ಒಟ್ಟು 1012 ಕಡೆಗಳಲ್ಲಿ , 86 ದಾಸರು , 756 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷ್ಮೀ ದೇವಿ ಇಂದಿರೆ ನಾ ನಿನ್ನ ವಂದಿಸಿ ಬೇಡುವೆ ಬಂದು ನೀ ಪಾಲಿಸೇ ಚಂದಿರವದನೆ ಪ ಸಿಂಧು ಕುಮಾರಿಯೆ ಎಂದಿಗೂ ನಿನ್ನ ಪದ ದ್ವಂದ್ವವ ಸೇವಿಪೆನೆಂದು ನಾ ಬೇಡುವೆ ಅ.ಪ ದೇವಿ ನಿನ್ನಂಘ್ರಿಯ ಸೇವಿಸಿ ಪದ್ಮಭವ ಭಾವಿ ಫಣೇಶ ಸುರಾಧಿಪರೆಲ್ಲರು ಈ ವಿಧವಾದನುಭಾವವ ಪೊಂದಿರಲು ಈ ವಿಷಯಕೆ ಶ್ರುತಿ ಸಾವಿರವಿರುವುದೆ 1 ಪನ್ನಗವೇಣಿಯೆ ನಿನ್ನನೆ ನಂಬಿರಲು ಸಣ್ಣ ಮನುಜರ ವರ್ಣಿಪುದೇಕೆಲೆ ಎನ್ನಪರಾಧವ ಮನ್ನಿಸಿ ಕೃಪೆಯನು ಎನ್ನೊಳು ತೋರಲು ಧನ್ಯ ನಾನಾಗುವೆ 2 ತಾಮರಸಾಕ್ಷಿಯೆ ನಾಮಗಿರೀಶ ಶ್ರೀ ಸ್ವಾಮಿ ನೃಸಿಂಹನ ಕಾಮಿನೀಮಣಿಯೇ ಕೋಮಲಗಾತ್ರಯೆ ಶ್ರೀ ಮಹಾಲಕ್ಷ್ಮಿ ಎನ್ನ ಸಹೋದರಿ 3
--------------
ವಿದ್ಯಾರತ್ನಾಕರತೀರ್ಥರು
ಲಕ್ಷ್ಮೀದೇವಿ ಅಂಜಿಸುವುದ್ಯಾಕಮ್ಮ ಕಂಜೋದ್ಭವ ನಮ್ಮ ನೀ ಅಂಜಿಸಿದರೆ ಲೋಕ ಅಂಜದಿರುವುದೆ ಪ ಕುಂಜರಗಮನೆ ನಾವಂಜನದೇವಿ ಸಂಜಾತನಾದ ಪ್ರಭಂಜನನಣುಗರು ಪಾದ ಕಂಜಕ್ಕೆ ವಿಮುಖ ಸಂಜಿಲಿ ಚಲಿಸುವ ಪುಂಜರು ಕಡಿಮೆ 1 ನಿನ್ನನೆ ನಂಬಿ ನಾವಿನ್ನು ಸಂಸೃತಿಯ ಬನ್ನವೆ ಕಳಕೊಂಡು ಚನ್ನಾಗಿ ಜಗದಿ ಧನ್ಯರಾದೇವೆಂದು ಮನ್ನಾದಿ ಬಯಸೆ ಅನ್ಯಾರಂದದಲಿ ನೀ ನಮ್ಮನ್ನ ನೋಡುವರೆ2 ಸಿರಿ ನಾರಸಿಂಹನ್ನ ವರ ಭಕ್ತಿಯಲಿ ನೀನು ಕರವಶ ಮಾಡಿಪ್ಪೆ ಪರವೇನೆ ನಿನಗೆ ಪರಮೇಷ್ಠಿ ಮೊದಲಾದಮರರ ನೀ ಪೊರೆವೆ ಸಿರಿ ವಾಸುದೇವವಿಠಲನ್ನ ತೋರಮ್ಮ 3
--------------
ವ್ಯಾಸತತ್ವಜ್ಞದಾಸರು
ಲಕ್ಷ್ಮೀಪ್ರಿಯ ಕೃಷ್ಣ ಲಕ್ಷ್ಮೀಪ್ರಿಯ ಕೃಷ್ಣ ಲಕ್ಷ್ಮೀಪ್ರಿಯ ಸತ್ಯಭಾಮಾಪ್ರಿಯ ಪ ಗೋವಿಂದ ಮುನಿವಂದ್ಯ ದೇವ ಕೇಶವ ಯೋಗಿ ಭಾವಾಗೋಚರ ಸರ್ವರೂಪ ಶ್ರೀಕೃಷ್ಣ 1 ಪರಮ ಪಾವನ ನಿತ್ಯವರದ ದಾಮೋದರ ಪದ್ಮನಾಭ 2 ನಾರಾಯಣಾಧೋಕ್ಷಜಾನಂತ ಪರಿಪೂರ್ಣ ಶ್ರೀ ರಾಘವೋಪೇಂದ್ರ ಸಂಕರ್ಷಣಾಖ್ಯ 3 ಮಾಧವ ಶ್ರೀ ವಿಷ್ಣೊ ದನುಜಮರ್ದನ ದಿವ್ಯ ರೂಪ ನರಸಿಂಹ 4 ವಾಮನ ಶ್ರೀಧರ ಹೃಷೀಕೇಶ ಶ್ರೀ ಹರೆ ಕಾಮಿತ ಫಲದ ಜನಾರ್ದನ ರಾಮ 5 ವಾಸುದೇವಾಚ್ಯುತ ವಸುದೇವ ನಂದನ ವಾಸುಕಿಶಯನ ತ್ರಿವಿಕ್ರಮ ಭೀಮ 6 ಮಧುಸೂದನಾನಂದಘನ ಪುರುಷೋತ್ತಮಬುಧವಂದ್ಯ ತಿರುಪತಿ ವೆಂಕಟರಮಣಾ 7
--------------
ತಿಮ್ಮಪ್ಪದಾಸರು
ಲವಕುಶರ ಹಾಡು ಹರಿಹರ ಬ್ರಹ್ಮ ತ್ರಿಮೂರ್ತಿಗಳ ಬಲಗೊಂಡು *ಗುರುಹಿರಿಯರ ಪಾದಕ್ಕೆರಗೀ | ಅಜನ ಪಟ್ಟದ ಶ್ರೀ ಸರಸ್ವತಿಯನೆ ಬಲಗೊಂಡು ತೊಡಗುವೆ ರಾಮರ ಕಥೆಯಾ 1 ಬಣ್ಣದ ಅಕ್ಷತೆ ಕಣ್ಣು ತುಂಬೆ ಪುಷ್ಪ ಸು ವರ್ಣ ದಕ್ಷಿಣೆ ತಾಂಬೂಲಾ | ಉಮ್ಮಿಯ ಪುತ್ರ ಗಣೇಶಗೆ ಅರ್ಪಿಸಿ ವರ್ಣಿಪೆ ಲವಕುಶರ ಕಥೆಯಾ 2 ಕುಲದ ಸ್ವಾಮಿ ಕದ್ರಿ ನರಸಿಂಹನ ಬಲಗೊಂಡು | ಗುರು ಮಧ್ವರಾಯರ ನೆನೆದು | ಮನದಲ್ಲಿ ವಿಷ್ಣು ದೇವತೆಗಳ ಬಲಗೊಂಡು ತೊಡಗುವೆ ರಾಮರ ಕಥೆಯಾ 3 ವೇದಪಾರಾಯಣ ಅಂತ್ಯದ ಪೀಠಕ ಮಾಧವ ಹರಿ ಸುಗೋತ್ರ | ವೇದ ಮೂರುತಿ ಕೊಂಡಪ್ಪನ ಪುತ್ರಿಕೆಗೆ (?) ಹೇಳಿದಳುಹರಿನಾಮ ಕಥೆಯಾ 4 ಯಗ್ನ ಸಂತತಿಯೂ ಪೀಠಕವೂ | ಅಜ್ಞಾನಿ ಮೂಢಜೀವರಿಗೆ 5 ಹರುವುಳ್ಳ ನಿರಯಾಗಿಗಳೂ | ಹರವುಳ್ಳ ಕೈ(?)ಮುನಿವಳ್ಳೇರು ಜಾಣರು ತಿಳಿವೂದು ಅರ್ಥಸಂದೇಶ 6 ನಾಡನ ಕಥೆಯಲ್ಲ ಬೇಡುಂಬ ಪದನಲ್ಲ ನಾಡೊಳಗೆ ಹರಿನಾಮ ಕೇಳಿದ ಜನರಿಗೆ | ವಿಲ್ಲವಾಗುವುದು 7 ಪ್ರಚಂಡರು ರಾಮಲಕ್ಷ್ಮಣರು | ಇತ್ತಬೇಟೆಯನಾಡುವ ಕ್ರಮಗಳ ಚಂದವಿನ್ನೆಂತು ವರ್ಣಿಸಲೆ 8 ತಾಂಬೂಲ ಶ್ರೀಮೊಗದಿಂದೆ | ಇಂದುವದನೆಯ ಬಿಗಿದಪ್ಪಿ ಮುದ್ದಾಡಿದ ಇಂದುವದನೆ ಗರ್ಭವೆಂದ 9 ನಳಿನನಾಭನು ತನ್ನ ಲಲನೇಯ ಮುಖನೋಡಿ ಲಲನೆ ನಿನ್ನ ಪ್ರೇಮವೇನೆ | ಮುನಿಯು ಆಮುನಿಗಳು ಕೂಡಿದ ನಂತ್ರ ವನಭೋಜನ ತನಗೆಂದ್ಲೂ 10 ಹಲವು ಕಾಲವು ಸೀತೆ ಅಸುರರ ವಡನಾಡಿ ನೆನದಳು ಋಷಿಗಳಾಶ್ರಮವಾ | ಹಸನವಲ್ಲವು ಸೀತೆ ಇನ್ನು ನೀನುಳಿವದು ಋಷಿಗಳಾಶ್ರಮಕೆ ಹೋಗೆಂದಾ 11 ಅಯೋಧ್ಯಾಪುರದ ವಾನರರೆಲ್ಲಾ ಬಿಟ್ಟು ಕೈಹಿಡಿದ ಪುರುಷನ ಬಿಟ್ಟು | ನೆನದಾಳು ಋಷಿಗಳಾಶ್ರಮವ 12 ಅಂದು ಶ್ರೀರಾಮರು ಬೇಟೆಗ್ಹೋದೇವೆಂದು ಇಂದು ಡಂಗುರವ ಸಾರಿದರೂ | ಒಂದು ಗಳಿಗೆ ಮುಹೂರ್ತತಡೆಯಲಾಗದು ಎಂದು ಮಂದಿ ಮಕ್ಕಳ ಕರಸಿದರೂ 13 ಬಂದರು ಮಂತ್ರಿ ಮಾನ್ಯರು ಪ್ರಹಸ್ತರು ಬಂದರು ಪ್ರಧಾನೇರು | ಬಂದರು ರವಿಗುರಿನವಿಗುರಿಕಾರರು (?) ಬಂದರು ವಾಲಗದೋರೊಪ್ಪಿದರು 14 ಆಟಪಾಟದೋರು ನೋಟಕ್ಕೆ ದಾರಾರು ಸೂತ್ರದವರು ಸುವ್ವಿಯವರು | ಪಾಟಕ್ಕೆ ದಾರಾರು ಪೊಗಳುವ ಭಂಟರು ರಘು ನಾಥನೋಲಗದಲೊಪ್ಪಿದರೂ 15 ಹೊನ್ನು ಹಲಗೆಯವರು ಬೆನ್ನಬತ್ತಲೆಯವರು ಚಿನ್ನಬಿನ್ನಾಣನಾಯಕರೂ | ಚೆನ್ನಿಗರಾಮರ ಪೊಗಳುವ ಭಂಟರು ಬಿನ್ನಾಣದಿಂದೊಪ್ಪುತಿಹರೂ 16 ಪಟ್ಟಾವಳಿ ಹೊಸಧೋತರವು ಇಟ್ಟರು ಆಭರಣವನ್ನೂ | ಮಕರಕುಂಡಲ ಕಿರೀಟವೂ ಇಟ್ಟರು ನೊಸಲ ಕಸ್ತುರಿಯಾ 17 ಹಾರಮಾಣಿಕನಿಟ್ಟು ಕಾಲುಪೆಂಡೆಯನಿಟ್ಟು ನ್ಯಾವಳದ ಉಡುದಾರನಿಟ್ಟು ಸೂರ್ಯನ ಕುಲದ ಕುಮಾರರು ನಾಲ್ವರು ಏರಿದರು ಹೊನ್ನ ರಥವಾ 18 ವಾಯುವೇಗ ಮನೋವೇಗವೆಂಬೋ ರಥ ಏರಿದರೆ ರಾಮಲಕ್ಷ್ಮಣರೂ | ಸೂರ್ಯ ತಾನೆ ರಥವ ನಡೆಸೆ ಕೂಡ ಬೇಟೆಗೆ ತೆರಳಿದರು 19 ಅತ್ತಿ ಆಲದ ಮರ ಸುತ್ತ ಹೆದ್ದುಮ್ಮರಿ ಉತ್ತತ್ತಿ ಬೆಳಲು ದಾಳಿಂಬ ಉತ್ತಮ ಅಶ್ವತ್ಥ ಇಪ್ಪಿಯ ವನಗಳು ವಿಸ್ತರವನವೊಪ್ಪುತಿಹವೂ 20 ನಾರಂಗ ಬೆರಸಿದ ಕಿತ್ತಳಿ ಹರಿಸಿಣದ ತೋಪು ಎಲಿತ್ವಾಟ ಅರಸುಮಕ್ಕಳು ರಾಮಲಕ್ಷ್ಮಣರೆಲ್ಲರು ಬೆರಸಿ ಬೇಟೆಯ ನಾಡುತಿಹರೂ 21 ಯಾರಾಡಿಗಿಡಗಳು ಕ್ಯಾದೀಗಿವನಗಳು ನಾಗಸಂಪಿಗೆಯ ತೋಪುಗಳು | ಜೋಡೀಲಿ ಭರತ ಶತ್ರುಘ್ನರೆಲ್ಲರು ಕಾಲಾಳು ಬೇಟೆನಾಡಿದರೂ 22 ಉದ್ದಂಡ ಕೇಕಾಪಕ್ಷಿ ಚಂದಾದ ಬಕನ ಪಕ್ಷಿಗಳೂ | ಅಂದಾದ ಆಲಿವಾಣ ಆಲಹಕ್ಕಿಯು ರಾಮ ಚಂದ್ರನು ಬೇಟೆಯಾಡಿದನು 23 ಬೇಟೆನಾಡಿ ಬಂದು ನಿಂತಾರು ನೆರಳಲ್ಲಿ ಒಂದುಗಳಿಗೆ ಶ್ರಮವ ಕಳೆದು ನಂದನವನದಲ್ಲಿ ತನಿಹಣ್ಣು ಮೆಲುವೋರು ಗಂಗೆಯ ಉದಕ ಕುಡಿಯುವೋರು 24 ನಳಿನನಾಭನು ತಾನು ಬಳಲಿ ಬೇಟೆಯನಾಡಿ ನೆರಳಲ್ಲಿ ತುರಗ ಮೇಯಿಸಿದ ಕಿರಿಯಲಕ್ಷ್ಮಣ ದೇವ ತೊಡೆಯನ್ನೆ ಕೊಡು ಎಂದು ಮಲಗೀದ ಒಂದು ನಿಮಿಷವನೂ 25 ಮುಂದಿನ ಆಗೆಂತ್ರವ(?) ಕಂಡನು ಕನಸಿನಲಿ ರಾಮ ಕಂಗೆಟ್ಟು ಮೈಮುರಿದೆದ್ದಾ | ಕಂದ ಲಕ್ಷ್ಮಣ ಕೇಳೊ ಇಂದೆನ್ನ ಸೊಪ್ನದಲಿ ಬಂದಿಹಳೊಬ್ಬ ತಾಟಕಿಯೂ 26 ಇಂದುವದನೆಮುಡಿ ಪಿಡಿದಳೆವೊ ದುಕಂಡೆ ತುಂಡರಾವಣ ಕುಯೋದು ಕಂಡೆ | ಇಂದು ನೀ ಸೀತೆಯ ಕರೆದೊಯಿದು ಕಾನನದಿ ದಿಂಜಾರಿಳಿಸೋದು ಕಂಡೆ 27 ಮುನ್ನ ಅರಿಯದೆ ನಾವು ಬಂದೆವೋ ಲಕ್ಷ್ಮಣ ಇನ್ನು ಸೀತೆಗೆ ಜಯವಿಲ್ಲಾ | ಅಂದು ಶ್ರೀರಾಮರಾ ಬೇಟೆ ಮೂಲಕದಿಂದೆ ಬಂದಾಳು ಮಾಯದ ಗರತಿ | 28 ಬಂದು ಅಯೋಧ್ಯಾಪುರದ ಬೀದಿಯವಳಗೆ ಚಂದದಿ ಕುಣಿದಾಡುತಿಹಳು | ಅಂದು ಶ್ರೀ ರಾಮರ ಅರಮನೆ ಬಾಗಿಲಿಗೆ ಚಂದುಳ್ಳ ದ್ವಾರಪಾಲಕರೂ 29 ಬಂದು ಅಸುರೆ ನಿನ್ನ ಬಿಡವಲ್ಲೆನೆಂದರೆ ಬಂದಡರಿದಳರಮನೆಗೆ ಕಂಡು ಜಾನಕಿ ತಾನು ಕರಸಿದಳಾಗಲೆ ಬಂದಳು ಮಾಯದ ಗರತಿ 30 ಬಂದು ಪಾದಕ್ಕೆರಗಿ ಕೈಮುಗಿದು ನಿಂತಳು ತಂದಳು ನಾಗ ಸಂಪಿಗೆಯಾ | ಅಂಗನೆ ಜಾನಕಿ ನೀಮುಡಿಯೆಂದು ಕೊಟ್ಟರೆ ಸಂದೇಹ ಬಟ್ಟಳಾ ಸೀತೆ 31 ಈನಾಡ ಗರತಿ ನೀನಲ್ಲ | ದಾರು ಬಂಧುಗಳುಂಟು ದಾರ ಬಳಿಗೆ ನೀ ಬಂದೀ 32 ಈರೇಳು ಲೋಕವ ಸುತ್ತಿ ತಿರುಗಿ ಬಂದೆ ನಾಗಲೋಕಕ್ಕೆ ಬಾಹೆನೆಂದು ನಾಗಲೋಕದಿಂದ ದೇವಲೋಕಕ್ಕೆ ಬಂದೆ ದೇವಿಗೆ ಕಾಣಿಕೆ ತಂದೇ 33 ಹೊನ್ನು ಹಣವನೀವೆ ಅನ್ನವಸ್ತ್ರವನೀವೆ ಇನ್ನು ನೀವಲಿದದ್ದು ಈವೆ | ಇನ್ನು ನೀವಲಿದದ್ದು ಚೆನ್ನಾಗಿ ಕೊಡುವೆನು ಬಿನ್ನವಿಸೆ ಗರತಿ ನೀ ಅಂದ್ಲೂ 34 ಹೊನ್ನು ಹಣವನೊಲ್ಲೆ ಅನ್ನವಸ್ತ್ರವನೊಲ್ಲೆ ನಿನ್ನ ಭಾಗ್ಯವು ನಾನೊಲ್ಲೆ | ಮುನ್ನಿನ ಅಸುರರೂಪ ಇನ್ನು ನೀಬರೆದರೆ ಹರಣ ಹೊರುವೆನು 35 ಮುನ್ನವನು ಕಂಡು ಕೇಳರಿಯ | ಪನ್ನಂಗಧರ ರಾಮ ಬಂದರೆ ಬೈದಾರು ಗಮನ ಮಾಡಂದ್ಲೂ36 ಅಂದರೆ ಸೀತೆ ತನ್ನಂಗಕ್ಕೆ ಬರಲೆಂದು ತಂದು ತೊಡೆದಳು ಭಸುಮವನು | ಅಂದೆನ್ನ ವನಕೆ ಪ್ರದಕ್ಷಿಣೆ ಬರುವಾಗ ಉಂಗುಷ್ಟವನು ಕಂಡುಬಲ್ಲೆ 37 ಉಂಗುಷ್ಟದಂದಕ್ಕೆ ಮುಂದೆ ಪಾದವ ಬರಿ ಹಿಂದೆ ಹಿಂಬುಡ ಮೊಣಕಾಲು | ಹೊಂದಿಸಿ ಬರೆ ಎಂದಳವಳು 38 ಚಂದಾದ ಕಾಗದ ಲೆಕ್ಕಣಿಕೆ ಪಿಡಿದು ತಂದು ಕೊಟ್ಟಳು ಸೀತೆ ಕೈಗೆ | ಒಂದು ಕಾಯಕೆ ಹತ್ತು ಸಿರಗಳ ಬರೆದಳು ಮುಂದೆರಡು ಪಾದವ ಬರೆದಳು 39 ಒಂದರ ಹಿಂದೊಂದು ವರ್ಣಿಸಿ ಬರೆದಳು ತಂದು ನಿಲಿಸಿದಳು ರಾವಣನಾ | ಚಂದವಾಯಿತು ದೇವಿ ವರವಕೊಡೆನುತಲಿ ಎಂದೆಂದಿಗೂ ಅಳಿಯದ್ಹಾಗೇ 40 ಅಳಿದು ಉಳಿಯದಿರು ಉಳಿದು ನೀ ಕೆಡದಿರು ಧರಿಯವಳಗೆ ಅಡಗದಿರು | ಕಿರಿಯ ಲಕ್ಷ್ಮಣದೇವ ಹೊಡೆದರೆ ಮಡಿ ಎಂದು ವರವ ಕೊಟ್ಟಳು ಸೀತೆ ಪಠಕೆ 41 ಮರೆ
--------------
ಹೆಳವನಕಟ್ಟೆ ಗಿರಿಯಮ್ಮ
ಲಾಲಿ ಆಡಿದ ರಂಗ ಲಾಲಿ ಆಡಿದ ಪ. ಬಾಲೆ ರುಕ್ಮಿಣಿ ದೇವೇರೊಡನೆ ಮೂರು ಲೋಕನಾಳ್ವ ದೊರೆಯುಅ.ಪ. ಸಾಧು ಮಚ್ಚಕಚ್ಚಪರೂಪನಾಗಿ ಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತು ಭೂದೇವಿಯರೊಡನೆ ಕೃಷ್ಣ 1 ಅಮೃತ ಬಡಿಸಿ ಸತ್ಯಭಾಮೆಯರೊಡನೆ ಕೃಷ್ಣ2 ವರಾಹ ರೂಪನಾಗಿ ಆದಿ ಹಿರಣ್ಯಕನ ಕೊಂದುಮೇದಿನಿಯ ಮೇಲಕೆ ತಂದು ರಾಧೆಯೊಡನೆ ನಗುತ ಕೃಷ್ಣ 3 ಪುಟ್ಟಬಾಲನ ನುಡಿಯ ಕೇಳಿ ಕೆಟ್ಟ ಕಶ್ಯಪನುದರ ಸೀಳಿಅಷ್ಟಮಂಗಳವಾದ್ಯವಾಗಲು ಅಷ್ಟ ಸ್ತ್ರೀಯರೊಡನೆ ಕೃಷ್ಣ 4 ಸುರರು ಲಕುಮಿಯೊಡನೆ ನಗುತ ಕೃಷ್ಣ 5 ಯುದ್ಧದಲಿ ಕೊಡಲಿ ಪಿಡಿದು ಗುದ್ದಿ ಕ್ಷತ್ರೇರ ಶಿರವ ತರಿದುಗೆದ್ದ ಸಿಂಹನೆನಿಸಿಕೊಂಡು ಪದ್ಮಾವತಿಯ ಕೂಡೆ ಕೃಷ್ಣ 6 ಸೇತುಬಂಧನವನ್ನೆ ಮಾಡಿ ಧೂರ್ತರಾವಣನ್ನ ಕೊಂದುಖ್ಯಾತಿಪಡೆದು ಪುರಕೆ ಬಂದು ಸೀತೆಯೊಡನೆ ರಾಮಚಂದ್ರ 7 ಒಂದು ಏಳು ಎಂಟುಸಾವಿರ ಇಂದುಮುಖಿಯರನ್ನು ಕೂಡಿಮಂದಮಾರುತ ಚಂದ್ರ ಬರಲು ನಂದಗೋಕುಲದ ದೊರೆಯು 8 ಅಂಬರವ ತೊರೆದು ದಿಗಂಬರÀ ವೇಷವನ್ನೆ ಧರಿಸಿಮಂಗಳಾಂಗ ಮಾರಜನಕ ರಂಗನಾಯಕಿಯೊಡನೆ ಕೃಷ್ಣ9 ಅಚ್ಚಮುತ್ತಿನಾಭರಣವಿಟ್ಟು ಲಕ್ಷವಿಲ್ಲದೆ ಹಯವನೇರಿಭಕುತರಿಗೆ ಅಭಯಕೊಡುತ ಭಕ್ತವತ್ಸಲ ಹಯವದನ 10
--------------
ವಾದಿರಾಜ
ಲಾಲಿ ಗೋವಿಂದ ಲಾಲಿ ಕೌಸಲ್ಯಬಾಲ ಶ್ರೀರಾಮ ಲಾಲಿ ಪ ಲಾಲಿ ಮುನಿವಂದ್ಯ ಲಾಲಿ ಜಾನಕಿ-ರಮಣ ಶ್ರೀರಾಮ ಲಾಲಿ ಅ.ಪ. ಕನಕರತ್ನಗÀಳಲ್ಲಿ ಕಾಲ್ಗಳನೆ ಹೂಡಿನಾಲ್ಕು ವೇದಗಳನ್ನು ಸರಪಣಿಯ ಮಾಡಿಅನೇಕ ಭೂಮಂಡಲವ ಹಗೆಯನು ಮಾಡಿಶ್ರೀಕಾಂತನುಯ್ಯಾಲೆಯನು ವಿರಚಿಸಿದರು1 ಆಶ್ಚರ್ಯಜನಕವಾಗಿ ನಿರ್ಮಿಸಿದಪಚ್ಚೆಯ ತೊಟ್ಟಿಲಲ್ಲಿಅಚ್ಚುತಾನಂತನಿರಲು ತೂಗಿದರುಮತ್ಸ್ಯಾವತಾರ ಹರಿಯ 2 ಧರ್ಮಸ್ಥಾಪಕನು ಎಂದು ನಿರವಧಿಕನಿರ್ಮಲ ಚರಿತ್ರನೆಂದುಮರ್ಮ ಕರ್ಮಗಳ ಪಾಡಿ ತೂಗಿದರುಕೂರ್ಮಾವತಾರ ಹರಿಯ 3 ಸರಸಿಜಾಕ್ಷಿಯರೆಲ್ಲರು ಜನವಶೀಕರ ದಿವ್ಯರೂಪನೆಂದುಪರಮ ಹರುಷದಲಿ ಪಾಡಿ ತೂಗಿದರುವರಹಾವತಾರ ಹರಿಯ4 ಕರಿಕುಂಭಗಳ ಪೋಲುವ ಕುಚದಲ್ಲಿಹಾರ ಪದಕವು ಹೊಳೆಯಲುವರ ವರ್ಣಿನಿಯರು ಪಾಡಿ ತೂಗಿದರುನರಸಿಂಹಾವತಾರ ಹರಿಯ 5 ಭಾನುಮಣಿಯರೆಲ್ಲರು ಯದುವಂಶಸೋಮನಿವನೆಂದು ಪೊಗಳಿನೇಮದಿಂದಲಿ ಪಾಡಿ ತೂಗಿದರುವಾಮನಾವತಾರ ಹರಿಯ6 ಸಾಮಜವರದನೆಂದು ಅತುಳ ಭೃಗು ರಾಮಾವತಾರವೆಂದುಶ್ರೀಮದಾನಂದ ಹರಿಯ ತೂಗಿದರುಪ್ರೇಮಾತಿರೇಕದಿಂದ7 ಕಾಮನಿಗೆ ಕಾಮನೆಂದು ಸುರಸಾರ್ವಭೌಮ ಗುಣಧಾಮನೆಂದುವಾಮನೇತ್ರೆಯರು ಪಾಡಿ ತೂಗಿದರುರಾಮಾವತಾರ ಹರಿಯ8 ಸೃಷ್ಟಿಯ ಕರ್ತ ನೆಂದು ಜಗದೊಳಗೆಶಿಷ್ಟ ಸಂತುಷ್ಟನೆಂದುದೃಷ್ಟಾಂತರಹಿತನೆಂದು ತೂಗಿದರುಕೃಷ್ಣಾವತಾರ ಹರಿಯ 9 ವೃದ್ಧನಾರಿಯರೆಲ್ಲರು ಜಗದೊಳಗೆ ಪ್ರಸಿದ್ಧನಿವನೆಂದು ಪೊಗಳಿಬದ್ಧಾನುರಾಗದಿಂದ ತೂಗಿದರು ಬೌದ್ಧಾವತಾರ ಹರಿಯ 10 ಥಳಥಳಾತ್ಕಾರದಿಂದ ರಂಜಿಸುವಮಲಯಜಲೇಪದಿಂದಜಲಗಂಧಿಯರು ಪಾಡಿ ತೂಗಿದರುಕಲ್ಕ್ಯಾವತಾರ ಹರಿಯ 11 ಕನಕಮಯ ಖಚಿತವಾದ ತಲ್ಪದಲಿವನಜಭವ ಜನಕನಿರಲುವನಜನಾಭನ್ನ ಪಾಡಿ ತೂಗಿದರುವನಿತಾಮಣಿಯರೆಲ್ಲರು 12 ಪದ್ಮರಾಗವ ಪೋಲುವ ಹರಿಪಾದಪದ್ಮವನು ತಮ್ಮ ಹೃದಯಪದ್ಮದಲಿ ನಿಲಿಸಿ ಪಾಡಿ ತೂಗಿದರುಪದ್ಮಿನೀ ಭಾಮಿನಿಯರು 13 ಹಸ್ತಭೂಷಣ ಮೆರೆಯಲು ದಿವ್ಯತರಹಸ್ತಲಾಘವಗಳಿಂದಹಸ್ತಗಳ ಪಿಡಿದುಕೊಂಡು ತೂಗಿದರುಹಸ್ತಿನೀ ಭಾಮಿನಿಯರು14 ಮತ್ತಗಜಗಾಮಿನಿಯರು ದಿವ್ಯತರಚಿತ್ರವಸ್ತ್ರಗಳನುಟ್ಟುಚಿತ್ತಸಂತೋಷದಿಂದ ತೂಗಿದರುಚಿತ್ತಿನೀ ಭಾಮಿನಿಯರು 15 ಕಂಕಣಧ್ವನಿಗಳಿಂದ ರಂಜಿಸುವಕಿಂಕಿಣೀಸ್ವರಗಳಿಂದಪಂಕಜಾಕ್ಷಿಯರು ಪಾಡಿ ತೂಗಿದರುಶಂಕಿನೀ ಭಾಮಿನಿಯರು 16 ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವಮಕರಿಕಾಪತ್ರ ಬರೆದುಲಿಕುಚಸ್ತನಿಯರು ಪಾಡಿ ತೂಗಿದರುಅಕಳಂಕಚರಿತ ಹರಿಯ17 ಆನಂದಸÀದನದೊಳಗೆ ಗೋಪಿಯರುಆ ನಂದಸುತನ ಕಂಡುಆನಂದ ಭರಿತರಾಗಿ ತೂಗಿದರುಆನಂದ ಭೈರವಿಯಿಂದ 19 ದೇವಾಧಿದೇವನೆಂದು ಈ ಶಿಶುವುಭಾವನಾತೀತನೆಂದುದೇವಗಂಧರ್ವರ್ಪಾಡಿ ತೂಗಿದರುದೇವ ಗಾಂಧಾರದಿಂದ 20 ನೀಲ ಕರುಣಾಲವಾಲ ಶ್ರೀಕೃಷ್ಣ ಜೋ ಜೋಲೀಲಾವತಾರ ಜೋ ಜೋ ಪರಮಾತ್ಮಬಾಲಗೋಪಾಲ ಜೋ ಜೋ 21 ಇಂದುಧರಮಿತ್ರ ಜೋ ಜೋ ಶ್ರೀಕೃಷ್ಣಇಂದು ರವಿ ನೇತ್ರ ಜೋ ಜೋಇಂದುಕುಲ ಪುತ್ರ ಜೋ ಜೋ ಪರಮಾತ್ಮಇಂದಿರಾರಮಣ ಜೋ ಜೋ 22 ತುಂಗ ಭವಭಂಗ ಜೋ ಜೋ ಪರಮಾತ್ಮರಂಗ ಕೃಪಾಂಗ ಜೋ ಜೋಮಂಗಳಾಪಾಂಗ ಜೋ ಜೋ ಮೋಹನಾಂಗರಂಗವಿಠಲನೆ ಜೋ ಜೋ 23
--------------
ಶ್ರೀಪಾದರಾಜರು
ಲಾಲಿ ನಿತ್ಯಾನಂದ ಲಾವಣ್ಯ ಕಂದ ಲಾಲಿ ಭೃತ್ಯಾರ್ತಿ ವಾರಣನೆ ಗೋವಿಂದ ಲಾಲಿ ಜೀಯಾ ಪ್ರತ್ಯಗಾತ್ಮ ಮುಕುಂದ ಲಾಲಿ ರಮಾಧೃತ ಚರಣಾರವಿಂದ ಲಾಲಿ ಪ. ಆದಿ ಮಧ್ಯಾಂತ ವಿದೂರನಾಗಿಹನ ವೇದಾಂತ ವೇದ್ಯ ವೈಭವ ಪಕ್ಷಿಗಮನ ತಾಪ ಕಳಿವವನ ಮೋದದಿ ಪಾಡಿ ತೂಗುವೆನು ಮಾಧವನ 1 ಈರಾರು ದಿಗ್ಗಜವೆಂಟು ಕಾಲುಗಳು ಪಾರಾವಾರಗಳೆಂಬ ಪೊಳೆವ ಪೊಟ್ಟಿಗಳು ಧಾರಾರೂಪ ಭಾಗೀರಥಿ ಸರಪಣಿ ಸೇರಿಸಿ ಡೋಲ ಶೃಂಗಾರ ಗೈಯುವೆನು 2 ನಿರ್ಮಲವಾದೇಳು ಹಲಿಗೆಗಳಿರುವ ಭರ್ಮಗಿರಿಯೆ ಸಿಂಹಾಸನವನಿಟ್ಟಿರುವ ಧರ್ಮಾರ್ಥ ಕಾಮ ಮೋಕ್ಷಗಳೆಂಬ ಫಲವ ಮರ್ಮವನರಿತು ಕಟ್ಟುವೆ ಒಳ್ಳೆಯ ರಥವ 3 ಸೂರ್ಯ ಚಂದ್ರಮರೆಂಬ ಧಾರಾದೀಪಗಳು ತಾರಕಿಗಳು ಸುತ್ತಲಿರುವ ಚಿನ್ಹೆಗಳು ಭವ ಜಯ ಜಯವೆಂಬ ಭರವು ನೀರಜಾಲಯೆ ಕೂಡಿ ಪಾಡುವ ಸ್ವರವು 4 ಕೋಟಿ ಭಾಸ್ಕರ ರಾಭ ಕೋಟೀರ ಕುಂಡಲ ಪಾಟಲಾಧರ ಮುಕುರರಾಭ ಕಪೋಲ ನಳಿನ ಪತ್ರ ನೇತ್ರ ಜ- ಚಾಪ ಧಾಟಿ ಭ್ರೂಯುಗಳ 5 ಪೂರ್ಣ ಮಾಲಾನಂತ ಪೌರ್ಣಮಿಯ ವಿಧು ವರ್ಣ ಮುಖಾಬ್ಜಸುಪರ್ಣವರೋಹ ಕರ್ಣ ಹೀನ ಕಶಿಪೂ ಪರಿಶಯನ ದು- ಗ್ಧಾರ್ಣವ ಮಂದಿರ ಸ್ವರ್ಣ ನಿಭಾಂಗ 6 ಕಂಬು ಸುಗ್ರೀವ ವಿಲಂಬಿತ ವನಮಾಲ ಅಂಬುಜ ಚಕ್ರ ಗದಾಕರ ಹಸ್ತ ಕೌಸ್ತುಭ ಜಗ- ನಾಭ 7 ವಿತತ ರೇಖಾತ್ರಯಯುತಮೃದುದರ ಮಧ್ಯ ಗತ ಕಿಂಕಿಣೀ ಜಾಲ ಕಾಂಚಿ ಕಲಾಪ ಪೀವರೋರು ಸಂ- ಮೂರ್ತಿ 8 ಸಿಂಜನ ಜೀರ ರಂಜಿತ ಚರಣ ಕಂಜಾಂಕುಶಕೇತು ರೇಖಾಲಂಕರಣ ಮಂಜುಳ ಮೃದು ಪಾದತಳ ಮುಕ್ತಾಭರಣ ಸಂಜೀವನ ರಾಜ ಸಂಪ್ರೀತಿ ಕರಣ 9 ಔತ್ತಾನಪಾದಿಯನಾಧಾರಗೊಂಡು ನಿತ್ಯ ತೂಗಾಡುವ ತೊಟ್ಟಿಲ ಕಂಡು ಹಿಂಡು ಬಹು ತೋಷಗೊಂಡು ಸತ್ಯಭಾಮೆಯ ಕಾಂತನಾಡುವ ಚೆಂಡು 10 ಪತಿತ ಪಾವನ ಪರಮಾನಂದ ರೂಪ ಸತತ ತಾನೆ ಪರಿಹರಿಸುವ ತಾಪ ವಿತತ ಮಹಿಮ ವೆಂಕಟಾಚಲ ಭೂ ಗತಿಯಾಗಿ ತೋರುವ ತನ್ನ ಪ್ರತಾಪ 11
--------------
ತುಪಾಕಿ ವೆಂಕಟರಮಣಾಚಾರ್ಯ
ಲಾಲಿತ್ರಿ ಗುಣಗಾತ್ರ ಲಕ್ಷ್ಮಿಕಳತ್ರಾ ಲಾಲೀ ಪ ನೀರೊಳಗೆ ಮನೆಯು ಮಾಡಿಓಡ್ಯಾಡೀ | ಕೋರೆಯನೆ ಮಸೆದು ಭೂಮಿಗೆ ಕಡೆದಾಡೀ ಮೋರೆಯನು ಮುಚ್ಚಿಕೈಕಾಲು ತೂಗ್ಯಾಡೀ ಘೋರ ರೂಪವ ಧರಿಸಿ ಬಲಿದಾನವನೆ ಬೇಡೀ 1 ಕೊಡಲಿಯನು ಪಿಡಿದು ಮಾತೆಯ ಶಿರವನೇ ಒಡೆದೂ ಮಡದಿಗೋಸ್ಕರ ದಶಶಿರನ ಶಿರವತರಿದೂ ತುಡುಗ ತನದಿ ಮೊಸರು ಗಡಿಗೆಗಳ ಒಡೆದೂ ಮಡದಿಯರ ವ್ರತಭಂಗ ಮಾಡಿದೆಯೊ ಪಿಡಿದೂ 2 ಹಯವನೇರಿದ ಹರಿಯು ಬಹುಜನರ ಪೊರೆಯೇ ಚೆಲುವ ಮೂರುತಿ ತೊಟ್ಟಿಲೊಳು ಮುದ್ದು ಸುರಿಯೇ ಪರಮ ಪುರುಷ ಸದ್ಭಕ್ತರ ಸಿರಿಯೇ ಪವಡಿಸೋ ನರಸಿಂಹ ವಿಠಲಾ ಧೊರಿಯೇ ಲಾಲೀ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ಲೋಕನೀತಿ ಇಳೆಯೊಳಗೆ ದೇಹತಾಳಿ ಬಂದೆಲ್ಲಾ ತಮ್ಮಾ ಗಳಸಿ ಮನೆ ಹೆಂಡಿರು ಮಕ್ಕಳಿಟ್ಟಿಲ್ಲಾ ಬಲಿಸಿ ಹಣ ಹೊನ್ನು ಹೂಳಿಟ್ಟಿಲ್ಲಾ ತಮ್ಮಾ ಒಲಿದು ಉಂಡಿ ವಿಷಯ ಸುಖವಾ ಪೇಳಲ್ಲಾ 1 ತೆರಪೀರಾದೆ ಜನಿಸಿದಾವು ಸುತ್ತಲು ಪರಿಪರಿಯ ಸುಖದುಃಖ ಪಗಲಿರುಳು ತಮ್ಮಾ ಇರದೆಯೊದಗಿ ದಣಿಸಿದಾವು ನಿನ್ನ ಮರುಳೆ 2 ಯಮನವರು ಬರುವದು ಮರೆತೇಯ ತಮ್ಮಾ ರಮಣೀ ಮೋಹಾ ಕೇಳಿರು ನೀನರಿಯಾ ಅಮಿತ ಧನ ಬಳಗ ಇನ್ನೆಲ್ಲಯ್ಯಾ ತಮ್ಮಾ ನಮೋ ನರಸಿಂಹವಿಠಲ ಎನ್ನಯ್ಯ 3
--------------
ನರಸಿಂಹವಿಠಲರು
ವಂದನೆ ಮಾಡಿರೈ ವ್ಯಾಸ ಮುನೀಂದ್ರರ ಪಾಡಿರೈ ಪ ವಂದಿಸುವರ ಭವಬಂಧವ ಬಿಡಿಸಿ ಆ ನಂದವ ಕೊಡುವ ಕರ್ಮಂದಿವರೇಣ್ಯರ ಅ.ಪ ಸದ್ಗುಣ ಸಾಂದ್ರಾ ಚಂದ್ರಿಕಾದಿ ಪ್ರಬಂಧತ್ರಯ ನಿರ್ಮಿಸಿದಾ ಮತವರ್ಧಿಸಿದಾ ಸತಿ ಮೆಚ್ಚಿಸಿದಾ ಹಿಂದಕೆ ಹರಿಯನು ಸ್ತಂಭದಿ ತೋರಿದ ಕಂದ ಪ್ರಹ್ಲಾದರೆ ಬಂದಿಹರೆನ್ನುತ 1 ಕೃಷ್ಣರಾಯನಿಗೆ ದುಷ್ಟಯೋಗ ಪರಿಹರಿಸಿ ರಾಜ್ಯವಹಿಸಿ ಯ- ಥೇಷ್ಟ ದಾನಫಲಕೊಟ್ಟು ನೃಪನನುಗ್ರಹಿಸಿ ರಾಜ್ಯದೊಳಿರಿಸಿ ಶ್ರೇಷ್ಠವಾದ ಸಿಂಹಾಸನದಲಿ ಕುಳ್ಳಿರಿಸಿ ಆಜ್ಞೆಯ ತಿಳಿಸಿ ಎಷ್ಟು ಮಹಿಮರೆಂದರಿತು ಇವರ ಮನ ಮುಟ್ಟಿ ಭಜಿಪರಿಗ ಭೀಷ್ಟೆಯಗರಿವರ 2 ಸೂರ್ಯಯತಿ ಕುಲ- ವರ್ಯ ಗುರುಮಧ್ವಮ ತದಿಸದ್ವೈಷ್ಣವ ಕುಮುದಕೆ ಭಾರ್ಯಾ ಪಾವನ ಚರ್ಯ ಪರಮಮಹಿಮ ಬ್ರಹ್ಮಣ್ಯ- ತೀರ್ಥರಿಗೆ ತನಯಾ ಕವಿಜನಗೇಯಾ ಶರಣರ ಪೊರಿಯುವ ಶಿರಿಕಾರ್ಪರನರಹರಿಯ ನೊಲಿಸಿರುವ ಪರಮ ಮಹಾತ್ಮರ3
--------------
ಕಾರ್ಪರ ನರಹರಿದಾಸರು
ವಂದನೆಯ ಮಾಡುವೆ ಶ್ರೀಗುರುವಿಗೆ- ವಂದನೆಯ ಮಾಡುವೆÀ ಪ ವಂದನೆ ಮಾಡುವೆನಿಂದು ಯದುಶೈಲದೋಳ್ ಚಂದದೊಳಿರುತಿಹ ತಂದೆ ನಾರಾಯಣಗೆ ಅ.ಪ ಹರುಷದಿಂದಲಿ ಇನ್ನು ಹರಸಿ ಸಜ್ಜನರಿಗೆ ವರಗಳ ಕೊಡುತಿಹ ವರಲಕ್ಷ್ಮಿ ತಾಯಿಗೆ 1 ಹಿರಿದಾದ ದೈತ್ಯನ ಸೀಳಿ ಸಂತೋಷದಿ ಮೊರೆಹೊಕ್ಕ ಕಂದನ ಪೊರೆದ ನರಸಿಂಹಗೆ 2 ಪಾವನತರಮಾದ ದೇವಸಮೂಹವ ಕಾವ ಕೃಪಾನಿಧಿ ಕಲ್ಯಾಣಮ್ಮಗೆ 3 ವಿಸ್ಫುರಿತದಲ್ಲಿರ್ಪ ವೈರ್ಮುಡಿ ತಿರುಮಣ್ಣು ಸರ್ಪಶಯನಗರ್ಪಿಸಿದಂತ ಗರುಡಗೆ 4 ಶ್ರೀಲೋಲನಡಿಗಳ ಲೀಲಾಮೃತಗಳ ಶೀಲರಾಗಿ ಕುಡಿದ ಶ್ರೇಷ್ಠ ಆಳ್ವಾರ್ರಿಗೆ 5 ವರದವಿಠಲನ ಒಲಿದು ತಾ ಬಂದಿನ್ನು ಗಿರಿಯೊಳು ನೆಲೆಸಿದ ವರ ಗುರುಪೀಠಕೆ 6 ಪಂಕಜಾಕ್ಷನಪಾದಪಂಕಜ ನಂಬಿಹ ವೆಂಕಟಪುರದೊಳಗಿರುವ ವೈಷ್ಣವರಿಗೆ 7 ವಿಷ್ಣುವಿನಂಶದಿ ಪುಟ್ಟಿ ಸಂತೋಷದಿ ಸೃಷ್ಟಿಯನಾಳ್ವ ಶ್ರೀ ಕೃಷ್ಣಭೂಪಾಲಗೆ8 ಮರೆಯದೆ ಭಕ್ತರ ಕರುಣದಿಂದಲಿ ಕಾಯ್ವ ವರಮಹದೇವನ ಪುರದಶ್ರೀರಂಗಗೆ 9
--------------
ರಂಗದಾಸರು
ವಂದಿಸುವೆನು ರಘುವರನಾ ಸುರವಂದಿತ ಚರಣಾಂಬುಜನ ಪ ತಂದೆ ಮಾತಿಗೆ ವನಕ್ಹೋಗಿ ಬಂದವನಾಸುಂದರ ಸಹ ಸೀತೆಯಿಂದ ಅನುಜನಾ ಅ.ಪ ಚಾಪ ಭಂಜಕನಾ 1 ವಾರಿಧಿ ಸೇತು ಬಂಧಕನಾ ಸೀತಾ -ಚೋರನ ಶಿರವಳಿದವನಾಚಾರು ಸಿಂಹಾಸನವೇರುತ ಸರಯು -ತೀರದ ಅಯೋಧ್ಯಾ ವಿಹಾರ ಸುಂದರನಾ2 ಕೇಸರಿ ಸುತಗೆ ತನುಧನಮಣಿಆಶ್ರಯವನು ಕೊಟ್ಟವನಾಕೋಸಲ ಜನರಿಗೆ ಮೋಕ್ಷವವಿತ್ತವನಾಇಂದಿರೇಶ ಸುಖಾತ್ಮ ನಿರ್ದೋಷ ಪುರುಷನಾ 3
--------------
ಇಂದಿರೇಶರು
ವಂದೇ ಮುಕುಂದ ನಮೊ | ನಂದ ಮೂರುತಿ ಪರಮಾನಂದ ನರಸಿಂಹಾ ಪ ಬಿಸಿಜಪೀಠನ ವರವ ಪಡೆದು ಮಹಾರಾಜೇಂದ್ರ | ವಸುಮತಿಗೆ ತಾನೆ ಸ್ವಾಮಿ ಎಂದು || ಹಸುಳೆಯನು ಬಾಧಿಸಲು ಮೊರೆಯಿಡಲಾಕ್ಷಣ | ಮಿಸಣಿಪ ಕಂಭದಿ ಬಂದ ಭಳಿರೆ ನರಸಿಂಹಾ 1 ರೋಷವನೆ ತಾಳಿ ನಿಟ್ಟುಸುರಗೈಸಿಕೊಳುತಾ | ಸೂಸಿ ಕಿಡಿಗಳನುದುರೆ ಕುಪ್ಪಳಿಸುತ ಕಮ || ಲಾಸನಾದ್ಯರ ಪಾಲಿಸಿದ ನರಸಿಂಹಾ 2 ಅಜವಾಣಿ ನೆಲೆಯಲ್ಲಿ ವಾಸವಾಗಿದ್ದ ನರ | ಗಜಪಗೀಯ ಮೊಗನೆ ಆನಂದ ಮಗನೇ || ಭಜಿಸುವನು ಗತಿ ಕೊಡುವ ಜನಮೇಜಯ ನೃಪವರದ | ವಿಜಯವಿಠ್ಠಲ ವರದಾತೀರ ನರಸಿಂಹ 3
--------------
ವಿಜಯದಾಸ
ವನಜನಾಭನ ಅಡಿಯು ಮನುಜಾನೀಪತಿಯು ಪ ಅನುದಿನದೊಳೈತಂದು ಘನಸಿಂಧುಶಯನನು ಮಿಂದು ದ್ವಾದಶಿಯೊಳಿಂದು ಸನುಮತದಿಯರ್ಪಿಸಿದ ಎಡೆಯನು ಘನತರದ ಸಂಭ್ರಮದಿ ಭುಂಜಿಸಿ ಜನಿಸಿ ಭಕುತಿಯನೆನ್ನ ಮನದಿ ಪ್ರ- ಸನ್ನನಾದನು ಎನಿತು ಪೇಳಲಿ 1 ರಕ್ಕಸರಿಗತಿ ವೈರಿ ಮಿಕ್ಕಾನತರ ಸಹಕಾರಿ ಶ್ರೀಹರಿ ಮುರಾರಿ ತಕ್ಕ ವಿಜಯಗೆ ಸಾರಥ್ಯಾಗಿ ಇಕ್ಕರಿಸಿ ಕುರುಪತೀಯನನ್ವಯ ಅಕ್ಕರದಿ ದ್ರುಪದಸುತೆಯ ಸಲಹಿ ರುಕ್ಮಿಣೀಶನು ರಕ್ಷಿಪನು ಸಲೆ 2 ಕರಿವರದ ಶಿರಿಲೋಲಾ ಪರಮಾತ್ಮ ಶ್ರೀಘನಲೀಲಾ ಜರರಹಿತ ವಿಮಲಾ ನಿರುತದೀಪರಿ ಸ್ಮರಿಪ ನರನಿಗೆ ಕರುಣಸಾಗರನಾಗಿ ಸುರವರ ತ್ವರಿತದೀವನು ಹರಸಿ ವರಗಳ ಹರಗೊಲಿದ ನರಸಿಂಹವಿಠಲಾ 3
--------------
ನರಸಿಂಹವಿಠಲರು
ವಾಗ್ದೇವಿ ಭಾರತಿ ನೀಡೆನಗೆ ಸುಮತಿ ನಂದಸುತನ ಪದದಿ ಕೊಡು ರತಿ ಪ ಕಳೆದು ಮನದಿ- ಗರಿಯೆ ಬಂದು ಬೇಗ ಅ.ಪ ಇಂದು ಮೌಲಿ ಮುಖ್ಯ ಸುರಗಣ ವಂದಿತಳೆ ಎನ್ನ ಅನುದಿನ ನಂದ ಮುನಿಯ ಶಾಸ್ತ್ರವಚನ ಛಂದದಿಂದ ಪಠಣ ಶ್ರವಣಾನಂದವಾಗುವಂದದಿ ಗುರು ಗಂಧ ವಾಹನರಾಣಿ ನಿನಗೆ1 ಪೇಳಲಳವೆ ನಿಮ್ಮ ಮಹಿಮೆಯ ಕಾಲಭಿಮಾನಿ ಕೇಳುವೆ ಸುಜ್ಞಾನ ಭಕುತಿಯ ಕಾಲಕಾಲಗಳಲ್ಲಿ ಎನ್ನ ಶುಭ ಲೀಲೆಗಳನು ಪಾಡಿ ಪೊಗಳುವಂತೆ ಜನನಿ 2 ಚಾರು ಕೃಷ್ಣಾತೀರಸಂಸ್ಥಿತಾ ಉದಾರ ಚರಿತ ನೀರಜಾಸನಾದಿಸುರನುತಾÀ ಶೇರಿದ ಭಕುತರಿಗೆ ತ್ರಿದಶ ಭೂರುಹ ವೆಂದೆನಿಸಿದಂಥಾ ಪಾರ ಮಹಿಮ ಕಾರ್ಪರಸಿರಿ ನಾರಸಿಂಹನ ಸೊಸೆಯೆ ನಿನಗೆ 3
--------------
ಕಾರ್ಪರ ನರಹರಿದಾಸರು