ಒಟ್ಟು 30086 ಕಡೆಗಳಲ್ಲಿ , 138 ದಾಸರು , 9126 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಂ ಜಯ ಮಂಗಳಂ ರಾಮ ಸಜ್ಜನರ ಪ್ರೇಮ ಮಂಗಳಂ ಲೋಕಾಭಿರಘುರಾಮ ಪಟ್ಟಾಭಿರಾಮ ಪ ಮಂಗಳಂ ಶ್ರೀ ದಶರಥಾತ್ಮಜಗೆ ಮಂಗಳಂ ಅಯೋಧ್ಯವಾಸಿಗೆ ಮಂಗಳಂ ಜನಕಜಾಮಾತೆಗೆ ಮಂಗಳಂ ಶ್ರೀ ರಾಮಚಂದ್ರಗೆ ಅ.ಪ ದೇವದೇವೋತ್ತಮ ವೈಕುಂಠದೊಳಗೆ ಶ್ರೀ ಭೂಮೇರಿಂದ ಸೇವೆಗಳ ಕೈಗೊಳ್ಳುತ ಮಲಗಿರಲು ದೇವಋಷಿ ಬ್ರಹ್ಮೇಂದ್ರಾದಿಗಳು ಸಹಿತ ಶ್ರೀಧರನ ಸ್ತುತಿಸುತ ರಾವಣಾಸುರನುಪಟಳ ವರ್ಣಿಸಲು ಸಂತೈಸಿ ಅವರನು ಭೂಮಿಪತಿ ದಶರಥನ ಪ್ರೇಮ ಕುಮಾರನಾಗುದಿಸುತಲಯೋಧ್ಯದಿ ಪ್ರೇಮ ತೋರುತ ಮೆರೆದವಗೆ ಜಯ1 ದಶರಥನ ಸುತರಾಗಿ ಬೆಳೆಯುತಲಿ ಕೌಶಿಕನÀಯಜ್ಞವ ಕುಶಲದಲಿ ರಕ್ಷಿಸುತ ಹರುಷದಲಿ ಶಶಿಮುಖಿಯ ಕೂಡುತ ಕುಶಲದಲಿ ವನವಾಸ ಚರಿಸುತಲಿ ದಶಶಿರನು ಜಾನಕಿಯ ಕದಿಯಲು ಶಶಿಮುಖಿಯನರಸುತಲಿ ವನವನ ವಸುಧಿಪತಿ ಕಪಿಗಳ ಕಳುಹಿ ಸತಿ ಕುಶಲ ತಿಳಿಯುತ ನಲಿದವಗೆ ಜಯ 2 ಬಂದ ಕಪಿ ಕಟಕವನೆ ನೋಡುತ್ತ ಸಾಗರಕೆ ಸೇತುವೆ ಒಂದೇ ನಿಮಿಷದಿ ರಚಿಸಿ ಶೀಘ್ರದಲಿ ಮಂದಮತಿ ರಾಕ್ಷಸರ ವಧಿಸುತಲಿ ಅಂದಣವ ಕಳುಹಿ ಮಂದಗಮನೆಯ ಕರೆಸಿ ಬೇಗದಲಿ ಬಂದ ರಾಮನು ಎಂದು ಮಾರುತಿ ಮುಂದೆ ಭರತಗೆ ಕುಶಲ ತಿಳಿಸಲು ತಂದೆ ಕಮಲನಾಥ ವಿಠಲ ಮುಂದೆ ಪ್ರಜೆಗಳ ಪೊರೆದವಗೆ ಜಯ 3
--------------
ನಿಡಗುರುಕಿ ಜೀವೂಬಾಯಿ
ಮಂಗಳಂ ನರಶಿಂಗ ಮೂರುತಿಗೆ ಲಕ್ಷ್ಮೀಸಮೇತಗೆ ವಿಹಂಗ ವಾಹನಗೆ ಅಂಗಜನಪಿತಗೆ ಅಂಗುಟದಿ ಗಂಗೆಯನು ಪಡೆದವಗೆ ಮಾ ತಂಗವರದಗೆ ಪ ವಾರಿಜಾಸನ ಮುಖ್ಯಸುರನುತಗೆ ಉ- ದಾರ ಚರಿತಗೆ ಸೇರಿದವರಘದೂರ ಮಾಡುವಗೆ ಕಾರ್ಪರ ಋಷಿಗೆ ಘೋರ ತಪಸಿಗೆ ಒಲಿದು ಬಂದವಗೆ ಅಶ್ವತ್ಥ ರೂಪಗೆ 1 ಕುಕ್ಷಿಯೊಳು ಜಗವಿಟ್ಟು ರಕ್ಷಿಪಗೆ ಕರುಣಾಕ- ಟಾಕ್ಷಗೆ ವಕ್ಷದೊಳು ಶ್ರೀ ವತ್ಸಲಾಂಛನಗೆ ದ್ರೌಪದಿ ದೇವಿಗೆ ಅಕ್ಷಯಾಂಬರವಿತ್ತು ಸಲಹಿದಗೆ ಲಕ್ಷ್ಮೀನೃಸಿಂಹಗೆ 2 ಕೃಷ್ಣವೇಣಿ ತಟವಿರಾಜಿತಗೆ ಸೃಷ್ಟ್ಯಾದಿ ಕರ್ತಗೆ ಶ್ರೇಷ್ಠತರು ಪಿಪ್ಪಲದಿ ಪ್ರಕಟಿತಗೆ ದುಷ್ಟನಿಗ್ರಹಗೆ ದ್ಯಷ್ಟ ಬಾಹುಗಳಿಂದ ಭಜಕರಿಗೆ ಇಷ್ಟಾರ್ಥಗರಿವಗೆ 3 ಹಿಂದೆ ಗೋರೂಪದಲಿ ಬಂದವಗೆ ಬಹುಸುಂದರಾಂಗಗೆ ವಂದಿಸುವೆ ಶೀ ವೇಂಕಟೇಶನಿಗೆ ಮಂದರೋದ್ಧರಗೆ ಭವ ಬಂಧ ಬಿಡಿಸುವಗೆ ಆನಂದವೀವಗೆ 4 ತರುಳ ಪ್ರಹ್ಲಾದನ್ನ ಕಾಯ್ದವಗೆ ಸುರಸಾರ್ವಭೌಮಗೆ ಶರಣು ಜನ ಮಂದಾರನೆನಿಸುವಗೆ ಭೂಸುರರ ಪೊರಿವಗೆ ಧರಣಿಯೊಳು ಕಾರ್ಪರ ಸುಮಂದಿರಗೆ ಶಿರಿನಾರಶಿಂಹಗೆ 5
--------------
ಕಾರ್ಪರ ನರಹರಿದಾಸರು
ಮಂಗಳಂ ನರಹರಿಗೆ ಜಯ ಜಯ ಮಂಗಳ ಮುರಹರಗೆ ಪ ಮಂಗಳ ಮದನಗೋಪಾಲ ಶ್ರೀಕೃಷ್ಣಗೆ ಮಂಗಳ ಮಾಧವಗೆ ಅ.ಪ ವಸುದೇವ ಸುತನಾಗಿ ಗೋಕುಲದೊಳು ಮೊಸರು ಬೆಣ್ಣೆಯ ಕದ್ದು ಶಶಿಮುಖಿಯರ ಕೂಡಿ ನಿಶಿರಾತ್ರಿಯಲಿ ರಾಸ ಕ್ರೀಡೆಯಾಡಿದ ಹರಿಗೆ 1 ನಳಿನಮುಖಿಯರೆಲ್ಲ ನೀರೊಳಗಾಡಿ ಬಳಲಿ ಮೇಲಕೆ ಬರಲು ಲಲನೆಯರ ಕಂಡು ಪರಿಹಾಸ್ಯ ಮಾಡಿದ ಚೆಲುವ ಗೋಪಾಲಕೃಷ್ಣಗೆ2 ಬೆಟ್ಟವ ಬೆರಳಿನಲಿ ಎತ್ತಿದ ಭಕ್ತವತ್ಸಲ ಹರಿಗೆ ಮಿತ್ರೆಯರಿಗೆ ಮೊಸರು ಬುತ್ತಿಯ ಭುಕ್ತಿಯನೆವದಲಿ ಮುಕ್ತಿ ತೋರಿದ ದೊರೆಗೆ 3 ಪುಟ್ಟಬಾಲಕನಾಗಿ ಗೋವ್ಗಳನೆಲ್ಲ ಅಟ್ಟಿಯ ಮನೆಗೆ ಪೋಗಿ ದುಷ್ಟ ಕಾಳಿಂಗನ ಮೆಟ್ಟಿ ತುಳಿದ ಹರಿಗೆ ರತ್ನದಾರತಿ ಎತ್ತಿರೆ 4 ಕೊಂದು ಕಂಸನÀ ಬೇಗ ಮಧುರೆಲಿ ನಿಂತ ಮಹಾನುಭಾವಗೆ ತಂದೆ ಶ್ರೀ ಕಮಲನಾಭವಿಠ್ಠಲಗೆ ಕುಂದಣದಾರತಿಯ 5
--------------
ನಿಡಗುರುಕಿ ಜೀವೂಬಾಯಿ
ಮಂಗಳ ಪಾಡಿರೆ ಭಾವೆಯರೇ ರಂಗನ ರಮಣಿಯ ಭಾವಿಸಿರೇ ಪ ಅಂಗಜಜನನಿಯ ಕೃಪೆಯಿ ಸ- ತ್ಸಂಗತಿ ಪಡೆದೆವು ನಿಶ್ಚಯಂಅ.ಪ ಭೋಗವತೀಪತಿಶಾಯಿಯೊಳು ಅನು ರಾಗಗೊಂಡಿಹ ದೇವಿಯಿವಳ್ ಭಾಗ್ಯಲಕ್ಷ್ಮಿಯ ಪಾದದೊಳು ಬಾಗುತ ಶಿರವನು ರಾಗದೊಳು 1 ವೇದಸಾರದ ವಾಕ್ಯದಲಿ ಮಾಧವಿಯಂ ಸ್ತುತಿ ಮಾಡುತಲಿ ಭೇದವೆಣಿಸದೆ ಸಲಹೆನ್ನುತಲಿ ಮಾಧವನಂ ಕೊಂಡಾಡುತಲಿ 2 ತಾಪತ್ರಯಗಳ ಪರಿಹರಿಸಿ ಆಪತ್ತುಗಳಿಂದುದ್ಧರಿಸಿ ಕಾಪಾಡುವಳಿವಳೆಂದೆನಿಸಿ ಶ್ರೀಪದ್ಮಿನಿಯನು ಸಂಸ್ಮರಿಸಿ 3 ಶರಣಾಗತ ಸಂರಕ್ಷಕಿಗೆ ವರಶೇಷಗಿರಿನಿಲಯನಿಗೆ ಕರುಣಾರೂಪಿಣಿ ಪದ್ಮಿನಿಗೆ ಕರಗಳ ಮುಗಿಯುತೆ ಮಾಧವಿಗೆ 4
--------------
ನಂಜನಗೂಡು ತಿರುಮಲಾಂಬಾ
ಮಂಗಳಂ ಮಂಗಳಂ | ಜಯ | ಮಂಗಳಶ್ರೀ ಶ್ರೀನಿವಾಸನರ್ಧಾಂಗಿ ಪ ಭೃಗುಕಾಲಿಲೊದಿಯಲು | ಅಗಲಿ ಬಂದಳು ಎಂಬೋ ||ಬಗೆ ತೋರಿ ಮೋಹಿಸಿ ಇಗಡ ಜನರ ನಾ || ಮಂಗಳಂ 1 ಪರಮ ಧಾರ್ಮಿಕನಾದ | ವರನಾರಾಯಣ ಋಷಿ ಗೊರವಿತ್ತು ನಡೆತಂದೆ | ಮೆರೆವ ಸನ್ನತಿಗೆ || ಮಂಗಳಂ2 ಕೋಲಾಸುರನ ಕೊಂದು | ಪಾಲಿಸಿ ಪುರವನ್ನು |ಶೀಲೆ ಚಂದ್ರಾದೇವಿ ಆಳಿದಗೊಲಿದೆ || ಮಂಗಳಂ 3 ಪಾತಕ ಕಳದೆ || ಮಂಗಳಂ 4 ಗುರುಪ್ರಾಣೇಶ ವಿಠಲಾ | ಇರುವ ನೀನಿದ್ದಲ್ಲಿಎರವಿಲ್ಲೀ ಮಾತಿಗೆ ಸುರರ ಸಮ್ಮತವೂ || ಮಂಗಳಂ 5
--------------
ಗುರುಪ್ರಾಣೇಶವಿಠಲರು
ಮಂಗಳಂ ಮಂಗಳಂ ಪ ಮಂಗಳಂ ಮಂಗಳಂ | ಪರಿಮಾಳಾರ್ಯರಿಗೆ ತುಂಗೆ ತೀರಗ ಯತಿ | ಪುಂಗರೀಗೇ ಅ.ಪ. ವೈರಿ ಭೃಂಗ | ಸುಧೀಂದ್ರ ಚರಣಾಬ್ಜಮಧುಕರರೆನಿಸುತ್ತ | ಸುಧೆಯ ಸೌರಭವ |ಬುಧ ಜನ ಕುಣಿಸುತ್ತ | ವಿಧ ವಿಧ ಮೆರೆಯುವತ್ರಿದಶ ಭೂರುಹವೆನಿಸಿ | ಸದಯದಿ ಪೊರೆವಗೇ 1 ಮಧ್ವ ಮತಾಬ್ಧಿಗೆ | ಶುದ್ಧ ಪೂರ್ಣೇಂದ್ವಿಗೆಅದ್ವೈತ ಕಲಿಮಲ | ದಾವಾಗ್ನಿಗೇ |ಸದ್ವೈಷ್ಣ್ವ ಕುಮುದೇಂದು | ವಿದ್ವಾಂಸನತ ಪಾದಶೌದ್ಧೋದನಿಯ ಮತ | ವಿಧ್ವಂಸಕಗೇ 2 ಕರದೆಡೆ ಬರುವಂಥ | ಪರಮ ದಯಾಳುಗೆಧರೆಯೊಳೆಲ್ಲೆಲ್ಲೂ | ಮೆರೆಯುತಿಹಗೇ |ಶರಣರ ಹೃತ್ಕಮಲ | ವರ ಮಿತ್ರನೆಂದೆನಿಸಿಗುರು ಗೋವಿಂದ ವಿಠಲ | ಚರಣಾಬ್ಜಧೇನಿಪಗೇ 3
--------------
ಗುರುಗೋವಿಂದವಿಠಲರು
ಮಂಗಳ ಮಣಿಮಲ ಲಂಘಿತಾಂಗಳ ಕಪಿಸಾಂಗ ವಂದಿತ ಭೂಷಿತಾಂಗ ಮಾರುತಿಗೆ ಪ ವ್ಯಾಳ್ಯದಂದದಿ ಪುಚ್ಛಮ್ಯಾಲೆ ತೂಗುತಲೆಂಕಿಲೆಂಕಿರಾಮಗ ಸೀತಾಲಂಕನಿತ್ತವಗೆ 1 ಹೂಂಕರಿಸುತ ಬಾಲ ಬೆಂಕಿಯಿಂದಲ್ಲೆ ಸುಟ್ಟಏಳುಚಿರಿಪ ಸಣ್ಣ ಬಾಲ ಹನುಮನಿಗೆ 2 ದಾಶರಥಿಯ ಮುಂದೆ ವಾಸಮಾಡುತ ಕೆಂಪುರುಷ ಬಾಡದಿ ಸಮ ಘೋಷನಿತ್ತವಗೆಇಂದಿರೇಶನರ್ಚಿಪಗೆ ದ್ರೌಪದೀಶ ವಂದಿತಗೆ 3
--------------
ಇಂದಿರೇಶರು
ಮಂಗಳಂ ಮಹಿಜಾತಗೆ ಇಂಗಡಲ ಮಂದಿರಗೆ ಪ ಬಂಗಾರದೊಡಲ ಮುಖ್ಯ ಪದಂಗಳನೆಲ್ಲ ಕಂಗಳ ಭ್ರೂಭಂಗಾದಿ ಕರುಣಿಪ ದೇವಿಗೆ 1 ರಂಗು ಮಾಣಿಕದಾಭರಣಂಗಳನಿಟ್ಟು ಡಿಂಗರೀಕರಂತರಂಗದಿ ನಲಿಯುವ ದೇವಿಗೆ 2 ರಂಗೇಶವಿಠಲನರ್ಧಾಂಗಿಯೆನಿಸಿಕೊಂಡು ಹಿಂಗದೆ ಭಜಿಪರ್ಗೆ ಶುಭಗಳ ನೀಡುವ ದೇವಿಗೆ 3
--------------
ರಂಗೇಶವಿಠಲದಾಸರು
ಮಂಗಳ ಮಾರುತಿ ನಂದನಿಗೆಮಂಗಳ ಭಾರತಿ ಸುಂದರಗೆ ಪ ಮಂಗಳ ಮಾಧವನನು ದಿನ ಪಾಡುವಾನಂದತೀರ್ಥ ಸುರವಂದ್ಯನಿಗೆಅ.ಪ. ತರುಣಿ ರೂಪದಿ ಮೋಹಿಸುತಗರಡಿ ಮನೆಯೊಳು ಬಾರೆನುತದುರುಳನ ಮುಂದಲೆಗುರುಳನು ಪಿಡಿದುಧರೆಯೊಳು ಕೆಡಹಿದಿ ನೀ ತ್ವರಿತಾ 1 ಎಲ್ಲರು ಬಂದರು ಕೀಚಕರುಫುಲ್ಲಾಕ್ಷಿಯ ಚಿತಿಕ್ಹಾಕಿದರುವಲ್ಲಭೆ ಚೀರುವ ಕೇಳುತಕ್ಷುಲ್ಲಕರ ಹೆಡೆ ಖಂಡಿಸಿ ನೂರಾರು 2 ಸೈಂಧವ ವೇಷದಿಯನು ಪಿಡಿಯೆಸುಂದರಿ ನಿನ್ನಗೆ ಅಲ್ಪರಿಯೆತಂದು ಅವನ ಅವಳಿಂದ ವಧಿಸಿದೆಇಂದಿರೇಶನ ಪ್ರಿಯ ಸುರದೊರೆಯೆ 3
--------------
ಇಂದಿರೇಶರು
ಮಂಗಳ ಮುಖ್ಯಪ್ರಾಣೇಶಗೆ ಜಯ ಮಂಗಳ ಮೂಜಗವಂದಿತಗೆ ಪ. ಅಂಜನೆತನಯಂಗೆ ಮಾಪ್ರತಿ ಮಹಿಮಂಗೆ ಕಂಜನಾಭನ ಕಾರ್ಯದನುಕೂಲಗೆ ರಂಜಿಪ ಹನುಮಗೆ ಮಂಗಳ 1 ಆ ಮಹಗಡಲ ಲಂಘಿಸಿ ಹೋಗಿ ಲಂಕೆಯ ಧಮಧುಮ ಮಾಡಿ ವನವ ಕಿತ್ತು ರಾಮ ಮುದ್ರಿಕೆ ಜಾನಕಿಗೆ ತಂದಿತ್ತÀ ಹೇಮಾದ್ರಿ ಹನುಮಗೆ ಮಂಗಳ 2 ಸುತ್ತ ಸಾಗರ ಮಧÀ್ಯದಲ್ಲಿ ಲಂಕೆಯ ಮುತ್ತಿ ವನಜಾಕ್ಷಿಯ ಮುಂದೆ ಬಂದು ಹತ್ತು ತಲೆಯ ರಾವಣನೈಶ್ವರ್ಯವನಳಿದಗೆ ಖ್ಯಾತ ಹನುಮಗೆ ಮಂಗಳ 3 ಜಾತಿ ಬಂಧುಗಳ ಒಡಗೊಂಡು ಸಮುದ್ರದ ಸೇತುವ ಕಟ್ಟಿ ಸಾಹಸದಿಂದಲಿ ಸೀತಾಪತಿಯ ಬಲವ ನಡೆಸಿದ ಪ್ರ ಖ್ಯಾತ ಹನುಮಗೆ ಮಂಗಳ 4 ಈ ಕಾಡಕಪಿಯಲ್ಲ ನಿಮ್ಮ ಸೇವಕನೆಂದು ಬೇಡವೆಂದು ಸೀತೆಯ ಭಯಬಿಡಿಸಿ ಚೂಡಾರತ್ನ ಶ್ರೀ ರಾಮರಿಗಿತ್ತ ಬಂಟ ಕೊಂಡಾಡಿಸಿಕೊಂಬಗೆ ಮಂಗಳ 5 ಬಲ್ಲಿದ ರಾವಣೇಶ್ವರನ ಮಾರ್ಬಲವನು ಕಲ್ಲು ಮರದೊಳಿಟ್ಟು ಕೆಡಹಿದಗೆ ಜಲ್ಲುಕ ದೈತ್ಯರಿಗೆಲ್ಲ ಎದೆಯ ಶೂಲವಗಿದ ಧಲ್ಲ ಹನುಮಗೆ ಮಂಗಳ 6 ಬಲು ದೈತ್ಯರನೆಲ್ಲ ಗೆಲಿದು ಮುದ್ದೇನಹಳ್ಳಿಲಿ ಸ್ಥಿರವಾಗಿ ನಿಂದು ಭಕ್ತರ ಹೊರೆವ ಹೆಳವನಕಟ್ಟೆ ವೆಂಕಟೇಶನ ದೂತ ಚಲದಂಗ ಹನುಮಗೆ ಮಂಗಳ 7
--------------
ಹೆಳವನಕಟ್ಟೆ ಗಿರಿಯಮ್ಮ
ಮಂಗಳ ಮೂರುತಿ ಅದಿಕೇಶವ ನಾರಾಯಣ ಮಾಧವ ಗೋವಿಂದ ವಿಷ್ಣು ಮಧುಸೂದನ ಧ್ರುವ ನೇಮದಿಂದುದಿಸಿದೆ ವಾಮನ ತ್ರಿವಿಕ್ರಮ ಸಾಮಗಾಯನ ಪ್ರಿಯಾನಂದೋಬ್ರಹ್ಮ ದಾಮೋದರ ಸಂಕರುಷಣಾದೆ ಪುರುಷೋತ್ತಮ ವಾಸುದೇವ ನಮ್ಮ 1 ಸದ್ಗುಣ ಬೀರುವ ಹೃಷೀಕೇಶ ಶ್ರೀಧರ ಪೂರ್ಣ ಪ್ರದ್ಯುಮ್ನ ಅನಿರುದ್ಧಾನಂದ ಗುಣ ಅಚ್ಯುತ ಜನಾರ್ದನ ಸಿದ್ಧ ಸಿದ್ಧಕ ಪ್ರಿಯಾನಂದ ಘನ 2 ಅಧೋಕ್ಷಜ ನೃಸಿಂಹ ಉಪೇಂದ್ರ ಶ್ರೀಹರಿ ಕೃಷ್ಣ ಹೃದಯದಲಿ ಕೊಂಡಾಡುದನುದಿನ ಸದಾ ಪ್ರಸನ್ನ ಮಹಿಪತಿಗೀ ನಾಮ ಗುಣ ಸದೋದಿತಾದನು ಭಾನುಕೋಟಿಪೂರ್ಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಂ ರಾಮಕೃಷ್ಣಾರ್ಯ ದಿವ್ಯಮಂಗಳ'ಗ್ರಹ ಸದ್ಗುರುವರ್ಯ ಪವಾದಿ ಜನರ ಮನೋಬಾಧೆಯ ಬಿಡಿಸುತಬೋಧೆಯ ಬಲಿಸಿ ಬ್ರಹ್ಮಾನಂದದಹಾದಿಯ ತೋರಿಸಿಯಾದರಿಸಿಯೆ ಕಾಯ್ವಬೋಧ'ಗ್ರಹ ನಿನ್ನ ಪಾದಪದ್ಮಗಳಿಗೆ 1ಭೂರಿ ಜನ್ಮಗಳೆತ್ತಿ ಸೇರಲು ತಡಿಯನುದಾರಿಗಾಣದೆ ಭವ ವಾರಿಧಿಯಹಾರೈಸಿದವರಿಗೆ ತೋರಿ ಜ್ಞಾನದ ನಾವೆಯೇರಿಸಿ ತಡಿಗೈದಿಸಿದ ಮೂರ್ತಿಗೆ 2ಕರುಣದಿಂ ಧರಣಿಯೊಳವತರಿಸಿಯೆ ಭಕ್ತಪರಿಪಾಲನಾರ್ಥದಿ ಯುಗಯುಗಕೂನರಹರಿ ರಾಮ ಶ್ರೀಕೃಷ್ಣ ರಾಮಕೃಷ್ಣಾರ್ಯತಿರುಪತಿ ವೆಂಕಟರಮಣನಿಗೆ3ಓಂ ಲೀಲಾಮಾನುಷ 'ಗ್ರಹಾಯ ನಮಃ
--------------
ತಿಮ್ಮಪ್ಪದಾಸರು
ಮಂಗಳಂ ಶುಭಮಂಗಳಂ ಪ ಅಂಜನೆ ಗರ್ಭದಿಂ ಬಂದವಗೆ ಕಂಜಾಕ್ಷಿ ವಾರ್ತೆಯ ತಂದವಗೆ ಸಂಜೀವನ ತಂದು ರಾಮನ ರಂಜನೆಗೈದ ಮುಖ್ಯಪ್ರಾಣಗೆ 1 ಕುಂತಿಯ ಕಂದನೆಂದೆನಿಸಿದವಗೆ ದಂತಿ ಸಾಸಿರ ಬಲವಂತನೆಗೆ ಕಂತು ಪಿತನ ಮಂತ್ರಿಯೆನಿಸಿ ಕುರುಕುಲ ಅಂತಕನಾದ ಭೀಮಸೇನಗೆ 2 ನಡುಮನೆ ವೇದವತಿ ವರಸುತಗೆ ಉಡುದಾರ ಉಪವೀತ ತೊರೆದವಗೆ ಸಿರಿ ರಂಗೇಶವಿಠಲನ ಬಿಡದೆ ಪೂಜಿಪ ಮಧ್ವರಾಯಗೆ 3
--------------
ರಂಗೇಶವಿಠಲದಾಸರು
ಮಂಗಳಂ ಶ್ರೀ ಗುರುವರ್ಯರಿಗೆ | ಮಂಗಳಾಂಗರಿಗೆ ಮಂಗಳಂ ಶ್ರೀ ಗುರುವರ್ಯರಿಗೆ ಪ. ರಂಗನಾಥನ ಪದ ಸರೋಜಕೆ ಭೃಂಗರೆನಿಸಿ ಮೆರೆಯುವರಿಗೆ ಅ.ಪ. ತಂದೆ ಮುದ್ದುಮೋಹನರೆಂ ತೆಂದು ಮೆರೆಯುತ ಮಂದಮತಿಯ ಬಿಡಿಸಿ ಎನ್ನ ತಂದೆಯಂತೆ ಪೊರೆಯುವರಿಗೆ 1 ನಾಗಶಯನ ಹರಿಯ ಭಜಿಪ ಭೋಗಿವರರಿಗೆ ಭಾಗವತರ ಸಂಘದೊಳಗೆ ಯೋಗಿಯಾಗಿ ಚರಿಸುವರಿಗೆ 2 ಪರಮಪ್ರಿಯರಾಗಿ ಹರಿಗೆ ಪರಮಪ್ರಿಯರೆಂದು ಕರೆಸಿಕೊಳುತ ನರಹರಿಯ ಚರಣ ಮನದಿ ಸ್ಮರಿಸುವರಿಗೆ 3 ಕರ್ಮಗಳನೆ ಕಡಿದು ಜ್ಞಾನ ಧರ್ಮಮಾರ್ಗದಿ ಧರ್ಮತತ್ವ ಬೋಧಿಸಿ ಅ- ಧರ್ಮಗಳನೆ ಬಿಡಿಸುವರಿಗೆ4 ಗೋಪಾಲಕೃಷ್ಣವಿಠ್ಠಲನ ರೂಪ ತೋರುತ ಪಾಪಗಳನೆ ತರಿದು ಭವ ಕೂಪದಿಂದ ಪೊರೆಯುವರಿಗೆ 5
--------------
ಅಂಬಾಬಾಯಿ
ಮಂಗಳಂ ಶ್ರೀ ನರಸಿಂಹಗೆ ಜಯಮಂಗಳಂ ಪ್ರಹ್ಲಾದವರನಿಗೆ ಪ. ತರಳನು ಮೊರೆಯಿಡೆ ಭರದಿಕಂಬದಿಂಬಂದು ದುರುಳನ ಸದೆವಡೆದು ಕರುಳನು ಧರಿಸಿ ಸಿರಿಯೊಡಗೂಡಿದ ನರಕೇಸರಿಗೇ 1 ತ್ರಿಜಗತ್ಪಿತ ನಿನ್ನ ನಿಜಪಾದಾಂಬುಜವ ಭಜಿಸುವೆ ನೋಡೆನ್ನ ಗಜರಾಜವರದ ಸುಜನರ ಸಂಗತಿದೊರೆವಂತೆ ಕರುಣಿಸು ಗಜಾರಣ್ಯಕ್ಷೇತ್ರ ವಿರಾಜಿತನೆ 2 ದೋಷ ನಿವಾರಣ ಶೇಷಗಿರಿಯಲ್ಲಿ ಕೇಶವ ಕಮಲಾಕ್ಷ ಶ್ರೀ ಶ್ರೀನಿವಾಸನಿಗೆ 3
--------------
ನಂಜನಗೂಡು ತಿರುಮಲಾಂಬಾ