ಒಟ್ಟು 9531 ಕಡೆಗಳಲ್ಲಿ , 132 ದಾಸರು , 5434 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಚ್ಚದಿರೀ ಭಾಗ್ಯ ಆರಿಗೂ ಸ್ಥಿರವಲ್ಲನೆಚ್ಚದಿರೆಚ್ಚರಿಕೆಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕೆಮೆಚ್ಚು ಕೇಳೆಚ್ಚರಿಕೆ ಪ.ಪೊಡವಿಪರೊಲೂಮೆ ಸುಸ್ಥಿರವೆಂದು ಗರ್ವದಿನೆಡೆಯದಿರೆಚ್ಚರಿಕೆಕೊಡವನಂಧಕ ಪೊತ್ತು ನಡೆವಂತೆ ಅಧಿಕಾರಕಡೆಉಒಲ್ಲ ಎಚ್ಚರಿಕೆಕಡುಚಪಲನು ತಾನೆಂದು ಪರರವಗಡಿ ಸದಿರೆಚ್ಚರಿಕೆಬಡವರೆಡರ ಲಾಲಿಸದೆಮುಂದಕ್ಕಿ ಹೆಚ್ಚುಇಡಬೇಡವೆಚ್ಚರಿಕೆ 1ದೊರೆಗಳ ಒಲವಲಂಯಂತೆಂದಲ್ಲರೊಳುಹಗೆತರವಲ್ಲ ಎಚ್ಚರಿಕೆಉರಗನ ಮುತ್ತಿ ಕಟ್ಟಿರುವೆಯು ಕೊರೆದಂಥತೆರನಪ್ಪುದೆಚ್ಚರಿಕೆಗುರುಹಿರಿಯರ ಕಂಡು ಚರಣಕೆ ಶಿರಬಾಗಿನಡೆಯುತಿರೆಚ್ಚರಿಕೆಸಿರಿಯೆಂಬ ಸೊಡರಿಗೆ ಮಾನ್ಯರ ಅವಮಾನಬಿರುಗಾಳಿ ಎಚ್ಚರಿಕೆ 2ಲೋಕಾಪವಾದಕೆ ಅಂಜಿ ನಡೆಯುವುದು ವಿವೇಕ ಕೇಳಚ್ಚರಿಕೆನಾಕೇಂದ್ರನಾದರೂ ಬಿಡದಪಕೀರ್ತಿ ಪರಾಕು ಕೇಳೆಚ್ಚರಿಕೆಕಾಕು ಮನುಜರಕೊಂಡೆಯ ಕೇಳೀ ಕೋಪದುದ್ರೇಕ ಬೇಡೆಚ್ಚರಿಕೆಭೂಕಾಂತೆ ನಡು - ನಡುಗುವಳು ನಿಷ್ಠುರವಾದವಾಕುಕೇಳೆಚ್ಚರಿಕೆ3ನಳ - ಮಾಂಧಾತರೆಂಬವರೇನಾದರುತಿಳಿದು ನೋಡೆಚ್ಚರಿಕೆಅಳಿವುದು ಈ ದೇಹ ಉಳಿವೂದೆಂದೇ ಕೀರ್ತಿಇಳೆಯೊಳಗೆಚ್ಚರಿಕೆಅಳಲಿಸಿ ಪರರನು ಗಳಿಸಿದಂಥ ಹೊನ್ನುಉಳಿಯದು ಎಚ್ಚರಿಕೆಉಳಿದಲ್ಪಕಾಲದಿ ಬಡವರಾದವರನುಹಳಿಯದಿರೆಚ್ಚರಿಕೆ 4ಪರಸತಿ - ಪರಧನಕಳುಪಲು ಸಿರಿಮೊಗದಿರುಹುವಳಚ್ಚರಿಕೆನೆರೆ ಛಿದ್ರಕುಂಭದ ನೀರಿನಂತಾಯುಷ್ಯಸರಿಯುವುದೆಚ್ಚರಿಕೆಬರುವ ಹಾನಿವೃದ್ಧಿ ತನ್ನ ಕಾಲದ ಮೀರಲರಿಯದು ಎಚ್ಚರಿಕೆವರದ ಪುರಂದರವಿಠಲರಾಯನಮರೆಯದಿರೆಚ್ಚರಿಕೆ 5
--------------
ಪುರಂದರದಾಸರು
ನೆಚ್ಚಬೆÉೀಡ ಭಾಗ್ಯವನು ಹುಟ್ಟುಗೊಂಡ ಮನುಜಾವೆಚ್ಚವಾಗಿ ಹೋಗುವುದು ಏಸೊಂದು ಬಗೆಯಲಿ ಪ.ಮುತ್ತು - ಮಾಣಿಕ - ನವರತ್ನದ ಗದ್ದುಗೆಯುಎತ್ತ ನೋಡಲು ಸಿರಿಕೋ ಎನುತಲಿಸತ್ಯ ಹರಿಶ್ಚಂದ್ರ ಮತ್ತೆ ಸುಡುಗಾಡಿನಲ್ಲಿಎತ್ತುವ ಹಣೆಯಕ್ಕಿ ಹಾಗದ ಕಾಸ 1ದೇವತೆಗಳ ಕೈಯ ಸೇವೆಯ ಕೊಳುತಿರ್ದರಾವಣನ ಬದುಕು ಮತ್ತೇನಾಯಿತು?ಜೀವದ ಪರಿಯರಿತು ನಾವು ದೊರೆಯೆಂಬುವುದೆಸಾವಿನ ಮನೆಹೊಕ್ಕು ಸಾಹಸ ಪಡಲೇಕೆ 2ಹದಿನೆಂಟುಕೋಟಿ ಧನ ಉದಯಕೆ ಬರುತಿರಲುಒದಗಿತೆ ಆ ರಾಶಿ ದಿನ ಕರ್ಣಗೆ ?ತುದಿ ಮಧ್ಯಾಹ್ನಕ್ಕೆ ದರಿದ್ರನೆನಿಸುವಇದರಿಂದ ಕಡೆಗಂಡರಾರು ಜಗದೊಳಗೆ ? 3ಬೆಳ್ಳಿಯ ಗಿಣಿಲು ಬಂಗಾರದಹರಿವಾಣಕುಳಿತಲ್ಲಿ ಕನಕದ ರಾಶಿಗಳುಗಳಿಗೆಗೆ ಈ ಭಾಗ್ಯ ಕಾಳಬೆಳುದಿಂಗಳುಉಳಿದವು ನಾ ಕಾಣೆ ಚಿರಲಕ್ಷ್ಮಿಯೆನಲು 4ಇಂತು ಈ ಪರಿಯಲನಂತರು ಹೋದರುಎಂತು ಪೇಳಲಿಅವರ ಪೆಸರುಗಳ ?ಚಿಂತಾಯತ ಶ್ರೀ ಪುರಂದರವಿಠಲನಸಂತತ ಪಾದಕಮಲವ ಭಜಿಸೊ ಮನುಜಾ 5
--------------
ಪುರಂದರದಾಸರು
ನೆಚ್ಚಿದಿರೋ ಪ್ರಾಣಿ ಸಂಸಾರ ಸ್ಥಿರವೆಂದುಹುಚ್ಚು ಬುದ್ದಿಯಲಿ ನೀ ಕೆಡಬೇಡ ಪ.ಎಚ್ಚರಿತುಕೊಂಡು ಧರ್ಮದಿ ನಡೆ ಕಣ್ಣನುಮುಚ್ಚಿದ ಮೇಲುಂಟೆ - ನರಜನ್ಮ ಸ್ಥಿರವಲ್ಲ ಅಪಅಷ್ಟಕಂಬವನಿಕ್ಕಿ ತಾಕದುಪ್ಪರಿಗೆಯಕಟ್ಟಿದ ಮನೆ ಇದ್ದಂತಿಹುದುಹೊಟ್ಟೆತುಂಬ ಉಣದೆ ಧನವ ಗಳಿಸಿ - ಬಚ್ಚಿಟ್ಟಲ್ಲಿರದೆ ಸಂಗಡ ಬಾಹೋದಲ್ಲ 1ಅತಿ ಪ್ರೀತಿಯಿಂದ ಮದುವೆಯಾದ ಮೋಹದಸತಿ ತನ್ನ ಮರಣದ ಕಾಲಕ್ಕೆಗತಿಯಾವುದೆನುತಲೆ ಮರುಗಿದಪ್ಪಳಲ್ಲದೆಜತೆಯಾಗಿ ನಿನ್ನ ಸಂಗಡ ಬಾಹಳಲ್ಲ 2ಒಂದೊಂದು ಪರಿಯ ಬುಧ್ಧಿಯ ಪೇಳಿ ಸಲುಹಿದಕಂದ ನಿನ್ನಾವಸಾನ ಕಾಲಕೆಮುಂದೇನು ಸಂಸಾರ ನಡೆಸಲುಪಾಯವೇನೆಂದು ಚಿಂತಿಸುವ ಸಂಗಡ ಬಾಹನಲ್ಲ 3ನಾಟರಿಷ್ಟರು ಬಂಧು - ಬಳಗವುಹರಿ ಕೊಟ್ಟುದುಂಟಾದರೆ ಬಂದು ಉಣ್ಣುವರುಕಂತಕ ಬಂದರೆ ಹೊತ್ತು ಕಾಷ್ಠದೊಳಿಟ್ಟುಕಂತಿಯ ತಂದೊಟ್ಟಿ ಸುಡುವರು ಕಾಣೊ 4ಇಂತಿದು ಒಂದು ಪ್ರಯೋಜನ ನಿನಗಿಲ್ಲಅಂತ್ಯಕಾಲಕ್ಕೆ ಸಂಗಡ ಬಾಹುದುಕಂತುಜನಕ ನಮ್ಮ ಪುರಂದರವಿಠಲನಸಂತತ ಧ್ಯಾನದೊಳಿರು ಕಾಣೋ ಮನುಜಾ 5
--------------
ಪುರಂದರದಾಸರು
ನೆನೆ ಮನವೆ ದಾನವಾರಿಯಹಿತಕಾರಿಯಾಶ್ರಿತ ದೊರೆಯ ಪ.ಹೀನ ಪಾಪಾಖ್ಯ ವಿಪಿನದಾವಕೃಶಾನುಸನಾತನ ನಾರಾಯಣ ಶ್ರೀನಾಥನ 1ಘೋರನಿರಯವಿದೂರ ಕರುಣಾಪಾರವಾರಿಜಾಸನ ವಂದ್ಯ ಸುರಶ್ರೇಷ್ಠನ 2ತನ್ನವರಿಗೆ ಪ್ರಸನ್ನವೆಂಕಟಕೃಷ್ಣಮನ್ಯ ಸದ್ಭಕ್ತರಪಾವನ್ನನಾಮನ3
--------------
ಪ್ರಸನ್ನವೆಂಕಟದಾಸರು
ನೆಲದಲ್ಲಿ ಪಸರಿಸಿದ ಪಾಲಮೇಲೊರಗಿದ್ದಹಳೆಯ ಹಾವ ಕಂಡೆನದರಲದ್ಭುತವ ಕಂಡೆ ಪ.ನಡುಗಡಿದ ಸಿಂಗಡಿಯ ಬಿಲ್ಲ ಕಂಡೆನದರಮೇ-ಲ್ಗಡೆಯಲಧೋಮುಖದ ತುಂಬಿಗಳ ಹಿಂಡ ಕಂಡೆಮಡುವೆರಡ ಕಡೆಯಲ್ಲಿ ಒಂದೊಂದು ಮಕರಿಯ ಕಂಡೆಕಡೆದ ಶಂಖ ಚತುರ್ವೇದಕೊದಗುವುದ ಕಂಡೆ 1ಪದುಮದೆಸಳ್ಗಳಿಗೆ ಮೂರು ವಿಧದ ಬಣ್ಣವ ಕಂಡೆಮೃದುವಾದ ಕೂರ್ಮಗಳ ಬೆನ್ನಸೊಬಗ ಕಂಡೆಮಧುರ ಪವಳೊಳಗೆ ಪುಟ್ಟ ಕರಡಿಗೆಯ ಕಂಡೆಅಧೋಮುಖದ ಸಂಪಿಗೆಗೆರಡು ವಿವರವ ಕಂಡೆ 2ನೇಲುತಿದ್ದ ಲತೆಗಳ ತುದಿಯ ಜಾಲವ ಕಂಡೆ ವಿ-ಶಾಲವಾದ ನೀಲಮಣಿಯ ಹಲಗೆಯಲಿ ಹೆಣ್ಣ ಕಂಡೆಏಳು ಲೋಕಗಳೊಳಗೆ ಪುಟ್ಟ ಕರಡಿಗೆಯ ಕಂಡೆಈ ಲೋಕವ ಮೋಹಿಸುವ ಮೂರು ಚಿನ್ನದಕೋಲಕಂಡೆ3ಬಾವಿಯೊಳು ಪುಟ್ಟಿಕೊಂಡ ಸ್ಥೂಲ ಪದ್ಮವ ಕಂಡೆಭಾವಿಸೆ ಕರಿಯಿಲ್ಲದ ಕುಂಭಸ್ಥಳವ ಕಂಡೆಆವಾಗಳಿವಿಲ್ಲದಕದಳಿಕಂಬಗಳ ಕೆಳಗೆಈ ವಸುಧೆಯ ಮೋಹಿಸುವೆರಡು ಕನ್ನಡಿಗಳ ಕಂಡೆ 4ಬೆಳೆದೆರಡು ಗಜದಂತಗಳ ಕಂಡೆ ನಳನಳಿಪನಳಿನಯುಗ್ಮವ ಕಂಡೆನದರೆಸಳುಗಳಲ್ಲಿತೊಳೆದ ಹತ್ತು ಮುತ್ತುಗಳ ಕಂಡೆ ಬೇಗದಲಿ ಶ್ರೀ-ಲಲನೆಯಾಳ್ದ ಹಯವದನನಾಳ್ಗಳೆ ಬಲ್ಲರೈಸೆ 5
--------------
ವಾದಿರಾಜ
ನೋಡಬಾರದೆ ಕೃಷ್ಣಾ ಕರುಣದಿನೋಡಬಾರದೆ ಕೃಷ್ಣಹಾಡಿ ಹರಸಿ ನಿನ್ನನೆ ಹೊಗಳುವಪರಿಮಾಡಬಾರದೆ ಹರಿಯೆ ಪ.ಹಾನಿ ಹಿತಗಳನರಿಯೆ ಸುಜ್ಞಾನ ಭಕುತಿಗಳರಿಯೆದೀನ ದೇಶಿಗನುದ್ಧರಿಸೆಲೆ ದೇವಸಾನುರಾಗದಿ ದೇವ 1ಏಸುಜನ್ಮದಿ ಬಂದೆ ನಾಘಾಸಿಯಾದೆನೊ ತಂದೆದಾಸರೊಳು ಆವಕಾಲಭಿಲಾಷೆಯುಳ್ಳ ಶ್ರೀಲೋಲ 2ಏನು ಹೇಳಲಿ ಮನವು ನಿನ್ನಧ್ಯಾನಕೊದಗದು ಕ್ಷಣವುತಾನೆ ಹರಿದಡೆ ಕೇಡು ಅದರಿಂದಪ್ರಾಣನಾಥ ಮುಕುಂದ 3ಕುಂಬಳವು ಕೈಗತ್ತಿ ಕರಾಂಬುಜಕೆ ನಿನಗಿತ್ತೆನಂಬಿದವಗಿನ್ನೇನಾರೆ ಮಾಡಯ್ಯಅಂಬುಜಜ ಸ್ಮರರಯ್ಯ 4ಕಿಂಕರೌಘದೊಳಿಡೊ ನಿಶ್ಶಂಕನೆ ದಯಮಾಡೊಪಂಕಜಾಕ್ಷ ಮುರಾರಿ ಪ್ರಸನ್ನವೆಂಕಟಾದ್ರಿಪಾವನ್ನ5
--------------
ಪ್ರಸನ್ನವೆಂಕಟದಾಸರು
ನೋಡಿದೆ ಮನದಣಿಯೆ ಶ್ರೀನಿವಾಸನನೋಡಿದೆ ಮನದಣಿಯೆ ಪ.ನೋಡಿದೆನು ಶೇಷಾದ್ರಿಯಿಂದೊಡ-ಗೂಡಿ ಭಕ್ತರ ಬೀಡಿನೊಳು ನಲಿದಾಡಿ ಮೆರೆವ ಸಗಾಢ ದೈತ್ಯವಿಭಾಡ ಶ್ರೀಹರಿ ರೂಢಿಗೊಡೆಯನ ಅ.ಪ.ಶರಣರಪೇಕ್ಷೆಯನು ಕೊಟ್ಟುಳುಹಲುಕರುಣಾಳು ನಿಜದಿ ತಾನುಸ್ಥಿರತೆಯೊಳು ಸ್ವಪ್ನದಲಿ ತಾ ಗೋಚರಿಸಿ ಭರವಸೆಯಿತ್ತು ವೆಂಕಟಗಿರಿಯವೋಲ್ ಸಾನ್ನಿಧ್ಯ ವದನಾಂ-ಬುರುಹದಲಿ ಮೆರೆದಿಹನ ಚರಣವ 1ಲಲನೆಲಕ್ಷ್ಮಿಯು ಬಲದಿ ಶೋಭಿಪ ವಾಮದೊಳಗೆ ಗಣಪ ಮುದದಿಒಲವಿನಿಂ ಗರುಡಾಂಕ ಮೃದುಪದನಳಿನದಾಶ್ರಯದಿಂದ ವಾಯುಜಬಳಗ ಚಾತುರ್ದೇವತೆಯರಿಂ-ದೊಳಗೆ ಪೂಜೆಯಗೊಂಬ ದೇವನ 2ಕುಂಡಿಲಕೊಳದೊಳಿಹ ಪ್ರಾಣೇಶ ಮುಂ-ಕೊಂಡು ಪಟ್ಟಣಕೆ ಬಹಕೆಂಡದಂದದೊಳುರಿವ ಶತಮಾ-ರ್ತಾಂಡದೀಪ್ತಾ ಮುಖಂಡ ಭೃತ್ಯನಕೊಂಡುಯಿದಿರಲಿ ಮಂಡಿಸಿದನಖಿಳಾಂಡಕೋಟಿ ಬ್ರಹ್ಮಾಂಡನಾಥನ 3ನೀಲಮೇಘಶ್ಯಾಮಲ ಕೌಸ್ತುಭವನಮಾಲಕಂಧರಶೋಭನನೀಲಮಾಣಿಕವಜ್ರಮುತ್ತಿಸಾಲ ಸರ ಪೂಮಾಲೆಗಳ ಸುಖಲೀಲೆಯಿಂದೊಪ್ಪಿರುವ ಭಕ್ತರಕೇಳಿಯಲಿ ನಲಿದಾಡುತಿಹನನು 4ಕಾಣೆನು ಪ್ರತಿನಿಧಿಯ ನಮ್ಮೊಡೆಯ ಲ-ಕ್ಷ್ಮೀನಾರಾಯಣ ಹರಿಯಕಾಣಿಕೆಯ ಕಪ್ಪಗಳ ತರಿಸುತಮಾನಿಸುತ ಭಕ್ತಾಭಿಮತವನುತಾನೆ ಪಾಲಿಸಿ ಮೆರೆವ ಕಾರ್ಕಳಶ್ರೀನಿವಾಸ ಮಹಾನುಭಾವನ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನೋಡಿರೆ ಯಶೋದೆಯ ಪುಣ್ಯಪಡೆದಿಹ್ಯಳೆಂಥ ಮಾನ್ಯ ಪಪೊಡವಿ ಈರೇಳನ್ನು ಒಡಲೊಳಿಟ್ಟವನನ್ನುತೊಡೆಮೇಲಾಡಿಸುವಳು ಅ.ಪವಿಲಸಿತಮಹಿಮನ ಕಳೆಯ ತಿಳಿಯಲು ವೇದಬಲುವಿಧ ಪೊಗಳುತ ನೆಲೆಯುಗಾಣದಘನಕಳವಳಗೊಳುತಿಹ್ಯವಭವನ ದೆಸೆಯಿಂಸುಲಭದೆತ್ತಿ ತನ್ನ ಮೊಲೆಯನುಣಿಸುವಳೀಕೆ 1ಭುಜಗಭೂಷನು ತನ್ನ ನಿಜಪದವನುದಿನಭಜಿಸಿ ಬೇಡಲು ಕಾಣರಜಸುರಮುನಿಗಣಸುಜನಗುಣಾಂತರಂಗ ತ್ರಿಜಗವ್ಯಾಪಕನನಿಜವನು ಮನದಣಿ ಕಂಡು ಹಿಗ್ಗಿದಳೀಕೆ 2ಸೀಮರಹಿತಮಹಿಮ ನಾಮರೂಪಿಲ್ಲದ ನಿಸ್ಸೀಮ ಸುಗುಣಸುಖಧಾಮ ಭೂಮಿಜೆಪತಿಸ್ವಾಮಿ ಶ್ರೀರಾಮನ ವಿಮಲದಾಟದಲಿಭೂಮಿಯೊಳ್ಮಿಗಿಲಾದಾನಂದೊಳಿಹÀಳೀಕೆ 3
--------------
ರಾಮದಾಸರು
ನೋಡುನೋಡುದಯಮಾಡು ಮಾಡಿನ್ನಪ.ನೋಡುವೈರಾಗ್ಯಭಾಗ್ಯವಿಹೀನನಕಾಡುತಿದೆ ಮನ ಕರುಣಾಸಂಪನ್ನ ಅ.ಪ.ಸ್ನಾನ ಸಂಧ್ಯಾವಂದನೆ ಸಚೇಲದಿಧ್ಯಾನ ಮೌನವ ಹಿಡಿಸಿಜ್ಞಾನ ಭಕ್ತಿ ವಿರಕ್ತಿ ಮಾತಿನನಾಣ್ನುಡಿಯಂತೆ ನುಡಿಸಿದಾನ ಧರ್ಮ ಕೈವಲ್ಯದಾರ್ಯೆಂದು ನಿದಾನ ತುಷ್ಟಿಯ ಬಡಿಸಿತಾನರೆಕ್ಷಣ ಸ್ವಸ್ಥವಿರದೆಲ್ಲಹಾನಿ ಮಾಡಿತೆನ್ನ ಚಿತ್ತವ ಕೆಡಿಸಿ 1ಸಾಲಂಕೃತ ಬಾಲನೊಯ್ದಡವಿಯಲಿ ಕೊಲ್ವಆಲಯದ ಕಳ್ಳನಂತೆಬಾಲೆಯನ್ನಾಳದೆ ಷಂಡಘನಕೂಪದೊಳು ನೂಕಿಸುವಂತೆಪೇಳಲೇನು ದುರ್ಬಲರನು ಅರಸ ತಾಶೂಲಕಿಕ್ಕಿಸುವಂತೆಮೇಲೆ ಮೇಲೆ ದುರ್ವಿಷಯಾಟವಿಯೊಳುಕಾಲಕಟ್ಟ್ಯೆನ್ನ ಕೆಡಹುತಿದೆ2ಕನ್ನಿಕೆಗೆ ವರನೊಪ್ಪಿದರೆ ತೆತ್ತಿಗನ್ನ ಪ್ರತಿಕೂಲವೇನುಪುಣ್ಯಶ್ಲೋಕನ ಅಭಯವಿರಲು ಸುಖಿಗನ್ಯ ತೊಡರ್ಯಾಕಿನ್ನಮನ್ನೆಯನ ಪಾದವಿಡಿದಿಹ ಮಡದಿಗೆಅನ್ಯರಾತಂಕವೇನು ಪ್ರಸನ್ನವೆಂಕಟಸ್ವಾಮಿ ನೀ ಒಲಿದರೆಕುನ್ನಿ ಮನ ಕಾಡಿ ಮಾಡುವದೇನು 3
--------------
ಪ್ರಸನ್ನವೆಂಕಟದಾಸರು
ನೋಡುವ ಬನ್ನಿರಯ್ಯ ಪಕಾವೇರಿಯ ಭವಹಾರಿಯ |ಮುಕ್ತಿಕಾರಿಯ ನೋಡುವ ಬನ್ನಿರಯ್ಯ ಅ.ಪಮಾತೆಯ ನುತಜನಜಾತೆಯ ಹರಿಮನಃ |ಪ್ರೀತೆಯ ಭುವನವಿಖ್ಯಾತೆಯ ||ನೀತಿಯುನ್ನತಕರದಾತೆಯ ಶಿವನ ಸಂ-|ಭೂತೆಯ ನೋಡುವ ಬನ್ನಿರಯ್ಯ 1ಬಂದು ಸಕಲ ಮುನಿವೃಂದ ನೆರರೆಯೆ ವಿೂಯ-|ಲಂದು ನಾರದಮುನಿ ಪೊಗಳುತಿರೆ ||ಸಂದೇಹವಿಲ್ಲ ನೋಡಿದಡೆ ಮುಕುತಿಯಹು-|ದೆಂದರೆ ಮುಳುಗಲದೇತಕಯ್ಯ? 2ಅರ್ಕಚಂದ್ರವಹ್ನಿಪುಷ್ಕರದೊಳು ಮಿಂದು |ಚಕ್ರತೀರ್ಥದೊಳಗೋಲಾಡಿ ||ಗಕ್ಕನೆ ಸದ್ಗತಿಯಹುದೆಂದು ಮನೆಗಳ |ಕಕ್ಕುಲತೆಯ ಬಿಟ್ಟು ನಡೆಯಿರಯ್ಯ 3ಕಂಡರೆ ಸಕಲಪಾತಕಪರಿಹಾರ, ಪಡೆ-|ದುಂಡರೆ ದುರಿತ-ದುರ್ಜನ ದೂರವು ||ಕೊಂಡಾಡಿದವರಿಗನಂತ ಫಲವು ನೀ-|ರುಂಡರೆ ಭವಬಂಧ ಮೋಕ್ಷವಯ್ಯ 4ಗಂಗೆ-ಯಮುನೆಗೆ ಹೋದಡೆ ಮೂರೈದುದಿ-|ನಂಗಳಿಗಹುದು ಮುಕುತಿಯೆಂದಡೆ ||ಹಿಂಗದೆ ಕಾವೇರಿಯ ನೋಡಿದಾಕ್ಷಣ ಪಾ-|ಪಂಗಳಿರದೋಡಿ ಪೋಪುವಯ್ಯ 5ಯಾಗಾದಿ ಸ್ವರ್ಗಯೋಗದಿ ಪೊಕ್ಕು ಕಾಶಿಯೊಳು |ಆಗಲೆ ತನುವ ಬಿಡಲು ಮುಕುತಿ |ಭೋಗಿಶಯನನ ದಿನದಲಿ ಕಾವೇರಿಗೆ |ಹೋಗಿ ಮಿಂದವರಿಗಿದೇ ಗತಿಯಯ್ಯ 6ಕಾವೇರಿಯ ಗಾಳಿ ಸೋಕಿದ ದೇಶದೊ-ಳಾವಾವ ಮನುಜರು ಸುಕೃತಿಗಳೇ ||ಕಾವೇರಿಯ ತೀರವಾಸಿಗಳಿಗೆ ಮಕ್ತಿಆಹೋದು ಸಂದೇಃವಿಲ್ಲವಯ್ಯ 7ಆವಾವ ಜನ್ಮಕರ್ಮಂಗಳು ಸವೆವರೆಕಾವೇರಿಯ ಕಾಡು ಸುಖಬಾಳಿರೈ ||ಶ್ರೀವರ ಸ್ವಾಮಿ ಶ್ರೀಪುರಂದರವಿಠಲನಸೇವೆಯೊಳನುದಿನವಿಪ್ಪುದಯ್ಯ 8
--------------
ಪುರಂದರದಾಸರು
ನೋಡುವುದೆ ಕಣ್ಣು, ಕೇಳುವುದೆ ಕಿವಿ |ಪಾಡುವುದೇವದನಪಗಾಡಿಕಾರಶ್ರೀ ವೇಣುಗೋಪಾಲನ |ಕೂಡಿಕೊಂಡಾಡುವ ಸುಖದ ಸೊಬಗನು ಅ.ಪಎಳೆದುಳಸಿಯ ವನಮಾಲೆಯಿಂದೊಪ್ಪುವ |ಎಳೆಯ ಗೋವಳರೊಡನಾಡುವ |ತಳಿತ ತರುವಿನ ನೆಳಲಲ್ಲಿ ನಲಿವನ |ನಳಿನನಾಭನ ಮುದ್ದು ನಗೆಯ ಸೊಬಗನು 1ಅರಸಂಚೆಯೋಲು ಕುಣಿವ ನವಿಲಂತೆ ನಲಿಯುವ |ಮರಿಗೋಗಿಲೆಯಂತೆ ಕೂಗುವನ ||ಎರಳೆಯಂತೆ ಜಿಗಿಜಿಗಿದಾಡುವತುಂಬಿ|ಶಿರವ ತಗ್ಗಿಸುವಂತೆ ಝೇಂಕರಿಸುವನ 2ಮೊಲ್ಲೆಮಲ್ಲಿಗೆ ಜಾಜಿ ಪೂಮಾಲೆಗಳ ಧರಿಸಿ |ಚೆಲ್ವೆಯರಿಗೆ ಮುಡಿಸುವನ ||ಜಲಕೇಳಿ ವನಕೇಳಿ ಮೊದಲಾದಾಟಗಳಿಂದ |ಚೆಲ್ಲೆಗಂಗಳ ಮುದ್ದು ಘುಲ್ಲನಯನನ 3ಪೊಂಗೊಳಲೂದುತ ಮೃಗಖಗ ಜಾತಿಯ |ಸಂಗಡಿಸುತಲಿಪ್ಪನ ||ಅಂಗವ ಮರೆತು ನೂರಂಗನೆಯರಲಿ ಬೆಳು-|ದಿಂಗಳೊಳಗೆ ಕುಣಿದಾಡುವ ದೇವನ 4ಮುದುಕಿ ಕುಬ್ಜೆಯ ಡೊಂಕ ತಿದ್ದಿ ರೂಪಿಯ ಮಾಡಿ |ಸೆರಗಪಿಡಿಸಿ ಕೊಂಬನ ||ಕರುಣಾಕರ ಶ್ರೀ ಪುರಂದರವಿಠಲ |ಶರಣಾಗತ ರಕ್ಷಕ ರಮೆಯರಸನ 5
--------------
ಪುರಂದರದಾಸರು
ನೋಡೆ ಅಮ್ಮ ಯಶೋದಮ್ಮಆಡಬಾರದಾಟವಾಡುವನಮ್ಮಕಾಡುವ ನಿನ್ನ ಮಗನಮ್ಮ ಪ.ಬುದ್ಧಿ ಹೇಳೆ ತಿದ್ದಿ ಹೇಳೆ ನಮ್ಮಮುದ್ದು ಮಕ್ಕಳನೆಲ್ಲ ಗುದ್ದಿ ಅಂಜಿಸಿ ಕಾಲಿಲೊದ್ದೋಡಿ ಬರುತಾನೆ ಕೇಳೆ 1ಕ್ಷೀರಕೊಡವ ಸುರುವಿ ಬಿಡುವಸಾರಿ ಸಾರಿಗೆ ಬೆಣ್ಣೆ ಬಿಸಳಿಗೆನೊಡೆವ ಮಂದಿರದೊಳಗೆ ಕುಣಿದಾಡುವ 2ಹರಿದು ಬರುವ ಚಾರುವರಿವ ಎಳೆಗರುವನೋಡುವೆನೆಂದು ಅಳುತಲುಸುರುವಹರವಿ ಮೊಸರು ಕೆನೆ ಸುರಿವ 3ಲೀಲೆ ನೋಡಲಳವಲ್ಲ ನಿನ್ನಬಾಲಕನಲೌಕಿಕಹೊಲ್ಲನಮ್ಮೆಲ್ಲರಆಲಯದಿ ನಿಲ್ಲಗೊಡಸಿರಿನಲ್ಲ4ಗುಣಹೇಳಲೆಣಿಕಿಲ್ಲ ಚಿನ್ಮಯ ಪ್ರಸನ್ವೆಂಕಟೇಶ ತಾ ನಂಬದರ್ಗಿಲ್ಲಬಿನಗುಮಾತಿಗೆ ಸಿಗನಲ್ಲ5
--------------
ಪ್ರಸನ್ನವೆಂಕಟದಾಸರು
ನೋಡೆ ಗೋಪೀ ಗೋಕುಲದೊಳುಹರಿ|ಮಾಡುವ ಲೀಲೆಗಳ ಪ್ರತಿಯಮ್ಮ ಪರಂಗನೆತ್ತಿ ಸಂಭ್ರಮದಿಂದಲಿ |ಅಂಗಣದೊಳಗೆ ನಿಂದಾಡಿಸಲು ||ತಿಂಗಳ ಬಿಂಬವ ಕಂಡಾಕ್ಷಣ ತ-|ನ್ನಂಗೈಯೊಳಗೇ ನಿಲಿಸಿಕೊಡೆಂಬ 1ಚಿನ್ನನು ನೋಡಲಿ ಎಂದಕ್ಕರದಲಿ |ಕನ್ನಡಿಯನು ತಂದು ಕೈಯಲಿ ಕೊಡಲು ||ತನ್ನ ಮುಖದ ಪ್ರತಿಬಿಂಬವ ಕಂಡು ಅ-|ದನ್ನು ಕರೆದು ಬಳಿಯಿರಿಸಿರಿಯೆಂಬ 2ಅರಿಯದೆ ದೀಪವ ಕೆಂಪಗೆ ಕಂಡು |ಸೆರಗಿನಲ್ಲಿ ಕೊಡು ಆಡುವೆನೆಂಬ ||ಕರುವಿನಂತೆ ತನ್ನನು ಕೊಂಡೊಯ್ದು |ತುರುಗಳ ಮೊಲೆಯನು ಉಣಿಸಿರಿಯೆಂಬ 3ಪರಿಪರಿಯಿಂದಲಿ ಗೋಡೆಯ ಮೇಲೆ |ಬರೆದಿಹ ಚಿತ್ರದ ಗೊಂಬೆಯ ನೋಡಿ ||ಕರವಪಿಡಿದು ಎಳೆತಂದು ತನ್ನಯನೆರೆಯಲ್ಲಿಯೆ ನೀವಿರಿಸಿರಿಯೆಂಬ 4ತರುಣಿ ನಿನ್ನಯ ಸುಕೃತದ ಫಲವು |ಹರುಷವೆಮಗೆ ಅಭಿವೃದ್ಧಿಯಾಗಿಹುದು ||ಪುರಂದರವಿಠಲನ ಚರಿಯವ ನೋಡಲು |ಧರೆಯೊಳಗಿನ ಬಾಲಕರಂತಲ್ಲವೆ 5
--------------
ಪುರಂದರದಾಸರು
ನೋಡೆಯಮ್ಮ ನಾ ಮಾಡಿದ ತಪ್ಪಿಲ್ಲಸುಮ್ಮನೆ ಮುನಿದ ಗೋವಳನಂಮ್ಮ ಪತೆಗೆದು ಕಟ್ಟಿನ ಖಿಲ್ಲ ಚೇವಡೆಗೈದು | ಮುಗುಳಂಬನೆಶಿರದಲಿ ಮನೆಮಾಡಿ | ಅಗಲಿದವರ ಕಟ್ಟೆಸೆವೆನೆಂದುಹಗಲಿರಳೂ | ಸಾಗಿಸಿಕೊಂಡಿಹನೆ 1ನೀರೆಯರ ದೇಹದೊಡನೆ ಬಳುಕಿ ನೆರಹಿ ಕೋಗಿಲೆವಿಂಡಚವರುಚನೆ ಮಾಡಿ |ತರಳಮಾವುತಗೆ ಶೇನಾದಿ ಪಟ್ಟವಗಟ್ಟಿಚಾವಕೆ ಗುರಿಮಾಡಿದನಂಮ್ಮಾ 2ಅಂಗವಿಲ್ಲದವರ ಕಡವಿಯಕೇಳಿ| ದೆನೆನಿಸುತದೆ |ಅವನ ಪುಶಕಾಸೂಅಂಗನೆತಾರೆಲೆ ಪುರಂದರವಿಠಲನಾಹಿಂಗಿರಲಾರೆನೂ ಮುದ್ದು ಮೂರುತಿಯಾ 3
--------------
ಪುರಂದರದಾಸರು
ನೋಡೊ ನೋಡೊ ರಂಗ ತನ್ನಖೋಡಿತನ ಬಿಡದೋಡು ಚಿತ್ತವು ಪ.ಎಳೆ ಎಳೆದು ನಾನೆ ಬಳಲಿದೆ ತಾ ತನ್ನತಿಳಿದ ಕಡೆಯಲಿ ಸುಳಿದಾಡಿತುಒಲಿದು ಭಕುತಿಯ ಬಲಿದಿರೆಂದರೆಛಲದಿ ಶುಭಮಾರ್ಗ ಕೊಳದು ದಾತಾರ 1ಕ್ಷಣದೊಳಾರೆ ನಾರಾಯಣ ದಾಮೋದರಮುನಿಧ್ಯೇಯನೆ ನಿನ್ನ ನೆನೆದಾಡದೆಹಣಿದಾಡೆನ್ನೊಳು ಒಣ ಧ್ಯಾನಿಸುತಿದೆಜನದೂಷಣದೊಳು ದಣಿದಾಡುತಿದೆ 2ಇನ್ನಾವಗೆ ಪೇಳಲೆನ್ನ ಒಡಲ ಮಾತಎನ್ನ ಒಡೆಯ ಪಾವನ್ನಕಾಯ ಪ್ರಸನ್ನ ವೆಂಕಟರನ್ನ ಒಲಿಯೊ ನೀಅನ್ಯ ವಿಷಯಕೆ ದೈನ್ಯವಾಗಿದೆ 3
--------------
ಪ್ರಸನ್ನವೆಂಕಟದಾಸರು