ಒಟ್ಟು 12057 ಕಡೆಗಳಲ್ಲಿ , 135 ದಾಸರು , 6158 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಭಜನೆ ಮಾಡುವಗೆ ಅನಂತಫಲವೂ ಹರಿ ಭಜನೆ ಇಲ್ಲದವಗೆ ಅತಿಘೋರ ತಮವೂ ಪ ಭವರೋಗ ಸಂಚಿತವು ಪರಿ ಪರಿಯ ನರಕಾದಿ ಬಂಧಕವು ಬಿಡದು 1 ಆ ರಾಮನಂಘ್ರಿಗಳ ಅರ್ತಿಯಲಿ ಅರ್ಚಿಸುವರಿ ಗಾರಾಮವಾದಂಥ ಸುಖಸೌಖ್ಯವು ಹೇರಾಮ ಎನದವಗೆ ಅತಿ ದು:ಖದಾರಿದ್ರ್ಯ ತೋರುವುದು ಅನುಗಾಲ ತಗಲಿ ಬಿಡದವೆಯಿನ್ನು 2 ವಿತರಣಾದಿ ಶ್ರೀ ಹೆನ್ನೆವಿಠ್ಠಲನ ಹೃದಯದಲಿ ಸತತಧ್ಯಾನವು ಮಾಡುವ ಸಾಧು ಜನರಾ ಪತಿತ ಪಾವನನಾದ ಪರಮಾತ್ಮ ಪಾಲಿಸೆ ಗತಿಯು ತೋರುವ ಇನ್ನು ಕರುಣದಲಿ ಹರಿಯು 3
--------------
ಹೆನ್ನೆರಂಗದಾಸರು
ಹರಿಯ ಚರಣ ನಿರುತ ಸ್ಮರಿಸಲೊ ಮೂಢ ಮನುಜ ನಿತ್ಯ ಪಾಡಿ ಭಜಿಸು ನರಕಭಯ ವಿಮುಕ್ತನಾಗೆಲೋ ಪ ಹಿಂಡುಬಳಗ ಕೂಡಿಹಾಕಿದಿ ಆಸಕ್ತನಾಗಿ ಬಂಡಿಹೊನ್ನು ಘಳಿಸಿ ಹೊಳಿದಿ ಬಗೆಬಗೆಯಲಿಂಡು ಬಂಡÀ ಬೆಳಸಿ ತುಂಡಗ್ವಾಣದಿ ತುಂಡಿನೇಗ ಜವನಭಟರು [?] ಬೆನ್ನ ಬಿಡವು 1 ಪಗಲು ಹರಟಿಯೊಳಗೆ ಪೋದಿತು ಆಯುಷ್ಯದೊಳಗೆ ಮಿಗಿಲು ರಾತ್ರಿ ವಿಷಯಗಳೆಯಿತು ಸುಗಂಧದ್ರವ್ಯ ಸೊಗಸಿನಿಂದ ಮೈಯ್ಯ ಮುಸುಕಿತು ಜಗದಿ ಘೂಳೆಯಂತೆ ಮೆರೆದಿ ಸೊಗಸಿನಂಗ ತೊಲಗಿತಲ್ಲಿ 2 ದುಷ್ಟತನಕೆ ದಾರಿ ಕೊಡದಿರು ಲೋಕದಲಿ ನೀನು ಭ್ರಷ್ಟನಾಗದೆ ತುಷ್ಟಿಯಿಂದಿರು ಕಷ್ಟಸುಖಗಳ್ಹರಿಗೆಯರ್ಪಿಸಿ ಸೃಷ್ಟಿಪರ ನರಸಿಂಹವಿಠಲನಷ್ಟ ವಿಧದಿ ಪೂಜೆಗೈದು ಇಷ್ಟ ಮುಕ್ತಿ ಸುಖ ಪಡೆಯೋ 3
--------------
ನರಸಿಂಹವಿಠಲರು
ಹರಿಯ ಪಟ್ಟದರಾಣಿ ನಿಮ್ಮ ಸಿರಿಚರಣಕ್ಕೆ ನಾ ಶರಣೆಂಬೆಧರಣಿ ಒರೆಸಮ್ಮ ದುರಿತಘಮ್ಮ ಹರಿಸುದಮ್ಮ ಪ. ಧನಧಾನ್ಯವಿತ್ತು ಮತ್ರ್ಯರ ಪೊರೆವೆ ಎಂದೆಂದುಮನೆಗಿಂಬುಕೊಟ್ಟು ರಕ್ಷಿಸಿದೆದಿನದಿನದಿ ಚರಣವಿಟ್ಟರೆ ನೊಂದುಕೊಳೆ ನಿನ್ನಗುಣಕೆ ಭೂದೇವಿ ಸರಿಗಾಣೆ ಸಕಲಮುನಿ-ಜನರ ಪೊರೆವುದು ನಿಮ್ಮಾಣೆ ನಾರಾಯಣ ಬಂದುನಿನ್ನ ಸಲಹುವ ಪ್ರವೀಣೆ1 ನಿತ್ಯ ಸಮಸ್ತಪರ್ವತಭಾರವ ನೀ ತಾಳ್ವೆಉತ್ತಮ ತ್ರಿವಿಕ್ರಮನ ರಥೋತ್ಸವವೆ ಮೊದಲಾದಪವಿತ್ರಾಂಕುರಾರ್ಪಣಕೆ ನೀ ಬಂದು ವರಿಯಸುತ್ತಿನ ಪವಳಿಯೊಳಗೆ ನಿಂದು ನಮಗೆಮುಕ್ತಿ ಪದವೀವುದಕೆ ಬಾ ಕೃಪಾಸಿಂಧು 2 ಕೊಂಡ ಸಿರಿ ಹಯವದನಹರಿಯಕರ ಕರಿಭೇರುಂಡ ಸಿರಿಗೆ ಸರಿಯೆನಿಸಿನಿನ್ನನ್ನು ಪೊರೆಯುತಲಿಹನು ಕಂಡಾ3
--------------
ವಾದಿರಾಜ
ಹರಿಯ ಮರೆದುದಕಿಂತ ಪಾಪವಿಲ್ಲಾ | ಹರಿ ಸ್ಮರಣೆಯಿಂದಧಿಕ ಪುಣ್ಯ ಮತ್ತೊಂದಿಲ್ಲಾ ಪ ಗೋಹತ್ಯ ಸುರಾಪಾನ ಕನಕತಸ್ಕರ ಸುಜನ- | ಕಪಟ ವ್ಯಸನ || ಬಾಹಿರವಾಗ್ ದ್ವೇಷ ಪರದಾರಗಮನ ವಿ- | ವಾಹಗಳ ಮಾಣಿಸುವ ಪಾಪಕಿಂತಲಿ ಮೇಲು 1 ಗಂಗಾನದಿಯಲ್ಲಿ ಸ್ನಾನ ಪ್ರಣವ ಆಚಮನ | ಹಿಂಗದಲೆ ಗಾಯತ್ರಿ ಮಂತ್ರ ಮೌನ || ಕರುಂಗ ದಾನ-ಧರ್ಮ ವೃತ್ತಿ ಕ್ಷೇತ್ರ ರತುನ | ಬಂಗಾರಯಿತ್ತಧಿಕ ಬಹಳ ಪುಣ್ಯ ಮೇಲು 2 ಹಾಸ್ಯ ವಿರೋಧ ಮದ ಮತ್ಸರ ಪರಕಾರ್ಯ | ದಾಸ್ಯದಲಿ ಕೆಡಿಸುವ ಶಠನ ಲೋಭಿ || ವೈಶ್ವ ದೇವಾಹಿತ ಅತಿಥಿಗಳ ನಿಂದ್ಯರ- | ಹಸ್ಯ ದೂರುವ ಬಲು ಪಾಪಕಿಂತಲು ಮೇಲು 3 ಭಾಗವತ ಪುರಾಣ | ಸಾರ್ಥತ್ಯವಾದ ಪ್ರವಚನ ಶಾಸ್ತ್ರ || ಸಾರ ಪ್ರಬಂಧ | ಅರ್ಥ ಪೇಳುವ ಬಲು ಪುಣ್ಯಕಿಂತಲಿ ಮೇಲು4 ಮಿತ್ರಘ್ನ್ಯಗರಳ ಪ್ರಯೋಗ ಗರ್ಭಿಣಿವಧ | ಗೋತ್ರಸಂಸರ್ಗ ಬಲು ಪ್ರಾಣಹಿಂಸಾ || ಕ್ಷೇತ್ರ ಅಪಹಾರ ಕ್ಷುದ್ರವಾಣಿ ನಿಜಕ- | ಳತ್ರದಿ ದ್ರೋಹ ಬಲು ಪಾಪಕಿಂತಲಿ ಮೇಲು 5 ಕರ್ಮ ಸರ್ವದಲ್ಲಿ ಗಯಾ ಶ್ರಾದ್ಧ | ಭೂಧರ ಸಮಾಗಮ ಸತ್ ಶ್ರªಣಾ || ಆದಿತ್ಯ ಚಂದ್ರ ಉಪರಾಗ ಪರ್ವಣಿ ನಾನಾ | ರಾಧನೆಯರೆ ಬಲು ಪುಣ್ಯಕಿಂತಲು ಮೇಲು 6 ಆವಾವ ಪಾಪ-ಪುಣ್ಯಗಳದವರ ಕಿಂಕರವು | ದೇವನ ನೆನಸಿದಂಥ ನೆನೆಯದಂಥ || ಜೀವರೊಳಗೊಬ್ಬ ಮುಕ್ತನು ಒಬ್ಬ ತಮಯೋಗ್ಯ | ಕೈವಲ್ಯಪತಿ ನಮ್ಮ ವಿಜಯವಿಠ್ಠಲ ಪ್ರೇರಕ7
--------------
ವಿಜಯದಾಸ
ಹರಿಯ ಸ್ಮರಣೆ ಮಾಡೋ | ನಿರಂತರ ಪ ತುದಿಗೆ ದುಃಖಾ ಅನೇಕಾ1 ಜ್ಞಾನವೆ ಮಖ್ಖರ [?] ದೇಕೋ 2 ಶ್ರೀದವಿಠ್ಠಲನೆ ಕೇಳೋ 3
--------------
ಶ್ರೀದವಿಠಲರು
ಹರಿಯನರಿಯದಿಹ್ಯ ನರಜನ್ಮಾವ್ಯಾಕೆ ಪರಬ್ರಹ್ಮವರಿಯದ ಬರೆ ಬ್ರಾಹ್ಮಣವ್ಯಾಕೆ ಧ್ರುವ ಹರಿಃ ಓಂ ತತ್ಸದಿತಿಯೆಂಬ ಶ್ರೀ ಹರಿ ವಾಕ್ಯವರಿಯದೆ ಬರುದೆ ಶ್ರೀ ಹರಿ ಶ್ರೀ ಹರಿಯಂದೊದರುವದ್ಯಾಕೆ 1 ಏಕಾಂಶೇನ ಸ್ಥಿತೋ ಜಗತ ಎಂಬ ವಾಕ್ಯವರಿಯದೆ ನಾಲ್ಕಾರು ವೇದಶಾಸ್ತ್ರವೋದಿ ಕೇಳುವದ್ಯಾಕೆ 2 ಎಂಬ ವಾಕ್ಯವರಿಯದೆ ಹದಿನೆಂಟು ಪುರಾಣ ಕೇಳಿ ಹೇಳುವದ್ಯಾಕೆ 3 ಮಮೈವಾಂಶೋ ಜೀವಲೋಕೇ ಜೀವಭೂತ:ಸನಾತನ ಎಂಬ ವಾಕ್ಯವರಿಯದೆ ನಾನಾವ್ರತಾಚಾರ ಸಂನ್ಯಾಸ ಕೈಕೊಂಬುದ್ಯಾಕೆ 4 ಸುದರ್ಶನ ಮಹಾಜ್ವಾಲಾ ಕೋಟಿಸೂರ್ಯ ಸಮಪ್ರಭ ಎಂಬ ವಾಕ್ಯವರಿಯದೆ ಸೀಳಿ ಸುದರ್ಶನಗಳ ಪೂಜಿ ಮಾಡುವದ್ಯಾಕೆ 5 ಮಂತ್ರ ಪ್ರಣಮ್ಯವರಿಯದೆ ತಂತ್ರ ಮಂತ್ರಸರವ್ಯಾಕೆ ಅಂತರಾತ್ಮವರಿಯದೆ ತರ್ಕಭೇದಗಳ್ಯಾಕೆ 6 ವಿಶ್ವವ್ಯಾಪಕ ಗುರು ಭಾಸ್ಕರಮೂರ್ತಿ ಶ್ರೀಪಾದ ವಿಡದಿಹ ಮಹಿಪತಿಗೆ ಭವಪಾಶದಂಜಿಕಿನ್ಯಾಕೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯಾ ಪಾದಕ ಶರಣೆನ್ನಿ | ಸ್ಮರಣೆಗೆ ಹರಿಯನು ಕರೆತನ್ನಿ ಪ ಅವನ ನಾಮವನೆನಿಯಲು ಭಕುತಿಲಿ | ಭವಭಯ ಮೂಲದಿ ನೀಗುವದು | ಆವಾಗ ಕಂಗಳ ಸಿರಿಸುಖ ದೋರುತ | ಜೀವನ ಗತಿನೆಲೆ ಹೊಂದುವದು 1 ಸಿಕ್ಕಿತ್ತು ನರದೇಹ ದೊರಿಯಲು ಪುಣ್ಯದಿ | ಸರ್ಕನೆ ಸಂತರ ಮೊರೆಹೊಕ್ಕು | ದಕ್ಕಿಸಿಕೊಳ್ಳದೇ ಬೋಧಾಮೃತವನು | ಪುಕ್ಕಟೆ ದಿನವನು ಗಳೆವರೇ 2 ತನುವಿದು ನೋಡಲು ನೆಚ್ಚಿಕೆ ಇಲ್ಲದ | ಮನಿಗಂಧರ್ವದ ಪುರದಂತೆ | ತನುವಿಗೆ ಹತ್ತಿದ ಸಂಸಾರ ಸುಖ | ಕನಸಿನ ಭಾಗ್ಯವ ತೆರೆದಂತೆ 3 ಇದರೋಳು ನಾ ನನ್ನದು ಎಂದೆನುತಲಿ | ಮದಮತ್ಸರವಾ ಬಗೆಯಲಿ | ಕುದಿಕುದಿದೇಳು ತಜ್ಞಾವಿಹೀನದಿ | ಉದರವ ಹೊರವುತ ತಿರುಗವರೇ 4 ಈಗಾಗಯನ್ನದೇ ಹರಿನಾಮವ | ನಾ | ಲಿಗೆ ಕೊನಿಯಲಿ ತಂದಿರಿಸೀ | ಭವ | ಸಾಗರ ಸುಳಿಯಿಂದಲಿ ತರಸೀ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೆ ನಿಮ್ಮಯ ಚರಣಕಮಲದಿ ನಿರುತಭಕುತಲಿ ಬೇಡುವೆ ಪ ಪರಮ ಕರುಣಾಕರನೆ ತರಳಗೀ ವರವ ಕರುಣಿಸು ಬೇಗನೆ ಅ.ಪ ಪರರ ಅಂಗನೆಯರನು ನೋಡಲಿಕ್ಕೆ ನ್ನೆರಡು ಕಣ್ಣು ಕರುಡಾಗಲಿ ಪರದ್ರವ್ಯ ಮುಟ್ಟಲಿಕ್ಕೆನ್ನ ಎರಡುಕರ ಮುರಿದ್ಹೋಗಲಿ 1 ಒಡನೆ ಬಿದ್ದು ಹೋಗಲಿ ಕೇಡು ಪರರಿಗೆ ಬಗೆವ ಮನ ಎ ನ್ನೊಡಲೊಳಿಲ್ಲದ್ಹಾಂಗಾಗಲಿ 2 ಮಂಗಳಾಂಗ ನಿಮ್ಮ ಚರಣ ಕಾಣಲೆನ್ನ ಕಂಗಳೆರಡು ದೃಷ್ಟಿಬಲಿಸಲಿ ರಂಗ ಶ್ರೀರಾಮನಂಘ್ರಿಕಮಲದ ಧ್ಯಾನದಲಿ ಮನ ಒಲಿಯಲಿ 3
--------------
ರಾಮದಾಸರು
ಹರಿಯೆ ನೀನೇ ಪಾಲಿಸೋ ನಿನ್ನ ಪೆರತುಂಟೆ ಕರುಣಿಪರು ಪ ಶಿರವರನೆ ತವ ಕರುಣಪಾಂಗವು ಉರುತರದ ಶುಭಕರವು ಶರಣಗೇ ಸ್ಮರಿಪ ಮಾತ್ರದಿ ಶರಣ ಪ್ರಲ್ಹಾದ ನಿರುಪಮದ ಪದ ಭರದಿಯೈದಿದ 1 ಮಾರಮಣ ನಿನ್ನ ಶೇರಿ ನೆನೆವರ ಘೋರ ಸಂಕಟ ದೂರಗೈವುದು ಕರಿ ಬಾರೆನುತ ಹರಿಪಾರ ಮಾಡಿದಿ ನೀರಜಾಕ್ಷನೆ 2 ಪತಿತ ಪಾವನ ನುತಿಪನ ಘನಂ ತತಿಯುಡಗಿ ಶತವ್ಯಯನೆ ಎನಿಸುವಾ ಗತಿಕೊಡಲು ನರಸಿಂಹವಿಠ್ಠಲ ಸ್ಮøತಿಸಿದಜಮಿಳ ಗತಿಮುದಪ್ರದ 3
--------------
ನರಸಿಂಹವಿಠಲರು
ಹರಿಯೆ ಸಿರಿದೊರೆಯೆ ಅರಿಯೆ ನಿನ್ಹೊರತನ್ಯರ ಪ ಮೊರೆ ಹೊಕ್ಕಿರುವರ ದುರಿತಗಳ ಕಳೆವ ಅ.ಪ ಸೂರ್ಯ ಪ್ರಕಾಶ ಕುಮುದಾಪ್ತಮಿತ ಭಾಸ ನಾಟಕಾಧಾರ ಶ್ರೀಶ ಹಾಟಕ ಗರ್ಭತಾತ ಅಖಿಲ ಸದ್ಗುಣೋಪೇತ 1 ಮರಳಿ ಮರಳಿ ಜನನ ಮರಣಗಳೈದುತ ನರಕ ಸ್ವರ್ಗ ಭೂಲೋಕ ತಿರುಗಿ ಬಳಲುವವೋ 2 ಹಟದಿ ದುರ್ಮತಿಗಳಾರ್ಭಟಿಸುತಜ್ಞಾನದಿ ಮಟ ಮಾಯದಿ ಚರಿಸಿ ಘಟಿಪುದೇ ಗುರುರಾಮವಿಠಲ ನಿನ್ನಯ ಕರುಣ 3
--------------
ಗುರುರಾಮವಿಠಲ
ಹರಿಯೆ ಸ್ವತಂತ್ರ ಚತುರದಶ ಭುವನಕೆ | ಪರಮೇಷ್ಠಿ ಶಿವಾದ್ಯರಾತಗೆ ದಾಸರೆನ್ನು ಪ ಹರಿಹರರ ಒಂದೇ ಸ್ಥಾನದಲಿ ಕಾಣುವೆನೆಂದು | ಪರಮ ಭಕುತಿಯಿಂದ ಕ್ರೋಧಮುನಿಪ || ಧರಣಿಯೆಲ್ಲ ತಿರುಗಿ ಶುಕ್ಲವತೀ ತೀರಕೆ ಬರಲು | ವಸಂತ ಕಾಲದಂತೆ ಪೊಳಿಯೇ1 ತಪಸಿ ತಪವನೆ ಮಾಡುತಿರಲು ಖರಾಟಖಳ | ಉಪಹತಿ ಕೊಡುತಿಪ್ಪ ವರಬಲದಿ || ವಿಪುಳದೊಳಗಿವಗೆಲ್ಲಿ ಎದುರಾರು ಇಲ್ಲದಿರೆ | ಸುಪರ್ಣಾದಿ ಮೊರೆ ಇಡಲು ಬೊಮ್ಮಗೆ2 ಪರಮೇಷ್ಠಿ ಹರಿಯ ಬಳಿಗೆ ಬಂದು | ಖಳನ ಕೋಲಾಹಲವ ಬಿನ್ನೈಸಲು || ಪುಲಿತೊಗಲಾಂಬರನ ಸಹಿತ ಸರ್ವೋತ್ತಮನ | ಒಲಿಮೆಯಿಂದ ಬಂದು ಸುಳಿದರಾಗಂದು 3 ದಾನವನ ಕೊಂದು ದೇವತೆಗಳ ಸುಖಬಡಿಸಿ | ಜ್ಞಾನಕ್ರೋಢಮುನಿ ಮನಕೆ ಪೊಳೆದು || ಆನಂದದಿಂದಲಿ ನಿಂದು ಮೆರೆದ ಲೀಲೆ | ಏನೆಂಬೆನಯ್ಯ ಹರಿಹರ ವಿಚಿತ್ರಾ 4 ಪ್ರವಿಷ್ಠ ಕೇ| ಶವನು ತಾನೆ ಕಾಣೊ ಸ್ವಾತಂತ್ರನು || ಇವರು ಶಂಕರನಾರಾಯಣನೆಂಬೊ ಪೆಸರಿನಲಿ | ಅವನಿಯೊಳು ಪ್ರಖ್ಯಾತರಾಗಿ ನಿಂದಿಹರೋ 5 ಎರಡು ಮೂರುತಿಗಳು ನೋಳ್ಪರಿಗೆ | ಶ್ರೀ ನಾರಾಯಣಗೆ ಈಶ ಸಮನೇ 6 ಚಕ್ರ ಶಂಖ ಗದೆ ಪದುಮ ಹರಿಗೆ ನೋಡು | ಮುಕ್ಕಣ್ಣಗೆ ಡಮರುಗ ತ್ರಿಶೂಲವು || ಮುಖ್ಯ ದೇವತಿ ಹರಿ ಅವಾಂತರ ಶಿವನು | ಶಕ್ರಾದ್ಯರೊಲಿದು ಭೇದವನು ಪೇಳುವರು 7 ಸತ್ಯಂ ವದವೆಂಬ ಶ್ರುತಿವರದು ಪೇಳುತಿದೆ | ಭೃತ್ಯ ರುದ್ರನು ಕಾಣೊ ಲಕುಮಿವರಗೆ || ಸತ್ಯದಲಿ ಸಿದ್ಧವಯ್ಯ ಎಂದು ತಿಳಿದು | ಸ್ತೌತ್ಯ ಮಾಡಿದವಗೆ ವೈಕುಂಠ ಪದವಿ 8 ಕ್ರೋಢ ಪರ್ವತವಿದೆ ತೀರ್ಥ ಪಾವನಕರ | ನಾಡೊಳಗೆ ಕ್ಷೇತ್ರ ಉತ್ತಮ ಮಾನವಾ || ಪಾಡಿದರೆ ವಿಜಯವಿಠ್ಠಲರೇಯ ಒಲಿದು |ಕೂಡಾಡುವನು ದೃಢ ಭಕುತಿಯಿತ್ತು ಅನುದಿನಾ 9
--------------
ವಿಜಯದಾಸ
ಹರಿಯೆ ಹದಿನಾಲ್ಕು ಲೋಕದ ದೊರೆಯೆ ಪ ಕಮಲ ಷಟ್ ಚರಣನೆನಿಸಿ ಎನ್ನ ಪೊರೆವುದು ಸಂತತ ಅ.ಪ ವೀರಭಕ್ತ ಪ್ರಹ್ಲಾದ ವರದ ಕರುಣಾರಸ ಪರಿಪೂರ್ಣ ಭವ ಸನ್ನುತ ಚಾರ ಚರಣನಳಿನ ಸಾರಿದ ಪ್ರಣತ ಜನಾರ್ತಿನಿವಾರಣ ಘೋರದುರಿತ ಮದಗಜ ಪಂಚಾನನ ನಾರದ ಮುನಿವರ ಸೇವಿತ ಚರಣ ಸಾರಸಾಕ್ಷಿ ಶ್ರೀ ಕರಿಗಿರಿ ನಿಕೇತನ 1
--------------
ವರಾವಾಣಿರಾಮರಾಯದಾಸರು
ಹರಿಯೆಂದು ಮನವೆ ನೀ ಸ್ಮರಿಸೋ ದೃಢದಿಂದ ಸ್ಮರಿಸಿದಾಕ್ಷಣ ಬಂದು ಒದಗುವ ಗೋವಿಂದ ಕರುಣದಿಂದಲಿ ನೋಡಿ ಹಿಂಗಿಸುವ ಭವಬಂಧ ಪರಮದಯಾನಿಧಿಯು ಶ್ರೀಹರಿ ಮುಕುಂದ 1 ಸ್ಮರಿಸಿದಾಕ್ಷಣ ಪುಣ್ಯಗತಿಗೈದಜಾಮಳ ಮರೆಯದೆ ಸ್ಮರಿಸಿದ ಧ್ರುವ ಯೈದಿದಢಳ ಹರಿಯೆಂದು ಪ್ರಹ್ಲಾದ ಪುಣ್ಯಗೈದ ಸಬಳ ಸ್ಮರಿಸಿದವರ ಕಾವ ಶ್ರೀಹರಿ ಗೋಪಾಲ 2 ಗಜ ಭಯ ಸ್ಮರಿಸಿದಾಕ್ಷಣ ಮೊರೆ ಇಟ್ಟು ದ್ರೌಪದಿಗಾಯಿದಭಿಮಾನ ಸ್ಮರಿಸಿದ ಪಾಂಡವರ ರಕ್ಷಿಸಿದ ಪ್ರಾಣ ಪರಮಭಕ್ತರ ಜೀವ ಶ್ರೀಹರಿ ನಾರಾಯಣ 3 ಹರಿನಾಮದಿಂದಾಯಿತು ಅಹಲ್ಯೋದ್ಧಾರಣ ಸ್ಮರಣೆ ಸಕಲವೆಲ್ಲ ತರಿಸಿತು ಪೂರ್ಣ ಸುರಮುನಿಜನರಿಗೆ ಇದೇ ನಿಜಭೂಷಣ ಪರಮ ವೈಷ್ಣವರಿಗೆ ಇದೇ ಜೀವ ಪ್ರಾಣ 4 ಹರಿಯೆಂದು ನೆನಿಯೋ ನೀ ಗುರು ಕೃಪೆಯಿಂದ ಸ್ಮರಿಸೊ ಮನವೆ ದೃಢಭಾವ ಭಕ್ತಿಯಿಂದ ನಿತ್ಯ ನಿಜಾನಂದ ತೋರುವ ಶ್ರೀಹರಿನಾಮ ಸುಖ ಸದಾನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಯೆನೀನು ಒಲಿದಮೇಲೆ ಪರರ ಭಯವುಂಟೇ ಪ ಪÀರುಷವೇದಿ ಸೋಂಕಿದ ಕಬ್ಬಿಣ ಹೊನ್ನಲ್ಲವೇ ಸುರನದಿ ಭಾಗೀರಥಿಯೊಳು ಮಿಂದೂ ಪಾಪಿಯೇ1 ಗರುಡದೇವನಿದಿರೊಳು ಉರಗಬಾಧೆಯಿರುವುದೇ ಧರೆಯೊಳ್ ರವಿಯು ಉದಯನಾಗೆ ರಾತ್ರಿ ನಿಲ್ವುದೇ2 ಗುರುವಿನ ದಯೆಯಿರುವರೇ ಕುಲದವರೇಂ ಗಯ್ಯುವರು ಉರಿವ ಕಿಚ್ಚಿನಿದಿರೊಳಗೆ ಚಳಿಯ ಭೀತಿಯೇ 3 ಸಂಜೀವನ ಪಿಡಿದವಂ ಮರಣಕೆ ತಾನಂಜುವನೇ ಕಂಜನಯನ ಕಾಯ್ವನಿರಲು ಶನಿಯು ಹಿಂಸಿಪನೇ 4 ರಾಜತನ್ನವನಾಗಿರಲ್ ವಿರಾಜಿಸುತ್ತಲಿರುವನೈ ಜಾಜೀಶ ಕೇಶವನೇ ನಾನು ನಿನ್ನವನೈ 5
--------------
ಶಾಮಶರ್ಮರು
ಹರಿಯೇ ಎನ್ನ ಪ್ರಾಣಧೊರಿಯೆ ಹರಿಯೆ ಧ್ರುವ ಕರುಣಾನಂದ ಪೂರ್ಣ ವರಮುನಿಗಳ ಪ್ರಾಣ ಶರಣಜನರಾಭರಣ ಹರಿ ನಿಮ್ಮ ಚರಣ 1 ಭಂಜನ ದುರಿತ ವಿಧ್ವಂಸನ ಪರಮಸು ಸಾಧನ ಹರಿ ನಿಮ್ಮ ಕರುಣ 2 ಶಿರದಲಿಟ್ಟು ಆಭಯ ಹೊರಿಯೊ ಮಹಿಪತಿಯ ಕರುಣಿಸಿ ನಿಮ್ಮದಯ ಹರಿಯೊ ಭವಭಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು