ಇಂದಿರಾದೇವಿಯ ರಮಣ ಬಾ
ವೃಂದಾರಕ ಮುನಿವಂದ್ಯ ಬಾ
ಸಿಂಧುಶಯನ ಗೋವಿಂದ ಸದಮಲಾ
ನಂದ ಬಾ ಮಾವನ ಕೊಂದ ಬಾ ಗೋಪಿಯ
ಕಂದ ಬಾ ಹಸೆಯ ಜಗುಲಿಗೆ ಶೋಭಾನೆ 1
ಕೃಷ್ಣವೇಣಿಯ ಪಡೆದವನೆ ಬಾ
ಕೃಷ್ಣನ ರಥ ಹೊಡೆದವನೆ ಬಾ
ಕೃಷ್ಣೆಯ ಕಷ್ಟವÀ ನಷ್ಟವ ಮಾಡಿದ
ಕೃಷ್ಣ ಬಾ ಯದುಕುಲ ಶ್ರೇಷ್ಠ ಬಾ ಸತತ ಸಂ
ತುಷ್ಟ ಬಾ ಉಡುಪಿಯ ಕೃಷ್ಣ ಬಾ
ಹಸೆಯ ಜಗುಲಿಗೆ ಶೋಭಾನೆ 2
ಎಲ್ಲರೊಳು ವ್ಯಾಪಕನಾಗಿಪ್ಪನೆ
ಬಲ್ಲಿದ ಧೊರೆಯೇ ಜ್ಞಾನಿಗಳರಸನೆ
ಎಲ್ಲಿ ನೋಡಲು ಸರಿಗಾಣೆ ವಿಜಯವಿ-
ಠ್ಠಲ ಬಾ, ಅಪ್ರತಿಮಲ್ಲ ಬಾ ನೀ-
ಹಸೆಯ ಜಗುಲಿಗೆ ಶೋಭಾನೆ 3