ಒಟ್ಟು 10607 ಕಡೆಗಳಲ್ಲಿ , 130 ದಾಸರು , 5708 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಮಾನ್ಯವಲ್ಲ ಶ್ರೀ ಹರಿಸೇವೆ ಪ.ಪಾಮರಜನರಿಗೆಸಾಮಜವರದನ ಪ್ರೇಮದಿ ನೆನೆವುದುತಾಮಸಬುದ್ಧಿಯ ತಾ ತಗ್ಗಿಸದೆಅಪಅಂತರ ಮಲಿನವಳಿಯಲು ಬೇಕು ಸಂತತ ಶ್ರವಣದಿ ಶ್ರೀಕಾಂತನ ಚರಿತವ ಕೇಳಲು ಬೇಕು ಸಂತಸದಿರಬೇಕುಸಂತ ಜನರಗುಣ ಸಂತತ ಮನದಿ ನಿರಂತರದಲಿ ತಾ ಚಿಂತಿಸಬೇಕು 1ಜಾÕನ ಕರ್ಮೇಂದ್ರಿಯಗಳ ನಿಗ್ರಹಿಸಿ ಜಾÕನವ ಸಂಗ್ರಹಿಸಿಹಾನಿ ವೃದ್ಧಿಗಳೆರಡನು ತಾ ಸಹಿಸಿ ದೀನತೆಯನು ವಹಿಸಿ ||ಮಾನಾಪಮಾನ ಸಮಾನವೆಂದರಿದು ನಿಧಾನದಿ ಹರಿಗುಣ ಧ್ಯಾನವ ಮಾಳ್ಪುದು 2ಸರ್ವಾಂತರ್ಯಾಮಿ ಶ್ರೀ ಹರಿಯೆಂದು ಸರ್ವೇಶ್ವರನೆಂದುಸರ್ವರ ಧಣಿ ಸ್ವರಮಣನೆಂದು ಸರ್ವಾನುರಾಗನೆಂದುಸರ್ವ ಮೂರುತಿ ಶ್ರೀ ಪುರಂದರವಿಠಲನಸರ್ವದಾ ಧ್ಯಾನಿಸಿ ಗರ್ವವಳಿಯಬೇಕು 3
--------------
ಪುರಂದರದಾಸರು
ಸಾರ್ವಭೂಪಾಲನ ಸೂನುವೆನಿಸಿಕೊಂಡುಸೋರೆ ಕೂಳಿನ ತಿರುಕೆ ||ನಾರಿ ಲಕ್ಷ್ಮೀಕಾಂತ ನಿನ್ನ ನಂಬಿದವಗೆದಾರಿದ್ರ್ಯದಂಜಿಕೆಯೆ? 2ಸುರನದಿಯಲಿ ಮಿಂದು ಶುಚಿಯಾದ ಬಳಿಕಿನ್ನುತೀರ್ಥದ ಅಟ್ಟುಳಿಯೇ ||ಕರುಣಾನಿಧಿಯೆಂದು ಮೊರೆಹೊಕ್ಕ ದಾಸಗೆದುರಿತದ ದುಷ್ಫಲವೆ? 3ಗರುಡನ ಮಂತ್ರವ ಕಲಿತು ಜಪಿಸುವಂಗೆಉರಗನ ಹಾವಳಿಯೆ ||ಹರಿಯ ಪಕ್ಕದೊಳು ಮನೆ ಕಟ್ಟಿದಾತಂಗೆಕರಿಗಳ ಭೀತಿಯುಂಟೆ?4ಪರಮಪುರುಷ ಸುಗುಣಾತ್ಮಕ ನೀನೆಂದುಮೊರೆಹೊಕ್ಕೆ ಕಾಯೊ ಎನ್ನ ||ಉರಗಾದ್ರಿವಾಸ ಶ್ರೀ ಪುರಂದರವಿಠಲನೆಪರಬ್ರಹ್ಮ ನಾರಾಯಣ 5
--------------
ಪುರಂದರದಾಸರು
ಸಿಕ್ಕಿದೆ ಬಾರೆಲೆ ಹೇ ಕಳ್ಳಾ ನಿನ್ನಚೊಕ್ಕ ಸಹಸಾ ಜರಿವವಳಲ್ಲಭಕುತೀಲೆ ಕಟ್ಟುವೆ ಈರಡಿಯ ನಡೆಅಕ್ಕ ಗೋಪಮ್ಮನಿದ್ದೆಡೆಯ ಪ.ಮುನ್ನಿನಪರಾಧಗಳ ತಾಳ್ದೆ ನಾನಿನ್ನ ದಿಟ್ಟತನ ಬಲವರಿದೆಚಿನ್ನನೆನಬಹುದೇನೊ ನಿನಗೆ ದಿಟ್ಟಗಣ್ಣವ್ಹರಿದೆಮ್ಮಯ ಮೊಲೆಗೆಉನ್ನತ ಗೋಡೆಗೆ ನಿಚ್ಚಣಿಕೆಯಿಕ್ಕದೆ ಪಾರಿದೆಘನ್ನ ಪಾಲು ಮೊಸರ ಗೋಪರೊಡನೆ ಸವಿದೆಉನ್ನತ ಮಹಿಮೆಯೆತ್ತ ಘನ್ನಜಾರತನಯೆತ್ತಬೆನ್ನ ಬಡಿಯುತ ನಗೆ ಬಿಡದಿಹ ಕಳ್ಳಾ 1ಹರಿಮಧ್ಯದಬಲೆಯರೆಳೆದೆ ಪಂಚಶರನ ಭರಕೆ ಮತಿಗಳೆದೆಹರವಿ ತುಪ್ಪಾದರೆ ನೆಗೆದೆ ಈಗಕರೆದರೆ ಬರಲೊಲ್ಲೆ ನಗದೆಚೋರತನವೇಕೆ ಗಂಭೀರತನವೇಕೆಪರಿಪರಿಹಲವಂಗವೇಕೆ ವರಕರುಣೇಕೆಸಿರಿಕಾಂತನಹದೆತ್ತ ದುರುಳತನಗಳೆತ್ತಕ್ರೂರಮುಖಕಂಜಿದಡೆ ಬಿರುದು ಪೋಯಿತಲಾ 2ತೊಂಡಮಕ್ಕಳ ಬಲವ ನೋಡಿದೆ ಬಲುಪುಂಡನಂತೆ ಕದನವನಾಡಿದೆಭಂಡತನದಲೊಬ್ಬನ ಬಡಿದೆ ದೊಡ್ಡಗಂಡಸಿನಂದದಿ ಮೇಲೋಡಿದೆಗಂಡನುಳ್ಳ ಬಾಲೆಯರ ಸದನಕೆ ಗಮಿಸಿ ಪ್ರಚಂಡತನದಿ ಮಿಂಡವೆಣ್ಣುಗಳ ಪಿಡಿದೆತಂಡ ತಂಡದೊಳು ಮುದ್ದುಕೊಡಲೀಸದಿರರು ಬೊಮ್ಮಾಂಡ ಪತಿಯಾದರಿದು ಸಲುವುದೆ ಕಳ್ಳಾ 3ಉತ್ತಮ ಮರ ನೆರಳ ನೋಡಿದೆ ಮರಹತ್ತುತಲೆ ಚಂಡನೀಡಾಡಿದೆಸುತ್ತಲಿಹ ಗೋವರ ಬೇಡಿದೆ ಅವರೆತ್ತಿ ಕೊಡದಿರೆ ಹಗೆವಿಡಿದೆಮತ್ತಮಾವನ್ನೊತ್ತಿ ಮುದುಮುತ್ತನ ಕೈವಿಡಿದೆಕತ್ತಲೆ ಹಕ್ಕಿಯ ಮಾಡಿ ದಿತಿಜರನರಿದೆಎತ್ತಣ ವೈಕುಂಠ ನಿನಗೆತ್ತಣನಂತಾಸನವೊಭಕ್ತರ ಕಾಯ್ದೆ ಆವಪಟ್ಟಲಿಹೆ ಕಳ್ಳಾ 4ಪೊಂದೊಡಿಗೆ ತೊಡದೆ ನಡುವಿರುಳೆ ಬರೆಕುಂದದೆ ವ್ರತಗೆಟ್ಟ ತರಳೆಛಂದವೇನೊ ನಿನಗೀವಾಜರೆಲೆ ಗೋವಿಂದೆರಡು ಕೈಕಟ್ಟಿ ತೋರಲೆಒಂದೊಂದುಸುರಲಿ ನಿನ್ನ ಗುಣಮಾಣಿಕದಖಣಿಅಂಧರಿಗರಿವುದೆ ಪ್ರಸನ್ವೆಂಕಟೇಶಮಂದರಘ ರಂಧ್ರಾವಳಿ ಪೊಂದಿಸಿ ನೋಡಲಾಗದುಇಂದಿರೆಯರಸನೆ ದಾಸವೃಂದವನು ಪೊರೆಯೊ 5
--------------
ಪ್ರಸನ್ನವೆಂಕಟದಾಸರು
ಸಿಕ್ಕಿದೆಯೋ ಎಲೆ ಜೀವ-ನಿನ್ನ-ಕುಕ್ಕಿ ಕೊಲ್ಲದೆ ಬಿಡರು ಪಸೊಕ್ಕಿದ ಹೆಣ್ಣಿಗೆ ನೀ ಮರುಳಾದೆ |ಉಕ್ಕಿನ ಕಂಬಕೆ ನೀ ಗುರಿಯಾದೆ ಅ.ಪಹಾಳೂರ ಕೋಳಕೆ-ಕಾಲು ಚಾಚಿದ ಹಾಗೆ |ಮೂಳ ಸಂಸಾರಕೆ ನೀ ಗುರಿಯಾಗಿ ||ತೇಲುತ ಮುಳುಗುತ ಇಲ್ಲಿಗೆ ಬಂದೆ 1ಸತಿ-ಸುತರೆಂಬುವರೆ - ಹಿತರೆಂದು ನಂಬಿದೆಯೊ |ಯತಿಗಳ ತಿಥಿಗಳು ಬಂದರೆ ಮನೆಗೆ-||ಗತಿಯಿಲ್ಲವೆಂದು ಖತಿಗೊಂಡೆಯಲ್ಲೊ 2ಶುನಕನಂದದಿ ನೀನು ಮನೆಮನೆಯನು ತಿರುಗಿ |ಘನಘನವಾದ ಕೂಳನೆ ತಿಂದು ||ತನುವ ತಗ್ಗಿಸಿ ಇಲ್ಲಿಗೆ ಬಂದೆ 3ಕಂಡವರ ಒಡವೆಯ-ಖಂಡುಗ ಧನವನು |ಮಿಂಡೆಯರ ಒಡವೆಯ ಭಂಡತನದಲಿ ||ಕಂಡುಕಾಣದೆ ನೀ ತಿಂದೆಯಲ್ಲೊ 4ಗೋಪಾಲಕೃಷ್ಣಯ್ಯ-ತಾಪತ್ರಯವ ಕಳೆವ |ಆಪತ್ತೆಲ್ಲ ಪರಿಹಾರ ಮಾಡುವ ||ಶ್ರೀಪತಿ ಪುರಂದರವಿಠಲನ ನೆನೆಯದೆ 5
--------------
ಪುರಂದರದಾಸರು
ಸಿದ್ಧಿ ಗಣವರ ಬುದ್ಧಿ ನೀಡೆನ್ನನುದ್ಧಾರಮಾಡು ಬೇಗನೆಬದ್ಧಗುಣಗಳ ತಿದ್ದಿ ಎನಗೆ ಶುದ್ಧಮತಿ ನೀಡು ಬೇಗನೆ ಪವಿಮಲಮನ ಸನಮಿತ ತವಪಾದಕಮಲ ಭಜಿಸುವೆನಭನೆವಿಮಲವಿದ್ಯವ ಕ್ರಮದಿಂ ಪಾಲಿಸು ಹಿಮಜೆಸುತ ಕರಿವರದನೆ 1ಸೋಮಶೇಖರ ಪ್ರೇಮದ ಸುಕುಮಾರ ಸುಮನಸಚಂದ್ರನೆಕಾಮಿತಜನ ಶಾಮಪೂರಿತ ಕೋಮಲಗುಣಸಾಂದ್ರನೆ 2ಕೋಮಲಾಂಗನೆ ಕರ್ಣಕುಂಡಲ ಹೇಮಕಂಕಣಧಾರನೆತಾಮಸದಿ ಗಹಗಹಿಸಿದಾ ಮಹ ಸೋಮನಿಗೆ ಶಾಪವಿತ್ತನೆ 3ಪಾರಬುಧ್ಧಿಲಿ ಸಾರವಿದ್ಯದಧಿಕಾರ ಕುಶಲದಿ ಪಡೆದನೆಗೌರಿಶಂಕರರ್ವಾದ ನಿವಾರಿಸಿದ ಮಹಚದುರನೆ 4ತ್ರಿಕ್ಷೆಯರೊಡಗೂಡಿಭುವನರಥಮಾಡಿಮಣಿಯದ್ಹೋಗ್ವುದು ಕಂಡನೆಘನಕೋಪಾಗ್ರಾದಿ ರಥವನಿಲ್ಲಿಸಿ ತ್ರಿಣಯರಿಂ ಪೂಜೆಗೊಂಡನೆ5ವಿಘ್ನನಾಯಕ ಪ್ರಾಜÕಮೂರುತಿ ಸೂಜÕ ಜನರಾರಾಧನೆಸಂಜೆÕದ್ಹೊಗಳುರ್ವಿಘ್ನ ಛೇದಿಸಿಪ್ರಾಜÕಪದವೀವ ಪ್ರೌಢನೆ6ವರುಷಕೊಂದುಮಾಸಧರೆಯೊಳಿಳಿಯುತಪರಮಪೂಜೆಯ ಕೈಕೊಂಬನೆನರರ ದುರ್ಮತಿ ತರಿದು ಸುಗತಿಯ ನಿರುತಪಥದೋರ್ವ ಧುರೀಣನೆ 7ತಂದೆ ನಿನ್ನನು ಹೊಂದಿ ಭಜಿಪರ ಮಂದಮತಿನಿವಾರನೆಬಂದ ದುರ್ಭವದಂದುಗಂಗಳ ಚಂದದಿಂ ಪರಿಹಾರನೆ 8ಶರಣು ಶರಣು ಶರಣು ಗಣವರ ಶರಣುಕರುಣಾಭರಣನೆಸಿರಿಯರಾಮನ ಚರಿತಪೊಗಳುವ ಪರಮಮತಿದೇ ಗಣಾರ್ಯನೆ 9
--------------
ರಾಮದಾಸರು
ಸಿದ್ಧಿದಾಯಕ ವಿಘ್ನರಾಜ ಸುಪ್ರಸಿದ್ಧ ಮಹಿಮಯೋಗಿಹೃದ್ಯ ರವಿತೇಜ ಪ.ಬಾದರಾಯಣಸುಪ್ರಸಾದಸತ್ಪಾತ್ರಶ್ರೀಧರೋಪಾಸನಶೀಲ ಸುಪವಿತ್ರ 1ಭೋಗೀಂದ್ರಭೂಷಣ ನಾಗೇಂದ್ರವದನಭಾಗವತರ ಭಾಗ್ಯಸದನಜಿತಮದನ2ಸರ್ವಾಪರಾಧವ ಗುರುವರ್ಯ ಕ್ಷಮಿಸಯ್ಯಸರ್ವೋತ್ತಮ ಲಕ್ಷ್ಮೀನಾರಾಯಣಪ್ರಿಯ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸೀತಾಪತೆ ಸ್ವಾಮಿ ಸೀತಾಪತೆವಾತಜನುತ ಭೂತನಾಥಪತೆ ರಾಮ ಪ.ಗುಪ್ತಗುಣತಾಳ ಸಪ್ತಾಘಹನದೀಪ್ತಕಾಯ ಕುಶಸುಪ್ತಜಯ ರಾಮ 1ತಾಟಕಾರಿ ರಘುರಾಮಹರಿಹಾಟಕಪುರಪ ನಿಶಾಟಹರ ರಾಮ 2ಭರ್ತ ನೇಮ ಪರಿಪೂರ್ತ ನಮೋಕರ್ತಪ್ರಸನ್ವೆಂಕಟಾರ್ತಾಶ್ರಯಪಾಹಿ3
--------------
ಪ್ರಸನ್ನವೆಂಕಟದಾಸರು
ಸೀತೆ ಲೋಕಮಾತೆ ರಾಮನ ಪ್ರೀತೇಭೂಮಿಜಾತೇಪಾತಕಹರೆ ಸರ್ವಾರ್ಥಸಿದ್ಧಿಕರೆ ಖ್ಯಾತಿವಂತೆ ಸುನೀತೆ ಸುರಾರ್ಚಿತೆಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ತಾಯೆಮಹಾಮಾಯೆರಾಮನ ಛಾಯೆ ವಿಮಲಕಾಯೆ ತೋಯಜಾಕ್ಷಿ ನಿನ್ನ ಸೇವೆಯ ಮಾಡಲುಸಂಗರ ಕಾರಿಣಿಯೆ ರಾಮನಅಂಗನೆಗುಣಮಣಿಯೇಭೃಂಗಕುಂತಳೆಭವಭಂಗನಿವಾರಿಣಿ ಹಿಂಗದೆನ್ನಪೊರೆಹೇಮಾಂಗಿ ಶೃಂಗಾರಿಯೆ2ಚಂದ್ರವದನೆ ದೇವೀ ರಾಮಚಂದ್ರನಸಂಜೀವೀ ಸಿಂಧುಬಂಧನ ಗೋವಿಂದನದಾಸಗೆ ಬಂದು ಮೊಗವ ತೋರಿ ಚಂದದಿ ಪಾಲಿಸೆ
--------------
ಗೋವಿಂದದಾಸ
ಸುಂದರಿಯರೆಲ್ಲರು ಇಂದಿರೇಶನ ಪಾಡಿಚಂದಾಗಿ ಕೋಲಹಾಕಿರೆಂದಳು ಕುಂತಿ ಪ.ವ್ಯಾಳಾಶಯನನ ಕೂಡಭಾಳಸರಸವೆಕೇಳಯ್ಯ ಕರೆ ಎಂದು ಹೇಳಿದಳು ಕುಂತಿ 1ಕೃಷ್ಣರಾಯನ ಕೂಡ ಇಷ್ಟೊಂದು ಸರಸವೆಧಿಟ್ಟರಿಗೆ ಬುದ್ಧಿಕೊಟ್ಟಳು ಕುಂತಿ 2ತಂದೆ ರಂಗನ ಕೂಡ ಚಂದವೆ ಸರಸವುಮುಂದ್ಹೋಗಿ ಕರೆ ಎಂತೆಂದಳು ಕುಂತಿ 3ಒಡೆಯ ರಂಗನ ಕೂಡ ಬಿಡುವುದೆ ಸರಸವುನಡೆದ್ಹೋಗಿ ಕರೆ ಎಂತೆಂದಳು ಕುಂತಿ 4ಸ್ವಾಮಿ ರಾಮೇಶನ ಪ್ರೇಮದಿ ಕರೆ ಬಾಲೆರಾಯನ ಸಹಿತಕಾಮಿನಿಕುಂತಿ5
--------------
ಗಲಗಲಿಅವ್ವನವರು
ಸುಪುತ್ರನು ಎಂಬುವನಿವನುಸುಪುತ್ರನನು ಹೇಳುವೆ ನಾನುಪತಂದೆ ತಾಯಿಗಳ ಪೂಜಿಸುವಬಂಧುಗಳಿಗೆ ಬಹು ಪ್ರಿಯನಾಗಿ ಇರುವಎಂದಿಗೂ ಕೆಟ್ಟದ್ದ ನುಡಿಯ ಆವ-ಬಂದವರಿಗೆಲ್ಲ ಅನ್ನವ ಕೊಡುವ1ಕುಲದ ಆಚಾರವ ತಪ್ಪಿಸನುಹಲವು ವ್ರತಗಳನವ ತಾ ಬಿಡನುಬಲು ತಿಳುವಳಿಕೆಯನು ತಿಳಿದಿಹನುನೆಲೆಯಿಲ್ಲದ ತಪಮಾಡುವನು2ಅಣ್ಣ ಅತ್ತಿಗೆಗೆ ಉತ್ತರಕೊಡನುಪುಣ್ಯ ಕಥೆಯನು ಕೇಳ್ವುದ ಬಿಡನುತನ್ನ ದೇಹವ ಪೋಷಣೆ ಮಾಡನುಭಿನ್ನ ಬುದ್ಧಿಯನೆಂದಿಗು ತೋರನು3ತತ್ವ ವಿಚಾರವೆಂಬುದೆ ಜೀವನಿತ್ಯಅನಿತ್ಯವ ತಿಳಿದು ಅವನೀವಸತ್ಪುರುಷರೊಳು ಒಡನಾಡುವಎಲ್ಲಮಿಥ್ಯೆಎಂದರಿವ4ಸಂಶಯ ಸಂಕಲ್ಪನೀಗಿಧ್ವಂಸ ಮಾಡಿ ವಾಸನೆಯೆಲ್ಲವಶಿಂಶುಮಾರದ ಚಕ್ರಕೆ ಹೋಗಿಹಂಸ ಚಿದಾನಂದ ಗುರುವಾಗಿ5
--------------
ಚಿದಾನಂದ ಅವಧೂತರು
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆನಿರ್ಭಯವ ಪಾಲಿಸು ಪ್ರೇಮಿ ಪ.ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ-ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕ ಅ.ಪ.ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದಸೇವೆಗಾಲಸ್ಯವ ಮಾಳ್ಪರುಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು-ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ 1ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ-ರಿಂದ ಪೂಜೆಗೊಳೈ ಷಣ್ಮುಖವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ 2ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶಕೇವಲ ವಿಜ್ಞಾನಪ್ರಕಾಶಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ-ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸುಮ್ಮನೆ ಕಾಲವ ಕಳೆವರೆ - ಯಮ - |ಧರ್ಮರಾಯನ ದೂತರೆಳೆಯರೆ ಪ.ನರಿ - ನಾಯಿ ಜನುಮವು ಬಾರದೆ - ಹಾಗೆ - |ನರಜನ್ಮದಲಿ ಬಂದು ಸೇರದೆ ||ಹರಿಯ ಸ್ಮರಣೆ ಮಾಡಲಾರದೆ - ಸುಮ್ಮ |ನಿರಲು ಪಾಪದ ವಿಷವೇರದೆ 1ಬಾಲನಾಗಿದ್ದಾಗ ಬಹುಲೀಲೆ - ಮುಂದೆ |ಲೋಲನಾಗಿ ಬಾಳಿದ ಮೇಲೆ ||ಮೂಳ ವೃದ್ಧಾಪ್ಯ ಬಂತಾಮೇಲೆ - ಇನ್ನು - |ಬಾಳುವುದೆಲ್ಲ ನೂಲಮಾಲೆ 2ಮಡದಿ - ಮಕ್ಕಳ ಕೂಡಣ ಬಾಳು - ತನ್ನ |ಒಡಲಿಗಾಗೆ ತಾನು ಕರವಾಳು ||ಬಿಡದೆ ಸಂಕೀರ್ತನೆ ಮಾಡೇಳು - ಮಿಕ್ಕ - |ನುಡಿದ ನುಡಿಗಳೆಲ್ಲವು ಬೀಳು 3ಮನೆಮನೆ ವಾರ್ತೆಯು ಸ್ಥಿರವಲ್ಲ - ಈ |ಮನುಜರ ಮಾತೇನು ಘನವಲ್ಲ ||ವನಜಸಂಭವಗೂ ನಿಶ್ಚಯವಿಲ್ಲ - ಮುಂದೆ |ಹನುಮಂತ ಪಟ್ಟಕೆ ಬಹನಲ್ಲ 4ಇಂದಿನಹಮ್ಮು ನಾಳೆಗೆ ಇಲ್ಲ -ಭವ |ಬಂಧನದೊಳು ಸಿಕ್ಕಿ ನರಳಿದೆನಲ್ಲ ||ಮುಂದನರಿತು ನಡೆದುದಿಲ್ಲ - ಮೃತ್ಯು |ಬಂದಾಗ ಬಿಡಿಸಿಕೊಳ್ಳುವರಿಲ್ಲ 5ಮರಣವುಆವಾಗ ಬರುವುದೋ - ತನ್ನ |ಶರೀರವುಆವಾಗ ಮುರಿವುದೊ ||ಕರಣಂಗಳೆಲ್ಲವು ಜರಿವುದೊ - ತನ್ನ |ಗರುವದುಬ್ಬಸವೆಲ್ಲ ಮುರಿವುದೊ 6ಮರಣಕಾಲಕೆ ಅಜಮಿಳನಾಗ - ತನ್ನ |ತರಳನನಾರಗನೆಂದು ಕರೆದಾಗ ||ಕರುಣದಿ ವೈಕುಂಠ ಪದವೀಗ -ನಿತ್ಯ - |ಪುರಂದರವಿಠಲನ ನೆನೆ ಬೇಗ 7
--------------
ಪುರಂದರದಾಸರು
ಸುಮ್ಮನೆ ವಿಷ್ಣುವ ಜರಿದೀರಿ ಯಾಕೆಸುಮ್ಮನೆ ಶಿವನಿಂದ್ಯ ಗೈವಿರಿಪಬ್ರಹ್ಮ ಸುಜ್ಞಾನದಿ ಹರಿಹರರಾರೆಂಬಮರ್ಮವರಿತು ಧರ್ಮಾಧರ್ಮ ಯೋಚಿಸದೀಗಾಅ.ಪಗರುಡವಾಹನನು ಶ್ರೀವರನು ನೋಡಿಉರಗಭೂಷಣನು ಗೌರೀಶ್ವರಗೂಗರುಡೋರಗರ ದ್ವೇಷ ಹರಿಹರರೊಳಗುಂಟೆಎರಡು ಮೂರ್ತಿಗಳೇಕ ರೂಪವೆಂದರಿಯಾದೆ1ಸ್ಮರನ ತಾತನು ನಾರಾಯಣನುಕೇಳಿಸ್ಮರನ ವೈರಿಯು ತ್ರಿಗಣೇಶ್ವರನುಹರಿನಿಂದನೆ ಶಿವ ಶಿರದಿ ತಾನ್ ಧರಿಸಿದಹರನ ಲಿಂಗವನಿತ್ಯಪೂಜಿಸಿ ನಮಿಸುವಾ2ಕ್ಷೀರಾಬ್ಧಿ ವಿಷ್ಣುಗೆಸತಿಗೃಹವೊ ಶಿವನನಾರೀ ಮಂದಿರ ಹಿಮಾಲಯವೂನಾರೀ ರಮೆಯ ಹೃದಯದಿ ಧರಿಸಿದವಿಷ್ಣುಮಾರನಂತಕ ಉಮೆಗಿತ್ತನರ್ಧಾಂಗವ3ಬಲಿಯೊಳ್ ಬಾಗಿಲ ಕಾಯ್ದ ಹರಿಯೂ ಬಾಣಗೊಲಿದು ದ್ವಾರದಿ ನಿಂತ ಹರನೂಗೆಲಿದು ತಾ ಅಜಾಮಿಳನ ಸಲಹಿದ ವಿಷ್ಣುಒಲಿದು ಮಾರ್ಕಾಂಡೆಗಂತಕನ ಮರ್ದಿಸೆ ಶಿವ4ಚೋರನೆನ್ನುವಿರಿ ಕೇಶವನ ಬಲೋ-ತ್ಕಾರಿ ಎಂಬಿರಿ ಪರಮೇಶ್ವರನಾನಿರ್ವಾಣಿಬೌದ್ಧನುಶರ್ವದಿಗಂಬರಹರಿಯು ಜಾರನು ಜಗಪೀಠ ಶಂಕರಗೆಂದು5ರುದ್ರಾಕ್ಷಿ ಭಸ್ಮಲೇಪನವು ಶಿವಗೆಮುದ್ರೆಯು ತುಳಸಿಮಣಿ ಸರವುಊಧ್ರ್ವ ಪೌಂಡ್ರಕಗೋಪಿಕೃಷ್ಣಾಜಿನಾಸನರುದ್ರ ಜಡೆಯ ಪಠಿಸು ವ್ಯಾಘ್ರ ಚರ್ಮದಿ ಕುಳಿತು6ಸ್ಮಾರ್ತರ್ ವೈಷ್ಣವರು ಮತ್ಸರದೆ ದ್ವಯಮೂರ್ತಿಯೊಳ್ ಸಮದೆ ಯೋಚಿಸದೇವ್ಯರ್ಥ ಕೆಡುವಿರಿ ಗೋವಿಂದನ ದಾಸರುಸ್ವಾರ್ಥವಾಗದು ಕಾರ್ಯ ಹರನ ಭಕ್ತರುಕೇಳಿ7
--------------
ಗೋವಿಂದದಾಸ
ಸುಮ್ಮನೆ ವೈಷ್ಣವನೆಂದಿರಿ -ಪರ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬ್ರಹ್ಮ ಸುಜ್ಞಾನವನರಿಯದ ಮನುಜನ ಪ.ಮುಖವ ತೊಳೆದು ನಾಮವಿಟ್ಟವನಲ್ಲದೆ |ಮಿಕ್ಕ ಶಾಸ್ತ್ರಂಗಳ ನೋಡಿದನೆ ? ||ಸುಖ ಶೃಂಗಾರಕೆ ಮಾಲೆ ಧರಿಸಿದನಲ್ಲದೆ |ಭಕುತಿಯ ರಸದೊಳು ಮುಳುಗಿದನೇನಯ್ಯ 1ಊರ ಮಾತುಗಳೆಲ್ಲನಾಡಿದನಲ್ಲದೆ |ನಾರಾಯಣ ಕೃಷ್ಣ ಶರಣೆಂದನೆ ? |ನಾರಿಯರಿಗೆ ಮೆಚ್ಚಿ ಮರುಳಾದನಲ್ಲದೆ |ಗುರುಹಿರಿಯರಿಗೆಲ್ಲ ಎರಗಿದನೇನಯ್ಯ 2ಗಂಗೆಯಲಿ ಮಣ್ಣು ತೊಳವವನಲ್ಲದೆ |ಹಿಂಗದೆ ಸ್ನಾನವ ಮಾಡಿದನೆ ? |ರಂಗ ಶ್ರೀ ಪುರಂದರವಿಠಲನ ದಾಸರ |ಸಂಗಡ ಕೂಡಾಡಿ ತಿರುಗಿದನೇನಯ್ಯ 3
--------------
ಪುರಂದರದಾಸರು
ಸುರ ಮುನಿಜನನುತಪಾದನಿನ್ನಶರಣು ಪೊಕ್ಕೆನೊ ಗೋವಿಂದ ನೀಚರಕೈಯಲಿ ಕೊಡದಿರೊ ಎನ್ನ ಮೇಲ್ಗಿರಿ ಶ್ರೀನಿವಾಸಪಾವನ್ನಪ.ದುಷ್ಟದೂಷಕ ಸಂಗದಿಂದೆ ನನ್ನನಿಷ್ಠೆ ಜಾರುತಲಿದೆ ತಂದೆ ಸಲೆಭ್ರಷ್ಟನಾಗುವುದೇನು ಚಂದೆ ಬಲುಕಷ್ಟಿಸಿ ಭವದಲಿ ನೊಂದೆ 1ಅಮಿತ ದುರ್ಗುಣ ದೋಷಹಾರಿಶುಭಅಮಲ ಮುಕ್ತಿದಾತ ಉದಾರಿ ಎನ್ನಭ್ರಮಣ ನೀಗಿಸು ಹೊರೆ ಸ್ವಾಮಿ ಹೃತ್ಕಮಲದಿ ಪ್ರಕಟಿಸು ಪ್ರೇಮಿ 2ಅರಿಯೆನರಿಯೆ ಅನ್ಯಮರೆಯೆ ನಿನ್ನಸ್ಮರಣೆಗೆಚ್ಚರವಿತ್ತು ಹೊರೆಯೊಸಿರಿಗುರು ಆನಂದಮುನಿ ದೊರೆಯೆನಿತ್ಯಪರಸನ್ನ ವೆಂಕಟ ಭಕ್ತರ ಸಿರಿಯೆ 3
--------------
ಪ್ರಸನ್ನವೆಂಕಟದಾಸರು