ಒಟ್ಟು 689 ಕಡೆಗಳಲ್ಲಿ , 85 ದಾಸರು , 608 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ಗೋವಿಂದ ಗೋವಿಂದ ನನ್ನತಾಯಿ ತಂದೆ ಗೋವಿಂದ ಪ.ತಿರುಗಿ ಭವದಲಿ ಗೋವಿಂದ ವೃಥಾಮರುಗಿ ಬಳಲಿದೆನೊ ಗೋವಿಂದಕರಗಿ ತಾಪದಿ ಗೋವಿಂದ ಸಿಡಿಲೆರಗಿಸಿಕೊಂಡೆನೊ ಗೋವಿಂದ 1ಎಚ್ಚರ ಹಾರಿತು ಗೋವಿಂದ ನಾಮೆಚ್ಚಿದೆ ವಿಷಯಕೆ ಗೋವಿಂದಹುಚ್ಚು ಮಾಡಿತು ಮನ ಗೋವಿಂದ ನಿನ್ನುಚ್ಚರಣಡಗಿತು ಗೋವಿಂದ 2ಆಸೆಯ ಬಿಡಿಸೈ ಗೋವಿಂದ ನಿನ್ನದಾಸರೊಳಿರಿಸೈ ಗೋವಿಂದಪ್ರಸನ್ನವೆಂಕಟ ಗೋವಿಂದಭವಘಾಸಿಯ ತಪ್ಪಿಸು ಗೋವಿಂದ 3
--------------
ಪ್ರಸನ್ನವೆಂಕಟದಾಸರು
ಚಿಂತೆ ಏತಕೊ - ಬಯಲ ಭ್ರಾಂತಿ ಏತಕೊ |ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ ಪ.ಏಳುತುದಯಕಾಲದಲ್ಲಿ |ವೇಳೆಯರಿತು ಕೂಗುವಂಥ ||ಕೋಳಿ ತನ್ನ ಮರಿಗೆ ಮೊಲೆಯ |ಹಾಲಕೊಟ್ಟು ಸಲಹಿತೆ ? 1ಸಡಗರದಲಿ ನಾರಿಜನರು |ಹಡೆಯುವಾಗ ಸೂಲಗಿತ್ತಿ ||ಅಡವಿಯೊಳಗೆ ಹೆರುವ ಮೃಗವ |ಪಿಡಿದು ರಕ್ಷಣೆ ಮಾಳ್ಪರಾರು 2ಹೆತ್ತ ತಾಯಿ ಸತ್ತ ಶಿಶುವು |ಮತ್ತೆ ಕೆಟ್ಟಿತೆಂಬರು ಜನರು ||ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ - |ನಿತ್ತು ರಕ್ಷಣ ಮಾಡುವರಾರು 3ಗಟ್ಟಿಮಣ್ಣಿನ ಶಿಶುವ ಮಾಡಿ |ಹೊಟ್ಟೆಯೊಳಗೆ ಇರಿಸುವಂಥ ||ಕೊಟ್ಟ ದೈವ ಕೊಂಡೊಯ್ದರೆ |ಕುಟ್ಟಿಕೊಂಡು ಅಳುವುದೇಕೆ 4ನಂಬಿಗೆಗಿವು ಸಾಲವೆಂದು |ಹಂಬಲಿಪುದು ಲೋಕವೆಲ್ಲ ||ನಂಬಿ ಪುರಂದರವಿಠಲ - |ನೆಂಬ ನಾಮ ನುಡಿದ ಮೇಲೆ 5
--------------
ಪುರಂದರದಾಸರು
ತಂದೆ ತಾಯಿಮಿತ್ರನೀನೆ ಬಾಂಧವ ನೀನೆ ನಿನ್ನಿಂದ ಬಳಗಿಲ್ಲೆನಗೆ ಇಂದಿರಾಧವನೆ ಕಾಯೊ ಪ.ಹೊಲೆಯ ರಕ್ತದಿ ರೇತ ನಿಲಿಸಿದನೊರ್ವ ಪಿತನೆಲೆಸಿ ಗರ್ಭದೊಳು ರಕ್ಷಿಸಿದೆ ನೀನುಹಲವು ಯೋನಿಯ ತೋರಿ ತೊಳಲಿಸಿ ತುದಿಯಲ್ಲಿನೆಲೆಗೆ ನಿಲ್ಲಿಸುವಂಥ ಸುಲಭ ಜನಕನಲ್ಲೆ 1ನವಮಾಸ ಧರಿಸಿ ಸ್ತನ್ಯವನುಣಲಿತ್ತಳವ್ವೆತವಕದಿ ನಡೆ ನುಡಿಸುವೆಯೊ ನೀನುಆವ ಕಾಲಕಾಲದಲ್ಲಿ ತವಗರ್ಭದಲ್ಲಿ ಪೊತ್ತುಜೀವಕೆ ಚೈತನ್ಯಾಶನವೀವ ತಾಯಿ ನೀನಲ್ಲವೆ 2ಶ್ರೇಯಸನಾದರಿಸುವ ಪ್ರಿಯಸಖರೆಲ್ಲರು ನಿ:ಶ್ರೇಯಸದಿ ಸುಖಮುದದಾಯಕ ನೀನೆಮಾಯಪಾಶ ಬಂಧನದಿ ನೋಯುವರವರ್ಗಾಬಾಧೆಯನಟ್ಟಿ ಕಳೆವ ಚಿನ್ಮಯಮಿತ್ರನೀನಲ್ಲವೆ3ವಿತ್ತವಿರೆ ಸಹೋದರರಿತ್ತ ಬನ್ನಿ ಕೂಡ್ಯೆಂಬರುವಿತ್ತಶೂನ್ಯನಾದರೆ ನೀನುಪೇಕ್ಷಿಸೆ ಅಯ್ಯಒತ್ತಿ ಬಹದುರಿತವಿಪತ್ತುಗಳ ಸವರಿ ಸುಮುಕ್ತಿಯ ಪದವೀವಾನಿಮಿತ್ತ ಬಂಧು ನೀನಲ್ಲವೆ 4ಸಿರಿಯು ಪೋಗೆ ನಿಲ್ಲರು ಶರೀರ ಸಂಬಂಧಿಗಳಾತುರದ ದಾರಿದ್ರ್ಯ ಪಾಪಹರನು ನೀನೆಕರುಣಿ ಪ್ರಸನ್ನ ವೆಂಕಟರಮಣ ನಿನ್ನ ನಾಮಸ್ಮರಣೆ ಎನ್ನ ಜಿಹ್ವೆಗೆ ಮರೆಯದಿರಲಿ ಕಂಡ್ಯ 5
--------------
ಪ್ರಸನ್ನವೆಂಕಟದಾಸರು
ತಾಯಿ ಸೌಪರ್ಣೀದೇವೀ ನೀ |ಕಾಯದೆ ಜರಿಯಲನ್ಯರಾ ||ನಾನೆಲ್ಲೀ ಕಾಣೆನೆ ಧರೆಯೊಳು |ಮನಸಿರಲೀ ಶ್ರೀ ಅರಸನಲ್ಲೇವೇ ಕೇಳು ಪಕ್ಷೋಣಿಯೊಳಗೆ ಕ್ರಿಯಸ್ತರ |ಆ ನೆಲ್ಲೀ ನೋಡೆ ನಿನ್ನಂತೆ ||ಆ ನಾಗರಾಜನ ಮಾತೆಯ ಸೇವೆಯೊಳಿದ್ದೆ |ನಾನೆಂತು ಮಾಡಲೆ ಸ್ತುತೀಯಾ1ವಾರುಣೀ ಶ್ರೀ ರೇವತಿ |ಯಾ ರೂಪಿ ನಮಸ್ಕರಿಪೇ ||ನಾರಾಯಣನಾ ತೋರಿಸಮ್ಮಾ ದೋಷಗಳ ನೀ |ವಾರಿಸಿ ರಕ್ಷೀಸಬೇಕಮ್ಮಾ 2ಶ್ರೀಸತಿಪಾರ್ವತೀ ದಕ್ಷ |ಧ್ವಂಸೀ ಶುದ್ಧ ಪತಿವೃತೀ ||ಆ ಷಣ್ಮುಖನ ಜನನೀ | ಕಾಣಿಸು ಶ್ರೀ ಪ್ರಾ-ಣೇಶ ವಿಠ್ಠಲಾನ ಕರೂಣೀ 3
--------------
ಪ್ರಾಣೇಶದಾಸರು
ತಾಸು ಬಾರಿಸುತಿದೆಕೇಳಿ - ಹರಿದಾಸರೆಲ್ಲ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ತಾಸು ಬಾರಿಸುತಿದೆಕೇಳಿಪ.ಹಾಸುಮಂತ ಸುಪ್ಪತ್ತಿಗೆಯಲಿ - ಹಗಲು ಇರುಳು |ಹೇಸರಗತ್ತೆಯಂತೆ ಹೊರಳಿ - ಸ್ತ್ರೀಯರಗೂಡ |ಬೇಸರದೆ ನಿತ್ಯವು ಉರುಳಿ ||ಈಪರಿ ಕಾಲವ ಕಳೆದೆಯೊಕಾಲ ಸ |ಮೀಪವಾಯಿತು ಎಂದೀಗಲೆ 1ವೃಧ್ಧ ಯಾವನ ಬಾಲಕಾಲ - ವಿವೇಕವಿಲ್ಲದ |ಬುದ್ಧಿ ಮಾಂದ್ಯವು ಹಲವುಕಾಲ - ಆಹಾರಸಂಗ |ನಿದ್ರೆಯಿಂದಲಿ ಅತಿಲೋಲ ||ಈಶನ ಭಜಕರ ಭಜಿಸದೆ ಮಾನುಷಾ |ಯುಷ್ಯವೆಲ್ಲವು ವ್ಯರ್ಥವಾಯಿತಾಯಿತೆಂದು 2ಕಂಡ ವಿಷಯವ ಕಾಮಿಸಿ - ಕಷ್ಟಪಡದೆ |ತಾಂಡವ ಕೃಷ್ಟನ ಭೇಸಿ - ಪುಂಡನೆನಿಸದೆಭಂಡಧಾವತಿಯನು ತ್ಯಜಿಸಿ ||ಪುಂಡರೀಕಾಕ್ಷ ಪುರಂದರವಿಠಲನ |ಕೊಂಡು ಭಜಿಸಿರೈಯ ಢಂ ಢಂ ಢಂ ಡಣ್ಣೆಂದು 3
--------------
ಪುರಂದರದಾಸರು
ತ್ರಿಜಗದ್ವಾ ್ಯಪಕಹರಿಎನುವರು ಸುಜನರುನಿಜದಲಿ ಪೇಳಿವದಾರಕ್ಕಾಅಜಭವಾದಿಗಳಿಗರಸನಾದಹದಿನಾಲ್ಕು ಲೋಕಕೆ ದೊರೆ ತಂಗಿ 1ನೀರೊಳು ಮುಳುಗುತ ಮೀನರೂಪದಿಸಾರುವ ಮಯ್ಯವದಾರಕ್ಕನೀರೊಳು ಮುಳುಗಿ ವೇದವ ತಂದು ಸುತಗಿತ್ತಧೀರ ಮತ್ಸ್ಯಮೂರುತಿ ತಂಗಿ 2ಭಾರಬೆನ್ನಿಲಿ ಪೊತ್ತು ಮೋರೆ ಕೆಳಗೆ ಮಾಡಿನೀರೊಳು ವಾಸಿಪದಾರಕ್ಕವಾರಿಧಿಮಥಿಸಿದಮೃತ ಸುರರಿಗೆ ಇತ್ತಧೀರಕೂರ್ಮಮೂರುತಿ ತಂಗಿ3ಕೋರೆದಾಡಿಯಲಿ ಧಾರುಣಿ ನೆಗಹಿದಫೋರನೆನುವರಿವದಾರಕ್ಕಕ್ರೂರ ಹಿರಣ್ಯಾಕ್ಷನ ಕೊಂದು ಭೂಮಿಯ ತಂದಶೂರ ವರಹ ಮೂರುತಿ ತಂಗಿ 4ಕ್ರೂರರೂಪತಾಳುತ ಕರುಳ್ವನಮಾಲೆ ಹಾಕಿದವದಾರಕ್ಕಪೋರನ ಸಲಹಲು ಕಂಬದಿಂದುಸಿದನಾರಸಿಂಹ ಮೂರುತಿ ತಂಗಿ 5ಮೂರಡಿ ಭೂಮಿಯ ದಾನವ ಬೇಡಿದಹಾರ್ವನೆನುವನಿವದಾರಕ್ಕಧೀರ ಬಲಿಯ ಭಕ್ತಿಗೆ ಮೆಚ್ಚಿ ಬಾಗಿಲು ಕಾಯ್ದವಾಮನ ಮೂರುತಿ ಇವ ತಂಗಿ 6ಮೂರು ಏಳುಬಾರಿಧಾರುಣಿ ಚರಿಸಿದಶೂರನೆನುವರಿವದಾರಕ್ಕವೀರ ಕ್ಷತ್ರಿಯರ ಮದವನಡಗಿಸಿದ ಪರಶು-ರಾಮ ಮೂರುತಿ ತಂಗಿ 7ಕೋತಿಗಳೊಡನಾಡಿ ಸೇತುವೆ ಕಟ್ಟಿದ ಪ್ರ-ಖ್ಯಾತನೆನುವರಿವದಾರಕ್ಕಮಾತರಿಶ್ವನಿಗೆ ಒಲಿದಂಥ ದಶರಥರಾಮ ಚಂದ್ರ ಮೂರುತಿ ತಂಗಿ 8ಗೋಕುಲದೊಳು ಪಾಲ್ಬೆಣ್ಣೆ ಮೊಸರುನವನೀತಚೋರನಿವದಾರಕ್ಕಲೋಕಗಳೆಲ್ಲಾ ತಾಯಿಗೆ ಬಾಯೊಳುತೋರ್ದಗೋಪಾಲಕೃಷ್ಣ ಮೂರುತಿ ತಂಗಿ 9ತ್ರಿಪುರರ ಸತಿಯರ ವ್ರತಗಳನಳಿದನುಗುಪಿತನೆನುವರಿವದಾರಕ್ಕಕಪಟನಾಟಕ ಸೂತ್ರಧಾರಿ ಶ್ರೀ-ಹರಿಬೌದ್ಧ ಮೂರುತಿ ತಂಗಿ10ಅಶ್ವುವನೇರುತ ಹಸ್ತದಿ ಖಡ್ಗ ಪುರು-ಷೋತ್ತಮನೆನುವರಿವದಾರಕ್ಕಸ್ವಸ್ತದಿ ಕಲಿಯೊಳು ಸುಜನರ ಪಾಲಿಪಕರ್ತೃ ಕಲ್ಕಿ ಮೂರುತಿ ತಂಗಿ 11ಶಂಖು ಚಕ್ರ ಗದೆ ಪದುಮವು ಸಿರದಿ ಕಿ-ರೀಟಧಾರಿ ಇವದಾರಕ್ಕಪಂಕಜಾಕ್ಷಿ ಪದ್ಮಾವತಿಪತಿಶ್ರೀ-ವೆಂಕಟೇಶ ಮೂರುತಿ ತಂಗಿ 12ಮಮತೆಲಿ ಸುಜನರ ಶ್ರಮ ಪರಿಹರಿಸುವಕಮಲಾಪತಿ ಇವದಾರಕ್ಕಕಮಲಪತ್ರಾಕ್ಷ ಶ್ರೀ ಕಮಲನಾಭ ವಿ-ಠ್ಠಲ ಮೂರುತಿ ಕೇಳಿವ ತಂಗಿ 13
--------------
ನಿಡಗುರುಕಿ ಜೀವೂಬಾಯಿ
ದಾರಿಯ ತೋರೊ ಮುಕುಂದ - ಹರಿ-|ನಾರಾಯಣ ಗೋವಿಂದ ಪಬಂದೆನು ಬಹುಜ್ಮನದಲಿ -ನಾ-|ಬಂಧನದೊಳು ಸಿಲುಕುತಲಿ ||ಮುಂದಿನದಾವುದು ಪಯಣ -ತೋರೊ-|ಇಂದುನೀ ಇಂದಿರೆರಮಣ1ಗತಿಯಿಲ್ಲದವರಿಗೆ ನೀನೆ -ಸದ್-|ಗತಿಯೆಂದು ಸ್ತುತಿಮಾಡಿದೆನೊ ||ಗತಿಯೆಂದು ನಂಬಿದೆ ನಿನ್ನ |ಸತುವ ತೋರು ನರಹರಿಯೆ ಗೋವಿಂದ 2ಮಡವಿನೊಳಗೆ ಧಮುಕಿದೆನೆ -ಇನ್ನು-ಕಡಹಾಯಿಸುವರ ನಾ ಕಾಣೆ ||ಹಡೆದ ತಾಯಿ - ತಂದೆ ನೀನೆ -ಕೈ-|ಹಿಡಿದು ಸಲಹೊ ಎನ್ನೊಡೆಯ ಮುರಾರಿ 3ಮಿಕ್ಕಿ ಬರುವ ಹೊಳೆಯೊಳಗೆ -ನಾನು-|ಸಿಕ್ಕಿದೆ ನಡುನೀರೊಳಗೆ ||ಕಕ್ಕುಲಾತಿನಿನಗಿರದೆ |ಭಕ್ತವತ್ಸಲ ನೀ ದಯಮಾಡೋ 4ಕುಕ್ಷಿಯೊಳಗೆ ಇಂಬಿಟ್ಟು -ಎನ್ನ-|ರಕ್ಷಿಸಿ ಸಲಹಬೇಕು ||ಅಕ್ಷಯಅನಂತ ಮಹಿಮನೆ - ನೀನು |ಪಕ್ಷಿವಾಹನನೆಪುರಂದರವಿಠಲ5
--------------
ಪುರಂದರದಾಸರು
ದಾರುದಾರಿಲ್ಲೆಲೆ ರಂಗದಾರುದಾರಿಲ್ಲ ಸಂಗನೀರಜಾಕ್ಷನೀನೆ ಭವಸಾಗರತಾರಿಸಿ ಕೀರ್ತಿ ಪಡೆಯೊ ದಾತಾರ ಪ.ಮೀನವಾಮಿಷವುಂಡಂತೆ ಸುಖಮಾನಿನಿಯರ ತಡಿಯುಧೇನುಜರಿಯಾದಂತೆ ಏಳಿಲುಸೂನುಗಳ ಬಿರುನುಡಿಯುಏನು ಬಳಗಾಮೃಗ ದಗ್ಧ ವಿಪಿನದ ಸ್ನೇಹದೆ ಕಡಿಯುಪ್ರಾಣ ಪಯಣಕೆ ಬುತ್ತಿಲ್ಲಭವಸಂಧಾನ ಹರಿದರೆ ಆರಿಲ್ಲ ಒಡೆಯಾ 1ಏಸೋ ದಿನ ನೆಚ್ಚಿದಕಾಯಹೇಸಿಕೆಘನವಾಯಿತುಆಸೆಬಟ್ಟಾರ್ಥ ವೃಥಾವ್ರಯಕಾಸು ನಾಶಾಯಿತುಲೇಶ ಮಾತ್ರವು ಹಿತ ಹೊಂದದೆ ಮನದ್ವೇಷಿ ತಾನಾಯಿತು ಆಯುಷ್ಯ ಸೂತ್ರವು ಹರಿದರೆ ಭವರೋಗಭೇಷಜರಿಲ್ಲದಂತಾಯಿತು 2ಕುನ್ನಿ ಸಂತೆಗೆ ಹೋದಂತೆ ಬಹುಜನ್ಮ ನೋವಾದವುಮಣ್ಣಿನೊಳು ಹಾಲ ಕೊಡ ಒಡೆದಂತೆನನ್ನ ಧರ್ಮಕರ್ಮವುನನ್ನೆಚ್ಚರ ನನಗಿಲ್ಲವುನಿನ್ನೆಚ್ಚರವೆಲ್ಲಿಯದು ಪ್ರಸನ್ನವೆಂಕಟ ನಿನ್ನ ಯಾತ್ರೆಗೆ ನೀನೆಬೆನ್ನಾದರೆನಗೆಲ್ಲ ಗೆಲುವು 3
--------------
ಪ್ರಸನ್ನವೆಂಕಟದಾಸರು
ದೃಷ್ಟಿ ನಿನ್ನ ಪಾದದಲ್ಲಿ ನೆಡುವ ಹಾಗೆ - ಧರೆಯದುಷ್ಟ ಜನರ ಸಂಗಗಳನು ಬಿಡುವ ಹಾಗೆ ಪ.ಕೆಟ್ಟ ಮಾತ ಕಿವಿಯಿಂದ ಕೇಳದ ಹಾಗೆ ಮನವಕಟ್ಟು ಸದಾ ನಿನ್ನ ಧ್ಯಾನ ಬಿಡದ ಹಾಗೆ ಅಪದೃಷ್ಟನಾಗಿ ಕೈಯನೆತ್ತಿ ಕೊಡುವ ಹಾಗೆ ಶ್ರೀಕೃಷ್ಣ ನಿನ್ನ ಪೂಜೆಯನ್ನು ಮಾಡುವ ಹಾಗೆ ||ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ ಬಲುಶಿಷ್ಟ ಜನರ ಸೇವೆಯನು ಮಾಡುವ ಹಾಗೆ 1ಪುಟ್ಟಿಸಿದ ತಾಯಿ - ತಂದೆಯಲ್ಲವೆ ನೀನು - ಒಂದುಹೊಟ್ಟೆಗಾಗಿ ದೈನ್ಯ ಪಡಬೇಕೇ ನಾನು ||ಪಟ್ಟೆ -ಪಟ್ಟಾವಳಿ ಬೇಡಲಿಲ್ಲ ನಾನು ಎನ್ನಗುಟ್ಟು ಅಭಿಮಾನಗಳ ಕಾಯೋ ನೀನು2ನಟ್ಟನಡು ನೀರೊಳೀಸಲಾರೆ ನಾನು ಎತ್ತಿಕಟ್ಟೆಯ ಸೇರಿಸಬೇಕಯ್ಯ ನೀನು ||ಬೆಟ್ಟದಷ್ಟು ಪಾಪ ಹೊತ್ತಿರುವೆ ನಾನು ಅದನುಸುಟ್ಟು ಬಿಡುಪುರಂದರ ವಿಠಲ ನೀನು3
--------------
ಪುರಂದರದಾಸರು
ದೇವ ಬಾರೊ ಶ್ರೀನಿವಾಸದೆÉೀವನೆ ಬಾರೊ ನನ್ನದಾವದಾವಪರಿಯ ತಪ್ಪ ಕಾವನೆ ಬಾರೊಪ.ಜೀವನ ಪಾವನವ ಮಾಡುವನೆ ಬಾರೊ ನನ್ನಭಾವದ ಬಯಕೆ ಪೂರೈಸುವನೆ ಬಾರೊ 1ಧ್ಯಾನಿಸಲೊಮ್ಮ್ಯಾರೆ ದಯದಿ ನೀ ನಿಲ್ಲಬಾರೊ ಅಜ್ಞಾನ ನಾಶ ಮಾಡುವ ಕೃಪಾನಿಧಿ ಬಾರೊ 2ಹಡೆದ ತಾಯಿ ತಂದೆಗುರುಒಡೆಯನೆ ಬಾರೊ ಎನ್ನನಡೆ ನುಡಿ ವಿಷಮೆನ್ನದೆ ಕೈ ಪಿಡಿಯಲು ಬಾರೊ 3ತೆರೆ ತೆರೆ ಬಪ್ಪಾಸೆಯ ಚರಿಸಲು ಬಾರೊ ಆತುರದ ಕಾಮಾದ್ಯರ ನೀನೊರೆಸಲು ಬಾರೊ 4ಕ್ಷುಲ್ಲನುದಾಸಿಸುದುಚಿತಲ್ಲವೊ ಬಾರೊ ಪ್ರಾಣದೊಲ್ಲಭ ಬಿರುದು ನಿನ್ನದಲ್ಲೇನೋ ಬಾರೊ 5ಪಾಪಗಳು ಘನ್ನವಾದರೇನಯ್ಯ ಬಾರೊಕೃಪಾಪಾಂಗದಲ್ಲವು ಉಳಿಯಲಾಪವೆ ಬಾರೊ 6ಶ್ರೀರಮಣ ಎಂದಿಗಾಪ್ತರಾರಿಲ್ಲೊ ಬಾರೊ ಸುಖತೀರಥೇಶ ಪ್ರಸನ್ವೆಂಕಟರಾಯ ಬಾರೊ 7
--------------
ಪ್ರಸನ್ನವೆಂಕಟದಾಸರು
ದೇವದೇವೇಶ ಶ್ರೀ ಹರಿಯಲ್ಲದೆ ಪ.ಆವ ತಂದೆಯು ಸಲಹಿದನು ಪ್ರಹ್ಲಾದನಆವ ತಾಯಿ ಸಲಹಿದಳು ಧ್ರುವರಾಯನಆವ ಸುತ ಸಲಹಿದನು ಆ ಉಗ್ರಸೇನನಜೀವರಿಗೆ ಪೋಷಕನು ಹರಿಯಲ್ಲದೆ 1ಆವ ಬಂಧುವು ಸಲಹಿದನು ಗಜರಾಜನನುಆವಪತಿ ಕಾಯ್ದ ದ್ರೌಪದಿಯಮಾನ ||ಆವ ಸೋದರರು ಸಲುಹಿದರು ವಿಭೀಷಣನಜೀವರಿಗೆ ದಾತೃ ಶ್ರೀ ಹರಿಯಲ್ಲದೆ 2ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆಆವ ರಕ್ಷಕ ಪಕ್ಷಿಜಾತಿಗಳಿಗೆಆವ ಪೊಷಕನು ಗರ್ಭದಲ್ಲಿದ್ದ ಶಿಶುಗಳಿಗೆದೇವ ಶ್ರೀ ಪುರಂದರವಿಠಲನಲ್ಲದಲೆ 3
--------------
ಪುರಂದರದಾಸರು
ದೇವಿಯ ನೋಡಿರೊಪರದೇವಿಯ ನೋಡಿರೋಭಾವಿಸೆಅನುದಿನಹೃದಯದಿ ಬೆಳಗುವ ಕಳೆಯ ಚಿತ್ಪ್ರಭೆಯ ಪ್ರಭೆಯಪಎಲ್ಲರ ಕೈಯಲಿ ಪೂಜೆಯಕೊಂಬ ಗುಣಿಯ ರತ್ನದ ಗಣಿಯಒಲ್ಲೆನೆಂದರು ವರಗಳ ಕೊಡುವ ದಯಾಮಯಿಯ ಭಕ್ತ ಪ್ರಿಯೆಯಬೆಲ್ಲದಂದದಿ ಮಾತುಗಳಾಡುವ ಸುಧೆಯ ಸುಖ ಶಾರದೆಯಬಲ್ಲಿದಶತ್ರುಗಳಾಗಿಹ ರವರನು ಬಡಿವ ಕಡಿದುಡಿವ1ಬ್ರಹ್ಮ ವಿಷ್ಣುರುದ್ರಾದಿಗಳವರ ತಾಯಿ ಮಹಾಮಾಯಿಬೊಮ್ಮನು ಬರೆದಿಹ ಪ್ರಾರಬ್ಧವೆಲ್ಲವ ಸೆಳೆವ ಎಲ್ಲವ ಕಳೆವಚಿಮ್ಮಿ ಹಾಕುವಳು ಕಂಟಕಂಗಳ ಬಿಡಿಸಿಅಭಯಕೊಡಿಸಿತಮ್ಮವರೆಂದೇ ಭಕ್ತರ ಬದಿಯಲಿ ಇಹಳ ಮಹಾಮಹಿಮಳ2ಚಿತ್ಕಲಾತ್ಮ ಚಿದಾನಂದನೆಂಬ ವಿಭುವಾಮಹಾ ಪ್ರಭುವಹತ್ತಿರ ನಿಂತು ಬೆಳಗುತಲಿಹಳು ಕೋಟಿ ಸೂರ್ಯರ ಸಾಟಿಮತ್ತೇ ಮೀರಿಯೆ ಬ್ರಹ್ಮರಂದ್ರಕೆ ಸಾಗಿ ತಾ ವಾಸವಾಗಿನಿತ್ಯದಿ ಜ್ಯೋತಿರ್ಮಯವಾಗಿ ತೋರುವ ಸಖಿಯ ಬಗಳಾಮುಖಿಯ3
--------------
ಚಿದಾನಂದ ಅವಧೂತರು
ದ್ರೌಪದಿ ಕೃಷ್ಣಾ ಪಾಂಚಾಲಿ | ದೇವಿ |ಗೋಪತಿಧ್ವಜವಂದ್ಯೆಕಾಳಿ | ಆಹಾ |ಪಾಪಗಳೆಣಿಸದೆಲೇ ಪುನೀತನ | ಮಾಡೆ |ಶ್ರೀ ಪವನನ ಕರುಣಾಪಾತ್ರೆ ಸುಚರಿತ್ರೆ ಪವಾಣಿ ಭಕ್ತಿಗೆ ಅಭಿಮಾನಿ | ತಾಯಿನೀನೆ ಗತಿಯೆಲೆ ಸುಶ್ರೋಣಿ | ಶ್ರೀಶಧ್ಯಾನವ ಮಾಡಲು ಮನ ಪೋಣಿಸುವ |ದೇನನೊಲ್ಲೆನು ಪೂರ್ಣಜ್ಞಾನಿ| ಆಹಾ ||ದೀನ ರಕ್ಷಕೆ ಮಿಕ್ಕ ಹೀನ ದೇವರಪಾದ|ಕ್ಕೆ ನಮಿಸುವ ಮತಿಯನೆಂದು ಕೊಡದಿರೆ 1ಶಾರದೆ ಹರಿಯ ಕುಮಾರಿ | ನಿನ್ನ |ಸಾರಿದೆ ಕುಜನ ಕುಠಾರಿ | ದಯಾ |ವಾರಿಧೆ ಸುಜನೋಪಕಾರಿ | ತೋರೆ |ಸಾರೆಗರಿದು ಮುಕ್ತಿ ದಾರಿ | ಆಹಾ ||ಶ್ರೀ ರಮಣ್ಯುಳಿದೆಲ್ಲ ನಾರೀ ಶಿರೋಮಣಿ |ಆರಾಧಿಸುವೆ ಯೆನ್ನ ದೂರ ನೋಡಲು ಬೇಡ 2ಹಲವರಿಗೆಲ್ಲ ಬಾಯ್ದೆರೆದು | ಬೇಡಿ |ಕೊಳುವದೇನದೆ ದಿನ ಬರಿದು | ಸಾಧು |ನೆಲೆಯದೋರರು ಹತ್ಯಾಗರೆದು | ಬುದ್ಧಿ |ಕಲಿಸೆ ಭಾರತಿಯೆನ್ನ ಮರೆದು | ಆಹಾ |ಇಳೆಯೊಳು ಶ್ರಮಪಡಿಸಲು ಸಲ್ಲ ದಿತಿಜರ |ನಳಿದ ಪ್ರಾಣೇಶ ವಿಠಲಗಚ್ಛಿನ್ನ ಭಕ್ತಳೆ 3
--------------
ಪ್ರಾಣೇಶದಾಸರು
ಧರ್ಮಕ್ಕೆ ಕೈಬಾರದೀಕಾಲ - ಪಾಪ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕರ್ಮಕ್ಕೆ ಮನ ಬಾಹುದೀ ಕಲಿಕಾಲ ಪ.ದಂಡದೋಷಕೆ ಉಂಟು ಪುಂಡುಪೋಕರಿಗುಂಟು |ಹೆಂಡಿರು - ಮಕ್ಕಳಿಗಿಲ್ಲವೀ ಕಲಿಗಾಲ ||ಭಂಡೆಯರಿಗುಂಟು ದಿಂಡೆಯರಿಗುಂಟು - ಬೇಡಿ - |ಕೊಂಡಿವರಿಗಿಲ್ಲವು ಈ ಕಲಿಕಾಲ 1ಒತ್ತೆಸೂಳೆಗುಂಟು ಮತ್ತೆ ಹಾದರಕುಂಟು |ಹೆತ್ತತಾಯಿಗಿಲ್ಲ ಈ ಕಲಿಕಾಲ ||ತೊತ್ತೆಯರಿಗೆ ಉಂಟು ಅರ್ತಿಕಾರ್ತಿಗಿಲ್ಲ |ಉತ್ತಮರಿಗೆ ಇಲ್ಲವೀ ಕಲಿಕಾಲ 2ಹುಸಿದಿಟವಾಯಿತು ರಸ - ಕಸವಾಯಿತು |ಮಸಿ ಮಾಣಿಕವಾಯಿತೀಕಾಲ ||ವಸುಧೆಯೊಳಗೆ ನಮ್ಮ ಪುರಂದರವಿಠಲನ |ಬೆಸಸಿ ಪೂಜಿಪರ್ಗಿಲ್ಲ ಈ ಕಲಿಕಾಲ 3
--------------
ಪುರಂದರದಾಸರು
ನನ್ನಯ್ಯ ನೀನೊಬ್ಬನೆ ಮಾರುತಿವರದ ಪ.ಉನ್ಮತ್ತತಂದೆ ಕೊಲ್ಲಲು ಒಯ್ಯಲು ತಾಯಿಚಿನ್ನನ್ನುಳಿಸಿಕೊಂಡಳೆ ಬನ್ನವನುಣ್ಣುತನಿನ್ನಿಚ್ಛೆಯೆನ್ನಲು ವಹ್ನಿವಿಷಾನ್ನವ ತಣ್ಣಸವೆನ್ನಿಪೆ ತನ್ನವರಿನ್ನ್ಯಾಕೊ ನರಹರಿಯೆ 1ಉತ್ತಾನಪಾದಿ ಮುನಿದು ಅಡವಿಯ ದಾರಿಹತ್ತಿ ನಿರಾಲಂಬದಿ ಉತ್ತಮ ಮಂತ್ರನಾರದಿತ್ತರೆ ಭಕ್ತಿಂದ ಅತ್ತಿತ್ತಾಗದ ಚಿತ್ತಕೆ ಒಲಿದೆಹೆತ್ತವರೊತ್ತಾದರೆವಾಸುದೇವ2ಅಗ್ರಜಾವಜÕ ಮಾಡಲು ವಿಭೀಷಣಶೀಘ್ರ ಪಾದಾಬ್ಜಕೆರಗಲು ವ್ಯಗ್ರಪ್ಲವಗಗ್ರರು ಉಗ್ರದಿ ನಿಗ್ರಹಿಸೆ ಆಗ್ರಹಿಸಿದೆ ಭಕ್ತಾಗ್ರಣಿ ಹನುಮ ಮತಾಗ್ರದಿ ಪ್ರಸನ್ವೆಂಕಟ 3
--------------
ಪ್ರಸನ್ನವೆಂಕಟದಾಸರು