ಒಟ್ಟು 1038 ಕಡೆಗಳಲ್ಲಿ , 93 ದಾಸರು , 800 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋಗದರ್ಶನ ಎಂತುಗೂಡುವದೊ ನಿಜ ಹರಿಯೆ ಧ್ರುವ ನಿದ್ರ್ವಂದ್ವದಲಿದ್ದ ಒಂದೆ ವಸ್ತುವೆ ನೀನು ದ್ವಂದ್ವಾಭೇದದ ಸಂದೇಹಿ ನಾನು ಅಂದಿಗಿಂದಿಗೆ ಪೂರ್ಣ ಎಂದೆಂದಿಗೆ ನೀನು ಹೊಂದಲರಿಯದಾ ತಿಮಿರಾಂಧ ನಾನು ಹರಿ 1 ನಿಃಪ್ರಪಂಚದ ನಿರ್ಮಳ ನಿರ್ಗುಣನು ನೀನು ಪ್ರಾಪಂಚಿಕ ಪರಮ ನಾನು ಕೃಪೆಯುಳ್ಳ ಕರುಣಾಕಾರ ಪರಿಪೂರ್ಣ ನೀನು ಕಪಟ ಕುಟಿಲಲಿಹ ಪ್ರಾಣಿ ನಾನು ಹರಿ 2 ಮಹಿಗೆ ಪತಿಯಾದ ಸ್ವಾಮಿ ಶ್ರೀಪತಿ ನೀನು ಸೋಹ್ಯ ತಿಳಿಯದಾ ಮಂದಮತಿ ನಾನು ಸಾಹ್ಯ ಮಾಡುವ ಸಹಕಾರ ಸದ್ಗತಿ ನೀನು ಮಹಾಮಹಿಮೆಯುಳ್ಳ ಮೂರುತಿ ನೀನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಕ್ಷಿಸೊ ಶ್ರೀಶ ಶ್ರೀನಿವಾಸ ಪ ರಕ್ಷಿಸೆನ್ನ ಪದ್ಮಾಕ್ಷ ತ್ರಿಜಗದ ಧ್ಯಕ್ಷ ಖಳ ಜನಶಿಕ್ಷ ಪಾಂಡವ ಪಕ್ಷ ಕರುಣ ಕಟಾಕ್ಷದಲಿ ನೀ ವಾಹನ ಅ.ಪ. ಕೊಂಚ ಮತಿಯಲಿ ಕುಜನರ ಸೇರಿ ಸಂಚರಿಸುತಲಿ ದೀನನಾದೆ ಪಂಚಶರಸ್ಮರ ವಂಚಿಸುತ ಬಿಡೆ ಚಂಚಲಾಕ್ಷೇರ ಸಂಚು ನೋಟದ ಮಿಂಚಿಗೆನ್ನ ಮನ ಚಂಚಲಾಗುತೆ ವಂಚಿಸೆ ಯಮನಂಚಿಗೆ ಸಿಲುಕಿದೆ 1 ಕಿಟ್ಟಗಟ್ಟಿದ ಕಬ್ಬಿಣದಂತೆ ಕೆಟ್ಟ ಕಿಲ್ಬಿಷದ ರೂಪದಿ ಬಿದ್ದು ದಿಟ್ಟ ನಿನ್ನಯ ಗುಟ್ಟು ತಿಳಿಯದೆ ಪೊಟ್ಟೆ ಗೋಸುಗ ಕೆಟ್ಟ ಕುಜನರ ಘಟ್ಟನಾ ಕಾಲ್ಗಟ್ಟೆ ಬಹುಶ್ರಮ ಪಟ್ಟು ಭವದಿ ಕಂಗೆಟ್ಟೆ ಪ್ರತಿದಿನ 2 ಶ್ರೀ ಕಮಲೇಶ ಹೃತ್ಪದ್ಮದಿನೇಶ ಪ್ರಕಾಶ ಬೇಗನೆ ಬಂದು ಯಾಕೇ ತಡೆವೆನ್ನ ವಾಕ್ಕುಲಾಲಿಸಿ ಕರವ ಪಿಡಿ ದಾ ಕುಚೇಲನ ಸಾಕಿದಾಪರಿ ಕರ ಜಗನ್ನಾಥ ವಿಠಲ 3
--------------
ಜಗನ್ನಾಥದಾಸರು
ರತುನ ಸಿಕ್ಕಿದೆ ತಮ್ಮ ಇದು ಬಹು ಜತನೆಲೋ ನಿಸ್ಸೀಮ ರತುನ ಸಿಕ್ಕಿದೆ ಪ ನಿನ್ನ ಸುಕೃತದ ಫಲದಿಂದ ಪತಿತಪಾವನ ಸಿರಿಪತಿ ವಿಮಲನಾಮ ಅ.ಪ ದುರಿತ ದಾರಿದ್ರ್ಯವಿಲ್ಲದ ಈ ರತ್ನದಿಂ ಜರಮರಣಂಟಿಲ್ಲ ನರಹರಿ ವರಪಾದ ಶರಣರು ಪರಕ್ಕೆ ಪರಮ ಗೌಪ್ಯದಿಂದ ಶೋಧಿಸುತಿರುವಂಥ 1 ತಾಪತ್ರಯಗಳಿಲ್ಲ ಈ ರತ್ನದಿಂ ಪಾಪ ಶಾಪವಿಲ್ಲ ಪಾಪಿಯಮದೂತರ ಲೋಪಗೈದಯ ಭಯ ಆಪಾರ ಪರಲೋಕ ಸೋಪಾನಕ್ಹಚ್ಚುವ2 ಧರ್ಮಕೆ ಕೊಡು ನದರ ಈ ರತ್ನದ ಮರ್ಮ ತಿಳಿಯೆ ಚದರ ಬ್ರಹ್ಮ ಬ್ರಹ್ಮಾದಿಗಳೊಮ್ಮನದ್ಹೊಗಳುತ ನಿರ್ಮಲಾಗುವ ಪರಬ್ರಹ್ಮ ಶ್ರೀರಾಮನೆಂಬ 3
--------------
ರಾಮದಾಸರು
ರಾಮನಾಮವೆನ್ನು ಮನವೆ ನಿನ್ನ ಪಾಮರಪಾತಕನಾಶನವೆ ಬರಿನೇಮವ್ರತಗಳು ನಿಷ್ಫಲವೆ ಪರಂಧಾಮ ಭಜನೆ ಮೋಕ್ಷಪ್ರದವೆ ¥ಶೀಲತನವುನೀಬಿಡಬೇಡಾ ನಾನ್ ಶೀಲನೆಂದುನೀಹೇಳಬೇಡಾ ಶ್ರೀ ಲೋಲನಸ್ಮರಣವ ಮರಿಬೇಡಾ ಇಹ ಜಾಲಿಮನಸಿನಲಿ ತರಬೇಡಾ 1ಕಾಲದೇಶವನನುಸರಿಸಿ ನೀನು ಲೀಲೆಯಾಗಿ ಕ್ರಮದಲಿ ನಡಸಿ ಶ್ರೀಫಾಲಯನಸ್ತುತ ಘನತೆನಿಸೀ ಏವೇಳೆಯು ಶ್ರೀರಾಮನ ಜಪಿಸಿ 2ಕುಲಧನಯೌವನ ಬಲದಿಂದಾ ನಿಜ ತಿಳಿಯದೆಸುಮ್ಮನೆ ಮದಬಂದದಲಿಸಿಲುಕದೆ ಸುಜ್ಞಾನದಿಂದಾ ಗುರಿ ತಿಳಿದುಭಯಭೇದಸ್ಥಿತಿ ಚಂದಾ 3'ಮಲತುಲಸಿರಾಮನೆನ್ನುವದು ರಂಗಸ್ವಾ'ುದಾಸನಿಗೆ ಪ್ರಾಪ್ತವದುಸಮರಸ ಸದ್ಗುಣ ಲಭಿಸುವದು ಸರ್ವ ಶೇಷೈಕ್ಯವು ಒಂದಾಗುವದು 4
--------------
ಮಳಿಗೆ ರಂಗಸ್ವಾಮಿದಾಸರು
ಲಕ್ಷ್ಮೀಶ ಪಾಲಿಸು ಎನ್ನ ಲಕ್ಷ್ಮೀಶ ಪ. ಲಕ್ಷ್ಮೀಶ ಪಾಲಿಸೊ ಎನ್ನ | ಜಗ ದ್ರಕ್ಷಕ ಪರಮಪಾವನ್ನ ಈಕ್ಷಿಸು ಕರುಣ ಕಟಾಕ್ಷವ ಬೀರುತ ಕುಕ್ಷಿಯೊಳಗೆ ಜಗ ರಕ್ಷಿಸುತಿಪ್ಪನೆ ಅ.ಪ. ನಾಗರಾಜನ ಗಿರಿವಾಸ | ಭೋಗ ಆಗುಮಾಡೆಲೊ ಸರ್ವೇಶ | ನಿನಗೆ ಬಾಗಿ ನಮಿಸುವೆ ಜಗದೀಶ | ಭವ ರೋಗ ಹರಿಸು ಕ್ಲೇಶನಾಶ | ಆಹ ಕೂಗಿದರು ನಿನಗೀಗ ಕೇಳಿಸದೇನೊ ಜಾಗುಮಾಡದೆ ನೀಡೊ 1 ಸೃಷ್ಟಿಗೆ ಎನ್ನನು ಕರೆದೆ | ಭವ ಕಷ್ಟದಿ ಬಂಧಿಸಿ ತಂದೆ | ಇನ್ನು ಘಟ್ಯಾಗಿ ಕಾಪಾಡು ಎಂದೆ | ಮೊರೆ ಮುಟ್ಟದೆ ನಿನಗಿನ್ನು ತಂದೆ | ಆಹ ಎಷ್ಟು ಬೇಡಿದರು ಸೊಟ್ಟ ತಿರುಗಿ ಮೊಗ ಅಟ್ಟಕೆ ಏರುವಿ ಬೆಟ್ಟದೊಡೆಯ ಹರಿ 2 ಕರ್ಮಬಂಧನಗಳ ಕಡಿಯೊ | ಶ್ರೀಶ ನಿರ್ಮಲರೂಪ ಕೈಪಿಡಿಯೊ | ಬೇಗ ಧರ್ಮ ಅಧರ್ಮವ ತಿಳಿಯೊ | ಜಗ ತ್ಕರ್ಮ ಸಾಕ್ಷಿಯೆ ಬೇಗ ಪೊರೆಯೊ | ಆಹ ಧರ್ಮವಲ್ಲವೊ ಹೀಗೆ ಮರ್ಮವ ನುಡಿವುದು ಪೆರ್ಮೆಯಿಂದಲಿ ಅಂತರ್ಮರ್ಮವರಿತು ಕಾಯೊ 3 ಶ್ರೀನಿವಾಸ ಬಾರೊ ಬೇಗ | ನಿನ್ನ ನಾನು ನಂಬಿದೆನೊ ಶ್ರೀ ಭೋಗ | ನೀಗು ನೀನೆ ತ್ರಿಕರ್ಮದ ಭೋಗ | ಬೇಗ ಭವ ರೋಗ | ಆಹ ಪೋಗುತಲಿದೆ ದಿನ ಜಾಗುಮಾಡಲು ಸಲ್ಲ ನಾಗಶಯನ ಎನ್ನ ಬೇಗನೆ ರಕ್ಷಿಸೊ 4 ಕಣ್ಣು ಬಿಟ್ಟಿರುವೆಯೊ ನೀನು | ನಿನ್ನ ಬೆನ್ನ ಭಾರವಿದಿನ್ನೇನು | ಕೋರೆ ಮಣ್ಣು ಆರ್ಭಟಿಸುವೆ ನೀನು | ವಟು ಚಿಣ್ಣ ಭಾರ್ಗವ ನೀನು | ಆಹ ಮನ್ನಿಸಿ ಕಪಿಗಳ ಬೆÉಣ್ಣೆ ಕಳ್ಳನೆನಿಸಿ ಬಣ್ಣಗೆಟ್ಟು ಹಯವನ್ನೇರಿದ ಧೀರ 5 ನಿತ್ಯ ತೃಪ್ತನೆ ಎನ್ನ ಮನದಿ | ಸರ್ವ ತತ್ವಾಧಿಪತಿಗಳು ಮುದದಿ | ಜಗ ತ್ಕರ್ತನೆ ಕಾಯ್ವ ದಯದಿ | ಬೇಗ ಇತ್ತು ಮತಿಯ ಸಲಹೊ ದೃಢದಿ | ಆಹ ಸತ್ಯರೂಪನೊ ನೀ ಸತ್ಯ ಸಂಕಲ್ಪನೊ ನಿತ್ಯ ನಿಂತು ಕಾಯೊ 6 ಗೋಪಾಲಕೃಷ್ಣ ವಿಠ್ಠಲ | ಭವ ಕೂಪದಿಂದೆತ್ತೊ ಶ್ರೀ ನಲ್ಲ | ಎನ್ನ ರಾಪು ಮಾಡುವುದುಚಿತಲ್ಲ | ಜಗ ದ್ವ್ಯಾಪಕ ಭಕ್ತವತ್ಸಲ | ಆಹ ಈ ಪಯೋಜಜಾಂಡದಿ ರೂಪ ರೂಪಾಂತರದಿ ವ್ಯಾಪಾರ ನಡೆಸುವ ಗೋಪಕುವರ ಕಾಯೊ 7
--------------
ಅಂಬಾಬಾಯಿ
ಲಾವಣಿ ಪದ ದೂರ್ ದೂರಲ್ಲ ಕೋಲ್‍ಕಾರ ಕೃಷ್ಣ ಕೇಳು ಬಾಲೆ ದಾರಿಯೋಳ್ ಸುಂಕ ಶೋದಗಳುಂಟೂ ಇದು ಏನ್ ಗಂಟು 1 ಗಂಡನುಳ್ಳ ಬಾಲೆಯರ ದುಂಡಕುಚ ಮುಟ್ಟಲಿಕ್ಕೆ ಪುಂಡತನ ಬುದ್ಧಿಯಿದು ಥರವೇನೋ ಜೀವಯರವೇನೋ ಪುಂಡತನ ಬುದ್ದಿಯಿದು ಥರವೇನೆಂದರೆ ಹೆಂಡತೆಂತ ಮುಟ್ಟಿದಾಗ ಕುಚಯುಗವಾ ಕಾಣದೆ ನಗುವ 2 ಕಾಕು ಮಾತಾಡುತಿದ್ದಿ ಸಾಕು ನಿನ್ನ ಮಾತೀಗ ಸಲುಗೇನೆಂದರೆ ಬೇಕು ಬೇಡಿದ್ದು ನಾ ಕೊಡುತೇನೆ ನಿನ್ನಿಡುತೇನೇ 3 ಕೊಂಡು ಕೊಂಡು ನಡೆಸಲಿಕ್ಕೆ ಶೆಟ್ಟಿಗಾರ ನಾನಲ್ಲ ನೀನಿಟ್ಟುಕೊಂಡ ಸೂಳೆ ನಾನಲ್ಲ ಹೋಗೋ ನೀನಲ್ಲ ಸಾಗೋ ಇಟ್ಟುಕೊಂಡ ಸೂಳೆ ನಾನಲ್ಲ ಹೋಗೆಂದರೆ ಕಟ್ಟಿಕೊಂಡು ಹೋದೇನು ಒಳತನಕಾ ಬೆಳಬೆಳತನಕಾ 4 ಒಳತನಕ್ಯಾತಕೆ ಬೆಳತನಕ್ಯಾತಕೆ ತಾಳಿಯರಿಲ್ಲಾ ಮಾತಿನ ಬೆಡಗಾ ಅಹುದೆಲೊ ಹುಡುಗ ತಿಳಿಯದಿದ್ದರೆ ನಾ ತಿಳಿಯ ಹೇಳಿಕೊಡುವೆನೆಂದು ಸೆಳೆದಪ್ಪಿಕೊಂಡ ಶ್ರೀದವಿಠಲ ಬಹುಬಹು ಧಿಟಲಾ5
--------------
ಶ್ರೀದವಿಠಲರು
ಲೇಸು ಮಾಡಿದೆ ಮಾತೆ ಪುಣ್ಯದ ರಾಶಿ ಎನಗೊದಗಿತು ಭಲ ಪ ಆಶೆಯನು ಪೂರೈಪೆನಿಂದಿನ ಘಾಸಿಯಾಕೆ ದ್ವಿಜರಿಗಲಾ ಅ.ಪ ಬಂಡಿಯನ್ನವು ಪಾಯಸವುಸುಖಿ ವುಂಡು ತೇಗುತ ಬರುವೆನು1 ಶಾನೆ ಖಾರದಪ್ಪಳ ಸಂಡಿಗೆಯು ನೂರಾರು ಬೆಂಡು ಪುಟ್ಟಿಗೆಗಳು 2 ದೋಸೆ ಕೋಡುಬಳೆಯಪ್ಪಗಳು | ಸೋ- ಮಾಸಿ ಹೂರಗಿ ಮಾಡಿಸು ಸೂಸಲುಪ್ಪಿನಕಾಯಿಗಳನ್ನು ರಾಸಿ ರಾಸಿಯು ತುಂಬಿಸು 3 ಎಲ್ಲವನು ಹೆಚ್ಚಾಗಿ ಮಾಡಿಸು ನಿಲ್ಲದೀಗಲೆ ಪೋಗುತಾ ಸುಳ್ಳಿದಲ್ಲವು ತಿಳಿಯುತ 4 ಕುಡಿವೆ ಭುಜವಪ್ಪಳಿಸಿ ನಾಂ ಸಡಗರವೆನಗೆ ಗೈದ ತಾಂ 5
--------------
ಗುರುರಾಮವಿಠಲ
ಲೋಕನೀತಿ ಇರಬೇಕು ಇದ್ದರು ಇಲ್ಲದಿರಬೇಕು ಪ ಹರಿಯಲ್ಲಿ ಮನವಿಟ್ಟು ತೊರೆದು ಮಮತೆ ಭವದಿ ಅ.ಪ. ಪರದೈವ ಹರಿಯೆಂದು ದೃಢದಿಂದಲಿರಬೇಕು ಗುರುವಾಯು ಸರಿಯೆಂದು ಗುರುಭಕ್ತಿಮಾಡಬೇಕು ಹರಿಯ ಕರುಣ ವಿಲಾಸದಿಂದಲಿ ವೈರಿ ವೃಂದವ ಸ್ಮರಿಸಿ ಸ್ಮರಿಸುತ ಕ್ರಮದಿ ಬಿಂಬನ ಪರಮ ಸುಖದಿಂ ಜ್ಞಾನ ಘಳಿಸುತ 1 ತಿಳಿಯಬೇಕೊ ವಿದ್ಯೆ ತುಳಿಯಬೇಕಾವಿದ್ಯೆ ಬೆಳಿಸಬೇಕು ಭಕ್ತಿ ಹಳಿಯಬೇಕು ಹಂಮದ ನಳಿನ ನಯನನ ಆಳುವೆಂಬುದ ತಿಳಿದು ತವಕದಿ ದೊರೆಯ ತೊಳಳಿಬಳಲಿದೆ ಬಹಳ ವುದರಕೆ 2 ಹರಿಯಿತ್ತದುಣಬೇಕು ಸಮಚಿತ್ತವಿರಬೇಕು ಹರಿಗಿತ್ತುಮಣಿಬೇಕು ಧೊರೆ ಚಿತ್ತವೆನಬೇಕು ಪರರ ಬೇಡದೆ ಬಿಡುತ ಹರಿಯನು ಸಿರಿಗುಪ್ರೇರಕ ವಿಷ್ಣುವೆನ್ನುತ ಹಿರಿಯರಕರುಣ ಪಡೆಯುತ 3 ಮಂತ್ರಸಿದ್ಧಿಯು ಬೇಕು ತಂತ್ರ ವೃಂದವು ಬೇಕು ಯಂತ್ರವಾಹಕ ಹರಿಯ ಸ್ವಾತಂತ್ರವರಿಯಬೇಕು ಕಂತುಪಿತನೇಕಾಂತ ಭಕ್ತರ ಭಾಗ್ಯ ಪಡೆಯುತ 4 ಗಾತ್ರ ಶುದ್ಧಿಯುಬೇಕು ಪಾತ್ರವರಿಯುತ ದಾನವಿತ್ತು ಪೂಜಿಸಬೇಕು ಪುತ್ರಮಿತ್ರ ಕಳತ್ರ ಗತಹರಿ ತುತ್ತುವುಣ್ಣಿಸಿ ಜಗವ ಸಲಹುವ “ಶ್ರೀಕೃಷ್ಣವಿಠಲ”ನ ಕರುಣ ಪಡೆಯಲು 5
--------------
ಕೃಷ್ಣವಿಠಲದಾಸರು
ಲೋಕನೀತಿ (ಅ) ಅಂಟಿ ಅಂಟದ ಹಾಗೆ ಇರಬೇಕು ಪ ಈ ತಂಟೆ ಸಂಸಾರದ ಬುದ್ಧಿ ಉಂಟಾದವರಿಗೆಲ್ಲಾ ಅ.ಪ ಎಂಟು ಮದಗಳನ್ನು ಬಿಡಬೇಕು | ಹದಿ- ನೆಂಟನೇ ತತ್ವ ತಿಳಿಯಬೇಕು ಭಂಟನಾಗಿ ವೈಕುಂಠ ಸೇರುವದಕೆ 1 ಶತ್ರುಗಳಾರ್ವರ ಗೆಲ್ಲಬೇಕು | ನಿಜ- ಮಿತ್ರರಾರ್ವರೊಳು ನಿಲ್ಲಬೇಕು ರಾತ್ರಿ ಹಗಲು ಪತ್ನೀಪುತ್ರರೊಡನೆ ಕಮಲ- ಪತ್ರದಿ ನೀರಿದ್ದ ರೀತಿಯಿಂದಲಿ ತಾನು 2 ಮಾನವಮಾನ ಒಂದಾಗಬೇಕು | ಅನು- ಮಾನವಿಲ್ಲದೆ ತಿರುಗಲುಬೇಕು ಇನ್ನೇನಾದರು ಗುರುರಾಮವಿಠಲನಾ- ಧೀನನೆನುತ ಮದ್ದಾನೆಯಂದದಿ ತಾನು 3
--------------
ಗುರುರಾಮವಿಠಲ
ಲೋಕನೀತಿಯ ಪದಗಳು 448 ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡುನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳುಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗ ಪ್ರ-ಸನ್ನ ಮೂರುತಿಯಾಗುರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನುಭೂಸುರರಿಗಿತ್ತು ಮನ್ನಿಸು ಉದಾರನಾಗುಮನ್ನೆಯರೆಲ್ಲರು ಬಂದುನಿನ್ನನೋಲೈಸಲೆಂದು ಅಪರ್ಣೆಪರಿಸಿದಳು 1 ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚಕೋಟಿ ಗಜದಾನ ಶತಕೋಟಿಯಶ್ವದಾನಗಳಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-ರೀಟ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿಧಾಟಿಯಾಗಿರುವನಾಗುಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿಜೂಟ ಭಕ್ತನಾಗು 2 ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗುಪೆತ್ತವರ ನೋಡಿ ನಲಿವುತ್ತಿರಲು ಭೂಸುರರುಮುತ್ತಿನಕ್ಷತೆಯನಾಂತುಪೃಥ್ವಿಯ ವೊಳಗೆಲ್ಲಾ ಸ-ರ್ವೋತ್ತಮ ಪುರುಷನಾಗೆನುತ್ತಮಸ್ತಕದಿ ತಳಿವುತ್ತ ಪರಸಿದರು 3 ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-ಗೇಂದ್ರ ನೀನಾಗುಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗಇಂದಿರೆ ಪರಸಿದಳು4 ಧೀರನಾಗುದಾರನಾಗು ಸೂರಿಜನವಾರಕೆ ಮಂ-ದಾರನಾಗು ಸಂಗರ ಶೂರನಾಗು ವೈರಿ ಜ-ಝ್ಝೂರನಾಗು ಮಣಿಮಯ ಹಾರನಾಗುವೀರಾಧಿವೀರ ನೀನಾಗುಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗುಕಾರುಣ್ಯಸಾಗರನಾಗು ಕಾಮಿತಫಲಿದನಾಗುಶ್ರೀ ರಾಮೇಶನಪಾದಾಬ್ಜ ವಾರಿಜ ಭಕ್ತನಾಗೆಂದುಶಾರದೆ ಪರಸಿದಳು5
--------------
ಕೆಳದಿ ವೆಂಕಣ್ಣ ಕವಿ
ಲೋಕೇಶನೆನಿಪ ಶ್ರೀಗುರು ಸಿದ್ಧೇಶ್ವರಗೆ ಪ ನೀ ಕಮಲಮುಖಿ ಆಋವೈರಿಯ ನೇಕ ಮೈಯ್ಯಾಳು ಸುತ್ತಿಕೊಂಡು ವಿ ವೇಕವಿಲ್ಲದೆ ವಿಷವನುಂಡ ಪಿನಾಕಧರÀನಿಗೆ ಸೋಲುವರೆ ನೀ ಜಗವ ಮೋಹಿಪ ಮಾನಿನೀ ಮಣಿಯೇ ಅ.ಪ. ಶಿರದೊಳು ಶಶಿಯ ಕೆಂಜೆಡೆ ಇಹ ಜೋಗಿ ಸ್ಮರನ ದಹಿಸಿ ಭಸ್ಮ ಹಣೆಗಿಟ್ಟ ಯೋಗಿ ಇರುವರೆ ಸ್ಥಳವಿಲ್ಲದಂತೆ ತಾ ಪೋಗಿ ಮೆರೆವ ಸ್ಮಶಾನ ಮಂದಿರಕನುವಾಗಿ ಮರುಲು ಭೂತ ಪಿಶಾಚ ಯಕ್ಷರ ನೆರವಿಯಲಿ ಕುಣಿಕುಣಿದು ಬ್ರಹ್ಮನ ಶಿರವಿಡಿದು ತಿರಿದುಂಬ ಗೊರವಗೆ ಬರಿದೆ ತಿಳಿಯದೆ ಜಗವ ಮೋಹಿಪ ಮಾನಿನೀ ಮಣಿಯೇ 1 ಮಂಡೆಯೋಳ್ ಜಾನ್ಹವಿ ಶಶಿಯನ್ನೆ ಸೂಡಿ ರುಂಡಮಾಲೆಯ ಕೊರಳೊಳಗಿಟ್ಟಪಚಾಡಿ ಕುಂಡಲಿಗಳಾ ಧರಿಸಿರುವನ ನೋಡಿ ಖಂಡ ಪರಶುವೆಂದು ಅವನ ಕೊಂಡಾಡಿ ಧಿಂಡೆಯಾಗಿಹ ಪ್ರಾಯದವಳು ನೀ ನೀನವನನೊಲಿದೆ ಪ್ರ ಚಂಡೆ ಪಾರ್ವತಿ ಜಗವ ಮೋಹಿಪ ಮಾನಿನೀ ಮಣಿಯೇ 2 ಕರದಿ ತ್ರಿಶೂಲ ಧಮರುಗಳ ಧರಿಸಿರುವಾ ಕಂಚರ್ಮಾಂಬಕ ಪುಲಿದೊಗಲುಟ್ಟು ಮೆರೆವಾ ಹಿರಿಯತನಕೆ ವೃಷಭವನೇರಿ ಬರುವಾ ಶಿರಿಯ ಹೊಗಾಡಿ ಫಕೀರನಂತಿರುವಾ ವಿರಚಿಸಿದ ಲೀಲಾವಿನೋದದ ಪರತರ ಶ್ರೀ ಪ್ರಣವರೂಪನ ಗುರುವಿಮಲಾನಂದ ತೊಟ್ಟಿದ ಗುರು ಸಿದ್ಧೇ ಶ್ವರನೆಂದು ತಿಳಿಯದೆ ಜಗವ ಮೋಹಿಪ ಮಾನಿನೀಮಣಿಯೇ 3
--------------
ಭಟಕಳ ಅಪ್ಪಯ್ಯ
ಲೌಕಿಕ ಸಂದರ್ಭದ ಹಾಡು ಯಾತಕೆ ಹೋದೆವು ದುರುಳನ ಮನೆಗೆ ಪಾತಕಿ ಇವನು ಛೇ ಛೇ ಛೇ ಪ ಏಳು ಬಿಲ್ಲಿಯ ಕೊಡಲಿಕ್ಕೆ ಬಂದ ಖೂಳನಿವನು ಈ ಮನೆಯೊಳಗೆ ತಾಳಲಾರದೆ ಬೀಸಾಟಿ ಬಂದೆನು ಶ್ರೀಲತಾಂಗಿಯ ರಮಣ ಗೋವಿಂದಾ 1 ಗುಂಡಪ್ಪನು ಯಾಗುಂಡಪ್ಪನು ರುಬು ಗುಂಡಪ್ಪನು ನಾನಿವನರಿಯೆ ಮಂಡರಂತೆ ದಿನಗಳಿವುತಲಿ ನಮ ಕಂಡು ಮಾನ್ಯ ಮಾಡದೆ ಹೋದನು 2 ಹರಿಸರ್ವೋತ್ತಮನೆಂದು ಝಾಂUಟಿ ಬಾರಿಪ ದಾಸರು ನಾವ್ ಹೌದು ವರ ಕದರುಂಡಲುಗೀಶನ ಒಡೆಯ ನಮ್ಮ ಪಾಂ- ಡುರಂಗನ ದಾಸನೆಂದು ತಿಳಿಯದಲೆ 3
--------------
ಕದರುಂಡಲಗೀಶರು
ವದನದಲಿ ಮನವೇ ನೆನಿನಾಮ ಶ್ರಿಹರಿಯಾ | ಸದಮಲದಲಿ ಮರೆಯದೆ ಬಾವದಲಿ ಪ ದಾವನು ದಾಸರ ದಾಸರ ಪದರಾ | ಜೀವ ಯುಗಳ ದರುಶನದಲಿ | ತೀವಿಕೊಂಡಿಹ ಬಹುಜನ್ಮದು ಷ್ಕøತ | ಲಾವಡಗುತಿಹವು ನಿಮಿಷದಲಿ 1 ನಾಮದ ಮಹಿಮೆಯ ತಿಳಿಯಲು ಅರಸಲು | ಅಮಹಾನಿಗಮಾಗಮದಲಿ | ವ್ಯೋಮ ಕೇಶನಾರದಾಹನುಮರೆ ಬಲ್ಲ | ನಾಮದ ಸುಖವೆಂತೋ ಭುವನದಲಿ2 ಸರ್ವಧರ್ಮಾನ್ ಪರಿತ್ಯಜ್ಯಂಬ ವಾಕ್ಯವಾ | ಅರ್ವವ ಹಿಡದು ತ್ರಿಕರ್ಣದಲಿ | ಸರ್ವಭಾವದಿ ಗುರು ಮಹಿಪತಿ ಸ್ವಾಮಿಯ | ಮೆರ್ಪಪಾದುಕ ವಿಟ್ಟು ಹೃದಯದಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವನಜನಯನನ ಮನವ ಮಧುಪ ನಂಬುವರೆಮನದೆಗೆದ ಮದನಪಿತ ವಿಠಲರೇಯಾ ಪ ಅರಿಯದ ಬಾಲೇರಿಗೆ ತನ್ನ ಪರಿಯನರುಹಿಸಿ ಮುನ್ನನೆರೆದು ರತಿಪತಿಯ ಸುಖ ನೆರೆದೋರಿದತೊರೆದು ಬದುಕುವೆವೆಂತೋ ರತಿಪತಿಯ ಪಿತನಗಲಿವಿರಹದುರಿ ತಾನಳವಡರಿ ಸುಡುತಿಹುದು 1 ನಡೆ ನಗೆಯ ತುದಿನೋಟ ಬಲೆಯನೆಮ್ಮೊಳು ಬೀಸಿಬಿಡದೆ ಯೆಮ್ಮನು ತನ್ನ ವಶಮಾಡಿದಪಡಿಯಿಲ್ಲದನುಭವದ ಸುಖದ ಸವಿಯನೆ ತೋರಿಮಡದಿ ತಡೆದಳೊ ಮಧುರೆಯಲಿ ನಲ್ಲನ2 ಎಂದೆಂದು ನಿಮ್ಮ ವಶದಲ್ಲಿಹೆನೆಂದಭಯವಿತ್ತುಇಂದುಮುಖಿ ನಾರಿಯರ ನೆರೆ ನಂಬಿಸಿನಂದನಂದನ ನಮ್ಮ ಕಾನನದೊಳೀಡ್ಯಾಡಿಇಂದು ಮಧುರೆಯ ನಾರಿಯರ ನೆಚ್ಚಿದ 3 ಕಪಟ ತಿಳಿಯಲರಿಯದೆ ನಾವುನವ ಹರಿಣಿಯಂತೆ ಮರುಳಾಗಿ ಕೇಳಿವಿವರವರಿಯದೆ ನಾವು ಕಡು ನೊಂದೆವೆಲೊ ಮಧುಪಇವನ ಗುಣವರಿಯದೆ ಕಡುಕರುಣಿ ಎಂಬುವರು 4 ಭವ ಬಂಧನಗಳೆಲ್ಲ ಈಡ್ಯಾಡಿಗತಿ ನಮಗೆ ಅವನೆಂದು ಮನಸೋತೆವೋಕೃತಕವರಿಯದೆ ನಮ್ಮ ವನದೊಳು ನಿಲ್ಲಿಸಿ ಪೋದಪತಿಯೊಡನೆ ಸಂಧಾನವೆಂತೊ ಎಲೊ ಮಧುಪ 5 ಮರುಳುಗಳು ನಾವು ಶ್ರೀಪತಿಯ ಕೂಟವ ಬಯಸಿಇರುಳು ಹಗಲು ಜರಿಜರಿದಳಲುವೆವುಸಿರಿಯವನ ಉಂಗುಟದ ಉಗುರು ಗುಣ ಕಾಣಳೆಲೋಹರಿ ನಮ್ಮ ನೆನೆವುದಚ್ಚರಿಯಲ್ಲವೆ6 ಭೃಂಗ ಮಧುರೆಗೆ ಪೋಗಿರಂಗವಿಠಲನ ತಂದೆಮ್ಮನುಳುಹುವುದೋ 7
--------------
ಶ್ರೀಪಾದರಾಜರು
ವರದೇಶ ವಿಠಲರಾಯಾ ಗುರು ವರದೇಂದ್ರರ ಪ್ರೀಯಾ ಮರಿಯದೆ ನೀಯನ್ನ ಕೈಯ್ಯಾ ಪಿಡಿದು ಪೊರೆಯಬೇಕು ಜೀಯಾ ಪ ಒಂದು ದಿನ ನಿನ್ನ ಮನದಲಿ ನೊಂದು ನುಡಿದ ಯನ್ನ ಮಂದನ್ನ ಮಾಡಿದ್ಯೊ ಇನ್ನ ನಿನ್ನ ಸುಂದರ ಮೂರುತಿ ತೋರೆಲೋಘನ್ನ 1 ಏನು ತಿಳಿಯೆ ಮೂಢ ತನದಿ ನಾ ಹೀನಭವದಿಗಾಢ ಮಾನವ ಜನರೊಳಕ್ರೀಡಾ - ಪರನಾ ಜ್ಞಾನಕಳಿಯೊ ಪ್ರೌಢ 2 ಹರಿಪರಜನಸಂಗ ಮಾಡದೆ ನರರೊಳಗಾದೆನು ಮಂಗ ಸುರವರ ಸಹಿತಾಂತ ರಂಗ - ದೊಳು ವರದೇಶ ವಿಠ್ಠಲರಂಗ 3
--------------
ವರದೇಶವಿಠಲ