ಒಟ್ಟು 21316 ಕಡೆಗಳಲ್ಲಿ , 137 ದಾಸರು , 8969 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಪರಿಹಾರ ಪಾವನನಾಮ ಪ ಕಮಲಜ ಜನಕಾ ಕಾಮಿತ ಫಲದಾಯಕಾ ಅಮಿತ ಪರಮಾನಂದ ಆದಿಮೂರುತಿ ಗೋವಿಂದಾ 1 ಸಕಲಗುಣ ಪರಿಪೂರ್ಣ ಶಾಶ್ವತ ಸಂಪನ್ನ ಮುಕುತಿ ರಾಮಕೃಷ್ಣ...............ರುತಿ ಮೋಹನಾ 2 ಸುಂದರರೂಪಾ ಸುಗುಣ ಪ್ರತಾಪ ಇಂದಿರೆ ರಮಣ ಶ್ರಿತ ಜನ ಪೋಷಣ 3 ದಶ ಅವತಾರಾ ದೈತ್ಯ ಸಂಹಾರಾ ಪಶುಪತಿ ಪಾಲಕಾ ಪಾವನೋದಕ ಜನಕಾ 4 ಹರಿ `ಹೆನ್ನ ವಿಠಲಾ ' ಅಧಿಕ ಸುಶೀಲಾ ಪರಮ ಭಕ್ತ ವಿಲಾಸಾ ಪಾಲಿತ ಜಗದೀಶಾ 5
--------------
ಹೆನ್ನೆರಂಗದಾಸರು
ಭವ ಪಾರಗಾಣಿಸಲು ಭಾರತಿ ರಮಣ ಸಮೀರನಲ್ಲದೆ ಬೇರೆ ಪ ವೀರ ಹನುಮ ರಘು ವೀರ ಭಕುತ ಬ್ರಹ್ಮ ಚಾರಿಯಾಗಿ ಜೀವ ಸಾರವೆನಿಸಿದೆ ಅ.ಪ ಶೇಷ ಗರುಡ ಶಿವ ಮುಖಸುರರೊಬ್ಬರೂ ದೋಷದೂರಲ್ಲವೊ ಪವಮಾನ ಈಶದಜ್ಞಾನ ಸಂಶಯ ಭ್ರಮೆ ಪೊಂದದೆ ಶ್ರೀಶನ ಪರಮ ಸಂತೋಷಕೆ ಪಾತ್ರನು 1 ವೀರರಧಿಕರೆಲ್ಲರು ನಿನ್ನೆದುರಲಿ ಸಾರಮೇಯದಂತಾದರೊ ಭೀಮ ನಾರಾಯಣನಿಗೊಬ್ಬನಿಗಲ್ಲದೆ ಶಿರಬಾಗದೆ ಮರೆದೆಯೊ ಧೀರ ಕಂಠೀರವ 2 ಶಾಂತನು ನೀ ಬಲುದಾಂತನು ನೀನೆ ಸ್ವಾಂತದಿ ಹರಿಯು ಪ್ರಸನ್ನನು ಸತತವು ಅಂತಿಮಭಾಷ್ಯಾದಿಗಳ ರಚಿಸಿ ವೇ ದಾಂತ ಸಾಮ್ರಾಜ್ಯದಿ ಸಾರ್ವಭೌಮ ಯತಿ3
--------------
ವಿದ್ಯಾಪ್ರಸನ್ನತೀರ್ಥರು
ಭವ ಪಾಶದಲಿ ನಾನು ಹರಿಯೆ ಕಿಲಿಕಿಲಿ ನಗುವರೆ ಸಲಹುವದು ದೊರೆಯೆ ಪ ಕೆಲರ ಮಾತಿಗೆ ಪೋಗಿ ಬಲವಾಗಿ ಅವರ ಕೆಲಸ ಮಾಡುವೆ ನಿಜ ಕೆಲಸವ ಮರೆದೆ ನಾ 1 ಧರಣಿಯ ಪತಿಯೇವೆ ಶರಣೆಂದು ತಿಳಿದು ಪಾದ ಸಿರಿಯ ರಮಣನೆ2 ಉದರಗೋಸುವಾಗಿ ಮರೆದವರ ವಶದಿ ಹದನವ ಕಳಕೊಂಡು ಮದಡ ನಾನಾದೆನೊ 3 ಉಣವೆನೊ ಪರರನ್ನ ದಣಿವೆನೊ ಅದಕ್ಕೆ ಕುಣಿವೆನೊ ಅವರಂತೆ ಗುಣವೇನು ಎನಗೆ 4 ಈಸು ಪರಿಯಲೆನ್ನ ಶ್ರೀಶ ದಾಸರ ವಶದಿ ವಾಸವಿತ್ತು ಬದುಕಿಸೊ ವಾಸುದೇವವಿಠಲ 5
--------------
ವ್ಯಾಸತತ್ವಜ್ಞದಾಸರು
ಭವ ಬಂಧವೂ ಪಗಂಗಾಜನಕ ಖಗೊತ್ತುಂಗ ತುರಗನೆ ದೇವ ರಂಗಾಪುರಾಗಾರನೆ ಸ್ವಾ'ು ಅ.ಪದುರಿತ ಕೋಟಿಗಳ ಪರಿಹರಿಸಿ ರಕ್ಷಿಪ ನಿನ್ನ ಬರಿನಾಮಸ್ಮರಣೆಯೊಂದುಪರಿಪರಿಯ ಭವದ ಕೋಟಲೆಯ ಬಿಡಿಸುವ ನಿನ್ನ ಚರಿತೆಯ ಶ್ರವಣವೊಂದುಅರಿತರಿಯದೆಸಗಿದಘರಾಶಿಯ ದ'ಸಿ ನಿನ್ನ ಶರಣಜನ ಸಂಗವೊಂದುಇರಲಿವನು ಬಯಸಿ ಬೇಡುವೆನೆಂದು ನಿನ್ನ ಸಿರಿಚರಣದೆಡೆಗೈದಿ ಸಂತಸದಳೆದುನಿಂದೂ 1ಆವಜನ್ಮಾರ್ಜಿತದ ಸುಕೃತ ಪರಿಪಾಕವೊ ದೇವ ನಿನ್ನಯ ಕರುಣವೋಸಾವಧಾನದಿ ನಿನ್ನ ನೆನೆದು ಪೂಜಿಸಿ ನುತಿಪ ಸೇವಕರ ಪ್ರೇಮದೊಲವೋಜೀವರಾಶಿಗಳೊಳುದುಸಿ ಮಡಿಯೆ ಪುಟ'ಟ್ಟ ಭಾವಬಂದೀ ಬಣ್ಣವೋಆವುದನು ತಿಳಿಯದಜ್ಞನನು ನಿನ್ನವರೊಯ್ದು ಪಾವನಕ್ಷೇತ್ರವನು ಪೊಗಿಸಿದತಿಶಯವೋ 2ಗುರು ವಾಸುದೇವಾರ್ಯನಾಗಿ ಚಿಕನಾಗಾಖ್ಯಪುರದಿ ಮ'ಮೆಯ ತೋರ್ದೆಯೈಕರೆದಜ್ಞರಜ್ಞತೆಯ ಪರಿದು ಸುಜ್ಞಾನ ಸುಧೆಯೆರೆದು ನೀನೆ ಪೊರೆದೆಯೈಪರದೇಸಿ ವೇಷದಿಂ ಮೂಢ ಜನರಿಗೆ ಭಕ್ತಿುರವ ಕೈಸಾರಿಸಿದೆಯೈಮರೆಯೊಕ್ಕೆ ನಾನು ತಿಮ್ಮದಾಸ ದೇವ ಪರಾಕು ಕರ'ಡಿದು ಕಾಯಬೇಕೆನ್ನ ವೆಂಕಟರಮಣ 3
--------------
ತಿಮ್ಮಪ್ಪದಾಸರು
ಭವ ಬಿಡಿಸಯ್ಯ ಹರಿ ನಿನ್ನ ನಾಮ ದೃಢವಾಗಿ ನುಡಿಸಯ್ಯ ಬಿಡದೆ ಸನ್ಮಾರ್ಗದಿ ನಡೆಸಯ್ಯ ದೇವ ಗಡ ನಿನ್ನ ಕೃಪಾಕವಚ ತೊಡಿಸಯ್ಯ ಪ ಹಾಳು ಭ್ರಾಂತಿಗಳೆಲ್ಲ ಕೆಡಿಸಯ್ಯ ಎನ್ನ ಕೀಳುಯೋಚನೆ ಸರ್ವ ಕಡಿಸಯ್ಯ ಜಾಳು ಪ್ರಪಂಚದಾಸೆ ತಿಳಿಸಯ್ಯ ಸ್ವಾಮಿ ಮೂಳಮಾನವರ ಮಾತು ಮರೆಸಯ್ಯ 1 ನಿತ್ಯ ಸುಜನರೊಳಿರಿಸಯ್ಯ ಎನ್ನ ಸತ್ಯ ಶರಣರೊಳಾಡಿಸಯ್ಯ ಅರ್ತಿಯಿಂ ತತ್ವರ್ಥ ತಿಳಿಸಯ್ಯ ಎನ್ನ ಮಿಥ್ಯಗುಣಂಗಳನ್ನು ಹರಿಸಯ್ಯ 2 ಕೋಪತಾಪಂಗಳ ವಧಿಸಯ್ಯ ಎನ್ನ ಪಾಪ ಮಾಫಿಗೊಳಿಸೆನ್ನಯ್ಯ ಕೋಪಿ ಪಾಪಿಗಳಿಂದುಳಿಸಯ್ಯ ನಿನ್ನ ಗೌಪ್ಯದ ಧ್ಯಾನ ಮುನ್ನ ತಿಳಿಸಯ್ಯ 3 ಭೂತಪ್ರೇತದಂಜಿಕ್ಹರಿಸಯ್ಯ ತಂದೆ ಜಾತಿಭೀತಿ ಮೊದಲ್ಹಾರಿಸಯ್ಯ ನೀತಿಶಾಂತಿ ಸ್ಥಿರ ನಿಲ್ಲಿಸಯ್ಯ ಎನ್ನ ತಾತ ಮಾತೆ ನೀನೆ ನಿಜವಯ್ಯ 4 ನರರಿಗೆ ಎರಗಿಸದಿರಯ್ಯ ಎನ್ನ ಶಿರ ನಿನ್ನ ಚರಣದಿ ಇರಿಸಯ್ಯ ಪರಲೋಕಸಾಧನ ತೋರಿಸಯ್ಯ ಎನ್ನ ಶರಣ ನೀನಾಗು ಶ್ರೀರಾಮಯ್ಯ 5
--------------
ರಾಮದಾಸರು
ಭವ ಭಯಂಕರ ಪ ಶಂಕರ ತ್ವತ್ಪದ ಪಂಕಜದಲಿ ಮನ ಶಂಕೆಯಿಲ್ಲದೆ ಕೊಟ್ಟು ಕಿಂಕರನನು ಪೊರೆ 1 ಮೃತ್ಯುಪಾಶಕೆ ಸಿಕ್ಕಿ ತತ್ತರಿಸುತಲಿದ್ದ ಭಕ್ತನ ಸಲಹಿದ ಮೃತ್ಯುಂಜಯ ಸಲಹೆನ್ನ 2 ವಿಷವು ಆವರಿಸಲು ತ್ರಿದಶರು ಬೇಡಲು ನಸುನಗುಗಲಿ ವಿಷ ಧರಿಸಿದ ಸದಾಶಿವ 3 ಶಿವಶಿವಾವಲ್ಲಭ ಭವಾಭವ ಪ್ರಭವನೆ ಭುವನ ಪವಿತ್ರನೆ ಭವಹರ ಸಲಹೆನ್ನ 4 ಅಂಬಿಕನಾಥನೆ ನಂಬಿದೆ ನಿನ್ನನೆ ಶಂಭುವೆ ಭಕ್ತನ ಬೆಂಬಿಡದೆಲೆ ಪೊರೆ 5 ಅಷ್ಟ ವಿಭೂತದ ಅಷ್ಟಮೂರ್ತಿಯೆ ಪದ ಮುಟ್ಟಿ ಭಜಿಪ ಮನ ಕೊಟ್ಟು ರಕ್ಷಿಸು 6 ದಿಗಂಬರ ದಯಾಕರ ಭಗೀರಥ ಹಿತಕರ ಅಘಹರ ಮೃಗಧರ ಹಗರಣಗೊಳಿಸಿದೆ 7 ವಿಘ್ನಪ ಜನಕನೆ ಅಜ್ಞತೆ ಬಿಡಿಸಯ್ಯ ಸುಜ್ಞನೆ ಭವಾಂಬುಧಿ ಮಗ್ನನನುದ್ಧರಿಸಯ್ 8 ಲಕುಮಿಕಾಂತನ ಪ್ರಿಯಸÀಖನೆ ಶ್ರೀಕಂಠನೆಭಕುತಿ ಭಾಗ್ಯವನೀಯೊ ಶಕುತ ಬಿಡದೆ ಕಾಯೊ 9
--------------
ಲಕ್ಷ್ಮೀನಾರಯಣರಾಯರು
ಭವ ಭಯದಾ ಕೊಳೆ ತೊಳೆÉದಾನಂದವೀವ ಸಾರಂಸಂಸಾರ ಸಾರಂ ಪ. ಸುಳಿದು ಯಮಭಟರೆಳೆಯುವ ಕಾಲದಿ ಪರಿ ಸಾರ ಮನುಜರು ಅ.ಪ. ಅಳಿದವರಾರು ಝಳಝಳ ಮನದಿಂ ಕಳೆಗೊಟ್ಟಿಹ ಪುರುಷನಾರುಂ ಸಲೆ ನಾರದರಲ್ಲದೆ ಯಿದನಂ ಸೆಳೆದುರೆ ಭಕ್ತಿಯೊಳ್ ಹರಿಯಂ ಅಳವಲ್ಲದಾನಂದದಿಂ ಹರಿ ಸುಳಿವ ಪೊಳೆವ ಮನದೊಳಗಿಹನೆನುತಂ ಸಾರಿ ಹರಿದನಂ ಸಾರಂ ಸಂಸಾರಂ 1 ಅರ್ಣವದೊಳು ಭವಾರ್ಣ ನಿರ್ಮಾಣನ ಕರ್ನದೊಳಾಲಿಸಿ ಧ್ವನಿಮಾಡಿ ನಿರ್ಣಯದಲಿ ಸ್ವರ್ಣರೂಪನ ಜೀರ್ಣಿಪ ವೀಣಾನಾದದೀ ಸಾರಂ ಕರ್ಣಾನಂದದಿ ಹಾಡಿದನಾರುಂ ವರ್ಣಾಶ್ರಮ ಧರ್ಮ ಮರ್ಮವರಿತು ಚರ್ಮಸುಖವಳಿದು ಪೂರ್ಣಜ್ಞಾನದ ಪುರಂದರದಾಸರಲ್ಲಿದೆ ಈ ಸಾರಂ ಸಂಸಾರಂ 2 ತರಲಾನಂದದಿಂ ಸರಿಗಮ ಪದನಿಸ ಸನಿದಪ ಮಗರಿಸ ಶೋಡಷಕ್ಷರದಿಂ ತರಲಾ ಸಂಗೀತಕೆ ಸರಳಾಗಿಹ ಹರಿ ನಾಮಾಮೃತವಂ ಧರಿಶಿದ ಪುರಂದರರಂ ಶರಣ ಭರಣ ಕರುಣ ಪಡೆವುದು ನಿರುತ ಹರಿ ಶರಣರೆನುತ ಅರುಹಿದ ಸಂಗೀತವೀ ಸಾರಂ ಸಂಸಾರಂ 3 ಈ ತೆರ ಭಜಿಸಿದಗ್ಯಾತರ ಭಯ ಪಾತಕಹರ ಜಗದೀಶ ಮಾನಸ ದಾತುರದೊಳು ಹರಿ ದಾತನೆಂದರಿತು ನೀತಾಚಾರದಿ ಯಾವಾತ ಸ್ತುತಿಸಲು ಜ್ಯೋತಿ ಪ್ರಕಾಶದಿ ತನುಜಾತನಾಗಿ ಬಹ ಪ್ರೀತಿಗೊಡುತ ಖ್ಯಾತ ಭಕ್ತ ಪಾರಿಜಾತನೆಂದು ತಿಳಿದಾತಗೆ ಇದು ಸಾರಂ ಸಂಸಾರಂ 4 ಭಗವಂತನ ಧ್ಯಾನಿಪನ ಪುಡುಕುತ ಮಿಗೆ ಸಂಚರಿಸುತಲಿಹರೀಗಲು ಭಾಗವತರಿದು ಸತ್ಯಂ ಜಗಕೆ ಜಗದೀಶ ಶ್ರೀ ಶ್ರೀನಿವಾಸನೆಂದು ಮಿಗೆ ಜಗದಾನಂದ ಪುಳಕಿತ ತನುವಿನ ಜೀವರ ಸೊಗವಿಲಿ ನಾಲ್ಮೊಗನೈಯ್ಯನು ಸಿಗುವ ಪರಿಯಗೊಡುತಗಣಿತ ಮಹಿಮರು ಕರುಣಿಸಿದೀ ಸಾರಂ ಸಂಸಾರಂ 5
--------------
ಸರಸ್ವತಿ ಬಾಯಿ
ಭವ ಭಯದೊಳು ಬಿದ್ದು ಬರಲಾರೆನೆಂದು ಪ ಅಂಬೆಗಾಲೂರುತ್ತ ಕುಂಬಿಣಿ ತಿರುಗುತಡೊಂಬನಂಥ ಹೊಟ್ಟೆ ಎಳೆಯಲಾರೆನೆಂದು 1 ಕಂದನಾಗಿ ಬಂದು ಹಿಂದು ಮುಂದರಿಯದೆಇಂದುಧರನ ರೂಪ ಕಣ್ಣೊಳಗಿಟ್ಟುಕೊಂಡು 2 ಜನನ ಮರಣ ಹುಟ್ಟು ಮುರಿದು ಮೂಲ್ಯಾಗಿಟ್ಟುಚಿದಾನಂದ ಸ್ವಾಮಿನ್ನ ಕೂಡಿಕೊಂಡೆನೆಂದು 3
--------------
ಚಿದಾನಂದ ಅವಧೂತರು
ಭವ ಭಸಿ- ತಾಂಗನ ನೋಡಿದೆ ಪ. ರಂಗನ ತನ್ನಂಗದೊಳಗೆ ಇಟ್ಟು ಹಿಂಗದೆ ನೆನೆಯುವ ಮಂಗಳ ಮೂರುತಿ ಅ.ಪ. ತ್ಯಕ್ಷನ ನೋಡಿದೆ | ಕರುಣಕ- ಟಾಕ್ಷನ ನೋಡಿದೆ ವೀಕ್ಷಣದಿಂದ ಶ್ರೀ ವಕ್ಷನ ಸುತನನು ಶಿಕ್ಷಿಸಿದ ಫಾಲಾಕ್ಷನ ಶಿವನ 1 ಹರನನು ನೋಡಿದೆ | ಗಂಗಾ- ಧರನನು ನೋಡಿದೆ ಗಿರಿಜೆವಲ್ಲಭ ಭಾಸುರ ವಂದಿತನಾ ಸರಿತು ತುಂಗ ಪಂಪಾಪುರವಾಸನ 2 ಶೂಲಿಯ ನೋಡಿದೆ | ರುಂಡ ಮಾಲಿಯ ನೋಡಿದೆ ಕೈಲಾಸದಿ ಉಮೆ ಲೋಲನೆನಿಸಿ ಇಲ್ಲಿ ವ್ಯಾಳಭೂಷಣನಾಗಿ ಲೀಲೆಯೊಳ್ ಮೆರೆವನ 3 ಈಶನ ನೋಡಿದೆ | ನರಹರಿ ದಾಸನ ನೋಡಿದೆ ಪಾಶುಪತಾಸ್ತ್ರವ ವಾಸವಜನಿಗಿತ್ತ ಪೋಷಿಕಿರಾತನ ವೇಷನ ಹರುಷದಿ 4 ದಿಟ್ಟನ ನೋಡಿದೆ | ವೈಷ್ಣವ ಶ್ರೇಷ್ಠನ ನೋಡಿದೆ ವೃಷ್ಣೀಶ ಗೋಪಾಲಕೃಷ್ಣವಿಠ್ಠಲನಿಗೆ ಪುಟ್ಟ ಮೊಮ್ಮಗನಾಗಿ ತುಷ್ಟಿಪಡಿಸುವನ5
--------------
ಅಂಬಾಬಾಯಿ
ಭವ ಭೀಮ ಪ ಭಯಗಳನು ತಡೆದು ಪೊರಿಯೊ ಭಾವಿ ಭಾರತೀಪ್ರೇಮಾ ಅ.ಪ. ನಿನ್ನವನೆಂತೆಂದು ಮನದಭಿಲಾಷೆಗಳ ಸಲಿಸೋಪರಮ ಕರುಣೀ ದಾನಿ 1 ಇಂದಿನಾಪರಿಯಂತ ಬಹುವಿಧದಿಂದ ಪ್ರಾರ್ಥಿಸಲುಕರುಣ ಬಾರದಾಯಿತೆ ಬಿರುದು ಪೋಯಿತೇ2 ಕೀರ್ತಿ ಅಪಕೀರ್ತಿ ಎರಡೂ ನಿನ್ನಾಧೀನವೇ ಸ್ವಾಮಿ ತಂದೆವರದಗೋಪಾಲವಿಠ್ಠಲನ ದಾಸಾಗ್ರಣಿಯೇಸೌಭಾಗ್ಯನಿಧಿಯೇ3
--------------
ತಂದೆವರದಗೋಪಾಲವಿಠಲರು
ಭವ ಮುಖ್ಯ ಸುರಗಣ ಮುನಿನಿಕರ ಸಿದ್ಧ ಪರಿವಾರವು 1 ಸರಿತು ಪ್ರವಾಹದಂತೆ ವಾಗ್ವೈಖರಿಯಿಂದ ನಿರುತ ತೃಪ್ತಿಪಡಿಸಲಾರರು ಇನ್ನು 2 ಉರು ಉಗ್ರಜಾತಿ ಅಸುರ ಕುಲದಿ ಪುಟ್ಟಿದ ನಾನು ನೆರೆ ತುತಿಸಿ ತೃಪ್ತಿಪಡಿಸಲಾಪೆನೆ ನಿನ್ನ 3 ಆದೊಡೆ ಕುಲ ರೂಪ ವಯಸ್ಸು ವಿದ್ಯೆಗೆ ನೀನು ಮೋದಪಡುವನಲ್ಲ ಭಕ್ತಿಯೊಂದಕೆ ನಲಿವೆ 4 ಕರಿರಾಜನೇ ಸಾಕ್ಷಿ ಕರುಣಾಮಯನೇ ನಿನ ಗಿರುವುದೇ ವೈಷಮ್ಯ ? ಭಕ್ತಗೆ ವಶ ನೀನು 5 ಅರವಿಂದನಾಭ ನಿನ್ನ ಚರಣಾರವಿಂದವನು ನಿರುತ ಭಜಿಸುವ ಉತ್ತಮನೆನಿಸುವ 6 ಸರುವ ಸ್ವತಂತ್ರ ಪೂರ್ಣಕಾಮ ನಿನ್ನನು ನಾವು ಹಿರಿದಾಗಿ ಆರಾಧಿಸಿ ತೃಪ್ತಿಪಡಿಸುವುದೇನೊ 7 ನಾವು ಮಾಡುವ ಕರ್ಮಸಾಧನದಿಂದ ನಿನಗೆ ಯಾವ ಫಲವೂ ಇಲ್ಲ ! ಫಲವೆಲ್ಲ ನಮಗಯ್ಯಾ 8 ಬಿಂಬವನಲಂಕರಿಸೆ ಕನ್ನಡಿಯೊಳಗೆ ಪ್ರತಿ ಬಿಂಬಕೆ ಅಲಂಕಾರ ಕಾಣುವ ಪರಿಯಲಿ 9 ತರಳನ ಮೊರೆಯನು ಲಾಲಿಸಿ ಪಾಲಿಸೊ 10 ನಮ್ಮ ಸಾಧನೆಗಾಗಿ ನಿನ್ನ ಆರಾಧಿಪೆವು ಬೊಮ್ಮನಯ್ಯನೆ ನಿನ್ನ ಆನುಗ್ರಹದಿಂದಲಿ 11 ಬ್ರಹ್ಮಾದಿ ಸುರರೆಲ್ಲ ನಿನ್ನ ಸೇವಕರಯ್ಯಾ ಹಮ್ಮು ಮತ್ಯಾತಕಯ್ಯಾ ನಮ್ಮಂಥವರಿಗೆಲ್ಲ 12 ನಿನ್ನ ಕೋಪಕೆ ಅಂಜಿ ನಡುಗದವರುಂಟೆ ಮನ್ನಿಸಿ ಕೋಪವ ಉಪಶಮ ಮಾಡೋ ಸ್ವಾಮಿ 13 ನಿನ್ನ ಈ ಉಗ್ರರೂಪ ಧ್ಯಾನವು ಜನರಿಗೆ ಘನ ಭಯವ ಕಳೆಯೆ ಸಾಧನವಾಗಲಿ 14 ದಿಗಿಲು ಪುಟ್ಟಿಸುವಂಥ ಈ ನಿನ್ನ ಮುಖ ಜಿಹ್ವೆ ಭೃಕುಟಿ ಕರಾಳ ದಂಷ್ಟ್ರ 15 ಕೊರಳಲ್ಲಿ ಧರಿಸಿಹ ಕರುಳ ಮಾಲಿಕೆ ರಕ್ತ ಬೆರದ ಕೇಸರ ಮತ್ತೆ ನಿಗುರಿದ ಕರ್ಣಗಳು 16 ಲೋಕ ಭಯಂಕರವಾಗಿವೆ ಆಂದೊಡೆ ಶ್ರೀಕರ ನಿನ್ನ ಕೃಪೆಯಲಿ ನಾನವಕೆ 17 ಅಂಜುವನಲ್ಲ ಕೇಳು ಕಂಜನಾಭನೆಯಿನ್ನು ಅಂಜುವೆನೊಂದಕೆ ಸಂಸಾರ ಚಕ್ರಕೆ 18 ತೊಳಲಿಸÀುವುದು ಜನ ದುಃಖದಿ ಸಂಸಾರ ಬಲು ಪರಿಯಲಿ ಅದು ದುಃಖದಿ ಸಾಗರ 19 ಇಷ್ಟವಾದದ್ದು ಕೊಡದೆ ಇಷ್ಟವಿಲ್ಲದ್ದುಣಿಸಿ ಭವ 20 ಸಂಸಾರ ಸಾಗರ ದಾಟಿಸೋ ಮಹಾಮಹಿಮ ಸಂಶಯವಿಲ್ಲದೆ ಸೇರಿಸೋ ನಿನ್ನ ಬಳಿ 21 ಕರುಣಾಸಾಗರ ನಮ್ಮ ಕರಿಗಿರೀಶನೆ ಸ್ವಾಮಿ ತರಳನ ಮೊರೆಯನು ಲಾಲಿಸಿ ಪಾಲಿಸೊ 22 ( ಪ್ರಹ್ಲಾದ ನರಹರಿಯನ್ನು ಸ್ತುತಿಸಿದ್ದು )
--------------
ವರಾವಾಣಿರಾಮರಾಯದಾಸರು
ಭವ ವನಧಿಗೆ ನವಪೋತ | ಪಾಲಿಸು ವಿಖ್ಯಾತ ಪ ವಿಯದಧಿಪನೆ ಎನ್ನ ಕೈಯ್ಯನು ಪಿಡಿಯೋ | ಜ್ಞಾನ ಭಿಕ್ಷ ಈಯೋ ಅ.ಪ. ಮಾಯಾಪತಿ ಪದ ಪದ್ಮಯುಗಳ ಭಜಿಪಾ | ಉತ್ತಮ ಪಥತೋರ್ಪಾಶ್ರೇಯಸು ಸಾಧನ ವೆನಿಸಿ ಮೆರೆಯುರ್ತಿರ್ಪಾ | ಹರಿಪರಮನು ಎನಿಪಾ ||ಮಾಯಾಮತ ತಮ ಸೂರ್ಯನೆನಿಸಿ ಮೆರೆವಾ | ಸುಜನಸುರದ್ರುಮವಾನ್ಯಾಯ ಸುಧೆಯನೇ ತಾರಚಿಸಿರುವಾ | ಮುಕುತಿ ಮಾರ್ಗ ತೋರ್ವಾ 1 ಕಾಕು ವೃತ್ರನಿಂದಾವೃತ ಜಗವಿರಲೂ | ಜ್ಞನರಹಿತ ವಿರಲೂಲೋಕ ಮಹಿತ ಮಂತ್ರವು ನಿನಗಿರಲೂ | ಜಪಿಸುತಾಸ್ತ್ರ ಬಿಡಲೂ ||ಆ ಕುಯೋನಿಗತ ಚಿತ್ರಕೇತು ಮೋಕ್ಷ | ಆಯಿತು ಸುರರಾಧ್ಯಕ್ಷಲೋಕಾಮಯವನು ಹರಿಸಿ ಜಗದಿ ಮೆರೆದೇ | ಮಹಾನ್ನು ಎನಿಸೀದೇ2 ಚಾಪ ಜೇತಾಕುಕ್ಷಿಯೊಳಗೆ ಬಲು ಬಲು ವಿಖ್ಯಾತಾ | ಕಾಗಿನಿ ತಟದಿಸ್ಥಿತ ||ಅಕ್ಷರೇಡ್ಯ ಗುರುಗೊವಿಂದ ವಿಠ್ಠಲನಾ ತನ ಹೃದ್ಗನಾಗಿರುವವನ ||ಅಕ್ಷಿಯೊಳಗೆ ಕಂಡು ಮೋಕ್ಷ ಪಧವ ಸೇರ್ದ | ಆನಂದವ ಬೀರ್ದ 3
--------------
ಗುರುಗೋವಿಂದವಿಠಲರು
ಭವ ವನಧಿಯ ಪೋತ ಪ ಪಂಕಜ ಪಾಣಿಯೆ ಅ.ಪ. ಅರ | ವಿಂದ ನಯನ ಹೃನ್ಮಂದಿರದಲಿ ಆ | ನಂದವನೀಯೋ 1 ಭವ ಬಂಧನವ ಬಿಡಿಸೊ | ಸ್ಮರಿಸುವರಘ ಹರಿಸೋಶಂಬರಾರಿಯ ಪಿತ ಮನವನೆ ನಿಲಿಸೋ ನಿನ್ನೊಳು ನೆಲೆಗೊಳಿಸೋ ಶಾಂಭವಿ ಧನುವನು ಭಂಜಿಸಿದಾತನೆಶಂಭು ನಿಶುಂಭರ ಸವರಿದ ರಾಮನೆ 2 ಬಿಂಬಾನೆ ಗುರು ಗೋವಿಂದ ವಿಠಲಯ್ಯ | ನೀಯನ್ನ ಸಲಹಯ್ಯ| ತುಂಬೀಹ ಷಡ್ವೈರಿಯ ಕಳೆಯಯ್ಯ | ನಿನ್ನಯ ಮಹಿಮೆಯ ||ಹಂಬಲ ಹೃದಯಾಂಬರದೊಳು ತುಂಬಿಸಿಪೊಂಬರಿಸಯ್ಯನೆ ತವಪದ ತೋರಿಸೊ 3
--------------
ಗುರುಗೋವಿಂದವಿಠಲರು
ಭವ ಸಾಗರಕೆ ಸ್ವಲ್ಪ ಪ ಬಿಟ್ಟು ವೇಗದಿಂದ ಸಾಧ್ಯ ಮಾಡಿಕೊಂಡು ಮೆಟ್ಟಿಕೆಯಿಂದಲಿ ದಾಟಿ ಪೋದರು ಜಗ ಜಟ್ಟಿ ದಾಸರು ತಮಗೆ ಸುಲಭವಾದದು ಯನಗೆ ಇಟ್ಟುಪೋದರೆಯಿಂದು ಗುಟ್ಟು ತೋರುತಲಿದೆ ಸಾಧಾರಣವಲ್ಲ 1 ಕೊಟ್ಟಿಗೆ ಮೇಲುಪ್ಪರಿಗೆಯಾಗುವದೆ ಹುಟ್ಟಾರಭ್ಯವಾಗಿ ಮಂದನಾಗಿದ್ದವಗೆ ಮಟ್ಟಯಿಲ್ಲದೆ ಬುದ್ಧಿ ಬರುವದೆಂತೊ ಧಿಟ್ಟಳಿ ಮಹಿಮ ಶಿರಿ ವಿಜಯವಿಠಲ ಮನ ಮುಟ್ಟಿ ಭಜಿಸಿದವ ದಾಸರ ಕರುಣವೆನ್ನಿ2
--------------
ವಿಜಯದಾಸ
ಭವ ಹಿಂಗವ್ವ ಸುಳ್ಳೆ ಮಂಗ್ಯಳಾಗಿ ತಿರುಗಬೇಡವ್ವ ಪ ಪಿಂಗಟದಿಂದ ಭವಸಂಕಟದಲಿ ಬಿದ್ದು ಭಂಗದಿಂ ಕಂಗೆಡಬೇಡವ್ವ ಅ.ಪ ಮುಂಗಿಯ ಮನೆಯೊಳು ನಿಂತೆವ್ವ ತಂಗಿ ಹ್ಯಾಂಗಿದ್ದದರಂತರಿಯವ್ವ ಕಂಗಳಿನಿಕ್ಕಿ ಮಹ ಮಂಗಳಾತ್ಮನ ಕಂಡು ಪಿಂಗದ ಸವಿಸುಖ ಸುರಿಯವ್ವ 1 ಹಾಳು ಜಗದ ಗಾಳಿ ಬೇಡವ್ವ ನಿಜ ಬಾಳುವ ಮಾರ್ಗವ ತಿಳಿಯವ್ವ ನೀಲ ಶ್ಯಾಮನ ಧ್ಯಾನ ತಾಳಿಯ ಕಟ್ಟಿಕೊಂಡು ಕಾಲನ ದಾಳಿಯ ಗೆಲಿಯವ್ವ 2 ಮೈಲಿ ಮುಟ್ಟು ಚಟ್ಟಳಿಯವ್ವ ನೀ ಮೇಲುಮಂಟಪ ಹತ್ತಿ ನೋಡವ್ವ ಬೈಲಿಗೆ ಬೈಲು ನಿರ್ಬೈಲು ಶ್ರೀರಾಮನ ಲೀಲೆಯೊಳಗೆ ನಿಂತು ನಲಿಯವ್ವ 3
--------------
ರಾಮದಾಸರು