ಒಟ್ಟು 1976 ಕಡೆಗಳಲ್ಲಿ , 112 ದಾಸರು , 1583 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧಾರಿಣೀ ಭವಘೋರ ದುಃಖ ನಿವಾರಿಣಿ ಪ. ಧಾರಿಣಿಯೊಳು ಕಾಣೆ ನಿನಗೆಣೆಯಾರ ನಾನೆಲೆ ಗೀರ್ವಾಣಿ ಪಾಲಿಸು ಗುಣಮಣಿ ಅ.ಪ ಕಾಳಿದಾಸನೆ ಮುಖ್ಯ ಕವಿತಾಲೋಲರೆಲ್ಲರು ಧರೆಯೊಳು ಜಯಶೀಲರೆನ್ನಿಸಿ ಮೆರೆಯಲು ಲೋಲಲೋಚನೆ ನಿನ್ನ ಕೃಪೆಯದಲ್ಲೇ ನುಡಿಭರದೊಳು ಬಂದು ತೋರುವುದೆನ್ನೊಳು 1 ಪುಸಿಯು ಬಾರದ ತೆರದೊಳೆಮ್ಮಯ ರಸನೆಯಲ್ಲಿರು ಸಂತತಂ ರಸವ ತೋರುತೆ ಸಂತತಂ ಎಸೆವ ಶೇಷಗಿರಿಶನಂಘ್ರಿಯ ಭಜಿಸಿ ಬದುಕೆಂದೆನ್ನುತೆ ವರವ ಪಾಲಿಸು ಸುಪ್ರಿತೆ 2
--------------
ನಂಜನಗೂಡು ತಿರುಮಲಾಂಬಾ
ಧೇನಿಸೂ ಶ್ರೀಹರಿಯ ಮಹಿಮೆ ನೀ ಧೇನಿಸೊ ಪ ಧೇನಿಸು ಶ್ರೀಹರಿಯ ಲೀಲಾ ಸೃಷ್ಟಿ ಮಾನಸದಲಿ ನೆನೆಯೋ ಪರಿಯಾ ||ಆಹಾ|| ತಾನೆ ತನ್ನಯ ಲೀಲಾಜಾಲತನದಿ ತನ್ನ ಆನಂದದೊಳಿಪ್ಪ ಶ್ರೀ ಮುಕುಂದ ನನ್ನ ಅ.ಪ ಮೂಲ ನಾರಾಯಣ ದೇವ ತಾನು ಆಲದೆಲೆಯೊಳು ಲೀಲಾ ತೋರಿ ಬಾಲತನದಿ ತಾ ನಲಿವಾ ಅನೇಕ ಕಾಲ ಪರ್ಯಂತರದಿ ಸರ್ವ ||ಆಹಾ|| ಎಲ್ಲ ಜಗವ ತನ್ನ ಒಡಲೊಳಡಗಿಸಿ ಲೋಲನಾಗಿ ಬಾಲಕ್ರೀಡೆಯಾಡುವಪರಿಯಾ 1 ಇಂತು ಶಯನಗೈದ ಹರಿಯ ಅ- ನಂತ ವೇದಗಳಿಂದ ತ್ವರಿಯಾ ದುರ್ಗ ಸಂತಸದಿಂದ ಸಂಸ್ತುತಿಯ ಮಾಡೆ ಕಂತುಪಿತÀನು ತಾನೆಚ್ಚರಿಯ ||ಆಹಾ|| ಅಂತೆ ತÉೂೀರ್ದ ವಾಸುದೇವಾದಿ ಚತುರಾ- ಸಿರಿ ರೂಪಗಳ ಸಹಿತ 2 ಸಕಲ ರೂಪಗಳ ತನ್ನೊಳೈಕ್ಯಾ ಮಾಡಿ ಸಕಲ ಲಕುಮಿ ರೂಪಗಳಲಿ ಐಕ್ಯಾ ಇಟ್ಟು ಸಕಲ ಮರುತರ್ಗೆ ತನುಮುಖ್ಯಾ ಇತ್ತು ಸಕಲ ಕ್ರೀಡೆಯೊಳು ಸೌಖ್ಯಾ ||ಆಹಾ|| ಲಕುಮಿಯ ಸ್ತುತಿಗೆ ಒಲಿದು ತಾನೇತ- ನ್ನ ಕಡೆಗಣ್ಣಿಂದ ಪಂಚಜೀವರ ನೋಡಿದಾ 3 ಶುದ್ಧಸೃಷ್ಟಿಯೆಂಬುದೊಂದು ಪರಾ- ಧೀನ ವಿಶೇಷವು ಎಂದು ಮತ್ತೆ ಒಂದು ಮಿಶ್ರ ಸೃಷ್ಟಿಯೆಂದು-ಒಂದು ಕೇವಲ ಸೃಷ್ಟಿಯೆಂದೂ ||ಆಹಾ|| ತಮಾಂಧಕಾರವ ಪ್ರಾಶಿಸಿದ ವಿವರಾ 4 ತನ್ನೊಳೈಕ್ಯವಾಗಿದ್ದ ಮಹ ತಾನೆ ಪ್ರಕಟನಾಗಿ ನಿಂದ ಆಗ ಉನ್ನಂತ ಚತುರ ನಾಮದಿಂದ ||ಆಹಾ|| ಜನುಮ ಸ್ಥಿತಿ ಮೃತಿ ಮೋಕ್ಷದನಾಗಿರ್ಪ ಅನಿರುದ್ಧಾದಿ ಚತುರಮೂರ್ತಿಗಳ ವ್ಯಾಪಾರ5 ಪುರುಷನಾಮಕ ಪರಮಾತ್ಮ ತಾ ತರವರಿತು ಘನಮಾಡ್ದ ಮಹಿಮಾ ಸೃಷ್ಟಿ ತರತರ ಮಾಡ್ದ ಮಾಹಾತ್ಮ ||ಆಹಾ|| ಪ್ರಾಕೃತ ವೈಕೃತ ದೇವತೆ ಸುಮಾನ ಈ ಮೂರುವಿಧ ಸೃಷ್ಟಿಯಾನೆಸಗಿದ ಪರಿಯ ನೀ 6 ಮಹದಹಂಕಾರ ತತ್ವ ಪಂಚ ಮಹಭೂತಗಳು ಮನಸ್ತತ್ವ ಇನ್ನು ಮಹದಶೇಂದ್ರಯಗಳ ತತ್ವ ಮತ್ತೆ ಮಹತಾಮಿಶ್ರಾಂಧ ತಾಮಸ ತತ್ವ ||ಆಹಾ|| ಇಹುದು ಈ ಪರಿಯಲ್ಲಿ ಪ್ರಾಕೃತ ಸೃಷ್ಟಿಯು ಮುಹುರ್ಮುಹು ಇದನೆ ಆಲಿಸಿ ನಿನ್ನೊಳು 7 ವೈಕೃತದೋಳು ಸಕಲ ವೃಕ್ಷಾ ತಿರ್ಯಕ್ ಸಕಲ ಪ್ರಾಣಿಗಳ್ ಮನುಜ ಕಕ್ಷಾ ಎಲ್ಲ ವಿಕೃತ ಸೃಷ್ಟಿಯ ಮಾಡ್ದ ಅಧ್ಯಕ್ಷಾ ಇನ್ನು ಸುರಸಮಾನ ಸೃಷ್ಟಿಯ ಅಪೇಕ್ಷಾ ||ಆಹಾ|| ಸಕಲ ಸುರಾಸುರಪ್ಸರ ಗಂಧರ್ವರು ಪಿತೃಗಳು ಯಕ್ಷರಾಕ್ಷಸರ ಪರಿಯವರಾ 8 ಪುನ್ನಾಮ ವಿರಂಚಿ ಬ್ರಹ್ಮಾನು ಅಂದು ಘನ್ನವಾಸುದೇವ ತಾನು ಸೃಷ್ಟಿ ಯನ್ನ ಪ್ರಕಟಮಾಡಿದನು ಮುಂದೆ ಅನಿಲದೇವನು ಸಂಕರುಷಣನ ||ಆಹಾ|| ಅನಿಲನೆ ಸೂತ್ರನಾಮಕವಾಯುವಾಗಿಹ ಭಾವೀ ಬ್ರಹ್ಮನೀತನೆ ನಿತ್ಯಗುರುವೆಂದು 9 ಪ್ರದ್ಯುಮ್ನನಿಂದ ಸರಸ್ವತಿ ಇನ್ನು ಶ್ರಧ್ದಾನಾಮಕಳು ಭಾರತಿ ಸೃಷ್ಟಿ- ಯಾದ ವಿವರ ತಿಳಿಯೊ ಪೂರ್ತೀ ಇದೇ ಪ್ರದ್ಯುಮ್ನನ ಸೃಷ್ಟಿಯ ಕೀರ್ತಿ ||ಆಹಾ|| ಶ್ರದ್ಧಾದೇವಿಯೊಳು ಸೂತ್ರನ ವೀರ್ಯದಿಂ- ದುದ್ಭವಿಸಿದ ಜೀವ ಕಾಲನಾಮಕನು 10 ಈರ ಬ್ರಹ್ಮರಸೃಷ್ಟಿ ಚರಿತ್ರೆ ಚಿತ್ರ ಗಾತ್ರ ತರವೆಲ್ಲ ವಿಚಿತ್ರ ||ಆಹಾ|| ವಿರಂಚಿ ಬ್ರಹ್ಮ ಸರಸ್ವತಿಯಿಂದ ವೈ- ಕಾರಿಕ ರುದ್ರ ಶೇಷಗರುಡರ ನೀ 11 ಸೂತ್ರ ಶ್ರದ್ಧಾ ದೇವೇರಿಂದ ಪವಿ ತ್ರತೈಜಸ ರುದ್ರ ಬಂದಾ ಪ- ಪುತ್ರರಾಗಿಹರತಿ ಚೆಂದಾ ||ಆಹಾ|| ಪುತ್ರನಾದ ತಾಮಸ ರುದ್ರ ಶೇಷಗೆ12 ಪ್ರದ್ಯುಮ್ನ ಸೂಕ್ಷಶರೀರ ಕೊಟ್ಟು ಉದ್ಧಾರ ಮಾಡಿದ ಜೀವರ ಅನಿ ರುದ್ಧನ ಕೈಲಿ ಕೂಡಲವರಾ ಅನಿ ರುಧ್ದನು ಮಾಡ್ದ ವಿಸ್ತಾರಾ ||ಆಹಾ|| ತದಪೇಕ್ಷ ಮೂಲಪ್ರಕೃತಿಯಿಂದ ಗುಣತ್ರಿ- ವಿಧ ಕೊಂಡು ಮಹತ್ತತ್ವ ನಿರ್ಮಿಸಿದಾ 13 ಮಹತ್ತತ್ವದಿಂದಹಂಕಾರ ತತÀ್ತ ್ವ ಮಹದಹಂಕಾರವು ಮೂರುತರ ಇದ- ರೊಳು ಬ್ರಹ್ಮವೈಕಾರಿಕ ಶರೀರವಾಗಿ ಪರಿ ಈ ರೂಪ ವಿವರಾ ||ಆಹಾ|| ಅಹುದು ತೈಜಸದಿಂದ ಶೇಷನ ದೇಹವು ತಾಮಸದಿಂದಲಿ ರುದ್ರ ತಾನಾದನು 14 ಎರಡನೆಯ ಸಾರಿ ಪ್ರದ್ಯುಮ್ನ ಅರ್ಧ ನಾರೀ ರೂಪನಾಗಿ ಇನ್ನು ಎಡದಿ ಸ್ರೀರೂಪ ಜೀವರುಗಳನ್ನು ಬಲದಿ ಪುರುಷ ಜೀವರೆಲ್ಲರನ್ನು ||ಆಹಾ|| ಧರಿಸಿ ಅವರ ದೇಹಗಳನಿತ್ತು ಅ ನಿರುದ್ಧನ ಕೈಯೊಳಿತ್ತ ಪರಿಯನ್ನು 15 ಅದರಂತೆ ಅನಿರುಧ್ದದೇವ ತಾ ನದಕಿಂತ ಸ್ಥೂಲದೇಹವ ಮೂಲ ಪ್ರಕೃತಿಯಿಂದ ಗುಣವಾ ಕೊಂಡು ಅದುಭುತ ಮಹತ್ತತ್ವತೋರ್ವ ||ಆಹಾ|| ಅದುಭುತ ಮಹತ್ತತ್ವದಿಂದಹಂಕಾರ ಉದಿಸಿದ ಪರಿಯನು ಮುದದಿಂದಲಿ ಅರಿತು 16 ಪರಮ ಕರುಣೆಯಲೀ ರುದ್ರನು ಅರ್ಧ ನಾರೀರೂಪ ತಾಳಿ ಇನ್ನೂ ಎಡದಿ ಸುರರಸ್ತ್ರೀಗಳನ್ನು ಬಲದೀ ಸುರಪುರಷರನ್ನೂ ||ಆಹಾ|| ಭರದಿ ಪುಟ್ಟಿಸಿ ಪ್ರದ್ಯುಮ್ನನ ಕೈಲಿತ್ತ ಪರಿಪರಿ ಸೃಷ್ಟಿಯ ಕ್ರಮವರಿತು ನೀನೀಗ 17 ಅನಿರುಧ್ದ ದೇವನು ಜೀವರ ಸ್ಥೂಲ ತನುವ ಕೊಟ್ಟು ಪಾಲಿಪ ತದಭಿ- ಮಾನಿ ಶ್ರೀ ಭೂ ದುರ್ಗಾ ಮಾಡಿ ತಾನೆಲ್ಲರ ಸತತ ಪೊರೆವಾ ||ಆಹಾ|| ಮಹತ್ತತ್ತಾ ್ವಭಿಮಾನಿಗಳೆನಿಸಿದ ದೇವನ18 ಅಹಂಕಾರ ತತ್ತಾ ್ವಭಿಮಾನಿ ಅದಕೆ ಅಹಿಗರುಡರು ಅಭಿಮಾನಿ ಇನ್ನು ಅನಿರುದ್ಧಾದಿ ರೂಪತ್ರಯವು ಇದಕೆ ಇನ್ನು ನಿಯಾಮಕನು ಎನ್ನು ||ಆಹಾ|| ಮಹತ್ತತ್ವಾ ನಿಯಾಮಕ ವಾಸುದೇವನಿಂದ- ನವರತ ಈ ಸೂಕ್ಷ್ಮಪ್ರಮೇಯ ಗ್ರಹಿಸಿ ನೀನು 19 ಮನಸ್ತತ್ವಾಭಿಮಾನಿ ಸುರರಾ ಸೃಷ್ಟಿ ಯನ್ನೆ ವೈಕಾರಿಕದಿಂದಲವರಾ ಮಾಡಿ ಘನ್ನ ತೈಜಸದಿಂದಲಿಂದ್ರಿಯ ತತ್ಪವೆ- ಲ್ಲನೆಸಗಿದಂಥ ವಿವರಾ ||ಆಹಾ|| ಉನ್ನಂತ ತನ್ಮಾತ್ರ ಭೂತಪಂಚಕಗಳ ತಾಮಸದಿಂದಲಿ ಉದಿಸಿದ ಪರಿಯನು 20 ಯುಕ್ತಸ್ಥಾನಾದಿಗಳನ್ನು ಕೊಡೆ ಉತ್ತಮೋತ್ತಮನನ್ನು ತಾವು ಸುತ್ತಿ ಸ್ತುತಿಸಲು ಇನ್ನೂ ||ಆಹಾ|| ತತ್ವದೇವತೆಗಳ ಭಕ್ತಿಗೆ ಒಲಿದು ತತ್ವರೆಲ್ಲರ ತೋರೆ ರೂಪದಿ ಧರಿಸಿಟ್ಟನು21 ರಜಸುವರ್ಣಾತ್ಮಕವಾದ ಘನ ನಿಜ ಐವತ್ತು ಕೋಟಿ ಗಾವುದ ಉಳ್ಳ ಅಜಾಂಡವನ್ನು ತಾ ತೋರ್ದ ತನ್ನ ನಿಜಪತ್ನಿ ಉದರದಿ ಮಾಡ್ದ ||ಆಹಾ|| ಸೃಜಿಸಿ ಬ್ರಹ್ಮಾಂಡದಿ ತತ್ವಗಳೊಡಗೂಡಿ ನಿಜವಾಗಿ ತಾನೊಳ ಪೊಕ್ಕ ವಿರಾಟನ್ನ 22 ಪಾತಾಳಾದಿ ಸಪ್ತಲೋಕ ಕಡೆ ಪರಿಯಂತ ರೂಪ ತಾ ತಾಳಿದ ಆದ್ಯಂತ ಇಂತು ನಿರತನು ಸಚ್ಚಿದಾನಂದ ||ಆಹಾ|| ಇಂತು ವಿರಾಟ ತನ್ನಂತರದೊಳು ತತ್ವರೆಲ್ಲರ ತತ್‍ಸ್ಥಳದೊಳಿಟ್ಟು ಪೊರೆದನ್ನ23 ಸಕಲ ಉದಕ ಶುಷ್ಕದಿಂದ ಇರಲು ತಕ್ಕ ಮುಕ್ತಾಮುಕ್ತರ ಭೇದದಿಂದ ತಕ್ಕ ಸ್ಥಾನವೆ ಕಲ್ಪಿಸಿದ ಚೆಂದಾ ||ಆಹಾ|| ಅಕಳಂಕ ಪುನ್ನಾಮಕನು ಧಾಮತ್ರಯ ಮೊದಲಾದ ನರಕ ಪಂಚಕಗಳ ಮಾಡಿದ 24 ಉದಕ ಶೋಷಣೆಯನ್ನು ಮಾಡಿ ಇನ್ನುಮ- ಹದಹಂಕಾರವ ಕೂಡಿ ಭೂತ ಪಂಚಕವ ಮಿಳನ ಮಾಡಿ ಆಗ ಹದಿನಾಲ್ಕೂದಳಾತ್ಮಕ ಪದ್ಮತೋರಿ ||ಆಹಾ|| ಅದುಭುತ ಪದುಮದಿ ಉದಿಸಿದ ಬ್ರಹ್ಮನು ಚತುರ ನಾಲ್ಕುದಿಕ್ಕು ಮುದದಿಂದ ನೋಡಿದ 25 ಪದುಮದಲಿ ಚತುರಾಸ್ಯನಾಗಿ ಅದು ಭುತÀ ಮಹಿಮೆ ನೋಡುತ ತಾನೆ ಮುದದಿಂದ ಮೊಗತಿರುಗಿಸುತಾ ಅದ ಅದುಭುತ ಶಬ್ದಕೇಳುತ್ತಾ ||ಆಹಾ|| ತದಪೇಕ್ಷ ತಪವನಾಚರಿಸಿ ನಾಳದಿ ಬಂದು ಪದುಮನಾಭನು ತಾನು ಮುದದಿಂದ ನೋಡಿದ 26 ಪರಮಪುರುಷ ಉಕ್ತಿ ಲಾಲಿಸಿ ಮೆಚ್ಚಿ ವರವ ಕೊಟ್ಟು ಪಾಲಿಸಿ ಸೃಷ್ಟಿ ನಿರುತ ಮಾಡಲು ತಾ ಬೆಸಸೀ ತಾನು ಅವನಂತರದೊಳು ನೆಲೆಸೀ ||ಆಹಾ|| ಹೊರಗೂ ಒಳಗೂ ನಿಂತು ಸೃಷ್ಟಿಲೀಲೆಯ ತೋರ್ವ ಉರಗಾದ್ರಿವಾಸವಿಠಲ ವೇಂಕಟೇಶನ್ನ 27
--------------
ಉರಗಾದ್ರಿವಾಸವಿಠಲದಾಸರು
ಧೇನಿಸೊ ಶ್ರೀಹರಿಯ ಮಹಿಮೆಯ ಪ ಧೇನಿಸು ಲಯದ ವಿಸ್ತಾರ ಚತುರಾ ನಾನಕಲ್ಪದ ವಿವರಾ ||ಆಹಾ|| ಧೇನಿಸು ಶತಾನಂದಗೆ ಶತ- ಮಾನಕಾಲದಲ್ಲಿ ಇದ್ದು ನಡೆಸುವ ಹರಿಕಾರ್ಯ ಅ.ಪ ಮೊದಲರ್ಧ ಶತಮಾನ ಸೂಕ್ಷ್ಮ ಸೃಷ್ಟಿ ಪದುಮನ ತೋರಿದ ಮಹಾಮಹಿಮ ಆಗ ಅದೆ ಪ್ರಥಮ ಪರಾರ್ಧವು ನೇಮ ಮೇಲೆ ದ್ವಿತೀಯ ಭಾಗಕ್ಕೆಲ್ಲ ಬ್ರಹ್ಮ ||ಆಹಾ|| ಅದರೊಳು ತ್ರಿದಶ ಏಳರ್ಧ ವರ್ಷವು ಪದುಮಜನಿಂದ ರಾಜ್ಯವನಾಳಿಸಿದ ಪರಿಯನು 1 ದ್ವಾದಶಾರ್ಧವರುಷ ತಾ ಉಳಿಯೆ ಆಗ ತೋರ್ದ ಅದುಭೂತವಾದ ಮಹಾಪ್ರಳಯ ಸೂಚ- ನಾದಿ ಕಾರ್ಯವು ತಾ ಮೆರೆಯೆ ಶತ ಅಬ್ದ ಅನಾವೃಷ್ಟಿ ತೋರಿರೆ ಆಹಾ|| ಉದಧಿ ಶೋಷಣೆಯಿಂದ ಸರ್ವಸಂಹಾರವು 2 ಮೇರುಪರ್ವತ ಸ್ಥಳದಲ್ಲಿ ಇದ್ದ ವಿ- ಧಿರುದ್ರಾದಿಗಳೆಲ್ಲರಲ್ಲಿ ಮಹ ತೋರುತ್ತ ಕುಣಿದಾಡುತ್ತಲಿ ||ಆಹಾ|| ಸುರರವಯವಗಳ ತಾನಲಂಕರಿಸಿದನ 3 ನರಹರಿ ನರ್ತನ ಮಾಡಿ ತನ್ನ ಕರದಿ ತ್ರಿಶೂಲವನ್ನು ನೀಡಿ ದಿ- ಕ್ಕರಿಗಳ ಪೋಣಿಸಿ ಆಡಿ ಸರ್ವರಉ- ದರದೋಳಿಟ್ಟು ಕೂಡಿ ||ಆಹಾ|| ಗ್ರಾಸ ತ್ವರಿತದಿ ತಾ ಮಾಡಿ ಕ್ರೀಡಿಸುತಿರ್ಪನ್ನ 4 ವಾಯುದೇವರ ಗದಾಪ್ರಹಾರದಿಂದ ಭಯ ಹುಂಕಾರದಿಂದ ಜೀವರ ಲಿಂಗ ಆಯತ ಸ್ಥಳದಲ್ಲಿಟ್ಟವರಾ ||ಆಹಾ|| ಲಯಕಾಲದಿ ಸಂಕರುಷಣ ಮುಖದಿಂದ ಲಯವಾಗಲು ಅಗ್ನಿ ಪೊರಟು ದಹಿಪುದಾ 5 ಕರಿಯ ಸೊಂಡಿಲಿನಂತೆ ಮಳೆಯ ಧಾರೆ ನಿರುತ ಶತವರ್ಷಗರೆಯೆ ನೋಡೆ ಸರ್ವತ್ರ ಜಲಮಯವಾಗೆ ಆಗ ನೀರಜಾಂಡವೆಲ್ಲ ಕರಗೆ ||ಆಹಾ|| ಗರುಡ ಶೇಷ ಮಾರ್ಗವರಿತು ಬರುತಿರ್ಪ ಸರ್ವಜೀವರ ತನ್ನ ಉದರದೊಳಿಟ್ಟನ್ನಾ 6 ಅರಿಯೋ ನೀ ಶೇಷಮಾರ್ಗವನ್ನೂ ಇಲ್ಲಿ ಸುರರು ಕುಬೇರನೊಳಿನ್ನು ಆತ ವರುಣನಲ್ಲಿ ಲಯವನ್ನೂ ಚಂದ್ರ ಹರಿಪಾರ್ಷಧರನಿರುದ್ಧನನ್ನು ಆಹಾ ಅನಿರುದ್ಧ ಸನತ್ಕುಮಾರನ್ನ ತಾವು ಪೊಂದಿ ಮಾರ ವಾರುಣಿಯು ಹರಿಮಡದಿಯರಲ್ಲಿ ಲಯವಾ 7 ಸುರರು ಮೊದಲು ಅಗ್ನಿಯೊಳ್ ಲಯವನ್ನೈದುವರು ಆ ಅಗ್ನಿ ತಾ ಸೂರ್ಯನ್ನ ಸೇರುವನು ಸೂರ್ಯ ತಾ ಗುರುವನ್ನ ಸೇರುವನು ||ಆಹಾ|| ಆಗಲೇ ಸರ್ವಮನುಜರು ಪಿತೃಗಳು ನಿರುಋತಿಯೊಳು ಪೊಕ್ಕು ತಾ ಯಮನಲ್ಲಿ ಸೇರುವಾ 8 ಯಮ ಪ್ರಿಯವ್ರತರಾಯರೆಲ್ಲ ಲಯ ತಮ್ಮ ಸ್ವಾಯಂಭು ಮನುವಿನಲ್ಲಿ ಮತ್ತೆ ಮ- ಹಿಮ ಭೃಗುವು ದಕ್ಷನಲ್ಲಿ ಲಯವು ಆ ಮಹಾದಕ್ಷ ಸ್ವಾಯಂಭು ಇಂದ್ರನಲ್ಲೀ-ಆಹಾ ಅಮರಪತಿಯು ತಾ ಸೌಪರಣಿಯನು ಪೊಂದಿ ಈ ಮಾರ್ಗದಿ ತಾನು ಗರುಡನ್ನ ಸೇರುವುದು 9 ಶೇಷಗರುಡರೊಡಗೂಡಿ ಆಗ ಸರಸ್ವತಿಯನ್ನೆ ಪೊಂದುವರು ಮತ್ತೆ ಆಸುವಿರಂಚಿ ವಾಯುಗಳು ತಾವು ಸರಸ್ವತಿಯನ್ನೆ ಪೊಂದುವರು ಆಹಾ ಈ ಸೂಕ್ಷ್ಮಲಯವನ್ನೆ ಕ್ರಮವರಿತು ನೀನೀಗ 10 ಸೂತ್ರನಾಮಕ ವಾಯುದೇವ ರುದ್ರ ಉಮೆಪ್ರದ್ಯುಮ್ನದ್ವಾರ ತ್ರಾತ ಸಂಕುರುಷಣನಾ ದಯದಿ ಜಗ- ನ್ಮಾತೆ ಲಕ್ಷ್ಮಿಯೊಳು ಸೇರುವರು ||ಆಹಾ|| ಚತುರಾಸ್ಯ ಜೀವರ ತನ್ನುದರದೊಳಿಟ್ಟು ಅತಿಮೋದದಿಂದ ವಿರಾಟನ್ನೈದುವುದು11 ವಿರಾಟ್ ಬ್ರಹ್ಮನು ತಾನೆಲ್ಲಾ ತನ್ನ ಆ ವರಣದಲ್ಲಿ ಇಪ್ಪಂಥ ತನ್ನ ಧರೆಯಲ್ಲಿ ಲೀನವಾಗುವ ಆಗ ಪರಿಪರಿಯಿಂದ ತನ್ಮಾತÀ್ರ ಆಹಾ ಅರಿತು ಶಬ್ದಸ್ಪರ್ಶರೂಪರಸಗಂಧ ಪರಿಪರಿಯಿಂದಲಿ ಲಯವನ್ನೈದುವುದಾ12 ಗಂಧದ್ವಾರ ಲಯತನ್ನ ಬಿಲದಿ ಜಾತ ವೇದದಲ್ಲಿ ರಸ ಲಯವು ರೂಪ ದ್ವಾರ ಲಯ ಆಕಾಶದೊಳು-ಆಹಾ- ಶಬ್ದದ್ವಾರ ಲಯತಮ ಅಹಂಕಾರಾದಿ ತದಾಂತರ್ಗತÀ ಭಗವದ್ರೂಪದಲ್ಲ್ಯೆಕ್ಯವಾ 13 ಅಹಂಕಾರತ್ರಯದಲಿ ಬಂದಾ ತತ್ತ ್ವ ದೇಹಸೂರರೆಲ್ಲರ ಲಯವು ಇಹ ತತ್ವಾಂತರ್ಗತ ಭಗವದ್ರೂಪಕೆ ||ಆಗ|| ಅಲ್ಲಲ್ಲಿ ತನ್ನೊಳೈಕ್ಯವೂ-ಆಹಾ ಅಹಂಕಾರತ್ರಯ ಮಹತ್ತತ್ವದಲ್ಲಿ ಲಯ ಮಹತ್ತತ್ತ ್ವವು ಮೂಲಪ್ರಕೃತಿಯಲ್ಲಿ ಲಯವು 14 ವಾಸುದೇವಾದಿ ಚತುರ ರೂಪ ಮತ್ಸ್ಯ ಶ್ರೀಶನನಂತಾದಿರೂಪ ಮತ್ತು ಶ್ರೀಶನಷ್ಟೋತ್ತರ ರೂಪ ||ಆಹಾ|| ತಾ ಸಕಲರೂಪಗಳು ಮೂಲರೂಪದೊಳೈಕ್ಯ ಶಾಶ್ವತನಾದ ಶ್ರೀ ಸಚ್ಚಿದಾನಂದನ್ನಾ 15 ಗುಣಮಾನಿ ಶ್ರೀ ಭೂ ದುರ್ಗಾ ಅಂ- ಭ್ರಣಿ ರೂಪವನ್ನೆ ತಾ ಧರಿಸೀ ಸಂ- ಪೂರ್ಣನ್ನ ಸಾಮೀಪ್ಯ ಸೇರಿ ಪೂರ್ಣ ಕಾಮನ್ನ ಎಡಬಿಡದೆ ನೋಡೀ ||ಆಹಾ|| ಕ್ಷಣ ಬಿಡದೊಡೆಯನ ಅಗಣಿತಗುಣಗಳ ಕಡೆಗಾಣದೆ ನೋಳ್ಪ ನಿತ್ಯಮುಕ್ತಳ ಸಹಿತಾ16 ಏಕೋ ನಾರಾಯಣ ಆಸೀತ ಅ- ನೇಕ ಜನರ ಸಲಹಲಿನ್ನು ತಾನೆ ಸಾಕಾರದಲಿ ನಿಂದಿಹನು ಇಂತು ವೇಂಕಟಾಚಲದಿ ಇನ್ನು ಮುನ್ನು ||ಆಹಾ|| ಏಕಮನಸಿನಿಂದ ಭಜಿಪ ಭಕ್ತರನ ತಾ ನಿ- ನಿತ್ಯ 17
--------------
ಉರಗಾದ್ರಿವಾಸವಿಠಲದಾಸರು
ಧ್ಯಾನ ಮಾಳ್ಪುದು ಮನಸಾ | ಹೃದಯಾರವಿಂದದಿಸಾನು ಕೂಲಿಪ ಅರಸ | ವಿಸ್ತರಿಸಿ ಗುಣಗಳಮೌನಿಯಾಗುತ ಸಹಸ | ಚಿಂತಿಸೆಲೊ ಅನಿಶಾ ಪ ಸಾನು ರಾಗದಿ ರೂಪಗುಣಗಳ | ಮಾನಮೇಯ ಜ್ಞಾನ ಸಹಿತದಿಏನು ಫಲದನು ರಾಗವಿಲ್ಲದೆ | ಶ್ರೀನಿವಾಸನ ಭಕುತಿಯಿಂದಲಿ ಅ.ಪ. ನತ ನಾ | ಸಾಗ್ರದಲಿ ದೃಷ್ಟಿಯನೆ ಇಡುತ 1 ಮಾನವ ಪ್ರಾಣ ನಿಯಮನ ವಾರ್ತಿ | ತಿಳಿಯುತ ಮನದಲಿಪ್ರಾಣ ರೇಚಕ ನೀತಿ | ಪೂರಕವು ಕುಂಭಕಜಾಣ ತನದಲಿ ಪೂರ್ತಿ | ಗೈದೋಂಕಾರ ಕೀರ್ತಿ ||ಪ್ರಾಣ ನಿರುತದಿ ಮಾಳ್ಪ ಅನು ಸಂಧಾನ ತಿಳಿದಾ ಚರಿಸೆ ವಿಹಿತದಿಪ್ರಾಣ ಸಂಯವ ಭಕ್ತಿ ಪೂರ್ವ ವಿ | ಧಾನ ಮಾಡಲು ವೇಗ ವಲಿದನು|2| ಹತ್ತು ಸಲ ಪ್ರತಿಸವನ | ಪ್ರಾಣನ್ನ ಸಂಯವ ಕರ್ತೃ ಹೀಗೆ ತ್ರಿಸದನ ಮಾಸಕ್ಕೆ ಮುಂಚೆಯೆಭರ್ತೃವಾಗಿಹ ಪ್ರಾಣ | ವಶನ ಹನು ಅವಗೆಂದುಉಕ್ತವಿದು ಸನ್ಮಾನ | ತಿಳಿದಾ ಚರಿಸು ಧ್ಯಾನ ||ಪೊತ್ತು ಕದಳಿಯ ಮೊಗ್ಗಿನಾಕೃತಿ | ಮತ್ತೆ ನಡು ಸತ್ಕರ್ಣಿಕವು ಇಹಹೃತ್ಸ ಅಷ್ಟದಳಾಖ್ಯ ಕಮಲವ | ಎತ್ತುವುದು - ಉದಯಾರ್ಕ ಮಂತ್ರದಿ |3| ಚಿಂತೆ ಕರ್ಣಕೆಯಲ್ಲಿ | ಮಾರ್ತಾಂಡ ಮಂಡಲಅಂತೆ ಅದರುಪರೀಲಿ | ತಾರೇಶ ಮಂಡಲಚಿಂತೆ ತದ್ದುಪರೀಲಿ | ಮಂಡಲ ವಿಭಾವಸುಅಂತೆ ತನ್ನಡುವೀಲಿ | ಹರಿಪದಾಜ್ಜಾಳಿ ||ಯಂತೆ ಚಿತ್ತ ಸ್ಥೈರ್ಯದಿಂದಲಿ | ಚಿಂತಿಸುತ ಗುಣರೂಪ ಕ್ರಿಯೆಗಳಕ್ರಾಂತನಾಗುವ ಹರಿಯ ಚರಣದಿ | ಶಾಂತ ಸತ್ಸಮಾಧಿಯನು ಪಡೆ 4 ಕಂಬು ಕುಂಡಲ ಮಕರ | ಶೋಭಿ ಕರ್ಣಾಪಾರ ||ಮಾರಪಿತ ಶಿರಿವತ್ಸ ಲಾಂಛನ | ಶ್ರೀ ರಮಾಪತೆ ಶ್ಯಾಮಸುಂದರಕಾರಣಿಕ ಕನಕಾಂಬರಾಧರ | ಹಾರ ಸುಮನ ವಿಶಾಲ ವಕ್ಷನ 5 ಕಂಬು ಕಟಿ ಸೂತ್ರಾಂಗದೈರ್ಯುತ | ವಸ್ತು ಸರ್ವಾಧಾರ ಹೃದ್ಯನ 6 ಧ್ಯಾನ ಬಹು ದುರ್ಭಾವ್ಯ | ಶ್ರೀಹರಿ ವಿಭೂತಿಯುಮನಕೆ ದುರ್ವಿಜ್ಞೇಯ | ಪೆಸರಿಹುದು ಕಾರಣಅನಘನಂಗವು ದೇಹ | ಒಂದೊಂದು ಸ್ಥಿರ ಪಡೆಪುನಹ ಸರ್ವಾವಯದ ಸ್ಥಿರ ತೆರದಿ ಧೇಯ ||ಎಣಿಸು ಪ್ರತ್ಯಾಹರಣ ಕಾರ್ಯವ | ವಿನಹವಿದು ಮನಸ್ಥೈರ್ಯವಾಗದುಅನಿಲದಯ ಸಂಪಾದಿಸುತ್ತಲಿ | ಗುಣಿಸು ನೈರಂತರ್ಯವೀತೆರ 7 ಶಿಷ್ಟನಾಗುತಲಿನ್ನು | ಅನ್ಯತ್ರ ಮನವನುಸುಷ್ಠು ಸೆಳೆಯುತಲಿನ್ನು | ಹರಿಪಾದ ವನಜದಿಘಟ್ಟ ಇಡುತಲಿ ಮುನ್ನ | ಸುಸ್ಥಿರದ ಚಿತ್ತದಿ ||ಪ್ರೇಷ್ಟ ತಮ ಅವನೆನ್ನು | ಸರ್ವಕಧಿಕೆನುನಷ್ಟವಾಗುತ ಭ್ರಾಮಕ ತ್ರಯ | ಶ್ರೇಷ್ಠ ಧ್ಯಾನಾಸಕ್ತನಾಗಲು ದೃಷ್ಟಿಸುತಲಿ ತತ್ವಪತಿಗಳ | ಇಷ್ಟ ಮೂರ್ತಿಯ ಕಾಂಬೆ ಕೊನೆಗೆ8 ಯೋಗವಿಹುದು ಸಮಾಧಿ | ಅಭ್ಯಾಸ ಸಾಧ್ಯ ನಿಯೋಗಿಸಿದನ ನಿರುತದಿ | ಸುಸ್ಥಿರದಿ ಚಿತ್ತವಯೋಗಿಸ್ಹರಿ ಚರಣದಿ | ಏನೊಂದು ಬೇಡದೆವೇಗ ಹರಿ ರೂಪದಿ | ನೋಡವನ ದಯದಿ ||ಆಗಮೈಕ ಸುವೇದ್ಯ ಭಕ್ತಿಯ | ಯೋಗ ಕೊಲಿಯುತ ಸಾಧಕಂಗೆಯೋಗಿ ಗುರು ಗೋವಿಂದ ವಿಠ್ಠಲ | ವೇಗತನ ದರ್ಶನವ ಪಾಲಿಪ 9
--------------
ಗುರುಗೋವಿಂದವಿಠಲರು
ಧ್ಯಾನಧಾರಣ ನಾಗಬೇಕಂತೆ ಪ್ರಪಂಚದೊಳಗೆ ದೀನ ನಾನಾದೊಡೆ ಮುಖ್ಯ ಸಾಕಂತೆ ಪ ಪ್ರಾಣ ಪಾನ ಸಮಾನ ವ್ಯಾನವು ದಾನ ಹೀಗೆಂದೆಂಬೊ ಪಂಚಕ ಜ್ಞಾನಗುರುಗಳು ತೋರಿಸಿದು ನಿಜ 1 ಆಗ ನೀನದು ಕಾಣಬಹುದಂತೇ ಆಧ್ಯಾತ್ಮ ಸತ್ಯವು ಯೋಗವೆ ನಿಜ ತಾಳಿಯಹುದಂತೆ ಬಾಗಿ ನಡೆವ ಅವಿಜ್ಞನಿಗೆ ಅದು ಮುದ್ರೆ ಸಮಾಧಿಹೊಂದುವ 2 ಸ್ಮರಣೆ ನಿಂತೊಡೆ ಧ್ಯಾನಸಾಕಂತೇ ಅಭಯ ಪ್ರಸಿದ್ಧವು ಕರಣ ನಿಗ್ರಹ ನಿನಗೆ ಬಹುದಂತೇ ಧರಣಿ ಮದ್ಗುರು ತುಲಸಿರಾಮರ ದಾಸರಪ್ಪಣೆ ಗುಳುಹಲಾತನ ಚರಣ ಸೇವೆಯೊಳಿರುತಿಹುದೆ ನಿಜಪರಮ ಪದವಿದು ಸತ್ಯನಿತ್ಯವು 3
--------------
ಚನ್ನಪಟ್ಟಣದ ಅಹೋಬಲದಾಸರು
ಧ್ಯಾನಿಸೋ ಮಾನವಾ ದೀನೋದ್ಧಾರಿ ವಿಜಯದಾಸರನಾ | ದೇವಮಾನಿತರು ಧೇನು ಸಮ ಪ. ಭೃಗುಮುನಿಯೆ ಈ ಜಗದಿ | ಸಂಜನಿಸಿ ಮದಪಾಲಿಸಿ ಘೋರ ಭವಕ್ಲೇಶ ಪರಿಹರಿಸಿ ಸುಖವಾ ಬೀರಿದಾ1 ಗುರುಪವನ ಶಾಸ್ತ್ರವ ಕನ್ನಡದಿ ವಿರಚಿಸಿ | ಜ್ಞಾನಪಥ ತೋರಿ ಶಿರಿವದನ ಮಹಿಮೆ ಸಾರಿದಾ2 ಶ್ರೀವರ ಶಾಮಸುಂದರನ ಸ್ತವಿಸಿ ಸಂಸೇವಿಸಿ | ಭಾವದಲಿ ನೋಡಿ ನಲಿದವರು ಕರುಣಾಶಾಲಿ 3
--------------
ಶಾಮಸುಂದರ ವಿಠಲ
ಧ್ರುವತಾಳ ಬಂದೆನ್ನ ಕಾಯೊ ಕರುಣದಿಂದ ಕೈಪಿಡಿದು ದೀನ ಬಂಧುವೆ | ಒಂದೂರು ಮಂದಿರಾರ್ಯ | ಸಂದೇಹವ್ಯಾಕೆ ನಿನ್ನ ಪೊಂದಿದ ಸತ್ಯಶಿಷ್ಯವೃಂದದೊಳಗೆ ನಾ ಕಡೆಯವನೋ ತಂದೆ ನೀನಗಲಿದಕೆ ನೊಂದೆನೊ ನಾ ಭವ ಬಂಧದೊಳಗೆ ಬಿದ್ದು ಬಹುವಿಧದಿ ನಮಗಿನ್ನು ಹಿಂದು ಮುಂದು ಮನಕೆ ನೀ ತಾರದಲೆ ಕಣ್ಣೆರೆದು ಈಕ್ಷಿಸಿ ಎನ್ನೊಳಿದ್ದ | ಮಂದಮತಿಯ ಬಿಡಿಸಿ ಮಧ್ವಶಾಸ್ತ್ರವ ತಿಳಿಸೋ | ಮಂದರಕುಜ ಭಕ್ತಸಂದೋಹಕೆ | ಹಿಂದೆ ವರದಾತನೆಂದೆನಿಸಿದ ಕರ್ಮಂದಿಗಳರಸರ ಕ್ಷೇತ್ರದಲ್ಲಿ | ಬಂದ ಸಮಯವೆನ್ನ ಬಿನ್ನಪ ಚಿತ್ತಕೆ | ತಂದು ತವಕದಿಂದ ಭೂಸುರರ ಸಂದಣಿಯಲ್ಲಿ ನಿನ್ನ ಮಹಿಮೆ ಪ್ರಕಟಿಸಿ ಇಂದುವಿನಂತೆ ಪೊಳೆದು ಮೆರೆದ ಕರುಣೀ ಅಂದಿನಾರಭ್ಯ ನೀನೆ ಸ್ವರೂಪೋದ್ಧಾರಕರ್ತನೆಂದು ದೃಢನಾಗಿ ನಂಬಿ ತ್ವತ್ವಾದಕೆ ವಂದಿಸಿ ಮೊರೆ ಇಡೆ ಇಂದು ನೀನು ನಮ್ಮ ಛಾತ್ರಮಾಲೆಯಲ್ಲಿ ಸಂದವನೆಂದು ಮನದಿ ಭಾವಿಸಿದೆವು | ಎನುತ ಛಂದದಿ ಸಿಂಧು ಪೋಲುವ ಕರುಣಿ ಸುಜ್ಞಾನ ಸದ್ಭಕ್ತಿ ಕುಂದದ ವೈರಾಗ್ಯ ಭಾಗ್ಯವ ಕೊಟ್ಟು ಧಾಮ ಶಾಮಸುಂದರವಿಠಲನ ಒಂದೇ ಮನದಿ ಭಜಿಪಾನಂದ ಭಾಗ್ಯವ ನೀಡೋ 1 ಮಟ್ಟತಾಳ ಅನುಪಮಸುಚರಿತ್ರ | ಅನುದಿನದಲಿ ಎನ್ನ ಅಣುಗನೆಂದರಿತೊಂದು ಕ್ಷಣವಗಲದೆ ಇದ್ದು ಬಿನುಗು ಬುದ್ಧಿಯ ಕಳದು | ಧನದಾಶೆಯ ಕಡಿದು ಮನದ ಚಂಚಲ ಬಿಡಿಸಿ | ಹನುಮ ಭೀಮಾನಂದ ಮುನಿಕೃತ ಪಾದವನಜ ಸೇವಿಪುದಕೆ ತನುವಿಗೆ ಬಲವಿತ್ತು ದಿನದಿನದಲಿ ನೆನೆಯುವ ಸಂಪದ ಗುಣನಿಧಿಯನುಗ್ರಹಿಸೋ 2 ತ್ರಿವಿಡತಾಳ ಭವ ಮೊದಲಾದ ಬುಧರು ಹರಿಯಾಜ್ಞೆಯಲಿ ಮದಡಾರುದ್ಧರಿಸಲು ಜಗದಿ ಬಂದು | ಸುಧೆಯಂತೆ ಸವಿಯಾದ ಮಧುರ ಕನ್ನಡದಲ್ಲಿ | ಮುದದಿ ರಚಿಸಿದಂಥ | ಪದಸುಳಾದಿಗಳಲ್ಲಿ ಹುದುಗಿದ ವೇದಾರ್ಥ ತ್ವತ್ವಾದಾಶ್ರಿತರಿಗೆ | ವಿಧ ವಿಧದಿಂದಲಿ ಬೋಧಿಸುತಾ | ವದಗಿದ ಅಜ್ಞಾನ ಸದೆದು ಸುಮತಿ ಕೊಟ್ಟು ಸದಾಚಾರ ಸಂಪನ್ನನೆನಿಸಿ | ಅವರ ಬದಿಗನು ನೀನಾಗಿ ಸುಕ್ಷೇಮ ಚಿಂತಿಸಿ | ಅಧಮರಿಂದಲಿ ಬಾಧೆ ಬಾರದಂತೆ ಸದಯನೆ ಸಲಹಿದ ಕಾರಣದಿಂದಲಿ | ವಿದಿತವಾಯಿತು ನಿನ್ನ ಮಹಿಮೆ ಮನಕೆ ಪದೆ ಪದೆ ಪ್ರಾರ್ಥಿಪೆ ಸದಮಲಗಾತ್ರನೆ ಅಧೋಗತಿ ತಪ್ಪಿಸಿ ಬಿಡದೆ ಒಲಿದು | ಯದುಕುಲೋದ್ಭವ ಪೊಳೆವಂತೆ ಕೃಪೆಮಾಡು 3 ಅಟ್ಟತಾಳ ಗುರುವರ ಶ್ರೀ ನರದ್ವಿರದಾರಿ ನಾಮಕ | ವರ್ಣಿಸಲಳವಲ್ಲ ನಿನ್ನುಪಕಾರವು | ಜ್ವರಬಹುಜನರಿಗೆ ಪರಿಹಾರ ಮಾಡಿದಿ ತುರಗ ಕಚ್ಚಿದ ಘಾಯ ತಕ್ಷಣ ಮಾಯಿಸಿದಿ | ಶರಣಗೆ ಬಂದಪಮೃತ್ಯು ಓಡಿಸಿದಿ | ಅರಿಯದರ್ಭಕಿ ಹೋಮಕುಂಡದಿ ಬೀಳೆ | ತ್ವರಿತಭಿಮಂತ್ರಿಸಿ | ಭಿಸ್ಮವಲೇಪಿಸಿ ಉರಿತಂಪುಗೈಸಿದಿ || ಪುರದವರ ಮೊರೆ ಕೇಳಿ ಮಾರಿಯ ಭಯ ಕಳೆದಿ | ತರುಳರು ದಕ್ಕದ ದೀನಕುಟುಂಬಕ್ಕೆ ಚಿರಕಾಲ ಬಾಳುವ ಸಂತಾನ ನೀಡಿದಿ | ಸ್ಮರದೂರ ನಿಮ್ಮಾಜ್ಞೆ ಮೀರದ ಕಿಂಕರನ ತರುಣಿಗೆ ಸೋಂಕಿದ ಭೂತವ ಬಿಡಿಸಿದಿ | ನೆರೆನಿನ್ನ ಪದವನುಸರಿಸೀದ ಸುಜನಕ್ಕೆ ವರಭಾಗವತಶಾಸ್ತ್ರ ಅರುಹೀದಿ ಸಲುಹೀದಿ | ಹರಿಕಥಾಮೃತಸಾರವ ಸಾರೀದಿ | ತರತಮದ ಭೇದಜ್ಞಾನವ ಬೀರಿದಿ | ವರದಾಯಕ ಸತ್ಯದೇವನ ಪಾವನ ಚರಿತೆ ವಿಚಿತ್ರವಾಗಿ ಪರಿಪರಿ ಪೇಳುತ್ತ ಪೊರೆದೆ ನಿನ್ನವರನ್ನು ಧರೆ ಋಣ ತೀರಿದ ಕುರುಹು ಅರಿತು ಒಬ್ಬರಿಗೆ ಸೂಚಿಸದೆ ಪರಲೋಕಯಾತ್ರೆಗೆ ತೆರಳಿದದಕೆ ನಿನ್ನ ಪರಿವಾರದ ನಾವೆಲ್ಲರೂ ನಿತ್ಯಸಿರಿಯ ಕಳೆದುಕೊಂಡ ಲೋಭಿಗಳಂದದಿ ಶರಧಿ ಕಾಯ ತೊರೆದರೇನಾಯಿತು ಮರೆಯಾದೆ ಗೋವತ್ಸನ್ಯಾಯದಂತೆ ನೀ ದರುಶನ ಸ್ವಪ್ನದಿಗರೆದು ಸಂತೈಸುತ ನಿರಯಕೆ ನಮ್ಮನು ಗುರಿಮಾಡದೆ ಪೊರೆ ತರುಳಗೊಲಿದ ಶಾಮಸುಂದರವಿಠಲ ಸರಸಿಜಾಂಘ್ರಿಯುಗ್ಮ ಮಧುಪನೆಂದೆನಿಸಿ 4 ಆದಿತಾಳ ಭೂಮಿ ವಿಬುಧವರ ರಾಮವಿಠಲಾರ್ಯರ ಶ್ರೀ ಮುಖದಿಂದ ಸಕಲಶಾಸ್ತ್ರಮನನಮಾಡಿ | ಶ್ರೀಮತ್ಸು ಶೀಲೇಂದ್ರಸ್ವಾಮಿಗಳಿಂದಲಿ ನೀ ಮಾನಿತನಾಗಿ ಕಾಮಿತಫಲಪ್ರದ ರಾಯರ ದಯಪಡೆದು ಕಾಮಾದಿ ಷಡ್ರಿಪುವರ್ಗ ಜಯಿಸುತಲಿ | ನೇಮನಿಷ್ಟೆಯಲಿ ಜಪತಪಾಚರಿಸುತ ಹೇಮರಜತಧನ ತೃಣಸಮಾನೆನಿಸುತ ಸಾಮಜವರದನ ಕಳೆಯದೆ ಪಾಮರ ಜನರನು ಪ್ರೇಮದಿಂದದ್ಧರಿಸಿ | ಸಾಮಗಾನಪ್ರೇಮ ಶಾಮಸುಂದರನ ಧಾಮವ ಸೇರಿದ ಹೇ ಮಹಾಮಹಿಮನೆ 5 ಜತೆ ನಿನ್ನೊಡೆಯನ ದ್ವಾರಾ ಶ್ರೀ ಶಾಮಸುಂದರನ ಎನ್ನಂತರಂಗದಿ ನೋಳ್ವಂತೆ ಕರುಣಿಸೋ ||
--------------
ಶಾಮಸುಂದರ ವಿಠಲ
ನಗ ಯುಗ್ಮ ಫಣಿ ವೀರ ನಟನನೆ 1 ನೀರಜ ರುಚಿ ನಿರ್ಜರ ಕುಲ ಪರಿವಾರನೆ | ನಿಖಿಲಾಧಾರನೆ ನಿಗಮೋದ್ಧಾರನೆ ನಂದ ಸದಾ ರುಕ್ಮಜನೆ 2
--------------
ರುಕ್ಮಾಂಗದರು
ನಡೆದು ಬಾರಯ್ಯ ಕೃಷ್ಣ ನಡೆದು ಪ ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗ ರಕ್ಷಿಸುವಾತನೆಂದು ವಕ್ಷಸ್ಥಳದಿ ಶ್ರೀಮಾ- ರೀಕ್ಷಕನುಳುಹಿದಂತಕ್ಷದಿ ನೋಡುತಧೋಕ್ಷಜ ಹರಿಯೆ 1 ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ- ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿ ಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನ ಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನ ಕರಿ ಸರ್ವೋತ್ತಮ ಹರಿಯೆ 2 ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊ ಶೂರ ಸುತಗೆ ಸುಕುಮಾರನೆನಿಸಿದಂಥ ಅ- ಸಮೀರಜ ಭವ ಸುರ ನಾರದಪ್ರಿಯನೆ ಉದ್ಧಾರಮಾಡು ಎನ್ನನು 3 ಧ್ವಜ ವಜ್ರಾಂಕುಶ ಪಾದಭಜಕರೆನಿಸುವಂಥ ಸುಜನರ್ವಂದಿತನಾದ ಕುಜನ ಕುಠಾರಿಯೆ ನೀ ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ ನಿಜವಾಗಿ ನೋಡೆನ್ನ ರಜತಮ ಕಳೆಯುವ 4 ಕಡಲಶಯನನಾದ ಉಡುರಾಜ್ವದನ ಬಿಟ್ಟು ಭಿಡಿಯ ಭೀಮೇಶ ಕೃಷ್ಣ್ನೆನ್ನೊಡೆಯನೆನುತ ಬಂದ ಬಡವ ಸುದಾಮಗಿಟ್ಟಿ ಹಿಡಿ ಹಿಡೀ ಎಂದು ಭಾಗ್ಯ ತಡೆಯದೆ ನಾ ನಿನ್ನಡಿಗಳಿಗೆರಗುವೆ ಕೊಡು ಕೊಡು ವರಗಳ ಪೊಡವಿ ಪಾಲಿಪನೆ 5
--------------
ಹರಪನಹಳ್ಳಿಭೀಮವ್ವ
ನದಿಗಳು ಭಾಗೀರಥ್ಯಾದಿ ನದಿಗಳ ತಾರತಮ್ಯ ನಿಜ ಭಾಗವತ ತಿಲಕ ನಿಮಿರಾಜಗೊಲಿದು ವಸಿಷ್ಠ ರಾಗದಲಿ ಕೇಳಿ ಜನರಯ್ಯಾ ಪ ಒಂದು ದಿನ ಗೋದಾವರಿಯ ತಟದಿ ನಿಮಿರಾಜ ಸಂದು ಯಜ್ಞವ ಮಾಡುತಿರಲಾಗ ಪರಮೇಷ್ಠಿ ನಂದನೆನಿಪ ವಶಿಷ್ಠ ಮಹಮುನಿ ನಡೆತಂದ ಮೇಧಾಗಾರಕೆ ಬಂದ ಯತಿವರನ ಮಣಿಪೀಠದಲಿ ಕುಳ್ಳಿರಿಸಿ ಸುಂದರಾಧಿಪ ಬೆಸಸಿದಾ 1 ವ್ರತಿಪತಿ ವಶಿಷ್ಠ ವೈಷ್ಣವಕುಲ ಶಿರೋರತುನ ಶ್ರುತಿಶಾಸ್ತ್ರ ಸರ್ವಜ್ಞ ಗಂಗಾದಿ ಪುಣ್ಯತೀ ಮತ್ಪಿತನೆನುತ ಪದಕೆರಗುವಾ ಕ್ಷಿತಿಪನೋಕ್ತಿಯ ಕೇಳುತಾನಂದ ಶರಧಿಯೊಳು ಗತನಾಗಿ ರೋಮ ಲಕ್ಷಣ ಕಳೇವರದಿ ಪುಳ ನೃಪತಿಗಿಂತೆಂದನು 2 ಕೇಳು ಜನನಾಥ ಮಹಭಾಗ ನಿನ್ನಯ ಪ್ರಶ್ನ ದೇಳಿಗೆಗೆ ಎನ್ನ ಸಂತೋಷ ಕಲ್ಪತರು ತ ಶಿಷ್ಯರೊಳು ಮೌಳಿಮಣಿ ನೀನಹುದು ನಿಖಿಳ ನದಿಗೊಳಿಪ್ಪ ಶ್ರೀಲೋಲನ ಸುಮೂರ್ತಿಗಳು ತಾರÀತಮ್ಯ ಸುವಿ ಮಾನವ ಇದನಾಲಿಪುದು ನೀನೆಂದನು 3 ಹರಿಪಾದನಖದ ಸಂಸ್ಪರ್ಶ ಮಾತ್ರದಿಂದಲಿ ಸುರತರಂಗಿಣಿ ಶ್ರೇಷ್ಠಳೆನಿಸುವಳು ನದಿಗಳೊಳು ದೊರೆಮೆನಿಪನಾ ತೀರ್ಥಕೆ ಸರಿತಾಗಗಣ್ಯ ಗೋದಾವರಿ ನಳಿನಿಗಿಂ ಕೊರತೆಯೆನಿಪಳೈ ವತ್ತು ಗುಣದಲಿ ಶಂಖ ಚರಣ ಸುಗದಾಬ್ಜ ಶೋಭಿತ ವೀರನಾರಾಯಣ- ರಸೆನಿಪನಾ ಸಲಿಲಕೆ 4 ಹರಜಟೋದ್ಭವ ಕುಶಾವರ್ತಿಗೆ ಸಹಸ್ರಗುಣ ಚಾರು ಕಂ ಬುರಲಿ ವಾರುಚಿ ಧನುರ್ಧಾರಿ ಯಮನಂದನಲಿ ವಿಹರಿಸುತಿಹನಾಜಲದೊಳು ತುರುಗಾಯ್ದ ದೇವನಂಗಜ ನದಿಗೆ ಈರೈದು ವಾಗ್ದೇವಿ ಶರಧಿಯೊಳು ಪು ಗೋದ ರಂಗನಾಥನೆನಿಪ 5 ಆ ಯಮಳನದಿಗಳಿಗೆರಡು ಗುಣಾಧಮ ಸರಯು ತೋಯಾಧಿಪತಿ ರಾಮ ಸರಯು ನೀರೆಂದು ಗುಣ ವಿಹಾಯ ಸಮಮಣಿತನಯಳೆ ಸ್ಥಾಯಕೆ ಚತುರ್ಬಾಹು ವಿಷ್ಣು ಕಾವೇರಿಗೆ ನಾಯಕ ವರಾಹದೇವಾ6 ಸಿಂಧು ಭವನಾಶಿಗೀರ್ವರು ಸಮರು ಕ್ಷೀರಾಬ್ಧಿ ಮಂದಿರ ನೃಸಿಂಹರಲ್ಲಿಹರು ಭವನಾಶನಿಗೆ ತಂದೆಯೆನಿಪ ತ್ರಿವಿಕ್ರಮ ಒಂದೆನಿಸುವುವು ನಾಲ್ಕು ನದಿಗಳು ಗುಣಗಳಿಂದ ಮುಂದಿಹ ಪದದಿ ಪೇಳ್ವೆ ಪೆಸರು ಹರಿರೂಪ ನೆಲ ತಮ್ಮಿಂದೀರಗಿಂತೆಂದನೂ 7 ವಾಜಿವದನು ಮಂಝರಾನದಿಯೊಳಿಹನು ನವ ರಾಜೀವನಯನ ಶ್ರೀಧರ ಭೀಮರಥಿಯೊಳಿಹ ವಿರಾಜಿಪ ಮಲಾಪಹಾರಿ ಭಾಜನದೊಳಿಪ್ಪ ದುಷ್ಟ ಜನರನು ಮರ್ದಿಸುವ ಶ್ರೀ ಜನಾರ್ದನ ನಾಲ್ಕು ನದಿಗಳು ದ್ವಿಗುಣದಿಂದಾ ನಿತ್ಯ ನೈಜಭಕ್ತಿ ಜ್ಞಾನದಿ 8 ಭೀಮರಥಿ ಸಮ ಪಿನಾಕಿನಿಯೊಳಗೆ ಕೇಶವನು ಭೂಮಿಯೊಳು ಪೃಥಕು ಪೃಥಕು ಸುಖ ಜ್ಞಾನದಿ ಶ್ರೀ ಮನೋರಮ ಕೇಶವಾದಿ ರೂಪಗಳಿಂದ ಸ್ವಾಮಿಯೆನಿಸುವನಲ್ಲ ಸ್ನಾನಾದಿ ಸತ್ಕರ್ಮ ಮೋಕ್ಷ ಗಳೀವನೊ 9 ಈ ನದಿಗಳೆರಡು ಗುಣ ಪುಷ್ಕರಣಿನಿಚಯ ನ್ಯೂನವೆನಿಪವು ಮುಕ್ತಿ ದತ್ತಾತ್ರಯನು ಕೃಷ್ಣ ಮಾನಸ ಸರೋವರದೊಳು ಜ್ಞಾನಾತ್ಮ ವಾಮನನ ಶ್ರೀ ಭೂ ಸಹಿತ ಪ್ರಸ ನ್ನಾನನಾಬ್ಜದಿದರೆ ಜಘನಸ್ಥಿತಾಭಯ ಸು ಧೇನಿಪುದು ಎಂದಾ 10 ದೇವಖಾತಗಳು ಶತಗುಣಕಡಿಮೆ ಮಾನಸ ಸ ರೋವರಕೆ ಇತರ ಪುಷ್ಕರಣಿಗಳಿಗಲ್ಪಗುಣ ಪಾವನವಗೈವ ಕ್ಷುದ್ರಾ ಪ್ರಾವಹಿಗಳೀರೈದು ಗುಣದಿ ಕಡಿಮೆ ಲಕ್ಷ್ಮೀ ದೇವಿಪತಿ ನಾರಾಯಣನ ಚಿಂತಿಸೆಂದು ನೃಪ ಭವನೋವ ಪರಿಹರಿಪುದೆಂದು 11 ಈ ಸಲಿಲತೀರ್ಥಂಗಳೆರಡು ಗುಣದಿ ತಟಾಕ ಶೇಷಪರ್ಯಂಕ ಅಚ್ಯುತನಿಹನು ಸಜ್ಜನರ ವಾಸವಾಗಿಹನು ಚಕ್ರಿ ಘೋಷಗೈವ ಧರಾಂತಕೂಪಗಳೊಳಿರುತಿಹ ನಾ ಕೇಶನದಿಗಳ ತಾರÀತಮ್ಯ ರೂಪಗಳನುಪ ಪಾಸನಗೈವುದೆದೆಂದು 12 ಈ ತೆರದಿ ನಿಮಿರಾಜಗೋಸುಗ ವಶಿಷ್ಠಮುನಿ ತಾ ತಿಳಿದ ಕಥಾತಿಶಯ ಪರಮ ವಿಬುಧರು ಧ ಪ್ರೀತಿಯಿಂದಾಚರಿಸಲು ಶೀತಾಂಶು ಕಮಲಾಪ್ತರುಳ್ಳನಕ ಸುರಪತಿ ನಿ ಕೇತನದಿ ವಿವಿಧ ಭೋಗಗಳಿತ್ತು ಶ್ರೀ ಜಗ ಸಂಪ್ರೀತಿಯಿಂದನುರಾಗದೀ 13
--------------
ಜಗನ್ನಾಥದಾಸರು
ನಂದಿವಾಹನ ಸಖನೆ ಯೆಂದಿಗೆ ನೋಡುವೆ ನಿನ್ನಾ ಪ ಅರಿಗೆನಿನ್ನಾಚಾರ್ಯರಪ್ಪಣೆ ಹೊಂದಿಸುಖಿಸುತಿರುವೆನೊನಂದಿ ಅ.ಪ ರಂಗನಾಯಕನೆ ಬಾರೊ ರಾಕ್ಷಸಾಂತಕನಲ್ಲವೆ ಮಂಗಳಾಂಗ ಮಾತನಾಡೊ ಮಾಯಧಾರಿ ಕೇಶವ 1 ಸಾಟಿಯೇನಹುದೊ ಹರಿ ಸಾಧು ಶಿಖರನಲ್ಲವೆ ಆಟವಾಡುವ ಬಾಲನನ್ನು ಕರುಣದಿ ಕಾಯಲಿಲ್ಲವೆ2 ಕೋಲುಪ್ಯಾಟಿಯೊಳು ನಿನ್ನ ಕೋರಿ ಕೊಸರಿ ಕೂಗುವೆ ಮೂಲಗುರುವು ತುಲಶಿರಾಮಾ ದಾಸರ ಸೇವಕನಾಗುವೆ ಹರಿದಾಸರ ಸೇವಕನಾಗುವೇ 3
--------------
ಚನ್ನಪಟ್ಟಣದ ಅಹೋಬಲದಾಸರು
ನಂಬಬೇಕು ಹರಿಯ ನಾಮಾ ಪ ನಾಮವೇ ಸ್ನಾನವು ನಾಮವೇ ಸಂಧ್ಯಾನವು| ನಾಮವೇ ಜಪ ತಪ ನಾಮವೇ ಖೂನವು| ನಾಮವೇ ಜ್ಞಾನಾ ನಾಮವೇ ಧ್ಯಾನಾ| ನಾಮವೇ ಧಾರಣ ನಾಮ ನಿಧಾನಾ 1 ಕಾನನ ಮಾರ್ಗದಿ| ಗುಣದ ಪಶುಪರಿ ಕಾಣದೇ ತಿರುಗುವಿ| ಏನು ಪಲವೋ ಮತಿ ಹೀನ ಗುರು| ಜ್ಞಾನದ ಮನಿ ನಿಧಾನದಿ ಕೇಳು2 ಪೋಡವಿಲಿ ಗಂಗೆಯ ತಡಿಯೋಳು ಕುಳಿತಿರೆ| ಕುಡಿಯಲು ಜಲವನು ಹುಡುಕುವ ಭಾವಿಯ| ನಡತಿದು ಛಂದವೆ ಬಿಡು ಬಿಡು ಸಂಶಯ| ಹಿಡಿಗುರು ಮಹಿಪತಿ ಒಡಿಯನ ಬೋಧಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ- ರಂಭಸೂತ್ರಳೆ ಇಂಬುದೋರಿನ್ನು ಪ. ಅಂಬುಜಾಂಬಕಿ ಶುಂಭಮರ್ದಿನಿ ಕಂಬುಗ್ರೀವೆ ಹೇರಂಬ ಜನನಿ ಶೋ- ಣಾಂಬರಾವೃತೆ ಶಂಭುಪ್ರಿಯೆ ದಯಾ- ಲಂಬೆ ಸುರನಿಕುರುಂಬಸನ್ನುತೆ ಅ.ಪ. ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ- ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ- ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ- ಗಾರೆ ರಿಪುಸಂಹಾರೆ ತುಂಬುರು ನಾರದಾದಿಮುನೀಂದ್ರ ನುತಚರ- ಸೂರಿಜನ ಸುಮನೋರಥಪ್ರದೆ 1 ವಿಶಾಲಸುಗುಣಯುತೆ ಮುನಿಜನ- ಲೋಲತರುಣಮರಾಳೆ ಸಚ್ಚರಿತೆ ನವಮಣಿ ಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ- ಬಾಲೆ ನೀಲತಮಾಲವರ್ಣೆ ಕ- ರಾಳಸುರಗಿ ಕಪಾಲಧರೆ ಸುಜ- ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ2 ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ- ಪರಾಕು ಶರಣಜನೈಕಹಿತದಾತೆ ಸುರನರ- ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ- ವಾಕುಕಾಯದಿಂದ ಗೈದಾ ನೇಕ ದುರಿತವ ದೂರಗೈದು ರ- ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ3 ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ- ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ- ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ- ಲ್ಲಾಸೆ ಯೋಗೀಶಾಶಯಸ್ಥಿತೆ ವಾಸವಾರ್ಚಿತೆ ಶ್ರೀಸರಸ್ವತಿ ದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ4 ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ- ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ- ವಾಮಭಾಗ ಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯ ಶ್ರೀಮಹಾಲಕ್ಷ್ಮಿ ನಾರಾಯಣಿ ರಾಮನಾಮಾಸಕ್ತೆ ಕವಿಜನ- ಸೋಮಶೇಖರಿ5
--------------
ತುಪಾಕಿ ವೆಂಕಟರಮಣಾಚಾರ್ಯ
ನಂಬಿದೆನೊ ರಂಗ ಗೋವಿಂದ ರಂಗ ಪ. ಇಳೆಸೃಷ್ಟಿಗಾಧಾರನೆಂಬ ಬಿರುದುಳ್ಳಡೆ ಜಗನ್ಮಯನೆ ಚಿನ್ಮಯರೂಪ ರಂಗ ನೀನಾದ್ಯಯ್ಯ ರಂಗ 1 ಸುಜನಮಂದಾರ ಸರಸಿಜಭವಪಿತ ನಿನ್ನ ಪ್ರಜೆಗಳು ಪೊಗಳುತ್ತಿಹರೆ ರಂಗ ಮುರಹರನೆ ರಂಗ 2 ಸುಜನರೊಳಗೆನ್ನ ಕುಹಕವ ಮಾಡದೆ ನಿನ್ನ ಭಜಕನೆಂದಿರಲಾಗಿ ರಂಗ ಭುಜಗೇಂದ್ರಶಯನ ಶ್ರೀರಂಗ 3 ಧಾತ್ರಿಗಾಧಾರ ಅನಾಥರಕ್ಷಕನೆ ದಯವ್ಯಾತಕೆನ್ನೊಳಿಲ್ಲ ರಂಗ ಕಡೆಹಾಯಿಸೊ ರಂಗ 4 ನೋಡೆ ಶ್ರೀ ಹರಿಯೆ ನೀನಲ್ಲದನ್ಯತ್ರ ದಾತ್ರರಿಲ್ಲವೊ ರಂಗ ಮಹಿಮ ಶ್ರೀರಂಗ 5 ಕೋಪವನು ಬಿಡು ಎನ್ನ ಕುಂದನೆಣಿಸದಿರಯ್ಯ ಆಪತ್ಬಂಧು ಶ್ರೀರಂಗ ಸಲಹಯ್ಯ ರಂಗ 6
--------------
ಹೆಳವನಕಟ್ಟೆ ಗಿರಿಯಮ್ಮ
ನಂಬಿದೇ ಗುರುವರಾ ನಂಬಿದೇಪ ನಂಬಿದೆ ಗುರುಸಾರ್ವಭೌಮಾ ತುಂಟುಮನದೊಳು ಹರಿಭಕ್ತಿ ನಿಸ್ಸೀಮಆಹಾ ಅಂಬುಜೋದ್ಭವಪಿತನ ಕಂಭದಿ ತೋರಿದ ಶಂಬರ ಕುಲದೀಪ ಪ್ರಹ್ಲಾದ ವ್ಯಾಸಮುನಿಯೇ ಅ.ಪ. ದಾಸನೆಂದಡಿಗೆ ಬಿದ್ದೆನೋ ಈಗ ದೋಷ ನಾಶಮಾಡೋ ಎನಗೆ ಬೇಗ ಆಹಾ ವಾಸುಕಿಶಯನನ ಬ್ಯಾಸರದೆ ಸ್ತುತಿಸಿ ಈಶನ ಸರ್ವತ್ರವ್ಯಾಪ್ತಿಯನರುಹಿದ ಭೂಪ 1 ಪಾತಕರೊಳಗೆ ಅಗ್ರೇಸರನಾನು ಪೂತಮಾಡುವರೊಳಗೆ ನಿಸ್ಸೀಮ ನೀನು ಆಹಾ ತಾತನಪ್ಪಣೆಯಂತೆ ವ್ಯಾಸರಾಜಾಎನಿಸಿ ಖ್ಯಾತಿಯಿಂದಲಿ ತರ್ಕತಾಂಡವರಚಿಸಿ ಮೆರೆದೇ 2 ತಾಪಸಶ್ರೇಷ್ಠ ಬ್ರಹ್ಮಣ್ಯಕುವರನಾದೆ ಗೋಪಾಲಕೃಷ್ಣನ್ನ ಕುಣಿಕುಣಿದಾಡಿಸಿ ಭೂಪನ ಕುಹಯೋಗ ಕಳೆದ ಯತಿಕುಲತಿಲಕ 3 ಮಧ್ವಶಾಸ್ತ್ರಗಳ ಮಂದರರಿಯದಿರಲು ಮುದದಿಂದ ಪದಸುಳಾದಿಗಳ ರಚಿಸಿದೆ ನೀನು ಆಹಾ ಆದರದಿಂದಲಿ ಪುರಂದರಕನಕರಿಗೆ ಸದುಪದೇಶವ ಕೊಟ್ಟು ಜಗದುದ್ಧಾರಮಾಡಿದ ಪ್ರಭುವೇ 4 ಮತ್ತೆ ಪುಟ್ಟಿದೆ ವೆಂಕಣ್ಣಭಟ್ಟ ನೆಂದೆನಿಸೀ ಮತ್ತ ಕೇಸರಿಯಂತೆ ಮಧ್ವಶಾಸ್ತ್ರದಿ ಮೆರೆದೇ ಆಹಾ ಕತ್ತಲೆ ಅದ್ವೈತವಾದಗಳಿಗೆಲ್ಲಾ ಕತ್ತಿಎನಿಸಿದ ಪರಿಮಳಾಚಾರ್ಯ ಗುರುವೇ 5 ವಿಪ್ರನು ದಿಟ್ಟತನದಿ ನಿನ್ನ ಗಂಧವ ತೇದುಕೊಡುಎನೆ ಕ್ಷಿಪ್ರದಿ ತೋರಿದೆ ನಿನ್ನ ಮಹಿಮೆಯಜಗಕೇ ಆಹಾ ಅಪ್ಪ ಶ್ರೀರಾಮರ ಪೂಜಿಸಬೇಕೆಂದು ಒಪ್ಪಿಸನ್ಯಾಸವ ರಾಘವೇಂದ್ರನಾದ 6 ಮುದದಿ ದೇಶ ದೇಶವ ಚರಿಸಿದೇ ಸಮಯದಿ ಸುಜನರಕ್ಲೇಶಗಳಳಿದೇ ಆಹಾ ಮೋದಮುನಿಯ ಗ್ರಂಥಗಳಿಗೆಲ್ಲ ಟಿಪ್ಪಣಿ ಮಾಡುತ ಬುಧರಿಗೆ ತತ್ವ ಕನ್ನಡಿ ತೋರ್ದ ಗುಣಗಣನಿಧಿಯೇ7 ಪರಿಪರಿ ಮಹಿಮೆಯ ತೋರುವ ಗುರುವೇ ಸುರತರು ಅಂದದಿ ಹರಕೆ ಗಳೀವೆ ಪ್ರಭುವೇ ಆಹಾ ಮೂರೆರಡು ಒಂದುನೂರು ವರುಷ ಪರಿಯಂತ ಸಾರಿಸಾರಿದವರ ಪೊರೆದು ಮೆರೆಯುವ ದಿವಿಜವಂದಿತ ಗುರು8 ದಯದಿಂದ ನೋಡೆನ್ನ ದೀನೋದ್ಧಾರ ಭವ ಬಿಡಿಸು ಕರುಣಾಸಾರ ಆಹಾ ಜಯತೀರ್ಥವಾಯ್ವಂತರ್ಗತ ಶ್ರೀಕೃಷ್ಣ ವಿಠಲನ ಹೃ- ದಯಮಂದಿರದಿ ತೋರೆನಗೆ ಗುರುಸಾರ್ವಭೌಮ 9
--------------
ಕೃಷ್ಣವಿಠಲದಾಸರು