ಒಟ್ಟು 4300 ಕಡೆಗಳಲ್ಲಿ , 124 ದಾಸರು , 3042 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರದೊಳಿನ ಮಣಿಗೆ ಕನ್ನಡಿಯೇತಕೆ ಪ ಸಿರಿ ರಮಣನಲತಿ ಸಂಶಯವೇತಕೆ ಅ.ಪ ಶರಧಿಯ ಜಲವನ್ನು ಪರಿಪರಿ ದೇಶಕೆ ಬಿರುಗಾಳಿಗಳಿಂದ ದೊರಕಿಸುವನು ಯಾರು ಧರೆಯೊಳು ನವನಾಗರಿಕರೆಂದರಿಯುವ ಪರಿ ತರವೆ ಯೋಚಿಸೆಲೊ 1 ಎಲ್ಲಾ ದೇಶಗಳ ವಿಚಾರ ನೋಟಗಳನ್ನು ಇಲ್ಲೇ ತೋರಿಸುವಂಥ ನಲ್ಲರು ಇರುವರು ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆ ಎಂದು ಬಲ್ಲರೇ ಇವರು ತಲ್ಲಣಿಸುತಿಹರು 2 ಘಾಸಿಯ ಮಾಡದೆ ಪೋಷಿಸುವನು ಯಾರು ಈಶನ ಕರುಣವು ಲೇಶ ತಪ್ಪಿದರೆ ಆ ಶಿಶುವಿನ ಜೀವದಾಶೆ ಎಂತಿಹುದೊ 3 ಎಲ್ಲಾ ನಾರಿಯರು ಗರ್ಭ ಧರಿಸುವರೆ ಎಲ್ಲಾ ಬೀಜಗಳಿಂದ ತರುಗಳು ಬರುವುದೆ ಬಲ್ಲವರುಂಟೆ ಇದಕೆ ಕಾರಣ ಲಕ್ಷ್ಮೀ ಪರಿ 4 ಭಿನ್ನದೇಶಗಳಲ್ಲಿ ಭಿನ್ನ ರೂಪಗಳುಳ್ಳ ಭಿನ್ನ ಗುಣಗಳುಳ್ಳ ಭಿನ್ನ ಜಂತುಗಳಿಗೆ ಭಿನ್ನ ಕಾಲಗಳಲ್ಲಿ ಅನ್ನವನೀಯಲು ಅನ್ಯರಿಗಳವೆ ಪ್ರಸನ್ನನಿಗಲ್ಲದೆ 5
--------------
ವಿದ್ಯಾಪ್ರಸನ್ನತೀರ್ಥರು
ಕರಪಿಡಿದು ಕಾಯೊ ಶ್ರೀ ಕರುಣಾಳು ಧನ್ವಂತ್ರಿ ವರ ವೆಂಕಟಾದ್ರಿವಾಸ ಪ. ತರಳೆ ಸೇವೆಯ ಕೊಂಡು ಪರಿಪರಿಯ ಬಗೆಯಿಂದ ವರ ಕೃಪೆಯ ಮಾಡೊ ಸ್ವಾಮಿ ಪ್ರೇಮಿ ಅ.ಪ. ಆವ ಪರಿಯಿಂದ ಜಗದೊಳು ನೋಡೆ ಕಾವರಿ ನ್ನಾವರುಂಟೆಲೊ ದೇವನೆ ಪಾವಮಾನಿಯ ಪ್ರೀಯ ಪರಿಪರಿಯ ಪಾಪ ಫಲ ದೀವಿಧದ ಬವಣೆಯನ್ನೇ ನೀ ವಿಚಾರಿಸಿ ಕಾಯೊ ನಿನ್ನ ಶರಣ್ಹೊಕ್ಕಮೇ- ಲಾವ ಸಂಶಯ ಕಾವನೇ ಪಾವಕನ ತೆರದಿ ಭಸ್ಮವ ಮಾಡಿ ದುಷ್ಕರ್ಮ ಜೀವಕ್ಹಿತ ಕೊಡು ಪ್ರೀತನೇ | ಇನ್ನೇ 1 ಸುರರ ವ್ಯಾಕುಲ ಬಿಡಿಸಿ ಅಮರ ಪಕ್ಷವ ವಹಿಸಿ ವರ ಸುಧೆಯನವರಿಗುಣಿಸೀ ದುರುಳ ಸಂಘವ ಕೊಲಿಸಿ ಸುರ ರಾಜ್ಯಸ್ಥಿರಪಡಿಸಿ ಪರಿಪರಿಯ ಸೌಖ್ಯ ಸುರಿಸೀ ಮೆರೆದೆಯೋ ಗುಣಸಿಂಧು ನಿನ್ನ ಸೇವಕಳೆಂದು ಪರಿಕರಿಸಿ ನೀನೀಕ್ಷಿಸೀ ಪರಿ ಕಾಣೆ ಹರಿಸು ಭಯ ಶ್ರೀ ನರಹರೇ | ಶೌರೇ 2 ಬರಿದು ಮಾಡದೆ ಎನ್ನ ಬಿನ್ನಪವ ಪೊರೆಯ ಬೇ- ಕರವಿಂದ ದಳ ನೇತ್ರನೇ ಗುರು ಹಿರಿಯರುಕ್ತಿಯಲ್ಲದೆ ಎನ್ನದೆಂಬುವೋ ಗರುವ ನುಡಿಯಲ್ಲ ನೀನೇ ಚರಣ ಸೇವಕರ ಪೊರೆವಂಥ ವಿಶ್ವಾತ್ಮಕನೆ ಪರಿಹರಿಸು ಕ್ಲೇಶಗಳನೇ ಕರುಣಿ ಶ್ರೀ ಗೋಪಾಲಕೃಷ್ಣವಿಠ್ಠಲ ಶೇಷ- ಗಿರಿನಿಲಯ ಭಕ್ತ ಪ್ರೀಯಾ | ಜೀಯಾ 3
--------------
ಅಂಬಾಬಾಯಿ
ಕರಿಮುಖದ ಗಣಪತಿಯ ಚರಣಕ್ಕೆಯೆರಗಿ ಶಾರದೆಗೆ ಸೆರಗೊಡ್ಡಿ ವರವನು ವರವ ಬೇಡಿಕೊಂಡೆ ಸ್ಥಿರವಾದ ಭಕುತಿ ಕೊಡುಯೆಂದು 1 ವಾಯು ಬ್ರಹ್ಮ ಭಾರತಿಗೆ ಬಾಳ ಬೇಡಿಕೊಂಡ್ವೇ- ದವ್ಯಾಸರಿಗೆ ನಮೋಯೆಂಬೆ ನ- ಮೋಯೆಂದು ನಾರದರ ಪಾದಪದ್ಮಗಳಿಗೆರಗುವೆ 2 ಅತ್ರಿ ಅಂಗೀರಸ ವಸಿಷ್ಠಗೌತಮ ವಿಶ್ವಾ- ಮಿತ್ರ ಮಾರ್ಕಾಂಡೇಯ ಚ್ಯವನರು ಚ್ಯವನ ಭಾರದ್ವಾಜ ಬಕದಾಲ್ಭ್ಯರಿಗೆ ನಮಿಸುವೆ 3 ಪಂಡಿತ್ವಾಲ್ಮೀಕಿ ಕೌಂಡಿಣ್ಯ ಕೌಂಡಿಣ್ಯ ಅಗಸ್ತ್ಯಮುನಿ ಮರೀಚರಿಗೆ ನಾನು ನಮೋಯೆಂಬೆ4 ಶೇಷಗಿರಿವಾಸನ ಆಕಾಶನಳಿಯನೆ ವೆಂಕ- ಟೇಶ ನೀ ನಮ್ಮನೆ ದೈವ ಮನೆದೈ- ವ ಸಲಹೆನ್ನ ಪದ್ಮಾವತೀಶ ಪರಮಾತ್ಮ 5 ಮಂಗಳಾಂಗನೆ ನೀನು ಮಂಗಳಮಹಿಮನೆ ಮಂಗಳದೇವಿ ರಮಣನೆ ನೀನೆಮಗೆ ಜಯ ಮಂಗಳವ ಕೊಟ್ಟು ಸಲಹೆನ್ನ 6 ವಾಸುದೇವನೆ ನೀನು ವಾಸುಕಿಶಯನನೆ ವಾಸವಿಯ ರಥವ ನಡೆಸಿದೆ ನಡೆಸಿದಂಥ ಶ್ರೀನಿ- ವಾಸ ನೀನೆಮಗೆ ದಯಮಾಡು 7 ಎನ್ನಲ್ಲೆ ನೀನಿದ್ದು ನಿನ್ನಗುಣ ಬಹುರೂಪ- ವನ್ನು ತಿಳಿಸದಲೆ ಇರುವೋರೆ ಇರುವೋರೆ ನೀನು ಪ್ರ- ಸನ್ನನಾಗೆನಗೆ ದಯಮಾಡು 8 ಕಾಲ ಕಾಲಕೆ ನಿನ್ನ ನಾಮವನು ನಾಲಿಗೆ ಮ್ಯಾಲಿಟ್ಟು ನಿನ್ನ ನೆನೆವಂತೆ ನೆನೆವಂತೆ ಅನಿರುದ್ಧ 9 ಕಾಮಕ್ರೋಧವು ಮದ ಮಾತ್ಸರ್ಯ ಲೋಭಗಳು ಮೋಹ ಮಡುವಿನಲಿ ಮುಣುಗಿದೆ ಮುಣುಗಿದೆನೊ ಎನ್ನ ಕೈ ನೀನೆ ಪಿಡಿದೆತ್ತಿ ಕರೆದೊಯ್ಯೊ 10 ಐದು ಮಂದ್ಯೆನ್ನಲ್ಲಿ ಐದಾರೆ ಮಾರಾಯ ಬೈದರು ಬಿಡರೋ ಎನ್ನೀಗ ಎನ್ನೀಗ ಕಟ್ಟಿ ಕೊಂಡೊಯ್ದು ಹಾಕುವರೊ ಯಮನಲ್ಲಿ 11 ಆರು ಮಂದ್ಯರಿಗಳು ಕ್ರೂರ ಶತ್ರುಗಳುಂಟು ಘೋರಬಡಿಸುವರೊ ಅನುಗಾಲ ಅನುಗಾಲ ದುರ್ವಿಷಯ ತಾವೆನಗೆ ಕಲಿಸಿ ದಣಿಸೋರು 12 ಹತ್ತು ಮಂದಿ ಯೆನ್ನ ಸುತ್ತ ಮುತ್ತಿರುವರೊ ಕೂಪ ಭವದೊಳು ಭವದೊಳಗೆ ಬಳಲುವೆನು ಚಿತ್ತಕ್ಕೆ ತಂದು ದಯಮಾಡು 13 ಸಂಚಿತಾಗಾಮಿಗಳ ಮುಂಚೆ ದಹಿಸಿ ಈ ಪ್ರ- ಪಂಚವನು ಬಿಡಿಸೊ ಪರಮಾತ್ಮ ಪರಮಾತ್ಮ ನೀಯೆನ್ನ ವಂಚನಿಲ್ಲದಲೆ ಸಲಹೈಯ್ಯ 14 ಜ್ಞಾನ ಭಕ್ತಿ ಗಾನ ವೈರಾಗ್ಯ ಭಾಗ್ಯಗಳು ಜಾನಕಿರಮಣ ಜಗದೀಶ ಜಗದೀಶ ಜನಕನ ಜಾಮಾತ ನೀನೆ ತಿಳಿಸಯ್ಯ 15 ದ್ವಾಸುಪರುಣನಂತೆ ಈ ಶರೀರದೊಳಿದ್ದು ಏಸೇಸು ಜನ್ಮಕ್ಕಗಲದೆ ಅಗಲದಂತಿದ್ದು ಉ- ದಾಸೀನವ ಮಾಡೋದೊಳಿತಲ್ಲ 16 ಇಂದುಕುಲಜಾತ ನಿನ್ನೊ ್ಹಂದಿಕೊಂಡಿದ್ದು ಎಂದೆಂದಿಗು ಬಿಡದೆ ಗೆಳೆತನ ಗೆಳೆತನವಿದ್ದಲ್ಲಿ ಸಂದೇಹವ್ಯಾಕೊ ಸಲಹಲು 17 ಮುಕ್ತಿದಾಯಕ ನಿನ್ನ ಭಕ್ತರೇಸುಮಂದಿ ಹೆತ್ತಾಯಿಸುತರೇನವರೆಲ್ಲ ನಾ ಹುಟ್ಟಿದೆನೆ ಮತ್ತೆ ಮಲತಾಯಿ ಉದರದಿ 18 ಶ್ರೀಶನೆ ಕೇಳ್ ನಿನ್ನ ದಾಸರಂಗಳದಲ್ಲಿ ಬೀಸಿ ಬಿಸಾಕೊ ಎನ್ನನು ಎನ್ನ ಹರಿದಾಸರ ದಾಸತ್ವಯೆನಗೆ ಕೊಡಿಸಯ್ಯ 19 ಅಂಬರೀಷ್ವರದ ನಿನ್ನ ್ಹಂಬಲೆನಗಿರಲಯ್ಯ ಬಿಂಬ ಮೂರುತಿಯೆ ಬಿಡದೆನ್ನ ನಿನ್ನೂರಲ್ಲಿ ಇಂಬುಕೊಟ್ಟೆನ್ನ (ಅ)ಲ್ಲಿರಿಸಯ್ಯ 20 ಕಡಿದು ಹೊಡೆದು ಬಯ್ದು ಬಂದು ಕಾಲಿಂದೊದ್ದ- ರ್ಹಿಡಿಯದೆ ಅವರ ಅಪರಾಧ ಅಪರಾಧವೆಣಿಸದಿರೆ ನಡೆದರೊ ನಿನ್ನ ಪುರಕಾಗ 21 ಪುಟ್ಟ ಪ್ರಹ್ಲಾದ ಧ್ರುವ ಕೊಟ್ಟರೆಷ್ಟು ಭಾಗ್ಯ ಕಷ್ಟಕ್ಕೆ ಬಂದು ಒದಗಿದೆ ಒದಗಿ ಬಂದವರ ಆಪತ್ತು ಬಂಧನ ಬಿಡಿಸಿದೆ 22 ತನ್ನ ಮಗನ ಕರೆಯೆ ಎನ್ನ ಕರೆದನೆಂದು ನಿನ್ನ ದೂತರನು ಕಳಿಸಿದೆ ಕಳಿಸಿದ್ಯಜಮಿಳಗೆ ಮನ್ನಿಸಿ ಕೊಟ್ಟ್ಯೊ ನಿನಲೋಕ 23 ತಿರುಕ ತಂದವಲಕ್ಕಿ ಕರಕÀರನೆ ನೀಮುಕ್ಕಿ ದೊರೆತನವ ಕೊಟ್ಟು ದಾರಿದ್ರ್ಯ ದಾರಿದ್ರ್ಯ ಕಳೆದದ್ದು ಅರಿಕಿಲ್ಲವೇನೊ ಜನಕೆಲ್ಲ 24 ನಿಲ್ಲಬೇಕೆಂದಿಟ್ಟಿಕಲ್ಲು ಕೊಟ್ಟವಗೆ ಕೈ- ವಲ್ಯವನು ಕೊಟ್ಟ್ಯೋ ಕರುಣಾಳು ಕರುಣಾಳು ಬುಕ್ಕಿ ್ಹಟ್ಟು ಮಲ್ಲಿಗೆಯ ಮಾಲೆಗೊಲಿತೀಯೊ 25 ಕರೆದು ಕಂಸಗೆ ಕೊಟ್ಟು ಕೊಲಿಸಬಂದ- ಕ್ರೂರ(ಗೆ) ನದಿಯಲ್ಲೆ ನಿನ್ನ ನಿಜರೂಪ ನಿಜರೂಪ ತೋರಿದ್ದು ಇದುಯೇನು ನಿನ್ನ ಮಹಿಮೆಯು 26 ಗಂಧಕ್ಕೆ ಒಲಿದು ಕುಬ್ಜೆಯ ಡೊಂಕನೆ ತಿದ್ದಿ ಸುಂದರಿಯ ಮಾಡಿ ಸುಗುಣನೆ ಸುಗುಣನೆ ನೀನಾಕೆ- ಯಂಗಸಂಗ್ಯಾಕೆ ಬಯಸಿದಿ 27 ಕಲ್ಲಾದಹಲ್ಯೆಯನು ಕಡು ಚೆಲ್ವೆಯನು ಮಾಡಿ ಎಲ್ಲಿ ಮಲಗಿದ್ದ ಮುಚುಕುಂದ ಮುಚುಕಂದನ ಗುಹೆ- ಕೈವಲ್ಯ ಕೊಡಹೋದ್ಯೊ 28 ಮಗ್ಗವನೆ ಹಾಕಿ ಮಾರುಬಟ್ಟೆ ನೇದಿಲ್ಲ ರೊಕ್ಕವನೆ ಕೊಟ್ಟು ತರಲಿಲ್ಲ ತರಲಿಲ್ಲ ದ್ರೌಪದಿಗೆ
--------------
ಹರಪನಹಳ್ಳಿಭೀಮವ್ವ
ಕರಿರಾಜ ವರದ ಗುರುರಾಜ ವರದ ಸುರಾಜ ನಿನ್ನ ನಾಮ ಕೇಳು ಪೇಳುವೆ ಗುಣಮಿತಿ ಮೀರಿ ದನುಜರ ವೈರಿ ಗುಣಿಜ£ಕಾಧಾರಿ ನಿನ್ನ ನಾಮ ಕೇಳು ಪೇಳುವೆ ಪ ಶಣಸೀದ ಸೋಮ ಕನ್ನರಿದಿ ಮೀನನಾಗಿ ವೇದವಾ ತಂದಿ ಗುಣತಪ್ಪಿದ ಚಲವನು ಬಿಡದೆ ಮುಣಿಗ್ಯೊಳಗೆ ಕೂರ್ಮನಾಪಿಡಿದಿ ನೊಣಶಣತಾಕ್ಷನ ಬಿಡದಳಿದಿ ಗುಣಿವರಹನಾ ಗಿಳಿಯ ತಂದಿ ಪ್ರಲ್ಹಾದನ ಪೊರೀದಿ 1 ವಟುರೂಪಿಲಿ ಬಲಯನು ತುಳಿದಿ ನಟಿಸುವ ವಾಮನನಾದಿ ಕಟಹಾರದಿ ಕ್ಷತ್ರಿಯರಳಿದಿ ಹಟದಿಂದ ಪರಶುರಾಮಾದಿ ಭಟ ರಾವಣನಸುವಾನಳಿದಿ ದಿಟರಾಮನೆಂದು ಪೆಸರಾದಿ ಜಟಿಯ ಪಿಡಿದು ಭೂತಹಟಕೆ ಘಟ್ಟಿಸಿ ಕೃಷ್ಣನೆನಿಸಿದಿ 2 ಯುವತೀಯರ ವ್ರತವನ್ನಳಿದಿ ಭುವನದಿ ಬೌದ್ಧನಾಗಿ ನಿಂದಿ ದಿವ್ಯ ಹಯವನೇರಿ ನೀ ಬಂದಿ ಭುವಿ ದುಷ್ಟರಾಂತಕ ಕಲ್ಕ್ಯನೀಡಿ ತವ ಶರಣರ ಪೊರೆಯುವ ನೆವದಿ ವಿಧವಿಧ ರೂಪ ನೀ ತಾಳ್ದಿ ಭವದಿಂದೆನ್ನನು ಉದ್ಧರಿಸೊ 3
--------------
ನರಸಿಂಹವಿಠಲರು
ಕರುಣ ಘನ ಸಿರಿಚರಣ ಶರಣ ಜನರಾಭರಣಾ | ದುರಿತ ಹರಣ | ಹರಿಯೇ ಸಂಕಟ ಹರಿಯೇ ಬಾಯೆಂದು ಕರಿಯೇ | ಒದಗಿದೈ ನರಹರಿಯೇ ದೈತ್ಯರರಿಯೇ | ಪರಮ ಸದ್ಗುಣಧಾಮ ಪೂರಿತ ಮನೋಕಾಮ | ಯದುಕುಲಾಂಬುಧಿ ಸೋಮಾ ಮೇಘ ಶಾಮಾ | ಸುರಮುನಿ ಜನಧೇಯಾ | ಕಮನೀಯತರ ಕಾಯಾ | ತೋಯಜಾಕ್ಷ ಸಿರಿ ಕೃಷ್ಣರೇಯಾ | ಸಲಹು ಒಲವಿಂದಾ 1 ಅಂಕಿತ-ಕೃಷ್ಣ (?)
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣದಿ ಎನ್ನ ಪೊರಿಯೇ ತೊರಮ್ಮ ಶಿರಿಯೇ ಪ ಚರಣಯುಗಕೆ ನಾ ಶರಣು ಮಾಡಿದೆ ದೇವೀ ಅ.ಪ ವಾರಿಜಾಂಬಕೆ ಅಂಭ್ರಣೀ ಶ್ರೀ ಹರಿಯ ರಾಣಿ ಮಾರಾರಿ ಮುಖಸುರ ಸಂತ್ರಾಣಿ ವಾರವಾರಕೆ ನಿನ್ನ ಸಾರಿಭಜಿಪೆ ಎನ್ನ ದೂರ ನೋಡದೆ ಪೊರಿಭಾರ ನಿನ್ನದು ತಾಯಿ 1 ಸೃಷ್ಟಿ ಸ್ಥಿತಿಲಯ ಕಾರಿಣೀ ಸುಗುಣಸನ್ಮಣಿ ಕಷ್ಟ ದಾರಿದ್ರ್ಯ ದುಃಖ ಹಾರಿಣೀ ದುಷ್ಟರ ಸಂಗದಿ ಕೆಟ್ಟಿಹ ಎನ್ನನು ಥಟ್ಟನೆ ಕರುಣಾದೃಷ್ಟಿಲಿ ನೋಡಿ 2 ಜಾತರೂಪಳೆ ಶುಭಗಾತ್ರಿ ತ್ರಿಜಗಕೆ ಧಾತ್ರೀ ಸೀತೆ ಸತ್ರಾಜಿತನ ಪುತ್ರಿ ದಾತ ಗುರುಜಗನ್ನಾಥವಿಠಲನ ನೀತ ಸತಿಯೆ ಎನ್ನಮಾತೆ ವಿಖ್ಯಾತೇ 3
--------------
ಗುರುಜಗನ್ನಾಥದಾಸರು
ಕರುಣದಿ ಕಾಯಬೇಕಿನ್ನು ಪ್ರಾಣೇಶ ಅರಿಯೆನೊ ಅನ್ಯರ ಜಗದ್ವಾಸ ಪ. ಪರಿಪರಿ ಬವಣೆಯ ಪರಿಹಾರಗೈಸುತ ತ್ವರಿತದಿ ಸಲಹೊ ಭಾರತಿಗೀಶ ಅ.ಪ. ಅನ್ನವಸನಗಳಿಗೆ ಅಲ್ಪರ ತೆರದೊಳು ಬನ್ನಬಡುತಲಿರಲು ನಿನ್ನ ಪಾದವ ನಂಬಿ ನೀ ಗತಿ ಎನುತಿರೆ ಮನ್ನಿಸಿದ ಮಹಿಮ ನಿಸ್ಸೀಮ 1 ಮನದಿ ಬಹುನೊಂದು ನಿನ್ನ ಘನತೇನೆಂದು ಅನುದಿನ ಕಾಯೊ ಎಂದು ಎನುತಿರೆ ಸ್ವಪ್ನದಿ ಹನುಮ ನಿನ್ನಭಯ ಹಸ್ತ ವನೆ ಶಿರದಿ ಇಟ್ಟೆ ಶ್ರೇಷ್ಠನೆ 2 ಉಭಯ ಹಸ್ತವು ಎನ್ನ ಶಿರದ ಮ್ಯಾಲಿಡುತಲಿ ಅಭಯ ಕೊಡುತಲಿರಲು ನಿರ್ಭಯದಿಂದ ನಾ ನಿನ್ನ ಭಜಿಪೆನಯ್ಯ ಶುಭಗುಣನಿಲಯ ಜೀಯಾ 3 ಹನುಮ ಭೀಮಾನಂದ ಮುನಿಯಾಗಿ ಜಗದಲಿ ಹನನಗೈಯುತ ದನುಜರ ವನಜಾಕ್ಷ ಹರಿಯನು ಘನವಾಗಿ ಸೇವಿಸಿ ಅನುದಿನದಲಿ ಕಾಯ್ವೆ ಸುಜನರ4 ಶ್ವಾಸಜಪವ ಮಾಡಿ ರಾಶಿ ಜೀವರ ಕಾಯ್ವೆ ಶ್ವಾಸ ನಿಯಾಮಕನೆ ಶ್ರೀಶ ಶ್ರೀ ಗೋಪಾಲಕೃಷ್ಣವಿಠ್ಠಲನಿಗೆ ಕೂಸು ಎಂದೆನಿಸಿರುವೆ ನೀ ಕಾವೆ 5
--------------
ಅಂಬಾಬಾಯಿ
ಕರುಣದಿ ಕಾಯೊ ಕರುಣದಿ ಕಾಯೊ ಕಮಲನಯನ ಎನ್ನ ಪ ಪರಮಪುರುಷ ಹರೆ ಸರಸಿಜನಾಭನೆ ಅ.ಪ ನೀನೆ ತಂದೆಯು ಎಂದು ಜ್ಞಾನದಿಂದಲಿ ಬಂದು ಧ್ಯಾನಿಸುವೆನು ಈಗ 1 ತಾಯಿ ನೀನೇಯೆಂದು ಬಾಯಿಗೆ ಬಂದಂತೆ ಜೀಯ ನಿನ್ನನು ನೆನೆವೆ 2 ಜಗದೊಳಗೆಲ್ಲ ನೀನೆ ಸುಗುಣ ಶೀಲನು ಎಂದು ಮುಗಿಲು ಮುಟ್ಟುತಲಿದೆ3 ಸಂಗತಶ್ರಮವನು ಭಂಗವಗೈದ ಭು- ಜಂಗ ಗಿರಿಯ ವಾಸ 4 ಲೀಲೆಯಿಂದಲಿ ವ್ಯಾಘ್ರಶೈಲದಲಿರುವ ಶ್ರೀ ಲೋಲ ವರದವಿಠಲ 5
--------------
ವೆಂಕಟವರದಾರ್ಯರು
ಕರುಣದಿ ಕಾಯೊ ಗೋಪಾಲಾಚರಣವ ಸ್ಮರಿಸುವೆ ಶರಣರ ಪಾಲಾ ಪ ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣ ನಿಧಿಯೆ ಘನ್ನಮೊರೆಯಿಡುವೆನು ನಿನ್ನ | ಚರಣ ಸರೋಜವನ್ನಶಿರದೊಳಗಿರಿಸೆನ್ನ | ಪರಮ ಪಾವನ್ನ 1 ಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವ | ಅರುಹುವುದೊಳಿತಲ್ಲೆ |ಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿ 2 ಪನ್ನಗಾಚಲವಾಸ | ಪ್ರಸನ್ನರಘನಾಶನಿನ್ನ ನಾಮವ ಅನಿಶ | ಎನ್ನಿಂದ ನುಡಿಸೀಶ |ಅನ್ನಂತ ಗುಣ ಗುರು | ಗೋವಿಂದ ವಿಠಲನೆಎನ್ನ ಬಿನ್ನಪ ಸಲಿಸು | ಮನ್ನಿಸಿ ಕುಂದುಗಳ 3
--------------
ಗುರುಗೋವಿಂದವಿಠಲರು
ಕರುಣದಿ ಕಾಯೋ ಎನ್ನ ಕಾರುಣ್ಯನಿಧಿ ಕರುಣದಿ ಕಾಯೋ ಎನ್ನ ಪ ಚರಣಸೇವಕಭಯಹರಣ ಶ್ರೀ ಕೌಸ್ತುಭಾಭರಣ ಸೌಖ್ಯವಿ ತರಣ ನಿನ್ನಯ ಚರಣಯುಗಳವ ಶರಣುಹೊಕ್ಕೆನು ಅ.ಪ ಕರ್ಮತಂತ್ರವನುಳಿದು ಕಾಮಿಸಿ ಮ£ವ ನಿರ್ಮಲತ್ವವ ತೊರೆದು ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಕಾಮವು ಹೊಮ್ಮುತಿದೆ ಪರಬೊಮ್ಮ ಮೂರುತಿ 1 ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನ ನೇಮವ ಮರೆದು ಮಾನಸಪೂಜಾ ವಿಧಾನವನರಿಯದೆ ದೀನಜನಸುರಧೇನು ಭಕ್ತರಮಾನನಿಧಿಯಹ ಶ್ರೀನಿವಾಸನೆ2 ಶರಣಜನಾವನನೆ ಶಕ್ರಾದಿ ನಿರ್ಜರಕುಲಪಾಲಕನೆ ಪುರಹರ ಸನ್ನುತ ಚರಿತಪೂರಿತ ದುರಿತ ಸದ್ಗುಣ ಭರಿತ ಪುಲಿಗಿರಿ ವರದ ವಿಠಲ 3
--------------
ವೆಂಕಟವರದಾರ್ಯರು
ಕರುಣದಿ ಕಾಯೋಯನ್ನ ಕಾರುಣ್ಯನಿಧಿ ಕರುಣದಿ ಕಾಯೊಎನ್ನ ಪ ಚರಣ ಸೇವಕ ಭಯಹರಣ ಶ್ರೀಕೌಸ್ತುಭಾಭರಣ ಸೌಖ್ಯವಿತರಣ ನಿನ್ನಯ ಚರಣ ಯುಗಳವ ಶರಣುಹೊಕ್ಕೆನು ಅ.ಪ. ಕರ್ಮತಂತ್ರವನುಳಿದು ಕಾಮಿಸಿ ಮನ ನಿರ್ಮಲತ್ವವ ತೊರೆದು ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಬಲು ನಿರ್ಮಲತ್ವವನಳಿದು ಪರ ಬೊಮ್ಮ ಮೂರುತಿ1 ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನನೇಮವ ಮರೆದು ಮಾನಸ ಪೂಜಾ ವಿಧಾನ ವನರಿಯದೆ ದೀನಜನ ಸುರಧೇನು ಭಕ್ತರ ಮಾನನಿಧಿಯಹ ಶ್ರೀನಿವಾಸನೆ 2 ಶರಣಜನಾವನನೆ ಶಕ್ರಾದಿನಿ-ರ್ಜರಕುಲ ಪಾಲಕನೆ ಪುರಹರ ಸನ್ನುತ ಚರಿತದೂರಿತ ದುರಿತಸದ್ಗುಣ ಭರಿತ ಪುಲಿಗಿರಿ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ಕರುಣದಿ ಪೊರೆಯೆ ಭಾರತಿ ಸತಿ ಪ ಪರಮ ಮಂಗಾಳೆ ನಿನ್ನ ಚರಣ ಕಮಲಾವ ಮರೆಯ ಹೊಕ್ಕೆನು ಕಣ್ಣ ತೆರೆದು ನೋಡೌ ತಾಯೆ 1 ಸರುವದ ದುರಿತದಿ ಚರಿಸಿದವನೆಂದು ತರಳನಾದೆನ್ನನು ಜರಿದು ನೂಕುವರೆ 2 ದುರಿತದೂರ ಗುಣಪೂರ್ಣ ಸಿರಿ ರಂಗೇಶವಿಠಲನೆ ಸರಿಯೆಂಬ ಮತಿಯನ್ನು ಸ್ಥಿರವಾಗಿ ಕೊಟ್ಟೆನ್ನ 3
--------------
ರಂಗೇಶವಿಠಲದಾಸರು
ಕರುಣದಿಂದ ಕಾಯೊ ಎನ್ನನು ಉರಗಾದ್ರಿವಾಸ ವಿಠ್ಠಲ ದೇವ ಪ ತಂದೆ ವೆಂಕಟೇಶ ವಿಠ್ಠಲ ಬಂದು ಎನ್ನ ಹೃದಯದಲ್ಲಿ ನಿಂದು ನಾಮ ನುಡಿಸಿ ಪೇಳ್ವ ಚಂದ ಮನಕೆ ತಂದು ಕೊಡುತ 1 ವಾಸುದೇವ ನಿನ್ನ ಮಹಿಮೆ ತೋಷದಿಂದ ಭಜಿಸುವುದಕೆ ದೋಷಗುಣಗಳನ್ನೆ ಕಳೆದು- ಲ್ಲಾಸ ಮನಕೆ ಒದಗುವಂತೆ 2 ಮಂದಮತಿಗಳಾದ ಜನಕೆ ಮುಂದೆ ಗತಿಯ ಪಥವ ತೋರಿ ಬಂಧನಂಗಳನ್ನೆ ತರಿದು ತಂದೆ ಕಾಯೊ ಇಂದಿರೇಶ 3 ಬೊಕ್ಕಸದ ದ್ರವ್ಯ ಜನರು ವೆಚ್ಚಮಾಡುತಿರುಹ ತೆರದಿ ಮೆಚ್ಚಿ ಬಂದ ಜನರ ಮನದ ಇಚ್ಛೆ ಪೂರ್ತಿಗೊಳಿಸಿ ಪೊರೆದೆ 4 ಅಂತರಂಗದೊಳಗೆ ನಿನ್ನ ಚಿಂತೆ ಮರೆಯದಂತೆ ಕೊಟ್ಟು ಅಂತರಾತ್ಮ ಕಮಲನಾಭ ಸಂತೈಸಿ ಕಾಯೊ5 ಟ ಟ ಅಸ್ವತಂತ್ರ ಜೀವಾಂತರ್ಗತ ಶ್ರಿ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಉರಗಾದ್ರಿವಾಸ ವಿಠ್ಠಲಾಭಿನ್ನ ಶ್ರಿ ಗುರುವಾಸುದೇವ ವಿಠ್ಠಲಾ ಭಿನ್ನ ಶ್ರೀ ತಂದೆ ವೆಂಕಟೇಶ ವಿಠ್ಠಲಾತ್ಮಕ ಶ್ರೀ ಕಮಲನಾಭ ವಿಠ್ಠಲಾಯ:ನಮ: ಟ ಶ್ರೀ ಕಮಲನಾಭ ವಿಠ್ಠಲ ದಾಸರಾದ ಜೀವೂಬಾಯಿ ಅವರು ರಚಿಸಿದ ಮೊತ್ತ ಮೊದಲ ಹಾಡು.
--------------
ನಿಡಗುರುಕಿ ಜೀವೂಬಾಯಿ
ಕರುಣದೆನ್ನ ಕರಪಿಡಿ ಕಾಯೋ ಪ ಸಿರಿನಾರಾಯಣ ಶರಣೆಂಬೆ ಅ.ಪ ಮೇಲ್ ಮೇಲ್ ಗುಣಗಾನವ ಮಾಡೆ ಬಾಲ್ಯಮೊದಲು ಮುದಿತನ ದೊಳಗುಂ ಸೌ ಶೀಲ್ಯ ಸ್ತುತಿಪೆ ಶುಕನುಡಿಯಂತೆ 1 ದಶರೂಪಗಳಂ ಧರಿಸುತ ಮರೆಸಲು ವಿಶ್ವವ್ಯಾಪಕಗುರು ತರವೇ ಕೃಷ್ಣನಾಮನಾವೆಯೊಳು ಬಹೇ 2 ವೈನತೇಯನನೊಡಗೊಂಡು ಬಹೆ ನಿನ್ನ ಸೆರಗ ಪಿಡಿಯುತ ಬರುವೆ3 ಸುಮನಸ ಪೂಜಿತ ನಮಿಸುವೆ ನಾಂ ಭ್ರಮೆಗಳ ಬಿಡಿಸುತ ಭವಭಯ ಹರ¸ ಕಮಲನಯನ ಹೆಜ್ಜಾಜೀಶ 4
--------------
ಶಾಮಶರ್ಮರು
ಕರುಣವ ತೋರೋ ಕರುಣಗುಣಾಂಬುಧಿ ಕರುಣವ ತೋರೋ ರಂಗಯ್ಯ ಪ ಕರುಣದಿ ಬಾರೋ ಬಾರೋ ಕರುಣ ತೋರಿ ಎನ್ನ ಕರುಣದಪ್ಪಿ ಪೊರಿ ಕರುಣವ ತೋರೋ ಅ.ಪ ಪರತರಮಹಿಮ ಹರಸುರಬ್ರಹ್ಮರ ಮೊರೆಯ ಕೇಳಿದ ಕರುಣವ ತೋರೋ ರಂಗಯ್ಯ ಧರೆಗೆ ಇಳಿದು ಶೇಷಗಿರಿಯಲಿ ನಿಂತು ನರಸುರರಿಗೆ ವರವಿತ್ತ ಕರುಣವ ತೋರೋ ರಂಗಯ್ಯ ಪುರದಿ ಬಂದು ನಿಂತ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಚರಣವಿಟ್ಟು ನಾರಿಕುಲವನು ದ್ಧರಿಸಿದಿ ಕರುಣವ ತೋರೋ 1 ಅಂಬುಜನಯನ ಕಂಬದಿ ಬಂದು ಭಕ್ತ ಗಿಂಬುಕೊಟ್ಟು ಕಾಯ್ದ ಕರುಣವ ತೋರೋ ರಂಗಯ್ಯ ನಂಬಿಕೊಟ್ಟ ಕಮಲಾಂಬಕಿಯೆಂಜಲ ಸಂಭ್ರಮದಿಂ ಮೆದ್ದ ಕರುಣವ ತೋರೋ ರಂಗಯ್ಯ ನಂಬಿದ ಅಸುರಗೆ ಬೆಂಬಲಗೊಟ್ಟು ಸ್ಥಿರ ಕುಂಭಿನಿಪಟ್ಟವಿತ್ತ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಅಂಬರೀಷನ ಮೊರೆ ಕೇಳಿ ಶೀಘ್ರದಿಂದ ಕರುಣವ ತೋರೋ 2 ನಿರುತ ನಂಬಿ ನಿನ್ನ ಮರೆಹೊಕ್ಕ ಬಾಲಗೆ ಸ್ಥಿರಪದವಿಯನಿತ್ತ ಕರುಣವ ತೋರೋ ರಂಗಯ್ಯ ಗರುಡನೇರಿ ಬಂದು ಕರಿಯ ವಿಪತ್ತನು ಪರಿಹರಿಸಿದ ಮಹಕರುಣವ ತೋರೋ ರಂಗಯ್ಯ ಹರಿಹರಿ ಎಂದೊದರಿದ ತರಣಿಭಕ್ತಿಗೆ ಮೆಚ್ಚಿ ನಿರುತ ಮೈಗಾವಲಾದ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಪರಮ ನಿರ್ಜರರಿಗೆ ಅಮೃತವುಣಿಸಿದ ಕರುಣವ ತೋರೋ3 ದುರುಳಕೋಟಿಯಾಚರಿಸಿದ ದುರುಳಗೆ ಪರಮ ಕೈವಲ್ಯವಿತ್ತ ಕರುಣವ ತೋರೋ ರಂಗಯ್ಯ ಕಿರಿಕುಲದವನ ಕರದಿಂ ಪರಮಾ ದರದಿ ಉಂಡ ಮಹಕರುಣವ ತೋರೋ ರಂಗಯ್ಯ ನೀರು ಕೊಟ್ಟ ನಿಜಕರುಣವ ತೋರೋ ರಂಗಯ್ಯ ಕರುಣದಿ ಬಾರೋ ಬಾರೋ ಚರಣದಾಸ ವರ ಕನಕನಿಗೊಲಿದ ಕರುಣವ ತೋರೋ 4 ಹಿಡಿ ಅವಲಕ್ಕಿಯ ಕೊಡಲು ಒಪ್ಪಿ ನೀ ಕಡು ಸಂಪದವಿತ್ತ ಕರುಣವ ತೋರೋ ರಂಗಯ್ಯ ಮಡಿದ ಬಾಲಕನಂ ಕಡುದಯದೆಬ್ಬಿಸಿ ಪಿಡಿದು ಕಾಪಾಡಿದ ಕರುಣವ ತೋರೋ ರಂಗಯ್ಯ ದೃಢಕರ ಬೆಂಬಲ ಬಿಡದೆಯಿರುವ ನಿನ್ನ ಕಡುದಿವ್ಯ ಮೂರ್ತಿಯ ಕರುಣವ ತೋರೋ ರಂಗಯ್ಯ ಕರುಣದಿ ಬಾರೋ ರಂಗ ಒಡೆಯ ಶ್ರೀರಾಮ ಎ ನ್ನೊಡಲಗಲದೆ ನಿಂತು ಕರುಣವ ತೋರೋ 5
--------------
ರಾಮದಾಸರು