ಒಟ್ಟು 858 ಕಡೆಗಳಲ್ಲಿ , 89 ದಾಸರು , 658 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

139-7ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಹಂಸನಾಮಕ ಪರಂಬ್ರಹ್ಮ ವಿಧಿಸನಕಾದಿವಂಶಜ ಗುರುಗಳಲಿ ಜಗದೇಕ ಗುರುವುದಶಪ್ರಮತಿ ಈ ಮಧ್ವ ಮುನಿಯ ಪೀಳಿಗೆ ಜಾತವ್ಯಾಸಮುನಿ ಯೋಗಿವರ್ಯರಿಗೆ ಆ ನಮಿಪೆ 1ವ್ಯಾಸರಾಯರ ಮುಖ ಕಮಲದಿಂದುಪದೇಶದಾಸತ್ವ ಹೊಂದಿದರು ಪುರಂದರದಾಸಾರ್ಯದಾಸಶ್ರೇಷ್ಠರು ದಯಾನಿಧಿಯು ಈಪುರಂದರದಾಸಾರ್ಯರೇ ನಾರದರ ಅವತಾರ 2ಪುರಂದರಾರ್ಯರಹಸ್ತಕಂಜಸಂಜಾತರುಧೀರ ಭೃಗು ಅವತಾರ ವಿಜಯದಾಸಾರ್ಯಹರಿದಾಸವರ ವಿಜಯದಾಸರ ಶಿಷ್ಯರುಸೂರಿಸುರವರ್ಯ ಗೋಪಾಲ ದಾಸಾರ್ಯ 3ವಿಶ್ವೋಪಾಸಕರು ವರಗಣೇಶಾಂಶರುಈಶಾನುಗ್ರಹಿ ಗೋಪಾಲ ದಾಸಾರ್ಯಬೇಸರವಿಲ್ಲದೆ ಸ್ಮರಿಪ ಸಜ್ಜನರ ಪಾಲಿಪರುದಾಸತ್ವ ಜಗನ್ನಾಥದಾಸರಿಗಿತ್ತವರು 4ಸೂರಿಕುಲತಿಲಕನು ಜಗನ್ನಾಥ ದಾಸಾರ್ಯಈರೆರಡು ಮುಖ್ಯ ಜನ್ಮವಕೊಂಡಹಿಂದೆಗುರುಯುಕ್ ಪುರಂದರಾರ್ಯರವತ್ಸಗುರುರಾಯ ಸೇವಾರತಮದ್ರದೇಶಾಧಿಪ ಈ ರೀತಿ ಮೂರು 5ಮಾರೀಚ ದಿತಿ ಪೌತ್ರ ಮೊದಲನೆಯದಲ್ಲಿಧೀರ ಪ್ರಹ್ಲಾದನಿಗೆ ಭ್ರಾತ ಸಂಹ್ಲಾದಹರಿಅಧೋಕ್ಷಜನ್ನೊಲಿಸಿ ಕೊಂಬ ಮಾರ್ಗವ ಅರಿತನಾರದಾನುಗ್ರಹಿಯು ಉಪದೇಶಕೇಳಿ6ಹರಿಯ ಸೇವಿಸುವುದಕೆ ಶಿಷ್ಯರುದ್ಧಾರಕ್ಕೆಪ್ರಾರಬ್ಧ ಕರ್ಮವು ತೇದು ಹೋಗಲಿಕೆಧರೆಯಲ್ಲಿ ಪುನರ್ಜನ್ಮ ಕೊಂಡನು ಬ್ಯಾಗವಟ್ಟನರಸಿಂಹ ದಾಸರ ಮಗನೆನಿಸಿಕೊಂಡು 7ಸೂರಿಕುಲ ಶಿರೋಮಣಿ ವರದೇಂದ್ರ ಯತಿವರರುಶ್ರೀರಾಘವೇಂದ್ರರ ಸ್ಮರಿಪುದಿವರಲ್ಲಿಭಾರಿಪಂಡಿತ ಶ್ರೀನಿವಾಸ ಇವರಲ್ಲೋದಿಪೌರ ವಿದ್ಯಾರ್ಥಿಗಳಿಗೆ ಪಾಠ ಪೇಳ್ದ 9ಗರುವಕೊಳಗಾಗಿ ಈ ಶ್ರೀನಿವಾಸಾಚಾರ್ಯಕರುಣಾಶಾಲಿಗಳು ವಿಜಯದಾಸರನ್ನಕ್ಷುದ್ರ ಮಾತುಗಳಾಡಿ ಸ್ವೋತ್ತಮಾಪರಾಧದಿಂಘೋರವ್ಯಾಧಿ ಕೊಂಡು ಕುಗ್ಗಿದನು ತೀವ್ರ 10ಪರಿಪರಿ ಔಷಧೋಪಚಾರಗಳು ಸೋತುಹರಿಗುರು ಕ್ಷೇತ್ರಾಟನ ಸೇವಾದಿಗಳುಹರಿವಾಯುಸ್ತುತಿಕ್ಷೀರಅಭಿಷೇಕಫಲದಿಂಅರಿತನು ಅಪರಾಧಕ್ಷಮೆಬೇಡೆ ಹೊರಟ11ತ್ವರಿತದಲಿ ವಿಜಯಾರ್ಯರಲ್ಲಿ ಶರಣಾಗಿಕರುಣದಿ ಕ್ಷಮಿಸಿ ಉದ್ಧರಿಸಬೇಕೆಂದಕರುಣಿಸಮ ಚಿತ್ತರು ಶರಣನಿಗೆ ಹೇಳಿದರುಗುರುಗಳು ಗೋಪಾಲದಾಸರ ಕಾಣೆಂದು 12ತನ್ನಲ್ಲಿ ಗುರುಗಳು ಕಳುಹಿಸಿ ಬಂದಿಹನುದೀನನು ನಿಜ ಶರಣಾಗಿಹನು ಎಂದುಘನಮೂಮಂತ್ರ ಸಹ ಧನ್ವಂತರಿ ಜಪಿಸಿಧನ್ವಂತರಿಗೆ ಬಿನ್ನೈಸಿದರು ದಾಸರು 13ವಿಜಯಗೋಪಾಲ ವೆಂಕಟ ಜಗನ್ನಾಥನ್ನಪೂಜಿಸಿ ನೈವೇದ್ಯಾನ್ನ ಜೋಳದರೊಟ್ಟಿಭುಜಿಪುದಕೆ ಕೊಡುತ ಹರಿಗುರುಗಳ ಸ್ಮರಿಸುನಿಜ ಭಕ್ತಾಯುಷ್ಪ್ರದ ಸತ್ಪತಿ ಎಂದು 14ದ್ರವ ಮಾತ್ರ ಕೊಂಬ ಆ ರೋಗಿ ತಿಂದನು ರೊಟ್ಟಿದ್ರಾವಿಕ ಆಯಿತು ರೋಗ ದಿನ ದಿನದಿದೈವಾನುಗ್ರಹವಾಯ್ತುಗುರುಅನುಗ್ರಹದಿಂದಶ್ರೀ ವೆಂಕಟ ಶೈಲಾಧಿಪನು ಒಲಿದ 15ರೋಗ ನಿವೃತ್ತ ಆಚಾರ್ಯ ದಾಸರ ಸಹಪೋಗಿ ವೆಂಕಟಗಿರಿಯಲ್ಲಿ ಶ್ರೀನಿಧಿಗೆಭಕುತಿಯಿಂ ಸನ್ನಮಿಸಿ ಮಲಗೆ ನಿತ್ರಾಣದಲಿಬೇಗ ಗಜವರದಹರಿಬಂದು ತಾ ಪೊರೆದ16ಶ್ರೀನಿಧಿಃ ಸರ್ವ ಭೂತಾನಾಂ ಭಯಕೃದ್ಭಯನಾಶನನು ವಿಜಯಾರ್ಯರ ರೂಪದಲಿ ಪೇಳೆದಾನ ಎರೆದರು ಗೋಪಾಲ ದಾಸಾರ್ಯರುತನ್ನ ಆಯುಷ್ಯದಲಿ ನಲವತ್ತು ವರ್ಷ 17ರೊಟ್ಟಿ ಕೊಟ್ಟಾಗಲೇಗುರುಪ್ರೇರಣೆಯಂತೆಕೊಟ್ಟಿದ್ದರು ಆಯುಷ್ಯ ಆಚಾರ್ಯಗೆದಿಟವಾಗಿ ಜಗಕೆ ತಿಳಿಸೆ ವೆಂಕಟ ಈಗಕೊಡಿಸಿದನು ಆಯುರ್ದಾನದ ಧಾರೆ 18ಘನ್ನ ಹರಿಗುರು ಭಕ್ತಿ ಶಿಷ್ಯ ವಾತ್ಸಲ್ಯವಏನೆಂಬೆ ನಮ್ಮಗುರುಗೋಪಾಲ ದಾಸರದಾನಕ್ಕೆ ಎಣೆಯುಂಟೆ ಎಲ್ಲಾದರೂ ಯಾರೂತನ್ನ ಆಯುಷ್ಯವ ಕೊಡುವರೆ ಅನ್ಯರಿಗೆ 19ಏನೆಂಬೆಅನಿಮಿತ್ತ ಬಂಧುವೆಂಕಟಪತಿಯದೀನ ದಯಾಳತ್ವ ಆಚಾರ್ಯನಿಗೆತಾನೇವೆ ಗೋಪಾಲದಾಸರ ರೂಪದಿತಂದುಅನ್ನ ಕೊಟ್ಟ ಆಯುಷ್ಯವ ಕೊಡಿಸಿದವ 20ಶ್ರೀನಿವಾಸಾಚಾರ್ಯ ಹರಿತನ್ನ ದಾಸರಿಗೆತಾನೆ ಬಂದೊಲಿವುದು ನೇರಲ್ಲಿ ಕಂಡುತನ್ನನ್ನು ಹರಿದಾಸರಲಿ ಓರ್ವ ಮಾಡೆಂದುವಿನಯದಿಂ ಗೋಪಾಲದಾಸರ ಬೇಡಿದನು 21ವಿಜಯಗೋಪಾಲನ್ನವಿಜಯದಾಸರ ಸ್ಮರಿಸಿನಿಜ ಶಿಷ್ಯಾಚಾರ್ಯನಿಗೆ ಉಪದೇಶಿಸಿದರುಅಜಪದಾರ್ಹನು ಮಧ್ವನಲ್ಲಿ ಜ್ವಲಿಸುವಶ್ರೀತಶ್ರೀ ಜಗನ್ನಾಥ ಎಂದು ಧ್ಯಾನಿಸು ಎಂದು 22ಪೋಗಿ ಪಂಢÀರಪುರ ಭೀಮರತಿಯಲ್ಲಿಸ್ವಗುರು ಆದಿ ಹನ್ನೆರಡು ಸ್ಮರಿಸುಬಾಗು ಮಧ್ವಾಂತಸ್ಥ ಹರಿಗೆಮಜ್ಜನಮಾಡುಜಗನ್ನಾಥ ಹರಿತೋರ್ವ ಪೊಳೆವ ಹರಿನಾಮ 23ಝಗಿ ಝಗಿಪ ತೇಜಸ್ಸು ಶಿರೋಪರಿ ಕಂಡನುಮೂಗಿನೊಂದೊಂದಡಿ ಶಿರದ ಮೇಲೆ&ಟಜquo;ಜಗನ್ನಾಥ ವಿಠಲ&ಡಿಜquo; ನಾಮ ಪ್ರಜ್ವಲಿಸಿತುಜಗನ್ನಾಥ ತನ್ನಿಚ್ಛೆಯಿಂದಲೇ ತೋರ್ದ 25ಜಡಜ ಭವಪಿತ ಡರಕ ಜಗನ್ನಾಥ ವಿಠಲನನೋಡಿದರು ಜಗನ್ನಾಥದಾಸ ಆಚಾರ್ಯಪೊಡವಿಗೊಡೆಯನುವಿಜಯಗೋಪಾಲ ಜಗನ್ನಾಥವಿಠ್ಠಲ ಪ್ರಸನ್ನನಾದನು ಶ್ರೀನಿವಾಸ 26ವೆಂಕಟಗಿರಿನಾಥ ಪಂಢರಿ ಜಗನ್ನಾಥಅಕಳಂಕ ಗುಣನಿಧಿ ವಿಠಲಪ್ರಸನ್ನನಾಗಿದಾಸರು ಮೂಲ ಮಂತ್ರಾದಿಗಳಿಂದಏಕಾಗ್ರ ಚಿತ್ತದಲಿ ಭಜಿಸಿ ಸ್ತುತಿಸಿದರು 27ಪುರಂದರದಾಸಾರ್ಯರ ವಂದಿಸಿ ಅವರಿಂದವಿರಚಿತ ಶ್ರೀಮಧ್ವ ರಮಣ ನಿನ್ನಭಾರಿತತ್ವವಕೊಂಡಕೀರ್ತನೆ ಹಾಡುತ್ತಶ್ರೀಕರ ವಿಠಲನ ಮಂದಿರದೊಳು ಪೊಕ್ಕರು 28ವಿಶ್ವವಿಷ್ಣು ವಷಟ್ಕಾರಾದಿ ನಾಮನುದಾಸಪ್ರಿಯಜನ ವಿಠ್ಠಲ ರುಕ್ಮಿಣಿಯಕೇಶವಾದಿಪಾದಾಂತ ಸಂಸ್ತುತಿಸಿ ನಮಿಸಿದರುದಾಸರು ಶರಣು ತಾನೆನ್ನುತ ಮುದದಿ 29ಏನೆಂಬೆ ವಿಠ್ಠಲನ ರುಕ್ಮಿಣಿಯ ವಾತ್ಸಲ್ಯಅನುಪಮ ಔತಣ ದಾಸರಿಗೆ ಮಾಡಿಅನುತ್ತಮ ಪ್ರಸಾದ ಮಾಲಾದಿಗಳ ಕೊಟ್ಟುಅನುಗ್ರಹಿಸಿ ಕಳಿಸಿದರು ದಾಸರ ಸ್ವಪುರಕೆ 30ಮಳಖೇಡ ಕೃಷ್ಣ ಮಂತ್ರಾಲಯಕೆ ಪೋಗಿಅಲ್ಲಿರುವಗುರುದೇವತಾ ನಮನ ಮಾಡಿಗೋಪಾಲದಾಸ ಉದ್ಧಾರಕರ ಬಳಿಬಂದುಕಾಲಿಗೆರಗಿದರು ಕೃತಕೃತ್ಯ ಭಾವದಲಿ 31ವಾಸುದೇವಗೆ ಪ್ರಿಯ ಐಜಿ ಮಹಾತ್ಮರುವ್ಯಾಸತತ್ವಜÕ ಹರಿದಾಸ ಯತಿವರರುಸಸೋದರ ಪರಿವಾರ ಗೋಪಾಲದಾಸಾರ್ಯರಬಿಸಜಾಂಘ್ರಿ ಸನ್ನಮಸಿ ಹೊರಟರಲ್ಲಿಂದ 32ಚೀಕಲ ಪರಿವಿಯಲಿ ಏಕಾತ್ಮ ನರಹರಿಯಅಕಳಂಕ ದೃಢಭಕ್ತಿಯಿಂದ ಪೂಜಿಸುವಆ ಕರುಣಿ ವಿಜಯದಾಸರ ಕಂಡು ನಮಿಸಿಚಿಕ್ಕಂದಿ ಸ್ವಪುರ ಮಾನವಿಯಯೈದಿದರು 33ಮನುತೀರ್ಥ ತಟದಲ್ಲಿ ಮೀಸಲಾಗಿವರಿಗೆಅನ್ಯರಾಕ್ರಮಿಸದೇ ರಕ್ಷಿಸಲ್ಪಟ್ಟಮನೆಯಲ್ಲಿ ನರಹರಿಯ ಹನುಮನ್ನ ಪೂಜಿಸುತದಿನದಿನದಿ ಪ್ರವಚನ ಭಜನೆ ಮಾಡಿದರ 34ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥದಾಸಾರ್ಯ ಶರಣು 35- ಅಷ್ಟಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
139-8ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಮಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಪ್ರಾಣೇಶ ಶ್ರೀಶವಿಠ್ಠಲ ದಾಸರುಗಳಿಗೆಇನ್ನು ಅನೇಕರಿಗೆ ಶಿಷ್ಯತ್ವ ಇತ್ತುಪುನಃ ಶಿಷ್ಯರ ಸಹ ಕ್ಷೇತ್ರಾಟನ ಮಾಡಿಸ್ವರ್ಣಪುರಿಯೈದಿದರು ಸತ್ಯಬೋಧರಲಿ 1ಕರ್ಜಗೀ ದಾಸಪ್ಪಗೆ ಶ್ರೀದಾಂಕಿತ ಕೊಟ್ಟುಶ್ರೀಜಗನ್ನಾಥದಾಸರು ಮುಂದು ಹೊರಟುಕರ್ಜಗೀ ಸಮೀಪದಲಿ ವರದಾತೀರದಲಿತ್ರಿಜಗಖ್ಯಾತ ಧೀರೇಂದ್ರರ ನಮಿಸಿದರು 2ಹರಿಹರ ಕ್ಷೇತ್ರವು ಮದ್ದೂರು ಅಬ್ಬೂರುಪುರುಷೋತ್ತಮ ಬ್ರಹ್ಮಣ್ಯರ ವಂದಿಸಿಶ್ರೀರಂಗಪಟ್ಟಣದಿ ರಂಗನ್ನ ಸೇವಿಸಿಗರಳುಂಡೇಶ್ವರನÀ ದರ್ಶನ ಮಾಡಿದರು 4ಮಂಡಲೇಶ್ವರರೇನು ರಾಜಪ್ರಮುಖರು ಏನುಪಂಡಿತೋತ್ತಮರೇನು ದಿವಾನುಗಳು ಏನುಅಂಡಕೋಟಿನಾಯಕಹರಿಯ ದಾಸರಿವರನ್ನಕೊಂಡಾಡಿ ಮರ್ಯಾದೆ ಮಾಡಿದರು ಎಲ್ಲೂ 5ಉಡುಗೊರೆಗಳು ಕನಕರತ್ನಾಭರಣಗಳುನಡೆಯಬಾರದು ಎಂದು ಪಲ್ಲಕ್ಕಿ ವಾಹನವುಈಡುಂಟೆ ಜಗನ್ನಾಥದಾಸರಿಗೆ ಮೈಸೂರುಮಾಡಿದ ಮರ್ಯಾದೆ ರಂಗನ ಅನುಗ್ರಹವು 6ಮೈಸೂರು ಕೊಂಗು ಕೇರಳ ಚೋಳ ಪಾಂಡ್ಯದೇಶಗಳಿಗೆ ಪೋಗಿಉಡುಪಿಕಂಚಿಶ್ರೀ ಶ್ರೀನಿವಾಸನ ಕ್ಷೇತ್ರ ಘಟಿಕಾಚಲವುಈಶಾನುಗ್ರಹವು ಮರ್ಯಾದೆ ಎಲ್ಲೆಲ್ಲೂ 7ಜಯಜಯ ಜಗತ್ರಾಣ ಮಧ್ವ ನಾಮಾಭಿದಪದ್ಯಾವಳಿಯು ಶ್ರೀಪಾದರಾಜರದುದಿವ್ಯ ಫಲಶ್ರುತಿ ಇದಕೆ ಜಗನ್ನಾಥದಾಸಆರ್ಯರು ಬರೆದಿಹರು ಸಜ್ಜನರು ಪಠಿಸಿ 8ತೀರ್ಥಾಭಿಮಾನಿಗಳ ತದಂತಸ್ಥ ಹರಿರೂಪಕ್ಷೇತ್ರ ವಾರ್ತೆಗಳನ್ನು ತತ್ವ ಬೋಧಿಸುವಕೀರ್ತನೆಗಳ ಮಾಡಿ ಹರಿಗರ್ಪಿಸಿದರುಓದಿದರೆ ಕೇಳಿದರೆ ಇಹಪರದಿ ಸುಖವು 9ಹರಿವಾಯು ಸುರವೃಂದ ಗುರುವೃಂದ ಪ್ರೀತಿಕರಭಾರಿಶುಭಫಲಪ್ರದವು ತತ್ವ ಸುವ್ವಾಲೆಹರಿಕಥಾಮೃತಸಾರ ವರ್ಣಿಸಲಶಕ್ಯವುಉರುಮಹಾಸೌಭಾಗ್ಯಾಕಾಂಕ್ಷಿಗಳು ಓದಿ 10ಹರಿಸಮೀರರು ತಾವೇ ಶ್ರೀಪಾದರಾಜರಲುಶಿರಿವ್ಯಾಸರಾಜ ಶ್ರೀವಾದಿರಾಜರಲುಪುರುಂದರದಾಸರಲು ನಿಂತು ಸ್ವಪ್ನದಿ ಪ್ರೇರಿಸೆಹರಿಕಥಾಮೃತಸಾರ ಬರೆದ ದಾಸಾರ್ಯ 11ಪ್ರಾರಂಭ ಹರಿಕಥಾಮೃತಸಾರ ಸ್ವಾದಿಯಲಿಶಿರಿವ್ಯಾಸವಾದಿರಾಜ ವೇದವೇದ್ಯರ ಮುಂದೆವರಚಿಪ್ಪಗಿರಿಯಲ್ಲಿ ವಿಜಯದಾಸರ ಮತ್ತುಶಿರಿಕೃಷ್ಣ ಸನ್ನಿಧಿಯಲಿ ಸುಶುಭಮಂಗಳವು 12ಗುರುಶ್ರೀಶವಿಠಲ ದಾಸಾರ್ಯರು ಕುಂಟೋಜಿರಾಯರೆಂಬುವ ಸೂರಿಕುಲ ತಿಲಕಾಗ್ರಣಿಯುಹರಿಕಥಾಮೃತಸಾರ ಮಂಗಳವ ಚಿಪ್ಪಗಿರಿಯಲ್ಲಿ ಮಾಡಿಹರು ನಮೋ ನಮೋ ಇವರ್ಗೆ 13ಹರಿಕಥಾಮೃತಸಾರ ಫಲಶ್ರುತಿ ಅನೇಕವುಸೂರಿವರ್ಯರು ಹರಿದಾಸರು ಹಾಡಿಹರುಭರಿತ ರಚನೆಗಳ ಗ್ರಂಥ ಪದ್ಯಂಗಳಬರೆದಿಹರು ಜಗನ್ನಾಥದಾಸಾರ್ಯಸೂರಿ 14ಶ್ರೀ ದಪ್ರಾಣೇಶಾದಿ ದಾಸಶಿಷ್ಯರ ಕೂಡಿಮೋದಮಯ ನರಹರಿ ಹನುಮಗುರುವೃಂದಆರಾಧಿಸಿ ಬರುವವರ ಉದ್ಧರಿಸುತ್ತಮುದದಿಂ ಕುಳಿತರು ಮಾನವೀಯಲ್ಲಿ 15ವರುಷ ಎಂಭತ್ತೆರಡು ತಿಂಗಳು ಒಂದುಆರುದಿನ ಮೂವತ್ತೇಳು ಘಟಿಕ ಅರ್ಧಧರೆಯಲ್ಲಿಹರಿಇಚ್ಛಾ ಸೇವಾರತರಾಗಿತೆರಳಿದರು ಜಗನ್ನಾಥದಾಸ ಹರಿಪುರಕೆ 16ಶಾಲಿಶಕ ಹದಿನೇಳು ನೂರಮೂವತ್ತೊಂದುಶುಕ್ಲ ಸಂವತ್ಸರ ಭಾದ್ರಪದ ಶುದ್ಧಮೂಲಾನಕ್ಷತ್ರ ರವಿವಾರ ನವಮಿಯಲ್ಲಿಮಾಲೋಲ ಸಹ ಜ್ವಲಿಸುತ್ತ ತೆರಳಿದರು 17ಅಮೃತ ಸೈಷಸೇತುಃ ನರಸಿಂಹ ಸ್ತಂಭದಲಿಇರುತಿಹನು ಅಲ್ಲೊಂದು ಅಂಶದಿ ಇಹರುಶ್ರೀ ರಾಘವೇಂದ್ರ ವೃಂದಾವನ ಶ್ರೀ ಸತ್ಯಬೋಧರ ಸಾನ್ನಿಧ್ಯ ಸ್ತಂಭದ ಮುಂದೆ 18&ಟಜquo;ಜ&ಡಿಜquo; ಯೆನಲು ಜಯ ಸಂಸಾರ ಭಯಹರವು&ಟಜquo;ಗ&ಡಿಜquo; ಯೆನಲು ಸರ್ವಪೀಡೆ ಪರಿಹಾರ&ಟಜquo;ನ್ನಾ&ಡಿಜquo; ಯೆನ್ನೆ ಸರ್ವೋತ್ತಮಸ್ವಾಮಿ ಸುಖವೀವ&ಟಜquo;ಥ&ಡಿಜquo; ಎನಲು ಅನ್ನಧನವಿತ್ತು ರಕ್ಷಿಸುವ 19ಜಯಜಯತು ಶ್ರೀ ಹಂಸವಿಧಿ ಮಧ್ವ ವ್ಯಾಸಮುನಿಜಯಜಯತುಪುರಂದರವಿಜಯದಾಸಾರ್ಯಜಯಜಯತು ಗೋಪಾಲದಾಸಾರ್ಯ ಜಯಜಯತುಜಯಜಗನ್ನಾಥ ದಾಸಾರ್ಯ ಜಯಜಯತು 20ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥದಾಸಾರ್ಯ ಶರಣು 21- ನವಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಅಂತಕನ ದೂತರಿಗೆ ಕೃಪೆಯಿಲ್ಲವದರಿಂದ |ಚಿಂತೆಯನು ಬಿಟ್ಟು ಶ್ರೀ ಹರಿಯೆ ನೆನೆ ಮನವೆ ಪ.ದಿವರಾತ್ರಿಯೆನ್ನದೇ ತಿರುಗಿ ಲಂಪಟನಾಗಿ |ಸವಿಗಂಡ ಊಟಗಳ ಉಣಲರಿಯದೆ |ಅವನ ಕೊಂದು ಇವನ ಕೊಂದು ಅರ್ಥವನು ಗಳಿಸಿಕೊಂಡು |ಜವನ ದೂತರು ಬಂದು ಎಳೆವ ಹೊತ್ತರಿಯೆ 1ಮೊನ್ನೆ ಮದುವೆಯಾದೆ ಕರೆವುವು ಒಂದೆರಡಮ್ಮೆ |ನಿನ್ನೆ ಕೊಂಡೆನು ಕ್ಷೇತ್ರ ಫಲಬಾಹೊದು ||ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲಾ |ತನ್ನ ದೂತರು ಬಂದು ಎಳೆವ ಹೊತ್ತರಿಯೆ 2ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ |ಬಸಿರೆ ಹೆಂಡತಿ ಮಗನ ಮದುವೆಯು ನಾಳೆ ||ಹಸನವಾಗಿದೆ ಬದುಕು ಸಾಯಲಾರೆನು ಎನಲು |ವಿಷಮ ದೂತರು ಬಂದು ಎಳೆವ ಹೊತ್ತರಿಯೆ 3ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬಮತ್ತೊಬ್ಬ ಮಗನ ಉಪನಯನ ನಾಳೆ ||ಅರ್ಥಿಯಾಗದೆ ಬದುಕು ಸಾಯಲಾರೆನು ಎನಲು |ಮೃತ್ಯು ಹೆಡತಲೆಯಲಿ ನಗುತಿಹುದರಿಯೆ 4ಅಟ್ಟಡಿಗೆ ಉಣಲಿಲ್ಲ ಇಟ್ಟ ನೀರ್ಮೀಯಲಿಲ್ಲ |ಕೊಟ್ಟ ಸಾಲವ ಕೇಳ್ವ ಹೊತ್ತ ಕಾಣೆ ||ಕಟ್ಟಕಡೆಯ ದಿವಸ ತಂಬಿದ ಬಳಿಕಿರಲಿಲ್ಲ |ಇಷ್ಟರೊಳು ಪುರಂದರವಿಠಲನ ನೆನೆಮನೆವೆ 5
--------------
ಪುರಂದರದಾಸರು
ಆರತಿಯ ಬೆಳಗಿರೆ ಪಅರಸಿ ರುಕ್ಮಿಣಿ ಕೂಡ ಅರಸು ವಿಠಲಗೆಬಿರುದಿನ ಶಂಖವ ಪಿಡಿದ ವಿಠಲಗೆ ||ಸರಸಿಜ ಸಂಭವಸನ್ನುತ ವಿಠಲಗೆನಿರುತ ಇಟ್ಟಿಗೆ ಮೇಲೆ ನಿಂತ ವಿಠಲಗೆ 1ದಶರಥರಾಯನ ಉದರದಿ ವಿಠಲಶಿಶುವಾಗಿ ಜನಿಸಿದ ಶ್ರೀರಾಮ ವಿಠಲಪಶುಪತಿ ಗೋಪಿಯ ಕಂದನೆ ವಿಠಲಅಸುರೆ ಪೂತನಿಯ ಕೊಂದ ವಿಠಲಗೆ 2ಕಂಡಿರ ಬೊಬ್ಬುರ ವೆÉಂಕಟವಿಠಲನಅಂಡಜವಾಹನ ಅಹುದೋ ನೀ ವಿಠಲ ||ಪಾಂಡುರಂಗ ಕ್ಷೇತ್ರ ಪಾವನ ವಿಠಲಪುಂಡರೀಕಾಕ್ಷ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಎಂಥ ಬಲವಂತನೊ-ಕುಂತಿಯ ಸಂಜಾತನೋ |ಭಾರತಿಗೆ ಕಾಂತನೊ-ನಿತ್ಯ ಶ್ರೀಮಂತನೋ ಪರಾಮಚಂದ್ರನ ಪ್ರಾಣನೊ-ಅಸುರ ಹೃದಯ ಬಾಣನೊ |ಖಳರ ಗಂಟಲ ಗಾಣನೊ-ಜಗದೊಳಗೆ ಪ್ರವೀಣನೊ 1ಬಂಡಿಯನ್ನವನುಂಡನೊ-ಬಕನ ಪ್ರಾಣವ ಕೊಂಡನೊ |ಭೀಮಪ್ರಚಂಡನೊ-ದ್ರೌಪದಿಗೆ ಗಂಡನೊ 2ಕುಂತಿಯ ಕಂದನೊ ಸೌಗಂಧಿಕವ ತಂದನೋ |ಕುರುಕ್ಷೇತ್ರಕೆ ಬಂದನೊ-ಕೌರವರ ಕೊಂದನೋ 3ವೈಷ್ಣವಾಗ್ರಗಣ್ಯನೋ-ಸಂಚಿತಾಗ್ರಪುಣ್ಯನೋ |ದೇವವರೇಣ್ಯನೊ-ದೇವ ಶರಣ್ಯನೋ 4ಮಧ್ವಶಾಸ್ತ್ರವ ರಚಿಸಿದನೊ-ಸದ್ವೈಷ್ಣವರ ಸಲಹಿದನೊ |ಉಡುಪಿಕೃಷ್ಣನ ನಿಲಿಸಿದನೊ-ಪುರಂದರವಿಠಲನ ಒಲಿಸಿದನೊ 5
--------------
ಪುರಂದರದಾಸರು
ಎಲೆ ಮನವೆ ನೀ ತಿಳಿಹರಿ ಸರ್ವೋತ್ತಮನೆಂದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಸುಲಲಿತಾತ್ಮನ ಭಜಿಸಿ ಸುಖಿಯಾಗೊ ಮನವೆ ಪ.ಇಕ್ಷುದಂಡಗಳಿರಲು ಇಂಧನವ ಮೇಲೇಕೆ |ಅಕ್ಷಯ ಪಾತ್ರೆಯಿರಲು ಹಸಿವೆಯೆನಲೇಕೆ |ನಿಕ್ಷೇಪ ನಿಧಿಯಿರಲು ನಿರುತ ದಾರಿದ್ರ್ಯವೇಕೆ |ಪಕ್ಷಿವಾಹನನಿರಲು ಪರದೈವವೇಕೆ 1ಸುರಧೇನು ಕೈಸೇರಿ ಸುಖವಿಲ್ಲವೆನಲೇಕೆ |ಗರುಡ ಮಂತ್ರವ ಜಪಿಸಿ ಗರಳಭಯವೇಕೆ ||ತರಣಿಕಿರಣಗಳಿರಲು ಹಲವು ಜ್ಯೋತಿಗಳೇಕೆ |ಮುರಹರನ ಪೂಜಿಸದೆ ಮುಂದುಗೆಡಲೇಕೇ 2ಭಾವಶುದ್ಧಿಗಳಿರಲು ಬಯಲಡಂಬರವೇಕೆ |ದೇವತಾ ಸ್ತುತಿಯಿರದ ದೇಹವೇಕೆ ||ಆವಗಂ ಹರಿಯೆನದೆ ಅನ್ಯಚಿಂತೆಗಳೇಕೆ |ದೇವ ಪುರಂದರವಿಠಲನಿರಲು ಭಯವೇಕೆ 3
--------------
ಪುರಂದರದಾಸರು
ಎಷ್ಟೆಂದು ಬಣ್ಣಿಪೆ ಗುರುಸತ್ಯಪೂರ್ಣನದೃಷ್ಟಾಂತವ ಕಾಣೆನಾಶಿಷ್ಟ ಜನರಿಗೆ ಚಿಂತಾಮಣಿ ದೊರಕಿದಂತಿಷ್ಟಾರ್ಥದಾಯಕನಾ ಪ.ಶ್ರೀರಾಮ ವ್ಯಾಸರ ಸೇವೆಗೆ ಪೂರ್ವದಲ್ಲಾರಾಧನೆ ಮಾಡುತಧಾರುಣಿ ಮೇಲವತರಿಸಿದ ದ್ವಿಜಕುಲವಾರಿಧಿಚಂದ್ರನಂತೆ1ವೇದ ವೇದಾಂತ ಸಕಳಶಾಸ್ತ್ರಕ್ಷಿಪ್ರದಿಂದೋದಿ ಶ್ರೀ ಮಧ್ವಶಾಸ್ತ್ರಬೋಧವಕೇಳಿಮಹಾಭಕುತಿಲಿಗುರುಪಾದಾಬ್ಜ ನಂಬಿ ನಿಂತ 2ಬ್ರಹ್ಮಚರ್ಯಾಶ್ರಮ ಮೊದಲಾಗಿ ದಿನ ದಿನನಿರ್ಮಲ ಕಳೆಯನಾಂತಉಮ್ಮಯದಿಂದ ಷಟ್ಕರ್ಮಸಾಧನವಾದದsÀರ್ಮದ ದಾರಿಲಿ ನಿಂತ 3ತಾಯಿ ಮಕ್ಕಳ ಸಾಕಿದಂತೆ ಗುರುಕೃಪಾಪೀಯೂಷವನುಂಡು ತಾಬಾಯೆಂದು ಕರೆಸಿಕೊಂಡಖಿಳಾರ್ಥ ಪಡೆದ ನಿಷ್ಕಾಯನ ತೇಜವಂತ 4ನಿತ್ಯದಿ ಕರ್ಮಕೆ ಕುಂದಾಗಲಿಲ್ಲಗ್ನಿಹೋತ್ರ ಸಹಿತ ಸುವಾನಪ್ರಸ್ಥನಾಗಿ ಭೋಗಾಸಕ್ತಿಯ ತೊರೆದ ವಿರಕ್ತಿಭಾಗ್ಯಾನ್ವಿತನ5ಬಣ್ಣವಿಟ್ಟಿಹ ಚೊಕ್ಕ ಚಿನ್ನನೊ ಅಭ್ರಗೆದ್ಹುಣ್ಣಿಮೆ ಚಂದ್ರಮನೊಉನ್ನತಗುರು ಸತ್ಯಾಭಿನವ ತೀರ್ಥರಪುಣ್ಯವೆ ನೀನೊ ಯತಿರನ್ನನೊ 6ಹೀಗೆಂದು ಸುಜನರು ಹೊಗಳಲು ಶ್ರೀಪಾದಯೋಗಿತಾನೆನಿಸಿದನುಮ್ಯಾಗೆ ಮ್ಯಾಗದ್ಭುತ ಪಾಂಡಿತ್ಯವೆಂಬ ವಲ್ಲಿಗೆ ಹಬ್ಬುಗೆನಿತ್ತನು 7ಗುರುಗಳಭೀಷ್ಟೆ ಪೂರೈಸಿತು ಶ್ರೀರಘುವರನ ಮೂರ್ಧನಿಯಲಿಟ್ಟುಸ್ಥಿರ ಪಟ್ಟಾಭಿಷೇಕವಾಂಗೀಕರಿಸಿ ಜಗದ್ಗುರುವೆ ತಾನಾದಕರ್ತ8ದಿವ್ಯ ನಾಚಾರ ಕ್ಷೇತ್ರದಿ ಹರಿಸ್ಮರಣಿಂದಹವ್ಯಸಾಂಕಿತ ಗುರುಗಳುಆ ವ್ಯಯಾಬ್ದ ಜ್ಯೇಷ್ಠಾಧಿಕ ಶುದ್ಧ ಚತುರ್ದಶಿದಿವಸ ದಿವಿಗೆ ಸಾಗಲು 9ಹರಿಪಾದಯಾತ್ರೆಗೆ ಗುರುಗಳೈದಿದÀ ಮೇಲೆಪರಮದುಃಖಿತಮೌಳಿತ್ವರಿಯದಿ ವೃಂದಾವನ ವಿರಚಿಸಿದ ಮುನಿವರನ ಮಹಿಮೆಯಕೇಳಿ10ಪೃಥ್ವಿಪರಿಂದ ಪೂಜಿಸಿಕೊಂಡುದುರ್ವಾದಿಮೊತ್ತವ ಗೆಲುತಲಿಹಅರ್ಥಿಲಿ ಜಯಪತ್ರವನು ಜಯಿಸುತಗುರುಚಿತ್ತಕರ್ಪಿಸುತಲಿಹ 11ನಿಜಗುರುದಯದಿಂದ ದುರಿತತಮವ ಗೆದ್ದಂಬುಜ ಸಖನಂತೊಪ್ಪುವತ್ರಿಜಗವಂದಿತರಾದ ವೇದ ವ್ಯಾಸಾಂಘ್ರಿಯಭಜನ ಭಾಗ್ಯದೊಳೊಪ್ಪುವ 12ಧ್ಯಾನ ಮೌನ ಸದ್ವ್ಯಾಖ್ಯಾನ ಪೂರ್ಣನುಜ್ಞಾನ ಭಕುತಿಪೂರ್ಣನುಏನೆಂಬುವಿರೊ ಕರುಣಗುಣ ಪೂರ್ಣನುದಾನ ಮುದ್ರಾಪೂರ್ಣನು 13ಗುರುಸತ್ಯಾಭಿನವ ತೀರ್ಥರ ಸತ್ಯಪೂರ್ಣನು*ವರದರಾಜಯತಿಯೊಳು ದಯಾಪೂರ್ಣನುಸರಸೋಕ್ತಿ ಪರಿಪೂರ್ಣನು 14ತಂದೆ ಸತ್ಯಾಭಿನವಾಂಬುಧಿಜಾತ ತತ್ವಾರ್ಥವೃಂದರುಚಿರ ಪೂರ್ಣನುಎಂದು ಪ್ರಸನ್ವೆಂಕಟ ಪ್ರಿಯಾನಿಲಮತಸಿದ್ಗಾಂತದಿ ಪೂರ್ಣನು 15
--------------
ಪ್ರಸನ್ನವೆಂಕಟದಾಸರು
ಏನು ಮಾಡಿದರೇನು ಏನು ನೋಡಿದರೇನುದಾನವಾಂತಕ ನಿನ್ನನರಿಯದ ಪಾಪಿ ಪನಾನಾದೇಶವ ತಿರುಗಿ ಯಾತ್ರೆ ಮಾಡಿದರೇನುನಾನಾತೀರ್ಥವ ಮುಳುಗಿ ಸ್ನಾನ ಮಾಡಿದರೇನುನಾನಾಕ್ಷೇತ್ರದಿನಿಂದುದಾನ ಮಾಡಿದರೇನುದೀನರಕ್ಷಕ ನಿನ್ನ ಒಲುಮಿಲ್ಲದವರು 1ನಾನಾಗುಹೆಗಳ ಪೊಕ್ಕು ತಪವ ಮಾಡಿದರೇನುಮೌನದಿಂ ಕುರಿತು ಬಲುಜಪ ಮಾಡಿದರೇನುನಾನಾಶಾಸ್ತ್ರವ ಅರ್ಥಮಾಡಿದರೇನುಜಾನಕೀಶನೆ ನಿನ್ನ ದಯವಿಲ್ಲದವರು 2ನಾನಾಗುಡಿಗಳ ಪೊಕ್ಕು ಪ್ರತಿಮೆ ನೋಡಿದರೇನುನಾನಾಸತ್ಯರ ಮುಖವನಿತ್ಯನೋಡಿದರೇನುಧ್ಯಾನಿಕರಸುಲಭ ಶ್ರೀರಾಮ ನಿನ್ನಡಿಕುಸುಮಕಾಣದಧಮರು ಈ ಜಗದೊಳಗೆ ಪುಟ್ಟಿ 3
--------------
ರಾಮದಾಸರು
ಕಡುಕೃಪೆಯಿಂದಹರಿ ಒಲದರೆ ಸತ್ಯದ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನಡೆವಳಿ ಮೌನವೆ ಸಾಕ್ಷಿದೃಡ ಭಕ್ತರಿಗುಣಬಡಿಸಿದಂಥವರಿಗೆಷಡುರ ಸ್ನಾನವೇ ಸಾಕ್ಷಿ ಪಅನ್ನದಾನ ಮಾಡಿದ ಮನುಜಗೆ - ದಿವ್ಯಾನ್ನವುಂಬುವುದೇ ಸಾಕ್ಷಿಅನ್ನದಾನ ಮಾಡದ ಮನುಜಗೆ - ಸರರನ್ನಕೆ ಬಾಯ್ಬಿಡುವುದೆ ಸಾಕ್ಷಿ 1ಕನ್ಯಾದಾನ ಮಾಡದ ಮನುಜಗೆ ಚೆಲ್ವಹೆಣ್ಣಿನ ಭೋಗವೇ ಸಾಕ್ಷಿಕನ್ಯಾದಾನ ಮಾಡದ ಮನುಜಗೆ -ಪರಹೆಣ್ಣಿನ ಹೋರಾಟವೇ ಸಾಕ್ಷಿ 2ಪರರಿಗೊಂದು ತಾನೊಂದುಂಬುವರಿಗೆಜ್ವರ -ಗುಲ್ಮ ರೋಗವೇ ಸಾಕ್ಷಿಪರಿಪರಿ ವಿಧದಿಂದ ಹಿರಿಯರ ದೂರುವಗೆತಿರಿದು ತಿಂಬುವುದೇ ಸಾಕ್ಷಿ 3ಕಂಡ ಪುರುಷಗೆ ಕಣ್ಣಿಡುವ ಸತಿಯು - ತನ್ನಗಂಡನ ಕಳೆಯುದೇ ಸಾಕ್ಷಿಪುಂಡತನದಿಪರ ಹೆಂಗಳೆನುಳುಪುವಗೆಹೆಂಡಿರು ಕಳೆವುದೇ ಸಾಕ್ಷಿ 4ಕ್ಷೇತ್ರದಾನದ ಮಾಡಿದ ಮನುಜಗೆ - ಏಕಛತ್ರದ ರಾಜ್ಯವೇ ಸಾಕ್ಷಿಮುಕ್ತಿ ಪಡೆದು ತಿಳಿ ಪುರಂದರವಿಠಲನಭಕ್ತನಾಗುವುದೇ ಸಾಕ್ಷಿ 5
--------------
ಪುರಂದರದಾಸರು
ಕೂಡಲ ಮಾಣಿಕ್ಯ ಕ್ಷೇತ್ರಸ್ಥ ಭರತ ಪ್ರದ್ಯುಮ್ನ60ಶ್ರೀ ರಾಮಚಂದ್ರಾನುಜ ಭರತರಾಜಶರಣಾದೆ ತವಚರಣಯುಗಳ ತೋಯಜಕೆ ಪಉರು ಪರಾಕ್ರಮಿ ದುರ್ಗೆರಮಣ ಹರಿಚಕ್ರದಲಿಇರುವೆ ನೀ ತದ್ರೂಪದಲಿ ಸೇವಿಸುತಲಿಮಾರಶ್ರೀ ಕೃಷ್ಣಸುತ ಸ್ಕಂಧಾದಿರೂಪಿ ನೀಧೀರ ನಿನ್ನಲಿ ಕೃತೀಪತಿಯು ಪ್ರಜ್ವಲಿಪ 1ಉಡುಪಶೇಖರ ಕೊಟ್ಟ ವರಬಲದಿ ಪೌಲಸ್ತ್ಯಕಡು ಕಷ್ಟ ಕೊಡಲಾಗಸುರರುಮೊರೆಯಿಡಲುಕಡಲಶಯನನು ರಾಮ ಪ್ರಾದುರ್ಭವಿಸಲು ನೀನುಹೆಡೆರಾಜ ಅನಿರುದ್ಧಸಹ ಬಂದೆ ಬುವಿಯೊಳ್ 2ಕೇಕಯಕೆ ನೀ ಪೋಗೆ ಕೈಕೇಯಿ ವರದಿಂದರಾಕೇಂದುನಿಭಮುಖನು ನಿಷ್ಕಳ ಶ್ರೀರಾಮನನೂಕಲು ವನಕೆ ನೀ ಬಂದರಿತು ಧಿಕ್ಕರಿಸಿಏಕಾತ್ಮ ರಾಮನಲಿ ಪೋಗಿ ಬೇಡಿದೆಯೊ 3ಸ್ವೀಕರಿಸಿ ರಾಜ್ಯವಾಳೆಂದು ನೀ ಬೇಡಲುಅಖಿಲಾಂಡಕೋಟಿ ಬ್ರಹ್ಮಾಂಡಪತಿ ರಾಮನಾಕಿ ಭೂಸುರರೊಡೆಯ ಹದಿನಾಲ್ಕು ವರ್ಷಗಳುಆಗೆ ತಾ ಬರುವೆನು ಎಂದು ಪೇಳಿದನು 4ದೇವ ಶ್ರೀ ರಾಮನ ಸುಖಜ್ಞಾನಮಯಪಾದಸೇವಿಸಿ ಪ್ರೇಮಪ್ರವಾಹದಲಿ ನೀನುಬುವಿಯನು ಪವಿತ್ರ ಮಾಡುವ ಪಾದಪೀಠವನುನವವಿಧ ಭಕ್ತಿಯಲಿ ತಂದು ಪೂಜಿಸಿದೆ 5ನಂದಿಗ್ರಾಮದಲಿ ನೀ ತಪಶ್ಚರ್ಯದಲಿ ಇದ್ದುಬಂದಿಲ್ಲ ರಾಮನೆಂದಗ್ನಿ ಮುಖದಲಿ ನಿಲ್ಲೆಬಂದ ಇಕ್ಕೋ ಸ್ವಾಮಿ ರಾಮಚಂದ್ರನು ಎಂದಇಂದಿರೇಶನ ಪ್ರಥಮ ದೂತ ಶ್ರೀ ಹನುಮ 6ಅಖಿಲೇಶ ಸುಖಮಯನು ಶ್ರೀ ರಾಮಚಂದ್ರನುಸುಖ ಪೂರ್ಣ ಸೀತಾಸಮೇತ ಬರುವುದನುನೀಕೇಳಿಮುದದಲಿ1 ಮಾತೇರು ಶತ್ರುಘ್ನಭಕುತ ಪುರಜನ ಕೂಡ ಪೋದೆ ಕರೆತರಲು 7ಕಮಲೆ ಜಾನಕಿಪತಿಯ ಮೇಲೆ ಪೂಮಳೆ ಕರೆದುನಮಿಸೆ ನೀ ಭಕ್ತಿಯಲಿ ಕೃತಕೃತ್ಯ ಮನದಿಸ್ವಾಮಿ ರಾಮನು ನಿನ್ನಅಚಲಭಕ್ತಿಯ ಮೆಚ್ಚಿಪ್ರೇಮದಿಂದಲಿ ನಿನಗಾಲಿಂಗನವನಿತ್ತ 8ಸುರರ ನಗರೋಪಮವು ಸರೆಯೂ ತಟಿನಿಯಲ್ಲಿಇರುವುದು ಅಯೋಧ್ಯಾ ಆ ಪುರಿಜನರು ಎಲ್ಲಾಶ್ರೀರಾಮ ಸೀತಾಸಮೇತ ಪರಿವಾರ ಸಹಪುರಿಯೊಳು ಬರಲು ಆನಂದ ಹೊಂದಿದರು 9ಅಘದೂರ ಪೂರ್ಣಕಾಮನ ಮಂದಹಾಸವನುನರಜನರು ನೋಡಿ ಹಿಗ್ಗಿ ಘೋಷಿಸಲುಜಗಜ್ಜನ್ಮ ಸ್ಥಿತ್ಯಾದಿಕರ್ತ ಭೂಕಾಂತ ಶ್ರೀರಾಘವಗೆ ಮಾಡಿಸಿದೆ ರಾಜ್ಯಾಭಿಷೇಕ 10ಶ್ರೀ ರಾಮಭದ್ರನಿಗೆ ಯುವರಾಜನಾಗಿದ್ದುಭರತರಾಯನೆ ನೀನು ಸೇವೆ ಅರ್ಪಿಸಿದೆಸರಸಿಜೋದ್ಭವ ಲೋಕದಂತಾಯಿತೀ ಲೋಕವರವಿಷ್ಣು ಭಕ್ತಿಯು ಸೌಖ್ಯ ಎಲ್ಲೆಲ್ಲೂ11ಶರದಿಂದ ನೀನು ಗಂಧರ್ವರೂಪದಲಿದ್ದಮೂರು ಕೋಟಿ ಕ್ರೂರ ಅಸುರರನು ಕೊಂದೆಕರುಣಿಸಿ ನೀ ಎನ್ನ ಕಷ್ಟಗಳ ಪರಿಹರಿಸೊಶ್ರೀ ರಾಮಪ್ರಿಯ ಭರತ ಎನ್ನ ಗುರುಗಳ ರಾಜ 12ಶ್ರೀ ರಾಮ ಅವತಾರ ಕಾರ್ಯ ತಾ ಪೂರೈಸಿಸುರರುಮುನಿಗಣ ಮುಕ್ತಿಯೋಗ್ಯರ ಸಮೇತತೆರಳೆ ಸ್ವಧಾಮಕ್ಕೆ ಚಕ್ರ ನೀ ಚಕ್ರವನುಶ್ರೀರಾಮನಿಗೆ ದಕ್ಷಪಾಶ್ರ್ವದಲಿ ಪಿಡಿದೆ 13ಗರುಡಮೃಡಶೇಷಸ್ಥ ಭಾರತೀಪತಿ ಹೃಸ್ಥಪರಮಪೂರುಷ ಕೃತೀಪತಿಯು ಪ್ರದ್ಯುಮ್ನಹರಿರಾಮನಲಿ ಸದಾ ಭಕ್ತಿಭರಿತನೆ ಭರತವರನೀನು ಅಹಂಕಾರಿಕ ಪ್ರಾಣಾದ್ಯರಿಗೆ14ಸರಸಿಜಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸನವರಭಕ್ತ ವೃಂದ ಶಿರಮಾಣಿಕ್ಯ ಭರತಧರೆಯೊಳುತ್ತಮ ಕೂಡಲ್ ಮಾಣಿಕ್ಕವೆಂಬುವಕ್ಷೇತ್ರದಲಿ ನಿಂತು ಹರಿಭಕ್ತರನು ಪೊರೆವೆ 15
--------------
ಪ್ರಸನ್ನ ಶ್ರೀನಿವಾಸದಾಸರು
ಜಯ ಜಯ ಶ್ರೀಹರಿಪ್ರಿಯೆ ಮಹಾ-ಭಯಹರೆ ಜಗದಾಶ್ರಯೆಲಯವರ್ಜಿತ ನಿತ್ಯಾತ್ಮೆ ಚಿನ್ಮಯೆಜಯಶೀಲೆ ನಿರಾಮಯೆ 1ನಿತ್ಯಮುಕ್ತಿ ನಿರ್ವಿಕಾರೆ ನಿಜ-ಭೃತ್ಯನಿಚಯ ಮಂದಾರೆಪ್ರತ್ಯಗಾತ್ಮ ಹರಿಭಕ್ತಿರಸಪೂರೆಸತ್ವಾದಿಗುಣವಿದೂರೆ 2ಲಕ್ಷ್ಮೀನಾರಾಯಣಿ ಹರಿ-ವಕ್ಷಸ್ಥಲವಾಸಿನಿಅಕ್ಷರರೂಪಿಣಿ ಬ್ರಹ್ಮಾಂಡಜನನಿಸುಕ್ಷೇಮಪ್ರದಾಯಿನಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆ ಪ.ಕಂಡೀಶವಿನುತ ಬ್ರಹ್ಮಾಂಡಪಾಲ ಮಾ-ರ್ತಾಂಡಮಂಡಲಗ ಶುಂಡಾಲವರದ ಅ.ಪ.ಕ್ಷೇಮದಿ ಶ್ರೀಹರಿನಾಮವ ವರ್ಣಿಸೆನೇಮಾನುಷ್ಠಾನದೊಳಿರಲುನಾ ಮಾಡಿದ ನಾನಾವಿಧ ಪಾಪವತಾಮಸಗೊಳಿಸುವ ಕಾಮಕ್ರೋಧಗಳಿಂ 1ಶಿಷ್ಟಾಚಾರದೊಳಿಷ್ಟನಾಗಿಪರಮೇಷ್ಠಿಜನಕ ಜಯ ಜಯವೆನಲುಭ್ರಷ್ಟಾಲೋಚನೆ ಪುಟ್ಟಿಸಿ ಪಾಪದಬಟ್ಟಿಯ ಹೊದ್ದಿಪ ದುಷ್ಟಸಂಗದಿಂ 2ನಾರಾಯಣ ನರಹರಿಯೆನ್ನುವ ವ್ಯಾ-ಪಾರವ ನಾ ಮಾಡುತ್ತಿರಲುಆರೋಹಣಾವರೋಹಣ ನಾದವಿ-ಕಾರಗೊಳಿಪ ಶಾರೀರಪ್ರಕೃತಿಯಿಂ 3ಆರ್ಕಾರಣ ರಿಪುಗಳಿಗೈ ಸರ್ವ ದೇ-ವರ್ಕಳ ಮಸ್ತಕಮಣಿ ನೀನೈತರ್ಕಾಗಮ್ಯ ಲಕ್ಷ್ಮೀನಾರಾಯಣಅರ್ಕಾಮಿತಪ್ರಭ ಕಾರ್ಕಳಪುರವರ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ದಾತೆಇಂದಿರೆಪಾರಿ| ಜಾತ ಮಂದಿರೆ ಲೋಕ |ನಾಥೆ ಸುಖ ಪೂರ್ಣೆ ವಿಖ್ಯಾತೆ ||ಬಿನ್ನವಿಸುವೆನೆ ಯನ್ನಮಾತು ಮನ್ನಿಪುದೇ ವಿಧಿಮಾತೆ ಪಪಾನೀಯಧಿ ಹರಿಗೆ | ಏನು ಕೊಟ್ಟನೊ ನಿನ್ನ |ಕಾಣಿಸವೆ ಕಣ್ಣು ಕುಲವಿಲ್ಲ ||ಗೋತ್ರವಿಲ್ಲ ಹೆತ್ತವರ-ಕ್ಷೋಣಿಯೊಳಗೊಬ್ಬರರಿತಿಲ್ಲ1ಏನು ಮರುಳಾದೆವ್ವ | ಶ್ರೀನಾರಿಯಿಂಥವಗೆ |ಹೀನಳುಚ್ಛಿಷ್ಟ ಫಲಮೆದ್ದ ||ಬಡ ಬ್ರಾಹ್ಮಣೊದ್ದರೆಮಾನವೇ ಇಲ್ಲಿ ನಗುತಿದ್ದ2ಥವ ಚೋರ ಬಹುಜಾರ| ಸವತಿಯರು ಬಲು ಮಂದಿ |ಅವರಿಗಾತ್ಮಜರು ಹತ್ತತ್ತು ||ನಿನ್ನೊಗತನದೊಳಿದ್ದಅವಿವೇಕ ಮೂಲೋಕಕೆ ಗುರುತು3ಅತ್ತೆ ಮಾವಗಳಿಲ್ಲ |ವೃತ್ತಿಕ್ಷೇತ್ರಗಳಿಲ್ಲ |ಹಸಿದರನ್ನಿಲ್ಲ ಮನೆಯಲ್ಲಿ ||ಈ ಗಂಡನೊಡನೆಯೇ-ನರ್ಥಿ ಪಡುತಿಹೆಯೆ ನೀ ಬಲ್ಲೆ 4ಸೇರಿದನುಪತಿನಿನ್ನ | ತೌರು ಮನೆ ನೋಡಲ್ಕೆ |ಧಾರಿಣಿಯೊಳಗೆ ಬಹು ನಿಂದಾ ||ಭಕ್ತಿಯಿಂದವನ ಹ್ಯಾ-ಗಾರಾಧಿಸುವದೋ ಸುರವೃಂದಾ 5ಶಿಶು ಹಿಂಸಕತಿ ಕಠಿಣ | ಹಸನ್ಮುಖನಲ್ಲರ್ಭಕ ಹೆಂ- |ಗಸರಳಿದ ಪುಕ್ಕಾ ಬಹು ಠಕ್ಕಾ ||ಕಲಹಗಂಟೇನು ಸೇ-ವಿಸಿದ್ಯೊ ವ್ರತಗಳನು ಇವ ಸಿಕ್ಕಾ6ಎಲ್ಲೆಲ್ಲಿ ನೋಡಿದರು | ಇಲ್ಲಿ ಪ್ರಾಣೇಶ ವಿ- |ಠಲನಂಥವರೂ ಏನೆಂಬೆ ||ಮುದದಿಂದ ಬಿಡದೆ ಅವ-ನಲ್ಲಿ ಪೊಂದಿರ್ಪೆ ಜಗದಂಬೆ 7
--------------
ಪ್ರಾಣೇಶದಾಸರು
ದುರಿತವೆತ್ತಣದೊ ದುರ್ಗತಿಯು ಎಲ್ಲಿಹುದೊ ?ಹರಿನಾಮ ಸ್ಮರಣೆಯೆಚ್ಚರದಲ್ಲಿದ್ದವರಿಗೆ ಪ.ಸ್ನಾನವೇತಕೆ ಸಂಧ್ಯಾ ಜಪತಪವೇತಕೆಮೌನವೇತಕೆ ಮಾಸವ್ರತವೇತಕೆ ||ಮಾನಸದಲಿ ವಿಷ್ಣುಧ್ಯಾನವ ಮಾಡುವಜ್ಞÕನವಂತರ ಸಂಗಸುಖದೊಳಿಪ್ಪವರಿಗೆ 1ಯಾತ್ರೆಯೇತಕೆ ಕ್ಷೇತ್ರಗಳ ನೋಡಲೇತಕೆಗೋತ್ರಧರ್ಮದ ಪುಣ್ಯ ಫಲವೇತಕೆ ? ||ಸೂತ್ರದಿ ಜಗವ ಮೋಹಿಸುವ ಮುರಾರಿಯಸ್ತೋತ್ರ ಮಾಡಿ ಪೊಗಳುವ ಭಾಗವತರಿಗೆ 2ಅಂಗದಂಡನೆ ಏಕೆ ಆತ್ಮಗಾಸಿಯು ಏಕೆತಿಂಗಳ ಚಾಂದ್ರಾಯಣವೇತಕೆ ? ||ಮಂಗಳ ಮಹಿಮ ಶ್ರೀ ಪುರಂದರವಿಠಲನಹಿಂಗದರ್ಚನೆ ಮಾಡುವ ಭಕ್ತ ಜನರಿಗೆ 3
--------------
ಪುರಂದರದಾಸರು
ದೇವಿ ಅಂಬುಜವಲ್ಲಿ ರಮಣನೆ ಭೂವರಾಹ ದಯಾನಿಧೆಪವಮಾನನ ದಿವ್ಯ ಕರದಲಿ ಸೇವೆ ಸಂತತಗೊಳ್ಳುವಿಅವನಿಯೊಳು ಶ್ರೀಮುಷ್ಣಕ್ಷೇತ್ರದಿ ನೀ ವಿಹಾರವ ಮಾಡುವಿಅತ್ಯಗಾಧ ಸುಶೀಲಜಾಹ್ನವಿಸುತ್ತು ಷೋಡಶತೀರ್ಥದಿಮತ್ತು ವರ್ಣಿಪೆ ತೀರ್ಥ ತಟದಲಿ ಉತ್ತಮಾಗ್ನೇಯಭಾಗದಿಕರಗಳೆರಡು ಕಟಿಯಲಿಟ್ಟು ಕೋರೆಹಲ್ಲನೆ ತೋರುತಘನ್ನಶ್ವೇತವರಾಹಮೂರುತಿ ಎನ್ನ ಪೂರ್ವದ ಪುಣ್ಯದಿಸುಂದರಾನನ ಕಂಜಮಧುಪನಇಂದುನೋಡಿದ ಕಾರಣಮಲ್ಲಮರ್ದನವೈಕುಂಠದಿಂದ ಮೆಲ್ಲಮೆಲ್ಲನೆ ಬಂದೆಯಸೂಕರಾಸ್ಯನೆ ನಿನ್ನ ಪಾದಕನೇಕ ವಂದನೆ ಮಾಡುವೆ
--------------
ಗೋಪಾಲದಾಸರು