ಒಟ್ಟು 17313 ಕಡೆಗಳಲ್ಲಿ , 134 ದಾಸರು , 7747 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರಾಹ ಹರಿ ವಿಠಲ | ಪೊರೆಯ ಬೇಕಿವಳ ಪ ಕರ ಪಿಡಿಯ ಬೇಕೋ ಅ.ಪ. ಕರ್ಮ ಅಘ | ಕಾನನಗೆ ದಾವಾಗ್ನಿನೀನೆ ಕೃಪೆ ನೋಟದಲಿ | ಮಾನಿನಿಯ ಸಲಹೋ 1 ತೀರ್ಥ ಪದ ನಿನ್ನ ಗುಣ | ಕೀರ್ತನೆಯ ನೊದಗಿಸುತಆರ್ತಳುದ್ಧರ ಕಾರ್ಯ | ಪ್ರಾರ್ಥಿಸುವೆ ಹರಿಯೇ |ಮೂರ್ತಿ ನಿನ್ನದು ಹೃದಯ | ಪಾತ್ರದಲಿ ಕಾಣಿಸುತಗೋತ್ರ ಉದ್ಧರಿಸಯ್ಯ | ಪೃಥ್ವಿ ಧರ ದೇವಾ 2 ಭವ ಶರಧಿ | ಪೋತನೀನೆನಿಸೋ 3 ನಿತ್ಯ ಮಂಗಳವಾ 4 ಸೃಷ್ಟೀಶ ಕ್ರೋಡೇಂದ್ರ | ಅಷ್ಟ ಸೌಭಾಗ್ಯದನೆಪ್ರೇಷ್ಟ ನೀನಾಗಿರಲು | ಕಷ್ಟವೆಲ್ಲಿಹುದೋವಿಷ್ಟರಶ್ರವ ಇವಳ | ಸುಷ್ಟು ಪೊರೆವುದು ಎನುತದಿಟ್ಟ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ವರಾಹಾವತಾರ ಜಯ ಜಯ ಯಜ್ಞವರಾಹ ಚಿನ್ಮಯ ಮೋದಾತ್ಮಕ ದೇಹ ಭಯವ ಪರಿಹರಿಸೀಗ ಆಲಯವನು ನಿಲಿಸುವ ರಾಗ ಪ. ಬ್ರಹ್ಮನ ನಾಸಿಕದಿಂದ ಪರಬೊಮ್ಮನು ಕಿಟಿಯಾದಂದ ಹಮ್ಮಿನ ದೈತ್ಯನ ಕೊಂದ ಈ ಕ್ಷಮ್ಮೆಯ ಸುಲಭದಿ ತಂದ 1 ಶಿಖಾಮಣಿ ರನ್ನ ಶ್ರೀ ಯಜ್ಞವರಾಹನೆ ನಿನ್ನ ಸುಜ್ಞತೆ ನಂಬಿದೆ ಮುನ್ನ ಸನ್ನøಗ್ಯನೆ(?) ನೀ ಸಲಹೆನ್ನ 2 ಶ್ರೀಪತಿ ವೆಂಕಟರಮಣ ಮಹದಾಪದ್ಗಣ ಹರಚರಣ ಭೂಪತಿ ತೋರಿಸು ಕರುಣ ಸಂತಾಪ ಬಿಡಿಸು ಸಚ್ಚರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ವರ್ಣಿಸಲರಿಯೆ ನಿನ್ನ | ವರ್ಣಿಸಲರಿಯೆ ಗು | ಣಾರ್ಣವ ಹರಿಯೆ ಸೂ | ವರ್ಣ ಗಿರೀಶ ಸು | ಗಮನ ರಂಗಾ ಪ ಕುಂಡಲ ಮಿನುಗುವ ಹಸ್ತ ಕಂಕಣ ಬೆರಳುಂಗರ | ಕೌಸ್ತುಭ ಕಂಬು ಸೂದರು | ಶನ ಭುಜಕೀರ್ತಿ ಭೂ | ಷಣವಾದ ಶಿರ ಉರುವ ಒಪ್ಪಲು ಕಿಂ | ಕಿಣಿ ಕನಕಾಂಬರವ ಪೂಸಿದ ಗಂಧ | ಪುನುಗು ಜವ್ವಾದಿಯಿಂದೆಸೆವ ಸುರತರುವೆ 1 ಕಾಂಚಿದಾಮ ಥಳಿ | ಥಳಿಸುವ ಪದಕ ನ್ಯಾ | ತುಂಬಲು ಸೂಸುತಿರೆ ದಂತಾ | ಮಾತಾರಗಿಳಿಯಂತೆ ಶೋಭಿಸಿ | ಕಪೋಲ ಸುತ್ತಲು ಬೆಳಗುವ ಕಂಗಳ ನಾಸಕಾಂತಿ | ಸಿರಿ ತಿರುವೆಂಗಳಾ2 ಕಟಿ ಕರ ಎರಡೇಳು ಲೋಕ ಜಠರದೊಳಡಗಿರೆ | ಕರಿ ಪಲ್ಲಿನಂತೆ ಸುಂದರ ಜಂಘೆ ಗುಲ್ಫ ವಿ | ಪಾದ ನಖ ಪರಿ ಪರಿ ರೇಖೆಗಳ ಕಾಲಿಂದಿಗೆ | ನಿತ್ಯ ಮಂಗಳಾ 3 ನಿರಯ ತ್ತಮ ಜನ ಮನೋರಥ | ಗಮ ಸಿದ್ಧಾಂತನೆ ವಿ | ಕ್ರಮದಾನವ ಹರ | ಕೋಟಿ ಪ್ರಕಾಶಾ | ವೆಂಕಟೇಶಾ | ಅಪ್ರಾಕೃತ | ಪ್ರಮೆಯಭರಿತನಾದ | ಕುರುವಂಶ ವಿನಾಶಾ 4 ಭೂಗೋಳದೊಳಗಿದರಾಗಮ ತಿಳಿ | ದುರಗ ಗಿರಿ ಯಾತ್ರಿಗೆ | ಭೋಗದಾಶೆಯ ಬಿಟ್ಟು | ವೇಗದಿಂದಲಿ ನಿಜ | ಭವ ಸಾಗಿ ಬರಲು ಚನ್ನಾಗಿ ಜ್ಞಾನವ ನೀವುತ್ತ ಸಾಕುವಂಥ | ಶ್ರೀ ಗುರು ವಿಜಯವಿಠ್ಠಲ ಭಕ್ತರ ದಾತಾ5
--------------
ವಿಜಯದಾಸ
ವರ್ಣಿಸಲಳವೆ ಕರುಣಾಳು ಗುರುವರ ನಿಮ್ಮ ವರ್ಣವರ್ಣದ ಚರಿತೆ ಗುಣಗಣಗಳ ಪ. ವರ್ಣಪ್ರತಿಪಾದ್ಯ ದೇವತೆಗಳಿಗೆ ಅಳವಲ್ಲ ಇನ್ನಿದನು ಪಾಮರರು ಅರಿಯುವರೆ ಜಗದಿ ಅ.ಪ. ಪ್ರತಿಪ್ರತಿ ಕಲ್ಪದಲಿ ಅತಿಶಯದ ತಪಚರಿಸಿ ಪತಿತಪಾವನ ಹರಿಯ ಮನ ಮೆಚ್ಚಿಸಿ ಕ್ಷಿತಿಯೊಳಗೆ ಅವತರಿಸಿ ದೇವಾಂಶರೆಂದೆನಿಸಿ ಪತಿತರನು ಪಾವನವಗೊಳಿಪ ಘನಮಹಿಮ 1 ಭಕ್ತರು ಕರೆದಲ್ಲಿ ಆಸಕ್ತಿಯಿಂ ಬಂದು ಯುಕ್ತಯುಕ್ತಗಳಿಂದ ತತ್ವಗಳನರುಹಿ ಮುಕ್ತಿಗೊಡೆಯನ ಮಾರ್ಗ ಮುಕ್ತಾರ್ಥ ಜನಕರುಹಿ ಮುಕ್ತಿಪಥ ಸವಿತೋರ್ವ ಶಕ್ತಿ ಮಹಿಮೆಗಳ 2 ಪಾದ ಪದ್ಮಸುತ ತಂದೆ ಮುದ್ದು ಮೋಹನದಾಸರಾಯರೆಂದೆನಿಸಿ ಮಧ್ವಮತಸಾರಗಳ ಹೀರಿ ಮಕರಂದವನು ಸಿದ್ಧಿಗೊಳಿಸಿ ಸುಜನಕೀವ ಶ್ರೀ ಗುರುವೆ3 ಕರಿಗಿರಿ ನರಹರಿಯ ಚರಣಕಮಲ ಧ್ಯಾನ ಅರಘಳಿಗೆ ಬಿಡದೆ ಮನಮಂದಿರದಿ ಸ್ಮರಿಪ ಕರುಣಜಲನಿಧಿಯೆ ನಿಮ್ಮ ಮೊರೆಹೊಕ್ಕವರ ಕಾಯ್ವ ಪರಮಪ್ರಿಯರೆಂತೆಂಬ ಬಿರುದುಳ್ಳ ಗುರುವೇ 4 ಕಮಲಾಂತ ಪ್ರೀತ ಶ್ರೀ ಕಮಲನಾಭನ ಪಾದ ಕಮಲ ಮನದಲಿ ಸ್ಮರಿಪ ಕಮನೀಯ ಗಾತ್ರ ಕಮಲಾಕ್ಷ ಗೋಪಾಲಕೃಷ್ಣವಿಠ್ಠಲನ ಪದ ಕಮಲ ಮನದಲಿ ತೋರಿ ಕೃಪೆಯಗೈಯ್ಯುವುದು 5
--------------
ಅಂಬಾಬಾಯಿ
ವರ್ಣಿಸಲಳವೆ ಸುಗುಣಸಾಂದ್ರನ ಪ ಕರ್ಣಜನಕಕೋಟಿ ತೇಜಶ್ರೀಶ ಭಜಕ ಜಯ ಮುನೀಂದ್ರನ ಅ.ಪ ಸೂತ್ರ ನೇತ್ರದಿಂದಬದ್ಧಮಾಡಿ ಪಿಡಿದು ಕಡೆದುಶುದ್ಧ ಯುಕುತಿ ಸುಧೆಯ ತೆಗೆದನ ಶಿಷ್ಯ ಜನಕೆಶ್ರದ್ಧೆಯಿಂದಲದನು ಎರೆದನ ಕ್ರೋಧದಿಂದಕೃದ್ಧವಾದಿಗಳನು ಗೆಲಿದನ-ಜಯ ಮುನೀಂದ್ರನ 1 ಮಾನನೀಯ ಶೀಲರಾದಮಾನವರನು ಕರೆದು ಹರಿಯಧ್ಯಾನದಲ್ಲಿ ನಿಲಿಸಿ ಒಲಿಸಿಹಾನಿಯಿಲ್ಲದ ಮುಕುತಿ ಪಡೆದಜ್ಞಾನಮತವ ಜನಕೆ ಸಾರ್ದನ, ಶಿಷ್ಯಜನಕೆಸಾನುರಾಗದಿ ತತ್ವಪೇಳ್ದನಜಯ ಮುನೀಂದ್ರನ2 ಸರಸದಿಂದ ಮೂರ್ಯೋಳುವಿರಸ ದುಷ್ಟ ಭಾಷ್ಯಗಳನುಮುರಿದಕ್ಷೋಭ್ಯ ತೀರ್ಥಯತಿಪಕರಸಂಜಾತ ರಮ್ಯಚರಿತಶರಣ ಜನರ ಪೊರೆವ ಯತಿಪನ, ಶಿಷ್ಯಜನರಮರುಳ ಮೋಹತಿಮಿರ ದಿನಪನ, ನಮ್ಮ ಪರಮಗುರು ಶ್ರೀಕೃಷ್ಣ ಪಾದಭಜಕನಜಯ ಮುನೀಂದ್ರನ3
--------------
ವ್ಯಾಸರಾಯರು
ವರ್ಣಿಸಲು ಸಾಧ್ಯವೆ ಧರೆಯೊಳಿನ್ನು ಗುರುವರ್ಯಸುಶೀಲೇಂದ್ರ ತೀರ್ಥರ ಮಹಿಮೆಯನ್ನು ಪ ಭಾನುನಂದನನಂತೆ ದೀನ ಮಾನವರಿಗೆ ಸಾನುರಾಗದಿ ಕೊಡುವ ದಾನ ನೋಡಿ || ಏನು ಹೇಳಲಿ ದಿವಿಜಧೇನು ಭೂರುಹಮಣಿ ಕ್ಷೋಣಿಯೊಳು ಜಡಪಶು ರೂಪ ತಾಳಿದವು 1 ಪರಮಠಾಧೀಶರು ಪರಿಪರಿಯಲಿಂದವರ ಪರಮ ಔದಾರ್ಯಗುಣ ಪರೀಕ್ಷಿಸುತಲಿ ಬೆರಳು ಕಚ್ಚುತಲಿ ಬೆರಗಾಗಿ ಜಗದೊಳಗೆ ಸರಿ ಇವರಿಗಿಲ್ಲೆಂದು ಶಿರದೂಗಿ ಹೊಗಳಿದರು 2 ಧೀಮಂತ ಜನರೊಡೆಯ ಶ್ರೀಮಂತಮಂದಿರದ ಸ್ವಾಮಿಗಳ ಪೂರ್ಣ ಪ್ರೇಮ ಪಡೆದು | ತಾಮರಸ ಭಾವ ಪೂಜ್ಯ ಶಾಮಸುಂದರ ಮೂಲ ರಾಮ ಮೂರ್ತಿಯನು ಭೂಮಿಯೊಳು ಮೆರೆಸಿದರು 3
--------------
ಶಾಮಸುಂದರ ವಿಠಲ
ವರ್ಣಿಸಲು ಸಾಧ್ಯವೇ ಧರೆಯೊಳಿನ್ನ ವರದೇಂದ್ರಗುರು ನಿನ್ನವರ ಮಹಿಮೆಯ ಪ ದಶಪ್ರಮತಿ ಸುಮತಾಖ್ಯ | ಬಿಸಜನಿಧಿಗೆ ಉಡುನಾಥ ವಸುಧಿ ಸುಮನಸವ್ರಾತ | ನಮಿತ ಖಾತ | ವಸುಧೀಂದ್ರ ಕರಜಾತ | ಸುಶರಣರ ಸುಖದಾತ | ವಸುಧೀಶ ಪಸರಿಸಿದ | ಅಸಮ ತವ ಚರಿತೆಯನು 1 ಸಾರ ಕನ್ನಡದಲಿ ನೀರಚಿಸುತಲಿ ತಂತ್ರ | ಸಾರ ಮಂತ್ರವ ಪರಮ ಕಾರುಣ್ಯದಿ || ಶ್ರೀರಂಗನೋಲಿಸಿದ ಧಾರುಣಿಪ ದಾಸರಿಗೆ ಸಾರಿ ಪೇಳಿದ ಪರಮೋಧಾರ ಜಿತಮಾರ 2 ಗುಣನಿಧಿ ಪ್ರಾಣೇಶದಾಸಾರ್ಯರ ಮನೆಯ ಹಿತ್ತಲದೊಳಗೆ ಬಣವಿ ಬುಡದಲಿ ಬಂದು ಘನ ತುಲಸಿ ರೂಪದಲಿ ಜನಕೆ ತೋರಿಸಿ ಚಿತ್ರ 3 ವಾದದಲಿ ರಾಮಾಖ್ಯ ವಾದಿಯಪ ಜಯ ಪೊಂದಿ ಗಜ ಭೂಷಣಾದಿಗಳನು || ಮೋದ ಬಡಿಸಿ ನಿನ್ನ ಔದಾರ್ಯ ಗುಣವ 4 ಶಾಮಸುಂದರ ಮೂಲ ರಾಮಚಂದ್ರನ ಚರಣ ತಾಮರಸ ಷಡ್ಜಪರಮ ಸುಗಣ ಧೀಮಂತ ಶ್ರೀಮಂತ್ರಧಾಮ ನಿಲಯರ ಪೂರ್ಣ ಪ್ರೆಮ ಸತ್ವಾತ್ರ ಮಮ ಸ್ವಾಮಿ ಸುಚರಿತ್ರ 5
--------------
ಶಾಮಸುಂದರ ವಿಠಲ
ವಲ್ಲಭೆ ಬಲು ಸುಲಭೆ ಪ ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆ ಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ 1 ಕೋಲ ಮುನಿಗೊಲಿದಮಲ ಮೃಗನಾಭಿ ಫಾಲೆ ಸಜ್ಜನರ ಪಾಲೆಬಾಲೆ ಜಾತರಹಿತೆ ಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ2 ಶಿವದುರ್ಗೆ ನೀನೆಂದು ಶ್ರವಣಮಾಡಲು ಮನುಜ ರವರವ ನರಕದಲ್ಲಿ ಬವಣೆಪಟ್ಟ ಮೇಲೆ ಸವಿಯದಂತೆ ತಮಸುನಿವಹದೊಳಗೆ ಇಪ್ಪನು 3 ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆ ಸೀಮೆಯೊಳಗೆ ನಿನ್ನಯ ನಾಮಕೊಂಡಾಡಲು ತಾಮಸಗಳ ಕಳೆದು ನಿಷ್ಕಾಮ ಫಲ ಪಾಲಿಪೆ 4 ಧರೆಯೊಳು ಷೋಡಶಗಿರಿಯ ಪ್ರಾದೇಶ ಮಂ ನಿತ್ಯ ಸಿರಿ ವಿಜಯವಿಠ್ಠಲನ್ನಪರಮ ಪ್ರೀತಿ ಅರ್ಧಾಂಗಿ 5
--------------
ವಿಜಯದಾಸ
ವಶವಲ್ಲದೀ ಮನದ ದೆಸೆಯಿಂದೆ ನಾ ಬಲು ದೆಸೆಗೆಟ್ಟು ಬಳಲುವೆ ಕುಸುಮಾಕ್ಷ ಕಣ್ದೆರೆಯೊ ಪ ನಶಿಪ ಪ್ರಪಂಚ ಭ್ರಮಿಸಿ ಹಸಗೆಡಿಸಿ ನಿಜಧ್ಯಾನ ಪಶುವಿನಂತೆನ್ನನು ದಿಸೆದಿಸೆಗೆಳಿಪುದು ಅ.ಪ ಭುವಿಪರನೊಲಿಸರೆಲವದಿ ಭೂಮಿಯ ಪಡೆದೆ ಸವ ಜೋಡಿ ನೂಕಿತ್ತು ಜವದಿ ಕಟ್ಟುವುದು ಬುವಿಯೊಳು ಮಿಗಿಲೆನಿಸುವ ತೆರೆ ಮೇಲ್ಮಾಡಿ ಭವನ ರಚಿಸಿ ಕೋಟಿದ್ರವ್ಯಗಳಿಗಳುವುದು 1 ಮದುವ್ಯಾಗಿ ಪದ್ಮಿನಿಯ ವದನದೊಳ್ವದನಿಕ್ಕಿ ಮದನಕದನದಿ ಸುಖಿಸುವುದೊಂದು ಫ¼ಗಿ ಸದನ ಮುರಿದು ಸಂ ಪದವೆಲ್ಲ ತನ್ನಗೆ ಒದಗಿಬರಲೆನ್ನುವುದು 2 ತಡೆಯದೆ ವೈರಿಗಳ ಕಡುಕೋಪದಿಂ ತಂದು ಪಿಡಿದು ಕಂಬಕೆ ಕಟ್ಟಿ ಸುಡಿಸುವುದೊಡನೆ ಕಡುಗಲಿತನದಿಂದ ಪೊಡವಿಪರ ಸದೆಬಡಿದು ಪೊಡವಿ ಗೆಲಿದು ಒಂದೇ ಕೊಡೆಯಿಂದಾಳುವುದು 3 ಯಾತ್ರೆ ಮಾಡುವುದೊಮ್ಮೆ ಕ್ಷೇತ್ರದೊಳಗೆ ಕೂತು ನೇತ್ರಮಂ ಬಂಧಿಸಿ ಸ್ತೋತ್ರ ಮಾಡುವುದು ಮೂತ್ರದ್ವಾರದೆ ಬಂದ ಸೂತ್ರದ ಕಾಯಕ್ಕೆ ಧಾತ್ರಿ ಸೊನ್ನೆಂದೊಮ್ಮೆ ಖಾತ್ರಿ ಮಾಡುವುದು 4 ಯಾತರ್ಹಲವು ಪರಿಮಿತಿಯಿಲ್ಲದ್ಯೋಚಿಸಿ ಖತಿ ತಾಳಲಾರೆ ಅತಿಭ್ರಷ್ಟಮನದ ದುರ್ಮತಿ ನಿವಾರಿಸು ಗತಿ ನೀಡೆನಗೆ ಕೃಪೆಯಿಂ ಹಿತಭಕ್ತ ಶ್ರೀರಾಮ 5
--------------
ರಾಮದಾಸರು
ವಸುದೇವ ಸುತನೆ ಬಾರೋ ವಸುಧೆಪಾಲಾ ಪ. ಶಿಸುತನದಲಿ ಕಡು ವಿಷದ ಮೊಲೆಯನುಂಡುಅಸುವನೆ ಹೀರಿದ ಶಿಸುಗಳರಸ ರಂಗಾ 1 ಗೊಲ್ಲತೆಯರ ಮನೆ ಮೆಲ್ಲಮೆಲ್ಲನೆ ಪೊಕ್ಕುಗುಲ್ಲುಮಾಡುತ ಪಾಲ್ ಮೊಸರು ಬೆಣ್ಣೆಯ ಕದ್ದು 2 ವೇಣುವನೂದುತ ಗಾನವ ಮಾಡುತಜಾಣೆಯನೊಲಿಸಿದ ಜಾಣ ಶ್ರೀಕೃಷ್ಣ 3 ತುರುವು ಕಾಯಲು ಪೋಗೆ ವರುಷವ ಸುರಿಸಲುಬೆರಳಲಿ ಬೆಟ್ಟವ ನಿರಿಸಿ ಗೋವ್ಗಳ ಕಾಯ್ದ 4 ಕಾಳೀಯ ಮೆಟ್ಟುತ ನಲಿನಲಿದಾಡುತಲೀಲೆಯ ತೋರಿದ ಬಾಲಾಗೋಪಾಲಾ 5 ಬಿಲ್ಲನೆ ಮುರಿಯುತ ಮಲ್ಲರ ಗೆದೆಯುತಖುಲ್ಲ ಕಂಸನ ಕೊಂದ ಪುಲ್ಲನಾಭಗೊಲ್ಲ 6 ಶೌರಿ 7
--------------
ಸಿರಿಗುರುತಂದೆವರದವಿಠಲರು
ವಸುಧೀಂದ್ರ ತೀರ್ಥರು ಶ್ರೀ ವಸುಧೀಂದ್ರ ರಾಯಾ | ಪಾವನಕಾಯಾ ಕೋವಿದ ಜನ ಪ್ರೀಯಾ ಪ ಭೂವಲಯದೊಳತಿ | ತೀವಿದ ಅಘವನ ದಾವಕ ನತಜನ ದೇವತರು ಎನಿಪ ಅ ಜಿತಕ್ರೋಧ ಜಯಶೀಲಾ | ದುವ್ರ್ಯಸನ ಪ ವಜ್ರ ಹರಿಲೋಲಾ ಮಾರ್ಗಣ | ಮಥನ ಮೌನೀಶ ವಾಂ ಛಿತಫಲವಿತ್ತು ಸಂ | ತತ ಪಾಲಿಸುವುದೆಮ್ಮ ಪತಿತ ಪಾವನ ವಿತತ ಕರುಣಾ ಮೃತರತಾನತ ಹಿತಕರಾಗಮ ತತಿ ಪಯೋಜಾರ್ಕ ಅತಿಮುದಾ1 ಭೂದೇವಾನುತ ಮಹಿಮಾ |ಶಾತವಾನು ಭೀಮ ವೇದಪೂಜಿತರಾಮಾ ಪಾದ | ಸಾದರದಲಿ ನಿತ್ಯಾ ರಾಧಿಸುತಿಹ ಸುವಿ | ನೋದಚರಿತ ಗುರು ಮೋದತೀರ್ಥ ಮತಾಬ್ಧಿ ಸೋಮ ಕು ವಾದಿ ಮತ ಮತ್ತೇಭಕುಂಭಧ ರಾಧರಾತಟವಾನುಗರೊಳೆ ನ್ನಾದರಿಸುವುದಖಿಳಗುಣಾಂಬುಧೇ 2 ಸರಸಭಾಷೋಹ್ಲಾಸಾ | ವರ್ಚಿತ ದೋಷಾ ಹರಿನಿಭಸಂಕಾಶಾ ಶರೀರಾ ಸಜ್ಜನಗೇಯಾ | ಗುರುವಾದೀಂದ್ರಕರ ಸರಸೀರುಹ ಸಂಜಾತ | ನಿರುಪಮ ನಿರ್ಭೀತಾ ಸುರುಚಿರಹಿಮ ಕಿರಣ ತೇಜ ಸ್ಫುರುಣ ಶ್ರೀ ಜಗನ್ನಾಥವಿಠಲನ ಚರಣ ಪಂಕೇರುಹ ಯುಗಳ ಮಧು ಕರದುರಿತಘನ ಮಾರುತಾ 3
--------------
ಜಗನ್ನಾಥದಾಸರು
ವಾಗೀಶವಂದಿತ ಸಲಹೈ ವರದಾತ ಪೊರೆಯೈ ಪ. ಕರಿ ಮಕರಿಗೆ ಸಿಕ್ಕಿ ಕರೆಕರೆ ಪಡುತಲಿ ಹರಿಹರಿ ಪೊರೆಯೆನೆ ಭರದಿ ನೀ ಪೊರೆದೆಯೈ 1 ತರುಣಿಯು ಮೊರೆಯಿಡೆ ತ್ವರಿತದಿಂ ವರವಿತ್ತೈ 2 ಕಂದನು ಕೂಗಲು ಕಂಬದಿಂ ಬಂದೆಯೈ ತಂದೆ ನೀನೆಂದೆನೆ ಬಂದು ಕೈಪಿಡಿ ದೊರೆ 3 ಅರಿಗಳಟ್ಟುಳಿಯಿಂದೆ ಪರಿಪರಿಯಿಂ ನೊಂದೆ ಅರಿವನು ಕರುಣಿಸಿ ನರಹರಿ ಸಲಹೆಂದೆ 4 ಶೇಷಭೂಷಣವಿನುತ ಶೇಷಶಯನ ಮಹಿತ ಶೇಷಶೈಲೇಶನೆ ಪೋಷಿಸೈ ಶ್ರೀಶನೆ 5
--------------
ನಂಜನಗೂಡು ತಿರುಮಲಾಂಬಾ
ವಾಗ್ದೇವಿ ಪ ವಾಗ್ದೇವಿ ಅ.ಪ. ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ ವ್ರತತಿಜನೇತ್ರೆ ಭಾರತಿ ನೀ ದಯಮಾಡೆ 1 ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಾಶ್ರಿತರ ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ 2 ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು ಸುಗುಣೆ ಸನ್ಮತಿಗೊಟ್ಟು ಬೇಗೆನ್ನ ಸಲಹೆ 3
--------------
ಜಗನ್ನಾಥದಾಸರು
ವಾಗ್ದೇವಿ ಭಾರತಿ ನೀಡೆನಗೆ ಸುಮತಿ ನಂದಸುತನ ಪದದಿ ಕೊಡು ರತಿ ಪ ಕಳೆದು ಮನದಿ- ಗರಿಯೆ ಬಂದು ಬೇಗ ಅ.ಪ ಇಂದು ಮೌಲಿ ಮುಖ್ಯ ಸುರಗಣ ವಂದಿತಳೆ ಎನ್ನ ಅನುದಿನ ನಂದ ಮುನಿಯ ಶಾಸ್ತ್ರವಚನ ಛಂದದಿಂದ ಪಠಣ ಶ್ರವಣಾನಂದವಾಗುವಂದದಿ ಗುರು ಗಂಧ ವಾಹನರಾಣಿ ನಿನಗೆ1 ಪೇಳಲಳವೆ ನಿಮ್ಮ ಮಹಿಮೆಯ ಕಾಲಭಿಮಾನಿ ಕೇಳುವೆ ಸುಜ್ಞಾನ ಭಕುತಿಯ ಕಾಲಕಾಲಗಳಲ್ಲಿ ಎನ್ನ ಶುಭ ಲೀಲೆಗಳನು ಪಾಡಿ ಪೊಗಳುವಂತೆ ಜನನಿ 2 ಚಾರು ಕೃಷ್ಣಾತೀರಸಂಸ್ಥಿತಾ ಉದಾರ ಚರಿತ ನೀರಜಾಸನಾದಿಸುರನುತಾÀ ಶೇರಿದ ಭಕುತರಿಗೆ ತ್ರಿದಶ ಭೂರುಹ ವೆಂದೆನಿಸಿದಂಥಾ ಪಾರ ಮಹಿಮ ಕಾರ್ಪರಸಿರಿ ನಾರಸಿಂಹನ ಸೊಸೆಯೆ ನಿನಗೆ 3
--------------
ಕಾರ್ಪರ ನರಹರಿದಾಸರು
ವಾಜಿವದನಾರ್ಚಕ ಶ್ರೀ ವಾದಿರಾಜ ಪ ರಾಜೀವನಯನ ಶ್ರೀ ಕೃಷ್ಣನಲಿ ಬಿಡು ಎನ್ನ ಅ.ಪ. ದೇವದೇವೇಶನ ಪರಮ ಒಲುಮೆಗೆ ಪಾತ್ರ ಪಾವನ್ನತಮಚರಿಯ ಪತಿತಪಾಲ ಸಾವಧಾನದಿ ಎನ್ನ ಆದಿರೋಗವನಳಿದು ಕೇವಲ ಸದ್ಭಕ್ತಿ ಶೀಲನ ಮಾಡಯ್ಯ 1 ಭಾರತೀಪತಿ ಪದವನೈದುವ ಮಹಾತ್ಮ ಮಾರಾರಿಸುರ ಪೂಜ್ಯ ಕರುಣಿಸಿ ಕಾಯೊ ಸಾರಿದೆನು ತವ ಚರಣ ಸರಸಿಜಯುಗ್ಮಗಳ ದೂರ ಮಾಡದೆ ಹರಿಯ ಕರುಣಪಾತ್ರನ ಮಾಡು 2 ಭಾಗವತ ಶಿರೋರತುನರಿಂದರ್ಚಿತನೆ ಶಿರಿ ವೇಣುಗೋಪಾಲ ವೇದ ವೇದ್ಯ ಜಯೇಶವಿಠಲನ ಮನದಲ್ಲಿ ಬಿಡದಿಪ್ಪ ಪರಮಕೃಪೆ ಬೇಡುವೆನು ಕರುಣಾಬ್ಧಿ ಕೃಪೆ ಮಾಡು 3
--------------
ಜಯೇಶವಿಠಲ