ಒಟ್ಟು 10452 ಕಡೆಗಳಲ್ಲಿ , 133 ದಾಸರು , 5883 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೂರ್ಣಿಕೆಶ್ರಿ ಹರಿಯೇ ನಿನ್ನುಪಕೃತಿಯು ಮರೆಯದಂತಿರಿಸೆಮ್ಮಉರಗಾಧಿಶಯನಾ ಕೃಷ್ಣಾ ದ್ವಿಜರಾಜಗಮನಾಕಾಳಿಯ ದಮನಾ ಭುವನತ್ರಯಾಕ್ರಮಣಪದ್ಮಾಲಯಾ ರಮಣ 1ಧನದಮಾತಿರಲಿ ಗೋಧನದ ಮಾತಿರಲಿಭೂಧನದಮಾತಿರಲಿ ಶೌರೀಧನವೆಲ್ಲವೂ ಕರ್ಮವನು ಬೆನ್ಹಿಡಿದುಬಹದೆನುತಾಡುವರೊ ಮುರಾರಿತನುವು ನಿನ್ನಯ ಸೇವೆಯನು ಮಾಡುತಿರಲಿಕಂಸಾರಿಮನವು ನಿನ್ನಯರೂಪವನು ನೆನೆಯುತಿರಲಿ ದುರಿತಾರಿಈ ಕೃಪೆಯಭೂರೀ ದುರ್ಜನವಿದಾರೀಸುಜನೋಪಕಾರೀ ಗಿರಿನಾಥ ಧಾರೀಪಾಪಹಾರಿದಿತಿಜಾರಿನಿರ್ವಿಕಾರಿ ಉದಾರಿ2ನಾಕದೊಳಗಿರಲಿ ಭೂಲೋಕದೊಳಗಿರಲಿಅಧೋಲೋಕದೊಳಗಿರಲಿ ನಾನೂಶ್ರೀಕಾಂತ ನಿನಗೆ ಬೇಕಾದವನೆನುತ್ತಸಾಕಬೇಕೆನ್ನ ನೀನೂ ಭಕ್ತಜನಕಾಮಧೇನುಹೇಳಬೇಕಾದುದಿನ್ನೇನು 3ಬಿದ್ದಿರುವೆನೈ ರಜೋಗುಣದಿಒದ್ಯಾಡುತಿಹೆನೊ ಸಂಕಟದಿಇದ್ದು ಫಲವೇನೊ ಈ ಭವದಿಉದ್ಧರಿಸು ಕೃಪಾಜಲಧಿ 4ಬದ್ಧನಾನಯ್ಯ ಈ ಜಗದಿಶುದ್ಧಬುದ್ಧಿಯ ನೀಯೊ ಮುದದಿಕೃದ್ಧನಾಗದಿರೆನ್ನ ದುಷ್ಕøತದಿಎದ್ದು ಬಾರೆನ್ನಡಿಗೆ ದಯದಿಶ್ರೀ ತಂದೆಮುದ್ದುಮೋಹನ್ನವಿಠಲ ಭಾಗ್ಯನಿಧಿ 5
--------------
ತಂದೆ ಮುದ್ದುಮೋಹನ ವಿಠಲರು
ಚೆಂಡನಾಡುತ ಬಂದ ಪುಂಡ ಕೃಷ್ಣನು ತನ್ನ |ಹಿಂಡುಗೋಪಾಲಕರ ಕೊಂಡು ಯಮುನೆಯ ತಡಿಗೆಪಓರೆ ತುರುಬನೆಕಟ್ಟಿಗೀರುನಾಮವನಿಟ್ಟು |ಹಾರ ಕಂಕಣ ತೋಳಬಂದಿ ಘುಂಗುರ ಘನ-|ಸಾರಕುಂಕುಮ ಕೇಸರಿಗಂಧ ಕೂಡಿಸಿ |ಸೇರಿಸುತ ನಡುವಿಗೆ ಕಾಸಿದಟ್ಟಿಯನುಟ್ಟು |ಹಾರಾಡುತಲಿ ಬಂದ-ತೊಡರಗಾಲ |ತೋರ ಚಿನ್ಮಣಿಗಳಿಂದ. ಮುತ್ತಿನ ಚೆಂಡು |ಧಾರಿಣಿಗೆ ಪುಟಿಸಿ ನಿಂದ-ವಜ್ರದಖಣಿ|ತೋರಿ ಗೆಳೆಯರ ಕೂಡ ಬಂದರಾ ಮನೆಯಿಂದ 1ಕೊಂಡಾಲ ತಿಮ್ಮನು ಚೆಂಡನೆ ಹೊಡೆದನು |ಮಿಂಡೆಯರ ಮೊಲೆಗಾಗಿ ಹಾರಿಹರಿದು ಬೀಳೆ |ಹಿಂಡುನಾರಿಯರೆಲ್ಲ ಸುತ್ತಿಕೊಂಡಿರೆಅವರ|ಮುಂಡೆಗೆ ತಗುಲಿಸಿ ಪುರದ ಬಾಗಿಲ ಬಿಟ್ಟು |ಕಿಂಡಿಯಿಂದಲಿ ಬಂದನು-ನಾರಿಯರ |ಮಂಡೆಗೆ ಚೆಂಡಿಟ್ಟನು-ತೋರಿಸುವರ |ಕಂಡು ತಾ ನಗುತಿದ್ದನು-ಕೌತುಕವೆಂದು |ದಿಂಡೆಯರುಮಡುವಿನೊಳಗೆ ಹಾಕಿ ನಡೆದರು2ಗೆಳೆಯರೆಲ್ಲರು ಕೂಡಿ ಚೆಂಡು ತಾ ಎನಲಾಗಿ |ಗುಳುಗುಳಿಸುವ ವಿಷದ ಯಮುನಾ ತಡಿಯಲಿನಿಂದು|ಬಳಿಯ ವೃಕ್ಷದ ಮೇಲೇರಿ ತಾ ಧುಮುಕಲು |ಕಳಕಳಿಸುವ ಗೋಪಾಲರಳುತಿರೆ |ಇಳಿದ ನೀರೊಳಗಾಗಲು-ನಾಗರಫಣಿ|ತುಳಿದು ಕುಣಿಕುಣಿಯುತಿರಲು-ಬ್ರಹ್ಮನು ಬಂದು |ತಿಳಿದು ಮದ್ದಲೆ ಹೊಯ್ಯಲು-ಇಂದ್ರಾದ್ಯರು |ನಲಿದು ತಾಳವನಿಟ್ಟು ಕೊಂಡಾಡುತಿದ್ದರು 3ಮಗನ ಸುದ್ದಿಯಕೇಳಿಹರಿದು ಬಂದಳುಗೋಪಿ|ನಗರದ ಹೊರಗಾಗಿ ಬಾಯ ನಾದದಿಂದ |ವಿಗಡೆಯರು ಬಿಟ್ಟ ಮಂಡೆಯ ಜುಂಜು ಕೆದರುತ |ತೆಗೆದು ಮಣ್ಣನೆ ತೂರಿ ಕುಳಿತಲ್ಲಿಂದಲೆ ನಮ್ಮ-|ನ್ನಗಲಿ ಹೋಗುವರೆ ಹೀಗೆ-ರಂಗ ನಮ್ಮ |ಮೊಗವ ನೋಡುವುದೆಂದಿಗೆ-ನೋಡಿದ ಕಣ್ಣ |ತೆಗೆದು ಕೀಳುವೆನಿಂದಿಗೆ-ಪಡೆದ ಪೊಟ್ಟೆ |ದಗದಗಿಸಲು ಕೊಟ್ಟು ಮುನಿಯದೆ ಬಾ ಬೇಗ 4ಏನನೆಂಬೆನು ಕೃಷ್ಣ ನಿನ್ನ ಕಾಣದೆ ಪುರದ |ಮಾನಿನಿಯರು ಬೆರಗಾಗಿ ಬೀಳುತ ಕರುವ |ಕಾಣದಿರೆತ್ತಿಗೆ ಕರುವನು ಬಿಡುವರು |ಆ ನಾಸಿಕದ ಮೂಗುತಿ ಕಿವಿಗಿಡುವರು |ಧೇನುಮೇವನೆ ತೊರೆದುವು-ಗೋವುಗಳನ್ಯ-|ರಾಮನೆಗೋಡಿದುವು-ವತ್ಯಗಳೆಲ್ಲ |ಮೌನದಿ ಮೊಲೆ ತೊರೆದುವು ಕೃಷ್ಣಯ್ಯನ |ವೇಣುನಾದದ ಧ್ವನಿ ಕೇಳದೆ ಮೆಚ್ಚವು 5ದ್ವಾರಕಿ ಕೃಷ್ಣ ನೀ ಬಾಯೆಂದು ಕರೆವೆನೊ |ತೋರುವ ಸಮಪಾದ ವಿಠಲನೆಂಬೆನೊ |ಶ್ರೀರಮಣ ವೆಂಕಟನೆಂದು ಒದರುವೆನೊ |ಶ್ರೀರಂಗಶಯನನೆಂದೆನಲ್ಲದೆ ನಿನ್ನ |ಚೋರ-ಜಾರನೆಂದೆನೆ-ಹದ್ದಿನ ಮೇಲೆ |ಏರಿ ತಿರುಗುವನೆಂದೆನೆ-ಬೆಣ್ಣೆಯ ಕದ್ದು |ಸೂರೆ ಮಾಡುವನೆಂದೆನೆ-ಕೃಷ್ಣಯ್ಯ ನೀ |ಬಾರಯ್ಯ ಬಾರದಿದ್ದರೆ ಪ್ರಾಣ ನೀಗುವೆ 6ಕಣ್ಣೆತ್ತಿ ನೋಡಿದನೆಂದೆನೆ ಕಡೆಗೋಲ |ಬೆನ್ನಲಿ ಪಿಡಿದನೆಂದೆನೆ ಹಲ್ಲಳನೂರಿ |ಮಣ್ಣ ಕಚ್ಚಲು ಬಾಯ ತೆರೆಯುವನೆಂದೆನೆ |ಮಣ್ಣ ಬೇಡಲು ನಾ ಕೊಡಲಾರೆನೆಂದೆನೆ |ಎನ್ನ ಕುತ್ತಿಗೆ ಕೊಯ್ವರೆ-ಮಾತೆಯ ಮಾತು |ಮನ್ನಿಸಿ ವನಕೆ ಪೋಪರೆ-ಬಲಭದ್ರ |ಅಣ್ಣನಿಗೆ ಮುಖವ ತೋರೆ-ಕೃಷ್ಣಯ್ಯ ನೀ |ಸಣ್ಣವನೆನ್ನದೆ ಹರಿಯ ಕೊಂಡಾಡಿದೆ 7ಎಂದ ಮಾತನು ಕೇಳುವಾ ಸಮಯ ನಾಗಿಣಿ-|ವೃಂದವೆಲ್ಲವು ತಮ್ಮ ಕಂಠಭೂಷಣರಾಗಿ |ಅಂದದ ಮೇಲುದ ಸುತ್ತಿಕೊಂಡಿರೆ ಅರ-|ವಿಂದನಾಭಾಚ್ಯತ ಕೇಶವಮುರಹರ|ಮಂದರಧರಹರಿಯೆ-ನಿನಗೆ ನಾವು |ಮಂದಾಕಿನಿಯ ಸರಿಯೆ-ಮಾಂಗಲ್ಯದ |ಚೆಂದ ಕಾಯೈ ದೊರೆಯೆ-ಹರಿಯ ಕೃಪೆ-|ಯಿಂದ ಕರೆದು ನಮ್ಮ ಕಾಯಬೇಕೆಂದರು 8ಇಂತಿಂತು ಸ್ತವನವ ಮಾಡೆ ಕಾಳಿಂಗನ |ಕಾಂತೆಯರ ಸ್ತೋತ್ರಕ್ಕೆ ಮೆಚ್ಚಿ ನಾಗನ ಬಿಟ್ಟು |ಕಂತುಕ ಸಹಿತ ಪಂಕಜನಾಳವನೆ ಕೊಂಡು |ಸಂತಸದಲಿ ಇಕ್ಕುತ-ಶೋಕದಿ ನೀವು |ಭ್ರಾಂತಿ ಬಿಡಿರಿ ಎನ್ನುತ-ಬರಿದೆ ಎಲ್ಲ |ಸಂತೆ ಕೂಡಿದೆ ಎನ್ನುತ-ನಾ ಹಸಿದೆನು |ಪಂತಿಭೋಜನ ಕೊಂಡು ನಡೆಯಿರಿ ಮನೆಗೆಂದ 9ಸುರರಿಗೆಸುಧೆಮುಂಚೆ ಉಣಿಸಿದ ಪರಬ್ರಹ್ಮ |ಪರಿಪರಿ ಭೋಜನ ಮಾಳ್ಪ ಕಂಡುವರಾರು? |ಸುರದುಂದುಭಿ ಪೊಡೆದು ಪಾರಿಜಾತದ ಮಳೆ |ಸುರಿಸಿದರಾಕ್ಷಣಕೆ-ಬ್ರಹ್ಮನು ತಾನು |ತೆರಳಿದನಾಶ್ರಮಕೆ-ಪುರಂದರವಿಠಲ |ತಿರುಗಿದ ನಿಜಧಾಮಕೆ-ಕೃಷ್ಣನ ಲೀಲೆ |ಗುರುದಯೆಯಲಿ ನಮ್ಮ ಹರಿಯ ಕೊಂಡಾಡಿದೆ 10
--------------
ಪುರಂದರದಾಸರು
ಚೌತಿಯ ದಿವಸರಂಭೆ : ವಾರಿಜಗಂಧಿನಿ ನೋಡಿತ್ತ ಶ್ರುತಿ-ಮೌರಿರಭಸದಿ ಲಕ್ಷ್ಮೀಕಾಂತಭೂರಿವೈಭವದಿ ಪೊರಟನೆತ್ತ ಯಾವಕಾರಣವೆಂದು ಪೇಳೆಲೆ ಸತ್ಯ 1ದೇವರ ಪೂಜೆಗೋಸುಗ ಬಂದಪಾವನಮೂರ್ತಿಯಾದುದರಿಂದ ನಮ್ಮಕಾವನು ಕರುಣಾಕಟಾಕ್ಷದಿಂದ 2ರಂಭೆ : ನೂತನವಾಯ್ತೆ ಕೇಳಲೆ ಜಾಣೆ ಜಗ-ನ್ನಾಥನಿಗ್ಯಾವ ಕುಲವು ಕಾಣೆರೀತಿಯನರುಹಬೇಕೆಲೆ ಬಾಲೆ ಸರ್ವಚೇತನಾತ್ಮನ ನಾಟಕದ ಲೀಲೆ 3ಕೊಂಡಕಾರಣದಿ ಪೂಜೆಗಳೆಲ್ಲಕಂಡು ಪೊಗಳಲು ಕವಿಗು ಸಲ್ಲ ಇನ್ನುಪುಂಡರೀಕಾಕ್ಷನವನೆ ಬಲ್ಲ 4ರಂಭೆ : ರಾಜವದನೆ ಪೂಜೆಯಾದ ಮೇಲೆ ಅಂ-ಭೋಜನಾಭನು ತಾಕ್ಷ್ರ್ಯನ ಮೇಲೆರಾಜಬೀದಿಯೊಳ್ ಬರುವದೇನೆ ಇಂಥಸೋಜಿಗವೇನು ಪೇಳೆಲೆ ಜಾಣೆ 5ಬಟೆನಿಸ್ಸಾಳರವದಿ ಬರುವ ಚಂದಸಟೆಯಲ್ಲ ಕೇಳು ಕರುಣದಿಂದ ನಮ್ಮಕಟಕರಕ್ಷಿಸಲು ಬರುವ ಗೋವಿಂದ6ರಂಭೆ : ಬಳಿಕ ಪಲ್ಲಂಕಿಯೇರಿದ ಕಾಣೆ ಜನ-ಗಲಭೆಗಳಿಂದ ಪೋಗುವದೇನೆನಲವಿನಿಂದಲಿ ಪೊರಟೆಲ್ಲಿಗೆನೆ ಮಹಾ-ಜಲಜನಾಭನ ಮಹಿಮೆಯ ಜಾಣೆ 7ದೀಪವೆಂದೆನುತ ಭಕ್ತರು ಮುದದಿಶ್ರೀಪರಮಾತ್ಮ ವಿಲಾಸದಿ ಭಕ್ತ-ರಾಪೇಕ್ಷೆಗಳನು ಸಲ್ಲಿಸುವಂದದಿ 8ರಂಭೆ : ಸೋಮಾರ್ಕಜ್ಯೋತಿಹಿಲಾಲುಗಳು ಜನ-ಸ್ತೋಮಜೇನುಂಡೆಬಿರುಸುಮಿಗಿಲುವ್ಯೋಮಕೇಶಗಳ ಪೊಗಳತೀರದು ಸರಿಭೂಮಿಯೊಳ್ ಕಾಣೆನೆಂಬಂತಾದುದು 9ಅಮಮ ಇದೇನೆ ಇಂದಿನ ಲೀಲೆ ಜನ-ರಮರಿಕೊಂಡಿಹರೇನಿದು ಬಾಲೆಸಮವಿಲ್ಲ ಇಂತೀ ವೈಭೋಗಕ್ಕೆಲೆ ನ-ಮ್ಮಮರಾವತಿಗಿಂತಧಿಕ ಬಾಲೆ 10ಲಾರ್ತಿ ಹರಣವಾಗ್ವದು ಜಾಣೆಕೀರ್ತಿತರಂಗಮಾಗಿಹುದೇನೆ ಶೇಷ-ತೀರ್ಥವೆಂದರೆ ಕೇಳಿದು ಪ್ರವೀಣೆ 11ರಂಭೆ :ಏಸುದೊಡ್ಡಿತೆ ಕೇಳಲೆ ಬಾಲೆ ಅನಂ-ತಾಸನದಂತೆ ಮರೆವುದಲ್ಲೇನಾಸಿರ ದೀಪಸೋಪಾನದಲೆ ಮಹಾ-ಶೇಷನಿಹನು ಮಧ್ಯದೊಳಿಲ್ಲೇ 12ಊರ್ವಶಿ :ಕರುಣಾಕರನು ನಮ್ಮೆಲ್ಲರನುನಿತ್ಯಪೊರೆಯಲೋಸುಗ ಬಂದನು ತಾನುಸುರುಚಿರ ಮಂಟಪವೇರಿದನು ಭೂ-ಸುರರಿಂದ ವೇದಘೋಷವ ಕೇಳ್ವನು 13ದೃಷ್ಟಾಂತವಾಗಿ ಪೇಳುವದೇನೆ ಬ್ರಹ್ಮಸೃಷ್ಟಿಗೆ ಪೊಸತಾಗಿಹುದು ಕಾಣೆಕಟ್ಟಿಸಿದವನು ಪುಣ್ಯೋತ್ತಮನು ಪರ-ಮೇಷ್ಠಿ ಜನಕನ ಕೃಪೆಯಿನ್ನೇನು 14ಭಜಕರ ಮುಖದಿಂದೆಲ್ಲ ತಾನು ಭೂ-ಭುಜನಾಗಿ ನಡೆಸುವನಿದನೆಲ್ಲನುನಿಜವಾಗಿನಿತ್ಯಸಾಕಾರವನು ತೋರಿತ್ರಿಜಗವನೆಲ್ಲ ರಕ್ಷಿಸುತಿಹನು 15ರಂಭೆ : ಬಿಡದೆ ಇನ್ನೊಂದು ಕೇಳುವೆ ನಾರಿ ಜಗ-ದೊಡೆಯ ಪೊರಡುವ ಕಾಲದಿ ಭಾರಿಬೆಡಿಖಂಬ ಧ್ವನಿಯು ಇದೇನೆ ಪೇಳೆ ಇಂಥಕಡು ಬೆಡಗನು ಉಸುರೆಲೆ ಬಾಲೆ 16ಊರ್ವಶಿ: ಜನರು ಎಲ್ಯಾದರಂಜಿದÀ ಭಯವ ತಮ್ಮತನುವಿಗೆ ಸೋಂಕಲದನೆಲ್ಲವಮನದಿ ಝುಮ್ಮೆನಿಸಿ ಬೆಚ್ಚೋಡಿಸುವ ಖಂಬ-ಧ್ವನಿಯೆಸಗಿದರು ಕೇಳಿದರಂದವ 17ತಿರುಗಿಯೇರಿದನು ಪಲ್ಲಂಕಿಯಲ್ಲಿ ಸುತ್ತು-ಬರುವನು ವೇದನಿನಾದದಲಿವರರತ್ನ ಖಚಿತ ಮಂಟಪದಲ್ಲಿ ನಿಂತನಿರವದಿ ಸುಖದಾಯಕನಲ್ಲಿ 18ಶರಣರ ಪಾಪ ಮನಕೆ ತಾರ ದುಡಿದವರಭೇರಿಗೆರೆವ ಬಿಸಿನೀರವರಲಕ್ಷ್ಮೀನಾರಾಯಣಧೀರ ಸುರು-ಚಿರ ಸಿಂಹಾಸನವೇರಿದ ವೀರ 19
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಛೀ ಛೀ ಛೀ ಛೀಕಂಡೆಯ ಮನವೇ ಇಂಥ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ನೀಚ ವೃತ್ತಿಗಳನು ಬಿಡುಕಂಡೆಯಮನವೆಪ.ಕಿವಿಗೊಟ್ಟು ಮಧುರನಾದಕೆ ಹುಲ್ಲೆಯುರವದ ಬಲೆಗೆ ಸಿಕ್ಕಿಬಿದ್ದುದನರಿಯನವಮೋಹನಾಂಗಿಯರ ಕೋಕಿಲಾಪದಸವಿ ಕೇಳದಾತನ ಕಥೆ ಕೇಳು ಮನವೇ 1ನಲಿದೆದ್ದುಕರಿ ಎಳೆಯ ತೃಣ ಸ್ಪರುಷನಕಾಗಿಕುಳಿಗೆ ಬಿದ್ದಿರುವುದ ಕಂಡು ಕಂಡರಿಯನಳಿನಾಕ್ಷಿಯರಂಗಸಂಗವ ಮೆಟ್ಟಿ ಕೆಡದೆ ಶ್ರೀಲಲನೇಶನಂಘ್ರಿಯಾನಪಿವೇಕೋ ಮನವೇ 2ಗಾಣದ ತುದಿಯ ಮಾಂಸವ ಮೆಲುವ ಮತ್ಸ್ಯವುಪ್ರಾಣವ ಬಿಡುವುದ ಕಂಡು ಕಂಡರಿಯ ?ಮಾನಿನಿಯ ಬಯಸದೆ ಶ್ರೀ ನಾರಾಯಣನಧ್ಯಾನಾಮೃತವನು ಸವಿದುಣ್ಣೋ ಮನವೆ 3ಪಣ್ಣೆಂದು ಭ್ರಮಿಸಿ ಪತಂಗ ದೀಪದಿ ಬಿದ್ದುಕಣ್ಣುಗೆಡುವುದನು ಕಂಡು ಕಂಡರಿಯ ?ಬಣ್ಣರ ಬಾಲೆಯರ ರೂಪಕೆ ಮರುಳಾಗಿಮಣ್ಣು ತಿನ್ನದೆ ಮಾರನಯ್ಯನ ನೆನೆ ಮನವೆ 4ಅಳಿ ಪರಿಮಳನಾಗಿ ಕಮಲದೊಳಗೆ ಸಿಲುಕಿಅಳಿದು ಹೋಹುದನು ಕಂಡ ಕಂಡರಿಯ ?ಬಳಲದೆ ವರಪುರಂದರ ವಿಠಲನಂಘ್ರಿಯತುಳಸಿ ನಿರ್ಮಾಲ್ಯವಾಫ್ರಾಣಿಸು ಮನವೆ 5
--------------
ಪುರಂದರದಾಸರು
ಜನನಿರುದ್ರಾಣಿ ರಕ್ಷಿಸು ಎನ್ನಜಗದೀಶನ ರಾಣಿ ಪ.ವನಜಭವಸುರಮುನಿಕುಲಾರ್ಚಿತೆಕನಕವರ್ಣಶರೀರೆ ಕಮಲಾ-ನನೆ ಕರುಣಾಸಾಗರೆ ನಮಜ್ಜನ-ಮನಮುದಾಕರೆ ಮಾನಿತೋದ್ಧರೆ ಅ.ಪ.ಆದಿಕೃತಾಯುಗದಿ ಪ್ರತಿಷ್ಠಿತ-ಳಾದೆ ಧರಾತಳದಿಆದಿತೇಯರ ಬಾಧಿಸುವ ದಿತಿ-ಜಾಧಮರ ಭೇದಿಸಿದೆ ಸಜ್ಜನ-ರಾದವರ ಮನ್ನಿಸಿದೆ ತ್ರೈಜಗ-ದಾದಿಮಾಯೆ ವಿನೋದರೂಪಿಣಿ 1ಖಂಡ ಪರಶುಪ್ರೀತೆ ನಿಖಿಲಬ್ರ-ಹ್ಮಾಂಡೋದರಭರಿತೆಚಂಡಮುಂಡವೇತಂಡದಳನೋ-ದ್ದಂಡಸಿಂಹೆ ಅಖಂಡಲಾರ್ಚಿತೆಪಾಂಡುತನುಜಕೋದಂಡವಿತರಣೆಚಂಡಿಕೇ ಕರದಂಡಲೋಚನಿ 2ಸಿಂಧೂರಸಮಯಾನೆ ಸರಸ ಗುಣ-ವೃಂದೆ ಕೋಕಿಲಗಾನೆಸುಂದರಾಂಗಿ ಮೃಗೇಂದ್ರವಾಹಿನಿಚಂದ್ರಚೂಡಮನೋಜೆÕ ಸತತಾ-ನಂದಪೂರ್ಣೆ ಮುನೀಂದ್ರನುತೆ ಸುಮ-ಗಂಧಿ ಗೌರಿ ಶಿವೇ ಭವಾನಿ 3ಲಂಬೋದರಮಾತೆ ಲಲಿತ ಜಗ-ದಂಬಿಕೆ ಗಿರಿಜಾತೆಕಂಬುಕಂಠಿ ಕಾದಂಬನೀಕು-ರುಂಬಜಿತಧಮ್ಮಿಲ್ಲೆ ತವ ಪಾ-ದಾಂಬುಜವ ನಾ ನಂಬಿದೆನು ಎನ-ಗಿಂಬು ಪಾಲಿಸೆ ಶುಂಭಮರ್ದಿನಿ 4ಘನವೇಣುಪುರವಾಸೆ ಸರ್ವಾರ್ಥದಾ-ಯಿನಿ ತ್ರೈಜಗದೀಶೆಸನಕನುತೆ ಶ್ರೀಲಕ್ಷುಮಿನಾರಾ-ಯಣಭಗಿನಿ ಶ್ರೀಮಹಿಷಮರ್ದಿನಿಮನಮಥಾಮಿತರೂಪೆ ಕಾತ್ಯಾ-ಯಿನಿ ನಿರಾಮಯೆ ಮಂಜುಭಾಷಿಣಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜನನೀ ತ್ರಿಜಗತಿ ಜನಾರ್ದನೀ ಜನನೀಜಯತು ಶ್ರೀಪದ್ಮಾವತೀ ಪ.ಗುಣಗಣಾರ್ಣವೆ ವಿಶ್ವಪೂಜಿತಜನನಮರಣವಿದೂರೆ ಪದ್ಮಾಸನೆಸನಾಥೆ ಸದಾ ಸುಮಂಗಲೆಘನಗಗನಭೂಪಾಲನಂದಿನಿ ಅ.ಪ.ಶ್ರೀನಿವಾಸನ ರಾಣಿ ಸರ್ವಾರ್ಥ ನಿ-ದಾನಾಂಬುಜಪಾಣಿಭಾನುಕೋಟಿಸಮಾನ ತೇಜೆ ಸ-ದಾನುರಾಗಪ್ರದಾನೆ ವಿಬುಧ-ಶ್ರೇಣಿನುತೆ ಮಹದಾದಿಮಾಯಾ-ಮಾನಿ ಮಾಧವಮನವಿಲಾಸಿನಿ 1ಸುಂದರಿ ಸುಮನೋಹರಿ ಸುಜ್ಞಾನಾ-ನಂದೆ ಸಿಂಧುಕುವರಿಚಂದ್ರವದನೆ ಚರಾಚರಾತ್ಮಕಿವಂದನೀಯೆ ಪರೇಶಪರಮಾ-ನಂದರೂಪೆ ಸನತ್ಸುಜಾತ ಸ-ನಂದನಾದಿಮುನೀಂದ್ರವಂದಿತೆ 2ಅಂಬೆ ಶ್ರೀಹರಿಪ್ರೀತೆಶಂಭುಸಂಭಾವಿತೆ ತ್ರಿಲೋಕಾ-ರಂಭಸೂತ್ರೆ ಪವಿತ್ರೆ ವಿಶ್ವಕು-ಟುಂಬೆ ಕಮಲಯನೇತ್ರೆ ಸಾಧ್ವೀಕ-ದಂಬಮಸ್ತಕಮಣಿಪ್ರಭಾಶಿನಿ 3ಪದ್ಮ ಸರೋವಾಸಿನೀ ಪಾವನಹೃತ್ಪದ್ಮನಿತ್ಯಭಾಸಿನಿಪದ್ಮನವಕ್ರೀಡಾವಿಲಾಸಿನಿ ಮ-ಹನ್ಮನೋಧ್ಯಾನಾಧಿರೂಢೆ ಸು-ಪದ್ಮಹಸ್ತೆ ನಮಸ್ತೆ ಪಾವನೆಪದ್ಮನಾಭನರಮಣಿ ಕರುಣಿ 4ವರಲಕ್ಷ್ಮೀವಾರಾಯಣಿ ಕಲ್ಯಾಣಿ ಶ್ರೀ-ಕರೆ ಕಾಳಾಹಿವೇಣಿಧರೆಯೊಳುತ್ತಮ ಕಾರ್ಕಳದಿ ಸು-ಸ್ಥಿರನಿವಸವ ಗೈದೆ ಕರುಣಾ-ಶರಧಿಭಕ್ತರ ಪ್ರಾರ್ಥನೆಯ ಸ್ವೀ-ಕರಿಸಿ ಪೊರೆವಿಷ್ಟಾರ್ಥದಾಯಿನಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯ ಜಯ ಶ್ರೀ ಮಹಾಲಿಂಗ ಗೋಪತುರಂಗಜಯ ಜಯ ಶ್ರೀ ಮಹಾಲಿಂಗ ಪ.ಜಯರಹಿತಾಚ್ಯುತಪ್ರಿಯ ಬುಧಾರ್ಚಿತದಯಾಸಾಗರ ಭಸಿತಾಂಗನಯನತ್ರಯ ನಮಿತಾಮರಸಂಘಾ-ಮಯಹರ ಗಂಗೋತ್ತುಮಾಂಗ 1ಭೂತೇಶಭೂರಿಭೂತಹೃದಿಸ್ಥಿತಭೂಷಣೀಕೃತಭುಜಂಗಪೂತಾತ್ಮ ಪರಮಜ್ಞಾನತರಂಗಪಾತಕತಿಮಿರಪತಂಗ 2ಲಂಬೋದರಗುಹಪ್ರಮುಖಪ್ರಮಥನಿಕು-ರುಂಬಾಶ್ರಿತ ಜಿತಸಂಗಗಂಭೀರಗುಮಕದಂಬೋತ್ತುಂಗ-ಸಂಭೃತ ಹಸ್ತಕುರಂಗ 3ಸೋಮಶೇಖರ ಮಹಾಮಹಿಮ ವಿಜಿತ-ಕಾಮ ಕಲಿಕಲುಷಭಂಗರಾಮನಾಮ ಸ್ಮರಣಾಂತರಂಗವಾಮಾಂಕಾಸ್ಥಿತ ಪಿಂಗ 4ದೇವ ಲಕ್ಷ್ಮೀನಾರಾಯಣ ಪದರಾ-ಜೀವನಿರತ ವನಭೃಂಗಪಾವಂಜಾಖ್ಯ ಗಿರೀಶ ಶುಭಾಂಗಕೇವಲ ಸದಯಾಪಾಂಗ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯ ಜಯತು ಹನುಮಂತ ಪವಿತ ಸಿಖ ಸಹಜಾತಜಯತು ಕಪಿರಾಜ ಯುವರಾಜ ಯತಿರಾಜ ಜಯತು ಪ.ಸುರರಿಗುತ್ತಮ ಜಗದಾಭರಣ ಶಿರೋಮಣಿ ಜಯತುಪರಮಅದ್ಭುತಚರಿತ ಸುವಟು ಜಯತುಧರಜೆಶೋಧಕ ನಿಶಾಚರಪುರದಹಕ ಜಯತುಜಯತು ವೈರಾಗಿ ಮಹಭೋಗಿ ಶುಭಯೋಗಿ ಜಯತು 1ಸುರರಿಪುಮಥÀನ ರಾಮಕಾರ್ಯಧುರಂಧರ ಜಯತುಚಿರಪ್ಲವಗ ಭವರೋಗಭೇಷಜ ಜಯತುಕರಿರಕರ್ಣ ದಶಮುಖಾಂಗ ಗಿರಿವರಕುಲಿಶ ಜಯತುಜಯತು ಅಕ್ಷಹರ್ತಾ ಕ್ರತುಕರ್ತಸುಖತೀರ್ಥಜಯತು2ತ್ರಿಕೋಟಿ ಪವನಾಖ್ಯರೂಪ ಪ್ರಕಟಾಪ್ರಕಟ ಜಯತುಅಕಳಂಕಾಮಿತರೂಪ ಮುಖ್ಯೇಶ ಜಯತುಶ್ರೀಕರ ಪ್ರಸನ್ವೆಂಕಟ ರಘುವೀರಾನುಮತ ಮತ ಜಯತುಜಯತು ಪರಸಿದ್ಧ ಬಕಮರ್ದ ಗುರುಮಧ್ವ ಜಯತು 3
--------------
ಪ್ರಸನ್ನವೆಂಕಟದಾಸರು
ಜಯ ಜಯವೆಂದರುಸುರರುಇಂಥ ವೈಭವದಾಟ ಕಾಣುತಲೆಅಮರರುಪ.ಗಂಧದ ಓಕುಳಿಯನ್ನೇಕಲೆಸಿತಂದು ಮಂದಗಮನೆಯರೆಲ್ಲ ಜೀಕುಳಿತುಂಬಿಇಂದಿರೇಶನ ಮ್ಯಾಲೆ ಸುರಿಸಿಆನಂದ ದಿಂದಲೆ ಕೈ ಹೊಡೆದು ಚಪ್ಪಳಿಸಿ 1ಕೇಶರ ದೋಕುಳಿಯತುಂಬಿಸರ್ವೇಶನೀ ಚಿಮ್ಮುವ ಕುಚಗಳ ಅಪ್ಪಿಕೊಂಬೆಈ ಸುಖ ನೀ ಎಲ್ಲೆ ಕಾಂಬೆಆಭಾಸ ಮಾಡಲುಅದು ನೀ ಒಪ್ಪಿಕೊಂಬೆ 2ಬತ್ತಲೆ ಜಲವ ಪೊಕ್ಕಿಹರುಸೀರೆ ಎತ್ತಿಕೊಂಡ್ಹೋಗಿ ಪುಗಡೆನ್ಹಾಕುವರುಎತ್ತಿಕರವಜೋಡಿಸುವರುಮರವಸುತ್ತಿ ಚಪ್ಪಾಳೆಯನಿಕ್ಕಿ ಸಿದಿಯಲ್ಲೊ ನೀನು 3ಚಂದದ ಸೀರೆಯನುಟ್ಟುಗಂಧ ಕಸ್ತೂರಿ ಕುಂಕುಮ ಕೇದಗೆಯನಿಟ್ಟುಆನಂದವ ಬಟ್ಟರು ಅಷ್ಟುಗೋವಿಂದನಂಘ್ರಿ ಕಮಲದಿ ಮನಸಿಟ್ಟು 4ಅವರಒಲ್ಲಭರೆಲ್ಲ ಸೊಲ್ಲುಗಳೆತ್ತದ್ಹಾಂಗೆಚಲ್ವನ ಪ್ರಾರ್ಥಿಸಿದರೆಲ್ಲಹೀಂಗೆರಮಿನಲ್ಲನ ದಯದಿಂದ ಇದ್ದರು ಮೊದಲಿನ್ಹಾಂಗೆ 5
--------------
ಗಲಗಲಿಅವ್ವನವರು
ಜಯ ಪಾಂಡುರಂಗ ಹೋ ಜಲದ ನಿಭಾಂಗ ಹೋ|ಜಗದಂತರಂಗ ಹೋ ಜಯ ಪಾಂಡುರಂಗ ಹೋ ಪನೀಲಭೂಧರವಾಸಕೌಸ್ತುಭಭೂಷ ರಮೆಯಾಧೀಶಸುಮನಸ|ಪಾಲ ಗುಣಗಂಭೀರ ನವನೀತಚೋರ ಕುಜನಕುಠಾರ| ನರಹರಿ ||ಫಾಲಲೋಚನಬಂಧು ದೈತ್ಯನ ಕೊಂದು ವೇದವ ತಂದು ದ್ರುಹಿಣಗೆ |ಮೇಲು ಶರುಣುದಲಿತ್ತೆ,ಮಂದರಪೊತ್ತೆ ಸುಂದರ ಮೂರ್ತಿ 1ನಿಗಮವಂದಿತ ರಾಮಹರಿಪೂರ್ಣ ಕಾಮ ಸದ್ಗುಣಧಾಮ, ವಾಮನ |ಮಗನ ಮೂಗಿಲಿ ಪುಟ್ಟಿ, ಹೇಮನ ಕುಟ್ಟಿ,ಅವನಿತಂದಿಟ್ಟಿ, ಈರೇಳು ||ಜಗದಿ ಪೂಜಿತನಾದಿ ಕೈಟಭ ಭೇದಿ ಇಭಪನ ಕಾಯ್ದಿ, ಪ್ರಣತರ |ಅಘವನೋಡಿಸುತಿಪ್ಪ ಹಲಾಯುಧತಲ್ಪಮನ್ಮಥನಪ್ಪ 2ವೇದ ವಿಸ್ತರ ಮಾಡ್ಡೀ, ದಾನವ ಬೇಡ್ಡೀ, ದನುಜನಿಗ್ಯೋಡ್ಡೀ, ಕುರುಕುಲ |ಸೂದನ, ಕಿರೀಟ ಸೂತ, ಪವಮಾನ ತಾತ, ದುರ್ಬಲನಾಥ ಎನ್ನನು ||ಆದರದಿ ಕೈಪಿಡಿಯೋ, ದುರಿತವ ತಡೆಯೊ, ದುರ್ಮತಿ ಕಡಿಯೊ,ಅಗಣಿತ|ಮೋದಪ್ರಾಣೇಶ ವಿಠಲ, ನರಮೃಗ, ನಿಟಿಲನೇತ್ರ, ಅಕುಟಲ3
--------------
ಪ್ರಾಣೇಶದಾಸರು
ಜಯ ಶಂಕರ ಪರಮೇಶ ದಿಗಂಬರಜಯ ಗಿರಿಜೆಯವರ|ಸಾಂಬನಮೋಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಜಯಕಿಂಕರಪರಿಪಾಲಪರಾತ್ಪರಜಯ ಭವಭಯಹರ ಶಂಭು ನಮೋ1ವಾಸವಸುತ ಫಣಿಭೂಷಣ ನತಜನ-ಕ್ಲೇಶನಾಶ ಜಗದೀಶ ನಮೋ |ಕೇಶವ ಹಿತಭೂತೇಶಜಯತು ಕೈ-ಲಾಸ ವಾಸ ಅಘನಾಶ ನಮೋ2ದಂಡಧರನ ಶಿರಖಂಡನಶಶಿಧರರುಂಡಮಾಲ ಪ್ರಚಂಡ ನಮೋ |ಖಂಡ ಪರಶುಬ್ರಹ್ಮಾಂಡದೊಡೆಯ ಗೋ-ವಿಂದವಿನುತಚಂಡೇಶ ನಮೋ3
--------------
ಗೋವಿಂದದಾಸ
ಜಯ ಶ್ರೀಧರಾರಮಣ ಜಯ ಕೌಸ್ತುಭಾಭರಣ ಪಜಯ ದುರಿತನಿಧಿತರಣಜಯ ಪದ್ಮಚರಣಾ ಜಯಜಯಾ ಅ.ಪಜಯಪುಂಡರೀಕಾಕ್ಷಜಯ ತ್ರಿಭುವನಾಧ್ಯಕ್ಷಜಯ ಪಾಂಡುಸುತ ಪಕ್ಷ ಜಯ ಜಗದ್ರಕ್ಷಾ ಜಯಜಯಾ 1ಜಯ ಲೋಕಭಯನಾಶ ಜಯ ದಳಿತಭವಪಾಶಜಯ ವೇಂಕಟಾದ್ರೀಶ ಜಯಸುಪ್ರಕಾಶ ಜಯಜಯಾ 2ಜಯ ತುಲಸೀದಳದಾಮಜಯ ಶೇಷಗಿರಿಧಾಮಜಯದೈತ್ಯರಿಪುಭೀಮ ಜಯಕೃಷ್ಣರಾಮಾ ಜಯಜಯಾ 3ಜಯ ಕೋಟಿರವಿಭಾಸ ಜಯ ಸಾತ್ವಿಕೋಲ್ಲಾಸಜಯ ಜಯ ಭವದ್ದಾಸ ಜಯ ಶ್ರೀನಿವಾಸಾ ಜಯ ಜಯಾ4
--------------
ತುಳಸೀರಾಮದಾಸರು
ಜಯತು ಜಯತು ಜಯತು ಶ್ರೀ ಜಗ ಪ್ರೀತೆಜಯತು ಹರಿಹರ ಮಾತೆಜಯತು ಸುರಮುನಿಪೂತೆಭುವನವಿಖ್ಯಾತೆಪಜಡಿ ಜಡಿಜಡಿದುಕೋಪದಲಿ ಮಧು ಕೈಟಭರಿಬ್ಬರನುಘುಡು ಘುಡು ಘುಡಿಸು ಸಹಸ್ರ ಪಂಚಬುದ ಕಾದಿತಡೆ ತಡೆ ತಡೆಯೆ ಸುದರ್ಶನಾಸ್ತ್ರದಿಂದವರ ಶಿರವಕಡಿ ಕಡಿ ಕಡಿದೆ ಬಗಳಾಂಬ ಭಳಿರೆ ಜಗದಾಂಬ1ಒದ ಒದ ಒದರಿ ಭೋ ಎಂದು ಮಹಿಷಾಸುರನ ಬಲವಗದೆ ಗದೆಗದೆಯಿಂದವರ ಬೀಳಗೆಡಹಿಬೆದ ಬೆದ ಬೆದಕಿ ಸುಭಟಾಗ್ರಣಿಗಳೆಂಬುವರನ್ನೆಲ್ಲಸದೆ ಸದೆ ಸದೆದು ನೀಬಿಟ್ಟೆ ಅಖಿಲರಣದಿಟ್ಟೆ2ಭರ ಭರ ಭರದಿ ಬರಲು ಮಹಿಷಾಸುರನೆಂಬುವನತರಿ ತರಿ ತರಿದು ಅವನ ಸಾಹಸವ ಮುರಿದುಗರಗರಗರನೆ ಪಲ್ಗಳನೆ ಕೊರೆದು ಪದದಿಂದಲೊದ್ದೆಸರಿ ಸರಿ ಸರಿಯೆ ಶಾರದಾಂಬ ಭಳಿಕೆ ತ್ರಿಪುರಾಂಬ3ಖಣಿಖಣಿಖಣಿಲು ಖಣಿಲೆಂದುಶುಂಭನಿಶುಂಭರನುದಣಿ ದಣಿ ದಣಿಸಿ ಕಾಳಗದಿ ಬೇಸರಿಸಿ ಬಳಿಕಕಣೆಕಣೆಕಣೆಯಿಂದಲವರ ತಲೆಗಳನೆ ತರಿಸಿದೆ ನಿನಗೆಎಣೆ ಎಣೆ ಎಣೆಯಾರು ದಿನಮಣಿಯೆ ಕಣಿಯೆ4ಇಂತು ರಕ್ಕಸರನೆಲ್ಲ ಮರ್ದನವ ಮಾಡಿಸಂತಸದಿ ದಿವಿಜರಿಗೆ ಅಭಯವಿತ್ತೆಚಿಂತಾಯಕ ಚಿದಾನಂದಾವಧೂತನಿಗೆಪಂಥದಾಸತಿ ಎನಿಪ ಪ್ರೀತೆ ವಿಖ್ಯಾತೆ ಜಯತು ಜಯತು5
--------------
ಚಿದಾನಂದ ಅವಧೂತರು
ಜಯಪತ್ರವ ತಾರೆ ಜಾಣೆಮುಂದಕೆ ಬಾರೆವೈಭವದಿ ಆಣಿಯಿಟ್ಟುಓಡಿದ್ಯಾತಕೆ ನೀರೆ ಪಬಿಂಕಬಿಡಿಸಿಕೊಂಡೆವೆಂದುದ್ರೌಪತಿ ಶಂಕಿಸಿಕೊಂಡೆ ನೀರೆಪಂಕಜಾಕ್ಷಿ ರುಕ್ಮಿಣಿ ಮುಂದೆಕಿಂಕರಳೆನ್ನು ಬಾರೆ ನೀರೆ 1ಸೋಗೆಗಣ್ಣಿನ ಭದ್ರೆ ನೀನುಆಣಿಇಟ್ಟ ಬಗೆಯೆ ನಮಗೆನಾಗವೇಣಿ ರುಕ್ಮಿಣಿ ಮುಂದೆಮೂಗಿನ ಗೆರೆಯ ತೆಗಿಯೆ 2ಇಟ್ಟ ಆಣೆತಪ್ಪಿಗೆಕೈಯ ಕಟ್ಟಿಕೊಂಡು ಬಾರೆಕೊಟ್ಟು ಬಿರುದು ಸೋತೆವೆಂದುಅಟ್ಟಾಸದಲಿ ಸಾರೆ 3ಪಂಥ ಕಳೆದುಕೊಂಡಿರೆಂದುಎಂಥ ನಗುತಾರಲ್ಲಇಂಥಮಾನಭಂಗವಾಗಿ ನಿಂತಿರ್ಯಾತಕೆ ಇಲ್ಲೆನೀವು ಕುಳಿತಿರ್ಯಾತಕೆ ಇಲ್ಲೆ 4ಸೋತೆವಮ್ಮ ನಿಮಗೆರಮಿನಾಥನರಸಿಗೆ ಎಂದುರುಕ್ಮಿಣಿಗೆ ನೀತಿಲೆಜಯಪತ್ರಕೊಟ್ಟು ದ್ರೌಪತಿ ಎರಗಿದಳು 5
--------------
ಗಲಗಲಿಅವ್ವನವರು
ಜಯಭೋ ಜಯಭೋ ಜಯ ವೆಂಕಟೇಶ ಪ್ರಭೊಜಯಕರ್ತಾ ಭಯಹರ್ತಾಭಯದಾಯಕ ಮೂರ್ತೆ ಪ.ಫಣಿಗಿರಿವರ ಫಣಮಂದಿರ ಪ್ರಣತಮನೋಹರಘನಸದ್ಗುಣಗಣಪೂರ್ಣಘನಶಾಮಲವರ್ಣಮನ್ಮಾನಸ ಮುನಿತಾಪಸ ಮನೋಮಾನಸ ಹಂಸದನುಸುತಹರ ಧನುಸಂಹರ ದಿನಮಣೀಶ ರುಚಿರ 1ವನಜಾಕ್ಷಾವನಿಜಾಂತಕ ವನಜಾಸನ ಜನಕಕನಕಾಕ್ಷಹ ಕನಕಾಲಯ ಕನಕಸ್ತ್ರೀಪ್ರಿಯವನಭ್ರಮಣಾವನಿರಮಣ ವಿನತಾತ್ಮಜಗಮನಅನಿಮಿತ್ತಜ ಅನಸೂಯಜ ಅನಿಮಿಷೇಂದ್ರಾನುಜ 2ಅರಿಧರಧರ ಅರಿಪರಿಹರ ಅರುಣಾಂಬರಧರಚಿರಮಣಿ ರುಚಿರಾಭರಣಾನುಚರಸುರತರುವೀರಸುರಪರಮಾಪ್ತನೆ ಸಾಸಿರ ಕ್ರೀಡಾಶ್ಚರ್ಯಗಾರಕಲಿಕಲುಷಹರ ಕರುಣಾಕರ ಪ್ರಸನ್ವೆಂಕಟೇಶ್ವರ 3
--------------
ಪ್ರಸನ್ನವೆಂಕಟದಾಸರು