ಒಟ್ಟು 4389 ಕಡೆಗಳಲ್ಲಿ , 129 ದಾಸರು , 3035 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೋ ಸ್ವಾಮಿ ನೀಪೂರ್ಣ ಸಾರಸದ್ಗತಿ ಭೂಷಣಾ ತಾರಿಸೋ ಯನ್ನ ನೀ ಪ್ರಾಣಾ ಶ್ರೀ ಹರಿ ಕಂಜಲೋಚನಾ 1 ಸ್ವಾಮಿ ನೀ ಸರ್ವ ಸಾಕ್ಷಾತಾ ಬ್ರಹ್ಮಾದಿದೇವ ವಂದಿತಾ ಮನೋಹರ ಪ್ರಖ್ಯಾತಾ ನೇಮ ನೀ ಕಾಮ ಪೂರಿತಾ 2 ಹಸ್ತಿಗೊಲಿದ ಸುದಾತಾ ವಸ್ತು ಶ್ರೀದೇವ ನಿಶ್ಚಿತಾ ನಿಸ್ತರಿಸುವಾ ಶ್ರೀನಾಥಾ ಕಸ್ತೂರಿರೇಖಾ ಶೋಭಿತಾ 3 ನೀನೆ ನಮಸ್ತ ಕಾಧಾರಾ ಶ್ರೀನಿಧಿ ಜ್ಞಾನ ಸಾಗರಾ ದೀನ ಜನರ ಮಂದಾರಾ ಪೂರ್ಣಾನಂದದಾಗರಾ 4 ಮಹಿಪತಿ ಸ್ವಾಮಿ ಶ್ರೀಪತಿ ಕಾಯೋ ನೀ ಲಕ್ಷ್ಮೀಪತಿ ಶ್ರೀ ಹರಿ ದಿವ್ಯಸುಮೂರ್ತಿ ದೋರೋ ನೀ ದಿವ್ಯಸಂಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರ್ಪೂದಾರುತಿ ತಾರೆ ಕೊಪ್ಪರದಪ್ಪನಿಗೆ ಸರ್ಪಸುತಲ್ವಗೆ ಮುಪ್ಪಾದ ದೇವನಿಗೆ ಅಪ್ರತಿಮರಿಹಿಮೆಗೆ ಪ ನೀರೆ ನಲುವಿಂದಲಿ ನೀಮುದದಿಂದಲಿ | ಸಖಿ ನಿಜಮನದಲಿ ಅ.ಪ ಫಾಲಾಕ್ಷ ವಂದಿತಪಾದ ಪಾಲಾಬ್ಧಿವಾಸಗೆ | ಪಾಂಚಾಲಿವರದರಂಗಗೆ | ಶಿಶುಪಾಲ ಖರಮುರ ಹಾರಿಗೆ | ಕಾಳಿಂಗನ ಫಣೆಯಲ್ಲಿ ತಥೈವಿಎಂದು ಕುಣಿದವಗೆ | ಬಾಲೆಯರಾಲಯ ಪೊಕ್ಕು ಪಾಲು ಬೆಣ್ಣೆ ಕದ್ದವಗೆ | ಗೋಪಾಲಕೃಷ್ಣನಿಗೆ ನೀರೆ ನಲುವಿಂದಲಿ | ನೀ ಮುದದಿಂದಲಿ | ಸಖಿ ನಿಜಮನದಲಿ 1 ದೇವಾಧಿದೇವನಾದ ಭಾವಜನಯ್ಯನಿಗೆ | ವÀಸುದೇವದೇವಕಿ ಕಂದಗೆ ಭೂದೇವೌಕ್ಷವಂದ್ಯಗೆ | ಪಾವನ್ನ ಮೂರುತಿಯಾದ ಶ್ರೀದೇವಿ ಅರಸಗೆ | ಗೋವಳರಿಂಧ ಕೂಡಿ ಗೋಹಿಂಡು ಕಾಯ್ದವಗೆ | ದೇವಾರಿ ವೈರಿಗೆ ಶ್ರೀವಾಸುದೇವಗೆ 2 ಮಂಗಳಾಂಗ ಗಂಗಾಜನಕ | ತುಂಗವಿಕ್ರಮದೇವಗೆ | ಜಯ ಸಂಗೀತ ಪ್ರಿಯಲೋಲಗೆ | ಪತಂಗಜವೈರಿ ದೇವಗೆ ಶೃಂಗಾರದಿ ಶಾಮಸುಂದರ ಗಾಂಗೆಯಂಬರಧಾರಿಗೆ 3
--------------
ಶಾಮಸುಂದರ ವಿಠಲ
ಕರ್ಪೂರದಾರತಿಯ ತಂದೆತ್ತಿರೆ ಚೆಲ್ವಸುಪ್ರಕಾಶಗೆ ಸುಜನರ ಕಾಯ್ವಗೆಪಾಂಡವಭಾವಗೆ ದೇವರ ದೇವಗೆನಿರ್ಜರೇಂದ್ರನ ಬಲಿ ಗರ್ಜಿಸುತಿರೆ ಕಂಡುಅರ್ಜುನಪ್ರಿಯ ತಾನು ಕುಬ್ಜನಾಗಿಹೆÉಜ್ಜೆ ಭೂಮಿಯ ಬೇಡಿ ಬಲಿಯ ಗರ್ವವನುನಿರ್ಜಿಸಲು ಬಂದ ವಾಮನಗೆ ನಿಸ್ಸೀಮನಿಗೆ ಪೂರ್ಣ ಕಾಮನಿಗೆ 1 ನಳಿನನಾಭನೆಂದು ತಿಳಿದು ಬೇಗನೆ ಬಲಿಕೆಳದಿಯ ಕರೆದುದಕವತರಿಸಿಚಲುವ ಪಾದವ ತೊಳೆದಿಳೆಯ ದಾನವ ಮಾಡೆನಳಿನಜಾಂಡಕ್ಕಾಗಿ ಬೆಳೆದವಗೆ ಬಹು ತಳೆದವಗೆ-ಭೂಮಿಯಳೆದವಗೆ 2 ಬಲಿಯ ಭಕ್ತಿಗೆ ಮೆಚ್ಚಿ ಚೆಲುವ ಉಡುಪಿನ ಕೃಷ್ಣಉಳಿದ ಭೂಮಿಯ ತೋರೆನ್ನುತ ನುಡಿಯೆಸತಿ ನಾಚಿಕೆಯಿಂದ ತನ್ನಳೆದುಕೋ ಎನ್ನತಲೆಯ ಮೆಟ್ಟಿದ ಬಹು ವಿಕ್ರಮಗೆ ಪರಾಕ್ರಮಗೆ ತ್ರಿವಿಕ್ರಮಗೆ3
--------------
ವ್ಯಾಸರಾಯರು
ಕರ್ಮ ದೊಡ್ಡದೊ ಸ್ವಾಮಿ ನಿನ್ನ ಮಹಿಮೆ ದೊಡ್ಡದೊ ಮುನ್ನಿನ ದೃಷ್ಟಾಂತದಿಂದ ನಿರ್ಣಯಿಸುವ ನಿತ್ಯಾನಂದ ಪ. ಅಡವಿಯಲ್ಲಿ ನಿಂತು ಮೃಗವ ಬಡಿದು ತಿಂಬ ಬ್ಯಾಡ ಕಡೆಗೆ ಗಿಡವ ಕೂಡಿಸೆಂದ ನುಡಿಯ ದೃಢಕೆ ಮೆಚ್ಚಿ ಕಡೆಹಾಯಿಸಿದೆ 1 ಉಗ್ರಭಾವದಿಂದ ತಮ್ಮ ಅಗ್ರಜರನ್ನು ಕೊಲಿಸಿದಂಥ ಸುಗ್ರೀವ ವೈಶ್ರವಣರ ಭಕ್ತಾಗ್ರಣ್ಯರೆಂದು ಕಾಯ್ದೆ 2 ಕರ್ಮ ಬಾಧೆ ಕಳದು ಕರುಣದಿಂದ ಮಾಧವ ನೀ ಸಲಹೊ ಶೇಷ ಭೂಧರೇಂದ್ರ ಶಿಖರವಾಸ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರ್ಮನಾಮಕ ಧರ್ಮಕಾರಿ ಪ ನಿರ್ಮಮನ ಮಾಡೆನ್ನ ನಿರ್ಮಮರ ದೊರೆ ಹರಿಯೆ ಅ.ಪ ಸೂರ್ಯ ಸುಂದರಮೂರ್ತಿ ಭೂರಿ ಕರುಣಿ ಮೀರಿಹ ಅಹಂಜ್ಞಾನ ತಿಮಿರವನು ಪರಿಹರಿಸು ಮಾರಮಣ ಮಾಂ ರಕ್ಷ ರಕ್ಷಿಸು ದಯವನಧಿ 1 ಅಜ ರುದ್ರ ಸುರರೆಲ್ಲ ವಂದಿಸಲು ಬಧಿರರಂತಿರುವರಯ್ಯ ಹಿಂದು ಮುಂದೆಂದೆಂದು ಎನ್ನಲ್ಲಿ ನೀ ಕುಣಿಸಿ ದಂದದಲಿ ನಾ ಕುಣಿದೆ ಅರ್ಪಿತವಾಗಲಿ ನಿನಗೆ 2 ಮೋಚಕನೆ ಜಯೇಶವಿಠಲನೆ ವಿಧಿವಂದ್ಯ ಯಾಚಿಪೆನು ವಿಜ್ಞಾನ ಕರುಣಿಸೆಂದು ಊಚುನೀಚದಿ ನಿನ್ನ ಪೂರ್ಣ ಮೂರ್ತಿಯ ಮಹಿಮೆ ಗೋಚರಕೆ ಬರುವಂತೆ ಆಚರಿಸು ಎನ್ನಲ್ಲಿ3
--------------
ಜಯೇಶವಿಠಲ
ಕಲಭಯಾನೆ ಕಂಜಲೋಚನೆ ಕದವತೆಗೆಯೆಲೆ ಭಾಮಿನಿ ನಾಂ ಬಳಲಿ ಬಂದೆನು ಭಾಮಿನೀ ಪ. ಬಳಲಿ ಬಂದರೆ ಒಳ್ಳಿತಾಯಿತು ತಳರ್ವುದಿಲ್ಲಿಂ ನಿಲ್ಲದೆ ನಾಂ ಕದವ ತೆಗೆಯೆನು ಸಾರೆಲೆ ಅ.ಪ. ಭಾಪುಭಾಪೆಲೆ ಕೋಪಗೈವುದು ಚಾಪಲ್ಯಾಂಬಕಿ ಯೆನ್ನೊಳು ಓವನಲ್ಲೇ ಕೋಪಸಲ್ವುದೆ ಈ ಪರಿಯೊಳ್ ಪೇಳ್ವುದು ನೀ ನೀಪರಿಯೊಳ್ ಪೇಳ್ವುದು 1 ಪರಿ ಕಪಟನಾಟ್ಯವ ಮಾಳ್ಪರೇ ಓಪೆÀನೆಂದು ಕೂಗುತಿರುವ ಭೂಪನಾವನು ಸಾರೆಲೋ ನಾನೋಪೆ ಯಾರಿಗೆ ಸಾರೆಲೊ 2 ನೀರೆ ಮುಕ್ತಾಹಾರೆ ಸ್ಮರವೈಯ್ಯಾರೆಯಿಂತು ಪೇಳ್ವರೇ ಕೇಳ್ ನೀರನಾನೆಲೆ ಶ್ರೀಕರೆ 3 ನೀಂ ಜಾರನಂದದಿ ಕಾಣುವೆ ನೀನಾರು ಪೇಳು ನೋಡುವೆ 4 ದೇವಿಕೇಳು ವಸುದೇವ ದೇವಕಿಕುಮಾರ ನಾನೆಲೆ ಭಾಮಿನೀ ಸುಕುಮಾರನಾನೆಲೆ ಭಾಮಿನೀ ಭಾವಜಾತನ ಬಾಣಕೀಯದೆ ಕಾವುದೆನ್ನನು ಕಾಮಿನೀ ದಯೆತೋರು ಮನೋಮೋಹಿನೀ5 ದೇವಕೀಸುತನಾದರೊಳ್ಳಿತು ನಾವು ಬಲ್ಲೆವು ಸಾರುನೀಂ ಮಾವನನ್ನೆ ಮಥಿಸಿ ಬಂದ ಮಹಾಮಹಿಮನೆ ಸಾರು ನೀಂ, ಆಹ ಭಾವಿಸೀ ಭಯಪಡುವೆನೇಂ 6 ಭೀಷ್ಮಕಾತ್ಮಜೆ ಭೇಷಜಾಂಬಕಿ ಹಾಸ್ಯ ಮಾಡದೆ ಬೇಗನೆ ನಾಂ ಬೇಡಿಕೊಂಬೆನು ನಿನ್ನನು 7 ದೋಷವೆಣಿಸದೆ ಪೋಷಿಸೆನ್ನ ಮದೀಶ ಹಾಸ್ಯವ ಮಾಡಿದೆ ಶೇಷಶೈಲನಿ ವಾಸ ಎನ್ನನು ಪೋಷಿಸೆಂದಳು ವಿನಯದಿ ಕೈಪಿಡಿದ ದೇವನ ಮೋದದಿ 8 ಜಯಜಗನ್ನಾಥ ಭಕ್ತಾಭಯಪ್ರದ ಶ್ರೀಕರ ಜಯದೇವ ದಯಾಸಾಗರ ಶೇಷಗಿರೀಶ ಶ್ರೀಧರ 9
--------------
ನಂಜನಗೂಡು ತಿರುಮಲಾಂಬಾ
ಕಲಯೇಹಂ ಶ್ರೀ ಕನಕಾದ್ರೀಶಂ ಜಲದೋಪಮ ಭಾಸಂ ಪ ಸುಲಲಿತ ಕರಧೃತ ಧರರಥಚರಣಂ ಕಲಿಕಲಹಾಪಹ ಕಮನೀಯ ಚರಣಂ ಅ.ಪ ಮಸ್ತಕ ನಿಹಿತ ಮಹಾರ್ಹ ಕಿರೀಟಂ ಕಸ್ತೂರೀ ತಿಲಕಿತ ದಿವ್ಯಲಲಾಟಂ ನಿಸ್ತುಲ ಮದಮಾಂಚಿತ ಜೂಟಂ ಕೌಸ್ತುಭ ಶೋಭಿತ ಮಣಿಸರ ಕೂಟಂ 1 ಸುಮಶರಕೋಟಿ ಮನೋಹರ ವೇಷಂ ಕಮಲಾಸಖ ಭಾ ಭರಣ ವಿಭೂಷಂ ಸುಮಹಿತಭಣಿತ ಸದೃಶ ಮಂಜುಭಾಷಂ ವಿಮಲಹೃದಯ ಸೇವಕ ಪೋಷಂ 2 ಶ್ರೀರಮಣೀಪರಿಶೋಭಿತಗಾತ್ರಂ ವಾರಿಜಭವಕೃತ ವಿವಿಧ ಸ್ತೋತ್ರಂ ಸಾರಸದಳ ವಿಸ್ತಾರ ಸುನೇತ್ರಂ ನಾರದಮುನಿಕೃತ ಪೂಜಾಪಾತ್ರಂ 3 ಶರದಿಂದುಮಂಡಲ ಸುಂದರವದನಂ ವರಕುಂದಕುಟ್ಮಲ ಸನ್ನಿಭ ರದನಂ ಕರಸಂದರ್ಶಿತ ವೈಕುಂಠಸದನಂ ತರಣಿ ಘೃಣಿ ರುಚಿದಂತ ಹಸನಂ 4 ತುರುಣ ಶ್ರೀತುಳಸೀ ಶೋಭಿತಮಾಲಂ ಸರಸಿಜಗರ್ಭರುಚಿರ ದಿವ್ಯಚೇಲಂ ವರವ್ಯಾಘ್ರಭೂಧರ ವಿಹರಣಶೀಲಂ ವರವಿಠಲಮಖಿಲಾಗಮ ಪಾಲಂ 5
--------------
ವೆಂಕಟವರದಾರ್ಯರು
ಕಲಿ ಹೆಚ್ಚಿ ಬಂದಿತಲ್ಲ, ರಂಗಯ್ಯ ಕಾಯೆನ್ನ ಸಿರಿಯ ನಲ್ಲ ಪ ಕಾಲ ವಿಪರೀತದಿ ಅ ಅತ್ತೆಯ ಸೊಸೆ ಬಯ್ವಳು - ಪುತ್ರರು ತಮ್ಮಹೆತ್ತ ತಾಯಿಯ ಬಿಡುವರುಉತ್ತಮ ಗರತಿಗೆ ಅಪವಾದ - ಅವಿವೇಕಿಗಳುಎತ್ತ ನೋಡಲು ಹೆಚ್ಚಿ ಹೆದರಿಸಿತುನ್ಮತ್ತತನದಲಿ ಮನೆಯ ರಚಿಸುವರುಭಕ್ತಿಯೆಂಬುದ ಬಯಸದಿರುವರುಕತ್ತಲಾಯಿತು ಕಲಿಯ ಮಹಿಮೆ 1 ನಿತ್ಯ ನೇಮವು ನಿಂತಿತು - ಹೋಯಿತಲ್ಪಜಾತಿಗೈಶ್ವರ್ಯ ಭೋಗಭಾಗ್ಯಧಾತರಾದವರಿಗೆ ಧಾರಣೆ ಪಾರಣೆಜಾತಿನೀತಿಗಳೆಲ್ಲ ಒಂದಾಗಿಪಾತಕದಿ ಮನವೆರಗಿ ಮೋಹಿಸುತಮಾತಾಪಿತೃ ಗುರು ದೈವ ದ್ರೋಹದಿಭೂತಳವು ನಡ ನಡುಗುತಿಹುದು 2 ಬಿನ್ನಣ ಮಾತುಗಳು ಮತ್ತೆ ಮತ್ತೆಘನ್ನ ಮತ್ಸರ ಕ್ರೋಧಗಳುಅನ್ಯಾಯದಿಂದ ಅರ್ಥವ ಗಳಿಸುವರುತನ್ನ ಕಾಂತನ ಬಿಟ್ಟು ಸ್ತ್ರೀಯರುಅನ್ಯರಿಗೆ ಮನವೆರಗಿ ಮೋಹಿಪರುಬಣ್ಣಗೆಟ್ಟಿತು ವರ್ಣ ತಪ್ಪಿತು ಪ್ರ-ಸನ್ನ ಶ್ರೀ ನೆಲೆಯಾದಿಕೇಶವನೆ 3
--------------
ಕನಕದಾಸ
ಕಲೆಯೇಹಂ ಶ್ರೀ ಕನಕಾದ್ರೀಶಂ ಜಲದೋಪಮ ಭಾಸಂ ಪ ಸುಲಲಿತ ಕರಧೃತ ಧರರಥ ಚರಣಂ ಕಲಿಕಲುಹಾಪಹ ಕಮನೀಯ ಚರಣಂ ತಿಲಕಿತ ದಿವ್ಯಲಲಾಟಂ ಕೌಸ್ತುಭ ಶೋಭಿತ ಮಣಿಸರಕೂಟಂ 1 ಸುಮಶರಕೋಟಿ ಮನೋಹರವೇಷಂ ಕಮಲಾಸಖಭಾಭರಣ ವಿಭೂಷಂ ಸುಮಹಿತಭಣಿತ ಸದೃಶಮಂಜು ಭಾಷಂ ವಿಮಲ ಹೃದಯ ಸೇವಕ ಪೋಷಂ2 ವಾರಿಜ ಭವಕೃತವಿವಿಧ ಸ್ತೋತ್ರಂ ಸಾರಸದಳ ವಿಸ್ತಾರಸುನೇತ್ರಂ ನಾರದ ಮುನಿಕೃತ ಪೂಜಾಪಾತ್ರಂ 3 ಶರದಿಂದು ಮಂಡಲ ಸುಂದರ ವದನಂ ವರಕುಂದ ಕುಟ್ಮಲ ಸನ್ನಿಭರದನಂ ಕರಸಂದರ್ಶಿತ ವೈಕುಂಠ ಸದನಂ ತರುಣ ತರಣಿಘೃಣಿ ರುಚಿದಂತ ಹಸನಂ 4 ತರುಣ ಶ್ರೀ ತುಳಸೀ ಶೋಭಿತ ಮಾಲಂ ಸರಸಿಜಗರ್ಭ ರುಚಿರ ದಿವ್ಯ ಚೇಲಂ ವರವ್ಯಾಘ್ರಭೂಧರ ವಿಹರಣ ಶೀಲಂ ವರದ ವಿಠಲ ಮಖಿಲಾಗಮಪಾಲಂ 5
--------------
ಸರಗೂರು ವೆಂಕಟವರದಾರ್ಯರು
ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ- ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1 ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ- ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2 ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು ನಾ ಧೇನಿಸಲರಿಯೆ ಹರಿಯೇ 3 ಪ್ರಾಣಾಯಾಮವ ಕ್ರಮವು ರೇಚಕ ಪೂರಕವು ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4 ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು ವಿಷಮವಾಗಿಹುದಯ್ಯ ಮತ್ಸಾಧನ ಪ್ರತ್ಯಾಹಾರ ಸಾಧನವಿಲ್ಲ ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5 ಧಾರಣೋಪಾಯದೊಳು ಅಣುಮಾತ್ರ ನಾನರಿಯೆ ನರಕ್ರಿಮಿಯಾಗಿ ನಾ ಧರೆಯೊಳುಳಿದೆ ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6 ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ ಘನಸಮಾಧಿಯೊಳ್ ಪರಿವಿಲ್ಲದಲೆ ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7 ಶುದ್ಧವಾದ ದ್ವೈತತ್ರಯ ತಿಳಿಯದಲೆ ಮುಗ್ಧನಾಗಿಹೆ ನಾನಪರಿಶುದ್ಧನೊ ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8 ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ ಹರಿಯೇ ಬಿಂಬಕ್ರಿಯವ ನಾನರಿಯದೇ ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9
--------------
ಉರಗಾದ್ರಿವಾಸವಿಠಲದಾಸರು
ಕಾಕುತ್ಸ ರಘುನಾಥ ಶ್ರೀರಾಮಚಂದ್ರ ಭೂಕಾಂತೆ ಸಿರಿವಂತೆ ಜನಕಾತ್ಮಜೇಂದ್ರ ಪ ಪಾಕ ಶಾಸನ ಕಾಯ್ದ ದಶರಥ ಕಂದ ಲೋಕನಾಯಕ ಸ್ವಾಮಿ ಭಕ್ತರಾನಂದಾ ನಂಬಿದೆ ಹರಿ ನಿನ್ನ ಚರಣಯುಗ್ಮಗಳ ನಂಬಿದ ಶ್ರೀ ಹರಿ ದಿವ್ಯ ರೂಪಗಳಾ ನಂಬಿದೆ ನಿನ್ನ ಹರಿಲೀಲೆ ಮಹಿಮ ಕೀರ್ತಿಗ¼ À ನಂಬಿದೆ ಪಾಲಿಸೋ ತರಿದು ಕಷ್ಟಗಳ 1 ಸ್ಮರಿಸುವೆ ಭಜಿಸುವೆ ಶುಭ್ರ ನಾಮಗಳ ಪರಿಪರಿ ಪೊಗಳುವೆ ನಮಿಸುವೆ ಹರಿಯ ನಿರುತದಿ ಪಾಡುವೆ ನಿನ್ನ ಸ್ತೋತ್ರಗಳ ವಿರಚಿಸಿ ಮಾಡುವೆ ಹರಿ ಕೀರ್ತನೆಗಳ 2 ಭಕ್ತನ ಲಾಲಿಸೋ ದಾನವಾಂತಕನೇ ಭಕ್ತಿಯ ಪಾಹಿಸೂಕರ ರೂಪಧರನೇ ಭಕ್ತನ ಪಾಲಿಸೋ ದೇವ ನಿರ್ಮಲನೇಮುಕ್ತಿಯ ಪಾಲಿಸೋ ಚನ್ನಕೇಶವನೇ 3
--------------
ಕರ್ಕಿ ಕೇಶವದಾಸ
ಕಾಖಂಡಕಿ ಪ್ರಸನ್ನ ವೆಂಕಟದಾಸರು ಸಿರಿ ಪ್ರಸನ್ನವೆಂಕಟನ್ನನಿರುತ ಸ್ಮರಿಪ ಕಾಖಂಡಿಕಿ ವೆಂಕಪ್ಪನವರ ಚರಣವನೆ ನೆನೆವನೆ ಧನ್ಯಾಮಾನ್ಯ ಪ ಮರುತ ಮತಾಬ್ಧಿ ಮರಕತ ಭೂಸುರಜನ್ಮ ಧರನಾಗಿಭೂಮಿಯೊಳುದಿಸಲುತರುಳತ್ವ ಕಳೆದು ತರುಣತನ ಬರಲಿನ್ನು ಅರಿವ ಕಾಣದೆ ಇರುತಿರಲುಹರಿನಾಮಾವಳಿಗಳು ಬರೆದು ಓದುವ ಭಾಗ್ಯ ಅರಿವೆನೆಂದರೆ ಬಾರದಿರಲುತೊರೆದು ಮನೆಯವರ ಗಿರಿಯಾತ್ರೆ ಮಾಳ್ಪರನನುಸರಿಸಿ ತೆರಳಿಬರುತಿರಲು 1 ವರಾಹ ಮೂರ್ತಿಯನೆ ಕಂಡಾಲಸವ ಮಾಡದಲೆಚೆನ್ನಾಗಿಝಷಕೇತು ಜನಕನ ಪುಟ್ಟಿಸಿದ ಕಾರಣವೇನು ಉಸಿರೆಂದು ಚರಣಕ್ಕೆಬಾಗಿ 2 ವಂದಿಸಿದ ಕ್ಷಣ ಸ್ವಪ್ನದಿ ಪ್ರಸನ್ನವೆಂಕಟನೆಂದು ಬರೆಯೆ ನಾಲಿಗೆಲಿನಂದದಿಂದೆಚ್ಚೆತ್ತು ಜ್ಞಾನವುದಿಸೆ ಮುಕುಂದನ ಕಂಡು ಎದೆಯಲಿಚಂದ ಚಂದದಿ ಪೊಗಳುತ್ತ ಕಂಗಳಿಂದಾ ನಂದಬಾಷ್ಪ ಸುರಿಸುತಲಿಇಂದು ಧನ್ಯನಾದೆನೆಂದು ತೋಷಾಬ್ಧಿಯ ಹೊಂದಿ ಹರಿಯಾಜ್ಞೆಯಲಿತೆರಳಿ 3 ಭಾಗವತ ಪೂರ್ವಾರ್ಧಕನ್ನಡದಿಮತಿಪೂರ್ವಕ ರಚಿಸುತಾನಂದವು ತುಳುಕು ತಿಹುದು ಕವಿತೆಯಲಿನುತಿಸಿ ದುರ್ಮತ ನಿರಾಕರಿಸಿ ಬಾಳಿ ಬಲು ಕುಲ ತತಿ ಶುದ್ಧಮಾಳ್ಪರು ಹರಿಪುರವಹೊಂದಿ 4 ಕಲಿಕಾಲದಿ ನರಹರಿ ನಾಮ ಸ್ಮರಣೆಯು ಮುಖದಿಂದ ಬರುವುದು ಅತ್ಯಸಾಧ್ಯಲಲಿತಕವನದಿ ತುತಿಸೆ ರಮಾಪತಿವಿಠಲನು ಒಲಿವನು ಇದು ಸತ್ಯಹಲವು ಮಾತೇಕಿವರು ಸುರರೇ ಸರಿ ನರರಲ್ಲ ಇದು ಸಿದ್ಧವೇ ಸಿದ್ಧಛಲದಿ ಮನುಜನೆಂಬಧಮನು ಹರಿಯಾಜ್ಞೆಯಲಿ ಬಲು ಬಲು ನರಕದೊಳು ಬೇಳುವುದುರಾದ್ಧ 5
--------------
ರಮಾಪತಿವಿಠಲರು
ಕಾಡುತಲಿಹ್ಯದು ಬೆಡಗಿನ ಕೋಡಗ ಬಡವರಿಗಳವಲ್ಲ ಪೊಡವಿಯಲಿ ಧ್ರುವ ಮಾಯದ ಮುಖವದು ಮೋಹದ ನಾಸಿಕ ಮಾಯಮಕರ ಕಿವಿಕಣ್ಣುಗಳು ಹ್ಯಾವ ಹೆಮ್ಮೆಯ ಹುಬ್ಬು ಕಪಿಕಣ್ಣಯೆವೆಗಳು ಬಾಯಿ ನಾಲಿಗೆ ಹಲ್ಲು ಬಯಕಿಗಳು 1 ಗಾತ್ರ ಸರ್ವಾಂಗವು ದುರುಳ ದುರ್ಬುದ್ಧಿಯ ಬೆರಳುಗಳು ಎರಡು ತುಟಿಗಳೆಂಬ ನಿಂದೆ ದೂಷಣಗಳು ಕೊರಳು ಕುತ್ತಿಗೆ ದುಷ್ಕರ್ಮಗಳು 2 ಹಣಿಯು ದಾಡಿಯು ಗಲ್ಲ ಪ್ರಪಂಚ ಶೋಭಿತ ಕಣ್ಣಭಾವಗಳಿವು ಚಂಚಲವು ಬಣ್ಣಬಣ್ಣದಿ ಕುಣಿದಾಡುವ ಕಪಿ ಗುಣ ಏನೆಂದ್ಹೇಳಲಿ ಕಪಿ ವಿವರಣ£ 3 ಉದರಬೆನ್ನುಗಳಿವು ಸ್ವಾರ್ಥಬುದ್ಧಿಗಳು ಮದಮತ್ಸರಗಳೆಂಬ ಕೈಗಳು ಪಾದ ಕಾಲುಗಳಿವು ಕಾಮಕ್ರೋಧಗಳು ಮೇದಿನಿಯೊಳು ಕುಣಿದಾಡುವದು 4 ಆಶಿಯೇ ಪಂಜವು ವಾಸನೆ ಬಾಲವು ಮೋಸಮೂಕರ ಗುಣಕೇಶಗಳು ಏಸು ಮಂದಿಯ ಕಪಿ ಘಾಸಿಯ ಮಾಡಿತು ಮೋಸಗೈಸಿತು ಭವಪಾಶದಲಿ 5 ಅಶನ ವ್ಯವಸನ ತೃಷಿ ಕಪಿಗಿದು ಭೂಷಣ ಮೀಸಲಾಗಿಡಿಸಿತು ಸುವಾಸದ ಹಸಗೆಡಿಸುದು ಯತಿ ಮುನಿಗಳ ತಪಸವು ಮುಸುಕಿತು ಮೋಸವು ಕಪಿಯಿಂದಲಿ 6 ಕಂಡದ್ದು ಬೇಡುತಾ ಅಂಡಲಿಯುತಿಹುದು ಮಂಡಲದೊಳು ತಾ ಕಾಡುತಲಿ ಪಿಂಡ ಬ್ರಹ್ಮಾಂಡದಿ ಲಂಭಿಸುತಿಹದು ಹಿಡದು ಬಿಡದು ಮುಷ್ಟಿಬಿರುದುಗಳು 7 ಪಂಡತನದಿ ಬಲು ಪುಂಡನಾಗಿಹದು ಹಂಡೀಗತನದಲಿ ಬಾಳುವದು ಭಂಡಿನಾ ಅಟಿಗೆ ಗಂಡಾಗಿಹುದು ಕಂಡಕಡಿಗೆ ಹರಿಡಾಡುತಲಿ 8 ಮೂಢಮಹಿಪತಿಯ ಕಾಡುವ ಕಪಿಗಿನ್ನು ಜಡಸೀದ ಗುರುಜ್ಞಾನ ಸಂಕೋಲಿಯು ಕಾಡುವ ಕಪಿಕೈಯ ಬಿಡಿಸಿದ ಗುರು ಎನ್ನ ಕಡೆಯ ಮಾಡಿದ ಬ್ರಾಹ್ಮಣ ಜನ್ಮಲಿ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಣದೆ ನಿಲ್ಲಲಾರೆ, ಕಮನೀಯ ಮೂರುತಿಯಪ್ರಾಣೇಶನ ತೋರೆ ಗಿಣಿಯೆ ಪ ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆಜಾಣೆ ಕೃಷ್ಣನ ತೋರೆ ಗಿಣಿಯೆ ಅ.ಪ. ಮಕರಕುಂಡಲಧರನ ಮಕರಧ್ವಜನ ಪಿತನಮಕುಟ ಭೂಷಣನ ತೋರೆ ಗಿಣಿಯೆಮಕರಾಕ್ಷ ಸಂಹರನ ಮಕರಾರಿ ರಕ್ಷಕನಮಕರ ಶಿಕ್ಷಕನ ತೋರೆ ಗಿಣಿಯೆ 1 ಇಂದು ರವಿಲೋಚನನಇಂದು ನೀ ಕರೆತಾರೆ ಗಿಣಿಯೆಇಂದುಶೇಖರನುತನ ಇಂದಿರೆಯರಸನತಂದು ತೋರೆ ಮುದ್ದುಗಿಣಿಯೆ2 ಒಂದು ನಿಮಿಷವೊಂದು ಯುಗವಾಗಿ ತೋರಿತೆಸೌಂದರ್ಯನ ತೋರೆ ಗಿಣಿಯೆಮಂದಮಾರುತ ಸೋಕೆ ಮರುಳುಗೊಂಡೆನೆ ಎನ್ನಮಂದಿರಕೆ ಕರೆತಾರೆ ಗಿಣಿಯೆ 3 ಕಾಯಜನ ಬಾಣದಲಿ ಕಾಯವೆಲ್ಲವು ಬಹಳಘಾಯವಾಯಿತು ನೋಡೆ ಗಿಣಿಯೆಮಾಯೆಗಳ ಮಾಡದೆ ಮಮತೆಯಿಂದಲಿ ಎನ್ನನಾಯಕನ ಕರೆತಾರೆ ಗಿಣಿಯೆ 4 ಪಂಕಜೋದ್ಭವ ಪಿತನ ಪಂಕಜನಯನನಪಂಕಜನಾಭನ ತೋರೆ ಗಿಣಿಯೆಪಂಕಜಾಕ್ಷ ಸಿರಿಕೃಷ್ಣನ ಪದಪದ್ಮಶಂಕೆಯಿಲ್ಲದೆ ತೋರೆ ಗಿಣಿಯೆ 5
--------------
ವ್ಯಾಸರಾಯರು
ಕಾಣಿ ನಿನ್ನಂಥವಳ ಪ. ಮುದ್ದು ರುಕ್ಮಿಣಿಯು ದೂತೆಗೆ ತಿದ್ದಿ ಮಾತುಗಳ ಹೇಳಿ ಬುದ್ಧಿವಂತಳೆ ರಾಯಗ ಸುದ್ದಿ ಹೇಳಮ್ಮ ಹೋಗಿ1 ಮಾನ ಮಾಡಿ ದೂತೆಗೆ ಆನೆ ಅಂಬಾರಿ ಕೊಟ್ಟುನಾನಾ ಭೂಷಣಗಳಿಟ್ಟು ತಾನು ವಸ್ತ್ರಗಳನೆ ಕೊಟ್ಟು2 ಹರದಿ ರುಕ್ಮಿಣಿಯು ದೂತೆಗೆ ತುರಗ ಬಿರುದುಗಳೆ ಕೊಟ್ಟುಎರಗಿ ಹೇಳಮ್ಮ ಅಷ್ಟು ಹಿರಿತನಗಳಟ್ಟು 3 ರಂಗ ಬಂದಿಳಿದಾನೆಂಬೊ ಮಂಗಳವಾರ್ತೆಯಸಂಗೀತಲೋಲರಾಯನ ತಂಗಿಗ್ಹೇಳಮ್ಮ ಹೋಗಿ 4 ಭರದಿ ದ್ರೌಪತಿಗೆ ಮುಯ್ಯಾ ತಿರುಗಿಸಿ ತಂದಾರೆಂದು ಎರಗಿ ಹೇಳಮ್ಮ ಮೈಯ್ಯ ಮರೆತಿರಬ್ಯಾಡಿರೆಂದು5 ಮಂದಗಮನೆಯರು ಮುಯ್ಯ ತಂದಾರೆ ತಾರಾರೆಂದು ಸಂದೇಹ ಬಿಟ್ಟು ಊಟ ಚಂದಾಗಿ ಮಾಡಿರೆಂದು6 ಧೀರರಾಯಗೆ ಮುಯ್ಯ ನಾರಿಯರು ತಂದಾರೆಂದು ಬಾರಿ ಬಾರಿಗೆ ನಮಿಸಿ ಸಾರಿ ಹೇಳಮ್ಮ ಹೋಗಿ 7 ಧಿಟ್ಟೆಯರು ಮುಯ್ಯ ಉತ್ಕøಷ್ಟದಿ ತಂದಾರೆಂದು ಕೃಷ್ಣರಾಯನ ಬಂದದ್ದಷ್ಟು ಹೇಳಮ್ಮ ಹೋಗಿ8 ಇಂದು ರಾಮೇಶನ ಮಡದಿಯರು ಬಂದರು ದ್ವಾರದಿ ಒಂದೊಂದು ಮಾತುರಾಯಗೆ ಚಂದಾಗಿ ಹೇಳಮ್ಮ ಹೋಗಿ9
--------------
ಗಲಗಲಿಅವ್ವನವರು