ- |ದರದಿಂದಲೆತ್ತುತಲಿ ಕೇಳ್ಮಗನೆ ನೀನೆನ್ನ |ವಿರಜಶರಪರಿಧಿಯಾ ಸರವನಹಿಪತಿಯನ್ನುಪರಜನ್ಮನೀ ಲಕುಮಿಯ ||ಪರಮೇಷ್ಟಿ-ಭವರ ಮನು-ಮುನಿಗಳನು ಧರಣಿಯನು |ಆವಾವನಿದನುದಯದಲ್ಲೆದ್ದು ಭಕ್ತಿಯಲಿ |ಭಾವಶುದ್ಧಿಯಲಿ ತಾ ಹೇಳಿಕೊಳುವನೊ ಅವನ- |ಘಾವಳಿಯ ಪರಿಹರಿಸಿ ಸುಙ್ಞÕನವೀವೆ ದೇ-ಹಾವಸಾನದಲೆನುತಲಿ ||ಶ್ರೀವಾಸುದೇವನಾಜಾÕನೆಸಿ ಗಜೇಂದ್ರ ಸಹಿ- |ತಾವಿಹಂಗಾಧಿಪನನೇರಿ ವೈಕುಂಠಕ್ಕೆ |ದೇವ ಬಿಜಯಂಗೈದಪುರಂದರವಿಠಲನ
--------------
ಪುರಂದರದಾಸರು
ಕ್ಷುಲ್ಲರಿಗೊದಗದು ಫುಲ್ಲನಾಭನ ಪದಅಲ್ಲ್ಲ್ಯವಧಾರಣ ಬುದ್ಧಿಗಳುಬಲ್ಲಿದಸುಖತೀರ್ಥರುಲ್ಲಾಸದಪಥದಲ್ಲಿಹರಿಗೆ ಪರಸಿದ್ಧಿಗಳು ಪ.ಆಡುವುದಮಿತವು ಮಾಡುವುದಹಿತೀಶಾಡುವದಾಶೆಗಳಬ್ಧಿನಾಡವಚನ ಉಪಗೂಡಿಸಿ ಠಾಳಿಪಮೂಢರ್ಗೆ ವಿಷಯದ ಲುಬ್ಧಿರೂಢಿಯೊಳಿವ ತನುಗೂಡಿದ ಬಯಕೆಯ ನೀಡಾಡಿದರೆ ಸುಖ ಲಬ್ಧಿಹಾಡಿ ಹರಿಯ ಕೊಂಡಾಡ್ಯನುದಿನಕೋಲ್ಯಾಡಲು ಒಲಿವ ದಯಾಬ್ಧಿ 1ಹೀನ ಶ್ರದ್ಧದಿಘನಸ್ನಾನ ಸುರಾರ್ಚನೆನಾನಾಡಂಬರಕುದಿಸುವ ಗಳಿಕೆಮೌನವೆ ವಧು ಹಣ ಧ್ಯಾನದಾರೋಹಣಜ್ಞಾನದೊಳಜ್ಞಾನದ ಬಳಕೆಏನೊಂದರಿಯರು ಮಾನುಭವಾರ್ಯರುಮಾನಪಮಾನ್ಗಳ ವೆಗ್ಗಳಿಕೆಶ್ರೀನಾಥಪದಕೊಪ್ಪು ಪ್ರಾಣವನೊಪ್ಪಿಪಜಾಣರ್ಗೆ ಮುಕುತಿಯ ಕಳವಳಿಕೆ 2ತರ್ಕಕೆ ನಿಶಿದಿನಕರ್ಕಶಭಾವದವರ್ಕಡು ಪಾತಕರ್ಬಾಧಕರುಮರ್ಕಟ ಮುಷ್ಟಿಯೊಳು ಮೂರ್ಖ ಪ್ರತಿಷ್ಠೆಯೊಳುನರ್ಕಪದೇ ಪದೇ ಸಾಧಕರುಆರ್ಕೂಡ ಮುಕ್ತರು ಶರ್ಕರ ಸೂಕ್ತರುಅರ್ಕಸುತೇಜ ಮುಖಾಧೀಶರುತರ್ಕೈಪರು ಸಂತರ್ಕಳಖಳಸಂಪರ್ಕಕೆ ಹೆದರುವ ಭೇದಕರು 3ಶಾಸ್ತ್ರ ವಿಚಾರಿಸಿ ಪ್ರಸ್ತಾರದೋರಿ ಸ್ಮರಾಸ್ತ್ರಕೆ ಮಗ್ಗುತ ಸೋಲುವರುಸ್ವಸ್ಥ ಮನಿಲ್ಲದೆ ದುಸ್ತರಬೋಧಸಮಸ್ತರೊಳಗೆ ಬೋಧಿಪರವರುವಿಸ್ತರ ತತ್ವ ಪ್ರಶಸ್ತ ಬೀರುತ್ತ ಪರಸ್ತ್ರೀ ಜನನಿಸಮನೆಂಬುವರುಅಸ್ತಮಯೋದಯದಿ ವ್ಯಸ್ತವಿದೂರ ಹೃದಯಸ್ಥ ಹರಿಯನೆ ಚರಿಸುವರು 4ಒಂದರಿದವರು ನೂರೊಂದನರಿತವರಾರೆಂದತಿಶಯಮದ ವಿಹ್ವಲರುಕುಂದುಕುಚೇಷ್ಟೆ ವಿನಿಂದೆಯ ಧೃಷ್ಟ ಮುನೀಂದ್ರ ದ್ರೋಹದಗುಣಸಂಕುಲರುಮಂದರಧರನವರಂದನುಭವದಿವನೊಂದನರಿಯರತಿ ನಿರ್ಮಳರುತಂದೆ ಪ್ರಸನ್ವೆಂಕಟೇಂದ್ರನಕಿಂಕರರೆಂದೆಂದಿಗಪವಾದಕೊಳಗೊಳರು 5
--------------
ಪ್ರಸನ್ನವೆಂಕಟದಾಸರು
ಗಂಗಾಧರ ದೇವ ಜಯಗೀಷ ವ್ಯಾನಂಗಾರಿ ಗಿರಿಜಾಧವ |ಮಂಗಳ ಪ್ರದನೆ ಅಮಂಗಳ ಶೀಲ | ಭುಜಂಗ ರೂಪದಿ ಪಾಂಡು |ರಂಗ ಘಾಸಿಗೆಯಾದ ಪವೈಕಾರಿಕಾಹಂಕಾರ ತತ್ವದೊಡೆಯ, ನಾಕುಮೊಗನ ಕುಮಾರ |ಶ್ರೀಕಂಠ, ಸ್ಥಾಣು, ವಿಶ್ಖೋಜನಕ, ಚಂದ್ರಶೇಖರ, ಈಶಪಿನಾಕಿಭಕ್ತವತ್ಸಲ |ಶೋಕನಾಶಕ ಶಂಭು, ಪಶುಪತಿ, ಹೇ ಕರುಣಿ, ಸದ್ಗುಣ ಸುಖಾರ್ಣವ |ಪಾಕಶಾಸನ ಪ್ರಮುಖ ವಂದ್ಯ, ವಿಶೋಕ, ಎನ್ನಭಿಲಾಷೆ ಪೂರ್ತಿಸು1ಪ್ರಾಣನಂದನ ತೈಜಸಾಹಂಕಾರಾಭಿಮಾನಿ ಶ್ರೀಶುಕದೂರ್ವಾಸ|ಕ್ಷೋಣಿಸಂಧೃತ ಧನ್ವಿ, ದಾನವಾಂತಕ, ಶೂಲಪಾಣಿ, ಪ್ರಮಥಾಧಿಪ ಬಾಣವರದಯನ್ನ |ಮಾನನಿನ್ನದು ಚಕ್ರಿ ಪದಕಂಜರೇಣುತೋರಿಸು ತವಕದಿಂದಲಿ |ದ್ರೌಣಿ, ಶಿವ, ಪ್ರಣತ ಜನ ಸುಮನಸಧೇನು, ತವ ಪದ ಸಾರ್ವೆ ಸತತ 2ತಾಮಸಾಹಂಕಾರೇಶ ಸಂಕರ್ಷಣನಾ ಮಗನೇ ಕೊಡು ಲೇಸ ರಾಮನಾಮ ಮಂತ್ರ |ಪ್ರೇಮದಿ ಜಪಿಸುವ ಸ್ವಾಮಿ, ಅನಲ,ವಹ್ನಿಸೋಮಲೋಚನ ಹರ |ವಾಮದೇವ, ಕಪರ್ದಿ,ಭವಭಯ ಭೀಮ ಶ್ರೀ ಪ್ರಾಣೇಶ ವಿಠಲನ |ಪ್ರೇಮ ಪುಟ್ಟಿಸೋ ರೌಪ್ಯ ಪರ್ವತಧಾಮ ಶ್ರೀ ವಿರೂಪಾಕ್ಷ ಗುರುವೇ 3
--------------
ಪ್ರಾಣೇಶದಾಸರು
ಗಂಗಾಧರ ಸುಮತಿ ಪಾಲಿಸೋ | ಪಾಂಡು |ರಂಗನ ಚರಣಾಬ್ಜ ಭಜನೆಮಾಡುನಿತ್ಯ ಪವೈಕಾರಿಕಾದಿತ್ಯರೂಪದನುಜರಿಗೆ |ಶೋಕಕೊಡುವದು ನಿರಂತರದಿ ||ಲೌಕಿಕವೆಲ್ಲ ವೈದಿಕವಾಗಲೆನಗೆ ಮೈನಾಕೀ |ಹೃತ್ಕಮಲಮಾರ್ತಾಂಡಭಕ್ತ ವತ್ಸಲ 1ವಾಸವಾದ್ಯಮರ ವಂದಿತನೆ ಪದ್ಮಜ ಸುತ |ನೀ ಸಲಹುವದೋ ಕೈಲಾಸವಾಸ ||ಕ್ಲೇಶಮೋದವು ಸಮ ತಿಳಿಸೋ ಅಶ್ವತ್ಥಾಮ |ದೋಷರಹಿತನೆ ದಕ್ಷಾಧ್ವ ರನಾಶಕ 2ಪವಮಾನತನಯನಿನ್ನವರಲ್ಲಿ ಕೊಡು ಸ್ನೇಹ |ದಿಙ ವಸನಾದಿಯಲ್ಲಿ ಎನ್ನಿರವ ಬಲ್ಲಿ ||ಅವಲೋಕಿಸದೆ ಎನ್ನನೇಕ ಪಾಪಗಳನ್ನು |ತವಕಉದ್ಧರಿಸೋ ವಿಯತ್ಪತಿ ಜನಕ 3ಸಾಮಜಾಜಿನ ವಸ್ತ್ರ ಭಸ್ಮ ಭೂಷಿತ ದೇವ |ಸೋಮಶೇಖರನೆ ಬಿನ್ನಪವ ಕೇಳು ||ಪ್ರೇಮದಿಂದಲಿ ಭಾಗವತರ ಸಂಗತಿನಿತ್ಯ|ಶ್ರೀ ಮನೋರಮನ ಚರಿತೆ ಪಾಡಿಸುವದಯ್ಯ 4ಶ್ರೀಕಂಠ ನೀ ಪೇಳಿದನ್ಯಶಾಸ್ತ್ರಕೆ ಬುದ್ಧಿ |ಸೋಕದೆಗುರುಮಧ್ವ ಮುನಿಮತವೇ ||ಬೇಕು ಜನುಮ ಜನುಮಕ್ಕೆನಿಸೋ ತ್ರಿಯಂಬಕ |ನಾ ಕೈಯ್ಯ ಮುಗಿವೆ ಪ್ರಾಣೇಶ ವಿಠಲದಾಸ 5
--------------
ಪ್ರಾಣೇಶದಾಸರು
ಗಜಲಕ್ಷ್ಮಿ ಬಿಜಯ ಮಾಡೇ ಮೂಕಾಂಬಿಕೆಭಜಿಸುವೆ ವರವ ನೀಡೆಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಅಜಸುರ ಮುಖ್ಯರು ಭಜಿಸಲು ನಿನ್ನನುನಿಜವಾದ ವರವನಿತ್ತೆ ಜಗನ್ಮಾತೆಕುಜನರ ಮರ್ದಿಸುತೆವಿಜಯಸಾರಥಿಭುಜಗಶಯನನಭಜನೆಯನು ಅನುದಿನದಿ ಪಠಿಸುವಸುಜನಸಜ್ಜನಪಾಲೆ ಸದ್ಗುಣಶೀಲೆಮುನಿಜನಲೋಲೆ ಜಯ ಜಯ1ಕೊಲ್ಲೂರ ಪುರನಿಲಯೆ ಮಹದೇವಿಯೆಪುಲ್ಲಲೋಚನೆ ಪಾಲಯೆಎಲ್ಲ ಭಕ್ತರ ಮನ ಸಲ್ಲಿಸಿ ಸಲಹುವಚಲ್ವ ರಂಗನ ರಾಣಿಯೆ ಶ್ರೀದೇವಿಯೆಕುಲ್ಲ ಕುಂಕುಮ ಜಾಣಿಯೇ ಸಲ್ಲಲಿತೆಕಾಲಲ್ಲಿ ರಂಜಿಪ ಪಿಲ್ಲಿ ಮಿಂಚಿಕೆ(?) ಕಡಗ ಪೈಜಣಗೆಜ್ಜೆ ಗಲಗಲ ಎಂದು ನಲಿಯುತ ಬಾರೆಜಗದ ವಿಚಾರೆ ಮುಖ ತನು ತೋರೆ ಜಯ ಜಯ2ಚಂದಿರ ಮುಖದ ಮನೇ ಸರ್ವೇಶ್ವರಿಕುಂದಕುಂಡಲರದನೇಮಂದಗಾಮಿನಿ ಅರವಿಂದನಯನೆಸುರಪಂಡಿತಗುಣಕರುಣಿನೀನಲ್ಲದೆ ಮುಂ ಸುಖವ ಕಾಣೆನೆಚಂದನನವಗಂಧ ಕುಂಕುಮ-ದಿಂದ ಶೋಭಿಪ ಕೀರವಾಣಿಯೆಸುಂದರಿಯೆ ಗೋವಿಂದನರಸಿಯೆ ಧರ್ಮದೇವಿಯೆದೈvÀ್ಯ £್ಞಶಿನಿಯೆ ಜಯ ಜಯ3
--------------
ಗೋವಿಂದದಾಸ