ಒಟ್ಟು 10968 ಕಡೆಗಳಲ್ಲಿ , 138 ದಾಸರು , 6102 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಪರಿಯ ಅಧಿಕಾರ ಒಲ್ಲೆ ನಾನು |ಶ್ರೀಪತಿಯೆ ನೀನೊಲಿದು ಏನ ಕೊಟ್ಟುದೆ ಸಾಕು ಪಚಿರಕಾಲ ನಿನ್ನ ಕಾಯ್ದು ತಿರುಗಿದುದಕೆ ನಾನು |ಕರುಣದಲಿ ರಚಿಸಿ ನೀ ಈ ದುರ್ಗದಿ ||ಇರ ಹೇಳಿದುದಕೆ ನಾ ಹೊಕ್ಕು ನೋಡಿದೆ ಒಳಗೆ |ಹುರುಳ ಲೇಶವು ಕಾಣೆ ಕರಕರೆಯು ಬಲುನೋಡು 1ದಾರಿಯಲಿ ಹೋಗಿ ಬರುವವರಉಪಟಳಘನ|ಚೋರರಟ್ಟುಳಿಗಂತೂ ನೆಲೆಯೆ ಇಲ್ಲ ||ವೈರಿವರ್ಗದ ಜನರು ಒಳಗೆ ಬಲು ತುಂಬಿಹರು |ಮಿರಿ ನಿನ್ನಲಿ ಮನವನೂರಿ ನಿಲಗೊಡರು 2ಸರಿಬಂದ ವ್ಯಾಪಾರ ಮಾಡಿ ತಾವೆನ್ನನ್ನು |ಬರಿಯ ಲೆಕ್ಕಕೆ ಮಾತ್ರ ಗುರಿಯ ಮಾಡಿ ||ಕರಕರೆಯ ಬಡಿಸಬೇಕೆಂದು ಯೋಚಿಸುತಿಹರು |ಕರೆದು ವಿಚಾರಿಸಿ ನ್ಯಾಯ ಮಾಡಿಸು ದೊರೆಯೇ 3ನಾಮಾಂಕಿತಕೆ ಮಾತ್ರ ಅಧಿಕಾರವೆನಗಿತ್ತೆ |ಸ್ವಾಮಿತ್ವವೋನೋಡುಮನೆಮನೆಯಲಿ ||ಭೀಮ ವಿಕ್ರಮರವರು ದುರ್ಬಲಾಗ್ರಣಿ ನಾನು |ಗ್ರಾಮ ಒಪ್ಪಿಸೆ ನಮಿಪೆ ಸಂಬಂದ ತೆರಮಾಡು 4ಕಾಲಕ್ಕೆ ಕರೆಯ ಬಂದವರಿಗೆ ಒಳಗಾಗಿ |ಪಾಳೆಯವನೊಪ್ಪಿಸಿ ಕೊಡುವೆವೆಂದು ||ಆಲೋಚಿಸಿಹರಯ್ಯ ಈಗಲೆನಗೆ ನಿನ್ನ |ಆಳುಗಳ ಬಲಮಾಡಿ ಎನ್ನ ರಕ್ಷಿಸು ದೊರೆಯೆ 5ಕ್ಷಣಕೆ ನೂರುಪಟಳ ಈ ಕೋಟೆಗೆಲೊ ರಾಯ |ಅನುವಾದ ದಿವಸವೊಂದಾದರಿಲ್ಲ ||ಮೊನೆಗಾರ ಜನವಿಲ್ಲ ಇದ್ದವರು ವಶವಿಲ್ಲ |ಕೊನೆಗೊಂಡು ಗ್ರಾಮ ಕಾಪಾಡುವ ತೆರನೆಂತೊ 6ಎನಗೆ ಈ ಬಹುನಾಯಕರ ಕೊಂಪೆಯೊಳು ವಾಸ-|ವನು ಬಿಡಿಸಿ ನಿನ್ನ ನಿಜ ಪಟ್ಟಣದೊಳು ||ಮನೆ ಮಾಡಿಕೊಡಲು ನಾನಿನ್ನ ನೋಡಿಕೊಳುತ |ಅನುಗಾಲಬದುಕುವೆನೊ ಪುರಂದರವಿಠಲ7
--------------
ಪುರಂದರದಾಸರು
ಈ ಪರಿಯ ಸೊಬಗಾವ ದೇವರಲಿ ನಾ ಕಾಣೆಪಾವನತ್ವದಿ ನೋಡೆ ಅಮರಗಂಗಾಜನಕಗಗನದಲಿ ಸಂಚರಿಪ ಗರುಡದೇವನೆತುರಗ
--------------
ಪುರಂದರದಾಸರು
ಈ ವಸುಧೆಯೊಳೆಲ್ಲರಿಗಿಂತ ಕೃಷ್ಣನು ಆವುದರಿಂದಧಿಕಾ ಪವಾರಿಧಿಮನೆಯಲ್ಲೆ ಈಗಿನರಸರಿಗೆ |ನೀರೊಳಗೇಸೊಂದು ಊರಿಲ್ಲವೇ ||ಶಾಙ್ರ್ಗ ಧನುವಾದರೇನು ದುರ್ಲಭವಲ್ಲ |ಧಾರಿಣಿಯೊಳು ಮನೆ ಮನೆಯಲ್ಲಿ ಕಾರ್ಮುಖವು 1ಲೇಸೇನು ಕೌಸ್ತುಭವೊಂದೆಯೇ ಮಣಿಗಳು |ಏಸೊಂದಿಲ್ಲದೆ ಭಾಗ್ಯವಂತರಲ್ಲಿ ||ಶೇಷನ ಹಾಸಿಗೆ ಹಾವಾಡಿಸಿ ಹೊಟ್ಟೆ |ಪೋಷಿಸಿಕೊಳ್ಳರೆ ಗಾರುಡಿಗರೆಲ್ಲ 2ಪೀತಾಂಬರಂತು ಎಲ್ಲರಿಗಿಹದು ದೊಡ್ಡ |ಮಾತಲ್ಲ ವನಮಾಲೆವೈಜಯಂತಿ||ಖ್ಯಾತಿಗೆ ಶಂಖಚಕ್ರವು ಹೇಳಿಕೊಳ್ಳಲು |ಜಾತಿಕಾರಗಿಲ್ಲೇ ಬಡಿವಾರವೇತಕೆ3ಶ್ರೀವತ್ಸ ಶ್ರೀವತ್ಸವೆಂಬರು ಮಂದೆಲ್ಲ |ಆವ ಹುಣ್ಣಿನ ಕಲೆಯಾಗಿಹದೋ ||ಆವಾನಿ ಹಯರಥ ಮುದಿಹದ್ದುಯೇರುವ |ಕೋವಿದರೆಲ್ಲೇನು ನೋಡಿ ವಂದಿಸುವರೋ 4ವೈಕುಂಠ ಮೊದಲಾದ ಮೂರೇ ಊರವನಿಗೆ |ಲೋಕದೊಳರಸರಿಗೇಸೋ ವೂರು ||ಶ್ರೀಕಾಂತ ಪ್ರಾಣೇಶ ವಿಠಲನ ಸಂಗ |ಬೇಕೆಂದು ಬಯಸುವರೆಲ್ಲರೂ ತಿಳಿಯದೆ 5
--------------
ಪ್ರಾಣೇಶದಾಸರು
ಈ ಶರೀರದ ಭ್ರಾಂತಿ ಇನ್ನೇಕೆ ಮನವೆ |ವಾಸುದೇವನ ನೆನೆದು ಸುಖಿಯಾಗು ಮನವೆ ಪ.ಕಾಲು ಜವಗುಂದಿದುವು ದೃಷ್ಟಿಗಳು ಹಿಂಗಿದುವು |ಮೇಲೆ ಜವ್ವನ ಹೋಗಿ ಜರೆಯಾದಗಿತು ||ಕಾಲ - ಕರ್ಮಾದಿಗಳು ಕೂಡಿದಾಕ್ಷಣದಲಿ |ಬೀಳುವೀ ತನುವಿನೊಳ್ ಇನ್ನಾಸೆಯ ಮನವೆ 1ದಂತಗಳು ಸಡಿಲಿದುವು ಧಾತುಗಳು ಕುಂದಿದುವು |ಕಾಂತೆಯರುಜರಿದು ಓಕರಿಸುವರು ||ಭ್ರಾಂತಿ ಇನ್ನೇಕೆ ಈ ತನುವು ಬೀಳದ ಮುನ್ನ |ಸಂತತ ಶ್ರೀ ಹರಿಯ ನೆನೆ ಕಾಣೊ ಮನವೆ 2ನೀರಬೊಬ್ಬುಳಿಯಂತೆ ನಿತ್ಯವಲ್ಲ ಈ ದೇಹ |ಸಾರುತಿದೆ ನೀ ಮೆಚ್ಚಿ ಮರುಳಾಗದೆ ||ಶ್ರೀರಮಣ ಪುರಂದರವಿಠಲನ ನೆನೆ ನೆನೆದು |ಸೂರೆಗೊಳ್ಳಿರೊ ಸ್ವರ್ಗ ಸುಮ್ಮನಿರಬೇಡಿ 3
--------------
ಪುರಂದರದಾಸರು
ಈ ಸಮಯಕಲ್ಲದಿನ್ನೆಲ್ಲಿ ಕಾಯೊದೋಷರಹಿತ ವಸುದೇವ ನೀ ಕಾಯೊ ಕೃಷ್ಣ ಪನಿನ್ನಂಘ್ರಿಯನು ಭಜಿಸಿದವರ ಬಾಳ್ವೆಯ ಕಾಯೊ |ಎನ್ನಸತಿಸುತರು ನಿನ್ನವರೆ ಕಾಯೊ ||ನೀನಲ್ಲದನ್ಯರನು ಕಾಣೆ ಕವಳಿಯ ಕಾಯೊ |ಮುನ್ನ ಸ್ಥಿರವಾಗಿ ನೀನೆಂಬೆ ಕಾಯೊ 1ಪರವೆಣ್ಣುಗಳಿಗೆ ಎನ್ನ ಮನಸು ಕಾತರಿ ಕಾಯೊ |ದುರಿತದುಷ್ಕರ್ಮ ಮುಂಚಿಲ್ಲ ಕಾಯೊ ||ಕರೆಕರೆಯ ಸಂಸಾರಕಷ್ಟು ಕಡಲಿಯ ಕಾಯೊ |ದುರಿತಭವಶರಧಿಗೆ ತಾರೆ ಕಾಯೊ2ತ್ರಿವಿಧಪಾಪಂಗಳಿಗೆ ಪದವು ಉದ್ದಿನ ಕಾಯೊ|ಭವಸಾಗರದೊಳೀಸೆಂಬೆ ಕಾಯೊ ||ದಿವಿಜೇಂದ್ರ ಕೃಷ್ಣ ಕೈಪಿಡಿದು ಒಲಿದು ಕಾಯೊ |ನವ ಮುಕ್ತಿಪುರಂದರವಿಠಲ ನೀ ಬಿಡದೆ ಕಾಯೊ3
--------------
ಪುರಂದರದಾಸರು
ಈಗ ಕಾಯೋ ಎನ್ನ ಜೀಯಾ ಪತ್ಯಜಾನೆಗೈಸಿ ಎನ್ನ- ನಿಜಾಮನದಿಪಾದಭಜಾನೆಗೈವಂತೆ - ನಿಜಾಮನವನಿತ್ತು 1ಮರೂಳು ಭವದೊಳು - ಉರೂಳುತೀಪರಿತರಾಳೆ ಸಂಗದಿ ಮನ - ಮರೂಳುಗೊಂಡೆನೊ 2ದಾತಾನೀನೆ ಎನ್ನಾ ಇನ್ನಾತಾತಾಗುರುಜಗನ್ನಾಥಾ ವಿಠಲಪಾದಪಾಥೋಜ ಮನ ನಿಕೇತನದಲಿ ತೋರಿ 3
--------------
ಗುರುಜಗನ್ನಾಥದಾಸರು
ಈಗಲೆ ಭಜಿಸಲೆಜಿಹ್ವೆ - ನೀ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಜಾಗುಮಾಡದೆಶ್ರೀ ಹರಿಪಾದಾಂಬುಜವಪ.ದೇಹದೇಹ ಸಂಬಂಧಿಗಳು - ಅವರು |ಮೋಹಬದ್ಧರಾಗಿ ಕುಳಿತಿಹರು ||ಆಹಾರ ಗುಹ್ಯೇಂದ್ರಿಯವೆಂಬ ಎರಡರ |ಬೇಹಾರದಲಿ ನೀನು ಮುಳುಗಿಸದಲೆ ಮನ 1ಮರಣ ತೊಡಗಿ ನಾಲಗೆಯುಡುಗಿ - ನಿನ್ನ - |ತರುಣಿ ಪುತ್ರ ಮಿತ್ರರಳುತಿರಲು ||ಕೊರಳೊಳು ಗುರುಗುರು ಗುರುಗುಟ್ಟುವಾಗನರ - |ಹರಿಯ ನಾಮವೆನ್ನಗೊಡದೆಲೊ ಪ್ರಾಣಿ 2ಅಸಿಪತ್ರವನದೊಳು ಹೊಗಿಸಿ - ನಿನ್ನ - |ಬಸೆವಸೆಖಂಡ ಹೊರವೊಡಿಸಿ |ಬಿಸಿಬಿಸಿ ನೆತ್ತರು ಬಸಿದು ಹೋಗುವಾಗ |ಕುಸುಮನಾಭನ ನಾಮ ನೆನೆಯಗೊಡದು ಮನ 3ತಪ್ತಲೋಹದ ಮೋಲೊರಗಿಸಿ - ನಿನ್ನ - |ಕತ್ತರಿಸಿದ ಖಂಡ ಬೇಯಿಸುವರು ||ನೆತ್ತಿಯ ಕೊರೆದು ನಾಲಗೆ ಹಿರಿದೊಗೆವಾಗ |ಚಿತ್ತಜನಯ್ಯನ ನೆನೆಯಗೊಡದು ಮನ 4ಕುಂಭಿಪಾಕದೊಳಗೆ ಕುದಿಸಿ - ನಿನ್ನ |ಅಂಬುಮೊನೆಗಳಿಂದಿರಿಯಿಸಿ ||ಅಂಬರಕೊಗೆಯ ಕಾಗೆಯು ಕಚ್ಚಿ ಕಡ್ಞಿಗ |ಅಂಬುಜಾಕ್ಷನ ನಾಮ ನೆನೆಯಗೊಡದು ಮನ 5ದುರುಳ ಯವದೂತರಾರ್ಭಟಿಸಿ - ನಿನ್ನ - |ಎರಕದ ಕಾಯ್ದ ಕಂಬಕೆ ತಕ್ಕೆಗೆಯ್ಸಿ ||ಪರಿಪರಿ ಭವದೊಳು ಬಳಲಿಸುತಿರುವಾಗ |ಪುರುಷೋತ್ತಮನ ನಾಮ ನೆನೆಯಗೊಡದು ಮನ 6ದುರಿತಕೋಟಿಗಳ ಹರಿಸುವ - ನಿನ್ನ - |ನರಕಬಾಧೆಗಳ ತಪ್ಪಿಸುವ ||ಪರಮ ಪುರುಷ ನಮ್ಮ ಪುರಂದರವಿಠಲನ |ನಿರುತದಿ ನೆನೆದು ನೀ ಸುಖಿಯೊಗೋ ಮನವೆ 7
--------------
ಪುರಂದರದಾಸರು
ಈಗಾಗೋ ಇನ್ನಾವಾಗೋ ಮತ್ತೀಗಾತ್ರ ಅಸ್ಥಿರವಣ್ಣಹೇಗಾದರು ಹೊಗಳಾಡಲಿ ಬೇಕುನಾಗಾರಿಗಮನನ್ನ ಪ.ಮನಹರಿದತ್ತಲೆ ಹರಿಹರಿದಾಡಿದಿನ ಹೋದವು ವೃಥಾ ನೋಡಿ ದುರ್ಧನದಾಸೆಲಿ ಬಾಡಿ ದುರ್ಜನರಾರಾಧನೆ ಮಾಡಿ ಈತನು ಚಪಲತೆ ಹೋಗಾಡದೆ ಶ್ರೀಹರಿಗುಣಕುಣಿದು ಕೊಂಡಾಡಿ1ತುಂಬಿದಸಿರಿಬಿಡಿಸಿ ಸೆರೆ ಒಯಿವರು ವಿಲಂಬಿಲ್ಲದೆ ಜವನವರು ಕೃಪೆಯೆಂಬುದ ಅರಿಯರು ಅವರುಹಲವ್ಹಂಬಲಿಸಿದರೊದೆವರು ಸುಡುನಂಬಲಿಬಾರದು ಸಂತೆಯವರಅಂಬುಜನಾಭನ ಸಾರು 2ಸಕಳಾಗಮ ವೇದೋಕ್ತಿ ವಿಚಾರಕೆಮುಖವೆನಿಸುವುದಾಚಾರ ಆಸುಖವೇ ಧರ್ಮದಸಾರಈಅಖಿಳಕೆ ಪ್ರಭು ಯದುವೀರಭಕ್ತವತ್ಸಲ ಪ್ರಸನ್ವೆಂಕಟರಾಯನಸಖ್ಯವಿಡಿದರೆ ಭವದೂರ 3
--------------
ಪ್ರಸನ್ನವೆಂಕಟದಾಸರು
ಈಸಬೇಕು ಇದ್ದು ಜಯಿಸಬೇಕುಹೇಸಿಕೆಸಂಸಾರದಲ್ಲಿ ಲೇಶ ಆಶೆ ಇಡದ ಹಾಗೆಪ.ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳುಸ್ವಾಮಿರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ 1ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿಮೀರಿ ಆಶೆ ಮಾಡದ ಹಾಗೆ ಧೀರ ಕೃಷ್ಣನ ನೆನೆಯುವರೆಲ್ಲ 2ಮಾಂಸದಾಶೆಗೆ ಮತ್ಸ್ಯವು ಸಿಲುಕಿ ಹಿಂಸೆ ಪಟ್ಟಪರಿಯೊಳುಮೋಸ ಹೋಗದೆ ಪುರಂದರವಿಠಲ ಜಗದೀಶನೆನುತ ಕೊಂಡಾಡುವರೆಲ್ಲ 3
--------------
ಪುರಂದರದಾಸರು
ಉಗಾಭೋಗಕರುಣವಾರಿಧಿ ನೀ ಕರುಣವಾರಿಧಿಯಾದ ಕಾರಣಕರಿಕುಲಾಗ್ರಣಿಯನ್ನ ಕಾಯ್ದೆಉರಿಉರಗಬಾಧೆಯ ತಪ್ಪಿಸಿ ತರಳನಾರೈದೆಕರುಣವಾರಿಧಿಯಾದ ಕಾರಣಸುರರ ಸಂಕಟ ಹರಿದುಕನಕಪುರದರಸುತನ ಕೊಟ್ಟೆ ಪೌಲಸ್ತ್ಯ ಅನುಜಗೊಲಿದುಕರುಣವಾರಿಧಿಯಾದ ಕಾರಣಸ್ಮರಿಸುತಿಹಗಂಬರದಿ ನಿಲಿಸಿದೆಭರದಿ ಮುನಿ ಬಂದೆದೆಯನೊದೆದರೆ ಮರಳಿ ಮನ್ನಿಸಿದೆಕರುಣವಾರಿಧಿ ನೀನು ನಿನ್ನಯಕರುಣ ಪಾತ್ರರುಸಿರಿವಿಧಾತ್ರರುಪರಿಚರರ ಅಭಿಮಾನಿ ಪ್ರಸನ್ವೆಂಕಟರೇಯ ಮಾಸಹಾಯ 1
--------------
ಪ್ರಸನ್ನವೆಂಕಟದಾಸರು
ಉಗಾಭೋಗಶ್ರೀಪತಿಯ ನಾಭಿಯಿಂದಅಜಜನಿಸಿದನುxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಪ್ರಾಜÕತೀರ್ಥರ ಶಿಷ್ಯರೇಅಚ್ಯುತಪ್ರೇಕ್ಷರುಅಚ್ಯುತಪ್ರೇಕ್ಷರಕರಸಂಜಾತರೇ ಪೂರ್ಣಪ್ರಜÕರುಭಾಷ್ಯಕಾರರೇ ನಮ್ಮಗುರುಮುಖ್ಯಪ್ರಾಣರು
--------------
ಪುರಂದರದಾಸರು
ಉಡುಪಿಕೃಷ್ಣನ ನೋಡಿರಿ ಶ್ರೀಹರಿ ಚರಿತಸಡಗರವನು ಕೇಳಿರಿ ಪಪೊಡವಿಯೊಳು ಸಮರಿಲ್ಲ ಈತನಉಡುಪ ಮುಖ ಶ್ರೀ ಕೃಷ್ಟರಾಯನಕಡಲತಡಿಯಲಿ ನೆಲಸಿದಾತನಮೃಡಪುರಂದರೊಡೆಯ ದೇವನ 1ಮಧ್ವಸರೋವರ ಸ್ನಾನವ ಮಾಡುತ ಮನಶುದ್ದಭಾವದಿ ನಲಿದುಮಧ್ವಶಾಸ್ತ್ರÀವ ಸಾಧು ಸಜ್ಜನರಿಗೆ ಪೇಳ್ದಪದ್ಧತಿ ಮೀರದೆ ಶ್ರದ್ಧಾಭಕುತಿಯಿಂದ 2ಮಧ್ಯದಲ್ಲಿಹ ಅನಂತೇಶ್ವರನನುಶುದ್ಧ ಭಕುತಿಲಿ ನಮಿಸಿ ಸ್ತುತಿಸುತಮುದ್ದು ಕೃಷ್ಣನ ಹೆಜ್ಜೆ ಪಂಙ್ತಯಶ್ರದೆÀ್ಧ ಸಡಗರ ನೋಳ್ಪಸುಜನರು 3ಕಾಲಲಂದುಗೆ ಗೆಜ್ಜೆಯು ಕಯ್ಯೊಳು ಕಡ-ಗೋಲನೇಣನೆ ಪಿಡಿದುಬಾಲನಂದದಿ ಗೋಪಾಲರೂಪವ ತೋರ್ದಶ್ರೀ ಲಲಾಮನ ದಿವ್ಯ ಬಾಲಕೃಷ್ಣನರೂಪ4ಬಾಲಯತಿಗಳು ವೇಳೆ ವೇಳೆಗೆಬಾಲಕೃಷ್ಣನ ಪೂಜೆ ಮಾಡುತಬಾಲರೂಪವ ನೋಡಿ ಸುಖಿಪರುಶೀಲಗುಣಸುರವರನ ಸ್ತುತಿಪರು5ಮಧ್ವರಾಯರಿಗೊಲಿದು ಉಡುಪಿಯ ಮಣ್ಣ-ಗೆಡ್ಡೆಯೊಳಗೆ ಪೊಳೆದುಅದ್ವೈತಮತದ ಸದ್ದಡಗಿಸಿ ಮೆರೆದಂಥಮುದ್ದು ಸರ್ವಜÕರ ಆಜ್ಞಾಧಾರಕರೆಲ್ಲ 6ಶುದ್ಧ ತತ್ವಜÕರು ರಚಿಸಿದಪದ್ಧತಿಯ ಸಾಧಿಸುತ ಸಂತತಶ್ರದ್ಧೆಯೊಳು ಹರಿಕಾರ್ಯ ನಡೆಸುವಶುದ್ಧಯತಿಗಳ ಸೇವೆಗೊಲಿಯುವ 7ಪರಿಯಾಯದಿನ ಬರಲು ಶ್ರೀ ಹರಿಯನ್ನುಪರಿಪರಿವಿಧ ಪೂಜಿಸಿಪರಮವೈಭವದಿಂದ ಹರಿಯನ್ನುಕರತಂದುವರರಥÀವೇರಿ ಕುಳ್ಳಿರಿಸುವ ಭಕುತಿಯಲಿ 8ಪರಿಪರಿಯ ವಾದ್ಯಗಳು ಮೊಳಗಲುಸರುವ ಯತಿಗಳು ನೆರೆದು ಹರುಷದಿಪರಮಮಂಗಳಮೂರ್ತಿಕೃಷ್ಣನಹರುಷದಲಿ ಕೊಂಡಾಡಿ ಸುತ್ತಿಪರು 9ಕೊರಳಕೌಸ್ತುಭಮಾಲೆಯು ವೈಜಯಂತಿಯುಮುರುಡಿ ಸರಪಣಿ ಗೆಜ್ಜೆಯುಪರಿಪರಿ ರತ್ನಾಭರಣಗಳ್ಹೊಳೆಯುತಜರದ ಪೀತಾಂ¨Àರದಿಂದ ಶೋಭಿಪ ದಿವ್ಯ 10ಕನಕಕಸ್ತೂರಿ ತಿಲಕ ಫಣೆಯಲಿಮಿನುಗುತಿಹ ಸ್ತ್ರೀರೂಪಧರಿಸಿದಕನಕಪೀಠದಿ ಮೆರೆದ ಕಮಲ-ನಾಭವಿಠ್ಠಲನ ಸೇವಿಸುವ ಜನ11
--------------
ನಿಡಗುರುಕಿ ಜೀವೂಬಾಯಿ
ಉತ್ಥಾನ ದ್ವಾದಶಿಯ ದಿವಸ(ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ)ರಂಭೆ : ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ.ಮಾನಿನೀಮಣಿ ಈತನ್ಯಾರೆ ಕರುಣಾನಿಧಿಯಂತಿಹ ನೀರೆ ಹಾ ಹಾಭಾನುಸಹಸ್ರ ಸಮಾನಭಾಷಿತ ಮ-ಹಾನುಭಾವನು ಸುಪ್ರವೀಣನಾಗಿಹ ಕಾಣೆ 1ಭಯಭಕ್ತಿಯಿಂದಾಶ್ರಿತರು ಕಾಣಿ-ಕೆಯನಿತ್ತುನುತಿಸಿಪಾಡಿದರು ನಿರಾ-ಮಯ ನೀನೇ ಗತಿಯೆಂದೆಲ್ಲವರು ಹಾ ಹಾಭಯನಿವಾರಣ ಜಯ ಜಯವೆಂದು ನುತಿಸೆ ನಿ-ರ್ಭಯಹಸ್ತತೋರುತ ದಯಮಾಡಿ ಪೊರಟನೆ2ಭೂರಿವಿಪ್ರರ ವೇದ ಘೋಷದಿಂದಸ್ವಾರಿಗೆ ಪೊರಟ ವಿಲಾಸ ಕೌಸ್ತು-ಭಾರತ್ನ ಹಾರ ಸುಭಾಸ ಹಾ ಹಾಚಾರುಕಿರೀಟಕೇಯೂರಪದಕಮುಕ್ತಾಹಾರಾಲಂಕಾರ ಶೃಂಗಾರನಾಗಿರುವನು 3ಸೀಗುರಿ ಛತ್ರ ಚಾಮರದ ಸಮವಾಗಿ ನಿಂದಿರುವ ತೋರಣದ ರಾಜಭೋಗನಿಶಾನಿಯ ಬಿರುದ ಹಾ ಹಾಮಾಗಧಸೂತ ಮುಖ್ಯಾದಿ ಪಾಠಕರ ಸ-ರಾಗ ಕೈವಾರದಿ ಸಾಗಿ ಬರುವ ಕಾಣೆ 4ಮುಂದಣದಲಿ ಶೋಭಿಸುವ ಜನಸಂದಣಿಗಳ ಮಧ್ಯೆ ಮೆರೆವ ತಾರಾವೃಂದೇಂದುವಂತೆ ಕಾಣಿಸುವ ಹಾಹಾಕುಂದಣಖಚಿತವಾದಂದಣವೇರಿ ಸಾ-ನಂದದಿ ಬರುವನು ಮಂದಹಾಸವ ಬೀರಿ 5ತಾಳ ಮೃದಂಗದ ರವದಿಶ್ರುತಿವಾಲಗಭೇರಿರಭಸದಿ ಜನಜಾಲಕೂಡಿರುವ ಮೋಹರದಿ ಹಾಹಾಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ-ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6ಊರ್ವಶಿ: ಈತನೆ ಭಾಗ್ಯನಿಧಿ ನೋಡೆ ನೀ ಮುದದಿ ಪ.ಈತನೆ ಈರೇಳು ಲೋಕದದಾತನಾರಾಯಣ ಮಹಾ ಪುರು-ಹೂತ ಮುಖ್ಯಾಮರವಿನುತನಿ-ರ್ಭೀತ ನಿರ್ಗುಣ ಚೇತನಾತ್ಮಕ ಅ.ಪ.ಮೀನ ರೂಪವೆತ್ತಾಮಂದರಪೊತ್ತಭೂನಿತಂಬಿನಿಯ ಪ್ರೀತಮಾನವಮೃಗಾಧಿಪ ತ್ರಿವಿಕ್ರಮದಾನಶಾಲಿ ದಶಾನನಾರಿ ನ-ವೀನ ವೇಣುವಿನೋದ ದೃಢ ನಿ-ರ್ವಾಣ ಪ್ರವುಢ ದಯಾನಿಧಿ ಸಖಿ 1ವಾರಿಜಾಸವಾನವಂದಿತ ಶ್ರೀಪಾದಯುಗ್ಮವತೋರಿಕೊಂಬುವ ಸಂತತಕೇರಿಕೇರಿಯ ಮನೆಗಳಲಿ ದಿ-ವ್ಯಾರತಿಯ ಶೃಂಗಾರ ಭಕ್ತರ-ನಾರತದಿ ಉದ್ಧಾರಗೈಯಲುಸ್ವಾರಿ ಪೊರಟನು ಮಾರಜನಕನು 2ಮುಗುದೆ ನೀ ನೋಡಿದನು ಕಾಣಿಕೆಯ ಕ-ಪ್ಪಗಳ ಕೊಳ್ಳುವನು ತಾನುಬಗೆಬಗೆಯ ಕಟ್ಟೆಯೊಳು ಮಂಡಿಸಿಮಿಗಿಲು ಶರಣಾಗತರ ಮನಸಿನಬಗೆಯನೆಲ್ಲವ ಸಲ್ಲಿಸಿ ಕರುಣಾಳುಗಳ ದೇವನು ಕರುಣಿಸುವ ನೋಡೆ 3ರಂಭೆ : ದೃಢವಾಯಿತೆಲೆ ನಿನ್ನ ನುಡಿಯು ಸುರಗಡಣಓಲಗಕೆ ಇಮ್ಮಡಿಯು ಜನ-ರೊಡಗೂಡಿ ಬರುತಿಹ ನಡೆಯು ಹಾ ಹಾಮೃಡಸರೋಜ ಸುರಗಡಣ ವಂದಿತಕ್ಷೀರಕಡಲ ಶಯನ ಜಗದೊಡೆಯನಹುದು ಕಾಣೆ 1ಮದಗಜಗಮನೆ ನೀ ಪೇಳೆ ದೇವಸದನವ ಪೊರಡುವ ಮೊದಲೇ ಚಂದ-ನದಪಲ್ಲಂಕಿಯ ತಂದು ಮ್ಯಾಲೆ ಹಾ ಹಾಮುದದಿಂದ ಬಾಲಕರೊದಗಿ ಸಂತೋಷದಿಚದುರತನದಿ ಪೋಗುವನು ಪೇಳೆಲೆ ನೀರೆ 2ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವಶ್ರೀರಮಾಧವನ ಲೀಲೆಘೋರದೈತ್ಯಕುಠಾರ ಲಕ್ಷ್ಮೀನಾರಾಯಣನ ಬಲಕರ ಸರೋಜದಿಸೇರಿ ಕುಳಿತ ಗಂಭೀರ ದಿನಪನಭೂರಿತೇಜದಿ ಮೆರೆವುದದು ತಿಳಿ 1ದೊರೆಯು ಬರುವನು ಎಂದು ಎಲ್ಲರಿಗೆ ಗೋ-ಚರಿಸುವನೊಲಿದುಇಂದುತರ ತರದ ಆರತಿಗಳನು ನೀವ್ಧರಿಸಿ ನಿಂದಿರಿಯೆಂದು ಜನರಿಗೆ-ಚ್ಚರಿಗೆಗೋಸುಗ ಮನದ ಭಯವಪ-ಹರಿಸಿ ಬೇಗದಿ ಪೊರಟು ಬಂದುದುರಂಭೆ :ಸರಸಿಜನಯನೆ ನೀ ಪೇಳೆಸೂರ್ಯಕಿರಣದಂತಿಹುದೆಲೆ ಬಾಲೆ ಸುತ್ತಿಗೆರಕವಾಗಿಹುದು ಸುಶೀಲೆ ಆಹಾಹರಿಯ ವೈಕುಂಠ ನಗರದಂತೆ ಜ್ಯೋತಿ ವಿ-ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1ಊರ್ವಶಿ : ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧದ್ವಾದಶಿಯೊಳಗೆ ಬಾಲೆಮಾಧವನ ಪ್ರೀತ್ಯರ್ಥವಾಗಿ ಶು-ಭೋದಯದಿ ಸಾಲಾಗಿ ದೀಪಾರಾಧನೆಯ ಉತ್ಸಹದ ಮಹಿಮೆಯಸಾದರದಿ ನೀ ನೋಡೆ ಸುಮನದಿ 1ನಿಗಮಾಗಮದ ಘೋಷದಿ ಸಾನಂದ ಸು-ತ್ತುಗಳ ಬರುವ ಮೋದದಿಬಗೆ ಬಗೆಯ ನರ್ತನ ಸಂಗೀತಾದಿಗಳ ಲೋಲೋಪ್ತಿಯ ಮನೋಹರದುಗುಮಿಗೆಯ ಪಲ್ಲಂಕಿಯೊಳು ಕಿರು 2ನಗೆಯ ಸೂಸುತ ನಗಧರನು ಬಹಚಪಲಾಕ್ಷಿ ಕೇಳೆ ಈ ವಸಂತ ಮಂ-ಟಪದಿ ಮಂಡಿಸಿದ ಬೇಗಅಪರಿಮಿತ ಸಂಗೀತ ಗಾನ ಲೋ-ಲುಪನು ಭಕ್ತರ ಮೇಲೆ ಕರುಣದಿಕೃಪೆಯ ಬೀರಿ ನಿರುಪಮ ಮಂಗಲಉಪಯಿತನು ತಾನೆನಿಸಿ ಮೆರೆವನು 3ಪಂಕಜಮುಖಿನೀ ಕೇಳೆ ಇದೆಲ್ಲವುವೆಂಕಟೇಶ್ವರನ ಲೀಲೆಶಂಕರಾಪ್ತನು ಸಕಲ ಭಕ್ತಾತಂಕವನು ಪರಿಹರಿಸಿಕರಚಕ್ರಾಂಕಿತನು ವೃಂದಾವನದಿ ನಿಶ್ಯಂಕದಿಂ ಪೂಜೆಯಗೊಂಡನು 4ಕಂತುಜನಕನಾಮೇಲೆ ಸಾದರದಿ ಗೃ-ಹಾಂತರಗೈದ ಬಾಲೆಚಿಂತಿತಾರ್ಥವನೀವ ಲಕ್ಷ್ಮೀಕಾಂತ ನಾರಾಯಣನು ಭಕುತರತಿಂಥಿಣಿಗೆ ಪ್ರಸಾದವಿತ್ತೇ-ಕಾಂತ ಸೇವೆಗೆ ನಿಂತಮಾಧವ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಉಪಕಾರ ಮರೆವುದುಚಿತವಲ್ಲೋ |ತಪನಾಪ್ತಾಕ್ಷನೆ ನಮ್ಮ ಹಿರಿಯರಂದು ಮಾಡಿದಾ ಪಹರಿಯೆ ನಿನ್ನವರಿಗಮೃತವ ನೀಡುವೆನೆಂದು |ಭರದಿಂದ ಮಥÀನ ಮಾಡಿಸಿದೆ ಕಡಲ ||ಗರಳವುದ್ಭವಿಸಲು ದಿವಿಜರಂಜಲು ಆಗ |ತ್ವರದಿಂದದರಭಯ ಪರಿಹರಿಸಿದರಾರೊ 1ಆರಣ್ಯದೊಳು ನೀನಿರಲು ನಿನ್ನೊಲ್ಲಭಿಯ |ಆ ರಾವಣನೊಯ್ಯಲು ಕಪಿಗಳೆಲ್ಲ ||ಹಾರಲಾರೆವೊ ಸಮೂದ್ರಾ ಎನ್ನಲು ಬೇಗ |ಭಾರತೀ ರಮಣನೇ ಪೋಗಿ ವಾರ್ತೆಯ ತಂದ 2ಶರಧಿಕಟ್ಟುವುದಕ್ಕೆ ರೋಮ ರೋಮದಿ ಗುಡ್ಡ |ಧರಿಸಿ ತಂದನು ನೊಂದೆನೆನ್ನದಲೆ |ಹರಿಜಿತು ಶರದಿಂದ ಬಿಗಿಯೆ ಪ್ಲವಗರೆಲ್ಲಾ |ಧರಣಿ ಹೊಂದಲು ಸಂಜೀವನ ತಂದು ಉಳುಹಿದ 3ವಸುದೇವಜನಾಗಿ ನೀಂ ಜರಿಜನ ಭಯದಿಂದ |ವಸುಧೆಯೊಳಗೆ ನಿಲ್ಲಲಾರದಿದ್ದೆ ||ಶಶಿಕುಲದಲ್ಲಿವಾತಜನಿಸಿ ಅವನ ಕೊಂದು |ಕುಸುಮನಾಭನೆ ನಿನ್ನ ಭಯ ಬಿಡಿಸಿದನಲ್ಲೋ 4ಮಣಿಮಂತಜಗದೊಳು ನಿನ್ನ ಮಹಿಮೆಯನ್ನು |ಮುಣುಗಿಸಿದನು ತ್ವರಿತ ನಮ್ಮ ಗುರುವು ||ಘನಶಾಸ್ತ್ರಂಗಳ ರಚಿಸಿ ದುರ್ಮತವ ಸೋಲಿಸಿ |ಮನಸಿಜಪಿತನೇ ಪರನೆಂದು ಮೆರೆಸಿದ5ಇಷ್ಟು ಸೇವೆಯ ಮಾಡಿ ಮೆಚ್ಚಿಸಿದನು ಗೇಣು |ಬಟ್ಟೆಬೇಡಿದನೇನೋ ಆತ ನಿನ್ನ ||ಬಿಟ್ಟದ್ದಾನಾದಿತು ನಮ್ಮ ವಂಶಕರಿಗೆ |ಕೊಟ್ಟು ರಕ್ಷಿಸುವನು ಸ್ವಾಮಿ ಒಳ್ಳೆವನೆಂದು 6ಈಸು ಪರಿಯಿಂದ ನಮ್ಮ ಭಾರತೀಕಾಂತ |ತಾ ಸೋತಿರಲು ನಿನಗೆ ನಮ್ಮನೀಗ ||ಘಾಸಿಮಾಡದೆ ಸಲಹುವದುಚಿತವೋ ಶ್ರೀ ಪ್ರಾ- |ಣೇಶ ವಿಠ್ಠಲರೇಯ ಅಪಕೀರ್ತಿ ಕೊಳಬೇಡ7
--------------
ಪ್ರಾಣೇಶದಾಸರು
ಉಪ್ಪವಡಿಸಯ್ಯ ಕೃಷ್ಣ ಪ.ಉಪ್ಪವಡಿಸೈ ಬೊಮ್ಮನಪ್ಪ ಭುವನಾವಳಿಯಸ್ವಪ್ಪನಾದಿ ತ್ರಯವನಪ್ಪಿ ಪಾಲ್ಗಡಲ ಮಗಳಪ್ಪಿ ಅಹಿವರನ ಸುಪ್ಪತ್ತಿಗೆಲಿ ಒರಗಿಪ್ಪತಿಮ್ಮಪ್ಪವ್ರಜದಿ ದಯದಿಅ.ಪ.ಅರುಣಮೂಡಣವೇರೆ ತ್ವರಿತ ತಮಕುಲ ಜಾರೆಹರಿದವಭ್ರದ ತಾರೆ ತರಣಿಕರ ಬಳಿ ಸಾರೆಸರಸಿಜವಿಕಸತೋರೆ ಮರುತ ಪರಿಮಳ ಬೀರೆ ನೆರೆದುಹರುಷ ದಿವಿಗಣ ಬೀರೆ ಮೊರೆಯುತಿವೆ ಸುರಭೇರೆಪರಮಹಂಸರು ಮೇರೆ ಮರೆದು ಸ್ಮರಿಸುತಲೈದಾರೆಸರ್ವವೇದ ಘೋಷ ಹರಿಪರವೆನುತಲೈದಾರೆ ಕರುಣದಲಿವಸುಧ್ಯೆರೆದಕಾಷ್ಠಗಂಧಕುಸುಮಸರ ತಂದಿಹಳುಬಿಸಜಲೋಚನ ನಿಮ್ಮ ಸೊಸೆ ವಾಣಿ ಭಾರತಿಯುಲ್ಲಸದಿ ಪೊಂಭಾಂಡದಲಿ ಬಿಸಿನೀರು ತುಂಬಿಹರುಪಶುಪಸುಸುಪರ್ಣವಸನಉರಗೇಶ ರತುನನಾಸನಮಾಲ್ಯಸುರಪತಿಕಲಶ ವಹಿಸಿ ವರುಣಸ್ಮರತಿಲಕಹಸನ ಮಾಡುವ ಪಾವುಗೆಶಶಿಧರಿಸಿ ನಿಂದ ಸಂತಸದಿಸ್ವರ್ಧುನಿಯು ಗೋದೆ ಗೋವರ್ಧಿನಿಯು ಗಾತ್ರೆಅಜನರ್ಧಾಂಗಿ ಸರಸ್ವತಿ ಶ್ರೀವರ್ಧಿನಿಯು ಕಾವೇರಿನಿರ್ದೋಷಿ ಸರಯು ತುಂಗಭದ್ರೆ ಕಾಳಿಂದಿ ನರ್ಮದ್ಯೆಮರ್ದಿತಘೌಘೆಯು ಕುಮುದ್ವತಿ ವಂಜರೆ ಭೀಮೆನಿರ್ಧೂತಕಲಿಮಲಕಪರ್ದಿನಿಯು ತಾಮ್ರಪರ್ಣಿಊಧ್ರ್ವಗತಿಪ್ರದ ನದಿ ಬಂದಿರ್ದವಿದೆ ತೀರ್ಥ ಕ್ರಮಕಿನ್ನರರು ಸುರನಾಯಕ ಮನ್ನೆಯರು ಸಲೆ ದೇವಗನ್ನೆಯರುಕಿಂಪುರುಷಪನ್ನಗರು ವಿದ್ಯಾಧರನಿಕರ ತುಂಬುರರು ನಿನ್ನಗುಣಕೀರ್ತನೆಯ ಮಾರ್ಗೋನ್ನತದಚೆನ್ನ ಭೂಪಾಳಿ ದೇವ ಧನಶ್ರೀ ದೇಶಾಕ್ಷಿಸನ್ನುತವಸಂತ ಮಲಹ ನವೀನ ಮಾಳ್ಪ ಶ್ರೀಘನ್ನ ಸ್ವನಾಮಂಗಳನು ಪಾಡುವರಿದಕೋ ಧನ್ಯ ಸಂಗೀತಲೋಲ4ಸುರಮುನಿ ಭೃಗು ವಸಿಷ್ಠ ನರಪಋಷಿ ಸನಕಾದ್ಯಮರೀಚ್ಯತ್ರಿ ಪುಲಸ್ತ್ಯ ಆಂಗಿರ ಚ್ಯವನ ಸೌಭರಿಯು ಭಾರಧ್ವಾಜಗಸ್ತ್ಯ ಪರಾಶರ ಕಶ್ಯಪ ಜಮದಗ್ನಿ ಗಾಗ್ರ್ಯಮಾರ್ಕಂಡೇಯ ಬಕದಾಲ್ಭ್ಯ ಕರಂಧಮೋದ್ಧಾಲಕನುವರದಾಂಕ ಜಹ್ನುಮುನಿ ವರ್ಣಿಕುಲದಗಣಿತರುನೆರೆನೆರೆದುತುತಿಸಿಸುಖಭರಿತರಾಗುತ ನಿಮ್ಮ ಚರಣದೂಳಿಗಕ್ಷಿತಿಪರೊಳು ಮರುತ ಪ್ರಿಯವ್ರತ ಪ್ರಾಚೀನ ಬರ್ಹಿಪ್ರಥು ಗಯ ಧ್ರುವಿಕ್ಷ್ವಾಕು ದಿತಿಜಸುತ ಮಾಂಧಾತಪ್ರತಿಸಗರ ನಹುಷಬಲಿಶತಧನ್ವಿದೇಹಿ ದಶರಥಶ್ರುತಕೀರ್ತಿ ಶಿಬಿ ದೇವವ್ರತ ಅಂಬರೀಷನು ಭರತದ್ವಯ ಪುರೂರವ ಯಯಾತಿ ರಂತಿದೇವ ಪರೀಕ್ಷಿತನು ಮುಚುಕುಂದ ನಳ ಶತಪುಣ್ಯಶ್ಲೋಕ ನೃಪರತಿನಂದಗೋಕುಲದ ಗೋವಿಂದಗಾರ್ತರು ನಿದ್ರೆಹೊಂದೆದ್ದಾನಂದದಿಂ ದೀಪಗಳ ಪ್ರಜ್ವಲಿಸಿಮಿಂದು ಬ್ರಾಹ್ಮಿಯಲುಟ್ಟು ಪೊಂದೊಡಿಗೆ ಮಣಿದೊಡಿಗೆವಂದಿಸುತ ಗೃಹದೇವರ ದಧಿಮಥಿಸಿ ಬೆಣ್ಣೆಯಇಂದಿರೆರಮಣ ಮೆಲ್ಲಲೆಂದು ತೆಗೆದಿಡಲರುಹಬಂದಿಹರು ಗೋವಳರು ಮುಂದೆದ್ದು ತಮ್ಮ ಏಳೆಂದುಶ್ರೀಪತಿಯೆ ಬ್ರಹ್ಮಾದಿ ತಾಪಸರ ಪ್ರಭು ಏಳುದ್ವೀಪ ದ್ವೀಪಾಂತರದ ಭೂಪರರಸನೆ ಏಳುಕಾಪುರುಷ ಕಾಳ ಕುಮುದಾಪಹರಹರಿಏಳು ಕೋಪಹೇಪಾರ್ಥಸಖಸುಪ್ರತಾಪ ಜಗ ಎರಡೇಳುವ್ಯಾಪಕನೆ ವಿಬುಧಕುಲಸ್ಥಾಪಕನೆ ಮೂರೇಳುಕೂಪಕುಲನಾಶಕ ಚಮೂಪ ಸಂಹರ ಏಳು ದ್ರೌಪದೀ ಬಂಧು ಏಳು 8ಶ್ರುತಿಯ ತರಲೇಳು ಭೂಭೃತವ ಹೊರಲೇಳುಶುಭಧೃತಿಯನಾಳೇಳು ದುರ್ಮತಿಯ ಸೀಳೇಳಮರತತಿಯ ಸಲಹೇಳು ನಿಜಪಿತನ ಕಾಯೇಳು ಮಹಿಸುತೆಗೆಸತಿಯರಾಳೇಳು ಪತಿವ್ರತೆರ ಗೆಲಲೇಳುಕಲಿಖತಿಯ ಕಳಿಯೇಳು ಪಂಡಿತರುಳುಹಲೇಳು ನಮಗತಿಶಯ ಪ್ರಸನ್ನವೆಂಕಟಪತಿ ಕೃಷ್ಣ ಸದ್ಗತಿದಾತ ತಾತಯೇಳೈ 9
--------------
ಪ್ರಸನ್ನವೆಂಕಟದಾಸರು