ಒಟ್ಟು 666 ಕಡೆಗಳಲ್ಲಿ , 86 ದಾಸರು , 560 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯನ್ನು ಒಲಿಸಿಕೊಡೋ ಮಾರುತಿರಾಯಾಹರಿಯನ್ನು ಒಲಿಸಿಕೊಡೊ ಪ ಪರಿ ಮುಖದಿಂದಲೆಸರುವರು ಕಾಣಬೇಕೆಂಬರು ನೋಡೋ ಅ.ಪ. ಪರಮಭಕ್ತ ನೀನೆಂದೂ ಎಂದೆಂದೂಹರಿಯ ಮೀರನೆಂದು ಒರೆವರು ಮನದಂದುಮೊರೆಯು ನನ್ನದು ಇಂದುಹರಿಗೆ ನಿವೇದಿಸು ಕರುಣಾಸಿಂಧು 1 ಒಡೆಯ ರಾಮಗೆ ನೀ ದೂತ ಎಂದಿಗೂ ಆತನಡೆಸುವ ನಿನ್ನ ಮಾತಬಡವ ನಾನೊಬ್ಬನು ಕಡು ಕರುಣೆಯ ಭಿಕ್ಷೆಕೊಡು ಎಂದು ಬೇಡುವೆನೆಂದು ನೀ ತಿಳಿಸುತ 2 ಹಾಯಗೊಡರು ಜೀಯಾ ಬಾಗಿಲದಲಿಕಾಯುವ ಜಯ ವಿಜಯಾಶ್ರೀಯರಸನ ಕಾಂಬುಪಾಯವ ಕಲಿಸಿಬಡಪಾಯೆನಗೆ ನೀ ನೀಡುತ ಕಯ್ಯಾ 3 ಸದಯನೆ ಕರುಣ ಬಂತೆ ಸಂಸಾರದಿಕುದಿಸುವದೆನ್ನ ಚಿಂತೆಗದುಗಿನ ವೀರನಾರಾಯಣನೆನ್ನೊಳು ಸದಾಕಾಲದಿ ಹೃದಯದಿ ನಿಲುವಂತೆ 4
--------------
ವೀರನಾರಾಯಣ
ಹರಿಯಾ ಪೂಜೆಯಾ ಮಾಡಿ ಗತಿಗಳ ಬೇಡಿ ಹರುಷದಿ ಕೂಡಿ ನಲಿ ನಲಿದಾಡಿ ಪ ಎಲ್ಲರೊಳು ಬಾಗಿ ನಡಿಬೇಕು ಸಾಗಿ ಖುಳ್ಳತನ ಹೋಗಿ ಏಕೋ ನಿಷ್ಟಾಗಿ ನಿಲ್ಲದೇ ವದಗಿ ಸಮದೃಷ್ಟಿ ತೂಗಿ 1 ನಿತ್ಯ ತಿಳಿದು ವಿಚಾರ ಬಲಿದು ಕುತ್ತಾಪಗಳದು ಸತ್ಯಗದಲ್ಲಿದ್ದು ಸತ್ಯಜ್ಞಾನ ಪಡೆದು ಸದ್ಬಾವ ಜಡಿದು ಚಿತ್ತ ಚಂದಲ ಜರಿದು ಮದ ಮತ್ಸರ ಜರೆದು 2 ತನ್ನದಿದಲ್ಲಾ ಸಿರಸೌಖ್ಯವೆಲ್ಲಾ ಇನ್ನು ತಿಳಿಲಿಲ್ಲಾ ಈ ಮರಹು ಸಲ್ಲಾ ಸನ್ನು ತನೆಬಲ್ಲಾ ಈ ಸಾಕಾಯ ವೆಲ್ಲಾ ಮನ್ನಿಸಿ ನೀವೆಲ್ಲಾ ಮಹಿಪತಿ ಜನಸೊಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಯೆ ಸರ್ವೋತ್ತಮ ಪರದೈವವೆಂತೆಂಬ ಮರುತ ಮತವ ಸಾರಿರೊ ಪ. ಗರುವಿಕೆಯನೆ ಬಿಟ್ಟು ಪರಮತವನೆ ಸುಟ್ಟು ಹರಿಯ ಸೇವಕರಾಗಿರೊ | ಈ ಜಗದೊಳು ಅ.ಪ. ಪಂಚ ಭೇಧವ ತಿಳಿದು ಪಂಚೇಂದ್ರಿಯವ ಸೆಳೆದು ಪಂಚ ಮೂರ್ತಿಯ ಭಜಿಸಿರೊ ಪಂಚ ಸಂಸ್ಕಾರದಿ ಪಂಚಯಜ್ಞವ ರಚಿಸಿ ಪಂಚ ಮಾರ್ಗವ ಸಾರಿರೊ | ವೈರಾಗ್ಯದಿ 1 ಎಂಟು ಮದಗಳನಳಿದು ಎಂಟು ಮೂರ್ತಿಯ ತಿಳಿದು ಎಂಟು ದಳದಿ ಕಾಣಿರೊ ಎಂಟು ಕರ್ತೃತ್ವವ ಎಂಟು ತತ್ವದಿ ಮಾಳ್ಪ ಎಂಟಕ್ಷರನ ಪಾಡಿರೊ | ಕೊಂಡಾಡಿರೊ 2 ಮೂರು ಗುಣಗಳಿಂದ ಮೂರು ಮಾಳ್ಪ ಜಗವ ಮೂರು ರೂಪವ ನೆನೆಯಿರೊ ಮೂರು ಮೂರು ಭಕ್ತಿ ಮೂರು ಮಾರ್ಗದಿ ರಚಿಸಿ ಮೂರು ಲೋಕವ ಸಾರಿರೊ | ಮೂರನೆ ಗೆದ್ದು 3 ಕಂಡ ದೈವಗಳಿಗೆ ಮಂಡೆಯ ಬಾಗಿಸುತ ಬೆಂಡು ಆಗಲಿ ಬೇಡಿರೊ ಹಿಂಡು ದೈವಗಳಿಗೆ ಗಂಡ ಹರಿಯ ಭಜಿಸಿ ಗಂಡುಗಲಿಯಾಗಿರೊ | ಧೈರ್ಯವ ತಾಳಿ 4 ಗುರುಗಳಿಂದಲಿ ತತ್ವ ಸರ್ವಕಾಲದಿ ತಿಳಿದು ಉರ್ವಿಯೊಳಗೆ ಬಾಳಿರೊ ಸರ್ವಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಸರ್ವಬಿಂಬನೆನ್ನಿರೊ | ಮೂಲರೂಪಿ 5
--------------
ಅಂಬಾಬಾಯಿ
ಹರಿಯೇ ಸರ್ವಸಾರವೆಂದು ಸಾರುವರು |ತೆರೆದು ಹೇಳಿ ತತ್ತ್ವವನು ತಾರಿಸುವರು ಪ ಮೊರೆ ಹೊಕ್ಕವರ ಮನದ ಮಲಕು ಬಿಡಿಸುವರು |ಹರಿದು ಹೋಗುವವಗೆ ಕರೆದು ಕಡೆಗ್ಹಾಕುವರು1 ಧರೆಯೊಳವರೇ ಸಾಧು ಪುರುಷರೆನಿಸುವರು |ಸಿರಿಗೆ ಸೆರಗೊಡ್ಡಿ ಸಿರಬಾಗಿ ನಡಿಯದವರು 2 ಬರಿಯ ತರ್ಕದಿಂದ ಖಂಡಿಸದವರು |ಸರಿಗೆ ಬಂದರೆ ಸುಮ್ಮನೆ ಸಹಿಸುವರು 3 ಕಾಯ ಕದ್ದು ಕರ್ಮಪಾಶ ಕಳೆದವರು |ರಾಯ ರಂಕರಿಗೆ ಸರಿ ತಿಳಿದವರು 4 ಮಾಯದ ಮೂಲವಾದ ಭೇದವಳಿದವರು |ಲಯದ ಮನೆಯ ಮೆಟ್ಟಿ ಭಯ ಮೀರಿದವರು 5 ಅರಿತು ಅರಿಯದವರಂತೆ ತೋರುತಿಹರು |ಮರೆತು ಮರವಿಗೆ ತಾವೆ ಮರವಾಗಿಹರು6 ಗುರು ರುಕ್ಮಭೂಷಣನಂತ ತೋರಿಸುವರು |ತ್ವರಿತದಿ ತಮ್ಮ ನೆಲೆಯ ಕೊಡದವರು 7
--------------
ರುಕ್ಮಾಂಗದರು
ಹರಿರೇವ ಪರೋ ಹರಿದೇವ ಗುರೋ ಹರಿಯೇ ಗುರುವೆಂದರವ್ಹಿರೋ ಧ್ರುವ ಗುರುಮಧ್ವಪರ್ಹೇಳಿದ ನಿಜಕೀಲು ಅರಿತುಕೊಂಬುವಾದಿದೆವೆ ಮೇಲು ಪರಮ ಭಗತರನುಭವದ ಬಾಗಿಲು ಪರಗತಿ ಸಾಧನಕಿದೆ ಮಿಗಿಲು 1 ಹರಿಗುರುವೆರಡಾಗಿ ತೋರಿತು ನಾಮವು ಅರಿಯಲರಿಯದವಾಗಿದೆ ಭ್ರಮವು ತೋರುವದೊಂದೇ ಸಜ್ಜನರಿಗಿದೇ ನೇಮವು ಅರಿಕ್ಯುಳ್ಳವರಿಗಿದೇ ಕ್ರಮವು 2 ಹರಿಗುರು ಒಂದಾಗಿ ತೋರಿತು ನಿಜಘನ ತರಳ ಮಹಿಪತಿಸ್ವಾಮಿಯ ಕರುಣ ಗುರುಭಾನುಕೋಟಿತೇಜನೆ ಪರಿಪೂರ್ಣ ತೋರುವದೊಂದಾಗಿದೆ ನಿಜಖೂನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿಹರಿಯಂದು ಸ್ಮರಿಸಿ ಉರಗೇಂದ್ರ ವರಮಂಚ ಮಿಗಿಲೇರಿಸಿ ಚರಣದೊಳದೃಷ್ಟಿಯಿರಿಸಿ ಪ. ಅಕ್ಷಯಗುಣ ಪೌರುಷ ಅನವರತ ರಕ್ಷಿಸುವುದೆನ್ನಾಶ್ರಿತ ರಾಕ್ಷಸಾಂಬುಧಿವಿಶೋಷ ಭಕ್ತಜನ ರಕ್ಷಾವಿನೋದ ಭೂಪ 1 ಏನೆಂಬೆನದ್ಭುತವನು ಬಹು ಸೂಕ್ಷ್ಮ ದಾನಯಜ್ಞಾದಿಗಳನು ಧ್ಯಾನಿಸುತ ತ್ವತ್ಪದವನೀ ಚರಿಸಲನ್ಯೂನವಹ ವಿಸ್ಮಯವನು 2 ವರ ಶ್ರುತಿಸ್ಮøತಿಗಳರಿತು ವಿಧಿಯೋಳಾಚರಿಸಿದರು ಫಲವ ಕುರಿತು ಸಿರಿವರನೆ ನಿನ್ನ ಮರೆತು ಇರಲದಿಹ ಪರಕಲ್ಲವಾದಸರಿತು 3 ಬಾಗಿ ಪೊರೆವ ದೊರೆಯೆ ಕಂಭದಲಿ ತೋರ್ದ ಸಿರಿಯೆ 4 ಮೂರ್ತಿ ಅವಗುಣಗಳೇನೊಂದನೆಣಿಸದರ್ಥಿ ಶ್ರೀನಿಧಿಯೆ ಮಾಡು ಪೂರ್ತಿ ಶೇಷಾದ್ರಿ ಮಾನಿಮರುದೀಡ್ಯ ಕೀರ್ತಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಹಾನಿಯಾದ ಮೇಲೆ ಏನು ಬೆಂಬಲವಾದರಿನ್ನೇನಿನ್ನೇನು ಮಾನಹೋದ ಮೇಲೆ ದಿನವೆಷ್ಟು ಬಾಳಿದರಿನ್ನೇನಿನ್ನೇನು ಪ ಆಪತ್ತಿಗಿಲ್ಲದ ಆಪ್ತರೆಷ್ಟಿದ್ದರು ಇನ್ನೇನಿನ್ನೇನು ತಾ ಪರರಾಳದವಗ್ಹಣವು ಎಷ್ಟಿರ್ದರಿನ್ನೇನಿನ್ನೇನು ಕೋಪಿಷ್ಠನಾದವ ತಪವೆಷ್ಟು ಗೈಯಲು ಇನ್ನೇನಿನ್ನೇನು ಪಾಪಕ್ಕಂಜದನೀಗಧಿಕಾರರ್ವಿರಿನ್ನೇನಿನ್ನೇನು 1 ವನಿತೆಯ ಸೇರದ ಗಂಡ ಮನೆಯೊಳಿರ್ದರಿನ್ನೇನಿನ್ನೇನು ಒಣಗಲು ಪೈರಿಗೆ ಬಾರದ ಮಳೆ ತಾನಿನ್ನೇನಿನ್ನೇನು ಬನ್ನಬಡುವರ ಕÀಂಡು ಗಹಗಹಿಸಿ ನಕ್ಕರಿನ್ನೇನಿನ್ನೇನು ಮನ್ನಣಿಲ್ಲದ ಸಭೆ ಮಾನ್ಯರು ಪೊಕ್ಕರಿನ್ನೇನಿನ್ನೇನು 2 ಅವಮಾನ ಸಮಯಕ್ಕೆ ಒದಗದ ಗೆಳತನವಿನ್ನೇನಿನ್ನೇನು ಧವ ಸತ್ತ ಯುವತಿಯ ಕುರುಳು ಮಾರಿದರಿನ್ನೇನಿನ್ನೇನು ದಯದಾಕ್ಷಿಣ್ಯಲ್ಲದ ಅರಸನಾಳಿಕಿದ್ದರಿನ್ನೇನಿನ್ನೇನು ದಿವಮಣಿ ತನ್ನಯ ಕಿರಣಂಗಳ್ತೋರದಿರಲಿನ್ನೇನಿನ್ನೇನು 3 ಸತಿ ರೂಪಸ್ಥಳಾದರಿನ್ನೇನಿನ್ನೇನು ರೋಗ ಕಳೆಯದ ವೈದ್ಯರಾನಂಗರಿದ್ದರಿನ್ನೇನಿನ್ನೇನು ಆಗಿಬಾರದವರ ಬಾಗಿಲ ಕಾಯ್ದರಿನ್ನೇನಿನ್ನೇನು ಭೋಗಿವಿಷಕೆ ಗರುಡಮಂತ್ರನುವಾಗಲು ಇನ್ನೇನಿನ್ನೇನು 4 ಪ್ರೇಮದವರೆ ತನ್ನೊಳ್ ತಾಮಸರಾದಿರಿನ್ನೇನಿನ್ನೇನು ನೇಮಿಸಿದ್ಯೆಲ್ಲವು ಇದಿರಾಗಿ ಕೂತಮೇಲಿನ್ನೇನಿನ್ನೇನು ಕಾಮಧೇನುವೆ ಮನದಿ ಕಾಮಿತವೀಯದಿರೆ ಇನ್ನೇನಿನ್ನೇನು ಸ್ವಾಮಿ ಶ್ರೀರಾಮನ ಪ್ರೇಮ ಪಡೆಯದ ನರ ಇನ್ನೇನಿನ್ನೇನು 5
--------------
ರಾಮದಾಸರು
ಹಿತ ನೋಡೀ ಮಾಡಿ ಸುಜನರ | ಪಥವನೆಕೂಡಿ ಪ ಗುರುವಿಗೆ ಬಾಗಿ ಶರಣವ ಹೋಗಿ | ತರಳತೆ ನೀಗಿ ಅರಹುತರಾಗಿ 1 ಭ್ರಾಂತರಕೂಡಿ ಮತಿಗಳ ಬ್ಯಾಡೀ | ಸಂತರೊಳಾಡಿ ಅನಂತನ ಪಾಡಿ 2 ಸಂಧಿಸಿ ತಂದ ಸುಕೃತಗಳಿಂದ | ಹೊಂದುವವೆಂದೇ ನರದೇಹ ಮುಂದೆ 3 ವಿವೇಕದಿಂದಾ ವಿಡಿರಿದೆ ಛಂದಾ | ಅವನಿಲಿ ಬಂದಾ ಜನುಮಕ ಛಂದಾ 4 ಗುರುಮಹಿಪತಿಯಾ ಚರಣದ್ವಿತಿಯಾ | ವರಿಸಿ ಮುಕುತಿಯಾ ಪಡೆವದು ಗತಿಯಾಜ್ಞ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿತದಿ ಜೀವಿಸು ಬಾಲೆ ಪತಿಯ ಪ ಸೇವಾನುಕೂಲೆ ಕ್ಷಿತಿಯೊಳಗೆ ಪತಿವ್ರತಾ ಧರ್ಮನಿರತಳೆನಿಸಿ ಬಹುಸುತರ ಪಡೆದು ಅ.ಪ ರತಿಪತಿಪಿತನಿಗೆ ಪ್ರತಿಮೆಗಳೆನಿಸುವ ಅತಿಥಿಗಳ ಸಂತತ ಸುಶೇವಾ- ರತಳು ಬಹು ಗುಣವತಿಯಳೆನಿಸುವ 1 ಗುರುಜನರಿಗೆ ಸದಾ ಶಿರಬಾಗಿ ನಡೆಯುತ ಹರುಷದಲಿ ಹರನರಸಿಯಳ ಪದ ಸರಸಿಜದಿ ಮನವಿರಿಸಿ ಪೂಜಿಸಿ 2 ಶರಣು ಜನಕೆ ಸುರತರುವೆನಿಪ ಕಾರ್ಪರ ಸಿರಿಮನೋಹರ ನರಹರಿಯ ಶುಭ ಚರಣಯುಗಲವ ಸ್ಮರಿಸುತನುದಿನ 3
--------------
ಕಾರ್ಪರ ನರಹರಿದಾಸರು
ಹೇಳುವುದು ಬೇಡ | ಜನರ ನುಡಿ ಕೇಳದಿರಲೋ ಮೂಢ ಪ ಶ್ರೀಲೋಲನ ಕಿಂಕರರ ಬಾಗಿಲಲಿ ಬೀಳುನಾಯಿಯಂದದಲಿ ಕೆಲಕಾಲ ಅ.ಪ ದ್ರವ್ಯದಾಸೆಗಾಗಿ | ನಾರಕೀ ಭವಿತವ್ಯರಲ್ಲಿಗೆ ಹೋಗಿ ಕಾವ್ಯನಾಟಕ ಸ್ತುತಿ ಪದ್ಯಗಳನು 1 ನಾನು ಯೋಗ್ಯನೆನ್ನುತ | ತೋರಿಸಿ ಮಾನವಾಗಿದಿರದಲ್ಲಿ ನಿನಗೆ ದುರಭಿ- ಮಾನಿಯಾಗಿ ನೀ ಕೆಡುವೆಯೊ ನಿಜ ನಿಜ 2 ಕೊಂಚ ಬೇಡಬೇಕು ವಂಚನೆಯಿಲ್ಲದೆ ಭಜಿಸು ರಹಸ್ಯವ 3
--------------
ಗುರುರಾಮವಿಠಲ
ಹೊಯ್ಯಂದ ಡಂಗುರವ ಪರಂಜ್ಯೋತಿ ಪ್ರಭೆಯ ಭಾಸಿಸುವದು ನೋಡಿ ಹೊ ಅರವ್ಹೆ ಅಂಜನವಾಗಿ ದೋರುತಲದಕೊ ಹೊ ಪರಮ ಪ್ರಕಾಶವು ಪರಿಣಾಮಿಸಿ ನೋಡಿ ಹೊ 1 ಅನಿಮಿಷನೇತ್ರವು ಬಾಗಿಸುವದು ನೋಡಿ ಹೊ ಮನವಿಗೆ ಆರುವಾಗಿ ದೋರುತಲದಕೊಹೊ ನೆನವ ಘನವಾಗಿ ಸೂಸೂತಲಿದಕೊ ಹೊ ಕನಸು ಕಥೆ ಅಲ್ಲ ಕಣ್ಣಾರ ಕಾಂಬೋದು ಹೊ 2 ನಿದ್ರಸ್ಯಕರ್ಣದ ಸಾದ್ಯಶ್ಯ ನೋಡೆಂದು ಹೊ ದ್ವಾದಶ ನಾದವು ಸಾಧಿಸಿ ಕೇಳುದು ಹೊ ಗಾದೆಯ ಮಾತಲ್ಲ ಭೇದಿಸಿ ತಿಳಿಯುದು ಹೊ ಓದುವ ಒಂಕಾರ ನಾದವು ತಿಳಿವದು ಹೊ 3 ಪ್ರಣಮ್ಯ ಮಂತ್ರದ ಪ್ರಚೀದಿನೋಡೆಂದು ಹೊ ಹನ್ನೊಂದು ಹತ್ತುಸಾವಿರದ ನೂರೆಂದು ಹೊ ಕಣ್ಣು ಮುಚ್ಚು ಕುಳಿತು ಮಣಿಯೆಣಿಸುವದಲ್ಲ ಹೊ ಪುಣ್ಯಗತಿಗೈದಿಸುವ ಜಪವಿದು ಹೊ 4 ವಿಶ್ವಹೊಳಗಲ್ಲ ಭಾಸ್ಕರ ಗುರುತಾನೆ ಹೊ ಆಶಿಗೈವವಗಿನ್ನು ಭಾಸಿಸಲರಿಯನು ಹೊ ಮೋಸ ಮುಕುರವಲ್ಲ ಭಾಸಿವ ಪಲ್ಲಟವಲ್ಲ ಹೊ ಹೊಯ್ಯೆಂದ ಡಂಗುರವ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
124-1ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರಿಯರುಗೋದಾವರಿಯಿಂದ ರಾಯಚೂರು ಪೋಗಿಆ ದೇಶ ಅಧಿಪತಿ ಪೀತಾಸಿಂಗನಿಗೆಒದಗಿ ಅನುಗ್ರಹಿಸಿ ಬಂದರು ಮೇಲುಕೋಟೆ 1ಮೇಲುಕೋಟೆ ರಾಜನು ಸ್ವಾಮಿಗಳಲಿ ಬಹುಭಕ್ತಿಯಿಂದಲಿ ಪೂಜೆ ಮಾಡಿದನು ಆಗ್ಗೆಮೇಲುಕೋಟೆ ಗಿರಿ ಮೇಲೆ ನರಸಿಂಹನ ಗುಡಿಬೀಗ ಹಾಕಿತ್ತು ಸ್ವಾಮಿಗಳು ಹೋದಾಗ 2ಶ್ರೀ ಸ್ವಾಮಿಗಳು ಬಾಗಿಲ ಸ್ಪರ್ಶ ಮಾಡಿದರುಸ್ಪರ್ಶಮಾತ್ರದಿ ಬಾಗಿಲು ತೆರೆಯಿತು ಆಗಶ್ರೀಸ್ವಾಮಿ ನರಸಿಂಹನ ಮುದದಿ ಪೂಜಿಸಲುಶ್ರೀ ಸ್ವಾಮಿಗಳ ಅರಸ ಪೂಜಿಸಿದನು 3ತರುವಾಯ ಶ್ರೀರಂಗಪಟ್ಟಣಕೆ ಬಂದುಶ್ರೀರಂಗನಾಥನ್ನ ಸೇವಿಸಲು ಮುದದಿಶ್ರೀರಂಗಪಟ್ಟಣದ ಅರಸನು ಭಕ್ತಿಯಿಂಪರಿಪರಿವಿಧದಿ ಕಾಣಿಕೆಗಳ ಅರ್ಪಿಸಿದ 4ರತ್ನ ಖಚಿತ ಪೂಜಾ ಸಾಧನಗಳು ಸ್ವರ್ಣರಜತ ದಂಡಗಳುಶ್ವೇತಛತ್ರಇಂಥಾವು ಸಂಸ್ಥಾನ ಚಿಹ್ನೆಗಳ ರಾಜನುಇತ್ತನು ಶ್ರೀಗಳಿಗೆ ಭಕ್ತಿಪೂರ್ವಕದಿ 5ನಂತರ ಸ್ವಾಮಿಗಳು ಶ್ರೀತುಂಗಭದ್ರಾದಿತೀರ್ಥಾಟನ ಮಾಡಿ ಗದ್ವಾಲು ಸೇರಿಮತ್ತೆತೋಂಡದೇಶದ ಆರ್ಕಾಟಿಗೆ ಹೋಗಿಆದೇಶ ಮಂತ್ರಿಯಿಂದ ಕೊಂಡರು ಸೇವ 6ಈ ಸಮಯ ಶ್ರೀ ಸತ್ಯವಿಜಯ ತೀರ್ಥಾರ್ಯರುಸಂಸ್ಥಾನ ಸಹ ಹತ್ತಿರ ಪ್ರಾಂತದಲ್ಲಿಶಿಷ್ಯೋದ್ಧಾರಕ್ಕೆವಿಜಯಮಾಡುತ್ತಿರಲುಶ್ರೀ ಸತ್ಯವರ್ಯರು ಬಂದರು ಆರಣಿಗೆ 7ಆರಣೀರಾಯನು ವೇಂಕಟನು ಸ್ವಾಮಿಗಳಚರಣಕ್ಕೆ ಎರಗಿ ಪೂಜೆಯನ್ನು ಸಲ್ಲಿಸೇವಸ್ತ್ರಾಭರಣ ಹೇಮಾಭೀಷೇಕಾದಿಗಳಅರ್ಪಿಸಿದ ಭಕ್ತಿಯಿಂ ಕೃಷ್ಣಾಜಿಪಂತ 8ಈ ರೀತಿ ಪೂಜೆ ಮರ್ಯಾದೆಗಳ ತಾ ಕೊಂಡುಹರಿಕೃಷ್ಣ ಶ್ರೀಶನಿಗೆ ಸಮಸ್ತ ಅರ್ಪಿಸುತಹೊರಟರು ಮುಂದಕ್ಕೆ ದಿಗ್ವಿಜಯ ಕ್ರಮದಲ್ಲಿಪುರಿ ಜನರು ಜಯ ಘೋಷ ಮಾಡುತಿರಲು 9ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 10 ಪ
--------------
ಪ್ರಸನ್ನ ಶ್ರೀನಿವಾಸದಾಸರು
139-5ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ವಿಠ್ಠಲನ ಮಂದಿರದಿ ತಪ್ಪದೇ ಪ್ರತಿದಿನಪಠಿಸಿ ಅರ್ಪಿಸುತ್ತಿದ್ದವಿಶ್ವವಿಷ್ಣುವಷಟ್ಕಾರ ಮೊದಲಾದ ಸಹಸ್ರನಾಮಗಳದಿಟ ಜ್ಞಾನ ಭಕ್ತಿಯಿಂ ಮಾರ್ಗದಿ ಸ್ಮರಿಸಿದರು 1ತನ್ನ ಹೊರ ಒಳಗೆ ಶ್ರೀಹರಿಯ ತಿಳಿಯುತ್ತಕಾಣುವುದು ಎಲ್ಲವೂ ಅನಘಹರಿ ಆವಾಸ್ಯತನಗೆ ಯದೃಚ್ಛದಿ ಲಭಿಸುವುವು ಹರಿಕೊಡುವುವುಎನ್ನುತ ಅನಪೇಕ್ಷಿ ನಿರ್ಭಯದಿ ನಡೆದರು 2ಮಾರ್ಗಸ್ಥ ಅಕ್ಷೋಭ್ಯ ಜಯಮುನಿಗಳಲಿಪೋಗಿ ಬಾಗಿ ಶಿರಸ್ಸಾಷ್ಠಾಂಗ ನಮಸÀ್ಕರಿಸಿ ಮುಂದುಪೋಗಿ ಕೃಷ್ಣಾ ತೀರ ಹನುಮನ್ನ ವಂದಿಸಿಚೀಕಲಪರಿವಿಗೆ ನಮಿಸಿ ಕರಮುಗಿದರು 3ಗುರುಗುಣಸ್ತವನಾದಿ ಗ್ರಂಥಗಳ ರಚಿಸಿರುವಸೂರಿವಾದೀಂದ್ರರ ನಮಿಸಿ ಅಪ್ಪಣೆಯಿಂಶ್ರೀರಾಘವೇಂದ್ರ ತೀರ್ಥರ ನಮಿಸಿ ಶರಣಾಗಿಸ್ತೋತ್ರ ಅರ್ಪಿಸಿದರು ಕವಿತಾರೂಪದಲಿ 4ಹರಿಶಿರಿ ಹನುಮ ಶಿವಗುರು ಅನುಗ್ರಹಕೊಂಡುದಾರಿಯಲ್ಲಿರುವಂಥ ಕ್ಷೇತ್ರ ಮೂರ್ತಿಗಳದರುಶನ ಮಾಡಿ ಗೋಪಾಲ ದಾಸಾರ್ಯರುಇರುವ ಸ್ಥಳ ಸೇರಿದರು ಜಗನ್ನಾಥದಾಸರು 5ಗುರುಗಳ ನೋಡಿ ಆನಂದ ಬಾಷ್ಪವ ಸುರಿಸಿಚರಣಪದ್ಮಗಳಲ್ಲಿ ನಮಿಸಿ ಶರಣಾಗಿಘೋರವ್ಯಾಧಿಹರಿಸಿ ಅಪಮೃತ್ಯು ತರಿದಂಥಕಾರುಣ್ಯ ನಿಧಿ ಉದ್ಧಾರಕರು ಎಂದರು 6ರಾಜೀವಾಲಯಪತಿವಿಜಯಗೋಪಾಲನುಭಜತರ ರಕ್ಷಿಸುವ ಕರುಣಾಸಮುದ್ರಈ ಜಗನ್ನಾಥನೇ ನಿನಗೆ ಒಲಿದಿಹನುಭುಜಗಾದ್ರಿವಾಸ ಫಂಡರಿ ವಿಠ್ಠಲ 7ನಿಜಭಕ್ತಾಗ್ರಣಿ ಗೋಪಾಲ ದಾಸಾರ್ಯರುನಿಜಭಾವದಲಿ ಈ ರೀತಿಯಲಿ ಹೇಳೆಐಜೀ ಮಹಾತ್ಮರು ಸೂಚಿಸಿದರು ಹರಿಯಭೋಜನ ಜಗನ್ನಾಥದಾಸಗೆ ಮಾಡಿಸಿದ್ದು 8ಜಗನ್ನಾಥದಾಸರು ನಡೆದ ವೃತ್ತಾಂತವಮುಗಿದು ಕರಗದ್ಗದ ಕಂಠದಲಿ ಪೇಳೆಚಕಿತರಾದರು ಅಲ್ಲಿ ನೆರೆದಿದ್ದ ಸಜ್ಜನರುಉದ್ಘೊಷ ಜಯ ಜಯ ಶಬ್ದ ಮಾಡಿದರು 9ಉತ್ತನೂರಿಗೆವೇಣಿಸೋಮಪುರದಿಂ ಪೋಗಿಮತ್ತೂವೇಣಿಸೋಮಪುರವನ್ನು ಯೈದಿಸತ್ತತ್ವ ಬ್ರಹ್ಮ ಜಿಜ್ಞಾಸವೂ ಭಾಗ -ವತ ಧರ್ಮ ಆಚರಿಸಿದರು ಮುದದಿಂದ 10ಗೋಪಾಲಕೃಷ್ಣ ಪ್ರಿಯ ಐಜೀಮಹಂತರುಗೋಪಾಲದಾಸಾರ್ಯ ªರದ ಗುರುತಂಗೋಪಾಲ ದಾಸಾರ್ಯರುಗಳ ಸಮೇತದಿಭೂಪಾಲ ಪ್ರಮುಖರು ಸಾಧುಜನಗುಂಪು 11ಶಿರಿವಾಸುದೇವಪ್ರಿಯವಾಸತತ್ವಜÕರಗುರುಗಳು ಗೋಪಾಲದಾಸರ ಅನುಗ್ರಹದಿವರದ ಗುರುತಂದೆ ಗೋಪಾಲರು ಮತ್ತೆಲ್ಲರಿಗೂಕರಮುಗಿದು ಹೊರಟರು ಅಪ್ಪಣೆಕೊಂಡು 12ಗದ್ವಾಲ ಮಾರ್ಗದಿ ಮಂತ್ರಾಲಯ ಪೋಗಿಮಧ್ವಮತ ದುಗ್ಧಾಬ್ಧಿ ಚಂದ್ರ ಶ್ರೀ ರಾಘವೇಂದ್ರ ವಾದೀಂದ್ರರ ನಮಿಸಿ ಅಲ್ಲಿಂದಯೈದಿಹರು ಪರಮಗುರುಗಳು ಇದ್ದ ಸ್ಥಳವ 13ಪರಮಗುರುಗಳು ವಿಜಯವಿಠ್ಠಲ ದಾಸಾರ್ಯರಚರಣಾರವಿಂದದಿ ಶರಣಾಗಿಅವರಕರದಿಂದ ನರಸಿಂಹ ವಿಜಯವಿಠ್ಠಲನಸುಪ್ರಸಾದವ ಕೊಂಡು ಮಾನವಿಗೆ ಹೋದರು 14ಮನುತೀರ್ಥ ತಟದಲಿ ಮನೆಯಲ್ಲಿ ವಾಸಿಸುತಹನುಮಂತಸ್ಥ ನರಹರಿ ಜಗನ್ನಾಥನ್ನಹನುಮನ್ನ ಪೂಜಿಸುತ ಗುರುಗಳ ಸ್ಮರಿಸುತ್ತಜ್ಞಾನಾರ್ಥಿ ವಿದ್ಯಾರ್ಥಿಗಳಿಗೆ ಒದಗಿಹರು 15ಇಷ್ಟರಲ್ಲೇ ಜಗನ್ನಾಥದಾಸರ ಕೀರ್ತಿಅಷ್ಟದಿಕ್ಕಲ್ಲು ಪ್ರಖ್ಯಾತಿಯ ಹೊಂದಿಇಷ್ಟಾರ್ಥ ಸಿದ್ಧಿಗೆ ಬರುವರಾದರು ಜನರುಕೃಷ್ಣನ ಒಲಿಮೆ ಈ ದಾಸರಲಿ ಪೂರ್ಣ 16ಮಾಧ್ವ ಮೂಲಗ್ರಂಥ ಟೀಕಾಟಿಪ್ಪಣಿಗಳುಸಾಧು ಹರಿದಾಸರ ಕೀರ್ತನೆಗಳುವೇದವ್ಯಾಸೋದಿತ ಪುರಾಣ ಇತಿಹಾಸವಿದ್ಯಾರ್ಥಿಗಳಿಗೆಲ್ಲ ಪಾಠ ಪ್ರವಚನವು 17ಯೋಗಿವರ ಪ್ರಾಣೇಶವಿಠ್ಠಲ ದಾಸಾರ್ಯರುಭಾಗವತವರಶ್ರೀಶ ವಿಠ್ಠಲದಾಸಾರ್ಯನಿಗಮವೇದ್ಯನ ಭಕ್ತಜನರು ಬಹುಮಂದಿಯುಬಾಗಿ ದಾಸಾರ್ಯರಿಗೆ ಶಿಷ್ಯ ಜನರಾದರು 18ಪ್ರಾಣೇಶ ದಾಸರಿಗೆ ಶರಣಾದೆ ಎಂದೆಂದುಪ್ರಾಣದೇವನು ಇವರೊಳ್ ಪ್ರಸನ್ನನಾಗಿಹನುಪ್ರಾಣದೇವಾಂತಸ್ಥ ಶ್ರಿಹರಿ ಕೇಶವನಕಾಣುತ ಭಜಿಸುವ ಭಾಗವತರೆಂದು 19ಜಗನ್ನಾಥದಾಸರ ಶಿಷ್ಯ ಸಜ್ಜನರಿಗೆಭಾಗವತವರಶ್ರೀಶ ಶ್ರೀದವಿಠ್ಠಲಾದಿಭಗವದ್ದಾಸರಿಗೆ ನಮಿಪೆ ಶ್ರೀ ಹರಿವಾಯುಝಗಝಗಿಪ ಇವರುಗಳೊಳ್ ಸಂತತ ಎಂದು 20ನೋಡಬೇಕಾಗಿದ್ದ ಕ್ಷೇತ್ರಗಳಿಗೆ ಪೋಗಿನಾಡಿನಲಿಭಾಗವತಧರ್ಮವ ಬೆಳೆಸೆಬೇಡುವ ಯೋಗ್ಯರಿಗೆ ಉಪದೇಶ ಕೊಡೆ ಶಿಷ್ಯರೊಡಗೂಡಿ ಹೊರಟರು ಜಗನ್ನಾಥದಾಸರು 21ಕರ್ಜಗಿ ಕ್ಷೇತ್ರದಲ್ಲಿ ಇರುವ ವರದಾ ನದಿಯುಸಜ್ಜನ ಸಮೂಹವು ಬಹಳ ಅಲ್ಲುಂಟುಶ್ರೀ ಜಗನ್ನಾಥನ್ನ ಭಜಿಸುತ್ತ ದಾಸರುಕರ್ಜಗಿ ಜಮೀನ್ದಾರ ಮನೆಯಲ್ಲಿ ಕುಳಿತರು 22ಸಾಧ್ವಿ ಶಿರೋಮಣಿ ಆ ಗೃಹಸ್ಥನ ಪತ್ನಿಪಾದನಮಿಸಿ ಪತಿಗೆ ಬಿನ್ನಹ ಮಾಡಿದಳುಇಂದುಲೌಕಿಕ ವಿಷಯಲಾಂಪಟ್ಯ ನಿಲ್ಲಿಸಿವಂದಿಸಿ ದಾಸರಿಗೆ ಪೂಜೆ ನೋಡೆಂದು 23ಅಹರ ಆರಾಧಿಸುವ ಕ್ರಮದಿ ದಾಸಾರ್ಯರುಸಾಯಾಹ್ನ ಸಾಮವಾಪ್ರತಿಪಾದ್ಯ ನರಸಿಂಹನವಿಹಿತದಿ ಅರ್ಚಿಸಿ ಕೀರ್ತನೆಗಳರ್ಪಿಸಿಮಹಾಹರ್ವ ಭಜಿಸುವರು ಶಿಷ್ಯರ ಸಮೇತ 24ಅಂದು ಈ ಗೃಹಸ್ಥನು ಹೆಂಡತಿ ಕೋರಿಕೆಯಂತೆಬಂದು ಕುಳಿತನು ದಾಸಾರ್ಯರ ಮುಂದೆಅಂದೇ ಆ ವಿಪ್ರನ ಅನಿಷ್ಠ ಪ್ರಾರಬ್ಧವುಚಂದದಿ ಪೋಪುವದೆಂದರಿತರು ದಾಸಾರ್ಯ 25ಪೂಜಾ ಆರಂಭ ಆಗಲಿಕೆ ಇರುವಾಗ ಆದ್ವಿಜನ ನೋಡಿ ಪ್ರಾಣೇಶ ದಾಸಾರ್ಯಗರ್ಜಿಸಿದರು ಇನ್ನಾದರೂ ಒಳ್ಳೆಋಜುಮಾರ್ಗ ಹಿಡಿ ಹರಿಯ ಒಲಿಸಿಕೊಳ್ಳೆಂದು 26ವಾಗ್ವಜ್ರಧಾರೆಯು ಪರಿಣಮಿಸಿ ವಿಪ್ರನತೀವ್ರ ಆ ಕ್ಷಣದಲ್ಲೆ ಮನಕಲುಷಕಳೆದುಶ್ರೀವರನ ಪ್ರಿಯತರ ಜಗನ್ನಾಥದಾಸರಿಗೆಸುವಿನಯದಿ ನಮಿಸಿ ಉದ್ಧರಿಸಿ ಎಂದ 27ಪ್ರಾಣೇಶ ದಾಸರಿಗು ಜಗನ್ನಾಥದಾಸರಿಗುತನ್ನ ಕೃತಜÕತೆಯನ್ನು ಚೆನ್ನಾಗಿ ತಿಳಿಸಿಮನ ಶುದ್ಧಿ ಭಕ್ತಿಯಿಂದಲಿ ಪೂಜೆ ನೋಡಲುಹನುಮಂತ ದೇವರು ಕುಳಿತಿದ್ದು ಕಂಡ 28ಶ್ರದ್ಧೆ ಭಕ್ತಿಯಿಂದ ಗೃಹಸ್ಥನುದಾಸರಪಾದಕೆರಗಿ ತನ್ನನ್ನು ಹರಿದಾಸವೃಂದದಲಿ ಸೇರಿಸಬೇಕೆಂದು ಪ್ರಾರ್ಥಿಸಿಶ್ರೀದವಿಠ್ಠಲನಾಮ ಅಂಕಿತವಕೊಂಡ29ಜಗನ್ನಾಥದಾಸಾರ್ಯಪರಮದಯಮಾಡಿಆ ಗೃಹಸ್ಥಗೆ ಶ್ರೀದವಿಠ್ಠಲಾಂಕಿತವುಭಕುತ ಜನರಿಗೆ ಫಲಮಂತ್ರಾಕ್ಷತೆ ಕೊಟ್ಟುಶ್ರೀಕರನ ಸ್ಮರಿಸಿ ಸವಣೂರಿಗೆ ಹೊರಟರು 30ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 31- ಇತಿ ಷಷ್ಠ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
139-6ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಸ್ವರ್ಣಪುರಿಯಲಿ ಜಗತ್ ಪ್ರಖ್ಯಾತ ಸ್ವಾಮಿಗಳುಘನಮಹಿಮ ಸೂರಿವರ ಸತ್ಯಬೋಧಾರ್ಯರಸನ್ನಮಿಸಿ ಈ ಮಹಾಮೂರ್ತಿಗಳಾಹ್ವಾನದಿದಿನ ಕೆಲವು ನಿಂತರು ಜಗನ್ನಾಥ ಆರ್ಯ 1ಮೂರ್ಜಗವು ಅರಿವುದು ಸತ್ಯ ಬೋಧರ ಮಹಿಮೆವಾಜಿಮುಖ ಕೋಡ ನೃಹರಿ ರಾಮಪ್ರಿಯರುಪ್ರಜ್ವಲಿಪ ಸೂರ್ಯನ್ನ ರಾತ್ರಿಯಲಿ ತೋರಿಹರುಭಜಕರಸುರಧೇನುನಿವ್ರ್ಯಾಜ ಕರುಣೆ2ಶಿಷ್ಯರ ಸಹ ಜಗನ್ನಾಥದಾಸರು ತಮ್ಮನಿಯಮಗಳ ತಪ್ಪದೇ ಭಾಗವತಧರ್ಮಕಾಯವಾಙ್ಮನ ಶುದ್ಧಿಯಲಿ ಜ್ಞಾನ ಭಕ್ತಿಸಂಯುತದಿ ಮಾಳ್ಪುದು ಕಂಡರು ಮುನಿಗಳು 3ಹರಿದಾಸವರ ಜಗನ್ನಾಥದಾಸಾರ್ಯರಲಿಹರಿಯ ಒಲಿಮೆ ಅಪರೋಕ್ಷದ ಮಹಿಮೆನೇರಲ್ಲಿ ತಾ ಕಂಡು ಬಹುಪ್ರೀತಿ ಮಾಡಿದರುಹರಿಪ್ರಸಾದದ ಸವಿಯ ಅರಿತ ಆ ಗುರುಗಳು 4ಸ್ವರ್ಣಪುರಿಯಿಂದ ಜಗನ್ನಾಥದಾಸಾರ್ಯರುದಿಗ್ವಿಜಯದಿಂದಲಿ ಶಿಷ್ಯ ಜನಗುಂಪುಸೇವಕರ ಸಹ ಊರು ಊರಿಗೆ ಪೋದರುಆ ಎಲ್ಲ ಕ್ಷೇತ್ರದಲು ಧರ್ಮ ಪ್ರಚಾರ 5ಧರ್ಮ ಪ್ರಚಾರ ಹರಿಭಜನೆ ಪೂಜಾದಿಗಳುನಮಿಸಿ ಬೇಡುವವರ ಅನಿಷ್ಟ ಪರಿಹಾರಕರ್ಮಜ ದಾರಿದ್ರ್ಯಾದಿಗಳ ಕಳೆದು ಸಂಪದವಧರ್ಮ ಆಚರಣೆ ಬುದ್ಧಿಯ ಒದಗಿಸಿದರು 6ಸುರಪುರಾದಿ ಬಹು ಸ್ಥಳದಲ್ಲಿ ಪ್ರಮುಖರುಹರಿಭಕ್ತರು ಮಂಡಲೇಶ್ವರರು ಇವರಚರಣಕೆರಗಿ ಬಹು ಅನುಕೂಲ ಕೊಂಡರುಹರಿವಾಯು ಒಲಿಮೆ ಎಷ್ಟೆಂಬೆ ದಾಸರಲಿ 7ವರಪ್ರದ ವರದಾ ತೀರದಲಿ ಸಶಿಷ್ಯಧೀರೇಂದ್ರ ಯತಿವರ್ಯರ ಕಂಡು ನಮಿಸಿಆ ರಿತ್ತಿ ಕ್ಷೇತ್ರದಲಿ ವಾಸಮಾಡಿಹರುಧೀರೇಂದ್ರ ತೀರ್ಥರ ಅನುಗ್ರಹ ಕೊಂಡು 8ಸೂರಿಕುಲ ತಿಲಕರು ಉದ್ದಾಮ ಪಂಡಿತರುಧೀರೇಂದ್ರ ಗುರುಗಳು ಕಾರುಣ್ಯಶರಧಿಊರೊಳಗೆ ಹನುಮನ ಗುಡಿ ಇಹುದು ಪಾಶ್ರ್ವದಿಇರುವ ರಸ್ತೆಯ ಮೇಲೆ ದಾಸರ ಮನೆಯು 9ಸೋದಾಪುರ ಪೋಗೆ ತ್ರಿವಿಕ್ರಮ ದೇವರಮಂದಿರದ ಧ್ವಜಸ್ತಂಭದಲ್ಲಿವಾದಿರಾಜರು ಹಂಸಾರೂಢರಾಗಿರುವವರ್ಗೆವಂದಿಸಿ ತ್ರಿವಿಕ್ರಮರಾಯಗೆ ನಮಿಸಿದರು 10ಬದರಿಯಿಂದಲಿ ಈ ಸರಥ ತ್ರಿವಿಕ್ರಮನಭೂತರಾಜರ ಕೈಯಿಂದೆತ್ತಿ ತರಿಸಿಸೋದಾಪುರದಲ್ಲಿ ಪ್ರತಿಷ್ಠೆ ಮಾಡಿಹರುವಾದಿರಾಜರು ಭಾವಿಸಮೀರ ಲಾತವ್ಯ 11ಜಗನ್ನಾಥದಾಸರು ತ್ರಿವಿಕ್ರಮಗೆ ವಂದಿಸಿಅಗಾಧ ಸುಪವಿತ್ರೆ ಧವಳಗಂಗಾಸ್ನಾನಭಕುತಿಯಿಂ ಮಾಡಿ ಶಿವಹನುಮ ಕೃಷ್ಣರಿಗೆಬಾಗಿ ಅಶ್ವತ್ಥಸ್ಥರಿಗೆ ನಮಿಸಿದರು 12ಬಯಲಲ್ಲಿ ವೃಂದಾವನಗಳಲಿ ಗುರುಗಳಿಗೆವಿನಯದಿ ವಂದಿಸಿ ಭೂತನಾಥಗೆ ಬಾಗಿಶ್ರೀವ್ಯಾಸ ದೇವನಿಗೆ ಸನ್ನಮಿಸಿ ವೇದವೇದ್ಯರಿಗು ವಾದಿರಾಜರಿಗು ನಮಿಸಿದರು 13ಚತುದ್ರ್ವಾರ ಗೃಹದಲ್ಲಿ ಪಂಚವೃಂದಾವನವುಮಧ್ಯ ವೃಂದಾವನದಿ ಶ್ರೀವಾದಿರಾಜರುವೃಂದಾವನ ಮಹಿಮೆ ಚೆನ್ನಾಗಿ ತಿಳಿಯದಕೆಭಕ್ತಿ ಶ್ರದ್ಧೆಯಲಿ ನೋಡಿ ವೃಂದಾವನಾಖ್ಯಾನ 14ಹರಿಹರ ಕ್ಷೇತ್ರವು ಮದ್ದೂರು ಅಬ್ಬೂರುಪುರುಷೋತ್ತಮ ಬ್ರಹ್ಮಣ್ಯರ ವಂದಿಸಿಶ್ರೀರಂಗನಾಥನಿಗೆ ಎರಗಿ ಮಹಿಷೂರುಗರಳುಂಡ ಈಶ್ವರನ ಕ್ಷೇತ್ರಕ್ಕೆ ಪೋದರು 15ಕೇಶವನ ಪೂಜಿಸುತ ಪರ್ವತ ಗುಹೆಯಲ್ಲಿವಾಸಮಾಡುವ ಮಹಾ ಕರುಣಾಂಬುನಿಧಿಯುದಾಸಜನಪ್ರಿಯ ಶ್ರೀ ಪುರುಷೋತ್ತಮರಂಘ್ರಿಬಿ¸ಜಯುಗಳದಿ ನಾ ಶರಣು ಶರಣಾದೆ 16ಮಹಿಷೂರು ರಾಜ್ಯದ ಸರ್ಕಾರಿನಲ್ಲಿಮಹೋನ್ನತ ಸ್ಥಾನ ವಹಿಸಿದಧಿಕಾರಿಮಹಾಪಂಡಿತರುಗಳ ಸಭೆಯನ್ನು ಕೂಡಿಸಿವಿಹಿತದಿ ದಾಸರ ಪೂಜೆ ಮಾಡಿದನು 18ನಿರ್ಭಯದಿ ದಾಸರು ಘನತತ್ವ ವಿಷಯಗಳಸಭ್ಯರಿಗೆ ತಿಳಿಯದಿದ್ದವು ಸಹ ವಿವರಿಸಿದಸೊಬಗನ್ನು ಕಂಡು ವಿಸ್ಮಿತರು ಆದರು ಆಸಭೆಯಲ್ಲಿ ಕುಳಿತಿದ್ದ ದೊಡ್ಡ ಪಂಡಿತರು 19ಭಾಗವತಧರ್ಮದ ಪದ್ಧತಿ ಅನುಸರಿಸಿಭಗವಂತನ ಭಜನೆ ಸಭ್ಯರ ಮುಂದೆಆಗ ದಾಸರ ಅಪರೋಕ್ಷದ ಮಹಿಮೆರಂಗನೇ ಸಭ್ಯರಿಗೆ ತೋರಿಸಿಹನು 20ದಾಸರು ಶಿಷ್ಯರೊಡೆ ಯಾತ್ರೆ ಮಾಡಿದ್ದುಮೈಸೂರು, ಕೊಂಗು, ಕೇರಳ, ಚೋಳ, ಪಾಂಡ್ಯದೇಶಗಳು ಎಲ್ಲೆಲ್ಲೂ ಮರ್ಯಾದೆ ಸ್ವೀಕರಿಸಿಈಶಾರ್ಪಣೆ ಸರ್ವ ವೈಭವವೆನ್ನುವರು 21ಶ್ರೀಪಾದರಾಜರ ನಮಿಸಿ ವೆಂಕಟಗಿರಿಸುಪವಿತ್ರ ಘಟಿಕಾದ್ರಿ ಶ್ರೀಕಂಚಿಉಡುಪಿಶ್ರೀಪನ ಇಂಥಾ ಕ್ಷೇತ್ರಗಳಿಗೆ ಪೋಗಿಸ್ವಪುರಕ್ಕೆ ತಿರುಗಿದರು ಪೂಜ್ಯ ದಾಸಾರ್ಯ 22ಶ್ರೀಪಾದರಾಜರು ಪವಿತ್ರ ವೃಂದಾವನದಿಶ್ರೀಪತಿ ನರಹರಿ ಶಿಂಶುಮಾರನ್ನರೂಪಗುಣ ಕ್ರಿಯಾಮಹಿಮೆ ಧ್ಯಾನಿಸುತ ಇಹರುತಿರುಪತಿಮಾರ್ಗನರಸಿಂಹ ತೀರ್ಥದಲಿ23ಪುರುಷೋತ್ತಮರ ಸುತ ಬ್ರಹ್ಮಣ್ಯರ ಕುವರಶ್ರೀಕೃಷ್ಣ ಪ್ರಿಯತರ ವ್ಯಾಸಯತಿರಾಜಸೂರಿಕುಲ ಶಿರೋರತ್ನ ಶ್ರೀಪಾದರಾಜರಲಿಭಾರಿವಿದ್ಯೆಕಲಿತು ಪ್ರಖ್ಯಾತರಾದರು24ಹರಿರೂಪ ಗುಣಕ್ರಿಯ ಮಹಿಮೆಗಳ ಚೆನ್ನಾಗಿಪರಿಪರಿ ಸುಸ್ವರ ರಾಗದಲಿ ಕೀರ್ತನೆಸಂರಚಿಸಿ ಪಂಡಿತರು ಪಾಮರರು ಸರ್ವರಿಗುವರಸಾಧು ತತ್ವ ಬೋಧಿಸಿಹರು ದಾಸರು25ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 26- ಇತಿ ಸಪ್ತಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
211ಶೃಂಗಾರವಾಗಿದೆ ಸಿರಿರಂಗನ ಮಂಚಅಂಗನೆಮಹಲಕುಮಿಯರಸ ಮಲಗುವ ಮಂಚಪಬಡಿಗ ಮುಟ್ಟದ ಮಂಚ | ಮಡುವಿನೊಳಿಹ ಮಂಚ |ಮೃಡನ ತೋಳಲಿ ನೆಲಸಿಹ ಮಂಚ ||ಹೆಡೆಯುಳ್ಳ ಹೊಸಮಂಚ ಪೊಡವಿ ಹೊತ್ತಿಹ ಮಂಚ |ಕಡಲ ಶಯನ ಶ್ರೀ ರಂಗನ ಮಂಚ 1ಕಣ್ಣು-ಮೂಗಿನ ಮಂಚ ಬೆನ್ನು ಬಾಗಿದ ಮಂಚ |ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ ||ಬಣ್ಣ ಬಿಳುಪಿನ ಮಂಚ ಹೊನ್ನು ಕಾದಿಹ ಮಂಚ |ಚೆನ್ನಿಗ ಪರೀಕ್ಷೀತನ ಪ್ರಾಣವಕೊಂಡಮಂಚ2ಕಾಲಿಲ್ಲದೋಡುವ ಮಂಚ | ಗಾಳಿ ನುಂಗುವ ಮಂಚ |ನಾಲಗೆಯೆರಡುಳ್ಳ ವಿಷದ ಮಂಚ ||ಏಳು ಹೆಡೆಯ ಮಂಚ | ಮೂಲೋಕದೊಡೆಯನ ಮಂಚ |ಕಾಳಗದಲಿ ಕಿರೀಟಿಯ ಮುಕುಟಕೊಂಡಮಂಚ3ಹಕ್ಕಿಗೆ ಹಗೆಯಾದ ಮಂಚ | ರೊಕ್ಕ ಮುಟ್ಟದ ಮಂಚ |ರಕ್ಕಸರೆದೆದಲ್ಲಣನ ಮಂಚ ||ಸೊಕ್ಕು ಪಿಡಿದ ಮಂಚ | ಘಕ್ಕನೆ ಪೋಗುವ ಮಂಚ |ಲಕ್ಕುಮಿ ರಮಣ ಶ್ರೀ ಹರಿಯ ಮಂಚ 4ಅಂಕುಡೊಂಕಿನ ಮಂಚ | ಅಕಲಂಕ ಮಹಿಮ ಮಂಚ |ಸಂಕರುಕ್ಷಣನೆಂಬ ಸುಖದ ಮಂಚ |ಶಂಕರನ ಕೊರಳಿಗೆ ಪದಕವಾಗಿಹ ಮಂಚ |ವೆಂಕಟಪುರಂದರವಿಠಲ ರಾಯನ ಮಂಚ5
--------------
ಪುರಂದರದಾಸರು