ಒಟ್ಟು 690 ಕಡೆಗಳಲ್ಲಿ , 94 ದಾಸರು , 614 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹನುಮರಾಯ ಎನ್ನ ದುರಿತದಾರಿದ್ರ್ಯವ ಪರಿಹರಿಸಿ ಸಲಹೋ ಹನುಮರಾಯ ಪ ದಿನದಿನ ಘನಘನ ತನುವಿನರೋಗವು ಹನುಮರಾಯ ಇನ್ನು ಘನವಾಯ್ತು ಕನಿಕರದಿಂದ ಕಡೆಹಾಯ್ಸಯ್ಯ ಹನುಮರಾಯ ಕ್ಷಣಸುಖವಿಲ್ಲದೆ ಅನುಪಮ ನೋಯುವೆ ಹನುಮರಾಯ ಹನುಮರಾಯ1 ಕಿರಿಕಿರಿಸಂಸಾರ ಪರಿಪರಿಬಾಧೆಯು ಹನುಮರಾಯ ಬೇಗ ಪರಿ ಬಾಧ್ಯಾಕೊ ಹನುಮರಾಯ ಇನ್ನು ಮರವೆಹರಿಸಿ ನಿಜಅರಿವು ಕರುಣಿಸಿ ಕಾಯೊ ಹನುಮರಾಯ 2 ಸ್ವಾಮಿ ಶ್ರೀರಾಮನ ಪ್ರೇಮದದೂತನೆ ಹನುವiರಾಯ ದೇವ ಪಾದ ಭಜಿಸುವೆನಯ್ಯ ಹನುಮರಾಯ ಈ ಮಹಕಷ್ಟದಿ ಕ್ಷೇಮ ಪಾಲಿಸಯ್ಯ ಹನುಮರಾಯ ನಿನ್ನ ಪ್ರೇಮದಿರಿಸಿ ಎನ್ನ ಮುಕ್ತಿಗ್ಯೋಗ್ಯನ ಮಾಡೊ ಹನುಮರಾಯ 3
--------------
ರಾಮದಾಸರು
ಹರಿ ನಿನ್ನ ರೋಮ ಕೂಪದಲಿ ಜೀವಿಪಸರಸಿಜ ಭವಾಂಡ ಕೋಟಿಯಲಿ ಪ ತುರುಗಿಪ್ಪ ಬ್ರಹ್ಮರುದ್ರಾದಿ ಜೀವರುಗಳುಹರಿ ನಿನ್ನ ಮಹಿಮೆಯ ಪೇರ್ಮೆಯ ಬಲ್ಲರೆ ಅ.ಪ. ಅತ್ತಿಯ ಮರದಿಂದುದುರುವ ಫಲಂಗಳಮೊತ್ತದಲಿರುತಿಪ್ಪ ಮಶಕಂಗಳುಕತ್ತೆಯ ಬಳಗಗಳೆಲ್ಲವು ಕೂಡಿಕೊಂಡುಅತ್ತಿಯ ತರುವಿನಾದ್ಯಂತವ ಬಲ್ಲವÉ 1 ಐವತ್ತು ಕೋಟಿ ಯೋಜನ ವಿಸ್ತರವಾದಭೂವಲಯದ ತಮ್ಮ ಗೂಡಿನಲಿಆವಾಸವಾಗಿಪ್ಪ ಕ್ಷುದ್ರ ಪಿಪೀಲಿಕಜೀವರು ಧರಣಿಯ ಮೇರೆಯ ಬಲ್ಲರೆ 2 ನೊರಜು ಮೊದಲಾಗಿ ಗರುಡ ಪರಿಯಂತಪರಿಪರಿ ಜಾತಿಯ ಪಕ್ಷಿಗಳು ತೆರದಲಿ ಹಾರುವರಲ್ಲದೆ ಗಗನದ ಪರಿಣಾಮವೆಂತೆಂದು ಬಲ್ಲವೆ ಶ್ರೀ ಕೃಷ್ಣ3
--------------
ವ್ಯಾಸರಾಯರು
ಹರಿ ನೀನೆವೆ ಸರ್ವ ಚೇತನ ಧೃತಿಯ ಸಕಲವೇ | ಧರಿಯೊಳು ನಾನೆಂಬುವ ಗುಣವೇ ವರಶೃತಿ ನೇಹನಾ ನಾಸ್ತಿಯಂದು | ಸಾರುವದಿದಕನು ಮಾನವೇ ಪ ಬಯಲೊಳು ಪುಟ್ಟದ ಪರಿಪರಿನಾದದ | ಹೊಯಿಲಿನ ಮಂಜುಳ ಶಬ್ದವಾ | ಬಯಲದಿ ಕೇಳಿತಲ್ಲಿನವ ಹೊಂದುವಾ | ಬಯಲಾಧಾರ ನೀನಲ್ಲವೇ 1 ಸೃಷ್ಟಿಯೊಳಗ ಕಮನೀಯ ಲಾವಣ್ಯದು | ತ್ಕøಷ್ಟತರ ಮೋಹನ ರೂಪವಾ | ದೃಷ್ಟಿಲಿ ಕಾಣುತ ಸುಖದೋಳಗಾಗುವ | ದೃಷ್ಟಸ್ವ ತೇಜ ನೀನಲ್ಲವೆ 2 ಕಮಲ ಪಾರಿಜಾತ ಮಲ್ಲಿಗೆ ಮಕ | ರಂಗದೊಳಗ ಸುಳಿದಾಡುತ | ಮಂದ ಮಾರುತ ಬಂದು ಸೋಕಲು ನಲಿವಾ | ಸುಂದರ ರೂಪನು ನೀನಲ್ಲವೆ 3 ರಸಭರಿತ ಬೇರೆ ಬೇರೆ ದೋರುತಲಿಹಾ | ಅಸಮತೆರೆದ ಪದರ್ಥವನು | ರಸನಾದಿ ಕೊಂಡು ಸವಿಗೆ ತಲೆದೂಗುವಾ | ಕುಶಲ ಭೋಕ್ತನುನೀನಲ್ಲವೇ 4 ಚೆನ್ನಾಗಿ ಕಸ್ತೂರಿ ಪುಳಕವ ಕೂಡಿಸಿ | ಪನ್ನೀರವನು ಮೇಲೆದಳಿದು | ಉನ್ನತ ಚಂದನ ಲೇಪಿಸೆ ಸುವಾ | ಸನೆ ಕೊಂಬುವ ನೀನಲ್ಲವೇ 5 ಅಷ್ಟದಳ ಕಮಲದಳ ಗದ್ದುಗಿಯೊಳು ನಿಂದು | ಅಷ್ಟಮ ಸ್ಥಳಗಳ ಮುಟ್ಟಿಸಿ | ನೆಟ್ಟಿನೆ ಮುಖದೊಳು ಸವಿಸವಿ ಮಾತವ | ಸ್ಪಷ್ಟದಿ ನುಡಿಪ ನೀನಲ್ಲವೇ 6 ಭಜಕನ ಮಾಡಿ ಸೌಮ್ಯತನದಿ ಕರದಿಂದ | ರಜತಮ ವಿರಹಿತ ದಾನವನಾ | ದ್ವಿಜರಿಗೆ ಕುಡಿಸಿ ಅದರಶ್ರಯ ಕೊಂಬುವ | ನಿಜಶಯ ಕರ್ತನು ನೀನಲ್ಲವೇ 7 ಪವನಭ್ರವ ನಡೆಸುವಪರಿಚರಣದಿ | ಜವದಿ ಸುಕೇತ್ರ ಯಾತ್ರೆಯಾ | ಬವರದಿ ಮಾಡಿ ಪುಣ್ಯ ಅರ್ಪಿಸಿ ಕೊಂಬಾ | ಭುವನ ಪಾವನ ನೀನಲ್ಲವೇ 8 ರಸನುಂಡು ಕಬ್ಬ ಹಿಪ್ಪಿಯುಗುಳುವಂತೆ | ಅಸಮತೆ ರಚಿಸಿ ಸರ್ವಾಂಗರ | ರಸವಿತ್ತು ಮಲವಘ ಮುಖದಿಂದ ಪವನದಿ | ಬಿಡಸುವನು ನೀನಲ್ಲವೇ 9 ಅಂಗನೆಯರ ಧೃಡಾಲಿಂಗನವನು ಮನ| ದಿಂಗಿತದಂದದಿ ಗೈಯ್ಯಲು | ಅಂಗಸಂಗದ ಲೋದಗುವ ಭೋಗಿಪ | ಅಂಗಜ ಜನಕ ನೀನಲ್ಲವೇ 10 ಯಂತ್ರವಾಹಕ ನಂದದಿ ಜಗನಿರ್ಮಿಸಿ | ಚಿತ್ರ ವಿಚಿತ್ರವ ದೋರುವಾ | ಅಂತ್ರ ಬಾಹ್ಯವ್ಯಾಪಕ ಮಹಿಪತಿ ಸುತ ಪ್ರಭು | ಸೂತ್ರಧಾರಿ ನೀನಲ್ಲವೆ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಪರಮಪುರುಷ ಮಿಕ್ಕಾಮರರೆಲ್ಲ ಅಚ್ಯುತನ ಚರಣಸೇವಕರೆಂದು ನೆರೆ ನಂಬಿರೊ ಪ. ಒಂದುಮನೆಯೊಳೆರೆಡು ಕೇಣಿಯಲ್ಲಿಪ್ಪುವರ ಒಂದಾದರೆಂದು ಬಗೆಯೆ ಬುಧರಿಗುಚಿತವೆ ಇಂದಿರೇಶನು ಭಾಗಭಾಗವ ತಾಳಿ ಒಂದು ಪ್ರತಿಮೆಯೊಳಿದ್ದರೊಂದಾಹರೆ 1 ಒಬ್ಬನಿಂದಲಿ ಸಾಯನೆಂಬೋ ರಕ್ಕಸರೊಲ್ಲರೊಬ್ಬರ ರ್ಧಭಾಗವ ತಾಳಿ ಐತಂದು ಕೊಬ್ಬಮುರಿವರು ಖಳನ ಹರಿಹರರು ತಾವೀಗ ಒಬ್ಬನಿಂದಲಿ ದನುಜನೆಂತಳಿದನು 2 ನರಸಿಂಹನಂತೆ ಕೃಷ್ಣನು ತನ್ನ ಲೀಲೆಯಲಿ ಹರನಂದವ ತಾಳಿ ಗುಹನ ಗೆಲಿದನು ಗಡಾ ಪರಿಪರಿ ವೇಷದಲಿ ನಟನಂತೆ ನಲಿವ ದೇ- ವರದೇವನಿರವನಾವನು ಬಲ್ಲನು 3 ಆವನಂಘ್ರಿಯ ತೀರ್ಥ ಗಂಗೆಯಾದಳು ಭಸ್ಮ ದÉೀವರಿಪುವನು ಗೆಲಿದ ಭೃಗುಮುನೀಂದ್ರನು ಆವವನು ಮೂರ್ಲೋಕದೊಳಧಿಕನೆಂದೊರೆದ ಆ ವಿಷ್ಣು ಹಯವದನ ಹರಿಯಂತೆ 4
--------------
ವಾದಿರಾಜ
ಹರಿನಾರಾಯಣ ಎನ್ನಿರೊ ಸಜ್ಜನರು ಶ್ರೀ- ಹರಿಕೃಷ್ಣ ಶರಣೆನ್ನಿರೊ ಪ ಪರಿಪರಿ ದುರಿತಗಳಳಿದು ಪೋಗುವದೆಂದು ನಿರುತವು ವೇದಪುರಾಣ ಪೇಳುವದು ಶ್ರೀ ಅ.ಪ ಹರಿ ಎಂದ ಮಾತ್ರದಲಿ ಹತ್ತಿದ ಪಾಪ ಪರಿಹಾರಾಗುವುದು ಕೇಳಿ ಹರಿದಾಸರೊಡನೆ ಕೂಡಿ ಸತ್ಸಂಗದಿ ಹರಿ ಕೀರ್ತನೆಯನು ಪಾಡಿ ಹರಿಯ ಮಹಿಮೆಯ ಸ್ಮರಿಸುತಲಿ ಹಗ ಲಿರುಳು ಚಿಂತನೆ ಮಾಳ್ಪ ಸುಜನರ ಪರಮ ಕರುಣಾ ಸಾಗರನು ತನ್ನ- ವರೊಳಿರಿಸುತ ಪೊರೆವ ಸಂತತ 1 ಕರಿರಾಜ ಕಷ್ಟದಲಿ ಮೊರೆ ಇಡೆ ಕೇಳಿ ತ್ವರದಿ ಓಡಿ ಬರಲಿಲ್ಲವೆ ಹರಿ ನೀ ರಕ್ಷಕನೆನ್ನಲು ಪಾಂಚಾಲಿಗ- ಕ್ಷಯ ವಸ್ತ್ರವೆನಲಿಲ್ಲವೆ ತರುಳರೀರ್ವರ ಪೊರೆದು ರಕ್ಷಿಸಿ ಕರೆಯೆ ನಾರಗನೆಂದ ದ್ವಿಜನಿಗೆ ನರಕ ಬಾಧೆಯ ಬಿಡಿಸಿ ಸಲಹಿದ ಹರಿಗೆ ಸಮರು ಅಧಿಕರಿಲ್ಲ ಶ್ರೀ 2 ಬಡಬ್ರಾಹ್ಮಣನ ಸತಿಯು ನಯಭಯದಿಂದ ಒಡೆಯರ್ಯಾರಿಲ್ಲೆನಲೂ ಪೊಡವೀಶ ಶ್ರೀಪತಿಯು ಪರಮಾಪ್ತನೆನಲು ಹಿಡಿಯಗ್ರಾಸವ ಕೊಡಲು ನಡೆದು ದ್ವಾರಕ ದೊಡೆಯನಿಗೆ ಒ- ಪ್ಪಿಡಿಯ ಗ್ರಾಸವ ಕೊಡಲು ಭುಂಜಿಸಿ ಕೆಡದ ಸೌಭಾಗ್ಯವನೆ ನೀಡಿದ ಬಿಡದೆ ಕಮಲಾನಾಭ ವಿಠ್ಠಲನ 3
--------------
ನಿಡಗುರುಕಿ ಜೀವೂಬಾಯಿ
ಹರಿಪಾದ ತೀರ್ಥವನು ಕರದಿ ಪಿಡಿದವರೆಲ್ಲ ತಿರುನಾಮದವರೆನಲು ನಂಬಬಹುದೇ ಪ ಪರವಾಸುದೇವನನು ಮರೆತು ಸತಿಸುತರ ವರಾಭರಣವೇ ಹಿರಿದೆಂಬ ನರರಿಲ್ಲವೇ ಅ.ಪ ಹರಿನಿವೇದನಕಾಗಿ ಕರದಿ ಫಲಪುಷ್ಪಗಳ ತರುವವರು ದಕ್ಷಿಣೆಯ ಇರಿಸಿಹರೋ ಎಂದು ಪರಿಪರಿಯ ದೃಷ್ಟಿಯಲಿ ಪರಿಕಿಸುತ ಅಲ್ಲವೆಂ ದರಿತಾಗ ಕೋಪ ನಿಷ್ಠುರ ಗೈಯುವರು 1 ಈಶಾಯನಮಃ ಓಂ ಶ್ರೀಶಾಯ ನಮಃ ಪ ರೇಶಾಯ ನಮಃ ಎಂಬುದಕೆ ಬದಲು ಆಶೋತ್ತರವನಾಂತು ಕ್ಲೇಶಪೂರಿತರಾಗಿ ನಾಶವಾಗಲಿ ಕುಡದಜನರೆಂಬರಕಟಾ 2 ಮಾನವೋತ್ತಮ ಮಾತ್ರ ತಿರುನಾಮಧಾರಿ ಜ್ಞಾನಿ ಇಂಥವನಿಂದ ತೀರ್ಥವನು ಪಡೆದವರು ಶ್ರೀನಾಥ ಮಾಂಗಿರಿಯ ಭಕ್ತರೆನಿಸುವರು3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹಸಿದು ನಾ ಬಳಲಲೇಕೋ ಈಸಮಯದಲ್ಲಿ ಬಿಸಿಯೂಟ ಮಾಡುವೆನು ಪ ಹಸನಾದ ಶೇಷಶಯನ ನಾಮದಡುಗೆಯು ವಸುಮತೀಧವ ನಾಮರಸಾಯನವಿರೆ ಅ.ಪ ಹರಿ ಹರಿ ಪರಮಾನ್ನವು ದುರಿತಾರಿ ಶೌರಿ ಕರಿಗಡುಬು ಗರುಗೊಬ್ಬಟ್ಟು ನರಸಿಂಹ ವಾಮನ ಅಂಬೊಡೆ ಹೂರಿಗೆಗಳು ಕರಿವರದ ರವೆಯುಂಡೆ ಸಜ್ಜಿಗೆಯಿರಲು 1 ದುಷ್ಟಮರ್ದನನೆನ್ನುವ ಇಷ್ಟವಾದ ಹುಳಿಸಾರು ಮೊಸರುಗಳು ವಾಸುದೇವ ಸಣ್ಣಕ್ಕಿಯನ್ನವು ಮಾಧವ ಬೆಣ್ಣೆಕಾಯ್ಸಿದ ತುಪ್ಪವಿದೆ 2 ನಾರಾಯಣನೆನ್ನುವ ಸಾರವಾದ ಹುಳಿಯನ್ನ ಮೊಸರನ್ನವು ಸಾರಸಾಕ್ಷ ಶ್ರೀಶ ಕ್ಷೀರ ಸಕ್ಕರೆಯಿದ್ದು ಮಾರಜನಕನೆಂಬ ಹಪ್ಳಳುಪ್ಪಿನಕಾಯಿರೆ3 ಪರಿಪರಿಯನ್ನಗಳು ಸರಿಯಾಗಿ ಭಕ್ಷ್ಯ ಕರಿದೆಡೆ ಮಾಡಿರಲು ಅರಿತು ಸವಿಯನೋಡಿ ಮರೆಯದೆ ಭುಂಜಿಸಿ ನಿರುತ ನಿಜಾನಂದ ಪಡೆಯದೆ ಬರಿದೆ 4 ಗೋಪಾಲನೆಂದೆಂಬೊ ಸೀಪಿನ ಎಳನೀರು ಸೀ ಪಾನಕವಿಹುವು ತಾಪತ್ರಯಹರ ಹೆಜ್ಜಾಜಿಕೇಶವ ಆಪದುದ್ಧಾರಕನೆಂಬಮೃತವುಣದೆ 5
--------------
ಶಾಮಶರ್ಮರು
ಹಾರಹಾಕುವೆ ಮಾರಸುಂದರ ಶರೀರ ಸುಕುಮಾರಗೆ ಪ ಮರುಗ ಮಲ್ಲಿಗೆ ಜಾಜಿಸಂಪಿಗೆ ಸುರಗಿಬಕುಳ ಪಾದರಿ ಪರಿಪರಿಯಿಂದ ಹಾರ ಕಟ್ಟಿ ಹರಿನಾ ನಿನ್ನ ಕೊರಳಿಗೆ 1 ಕಮಲ ಪುಷ್ಪದ ಹಾರವನ್ನು ವಿಮಲ ಮನದಿ ತಂÀದಿಹೆ ಸುಮಶರಪಿತ ಕೊರಳ ಕೊಟ್ಟರೆ ನಮಿಸಿ ನಿಮಗೆ ಹರುಷದಿ 2 ಮಾನಿನಿಯರ ಮೊರೆಯಕೇಳಿ ಪ್ರಾಣನಾಥವಿಠ್ಠಲ ತಾನೆ ಕರವನೀಡಿ ಹಾರವ ಗಾನಲೋಲ ಧರಿಸಿದ 3
--------------
ಬಾಗೇಪಲ್ಲಿ ಶೇಷದಾಸರು
ಹಾಲಹಲ ಉಂಡ ನಮ್ಮ ಪಾರ್ವತಿಯ ಗಂಡ ಪ. ನೀಲಕಂಠನೆಂದೆನಿಸುತ ಸುರರನು ಪಾಲಿಸಿದನು ಕಂಡ್ಯಾ ಅ.ಪ. ಸುರರು ಅಸುರರು ಕೂಡಿ ಶರಧಿಯ ಭರದಿ ಮಥನವ ಮಾಡಿ ಗರಳವು ಉದ್ಭವಿಸಲು ಕಂಗೆಡುತಲಿ ಹರನನು ಸ್ತುತಿಮಾಡಿ 1 ಮೃತ್ಯುಂಜಯ ಪಾಹಿ | ಸಲಹೊ ಕೃತ್ತಿ ವಾಸನೆ ಪಾಹಿ ಮೃತ್ಯುವಾದ ವಿಷ ಭಯವನೆ ಬಿಡಿಸೈ ಸತ್ಯವಿಕ್ರಮ ಪಾಹಿ 2 ಪರಿಪರಿ ಸ್ತುತಿಗೈಯೆ | ಹರಮನ ಕರಗುತ ಕೃಪೆ ಗೈಯೆ ಗಿರಿಜೆ ನೀಡು ಅಪ್ಪಣೆ ವಿಷ ಕುಡಿವೆನು ಪರಮ ಮಂಗಳ ಕಾಯೆ 3 ತನುಸುಖವ ತೊರೆದು | ಲೋಕವ ಘನಕೀರ್ತಿಯನು ಪಡೆಯಲು ಹರಿ ಮೆಚ್ಚುವ ಎನುತ ಗಿರಿಜೆಗೆ ಪೇಳ್ದು 4 ಕರದಿ ಸೆಳೆದು ಕುಡಿದ | ವಿಷವನು ವಿಧಿ ಕಂದ ಹರಿಯ ಕೃಪೆಯಿಂದ 5 ನಗಜೇಶನು ಕೇಳ ಬಿಗಿದು ಕಂಠದಿ ನಿಲ್ಲಿಸಿ ಲೋಕವ ಪೊರೆದನು ಉರಿಫಾಲ 6 ಪೋಯ್ತು ಕಾಳರಾತ್ರಿ | ಮಂಗಳ ಆಯಿತು ಶಿವರಾತ್ರಿ ಶ್ರೀಯರಸ ಗೋಪಾಲಕೃಷ್ಣ ವಿಠ್ಠಲನ ಪ್ರೀತಿ ಪಾತ್ರ 7
--------------
ಅಂಬಾಬಾಯಿ
ಹಿಂದಕೆ ತಿರುಗಿ ನೋಡು ಮನವೆ ಹೊಂದಿಕಿ ಹೊಲಬು ನಿನ್ನ ಸದ್ಗುರುವಿನ ಶ್ರೀಚರಣ ಧ್ರುವ ಹೊಲಬು ಮರೆದ್ಯೊ ಎಂದೆಂದಿಗೆ ಆಗಲದ ಸದ್ವಸ್ತು ಸಂಧಿಸಿಹುದು ಜರೆದ್ಯೊ ಕುಂದಿ ಕುಂದಿ ಕಳೆವ ವಿಷಯಕೆ ಸಂಧಿಸಿ ಬಾಯ್ದೆರದ್ಯೊ ಬಂದು ಬಂದು ಭವಪಾಶಕೆ ಸಿಲ್ಕಿ ಬೆಂದು ಒಡಲನೆ ಹೊರೆದ್ಯೊ 1 ತಿರುಗಿ ನೋಡಲು ತನ್ನೊಳಗೆ ತಾ ತೋರುತ ಅದೆ ಕೌತುಕ ಏರಿ ನೋಡಲು ಆರುಚಕ್ರ ಸುರಿಯುತಿದೆ ಸವಿಸುಖ ಪರಿಪರಿ ಭಾಸುತಿಯಹುದು ಪರಬ್ರಹ್ಮದ ಗತಿ ಹರುಷಾನೇಕ ಸದ್ಗುರುಮುಖ 2 ಸೆರಗವಿಡಿದು ಸಾರುವ ಶ್ರುತಿಯ ತಿರುಗಿನೋಡು ನಿನ್ನೊಳಗೆ ಮರಳಿ ಹುಟ್ಟಿ ಬಾರನೀ ಜನ್ಮಕೆ ಸ್ಥಿರಹೊಂದುವಿ ಗತಿಯೊಳಗೆ ಘನ ಬೆಳಗೆ ಘನ ತನ್ನೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹುಚ್ಚನಾಗಬೇಕೋ ಜಗದಿ ಹುಚ್ಚನಾಗಬೇಕೋ ಪ ಅಚ್ಚುತಾನಂತನ ನಿಶ್ಚಲ ಧ್ಯಾನದಿ ಇಚ್ಛೆಯಿಟ್ಟು ಜಗದೆಚ್ಚರ ನೀಗಿ ಅ.ಪ ಮರವೆ ಹರಿಯಬೇಕೋ ಪರಲೋಕ ದರಿವಿನೊಳಿರಬೇಕೊ ಪರಿಪರಿಯಿಂದಲಿ ಸಿರಿಯರಸನ ಪಾದ ಸ್ಮರಿಸಿ ಇಹ್ಯದರಿವು ತೊರೆದಾನಂದದಿ 1 ಪರನೆಲೆ ತಿಳಬೇಕೋ ಕಾಯದ ನರನೊದೆಯ ಬೇಕೊ ದುರಿತಾಕಾರಿಗಳ ಕಿರಿಕಿರಿಯಿಲ್ಲದೆ ಹರಿಹರಿಯೆನ್ನುತ ಪರಮಾನಂದದಿ 2 ಕಾಮ ಕಳೆಯಬೇಕೋ ಕಾಯದ ಪ್ರೇಮ ತೊರೆಯಬೇಕೊ ನೇಮದಿಂದ ಮಮಸ್ವಾಮಿ ಶ್ರೀರಾಮನ ನಾಮ ಭಜಿಸಿ ನಿಸ್ಸೀಮನಾಗಾನಂದದಿ 3
--------------
ರಾಮದಾಸರು
ಹೆಚ್ಚುಕಡಿಮೆಯೆಂದು ಹೆಣಗಾಡಬೇಡಿ ಸಚ್ಚಿದಾನಂದ ಬ್ರಹ್ಮನ ಗುಟ್ಟು ನೋಡಿ ಪ ಪರಮಾತ್ಮ ಕಾಯದೊಳಿರುತಿರ್ಪತನಕಾ ಪರಿಪರಿ ಹೆಸರಿಂದ ಕರಿವರು ಅನಕಾ ಶರೀರ ಭೋಗವ ತೀರಿಸಿಕೊಂಡು ಹೋಹಾಗೆ ಲ್ಲರಿಗೊಂದೆ ಪೆಸರಿಂದ ಕರೆಯುವರಾಗಾ 1 ಅರಸು ಮಂತ್ರಿ ಕರಣೀಕ ತಳವಾರಾ ಕವಿ ಶಾಸ್ತ್ರಿ ಉದಾರಾ ಪರಿಯ ನಾಮಗಳಿಂದ ಉಪಾಧಿಯೋಗಾ ಪರಮಾತ್ಮ ತೊಲಗಲು ಹೆಣವೆಂಬರಾಗಾ 2 ಪರಮಾತ್ಮನಾಟದ ಲೀಲೆ ಇದೆಲ್ಲಾ ಗುರುಪುತ್ರನಾದ ಮಹಾತ್ಮನೆ ಬಲ್ಲಾ ಗುರು ವಿಮಲಾನಂದ ಶರಧಿಯೊಳಾಡಿ ಹಿರಿದು ಕಿರಿದು ಯಾವಲ್ಯುಂಟೆಂದು ನೋಡಿ 3
--------------
ಭಟಕಳ ಅಪ್ಪಯ್ಯ
ಹ್ಯಾಗೆ ಉದ್ಧಾರ ಮಾಡುವನೋ ಹರಿ ಹೀಗೆ ದಿನಗಳ ಕಳೆಯುವರ ಪ. ಆದಿಮೂರುತಿ ಶ್ರೀ ದೇವ ಪದುಮನಾಭ ವೇದ ಉದ್ಧಾರನೆಂದನಲಿಲ್ಲ ಸಾದರದಲಿ ಹರಿ ಸಕಲರಿಗೊಡೆಯನೆಂ ದಾದರದಲಿ ನಾ ಪಾಡಲಿಲ್ಲ 1 ಮೃಚ್ಛಕೂರ್ಮಹರಿ ಸ್ವಚ್ಛÀವರಹನೆಂದು ಉಚ್ಚಧ್ವನಿಯಿಂದ ಕೂಗಲಿಲ್ಲ ತುಚ್ಛಕನ ಕೊಂದು ಅಚ್ಚ ಭಾಗವತಗೆ ಮೆಚ್ಚಿ ರಕ್ಷಿಸಿದನೆಂದೆನಲಿಲ್ಲ 2 ಚಲುವ ವಾಮನನಾಗಿ ಬಲಿಯ ದಾನವ ಬೇಡಿ ಮಲವನಳಿವ ಗಂಗೆ ಪಡೆದನೆಂದು ಕುಲವಳಿದು ಭೂಲಲನೆಯ ವಿಪ್ರರಿ ಗೊಲಿದು ಇತ್ತನೆಂದು ನೆನೆಯಲಿಲ್ಲ 3 ಸೀತೆಗಾಗಿ ಪಡೆಸವರುತ ಹರುಷದಿ ವಾತತನಯಗಜಪದವಿತ್ತನ ಈತನೆ ಪರದೈವನಾಥನು ಪರಕೆಂದು ಪ್ರೀತಿ ಭಕ್ತಿಯಲಿ ಮೈಮರೆಯಲಿಲ್ಲ 4 ಗೋಪಿಯರ ಕೂಡಿ ಗೋಪನ ಮನೆಯಲಿ ಶ್ರೀಪತಿ ಲೀಲೆಯ ತೋರ್ದನೆಂದು ಪಾಪದ ಕಾಷ್ಠಕೆ ಪಾವಕನಾಗಿಹ ತಾಪಹರನ ನಾ ನೆನೆಯಲಿಲ್ಲ 5 ಲಲನೇರ ವ್ರತವಳಿದು ಚಲುವ ಕುದುರೆ ಏರಿ ಕಲಿಮುಖರನು ಸದೆಬಡಿದನೆಂದು ಚಲುವ ಗೋಪಾಲನೆ ನೀನೇ ಗತಿ ಎಂದು ಹಲವು ಬಗೆಯಿಂದ ಪೊಗಳಲಿಲ್ಲ 6 ಗುರುಗಳು ಪೇಳಿದ ಪರಮ ರಹಸ್ಯವು ಅರಿವಾದರೂ ಅನುಭವ ಇಲ್ಲ ಪರಿಪರಿ ಮಹಿಮೆಯ ಉದಯಸ್ತ ಪರಿಯಂತ ಅರಿವು ಮನಕೆ ಎನಗಾಗಲಿಲ್ಲ 7 ದೇಹಸ್ತ ಹರಿ ಎಂದು ದೇಹವ್ಯಾಪ್ತನು ಎಂದು ದೇಹ ಗೇಹ ಜೀವ ಭಿನ್ನವೆಂದು ಶ್ರೀ ಹರಿ ಜೀವಾಂತರ್ಯಾಮಿಯಾಗಿಹನೆಂದು ಮೋಹವಳಿದು ಜ್ಞಾನ ಪುಟ್ಟಲಿಲ್ಲ 8 ತತ್ವಾಧಿಪತಿ ಹರಿ ತತ್ವಾಭಿಮಾನಿಗಳು ನಿತ್ಯ ಹರಿಮಾರ್ಗ ತೋರ್ವರೆಂದು ಸತ್ಯವಚನವನು ವಾಯು ಮತದಿ ನಂಬಿ ಭೃತ್ಯ ಭಾವವ ನಾ ವಹಿಸಲಿಲ್ಲ 9 ಎಷ್ಟು ಹೇಳಲಿ ಎನ್ನ ಅವಗುಣಗಳನೆಲ್ಲ ದೃಷ್ಟಿಯಿಂದಲಿ ನೋಡಿ ನೀನೆ ಸಲಹೋ ಬೆಟ್ಟದೊಡೆಯನಾಗಿ ಎಲ್ಲರ ಸಲಹುವ ಅಷ್ಟಭುಜ ಗೋಪಾಲಕೃಷ್ಣವಿಠಲ10
--------------
ಅಂಬಾಬಾಯಿ
124-1ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರಿಯರುಗೋದಾವರಿಯಿಂದ ರಾಯಚೂರು ಪೋಗಿಆ ದೇಶ ಅಧಿಪತಿ ಪೀತಾಸಿಂಗನಿಗೆಒದಗಿ ಅನುಗ್ರಹಿಸಿ ಬಂದರು ಮೇಲುಕೋಟೆ 1ಮೇಲುಕೋಟೆ ರಾಜನು ಸ್ವಾಮಿಗಳಲಿ ಬಹುಭಕ್ತಿಯಿಂದಲಿ ಪೂಜೆ ಮಾಡಿದನು ಆಗ್ಗೆಮೇಲುಕೋಟೆ ಗಿರಿ ಮೇಲೆ ನರಸಿಂಹನ ಗುಡಿಬೀಗ ಹಾಕಿತ್ತು ಸ್ವಾಮಿಗಳು ಹೋದಾಗ 2ಶ್ರೀ ಸ್ವಾಮಿಗಳು ಬಾಗಿಲ ಸ್ಪರ್ಶ ಮಾಡಿದರುಸ್ಪರ್ಶಮಾತ್ರದಿ ಬಾಗಿಲು ತೆರೆಯಿತು ಆಗಶ್ರೀಸ್ವಾಮಿ ನರಸಿಂಹನ ಮುದದಿ ಪೂಜಿಸಲುಶ್ರೀ ಸ್ವಾಮಿಗಳ ಅರಸ ಪೂಜಿಸಿದನು 3ತರುವಾಯ ಶ್ರೀರಂಗಪಟ್ಟಣಕೆ ಬಂದುಶ್ರೀರಂಗನಾಥನ್ನ ಸೇವಿಸಲು ಮುದದಿಶ್ರೀರಂಗಪಟ್ಟಣದ ಅರಸನು ಭಕ್ತಿಯಿಂಪರಿಪರಿವಿಧದಿ ಕಾಣಿಕೆಗಳ ಅರ್ಪಿಸಿದ 4ರತ್ನ ಖಚಿತ ಪೂಜಾ ಸಾಧನಗಳು ಸ್ವರ್ಣರಜತ ದಂಡಗಳುಶ್ವೇತಛತ್ರಇಂಥಾವು ಸಂಸ್ಥಾನ ಚಿಹ್ನೆಗಳ ರಾಜನುಇತ್ತನು ಶ್ರೀಗಳಿಗೆ ಭಕ್ತಿಪೂರ್ವಕದಿ 5ನಂತರ ಸ್ವಾಮಿಗಳು ಶ್ರೀತುಂಗಭದ್ರಾದಿತೀರ್ಥಾಟನ ಮಾಡಿ ಗದ್ವಾಲು ಸೇರಿಮತ್ತೆತೋಂಡದೇಶದ ಆರ್ಕಾಟಿಗೆ ಹೋಗಿಆದೇಶ ಮಂತ್ರಿಯಿಂದ ಕೊಂಡರು ಸೇವ 6ಈ ಸಮಯ ಶ್ರೀ ಸತ್ಯವಿಜಯ ತೀರ್ಥಾರ್ಯರುಸಂಸ್ಥಾನ ಸಹ ಹತ್ತಿರ ಪ್ರಾಂತದಲ್ಲಿಶಿಷ್ಯೋದ್ಧಾರಕ್ಕೆವಿಜಯಮಾಡುತ್ತಿರಲುಶ್ರೀ ಸತ್ಯವರ್ಯರು ಬಂದರು ಆರಣಿಗೆ 7ಆರಣೀರಾಯನು ವೇಂಕಟನು ಸ್ವಾಮಿಗಳಚರಣಕ್ಕೆ ಎರಗಿ ಪೂಜೆಯನ್ನು ಸಲ್ಲಿಸೇವಸ್ತ್ರಾಭರಣ ಹೇಮಾಭೀಷೇಕಾದಿಗಳಅರ್ಪಿಸಿದ ಭಕ್ತಿಯಿಂ ಕೃಷ್ಣಾಜಿಪಂತ 8ಈ ರೀತಿ ಪೂಜೆ ಮರ್ಯಾದೆಗಳ ತಾ ಕೊಂಡುಹರಿಕೃಷ್ಣ ಶ್ರೀಶನಿಗೆ ಸಮಸ್ತ ಅರ್ಪಿಸುತಹೊರಟರು ಮುಂದಕ್ಕೆ ದಿಗ್ವಿಜಯ ಕ್ರಮದಲ್ಲಿಪುರಿ ಜನರು ಜಯ ಘೋಷ ಮಾಡುತಿರಲು 9ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 10 ಪ
--------------
ಪ್ರಸನ್ನ ಶ್ರೀನಿವಾಸದಾಸರು
130-1ದ್ವಿತೀಯ ಕೀರ್ತನೆಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥವನ-ರುಹಅಂಘ್ರಿಯುಗ್ಮದಲಿ ಶರಣಾದೆ ಸತತಪಮಹಾಕರುಣಿಯು ಪರಮಹಂಸ ಕುಲತಿಲಕರುಅಹರ್ನಿಶಿಒದಗುವರು ಶರಣು ಸುಜನರಿಗೆಅ ಪದ್ವಿತೀಯಾಶ್ರಮವನ್ನು ಯುಕ್ತ ಕಾಲದಿ ಕೊಂಡುಸದ್ಧರ್ಮ ಆಚರಿಸಿ ಗೃಹಕೃತ್ಯದಲ್ಲಿಇದ್ದರು ಜಯತೀರ್ಥ ಆಚಾರ್ಯ ಆದರುಸದಾ ಹರಿಯಲ್ಲೇ ಧಾವಿಸಿತು ಮನಸ್ಸು 1ಕ್ಷೀರಫೇಣವೊಲ್ ತೂಲಿಕ ಹಂಸ ತಲ್ಪವುಶುಭ್ರ ಕನ್ನಡಿ ಚಿತ್ರಾಲಂಕಾರಗಳುಕೊರತೆ ಏನೂ ಇಲ್ಲ ಐಹಿಕ ಸಂಪತ್ತಿಗೆಸ್ಪುರದ್ರೂಪಿಣಿಸತಿಸುಶೀಲೆ ಸುಗುಣೆ2ಪ್ರಾರಬ್ಧ ಕರ್ಮನಿಮಿತ್ತ ಶ್ರೀಹರಿಯೇವೆಪರಿಪರಿಭೋಗಗಳ ಒದಗಿಸಿದ್ದೆಲ್ಲಹರಿಗೆ ಅರ್ಪಿಸುತ ಅನುಭವಿಸುತಿರಲಾಗಹೊರಗಿಂದ ಓರ್ವನು ಹಾಡಿದನು ನುಡಿಯ 3ಮಂಚಬಾರದು ಮಡದಿಬಾರಳು ಕುಂಚುಕನ್ನಡಿ ಬಾರದುಸಂಚಿತಾರ್ಥವು ಮತ್ತೆ ಬಾರದು ಮುಂಚೆ ಮಾಡಿರಿ ಧರ್ಮವಕಂಚಿನ ಗಂಟೆ ಧ್ವನಿ ಅಂದದಿ ಈ ನುಡಿಕೇಳಿಮಂಚದಿಂದಿಳಿದರು ಕುಳಿತರು ಚಿಂತೆಯಲಿ 4ಅಕಳಂಕ ಗುಣನಿಧಿ ನಾರಾಯಣ ಮಾಯೇಶಸಂಕರುಷಣ ಪ್ರದ್ಯುಮ್ನ ಅನಿರುದ್ಧಶ್ರೀಕರಾರ್ಚಿತ ಪಂಚರೂಪನ ಪ್ರೇರಣೆಯೆಂದುಮಾಕಳತ್ರನ ಸ್ಮರಿಸಿ ಹೊರಟರು ಹೊರಗೆ 5ಲೌಕಿಕ ವಿಷಯ ವಿಜೃಂಭಣಾಡಂಬರವಲೆಕ್ಕಿಸದೆ ವೈರಾಗ್ಯ ಮನಪಕ್ವದಿಭಕುತಿ ಉನ್ನಾಹದಿ ಅವಧೂತಚರ್ಯದಿಶ್ರೀಕರ ನಾರಾಯಣನ ಸೇವಿಸಿದರು 6ತೀರ್ಥಕ್ಷೇತ್ರಾಟನ ಮಾಡಲಿಕೆ ಹೊರಟರುಹಾದಿಯಲಿ ಸರ್ಪವು ಅಡ್ಡ ಬರಲುವೇದ್ಯವಾಯಿತು ಜಯತೀರ್ಥ ಮುನಿಗಳು ತಾವೇಬಂದು ತಡೆದರು ಸರ್ಪರೂಪದಲಿಯೆಂದು 7ಈ ಪುಣ್ಯ ಶ್ಲೋಕರು ಜಯತೀರ್ಥವಿಪ್ರಸರ್ಪರೂಪಶೇಷದೇವರ ಜಯಮುನಿಗಳಅಭಿಪ್ರಾಯವನ್ನರಿತು ಶಾಸ್ತ್ರಪ್ರವಚನಶಿಷ್ಯೋಪದೇಶದಿ ಹರಿಯ ಸೇವಿಸಿದರು 8ಮಲಾಪಹಾರಿಣಿ ತೀರಸ್ಥ ಮುನವಳ್ಳಿಶೀಲತಮ ಅಡವಿ ಪ್ರದೇಶ ಗ್ರಾಮದಲಿಕುಳಿತು ಶಿಷ್ಯರಿಗೆ ಸುಧಾದಿಗಳ ಪೇಳಿದರುಪೊಗಳ ಬಲ್ಲೆನೆ ಇವರ ಮಹಿಮೆಸಾಕಲ್ಯ9ಸುಮಧ್ವವಿಜಯ ಪಾರಾಯಣ ಮಾಡುತ್ತಕಲ್ಮಷ ಕಿಲುಬು ಹತ್ತಿದ ಪಾತ್ರೆಯನ್ನಕಲ್ಮಷ ಕಿಲಬನ್ನ ತ್ವರಿತದಿ ನೀಗಿಸಿಹೇಮಮಯ ಮಾಡಿದರು ಜನರು ಕಂಡಿಹರು 10ಹನ್ನೆರಡುಬಾರಿಸುಧಾದಿಗಳ ಪ್ರವಚನ ಮಾಡಿವಿನಯ ಸಂಪನ್ನಶ್ರದ್ಧಾಳು ಶಿಷ್ಯರಿಗೆಹನ್ನೆರಡಾವರ್ತಿ ಸುಧಾ ತತ್ವ ಪ್ರಕಾಶಿಕ ಪೇಳಿಘನಮಹಿಮ ಟಿಪ್ಪಣಿ ಮಾಡಿಹರು ಎರಡಕ್ಕೂ11ಭುಜಗಶಾಯಿ ಕ್ಷೀರಾಬ್ಧಿವಾಸನ ಪ್ರೀತಿಗೂಸುಜನಅಧಿಕಾರಿಗಳ ಉದ್ಧಾರಕ್ಕುರಚಿಸಿ ಗ್ರಂಥಗಳನ್ನ ಕೃತಕೃತ್ಯ ಮನದಲ್ಲಿರಾಜರಾಜೇಶ್ವರಿ ಶ್ರೀ ಹರಿಗರ್ಪಿಸಿದರು 12ಸತ್ಯಸಂಧಾರ್ಯರ ಹಸ್ತಪದ್ಮೋತ್ಪನ್ನಸತ್ಯವರ ತೀರ್ಥರ ಕರಕಂಜದಿಂದಜಯತೀರ್ಥಾಚಾರ್ಯರು ಕೊಂಡರು ತುರ್ಯಾಶ್ರಮತೋಯಜಾಕ್ಷಶ್ರೀ ವಿಷ್ಣುತೀರ್ಥ ನಾಮದಲಿ13ಬೃಹತಿಸಹಸ್ರಪ್ರಿಯ ಮಹಿದಾಸ ಜಗದೀಶಬ್ರಹ್ಮಪಿತ ಭಕ್ತಪಾಲಕ ಪರಮಹಂಸಮಹಿಶಿರಿಕಾಂತ `ಶ್ರೀ ಪ್ರಸನ್ನ ಶ್ರೀನಿವಾಸ'ನಮಹಾಭಕ್ತ ಶ್ರೀ ವಿಷ್ಣು ತೀರ್ಥಾರ್ಯಶರಣು 14 ಪ
--------------
ಪ್ರಸನ್ನ ಶ್ರೀನಿವಾಸದಾಸರು