ಒಟ್ಟು 9343 ಕಡೆಗಳಲ್ಲಿ , 135 ದಾಸರು , 4870 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ಅರ್ಚಿಪೆನೆಂಬಾಸೆ ಘನವಯ್ಯ ಹರಿ ನಿನ್ನಮೆಚ್ಚಿಸಿ ಬದುಕುವೆನೆಂಬ ಮನದಾಸೆ ಘನವಯ್ಯಹೆಚ್ಚು ಬಾರಿ ಬಾರಿ ಎನ್ನ ಬೆಚ್ಚಿಸುವುದು ಉದರ ಕಿಚ್ಚುಕಚ್ಚುವ ಬಲು ಹುಲಿಯಂತೆಹುಚ್ಚುಮಾಡಿ ಕೊಲ್ಲುತಿದೆ ಅಚ್ಚ ಸರ್ವೋಚ್ಚನಿಚ್ಚಟದಿಂದಲಾಚ್ಯುತ ನಿನ್ನ ಮೆಚ್ಚಿಬಂದೆನು ನಾಸಚ್ಚಿದಾನಂದ ಹಯವದನಕೊಚ್ಚಿ ನಾನಾವ್ಯಾಧಿಗಳ ದುಶ್ಚಿತ್ತವ ಬಿಡಿಸು ಬೇಗಸಚ್ಚರಿತ್ರ ಸಲಹಯ್ಯ
--------------
ವಾದಿರಾಜ
ಉಗಾಭೋಗ ಏನೇನು ಪಾಟು ಬಿದ್ದರು ಮುನ್ನ ಕರ್ಮ ಬೆಂಬಿಡದಿರೆ ಶ್ರೀನಿವಾಸನÉ ನಿನ್ನಲನುಗಾಲ ಧ್ಯಾನಿಸಲೇಕೊ ಸ್ವಾಮಿ ನೀನೊಲಿದ ಮೇಲೆ ಪೂರ್ವಾಜಿತ ಕರ್ಮ ವೇನು ಮಾಡಬಲ್ಲದು ಹೀನ ಮಾನವರಿದನರಿಯದೆ ನಾನಾ ಪ್ರಕಾರದಿ ತೊಳಲುವರು ಶ್ವಾನನಂದದಿ ಭವದೊಳಗೆ ನಿನ್ನ ಮರೆದು ಏನು ಕಷ್ಟ ಬಂದರೂ ಬರಲಿ ನಾ ನಿನ್ನ ಮರೆಯೆನೊ ದೇವರದೇವ ಸಾನುರಾಗದಿ ಸಲಹೆನ್ನ ಶ್ರೀನಿಧಿ ರಂಗೇಶವಿಠಲ
--------------
ರಂಗೇಶವಿಠಲದಾಸರು
ಉಗಾಭೋಗ ಚಿಕ್ಕ ಮಗುವಾದ ಪ್ರಹ್ಲಾದ ದೇವನನು ರಕ್ಕಸನು ಪಿಡಿದತಿ ಹಿಂಸೆಪಡಿಸುವದ ನೋಡಿ ಉಕ್ಕಿಬರುತಿಹ ಕೋಪದಿಂ ಕಿಡಿಕಿಡಿಯಾಗಿ ಉಕ್ಕಿನ ಕಂಬದಿಂ ಉರಿಯ ಕಾರುತ ಬಂದು ಪಕ್ಕಿದೇರನು ಹಿರಣ್ಯಕಶಿಪನ ಪಿಡಿದು ತಾ ಉರ ಬಗೆದು ಕರುಳ ಮಾಲೆಯ ಗಕ್ಕನೆ ಗಳಕಿಕ್ಕಿಕೊಂಡು ಆರ್ಭಟಿಸಿದಂದು ಲಕ್ಕುಮಿಯಾದಿಯಾಗಿ ಮುಕ್ಕೋಟಿ ದೇವತೆಗಳು ಬೆದರಿ ದಿಕ್ಕೆಟ್ಟು ಗಡ ಗಡ ನಡುಗುತಿರಲಾಗ ಅಕ್ಕರದ ಭಕುತ ಪ್ರಹ್ಲಾದ ಬರೆ ಬಿಗಿಯಪ್ಪಿ ತಕ್ಕೈಸಿ ಮುಂಡಾಡಿ ಪ್ರಸನ್ನನಾದನು ತನ್ನ ಭಕ್ತರೊಳಿನ್ನೆಷ್ಟು ಪ್ರೀತಿಯೋ ರಂಗೇಶವಿಠಲಗೆ
--------------
ರಂಗೇಶವಿಠಲದಾಸರು
ಉಗಾಭೋಗ ಪರಿಪರಿ ದೇಹ ಧರಿಸಿ ನರ ಜನ್ಮದಲಿ ಬಂದು ಕರಕರೆ ಪಡುತಲಿ ಇರುವ ಮಾನವರೊಳು ಅರಿತು ಸಾತ್ವಿಕರನು ಕರದು ಬುದ್ಧಿಯ ಪೇಳೆ ಹರಿಯ ಪಾದವ ತೋರ್ವ ಗುರುವು ಒಬ್ಬರು ಬೇಕು ಪರಮಪ್ರಿಯರು ಇವರು ಅರಿವರು ಸಾತ್ವಿಕರ ಕರದು ಉಪದೇಶವಿತ್ತು ಉದ್ಧಾರ ಮಾಡುವರು ಚರಿತೆಯ ವರ್ಣಿಸಲು ನರರಿಗೆ ಸಾಧ್ಯವಲ್ಲ ನರಹರಿಯೆ ಬಲ್ಲ ಉರಗಾಖ್ಯರ ಮಹಿಮೆ ವರಭಕ್ತರಾಗಿ ಹರಿಗೆ ಶರಣು ಹೊಕ್ಕವರನು ಕರುಣೆಯಿಂ ಸ್ವರೂಪವರಿತು ಉದ್ಧರಿಪರು ಪರತರ ಗೋಪಾಲಕೃಷ್ಣವಿಠ್ಠಲನ ಚರಣವ ತೋರುವರು ವರ ತಂದೆ ಮುದ್ದುಮೋಹನರು
--------------
ಅಂಬಾಬಾಯಿ
ಉಗಾಭೋಗ ಬಡವನಾದವನ ಭವಮಡುವಿನೊಳಗೆನೂಕಿ ಮಿಡುಕಿಸೀನೋಡುವುದು ಥರವೇನೋ ಒಡಲಿಗೋಸುಗ ನಿನ್ನ ಬೇಡ ಬಂದವನಲ್ಲ ದೃಢಭಕ್ತಿ ಜ್ಞಾನಕೊಟ್ಟು ರಕ್ಷಿಸೋಧೊರಿಯೆ ಕಡಲಶಯನ ನಮ್ಮ ಮುದ್ದುಮೋಹನವಿಠಲ ಗಾಢರತಿಯ ಪಾಲಿಸು ಸುಲಭದಿಂದಾ
--------------
ಮುದ್ದುಮೋಹನವಿಠಲದಾಸರು
ಉಗಾಭೋಗ ಭಕ್ತಿದಾಯಕ ಕೇಳೊ ನಿನ್ನನು ಒಲಿಸಲು ಶಕ್ತಿ ಎನಗೆ ಇಲ್ಲ ಸರ್ವೇಶ್ವರ ಭಕ್ತಿಪಾಶದಿ ನಿನ್ನನುಕ್ತಿಯಿಂದಲಿ ಬಿಗಿವೆ ಮುಕ್ತಿಗೊಡೆಯ ಹೃದಯ ಮಧ್ಯದಿ ಬಂಧಿಸುವೆ ಶಕ್ತಿ ನಿನಗಿಲ್ಲ ಬಿಡಿಸಿಕೊಳ್ಳಲು ಇನ್ನು ಯುಕ್ತಾಯುಕ್ತ ತಿಳಿಸಿ ಉದ್ಧರಿಸಬೇಕಿನ್ನು ಶಕ್ತನಿಲ್ಲವೊ ನಿನಗೆ ಸರಿ ಜಗದೊಳು ಮಹ ಸಿರಿ ಗೋಪಾಲಕೃಷ್ಣವಿಠ್ಠಲಾ
--------------
ಅಂಬಾಬಾಯಿ
ಉಗಾಭೋಗ ಹತ್ತಾವತಾರದಿಂದ ಹರಿಯೆ ಕೊಂಡಾಡು ಪಾಡು ಚಿತ್ತಾಭಿಮಾನಿ ಮುನಿಗೆ ವಲಿದು ಬಂದವನೆನ್ನು ನಿತ್ಯ ಉಡುಪಿಲಿ ನಿಂದು ನಿಜ ಜನರನ್ನು ಕಾಯ್ವ ಸ್ತುತ್ಯ ಗೋಪಾಲಕೃಷ್ಣವಿಠ್ಠಲನಿವನೆನ್ನೊ
--------------
ಅಂಬಾಬಾಯಿ
ಉಡುಪಿ ದೃಷ್ಟಿ ಇದ್ಯಾತಕೆ ಉಡುಪಿ ಕೃಷ್ಣನ್ನ ನೋಡದ ಪ ಗೋಪಿಯರ ಪೂಜೆ ಗ್ರಹಿಸಿ ಗೋಪಿಚಂದನ ಸಹಿತವಾಗಿ ವ್ಯಾಪಾರದ ಹಡಗೀಲಿ ಬಂದ ಶ್ರೀಪತಿಯ ನೋಡದ 1 ಮಧ್ವರಾಯರಿಗೊಲಿದು ಬಂದು ಸಮುದ್ರತೀರದಲ್ಲಿ ನಿಂದು ಪದ್ಮನಾಭನಪುರದಿ ನೆಲಸಿದ ಮುದ್ದು ಶ್ರೀಕೃಷ್ಣನ್ನ ನೋಡದ 2 ದುಷ್ಟವಾದ ದೇಶವನೆಲ್ಲಾ ಶ್ರೇಷ್ಠ ಮಾಡಿದ ಕೃಷ್ಣನ್ನ ನೊಡದ 3 ಶುದ್ದವಾದ ಗೋವುಘೃತವು ಕ್ಷೀರ ಸಕ್ಕರೆ ಮಧುವು ದಧೀ ನಾರಿಕೇಳ ಫಲಗಳಿಂದ ಮಿಂದ ಶ್ರೀಕೃಷ್ಣನ್ನ ನೋಡದ 4 ಉದ್ದಂಡವಾದ ಉರನಲ್ಲಿ ಭೂಮಂಡಲನಾಳ್ವ ಶಿರವನಿಟ್ಟು ಕೊಂಡೆ ಮಕರಿತು ಚೆಂಡು ಧರಿಸಿದ ಪುಂಡರೀಕಾಕ್ಷನ್ನ ನೋಡದ 5 ಪಾನಪಟ್ಟಿ ಮುತ್ತಿನಬಟ್ಟು ಮೂಗುತಿಯನಳವಟ್ಟು ವಜ್ರದ ಕರ್ಣಕುಂಡಲವನಿಟ್ಟು ಅರ್ಜುನಸಾರಥಿಯ ನೋಡದ 6 ವೈಜಯಂತಿ [ನವ] ಹಾರಪದಕ ಸರಗಳಿಟ್ಟ ವಾರಿಜನಾಭನ ನೋಡದ 7 ಕಡೆಗೋಲ ಬಲದ ಕೈಲಿ ಎಡದ ಕೈಯ ತೊಡೆಯೊಳಿಟ್ಟು ಉಡುದಾರ ಗೆಜ್ಜೆಯನಿಟ್ಟ ಪೊಡವಿಗೀಶ್ವರನ್ನ ನೋಡದ 8 ಅಂದುಗೆ ಗೆಜ್ಜೆನಿಟ್ಟು ಕುಂದಣದಾವುಗೆಯ ಮೆಟ್ಟಿ ಆ ನಂದದಿಂದ ಗಂಗೆ ಪಡೆದ ಇಂದಿರೇಶನ ಪಾದವ ನೋಡದ 9 ಸಂಸಾರದಗ್ನಿಯಲ್ಲಿ ಬೆಂದು ನೊಂದುಬಂದ ಭಕ್ತರ ಚರಣವೆಂ ಬೊ ಶರಧಿಯಲ್ಲಿ ಭರದಲಿರುವ ಹರಿಯ ನೋಡದ 10 ದುರುಳ ಶಕಟನನ್ನು ತುಳಿದ ವರದ ವೆಂಕಟಕೃಷ್ಣನ್ನ ನೋಡದ 11
--------------
ಯದುಗಿರಿಯಮ್ಮ
ಉಡುಪಿ ಪರಿಸರದ ದೇವತೆಗಳು ಕಣ್ವ ಋಷಿ ತಪಗೈದ ಅಜ್ಜರ್ಕಾಡೆಂಬಲ್ಲಿ ಅವನಿಗೊಲಿದಿರುವ ದುರ್ಗೆ ವಾಸವಾಗಿಹಳು ಒಳಕಾಡು ಎಂಬ ತಾನವೆ ಚಂದ್ರನ ತಪೋ ಭೂಮಿ ಇಲ್ಲಿಯೇ ಸಕಲ ವಿದ್ಯಾಲಯವಾಯ್ತು 132 ಬೆಳ್ಳಿ ಮಂಚದ ಕಾಲುಗಳು ನಾಲ್ಕು ಎಂಬಂತೆ ಆರ್ಮೊಗನ ರೂಪಗಳು ನಾಲ್ಕು ದೆಸೆಗಳಲಿ ಮಾಂಗೋಡು ತಾಂಗೋಡು ಆರಿತೋಡು ಮುಚ್ಲಿಕೋಡು ನಾಮದಿಂ ಬೆಳಗುವವು ಷಷ್ಠಿದಿನದಂದು 133 ಕಡಿಯಾಳಿ ಎಂಬಲ್ಲಿ ಮಹಿಷಮರ್ದಿನಿಯಾಗಿ ದುರ್ಗಾಲಯವು ಉಡುಪಿ ಪೂರ್ವದ್ವಾರದಲ್ಲಿ ಪುತ್ತೂರು ಬೈಲೂರು ಬಡಗು ತೆಂಕು ದೆಸೆಯಲ್ಲಿ ಕೃಷ್ಣ ಸೇವೆಗೆ ದುರ್ಗೆ ಕಟಿಬದ್ಧಳಿಹಳು 134 ಸತ್ಯ ನುಡಿಯಲ್ಲಿರಲಿ ಧರ್ಮ ನಡೆಯಲ್ಲಿರಲಿ ಸ್ವಾಧ್ಯಾಯದಲಿ ಎನಗೆ ಎಚ್ಚರವದಿರಲಿ ಅಜ್ಞಾನದಂಧಕಾರದ ದಿಕ್ಕಿನಿಂದೆನ್ನ ನಿನ್ನ ಬೆಳಕಿನ ಕಡೆಗೆ ಕರೆದೊಯ್ಯು ದೇವಾ 135 ಪರಶುರಾಮಕ್ಷೇತ್ರ ಹುಟ್ಟುಭೂಮಿಯು ಎನಗೆ ಪರಶುರಾಮನು ನೀನೆ ನಿನ್ನ ಕ್ಷೇತ್ರವಿದು ಪರಮಹಂಸಾಖ್ಯಯತಿಗಳ ಮಾನಸಹಂಸ ಸೋಹಂ ಎನ್ನುವ ಬ್ರಹ್ಮ ಎನ್ನೊಳಗೆ ಇರುವೆ 136 ಕೃಷ್ಣಾರ್ಪಣವದಿಲ್ಲದಾವುದು ಫಲ ಕೊಡದು ಅದರಿಂದ ಕೃಷ್ಣನಿಗೆ ಕೃತಿಯನರ್ಪಿಸುತ ಸಾಲೋಕ್ಯ ಸಾಮೀಪ್ಯವನ್ನು ಬಯಸುವೆ ನಾನು ಯೋಗ್ಯತಾನುಗುಣವಾಗಿ ಫಲವ ಕೊಡು ಹರಿಯೆ137 ಪರಶುರಾಮನು ರಾಮ ಪರಶು ರಾಮನು ಕೃಷ್ಣ ರಾಮದಾಸನು ನಾನು ಕೃಷ್ಣದಾಸನಿಹೆ ಬರೆದ ಕೃತಿಯಿಂದ ನೀನ್ ಸುಪ್ರಸನ್ನತೆ ಪಡೆದು ಭಕ್ತಿ ಮುಕ್ತಿಗಳ ಕೊಟ್ಟು ರಕ್ಷಿಸು ಶ್ರೀಶ 138 ಉಡುಪಾನ್ವಯಜ ನಾನು ಉಡುಪಾನ್ವಯದ ನೀನು ಉಡುಪಿ ಹುಟ್ಟೂರೆನಗೆ ನೀನುಡುಪಿಗತಿಥಿ ಮಧ್ವ ಹೃದಯವು ನಿನಗೆ ವಾಸದ ಸ್ಥಾನವಿರೆ ಮಾಧ್ವಕೋಟಿಗಳಲ್ಲಿ ಕೀಟನಾಗಿಹೆ ನಾನು 139 ವಿಷ್ಣು ಪದದೊಳಗಿರುವ ಜ್ಯೋತಿಲೋಕದ ಒಡೆಯ ಆ ಜ್ಯೋತಿಲೋಕಕ್ಕೆ ಕರೆದೊಯ್ಯುತ ನನ್ನ ಭಕುತರಿಗೆ ಮುಕುತಿ ಕೊಡುವುದೆ ನಿನ್ನ ಸಂಕಲ್ಪ ಅದರಿಂದ ನಿನ್ನನ್ನು ಶರಣು ಶರಣೆಂಬೆ 140 ಚಾಂದ್ರಮಾನದ ಪಿಂಗಳಾಖ್ಯ ಸಂವತ್ಸರದಿ ಚೈತ್ರ ಮಾಸದ ನವಮಿಯ ದಿನದಲ್ಲಿ ಕಾಲ ಇದನರ್ಪಿಸುತ ನಾನು ಕೃತಕೃತ್ಯನಾದೆ ಶ್ರೀಕೃಷ್ಣ ಕಾಪಾಡು 141
--------------
ನಿಡಂಬೂರು ರಾಮದಾಸ
ಉಡುಪಿನ ರಂಗ ಕಲ್ಲುಕಂಬದಿಂದೊಡೆದ ನರಸಿಂಹಬಿಡದೆಮ್ಮ ಸಲಹೊ ಕೈವಿಡಿ ಇನ್ನೇಕೆ ತಡವೊ ಪ. ಕರೆಯದೇ ಮುನ್ನ ಬಂದೆ ಖಳನಿದಿರಲಿ ನಿಂದೆಅರಿಯುದರವ ಸೀಳ್ದೆ ಅಸಮನೆನಿಸಿ ಬಾಳ್ದೆ1 ಎನಗೆ ನೀನೆ ಬಂಧು ಎಲೆಲೆ ಕರುಣಾಸಿಂಧುಧನದಾಸೆಯ ಬಿಡಿಸೊ ಧರ್ಮಮಾರ್ಗದಿ ನಡೆಸೊ 2 ಹಯವದನನಾಗಿ ಹರಿ ನೀ ದೈತ್ಯರ ನೀಗಿನಯದಿ ವೇದವ ತಂದೆ ನಳಿನನಾಭನೇನೆಂಬೆ3
--------------
ವಾದಿರಾಜ
ಉಡುಪಿಯ ಶ್ರೀಕೃಷ್ಣ ನುಡಿಯ ಲಾಲಿಸು ಮಾಧವ ನುಡಿಯ ಲಾಲಿಸು ಪಾಲಕಡಲಶಯನ ದೇವ ಕಡಗೋಲ ಪಿಡಿದ ನಮ್ಮುಡುಪಿಯ ಶ್ರೀಕೃಷ್ಣ ಪ. ಮಾನವ ಮದವನ್ನು ಮಸರಂತೆ ಮಥಿಸಿದ ಭಾವನ ತೋರುವಿಯೊ ಹಾಗಲ್ಲದಿದ್ದರೆ ದೇವತಗಳಿಗಮೃತವನುಣಿಸಿದನೆಂಬ ಸೋವನು ಸೂಚಿಪೆಯೊ ಸೌಭಾಗ್ಯ ಸಿರಿಯೊ ಸೇವಕರ ಸೇವಾನುಗುಣಫಲ ನೀವ ತರತಮ ಭಾವವೊ ಭವ ನಾವ ನಡೆಸುವ ನಿಪುಣತೆಯೊ ದುರಿ ತಾವಳಿಯ ದೂರೋಡಿಸುವೆಯೊ1 ಕಲಿಯ ಬಲದಿ ಜ್ಞಾನಕಲೆಯಡಗಲು ದೇವ- ರ್ಕಳು ಬಂದು ಸ್ತುತಿಸಲಂದು ಸಕಲಸುರ ತಿಲಕ ವಾಯುವಿನ ಭೂವಲಯದೊಳವ- ಗೊಳುವರೆ ಪೇಳ್ವೆನೆಂದು ನೀ ಮನಕೆ ತಂದು ಹಲವು ಭವದಲಿ ಭಜಿಪೆ ಸಜ್ಜನ ಕುಲಕೆ ಮೋಕ್ಷಾಂತದ ಚತುರ್ವಿಧ ಫಲವ ನೀಡುವೆನೆಂದು ಪವನನಿ- ಗೊಲಿದು ಬಂದೀ ನಿಲಯದೊಳಗಿಹೆ 2 ಸರ್ವಜ್ಞ ಮುನಿಕೃತ ಸಕಲ ಪೂಜೆಗಳನ್ನು ನಿವ್ರ್ಯಾಜದಲಿ ಕೊಳ್ಳುತ ನಿರ್ವಾಹಗೊಳುತ ದುರ್ವಾದಿಪಟಲಾದ್ರಿ ಗರ್ವಾಪಹರ ಶತ ಪರ್ವ ಶಾಸ್ತ್ರವ ಕೇಳುತ ಸಂತೋಷಪಡುತಾ ಪೂರ್ವಸುಪರ್ವ ರಿಪುಗಳ ನಿರ್ವಿಯೊಳಗಡಿಯಿಡಗೊಡದ ಸುರ ಸಾರ್ವಭೌಮ ಶುಭೋನ್ನತಿ ಪ್ರದ 3 ಶ್ರೀನಿಕೇತನ ಸರ್ವ ಪುರುಷಾರ್ಥದಾಯಿಯೆ ನೀನೆಲ್ಲೆ ನೆಲೆಯದೋರಿ ಇರಲಿನ್ನು ಭಜಿಸದೆ ನಾನಾ ದೈವಗಳ ಸೇರಿ ಹಲ್ಲುಗಳ ತೋರಿ ಏನನುಸುರುವೆ ಕೃಷ್ಣ ಬುದ್ಧಿ ವಿ- ಹೀನತೆಯನದನೊ ಮಾನಿಸೆನ್ನ ಕಡಪಾನಿಧಿಯೆ ಪವ- ಪಾದ ಪಲ್ಲವ 4 ದ್ವಾರಾವತಿಯೊಳು ಸಂಸಾರಿ ಭಾವವನೆಲ್ಲ ತೋರಿದ ಕಾರಣದಿ ಅಲ್ಲಿಂದ ಭರದೀ ವಾರುಧಿ ಮಾರ್ಗದ ಸ್ವಾರಿಯ ನೆವನದಿ ಪಾರಿವ್ರಾಜರ ಸೇರಿದಿ ತದ್ಭಕ್ತಿಗೊಲಿದಿ ದೂರ ಭಯದಲಿ ವೆಂಕಟಾದ್ರಿಗೆ ಬಾರದಿಹ ಸಜ್ಜನರ ಮೇಲ್ಕರು- ಣಾರಸಾಮೃತ ಸೂಸುತ್ತಿಲ್ಲಿ ಸರೋರುಹಸ್ಮಿತ ಮುಖ ತೋರುವಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಉತ್ಥಾನ ದ್ವಾದಶಿಯ ದಿವಸ (ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ) ರಂಭೆ ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ. ಮಾನಿನೀಮಣಿ ಈತನ್ಯಾರೆ ಕರು ಣಾನಿಧಿಯಂತಿಹ ನೀರೆ ಹಾ ಹಾ ಭಾನುಸಹಸ್ರ ಸಮಾನಭಾಷಿತ ಮ- ಹಾನುಭಾವನು ಸುಪ್ರವೀಣನಾಗಿಹ ಕಾಣೆ 1 ಭಯಭಕ್ತಿಯಿಂದಾಶ್ರಿತರು ಕಾಣಿ- ಕೆಯನಿತ್ತು ನುತಿಸಿ ಪಾಡಿದರು ನಿರಾ- ಮಯ ನೀನೇ ಗತಿಯೆಂದೆಲ್ಲವರು ಹಾ ಹಾ ಭಯನಿವಾರಣ ಜಯ ಜಯವೆಂದು ನುತಿಸೆ ನಿ- ರ್ಭಯ ಹಸ್ತ ತೋರುತ ದಯಮಾಡಿ ಪೊರಟನೆ2 ಭೂರಿ ವಿಪ್ರರ ವೇದ ಘೋಷದಿಂದ ಸ್ವಾರಿಗೆ ಪೊರಟ ವಿಲಾಸ ಕೌಸ್ತು- ಚಾರುಕಿರೀಟಕೇಯೂರಪದಕಮುಕ್ತಾ ಹಾರಾಲಂಕಾರ ಶೃಂಗಾರನಾಗಿರುವನು3 ಸೀಗುರಿ ಛತ್ರ ಚಾಮರದ ಸಮ ವಾಗಿ ನಿಂದಿರುವ ತೋರಣದ ರಾಜ ಭೋಗ ನಿಶಾನಿಯ ಬಿರುದ ಹಾ ಹಾ ಮಾಗಧ ಸೂತ ಮುಖ್ಯಾದಿ ಪಾಠಕರ ಸ- ರಾಗ ಕೈವಾರದಿ ಸಾಗಿ ಬರುವ ಕಾಣೆ4 ಮುಂದಣದಲಿ ಶೋಭಿಸುವ ಜನ ಸಂದಣಿಗಳ ಮಧ್ಯೆ ಮೆರೆವ ತಾರಾ ವೃಂದೇಂದುವಂತೆ ಕಾಣಿಸುವ ಹಾಹಾ ಕುಂದಣ ಖಚಿತವಾದಂದಣವೇರಿ ಸಾ- ನಂದದಿ ಬರುವನು ಮಂದಹಾಸವ ಬೀರಿ5 ತಾಳ ಮೃದಂಗದ ರವದಿ ಶ್ರುತಿ ವಾಲಗ ಭೇರಿ ರಭಸದಿ ಜನ ಜಾಲ ಕೂಡಿರುವ ಮೋಹರದಿ ಹಾಹಾ ಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ- ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6 ಊರ್ವಶಿ:ಈತನೆ ಭಾಗ್ಯನಿಧಿ ನೋಡೆ ನೀ ಮುದದಿಪ. ಈತನೆ ಈರೇಳು ಲೋಕದ ದಾತ ನಾರಾಯಣ ಮಹಾ ಪುರು- ವಿನುತ ನಿ- ರ್ಭೀತ ನಿರ್ಗುಣ ಚೇತನಾತ್ಮಕಅ.ಪ. ಮಂದರ ಪೊತ್ತ ಭೂನಿತಂಬಿನಿಯ ಪ್ರೀತ ಮಾನವಮೃಗಾಧಿಪ ತ್ರಿವಿಕ್ರಮ ದಾನಶಾಲಿ ದಶಾನನಾರಿ ನ- ವೀನ ವೇಣುವಿನೋದ ದೃಢ ನಿ- ರ್ವಾಣ ಪ್ರವುಢ ದಯಾನಿಧಿ ಸಖಿ 1 ವಾರಿಜಾಸವಾನವಂದಿತ ಶ್ರೀಪಾದಯುಗ್ಮವ ತೋರಿಕೊಂಬುವ ಸಂತತ ಕೇರಿಕೇರಿಯ ಮನೆಗಳಲಿ ದಿ- ವ್ಯಾರತಿಯ ಶೃಂಗಾರ ಭಕ್ತರ- ನಾರತದಿ ಉದ್ಧಾರಗೈಯಲು ಸ್ವಾರಿ ಪೊರಟನು ಮಾರಜನಕನು 2 ಮುಗುದೆ ನೀ ನೋಡಿದನು ಕಾಣಿಕೆಯ ಕ- ಪ್ಪಗಳ ಕೊಳ್ಳುವನು ತಾನು ಬಗೆಬಗೆಯ ಕಟ್ಟೆಯೊಳು ಮಂಡಿಸಿ ಮಿಗಿಲು ಶರಣಾಗತರ ಮನಸಿನ ಬಗೆಯನೆಲ್ಲವ ಸಲ್ಲಿಸಿ ಕರುಣಾ ಳುಗಳ ದೇವನು ಕರುಣಿಸುವ ನೋಡೆ3 ರಂಭೆ :ದೃಢವಾಯಿತೆಲೆ ನಿನ್ನ ನುಡಿಯು ಸುರ ಗಡಣ ಓಲಗಕೆ ಇಮ್ಮಡಿಯು ಜನ- ರೊಡಗೂಡಿ ಬರುತಿಹ ನಡೆಯು ಹಾ ಹಾ ಮೃಡ ಸರೋಜ ಸುರಗಡಣ ವಂದಿತ ಕ್ಷೀರ ಕಡಲ ಶಯನ ಜಗದೊಡೆಯನಹುದು ಕಾಣೆ1 ಮದಗಜಗಮನೆ ನೀ ಪೇಳೆ ದೇವ ಸದನವ ಪೊರಡುವ ಮೊದಲೇ ಚಂದ- ನದ ಪಲ್ಲಂಕಿಯ ತಂದು ಮ್ಯಾಲೆ ಹಾ ಹಾ ಮುದದಿಂದ ಬಾಲಕರೊದಗಿ ಸಂತೋಷದಿ ಚದುರತನದಿ ಪೋಗುವನು ಪೇಳೆಲೆ ನೀರೆ2 ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವ ಶ್ರೀರಮಾಧವನ ಲೀಲೆ ಘೋರ ದೈತ್ಯಕುಠಾರ ಲಕ್ಷ್ಮೀ ನಾರಾಯಣನ ಬಲಕರ ಸರೋಜದಿ ಸೇರಿ ಕುಳಿತ ಗಂಭೀರ ದಿನಪನ ಭೂರಿತೇಜದಿ ಮೆರೆವುದದು ತಿಳಿ1 ದೊರೆಯು ಬರುವನು ಎಂದು ಎಲ್ಲರಿಗೆ ಗೋ- ಚರಿಸುವನೊಲಿದು ಇಂದು ತರ ತರದ ಆರತಿಗಳನು ನೀವ್ ಧರಿಸಿ ನಿಂದಿರಿಯೆಂದು ಜನರಿಗೆ- ಚ್ಚರಿಗೆಗೋಸುಗ ಮನದ ಭಯವಪ- ಹರಿಸಿ ಬೇಗದಿ ಪೊರಟು ಬಂದುದು ರಂಭೆ :ಸರಸಿಜನಯನೆ ನೀ ಪೇಳೆ ಸೂರ್ಯ ಕಿರಣದಂತಿಹುದೆಲೆ ಬಾಲೆ ಸುತ್ತಿ ಗೆರಕವಾಗಿಹುದು ಸುಶೀಲೆ ಆಹಾ ಹರಿಯ ವೈಕುಂಠ ನಗರದಂತೆ ಜ್ಯೋತಿ ವಿ- ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1 ಊರ್ವಶಿ:ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧ ದ್ವಾದಶಿಯೊಳಗೆ ಬಾಲೆ ಮಾಧವನ ಪ್ರೀತ್ಯರ್ಥವಾಗಿ ಶು- ಭೋದಯದಿ ಸಾಲಾಗಿ ದೀಪಾ ರಾಧನೆಯ ಉತ್ಸಹದ ಮಹಿಮೆಯ ಸಾದರದಿ ನೀ ನೋಡೆ ಸುಮನದಿ1 ನಿಗಮಾಗಮದ ಘೋಷದಿ ಸಾನಂದ ಸು- ತ್ತುಗಳ ಬರುವ ಮೋದದಿ ಬಗೆ ಬಗೆಯ ನರ್ತನ ಸಂಗೀತಾ ದಿಗಳ ಲೋಲೋಪ್ತಿಯ ಮನೋಹರ ದುಗುಮಿಗೆಯ ಪಲ್ಲಂಕಿಯೊಳು ಕಿರು2 ನಗೆಯ ಸೂಸುತ ನಗಧರನು ಬಹ ಚಪಲಾಕ್ಷಿ ಕೇಳೆ ಈ ವಸಂತ ಮಂ- ಟಪದಿ ಮಂಡಿಸಿದ ಬೇಗ ಅಪರಿಮಿತ ಸಂಗೀತ ಗಾನ ಲೋ- ಲುಪನು ಭಕ್ತರ ಮೇಲೆ ಕರುಣದಿ ಕೃಪೆಯ ಬೀರಿ ನಿರುಪಮ ಮಂಗಲ ಉಪಯಿತನು ತಾನೆನಿಸಿ ಮೆರೆವನು3 ಪಂಕಜಮುಖಿ ನೀ ಕೇಳೆ ಇದೆಲ್ಲವು ವೆಂಕಟೇಶ್ವರನ ಲೀಲೆ ಶಂಕರಾಪ್ತನು ಸಕಲ ಭಕ್ತಾ ಕರ ಚ ಕ್ರಾಂಕಿತನು ವೃಂದಾವನದಿ ನಿ ಶ್ಯಂಕದಿಂ ಪೂಜೆಯಗೊಂಡನು4 ಕಂತುಜನಕನಾಮೇಲೆ ಸಾದರದಿ ಗೃ- ಹಾಂತರಗೈದ ಬಾಲೆ ಚಿಂತಿತಾರ್ಥವನೀವ ಲಕ್ಷ್ಮೀ ಕಾಂತ ನಾರಾಯಣನು ಭಕುತರ ತಿಂಥಿಣಿಗೆ ಪ್ರಸಾದವಿತ್ತೇ- ಕಾಂತ ಸೇವೆಗೆ ನಿಂತ ಮಾಧವ5
--------------
ತುಪಾಕಿ ವೆಂಕಟರಮಣಾಚಾರ್ಯ
ಉತ್ಸವದಲಾಹ್ನಿಕವ ಕಡು ಜನರು ಕೇಳಿರಯ್ಯ ಪ. ಅರುಣ ಉದಯದೊಳೆದ್ದು ಆ ದ್ವಾರಪಾಲಕರುಭರದೆ ಘಂಟೆ ಸುವಿಘ್ನ ಮಾಡೆತರತರದ ಹರಿದಾಸರು ತಾಳ ಮೇಳಗಳಿಂದಪರಿಪರಿಯ ಗಾನ ಪಾಡೆ ತ್ವರಿತ ವಾದ್ಯಗಳಿಂದ ತರುವಾಯ ಭೋರಿಡೆ ಮುರಹರನುಪ್ಪವಡಿಸೆತರುಣ ಯತಿಗಳು ಎದ್ದು ಸ್ನಾನ ಜಪಗಳ ಮಾಡಿನಿರುತ ಶಂಖ ಭ್ರಮಣೆ ಮಾಡೆ ನೀಟಾಗಿಒಪ್ಪುತಿಹ ಉಡುಪಿಯ ಶ್ರೀಕೃಷ್ಣನ 1 ಘೃತ ನೆನೆಕಡಲೆಯುಶುದ್ಧಾದ ಪಾಲ್ಮೊಸರು ಶುಂಠಿ ಸಕ್ಕರೆಲಡ್ಡಿಗೆತಂದ ನೈವೇದ್ಯವ ಸವಿದು ತಾ ಪೂಜೆ ಮಾಡಿಸಿಕೊಂಬ 2 ಪದ್ಮನಾಭಗೆ ಬೇಗ ಪುರುಷಸೂಕ್ತದಭಿಷೇಕಮುದದಿಂದ ಮಾಡಿದ ಬಳಿಕವಿಧಿಯ ಪೂರ್ವಕವಾಗಿ ಅಗಿಲು ಗಂಧ ತುಲಸಿಮಾಲೆಅಧಿಕವಾಗಿ ಸಮರ್ಪಿಸಿ ಒದಗಿದ್ದ ಶುಂಠಿ ಬೆಲ್ಲ ಒಳಿತಾದ ಅನ್ನ ಸೂಪದಧಿ ಕ್ಷೀರ ಕದಳಿಫಲವು ಮುರಮರ್ದನನುಚೆಲುವ ತಾ ಹಂಸಪೂಜೆಯ ಕೊಂಬ ತದನಂತರದಲಿ ಮೃತ್ತಿಕೆಯ ತಾ ಗಣಿಯಕಟ್ಟಿಸಿಕೊಂಬ 3 ದಧಿ ದಿವ್ಯ ಮಧು ಸಕ್ಕರೆ ಸೀಯಾಳವು ಇಂ-ದಿರೇಶಗೆ ಬೇಗ ಶಿರದ ಮೇಲ-ಭಿಷೇಕ ಮುದದಿಂದ ಮಾಡಿದ ಬಳಿಕತಿರುಗಿ ನೈವೇದ್ಯವನು ತೀವ್ರದಿಂದಲೆ ಸ-ಮರ್ಪಿಸಿ ಚೆಲುವ ಮಂಗಳಾರತಿಯಿಂದಪಂಚಾಮೃತದ ಪೂಜೆಗೊಂಬ 4 ಜಲಜನಾಭಗೆ ಉಷ್ಣಜಲವ ತಂದ್ಹದ ಮಾಡಿಲಲಿತವಾಗಿ ಎರೆಯುತಒಳಿತಾದ ಹೆಸರ್ಹಿಟ್ಟಿನಲಿ ಒರೆಸಿ ಮೈಯನೆತೊಳೆದು ಸುಲಭಗೆ ಪಾಲನುಣಿಸಿ ಬಳಿಕಬಾಲಉಡಿಗೆಯಿಟ್ಟು ಬಹುನೈವೇದ್ಯವನರ್ಪಿಸಿಚೆಲುವ ಉದ್ವಾರ್ಚನೆ ಪೂಜೆಚೆಂದಾಗಿ ಮಾಡಿಸಿಕೊಂಬ 5 ಮಧ್ವ ಸರೋವರಜಲವು ಹೊಳೆವÀ ಚಿನ್ನ ಕಲಶÀದಲಿಶುದ್ಧದಲಿ ಶೋಧಿಸಿ ತುಂಬಿಸಿಬದ್ಧ ಘಂಟೆನಾದದಲಿ ಬಹುಬೇಗದಲಿಬಂದು ಸನ್ನಿಧಿಯಲಿ ಪೂಜಿಸಿವಿಧುರಥನೆ ಶಂಕರಥನೆ ಪುರುಷಸೂಕ್ತÀದಭಿಷೇಕಮುದದಿಂದ ಮಾಡಿದ ಬಳಿಕ ಸಜ್ಜಿ ಘೃತದೋಸೆ ಬೆಣ್ಣೆ ಸಾರು ನೈವೇದ್ಯವ ಸವಿದು ಚೆಲುವಮಂಗಳಾರತಿಯಿಂದ ಮುದದಿ ತೀರ್ಥಪೂಜೆಗೊಂಬ 6 ಉರು ಪದಕಾಭರಂಣಗಳು ಉನ್ನಂತತೋಳ್ಬಂದಿಕರಮುದ್ರೆ ಕಂಕಣಗಳು ಚರಣಾರವಿಂದಗಳಿಗೆ ಚಾರುಚಿನ್ನದ್ಹಾವಿಗೆಕಿರುಗೆಜ್ಜೆ ಕಾಲಲಂದುಗೆವರ ಪೀತಾಂಬರ ಕಟಿಗೆ ವಡ್ಯಾಣ ನೇವಳ ಇಟ್ಟುನಿರುತ ಸುವರ್ಣದ ಕವಚವುಕೊರಳ ಕೌಸ್ತುಭಹಾರ ಕೋಮಲ ಸುವರ್ಣಕುಂಡಲಸಿರಿಮೂರುತಿ ಸಣ್ಣ ನಾಮ ಶಿರದ ಜಾವಳ ಜಡೆ ಕಡಗೋಲು ನೇಣುಸಹಿತ7 ದಧಿ ಶುಂಠಿ ನಿಂಬೆರಸ ತಕ್ರಜಗದೇಕ ಸವಿದ ಪರಿಯ 8 ಬಗೆಬಗೆಯ ಮಂಗಳಾರತಿ ಬಾರಿಬಾರಿಗೆ ಮಾಡಿ ಚಾ-ಮರ ದರ್ಪಣಗಳೆಸೆಯೆ ನಗೆಮುಖದ ಕೃಷ್ಣ-ನಂಘ್ರಿಗೆ ಷೋಡಶ ಪೂಜೆಯ ಮಾಡಿಮುಗಿಸಿ ಗುರುರಾಯ ಬರಲುಹನುಮಂತದೇವರಿಗೆ ಹಸನಾದ ಭಕ್ಷ್ಯಭೋಜ್ಯಅನುದಿನದಲರ್ಪಿಸಿ ಪೂಜಿಸಿಮುನಿ ಮಧ್ವರಾಯರಿಗೆ ಮುದದಿಂದಲರ್ಪಿಸಿ9 ಅರಳು ಆರಚ್ಚು ಬೆಲ್ಲವುಆ ಕಾಲದಲರ್ಪಿಸಿ ಪೂಜಿಸಿ ಕರಣದಲಿ ನೋಡಿ ನಗುವ 10 ಪುಟ್ಟ ಕೃಷ್ಣರಾಯರಿಗೆ ಹೊನ್ನ ಕವಚವ ತೊಡಿಸಿಇಟ್ಟ ರನ್ನದ ಕಿರೀಟವುದಿಟ್ಟಾದ ಪದಕಂಗಳು ದಿವ್ಯಮುತ್ತಿನ ಸರಕಟ್ಟಿದ್ದ ಪೂಮಾಲೆ ಎಸೆಯೆಶ್ರೇಷ್ಠವಾದ ಧೂಪದೀಪ ಶ್ರೀಪತಿಗೆ ದೋಸೆ ಬೆಣ್ಣೆಗಟ್ಟುರುಳಿ ನೈವೇದ್ಯವು ಕಟಕಟನೆಶುಂಠೀಕಷಾಯುಂಡು ಬಾಯಿ ತೊಳೆದುತಟ್ಟನೆ ರಾತ್ರಿ ಪೂಜೆಯಗೊಂಡು ತಾ ಪಲ್ಲಕ್ಕಿಯೇರಿ ಬರುವ11 ಅರಳು ಬಹುಕೊಬರಿ ಚೂರುಗಳು ಆ ಕಾಲದಲಿ ಸೂಸಿ ಪೂಜಿಸೆ ಕರುಣದಲಿ ನೋಡಿ ನಗುವ 12 ಧೀರನಿಗೆ ಚತುರ್ವೇದ ದಿವ್ಯಶಾಸ್ತ್ರಪುರಾಣ ಚೆಲುವಗಷ್ಟಕ ಗೀತವುಭೇರಿಮೌಳಿ ಮೌಳಿವಾದ್ಯಮೌಳಿಮೌಳಿ ಚಕ್ರವಾದ್ಯತಾರತಮ್ಯದ ಸರ್ವವಾದ್ಯಗಳೆಸೆಯೆತಾರಿ ಸೇವೆಯ ಮಾಡಿ ಸ್ವಾಮಿ ವೀಳ್ಯ ಮಂತ್ರಾಕ್ಷತೆ ಕಾರುಣ್ಯದಲಿಬೆರೆಸಿ ಮಾರಜನಕಗೆ ಏಕಾಂತ ಸೇವೆಯ ಮಾಡಿ ನವಮಾರಜನಕನ ಹಂಪೂಜೆಯ ಜಾಗ್ರತೆಯಲಿ ನೋಡಿ ನಗುವ 13 ಹಡಗಿನಿಂದಲಿ ಬಂದು ಕಡಲ ತಡಿಯಲಿ ನಿಂದುಬಿಡದೆ ಯತಿಗಳ ಕೈಯ ಬಿಂಕದಿ ಪೂಜೆಗೊಂಬಆದಿ ಕೃಷ್ಣನ ಆಹ್ನಿಕವನು ಆಧಾರದಲಿಓದಿವಿನೋದದಲಿ ಪಠಿಪ ಜನರಿಗೆಆಧಿವ್ಯಾಧಿಗಳಟ್ಟಿ ಬಹು ಭಾಗ್ಯಗಳ ಕೊಡುವಮಾಧವನ ಕೃಪೆಯಿಂದಲಿವಾದಿರಾಜರಿಗೊಲಿದು ವಚನ ಶುದ್ಧೋಕ್ತದಲಿ ಹೇಳುವ ಜನರಿಗೆಬರುವ ದುರಿತವ ಕಳೆದು ಮೇಲಾಗಿ ರಕ್ಷಿಸಿಕೊಂಬ ಹಯವದನ 14
--------------
ವಾದಿರಾಜ
ಉದಕಜಕಾರ್ಕನು ಉದಯಿಸಿದಂತೆ ಮಧುರಿಪು ನೀ ಬಂದೊದಗಿದೆ ಸಲಹೈ ಪ ಗಾದೇಯ ನಾಮಕ ಗಾದೆ ಪ್ರಭುವೆ ಖಳಾ ಭಾದೆ ಬಿಡಿಸೊ ಖಲ | ಪರಮಾದರದಿ ಪ್ರಹ್ಲಾದನ ಪೋಷಿಪ 1 ಮನೆ ಧನ ಬಿಟ್ಟು ನಿಮ್ಮನು ಭಜಿಸುವ ನಮ್ಮನು ಬಾಧಿಪ ಖಳನನು ಶಿಕ್ಷಿಸು ಹೇ ವನಜನಯನ ಹರಿ 2 ಆವನು ನಿನ್ನುಳಿದೀ ವಸುಧರೆಯೋಳು ಜೀವರ ಸಲಹುವ ದೇವದೇವ ಶಿರಿಗೋವಿಂದ ವಿಠಲ 3
--------------
ಅಸ್ಕಿಹಾಳ ಗೋವಿಂದ
ಉದದಿ ಮೇಖಳೆಯ ಭಾರವನಿಳುಹುವನೆಂದು ವಿಧಿಪೂರ್ವಸುರರು ಬಂದು ಕ್ಷೀರಾಬ್ಧಿಯ ಸಿಂಧು ಪ. ಶೌರಿ ಗೃಹದ ಗೋಪಿ ಜನಕೆ ನಾನಾ ವಿಧದ ಲೀಲಿಯ ತೋರಿ ದೈತ್ಯರ ಸದೆದು ಗೋವುಗಳ ಕಾಯ್ದ ಕೃಷ್ಣಗೆ ಪದುಮದಾರತಿಯ ಬೆಳಗಿರೆ ಶೋಭಾನೆ 1 ಮೆಲ್ಲನೆ ಮಧುರೆಗೆ ಹೋಗಿ ಮಾವನ ದೊಡ್ಡ ಬಿಲ್ಲ ಮಧ್ಯದಿ ನಿಂದು ರಂಗದಿ ಹಸ್ತ ಮಲ್ಲಾದಿಗಳ ತರಿದು ಕೈದೋರಿ ಮೆರೆದು ಖುಲ್ಲನನು ಮಡುಹಿ ಬಂಧುಗ- ಳೆಲ್ಲರನು ಸಂರಕ್ಷಿಸಿದ ಸಿರಿ ನಲ್ಲ ಗೋಪೀ ವಲ್ಲಭನ ಪದ ಪಲ್ಲವಗಳನು ಪಾಡಿ ಪೊಗಳುತ ಮಲ್ಲಿಗೆಯಾರತಿಯ ಬೆಳಗಿರಿ ಶೋಭಾನೆ 2 ಮಂದಿಮಾಗದ ಮೊದಲಾದ ರಾಯರ ಮದ ಕುಂದಿಸಿ ರಥದೊಳಂದು ಭೈಷ್ಮಿಯ ಕರ ತಂದು ದ್ವಾರಕೆಗೆ ಬಂದು ಭಾಮಾದಿ ಮಹಿಷೀ ವೃಂದ ಸಂಗ್ರಹಿಸಿದ ಪರಾಪರ ವಂದ್ಯ ಶೇಷಗಿರೀಂದ್ರನಾಥನ ಚಂದನಾತ್ಮಕ ಮೂರುತಿಯ ಹೃ- ನ್ಮಂದಿರದ ಮಧ್ಯದಲಿ ಮಂಡಿಸಿಕುಂದಣದಾರತಿಯ ಬೆಳಗಿರೆ ಶೋಭಾನೆ 3
--------------
ತುಪಾಕಿ ವೆಂಕಟರಮಣಾಚಾರ್ಯ