ಒಟ್ಟು 1722 ಕಡೆಗಳಲ್ಲಿ , 107 ದಾಸರು , 1032 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಂಡುರಂಗ ಹರಿ ವಿಠಲ | ಕಾಪಾಡೊ ಇವನಾ ಪ ತೊಂಡ ವತ್ಸಲ ನೆಂಬ | ಬಿರಿದುಳ್ಳೊ ದೇವಾ ಅ.ಪ. ದಾಸವತ್ಯರ ಕರುಣ | ಲೇಸಾಗಿ ಪಡೆದಿಹಗೆಆಸುಪ್ತಿಪತಿ ಸೂಚ್ಯ | ಮೀಸಲುಪದೇಶದಾಸದೀಕ್ಷಾರೂಪ | ಆಶೆಯುಳ್ಳವಗಿತ್ತುಆಶಿಷವನಿತ್ತಿಹೆನೊ | ಹೃಷೀ ಕಪನ ಮೂರ್ತೇ 1 ಪಾದ ಮಹಿಮಾನುಭವಸಾಧಿಸೊ ಇವನಲ್ಲಿ | ಶ್ರೀ ದ ಶ್ರೀ ಹರಿಯೇ 2 ಊರ್ಮ ಷಟ್ಕಳವಕಳೆಯೆ | ಕರ್ಮನಿಷ್ಕಾಮಕದಿಪೇರ್ಮೆಯಲ್ಲಾ ಚರಿಪ | ಸನ್ಮಮನವ ನೀಯೋನಿರ್ಮಲಾತ್ಮನೆ ದೇವ | ಹಮ್ರ್ಯ ಗಹ್ವರದಲ್ಲಿಪರ್ಮ ನಿನ್ನಯರೂಪ | ತೋರಿಸೋ ಹರಿಯೇ 3 ಭವ | ಅಂಬುಧಿಯ ಕಳೆಯೋ 4 ಕೈವಲ್ಯಪ್ರದ ಹರಿಯೆ | ಭಾವುಕರ ಪರಿಪಾಲನೋವಿಲ್ಲದಾ ಸ್ಥಳಕೆ | ಬಯ್ವದೋ ಇದನಾಈ ವಿಧದ ಭಿನ್ನಪವ | ಸಲಿಸೆಂದು ಪ್ರಾರ್ಥಿಸುವೆಧೀವರನೆ ಹರಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪಾದ ಧ್ರುವ ಸಕಲಾತ್ಮನೆಂದು ಶ್ರುತಿ ಪ್ರಕಟಿಸಿ ಪೇಳುತಿದೆ ವಿಕಟಿತಗೊಂಬುದೇನು ಕಾಕ ಬುದ್ಧಿಂದ 1 ಚೆನ್ನಾಗಿ ಸಾರುತಿದೆ ನಾನ್ಯ:ಪಂಥವೆಂಬ ಮಂತ್ರ ಭಿನ್ನವಿಲ್ಲದೆ ನೋಡು ನಿನ್ನೊಳಗೀಗ 2 ಸರ್ಕನೆ ಮಾಡಿಕೊಂಬುದು ಆರ್ತಿ ಉಳ್ಳವರ ಸಂಗತಿ ಬ್ಯಾಗ ತರ್ಕಿಸಬ್ಯಾಡಿತರ ಕೂಡ ಮರ್ಕಟ ಬುದ್ಧಿಂದ 3 ಇಡಿದು ತುಂಬಿಹ್ಯ ವಸ್ತು ಪಡಕೋ ಗುರುಕೃಪೆಯಿಂದ ಎಡಬಲ ನೋಡದೆ ಈಗ ಕೂಡು ನೀ ಬ್ಯಾಗೆ 4 ಪಾದ ಭೇದಿಸೊ ನೀ ಬ್ರಹ್ಮಬೋಧ ಸಾಧುಸದ್ಗೈಸುವದಾ ಸದ್ವಸ್ತುದ 5 ಎಲ್ಲಾರೊಳಿಹ ನಮ್ಮ ಫುಲ್ಲಲೋಚನ ಶ್ರೀಕೃಷ್ಣ ಸುಲಭವಾಗಿಹ ಬಲ್ಲವರಿಗೆ 6 ಬಾಹ್ಯಾಂತ್ರ ಪರಿಪೂರ್ಣ ಮಹಿಪತಿ ಗುರುನಿಧಾನ ಇಹಪರಾನಂದ ಘನ ಸಾಯೋಜ್ಯ ಘನ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ | ಜಯ ಮುಖ್ಯ ಪ್ರಾಣ ಮೋದ | ತೀರ್ಥಾರ್ಯ ಎನ್ನ ಹಂಬಲಿಗೆ ಕೊಡೊ ಭೇದ | ಅರ್ಥಗಳ ವಾದ ಪ. ಪಾದ ಹೃದಯ ನಿತ್ಯ ಹರಿಯ ಬಿಂಬ ತೋರಿಸಿ ಎನ್ನ ಭವದ ಅಂಬುಧಿ ಕಡೆ ಮಾಡು ವೇಗದಿ ಅ.ಪ. ನೂರ ತೊಂಭತ್ತಷ್ಟ | ಕಲ್ಪದಲಿ ಹರಿಯ ಆರಾಧಿಸಿದೆಯೊ ಶ್ರೇಷ್ಠ | ಅಲ್ಲಿಂದ ಮುಂದೆ ಸ- ವಿೂರ ಪದಕೆ ದಿಟ್ಟ | ಬಂದೆಯೊ ಉತ್ಕøಷ್ಟ ಪಾದ ಭಜಿಸಿ ಮೂರು ಅವತಾರವನೆ ಧರಿಸಿ ವೀರ ಕಪಿರೂಪದಲಿ ರಾಮರ ವಾರಿಜಾಂಘ್ರಿಯ ಭಜಿಸಿ1 ಭುಜ ಪರಾಕ್ರಮ ಭೀಮ | ನೆಂದೆನಿಸಿ ಕೌರವ ಧ್ವಜವ ಕೆಡಹಿದ್ಯೊ ಸೋಮ | ವಂಶಕೆ ತಿಲುಕ ನೀ ಧ್ವಜ ಕಪಿಗೆ ಬಹುಪ್ರೇಮ | ನಿನ್ನಲಿ ಹರಿಯ ಧಾಮ ದ್ವಿಜನ ಉದರದಿ ಜನಿಸಿ ಅಲ್ಲಿಂ ಕುಜನ ಮತವನು ತರಿದು ಹರಿಯ ಪಾದ ಭಜನೆ ನಿಜಗತಿಗೆ ಬಹು ಶ್ರೇಷ್ಠವೆನಿಸಿದೆ 2 ವ್ಯಾಪಕನೊ ನೀ ಎಲ್ಲಾ | ಕಡೆಯಲಿ ನಿನ್ನ ರೂಪ ತುಂಬಿಹದಲ್ಲಾ | ಎನಗದನು ತೋರೊ ಪತಿ ಗೋಪಾಲಕೃಷ್ಣವಿಠ್ಠಲ | ಲೀಲ ನೀ ಪರಿಪರಿಯಿಂದ ತಿಳಿಸಿ ತಾಪ ಹರಿಸೊ ಮೂರು ವಿಧದ ಪಾಪಿ ಎಂದು ಎನ್ನ ನೂಕದೆ ಕಾಪಾಡೊ ಪಂಚರೂಪ ಮೂರುತಿ 3
--------------
ಅಂಬಾಬಾಯಿ
ಪಾದ ಕೂಡು | ಸಾಯಾಸಗಳನೇ ಬಿಡು ಪ ಪಾದ ಕೂಡು ಸಾಯಾಸಗಳನೇ ಬಿಡು | ಸಾಧಿಸುವದು ನೋಡು ಸದ್ಗತಿಯ ಸುಖಾಡು 1 ತನುವಿಟ್ಟು ಧನವಿಟ್ಟು ಚರಣಕ ಮನಕೊಟ್ಟು | ಅನುವಾಗಿ ತಿಳಿಗಟ್ಟು ಮದಗರ್ವಗಳ ಬಿಟ್ಟು 2 ನಿನ್ನಾ ನೀ ತಿಳಿಯಣ್ಣಾ ಮ್ಯಾಲ ದೋರುದ್ಯಾಕ ಬಣ್ಣಾ | ಇನ್ನಾರೆ ದೆರಿಕಣ್ಣಾ ಆಗದಿರು ಮಸಿಮಣ್ಣಾ 3 ತನಗ ತಾನೇವೇ ಬಂಧು ತನಗೆ ತಾನೇ ಹಗೆಯೆಂದು | ವನಜಾಕ್ಷ ಹೇಳಿದುದು ಅನುಮಾನಿಲ್ಲಿದಕಿಂದು 4 ಇನ್ನೊಂದು ಸಾಧನಿಲ್ಲಾ ಇದರಿಂದಧಿಕವಿಲ್ಲಾ | ಮನ್ನಿಸಿ ಕೇಳಿರೆಲ್ಲಾ ಮಹಿಪತಿಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾದ ಭಕ್ತಿಯಿಂದ ಭಜಿಸು ಮನವೆ ಅರ್ಥಿಯಿಂದ ಪೂಜಿಪರಿಗೆ ವಿತ್ತಾದಿಗಳಿತ್ತು ಕಾಯ್ವ ಪ ಹಿಂದೆ ನಾರದರಿಂದಿರೇಶಗೆ ವಂದಿಸಿ ಬೆಸಗೊಳಲು ಛಂದದಿಂದಲಿ ಸಿಂಧುಶಯನ ಬಂಧಮೋಚಕವೆಂದು ಪೇಳಿದ 1 ತಿಳಿದು ನಾರದರಿಳೆಯೊಳರುಹೇ ಕಲಿತು ಜನಗಳಲ್ಲಾರಂಭಾ ಪಾಲು ಘೃತಾದಿಗಳಿಂದ ಪೂಜಿತ 2 ದ್ವಿಜವಣಿಕ್ ಭೂಭುಜರು ನಿಜಭಕುತಿಯಿಂದ ಯ್ಯಜಿಸೆ ಸೋಜಿಗವನ್ನೇ ತೋರಿದುದರಿಯ 3
--------------
ಪ್ರದ್ಯುಮ್ನತೀರ್ಥರು
ಪಾದ ಮಾಡಿದೆನೆ ಸಾಷ್ಟಾಂಗ ಬೇಡಿದೆನೆ ಮನದಭೀಷ್ಟ ಪ. ನೀಡು ಕೊಲ್ಲಾಪುರದ ನಾಡಿಗೊಡೆಯಳೆ ಲಕುಮಿ ಮಾಡಮ್ಮ ಕೃಪೆಯ ಬೇಗಾ ಈಗಾ ಅ.ಪ. ಬಂದೆನೇ ಬಹುದೂರ ನಿಂದೆನೇ ತವಪದ ದ್ವಂದ್ವ ಸನ್ನಿಧಿಯಲೀಗ ವಂದನರಿಯೆನೆ ನಿನ್ನ ಚಂದದಿ ಸ್ತುತಿಪೊದಕೆ ಮಂದಮತಿಯಾಗಿಪ್ಪೆನÉೀ ತಂದೆ ಮುದ್ದುಮೊಹನ್ನ ಗುರು ಕರುಣ ಬಲದಿಂದ ಇಂದು ನಿನ್ನನು ಕಂಡೆನೇ ಮುಂದೆನ್ನ ಮಾನಾಭಿಮಾನ ನಿನಗೊಪ್ಪಿಸಿದೆ ಸಿಂಧುಸುತೆ ಪಾಲಿಸಮ್ಮಾ ದಯದೀ 1 ಉತ್ತರಾಯಣ ಪುಣ್ಯ ದಿನದಿ ನಿನ್ನನು ಕಂಡೆ ಮುಕ್ತರಾಧೀಶೆ ಕಾಯೆ ಉತ್ತಮಾಭರಣ ನವರತ್ನ ಪದಕವು ದಿವ್ಯ ನತ್ತು ಧರಿಸಿದ ಚಲ್ವಳೇ ಮುತ್ತೈದೆಯರು ಮತ್ತೆ ಭಕ್ತ ಸಂದಣಿ ಇಲ್ಲಿ ಎತ್ತನೋಡಲು ಕಂಡೆನೇ ಸತ್ಯ ಸಂಕಲ್ಪ ಶ್ರೀ ಹರಿಯ ಪಟ್ಟದ ರಾಣಿ ಚಿತ್ತಕ್ಕೆ ತಂದು ಕಾಯೆ ಮಾಯೆ 2 ರೂಪತ್ರಯಳೆ ನಿನ್ನ ವ್ಯಾಪಾರ ತಿಳಿಯಲು ಆ ಪದ್ಮಭವಗಸದಳಾ ಶ್ರೀಪತಿಯ ಕೃಪೆ ಯಿಂದ ಸೃಷ್ಟಿಸ್ಥಿತಿಲಯಗಳನು ವ್ಯಾಪಾರ ಮಾಳ್ಪ ಧೀರೆ ಕೃಪೆಯ ನೀ ಮಾಡದಲೆ ಉಭಯ ಸುಖವೆತ್ತಣದು ಭೋಪರೀ ನಂಬಿದರಿಗೆ ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ ನೀ ಪಾರುಗೊಳಿಸೆ ಭವದೀ ದಯದೀ 3
--------------
ಅಂಬಾಬಾಯಿ
ಪಾದ ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾನೆರೆ ನಂಬಿದವರನು ಎರವು ಮಾಡಲು ನಿನಗೊಳತೇನಯ್ಯಾ ಪಿಡಿ ಬೇಗನೆ ಕೈಯ್ಯ ಕರದಶಿಗಳರಸನೆ ಕಾಮಿತ ಫಲದನೆ ಕರಿರಾಜನ ಭೀಕರ ಹರ ವೆಂಕಟ ಪ ಆಪಾರ ಮಹಿಮಾ ಆಪದ್ಬಂಧೋ ಆಪನ್ನರ ಪಾಲಿಪ ವ್ಯಾಪಾ ನಿನಗಲ್ಲದೆ ಮತ್ತೊಂದು ಕಾಣೆನೊ ಜಗದೀ ಭೂಪಾನೆ ಭೂಮ್ನ ಗುಣಗಣಸಿಂಧೋ ಸ್ವಾಮಿಯೆ ಎನಗಿಂದು ಪರಿಪಾಲಿಸು ಶ್ರೀಪತಿ ಅಂಜನ ಗಿರಿರಾಜ 1 ಕಲಿಯುಗದೊಳಗೀ ಪರ್ವತಕೆಲ್ಲಿ ಸರಿಗಾಣೆನು ಯೆಂದು ನೆಲಸಿದೀ ನೀನೆ ಈ ಸ್ಥಳದಲ್ಲಿ ವೈಕುಂಠಕಿಂತ ನೆಲೆಯು ವೆಗ್ಗಳವೆಂದು ನೀ ಬಲ್ಲೀ ಅದಕಾರಣ ಇಲ್ಲೀ ತಲೆಯಾಗುವರಯ್ಯಾ ಭಳಿರೆ ಕಾಂಚನ 2 ತರುಜಾತಿ ಮೃಗಪಕ್ಷಿಗಳಾಕಾರ ಮೊದಲಾದ ರೂಪದಿ | ನೂರಾರು ಕಿನ್ನರು ತಮ್ಮ ಪರಿವಾರ ಒಡಗೂಡಿ ನಿನ್ನ ಚರಣಾರಾಧನೆ ಮಾಡಿದ ವಿಸ್ತಾರ ಈ ಬಗೆ ಶೃಂಗಾರ ಸರಿಗಾಣೆನೊ ಹೇ ತಿರುಪತಿ ವೆಂಕಟ ಗಿರಿರಾಜ3 ಹದಿನಾಲ್ಕು ಲೋಕದ ಭಾಗ್ಯಗಳಲ್ಲಿ ಅಮರತತಿಗೆ ಕೊಟ್ಟ ವಿಧವೆಲ್ಲಾ ಪ್ರತ್ಯಕ್ಷವು ಪುಸಿಯಲ್ಲ ನಾನವರ ನೋಡೆ ಅಧಮಾಧಮನು ನೀನೆ ಬಲ್ಲೆಲ್ಲಾ ಎನ್ನ ಯೋಗ್ಯತಯ ಫಣಿ 4 ಸುವರ್ಣ ಮುಖರಿತೀರ ನಿವಾಸ ನವರಾತ್ರಿಯಲ್ಲೀ ಆವ ಬ್ರಹ್ಮೋತ್ಸವ ನೋಡಲು ಶ್ರೀಶ ಸಂಪದವನಿತ್ತು ಪೊ ರವಾನು ಕಲುಷದ ಭಯ ಬರಲೀಸ ಶ್ರೀನಿವಾಸ ಭೂದೇವರ ವರದ5
--------------
ವಿಜಯದಾಸ
ಪಾದ ನಂಬಿದೆ ಜನಕೆ ಪಾರುಗಾಣಿಪ ಪರಮ ಕರುಣಿ ಶ್ರೀ ಧೀರೇಂದ್ರವರ್ಯಾ ಪ ನಿತ್ಯ ಅನವರತ ಭಕ್ತಿಯನೆ ಇತ್ತೆನ್ನ ಕಾಯೆಯ್ಯ ಕರುಣಾನಿಧೆ ಅ.ಪ. ವಸುಧೀಂದ್ರ ಕರಕಮಲ ಸಂಜಾತ ವಸುಧೆಯೊಳು ವಾಸವಾಗಿಹ ಭಕ್ತ ಜನಕೆಲ್ಲಾ ವಾಸವಾನುಜ ಶ್ರೀ ವಾಸುದೇವನ ಸರ್ವಜಗಕೆಲ್ಲಾಪಾಯನೆಂಬಾ ವಾಸುದೇವನ ಮತವ ಬೋಧಿಸುತೆ ಸಾತಾರಾ ಪುನಯಾದಿ ನಗರದ ವಾದಿಗಳನೆಲ್ಲಾ ವಾದದಿಂದಲಿ ಗೆದ್ದು ಬಹುಮಾನವನೆ ಪಡೆದು ಮಹಿಯೊಳಗೆ ಬಹು ಖ್ಯಾತಿ ಪಡೆದ ಮಹಾಮಹಿಮ 1 ಭೂರಮಣ ಶ್ರೀಕಾಂತ ಬಹುಕೋಪದಿಂದಲಿ ಕೋದಂಡಪಾಣಿಯಾಗಿ ಭವಜನಕೆ ಮೋಹವನೆ ಬೀರುವಾ ಸಮಯದಲಿ ಬಹು ಭ್ರಾಂತಿಗೊಂಡು ಇರಲು ಭಾರತೀಶನ ದಯದಿ ಭಾಗೀರಥಿಯ ಕೂಡಿ ಬಹುಭಕ್ತಿಯಿಂದ ಒಲಿಸಿ ಭೂಮಿಜೆಯ ಕಳ್ಳನನೆ ಸಂಹರಿಪ ಕಾರ್ಯದಲಿ ಬಹುಸೇವೆಗೈದಂಥ ಪುಣ್ಯಶಾಲಿ 2 ಶ್ರೀರಮಣನಾಜ್ಞೆಯಲಿ ಭಜಿಪ ಭಕ್ತರಿಗೆಲ್ಲ ಬೇಡಿದಿಷ್ಟಾರ್ಥಗಳ ಸಲಿಸುತ್ತಲೀ ಶ್ರೀಕೃಷ್ಣಭಕ್ತರಿಗೆ ಕೃಷ್ಣವಾಗಿಹ ಮನವ ಉತ್ಕøಷ್ಟಗೈಯ್ಯುತ್ತಲೇ ಶ್ರೀಸುರಪನಾಯಕೆ ಸರಿಮಿಗಿಲು ಎಂದೆನಿಪ ಬಹುಭಾಗ್ಯವನ್ನೆ ಪಡೆದು ಶ್ರೀಗುರುತಂದೆವರದ-ಗೋಪಾಲ ಅಸಿ ಬಿಟ್ಟು ಬಿಡದಲೆ ಭಕ್ತಿಯಿಂ ಭಜಿಪ ಗುರುವರ್ಯ 3
--------------
ಸಿರಿಗುರುತಂದೆವರದವಿಠಲರು
ಪಾಪಿಯ ನೋಡೆ ಬಡಿಸುವ ಪಾಪಿಯ ನೋಡೆಪಾಪಿಯ ನೋಡೆ ಪಾಪದ ಪಿಶಾಚಿಪಾಪಿಯ ಮೋರೆಯ ನೋಡಬಾರದಕ್ಕೆ ಪ ಅನ್ನವನೀಗ ಇಷ್ಟಿಷ್ಟು ಹಾಕುವಳು ಅತ್ತಲಾಗಿ ಇಡುವಳುಏನು ಇಷ್ಟೆಂದು ಕೇಳಲು ಅರಿಯಿರಿ ಹೊಟ್ಟೆಯೆಂದು ಎದುರಿಗೆ ನಿಂತೆ ಮುಸಿ ಮುಸಿ ನಗುವಳು 1 ಆಜ್ಯವ ಹಾಕೆನೆ ಅಲ್ಲಾಡುತಲಿ ಅರಿಯಿರಿ ಬೇಸಗೆ ಸೆಖೆ ಎಂತೆಂಬಳುಮಜ್ಜಿಗೆ ಹಾಕೆನೆ ಮಂದಮತಿಗಳ ಮಹಾಶೈತ್ಯವು ಬೇಡವು ಎಂತೆಂಬಳು 2 ಉತ್ತಮರೆಂದರೆ ಒಳ್ಳೆಯದಿಕ್ಕಳು ಉಬ್ಬಿಸಹೋದರೆ ಉಬ್ಬದಿಹಳುನಿತ್ಯ ಚಿದಾನಂದ ಸತ್ಪುರುಷರಿಗೆ ನಿಶ್ಚಯವಾಗಿ ಉಣಬಡಿಸುವಳು 3
--------------
ಚಿದಾನಂದ ಅವಧೂತರು
ಪಾಪೋಸು ಹೋದುವಲ್ಲಾ ಪ ಅಪಾರ ಜನ್ಮದಿಂದ ಆರ್ಜನ ಮಾಡಿದ ಅ.ಪ. ಉರುಗಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ಮೊದಲಾದಪರಿಪರಿ ತೀರ್ಥ ಸ್ನಾನಗಳ ಮಾಡಿಹರಿದಾಸರ ಕೂಡ ಶ್ರೀನಿವಾಸ ಮೂರ್ತಿದರುಶನದಲಿ ಮೈಮರೆತು ಇದ್ದೆನು ಎನ್ನ 1 ಪರಮ ಭಾಗವತರು ಹರಿಕಥೆ ಹೇಳಲುಪರಮ ಹರ್ಷದಿಂದ ಕೇಳುತಿದ್ದೆಪರಮ ಪಾಪಿಷ್ಠರ ಪಾಲಾಗಿ ಹೋದಾವುಪರಮಾತ್ಮನ ಚಿತ್ತಕೆ ಬಂದಿತೀಗೆನ್ನ 2 ಮಾಯಿ ಒಲಿದು ಎನಗೆ ಕೊಂಡು ಕೊಟ್ಟಿದ್ದಳುದಾಯಿಗಾರರು ನೋಡಿ ಸಹಿಸಲಿಲ್ಲಾಮಾಯಾರಮಣ ನಮ್ಮ ಮೋಹನ್ನ ವಿಠಲನ್ನಮಾಯದಿಂದಲಿ ಮಟ್ಟವಾಯಿತು ಎನ್ನ 3
--------------
ಮೋಹನದಾಸರು
ಪಾರ್ಥನರಸಿಯರು ಪ್ರಾರ್ಥಿಸಿ ಕೈಮುಗಿಯೆ ತೀರ್ಥಯಾತ್ರೆಗಳೆಲ್ಲಾ ಕ್ಷೇತ್ರ ಮೂರ್ತಿಗಳು ಗೆಲಿಸಲಿ ಪ. ರಾಮೇಶ್ವರ ಕಂಚಿ ಪ್ರೇಮದಿ ಕುಂಭಕೋಣಸ್ವಾಮಿ ಶ್ರೀ ರಂಗ ತೋತಾದ್ರಿಸ್ವಾಮಿ ಶ್ರೀ ರಂಗ ತೋತಾದ್ರಿಬೇಲೂರು ಚೆನ್ನನ ಮೊದಲೆ ಬಲಗೊಂಬೆ 1 ಅಹೋಬಲ ಮೊದಲಾದ ಆ ವೆಂಕಟಾದ್ರಿ ಅಲ್ಲಿರೊ ಅನಂತ ಅಳಗಿರಿಅಲ್ಲಿರೊ ಅನಂತ ಅಳಗಿರಿ ದರ್ಭಶಯನದೇವರ ಮೊದಲೆ ಬಲಗೊಂಬೆ 2 ದೇವ ಜನಾರ್ಧನ ಕಾಯೊ ಸಾರಂಗಪಾಣಿಭಾವ ಭಕ್ತಿಲೆ ನಮಿಸೇವ ಭಾವ ಭಕ್ತಿಯಲೆ ನಮಿಸೇವ ಚಕ್ರಪಾಣಿ ಬೇಗ ಗೆಲಿಸೆಂದು 3 ಅಕ್ಕ ಶ್ರೀಮುಷ್ಣಿವಾಸ ಮುಖ್ಯಚಲುವರಾಯದೇವಕ್ಕಳಿಗೆ ವರವ ಕೊಡುವೋಳುದೇವಕ್ಕಳಿಗೆ ವರವ ಕೊಡುವೋಳು ಕನ್ಯಾಕುಮಾರಿ ಮುಖ್ಯಳ ಮೊದಲೆ ಬಲಗೊಂಬೆ4 ಛಾಯಾಭಗವತಿ ನಮ್ಮ ಕಾಯೆ ಕರುಣಾಂಬುಧೆಸಹಾಯವಾಗಮ್ಮ ಕಾಲಕಾಲಸಹಾಯವಾಗಮ್ಮ ಕಾಲಕಾಲಕೆಬ್ರಮ್ಹನ ತಾಯ ಗೆದ್ದು ಬರಬೇಕು 5 ಸುಬ್ರಹ್ಮಣ್ಯ ಸಾಸಿ ಒಬ್ಬ ಶ್ರೀ ಕೃಷ್ಣರಾಯ ನಿರ್ಭಯದಿ ಸ್ವಾದಿ ನಿಲಯನೆನಿರ್ಭಯದಿ ಸ್ವಾದಿ ನಿಲಯನೆ ತನುಮನಉಬ್ಬಿ ವಂದಿಸುವೆ ಕರುಣಿಸು6 ಹಂಪಿವಿರೂಪಾಕ್ಷದಿ ನಿಂತು ಪೂಜೆಯಗೊಂಬಯಂತ್ರೋದ್ದಾರಕಗೆ ಒಲಿದವನೆಯಂತ್ರೋದ್ದಾರಕಗೆ ಒಲಿದ ರಾಮೇಶನಕಾಂತೆಯರ ಗೆದ್ದು ಬರಬೇಕು 7
--------------
ಗಲಗಲಿಅವ್ವನವರು
ಪಾಲಿಪುದು ನಯನಗಳ ನಾಲಿಗೆಯ ನೀನು ಶ್ರೀಲೋಲ ಸಾರ್ವಭೌಮನೇ ಪ ನೀಲಮೇಘಶ್ಯಾಮ ಬೇಲಾಪುರಾಧೀಶ ಶೀಲ ಅಚ್ಚುತದಾಸಗೆ ಸ್ವಾಮಿ ಅ.ಪ ಪರಮಪದನಾಥ ಇಂದಿರೆಯರಸ ಸಕಲ ನಿ ರ್ಜರರು ಪೂಜಿಸುವಂಘ್ರಿಯಾ [ವರ]ನೇಮದಿಂ ಪಾಡೀ ಆಡೀ ದುರಿತಭವ ಶರಧಿಯಾ ಪಿರಿದು ದಾಟುವೆನೆಂದು ಭರದೊಳೈದಿದವಗಾ ಶ್ಚರ್ಯದಾಪತ್ತಡಸಿತ್ತೇ ಸ್ವಾಮಿ 1 ಹಿಂದೆ ಮಾಡಿದ ಕರ್ಮವೆಂಬದಕೆ ಜನನವಾದು ದಿಂದು ಊನನಲ್ಲಾ ಪೊಂದಲೀ ನಗರವನು ಪೋಗಲಾಕ್ಷಣದಿ ವಾಗ್ಬಂಧವತ್ವವೆರೆಡು ಮುಂದಕಡಿಯಿಡಲು ಇಂದಿನದೊಲಚ್ಚುತನ ದಾಸ ನಂದವಳಿದುಬ್ಬಸದೊಳು ಇಂದು ನೀ ಸಲಹಿದಡೆ ಪೂರ್ವಾರ್ಜಿತ ಕರ್ಮ ವೃಂದಗಳು ನಿಂದಿರುವವೆ ಸ್ವಾಮಿ 2 ಮನುಜ ಮಾಡಿದ ಪಾತಕಗಳನು ಎಣಿಸುವಡೆ ಘಣಿರಾಜಗಳವಡುವುದೇ ಗುಣ ತರಂಗಿಣಿಯೆ ದುರ್ಗುಣಗಳೆಣಿಸಲು ಶ ರಣಜನರೊಳೇಂಪುರುಳಿರುವುದೇ ಚಿನುಮಯನೆ ಭಕ್ತವತ್ಸಲನೆ ಅಚ್ಚುತz ಸನವಗುಣಗಳನೀ ಮರೆದು ಗುಣನಿಧಿಯೆ ಚೈತನ್ಯವಿತ್ತುಳುಹೆ ಬೇಗ ನಾ ಧನ್ಯನೆಲೊ ವೈಕುಂಠರಮಣಾ 3
--------------
ಬೇಲೂರು ವೈಕುಂಠದಾಸರು
ಪಾಲಿಸು ಜಗದೀಶಾ ಸರ್ವೇಶಾ ಪಾಲಿಸು ಜಗದೀಶಾ ಪ ಪಾಲಿಸು ಸರ್ವೇಶ ದೇವ ದೇವೇಶ ಪಾಲಿಸು ಬಾಲನ ರಾಮ ರಮೇಶ ಅ.ಪ. ಶರಣರ ತಂದೆ ನೀನು ಸರ್ವೇಶಾ ದುರುಳರಾಂತಕನು ನೀನು ಪರಿಯಿಂದ ಬಳಲುವ ಪರಮ ದಾಸರಿಗೆಲ್ಲಾ ಪೊರೆಯುವ ರಾಜಾಧಿರಾಜನೇ ನೀನು 1 ಮಾನಿನಿ ಕಾಯ್ದೆ ನೀನು ಸರ್ವೇಶಾ ಮಾನವ ನೀಡೋ ನೀನು ಹೀನರ ಸಲಹುವ ಪರಮ ನಾಯಕ ನೀನು ದೀನರ ರಕ್ಷಿಪ ತಾತನೇ ನೀನು 2 ಸುಜನರ ದೇವ ನೀನು ಸರ್ವೇಶಾ ಭಜಕರ ನಾಥ ನೀನು ಕುಜನರ ಕಾಲನು ದೂರ್ವಾಪುರೇಶನು ದ್ವಿಜವೃಂದ ವಂದ್ಯನು ಚನ್ನಕೇಶವನು 3
--------------
ಕರ್ಕಿ ಕೇಶವದಾಸ
ಪಾಲಿಸು ಶ್ರೀನಿವಾಸ ಪಾಲಿಸೋ ಪ ಪಾಲಿಸೋ ಯದುಕುಲ ಬಾಲಾ ಗಾನ- ಲೋಲನೆ ಯಾಕಿಂಥ ಜ್ವಾಲಾ ಜನ್ಮ ಬಲ್ಲೇನಾ ಸಂಸಾರಶೂಲಾ ನಿನ್ನ ಚಾಲನದಿಂದಾದವೆಲ್ಲಾ ಪದ್ಯ ಮಾಲೆಹಾಕುವೆ ಸಿರಿಲೋಲಾ ಆಹಾ ಬಾಲನ ಪಡೆದು ಪಾಲಿಸಲಾರೆನೆಂದರೆ ಸೀಲನೇ ಜನನಿ ಪದ್ಮಾಯಗಳಿಗೆ ಪೇಳ್ವೆ 1 ನಾನು ಮಾಡುವುದೆಂಬುದಿಲ್ಲಾ ಯೆನಗಾವ ಸ್ವಾತಂತ್ರ್ಯವು ಇಲ್ಲಾ ಇರೆ ಅನುಗಾಲ ಕಷ್ಟವು ಸಲ್ಲಾ ಎನಗೆ ಜನುಮಾದಿ ಭಯವು ಬಿಟ್ಟಿಲ್ಲ ನೀನು ತನುಸ್ಥಾನ ಬಿಟ್ಹೋದ ಮ್ಯಾಲೆ ಎನ್ನ ಸ್ವಾತಂತ್ರ್ಯವು ಇಲ್ಲವಾಯಿತಲ್ಲ ಆಹಾ ಅನುದಿನ ಹಸಿವೆ ತೃಷೆಗಳಿಂದ ಬಳಲೋ ದಾ- ಸನು ನಿನ್ನವನಿಗೆ ಸ್ವಾಧೀನವೆಲ್ಲಿಹುದೈಯ್ಯಾ 2 ನಿತ್ಯ ಸಂಸಾರಿಯಾದೆನಗೆ ಮತ್ತೆ ಮೃತ್ಯು ಬೆನ್ಹತ್ತಿರುವವಗೆ ಮಾಡೋ ಕರ್ಮ ಬದ್ಧ ಎನಗೆ ನೀ- ಚತ್ವದಿದುಪಜೀವಿಸುವವಗೆ ನಾನು ನಿತ್ಯನೆಂಬುವ ದುರಾತ್ಮನಿಗೆ ಆಹಾ ಮುಕ್ತಿಗೊಡೆಯ ಪುರುಷೋತ್ತಮ ನಿನ್ನ ದಾ- ಸತ್ವನಿತ್ತು ಸುಶಕ್ತನಮಾಡು ನೀ 3 ನಿನ್ನ ಆಧೀನವೊ ಎಲ್ಲಾ ನಾನು ನಿನ್ನ ದಾಸನು ಶಿರಿನಲ್ಲಾ ಅನು- ದಿನ ಮಾಡುವ ಕಾರ್ಯವೆಲ್ಲ ನೀನು ಚಲನೆದಂದದಿ ಮಾಡ್ವೆನಲ್ಲಾ ಯೆಂನೊ- ಳಾವ ತಪ್ಪಿತವೇನೋ ಇಲ್ಲಾ ನಿನ್ನ ಸಂಕಲ್ಪದಂತಾಗೋದೆಲ್ಲಾ ಆಹಾ ತನುವ ಕೊಟ್ಟವ ನೀನೆ ತನು ಕೊಂಡೊಯ್ವನೂ ನೀನೆ ಹನುಮೇಶವಿಠಲಾ ನಿನ್ನವನಾದ ಮ್ಯಾಲೆನ್ನಾ4
--------------
ಹನುಮೇಶವಿಠಲ
ಪಾಲಿಸೊ | ಗುರುವರನೇ ಪಾಲಿಸೋ ಪ ಪಾಲಿಸೊ ಗುರುವರ ಎನ್ನ | ಬಲುಬಾಲ ಭಾಷೆಗೆ ಒಲಿದಿನ್ನ | ಆಹ |ಕಾಲ ಕಾಲಕೆ ಹೃದ | ಯಾಲಯದಲಿ ನಿಂತುಶೀಲ ಗೋಪಾಲನ | ಲೀಲ ಧ್ಯಾನವನಿತ್ತು ಅ.ಪ. ತಂದೆ ವೆಂಕ್ಟನಾ ಕೃಪಾ ಬಲದೀ | ಸಾರಿಬಂದೆನೋ ಪೊಗಳುತ್ತ ಮುದದೀ | ನಿನ್ನದ್ವಂದ್ವ ಪಾದವ ನೋಡೆ ಜವದೀ | ಭವಬಂಧವ ಕಳೆಯಲೋಸುಗದೀ | ಆಹ |ಮಂದಾನ ಕರೆ ತಂದು | ಸಂದೇಶ ಎನಗಿತ್ತುಛಂದಾದಿ ಸಲಹಿದ್ಯೋ | ಸಿಂಧೂರ ಗಿರಿವಾಸ 1 ಅಹಿನವಾಭಿಧ ಕಾಯೋಯನ್ನಾ | ಮನಮೋಹ ಜಾಲವ ನೀಗೋ ಘನ್ನಾ | ಬಲುಕುಹಕ ಬುದ್ಧಿಯ ಬಿಡಿಸೆನ್ನಾ | ನಿನ್ನನೇಹ ಕರುಣೀಸೆನಗೆ ಮುನ್ನ | ಆಹವಿಹಗವಾಹನ ದೂತ | ಮಹಭಯ ವಾರಣಸಹನಾದಿ ಗುಣವಂತ | ಪ್ರಹಿತಾದಿ ಸಲಹೆನ್ನ 2 ಮುದ್ದು ಮೋಹನ ಗುರು ಬಾಲಾ ತಂದೆಮುದ್ದು ಮೋಹನ್ನ ವಿಠ್ಠಲ್ಲಾ | ಸಿರಿಮುದ್ದು ನೃಸಿಂಹನ ಲೀಲಾ | ಬಲುಮುದ್ದಿಸಿ ಪಾಡುವೆ ಬಹಳಾ | ಆಹಮಧ್ವಾಂತರ್ಗತ ಗುರು | ಗೋವಿಂದ ವಿಠಲನೆಹೆದ್ದ್ಯವ ವೆಂತೆಂಬ | ಶುದ್ಧ ಮತಿಯನಿತ್ತು 3
--------------
ಗುರುಗೋವಿಂದವಿಠಲರು