ಒಟ್ಟು 2245 ಕಡೆಗಳಲ್ಲಿ , 115 ದಾಸರು , 1462 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯವಾಗು ದೀನ ಬಂಧು ನಿಜ ಭಕ್ತ ಭಯ ಹರ ಸ್ಮಯ ಮುಖೇಂದು ಸಿಂಧು ನಿನ್ನಡಿಯ ಬಯಸುವೆನು ಭಕ್ತನೆಂದು ಪ. ಶ್ರೀ ಭೂಮಿಯರಸ ನೀನು ದಯವಾಗೆ ಭಾಗವತರುದಯವಹುದು ಯೋಗ ಭೋಗಗಳೆಂಬುದು ಮಿತಿರಹಿತ- ವಾಗಿ ತಾನೇರಿ ಬಹುದು 1 ತಾಪಾಗ್ನಿ ಶಮನಕಾರಿಯೆ ನಿ:ಶೇಷ ಭೂಪಾಲ ಮೌಳಿಸಿರಿಯೆ ಶ್ರೀಪತಿಯೆ ನಿನ್ನ ಮರೆಯೆ ಎನ್ನಲ್ಲಿ ಕೋಪಿಸದೆ ಸಲಹು ದೊರೆಯೆ 2 ಪೂರ್ವ ಗಿರಿನಾಥ ನಿನ್ನ ಸಂಸ್ಮರಣೆ ಸರ್ವ ದುರಿತೌಘವನ್ನ ಪರ್ವತ ಶೃಂಗವನ್ನು ನಿಶಿತ ಶತ- ಪರ್ವದೊಲ್ ತರಿವರನ್ನ 3
--------------
ತುಪಾಕಿ ವೆಂಕಟರಮಣಾಚಾರ್ಯ
ದಯವಿರಲಿ ಎನ್ನಲ್ಲಿ ಧರಣಿಧರನೆ ಭಯಗಳನು ಪೋಗಾಡು ಭಕ್ತಜನ ಪ್ರೀಯಾ ಪ ಎರಗಿಸುವದು ಚರಣದಲಿ ಶಿರಸು ಎರಗಲಿ ನಿನ್ನ ಧ್ಯಾನದಲಿ ಮನಸು ಎರವೆರವು ಮಾಡದಲೆ ನಿನ್ನ ನಾಮಾಮೃತವ ಎರದು ಸಾಕುವದು ಸಂತತ ಎನ್ನ ಬಿಡದೆ 1 ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ ಶ್ರುತಿಗಳೊಳು ಪೇಳುತಿದೆ ವರದೊರದೂ ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ 2 ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ ಕುಡಿಸುವಲಿ ಕಲಕಾಲ ಸಂತೋಷವ ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ ಸಿರಿ ವಿಜಯವಿಠ್ಠಲ ತಿರುಮಲೇಶಾ 3
--------------
ವಿಜಯದಾಸ
ದಯವಿರಲಿ ದಯವಿರಲಿ ದಾಮೋದರ ಪ. ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣಅ.ಪ. ಹೋಗಿ ಬರುವೆನಯ್ಯ ಹೋದಹಾಂಗೆಲ್ಲಸಾಗುವವನಲ್ಲ ನಾ ನಿನ್ನ ಬಿಟ್ಟುತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದುಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ 1 ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-ಸಾಧ್ಯ ನಿನಗೆಂದು ನಾ ಬಂದವನಲ್ಲನದ್ಯಾದಿ ಕ್ಷೇತ್ರಮೂರ್ತಿಗಳಲ್ಲಿ ನಿಜ ಜ್ಞಾನ-ವೃದ್ಧಜನರ ಹುಡುಕಿ ನಿನ್ನ ತಿಳಿಯಲು ಬಂದೆ 2 ಸತತ ಇದ್ದಲ್ಲೆ ಎನ್ನ ಸಲಹೊ ಅದರೊಳಗಾಗಿಅತಿಶಯವು ಉಂಟು ವಿಭೂತಿಯಲ್ಲಿಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿಸ್ಮøತಿಗೆ ವಿಶೇಷ ಮಾರುತಿರಮಣ ನಿನ್ನ 3 ನೋಡಿದೆನೆ ನಾ ನಿನ್ನ ನೋಡದೆ ಎಂದೆಂದುಪಾಡಿದೆನೆ ಆರಾರು ಪಾಡದೊಂದುಮಾಡಿದೆನೆ ಅರ್ಚನೆಯ ಮೀಸಲಾದುದು ಒಂದುಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು 4 ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-ದಿಂದ ನಿನ್ನ ಬಳಿಗೆ ಇಂದಿರೇಶಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆಬಂಧನ ಕಡಿವ ಭಕುತಿಯು ಜ್ಞಾನ ನೀಡುವುದು 5 ಬಿನ್ನಪವ ಕೇಳು ಸ್ವಾಮಿ ಎನ್ನನ್ನೊಬ್ಬನ್ನೆ ಅಲ್ಲಎನ್ನ ಹೊಂದಿ ನಡೆವ ವೈಷ್ಣವರನಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿಘನಗತಿಗೈದಿಸುವ ಭಕುತಿ ಕೊಡು ಕರುಣದಿ 6 ರಾಜರಾಜೇಶ್ವರ ರಾಜೀವದಳನಯನಮೂಜಗದೊಡೆಯ ಮುಕುಂದಾನಂದಈ ಜೀವಕೀದೇಹ ಬಂದದ್ದಕ್ಕು ಎನಗತಿ ನಿ-ವ್ರ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ 7 ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರುಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊಚಿನುಮಯಮೂರುತಿ ಗೋಪಾಲವಿಠಲಘನಕರುಣಿ ಮಧ್ವಮುನಿಮನಮಂದಿರನಿವಾಸ8
--------------
ಗೋಪಾಲದಾಸರು
ದರ್ಭಶಯನ ಶ್ರೀರಾಮದೇವರ ಸ್ತೋತ್ರ ಪಂಕ ಕಳೆಯೊ ಎನ್ನ | ಕರುಣಾರಸ ಪೂರ್ಣ ಪ ಲಂಕೇಶನನು ಜಗ್ವೊಲಿದ ಹರಿಯೇ | ಆಶ್ರಿತರಿಗೆ ಧೊರೆಯೇ ಅ.ಪ. ಭವ ವಿಮುಕ್ತನಹನೂಕವಿ ಜನ ನುತ ಸತ್ಪ್ರವರ ನಿನ್ನ ಲೀಲಾ | ಲೋಕ ಶಿಕ್ಷೆಗನುಕೂಲ |ತವಕದಿ ಗೈದೆ ವಿವಿಧ ಪೂಜೆಗಳನ್ನ | ನವ ಪಾಪಾಣಗಳನ್ನ 1 ಶರಧಿ ಸಿಂಧು ಪತಿಯ ನೋಡೀ | ದರ್ಭಶಯನ ಮಾಡೀಕಪ್ಪುಗೊರಳ ಸಖ ಕುಪಿತನಾಗೆ ನೀನೂ | ಬೆದರಿ ಬಿನ್ನವಿಸಿದನೂಒಪ್ಪಿ ಬಂಧಿಸಿದೇ ಸೇತುವೆಯನ್ನಾ | ಭಕ್ತರಿಗೆ ಪ್ರಸನ್ನಾ 2 ಸಿರಿ ಮಾಧವ ಶ್ರೀನಲ್ಲಾ | ಗುರು ಗೋವಿಂದ ವಿಠ್ಠಲ |ಮಾತು ಮಾತಿಗೆ ಕೊಡು ತವ ಲೀಲಾ | ಉಚ್ಚರಿಸುವ ಸೊಲ್ಲಾ 3
--------------
ಗುರುಗೋವಿಂದವಿಠಲರು
ದಶಾವತಾರ ಭವ ದೀನಾತ್ಮ ಜನಗಳಿಗೆ ಜ್ಞಾನಾರ್ಥವಾಗಿ ನದಿಯೋಳ್‍ಸ್ನಾನಾರ್ಥ ಮುಣಗಿರುವ ಶೋಣೀತ ಸತ್ಯವೃತ ಪಾಣೀಲಿ ಬಂದು ಭರದೀಮಾನವರಂತೆ ಮೃದು ವಾಣೀಲಿ ತನಗೆ ಭೂಸ್ಥಾನವಾಬೇಡಿ ಬೆಳೆದೂಪಾನೀಯ ಪಾತ್ರಸ್ವ ವಿಷಾಣಾದಿ ಧರಿಸಿ ರವಿ ಸೂನುನ ಮಾಡಿಹನು 1 ವೃಂದಾರಕಾರು ಬಲ ವೃಂದಾವ ಕೂಡಿ ಗಿರಿಯಿಂದಾಲೆ ಕ್ಷೀರಧಿಯನೂವಂದಾಗಿ ಮಥಿಸುತಿರೆ ಸಿಂಧೂವಿನೋಳ್ ಜರಿದು ಪೊಂದೀತು ತತ್ತಳವನೂಮಂದಾತ್ಮರಾದುಭಯ ಮಂದೀಯ ನೋಡಿ ಬೆನ್ನಿಂದಾಲೆಯೆತ್ತಿ ಸುಧೆಯಾತಂದ್ಯೋರು ರೂಪನಮರಿಂದ್ರಾರಿಗಿತ್ತು ದಿತಿಜೇಂದ್ರಾರಮೋಹಿಸಿದನು 2 ಕ್ಷೋಣೀಶ ಕ್ಷೋಣೀಯನೆತ್ತಿ ಪಥಿ ದಾನಾವತಡಿಯುತಿರಲೂನಾಸವಾತ್ಮನವನ್ಹಾನೀಯ ಮಾಡಿ ನಿಜ ಸೂನೂಗೆಒಪ್ಪಿಸಿದನುಣೇಶ ಜಾತ ನಿಜಮಾನಿನೀ ಸಹಿತ ಸಂಸ್ಥಾನಾದಿ ಕೂತುಸುಖದೀತಾನವರಾನ ಪಡಿಸಿದಾನಂದ ಭೋಗಿಸಲು ತಾ ನೋಡಿಮೋದಿಸಿದನು 3 ಶುಭ ಭರಾತೀಯ ತತ್ಸುತಗೆ ಪ್ರೀತೀಲಿಪಾಲಿಸಿದನೂ 4 ದುಷ್ಟಾತ್ಮರಿಂದ ಬಹು ದುಷ್ಟಾತ್ಮರಾಗಿ ಸುರರಿಷ್ಟಾವ ಸ್ವರ್ಗ ಸುಖವಾಬಿಟ್ಟಾವನಲ್ಲ ನಿಜ ಪೊಟ್ಟೀಯಗೋಸುಗದಿ ಕಷ್ಟಾದಿಸಂಚರಿಸಲೂದೃಷ್ಟಿಂದ ಕಂಡದಿತಿ ತುಷ್ಟೀಸುತಿರಲವಳ ಪೊಟ್ಟೀಯೊಳವತರಿಸಲೂಪುಟ್ಟಾತ್ಮ ಬಲಿಗೆ ಸುತಲಿಷ್ಟಾವ ನೀಡಿ ಸುರರಿಷ್ಟಾವಪಾಲಿಸಿದನೂ 5 ಭೂತೇಶನೊಬ್ಬ ತನ ತಾತಾನ ಕೊಂದುನವ ಮಾತೇಯನಪಹರಿಸಲೂಭೀತೀಲಿ ತಾಯಿಯುರ ಘಾತಕ್ಕ ಸದೃಶ ಭುವಿ ಧಾತ್ರೀಶದುಷ್ಕಲವನೂಘಾತೀಶಿ ಪೂರ್ವಜರ ಪ್ರೀತೀಯ ಪಡೆದು ಮುನಿ ಪೋತಾನ ರಕ್ಷಿಸುತಲೇಪಾಥೋದಿ ತಟದಿ ರಘುನಾಥೇಷ್ಟದಾತ ನಿಜ ಶಾಪಾವಭೋಗಿಸುವನೂ6 ತಾಪ ರಘುನಾಥಾನುನೋಡಿ ವಿಥಿಲಾಜಾತಾಸಮೇತ ಸಹಜಾತಾನ ಕೂಡಿ ವನಜಾತಾದಿಸಂಚರಿಸುತಾಘಾತೀಸಿ ರಾಕ್ಷಸರ ಪ್ರಿಯನಿತ್ತು ಮುನಿಪಾತ್ಮರಿಗೆಲ್ಲ ಪುರದೀಸೀತಾಸಮೇತ ಕಪಿ ಪೋತಾನ ಕೂಡಿ ನಿಜ ಭೂತಿಯಭೋಗಿಸಿದನು 7 ಕಾರಾಳಯಾದಿ ನಿಜ ನಾರೀಯ ಕೂಡುತಲೆಶೂರಾತ್ಮಜಾತನಿರಲೂನಾರಾಯಣಾತ್ಮತನು ತೋರೀಸಿ ಬಾಲವಪುಗೋರಾಜನಾಲಯದಲೀಶೀರೀಯ ಕೂಡಿ ಸುರವೈರಿಗಳಳಿದು ನದಿ ತೀರಾದಿಕೊಳಲನೂದಿನಾರೇರಿಗೆಲ್ಲ ನಿಜ ಜಾರಾಟ ಸೌಖ್ಯವನು ತೋರೀಸಿತೋಷಿಸಿದನು 8 ವೃಷ್ಣೀಯ ಮಧುರೆಯಲಿ ಪುಟ್ಟೂತ ಗಾರ್ಗಸುತನಟ್ಟೂಳಿಗಾಗಿಜಲದೀಪಟ್ಟಣ ನಿರ್ಮಿಸುತಲಿಷ್ಟಾಪ್ತ ಜನರುಗಳ ನಿಟ್ಟಲ್ಲೆ ಪಾಲಿಸಿದನುಸೃಷ್ಟೀಶಮಕ್ಕಳನು ಮುಟ್ಟೂತ ಕರದಿ ತದಭಿಷ್ಟಾರ್ಥಗಳನುಸುರಿದೂತೃಷ್ಣೇಶ ಪಾಂಡವರ ಕಷ್ಟಾವ ಕಳಿದು ಗಜಪಟ್ಟಣವಸಾಧಿಸಿದನು 9 ಪಾರ್ಥಾರ ಶಾಲೆಯೊಳು ಪೂತಾತ್ಮರಿಂದ ಹರಿ ಭೂತೀಶುಕೇಳಿ ಮನದೀಪ್ರಾತಃ ಸಮಾರಭಿಸಿ ರಾತ್ರೀಯತನಕ ಹರಿ ಮೂರ್ತೀಯಪೂಜಿಸುತಿಹಾದೈತ್ಯಾರ ನೋಡಿ ಸುರನಾಥರ ಜಯಿಸಿ ಜಿನ ಪೋತಾತ್ಮ ಮಲಗಿ ತೊಡಿಯೋಳ್‍ಶಾಸ್ತ್ರಾವ ಬೋಧಿಶ್ಚವರಾತ್ಮಾವ ಕೆಡಿಸಿ ಸುರವೈತಾವತೋಷಿಸಿದನೂ10 ಶುಭ ಸತಿ ಮಿಷ್ಟಾತ್ಮಹಯವ ಮಾಡಿಅಷ್ಟಾಷ್ಟ ಖಡ್ಗವನು ಮುಷ್ಟೀಲಿ ಪಿಡಿದು ಬಹು ಶಿಟ್ಟೀಲಿಸುತ್ಲೆ ಚರಿಸೀವಿಪ್ಲವಾತ್ಮಕ ಕಲ್ಕಿ ಖಳರ್ಹೊಟ್ಟೀಯವಡೆದು ಶುಭಪಾಲಿಸಿದನು11 ವೆಂಕಟನಾಥ ಭವಪರಿಕವ ಹರಿಸೂತ ಕಿಂಕರನಾಗಿರುವೆನೂಶಂಬಾಸುರೋದರಜ ಶಂಖಾವಪಿಡಿದು ಮುಖ ಪಂಕೇಜದಿಂದೂದುತಾಹುಂಕಾರ ಮಾಡುತಲೆ ಕಿಂಕಿರನೆಂದು ಭುವಿ ಸಂಕರ್ಷಣದಿಸುರರೂಶಂಕೀತರಾಗುತ ಭಯಂಕಾರವೆಂದು ಮಹಾತಂಕಾದಿಸಂಸ್ಮರಿಪರೂ 12 ದಂಷ್ಟ್ರೇಶ ಬ್ರಹ್ಮಾನಾಸಿ ಪುಟ್ಟೂತವಾರಿನಿಧಿ ಮೆಟ್ಟೂತಘರ್ಘವಿಸಲೂದೃಷ್ಟೀಲಿ ನೋಡಿ ಕಿವಿಗೊಟ್ಟಾಲಿಸೂತ ನಿಜಪೊಟ್ಟೀಯರಾಂತರದಲೀಯಷ್ಟೇನೊ ಸನ್ನಾವಿದು ಪುಟ್ಟೂತಲ್ಹಂದಿ ಮರಿಬೆಟ್ಟೇಶದಂತಿರುವದೂಧಿಷ್ಟ್ಯಾದಿ ಕೂತು ಪರಮೇಷ್ಠೀಯ ಮಹಿಮೆಯನು ತುಷ್ಟಿಸಿ ಪಾಡುತಿಹನು 13 ತರೂನ ಮೂಲದಿ ಕೂತು ಬೋರೆಯಾ ಹರಿಯ ಶಾಸ್ತ್ರವ ಪೇಳೆ ಮುನಿಪನ ಸ್ವರವ ಸ್ಮರಿಸಿರಿ ಮನುಜರೇ ಭವದರವು ಪೋಗುವದು 14 ಚಿಕ್ಕ ಹುಡುಗೆಯು ತನ್ನಾಗತ ಚಕ್ರದಲಿ ಬ್ರಹ್ಮಾಂಡ ಕಟಹವ ಟೊಕ್ಕ ವೆನಿಸುತ ಜೀವ ಸಂಸ್ಕಾರ ಮುಕ್ಕು ಮಾಡುವಳು ಮೋಘ ಸೌಖ್ಯ ನೀಡುವಳು 15 ಧ್ವಾನ ಮಾಡಲುಧರ್ಮರಾಜಗೆಮಾನವಾದಿಗಳೆಲ್ಲ ಮುಖಭವ ಶೋಣಿತಾಗುವದು 16 ತತ್ವ ದಿವಿಜರು ನಮ್ಮ ದೇಹದಿ ನಿತ್ಯದಲಿ ಹರಿಸ್ಮರಿಸಿ ತುತಿಸುತಸತ್ವ ದಿವಿಜರಿಗೆತ್ತುವೆನು ಕರವಾ17 ದುರಿತ ಹರಿಸುವನೂ 18 ಯಲ್ಲಿ ಬ್ರಹ್ಮಾಂಡದಲಿ ಶಿರಿ ವರವಲ್ಲಭವ ಸಂಸ್ಮರಿಸಿ ಹಿಗ್ಗುವಫುಲ್ಲನಾಭನ ಭಕ್ತರನು ಮನದಲ್ಲಿ ಸ್ಮರಿಸುವೆನೂ 19 ಶ್ರೀಶಾನು ಭಕ್ತಜನದಾಶೀಯ ಪೂರೈಸಲು ಕೂಸಾಗಿದೇವಕಿಸುತಾಯೇಷಾದಿಗಳ ದಿಶುಭರಾಶೀಲಿ ಪುಟ್ಟುತವನೀಶಾರ ವಂಶಬೆಳೆಸಿ 20 ದೋಷಾತ್ಮಾ ದೈತ್ಯಕುಲ ಘಾಶೀಶಿ ಭೂದೇವಿ ಕ್ಲೇಶಾವನೆಲ್ಲಕಳೆದೂ ದಾಶೀಜ ನಾಗಿ ನಿಜ ಕೋಶಾದಿ ಮೋಕ್ಷಾ ಪದಮೀರೇಶ ತೋರಿಸಿದನು ಇಂದಿರೇಶನ ಸಾಧಿಸಿದನು 21 ನಾರದರ್ಷಿಯ ಕರುಣದಲಿ ಶನಿವಾರ ಮಾಡೀದ ಪರಮತುತಿಯನುಭೂರಿ ಪಠಿಸಲು ಇಂದಿರೇಶನುದಾರ ನೋಡುವನು 22
--------------
ಇಂದಿರೇಶರು
ದಾತ ಅಂಬುಜಾಸನ ತಾತ ಕುಂಭಿಣಿಯೊಳು ಪುಟ್ಟಿ ಜನನಿಯ ಮೊಲೆ ಪಾಲು ಉಂಬೋದು ಬಿಡಿಸೊ ಜನನವ ಕೆಡಿಸೊ ಪ ರಸಿಕೆ ಮುಹಕದಲಿ ನಿಶಿದಿನದಲಿ ಹೊರಳಿ ಅಸುರುಸುರೆನುತಲಿ ಹಸಗೇಡಿಯಾದೆನೊ ಪರಿ ನೊಂದು 1 ಹಲವು ಲಂಪಟದೊಳು ಹಲುಬಿ ಹಕ್ಕಲನಾದೆ ಬಲೆಯೊಳಗಿದ್ದ ಎರಳೆಯಂತೆ ಮಿಡುಕುತ ಮಲಮೂತ್ರದೊಳು ಬಳಲಿದೆ ಕೇಳೊ 2 ಎಳ್ಳನಿತು ಸತ್ಕರ್ಮವುಳ್ಳದ್ದು ಚರಿಸಿದೆ ಬಲಿಷ್ಠ ನಾನೆಂದು ಬಲು ದುರ್ಮತಿಯಿಂದ ಎಲ್ಲರ ಜರಿದೆ ಧರ್ಮವ ಮರೆದೆ 3 ಚಾರುವಾಕರಗೂಡಿ ಮೂರೆ ವಿಕಾರದಲ್ಲಿ ನೀರೇರ ಒಡಗೂಡಿ ನೀತಿ ನಿರ್ಣಯ ತೊರೆದು ಬಟ್ಟೆ 4 ಎಲ್ಲಿರಲು ನಿನ್ನವನೋ ಅಲ್ಲವೆಂದೆನಿಸದೆ ಬಲ್ಲಿದರೊಡಿಯ ವಿಜಯವಿಠ್ಠಲ ನಿ ನ್ನಲ್ಲಿ ಸೇರಿಸಿ ಎನ್ನ ಪೊರೆಯೋ ಪ್ರಸನ್ನಾ 5
--------------
ವಿಜಯದಾಸ
ದಾತ ನೀನಿರಲಾತರ ಬಡತನವೊ ದಾತ ನೀನಿರಲಾತರ ಬಡತನವೊ ಪ ಸೋತು ಮನವನು ವಿಷಯಗಳಲಿ ಬಲು ವಾತ ಕುಮಾರರ ನೀತಿಗಳರಿಯುತ ಧಾತಪಿತನ ಗುಣ ಜಾತಗಳಲಿ ಅತಿ ಪ್ರೀತಿ ಪಡೆಯುವರ ಅ.ಪ ತಾನು ತನ್ನವರೆನ್ನುವ ಮೋಹದಲಿ ಅನುದಿನದಲಿ ಮುಳುಗಿಹ ಮಾನವರಿಗೆ ಧನಾರ್ಜನೆಯು ಕ್ಲೇಶ ಜಾನಕೀಶನೆ ನೀನಲ್ಲದೆ ಎನ ಗೇನು ರುಚಿಸದು ಎಂದರಿಯುತ ನಿನ್ನ ಜ್ಞಾನ ಪಡೆಯಲು ಸತತ ಶ್ರವಣ ಮನನಾದಿಗಳ ಸುಖವರಿತ ಸುಜನರಿಗೆ 1 ಪಾಡುಪಡುತಲಿ ಧನವ ಬಹಳ ಗಳಿಸಿ ನೋಡುತಲದ ಹಿಗ್ಗುತ ಗೂಢತನದಲಿ ದಿನದಿನ ನೇವರಿಸಿ ಕಾಡುವಾ ನರನಂತೆ ಜೀವನ ಮಾಡುವುದು ಕಡು ಬಡತನವಲ್ಲವೆ ತೋಡಿ ಗಿರಿಯನು ಇಲಿಮರಿಗಳ ಹಿಡಿ ದಾಡುವಂತಹ ಮೂಢ ನಾನಲ್ಲವೊ 2 ನಿನ್ನ ಗಾನವೆ ವಿವಿಧ ಸುರಸ ಪಾನ ಅವಿಚಾಲಿತ ಮನದಲಿ ನಿನ್ನ ಧ್ಯಾನವೆ ನವಮಣಿ ಸೋಪಾನ ನಿನ್ನ ಪೂಜೆಯ ಮಂದಿರವೆ ಎನ ಗುನ್ನತದ ಉಪ್ಪರಿಗೆಯ ವಾಸವು ನಿನ್ನ ಸೇವೆಯ ಸುಖತಮ ಭೋಗಗ ಳೆನ್ನುವರಿಗೆ ಪ್ರಸನ್ನನಾಗುವ 3
--------------
ವಿದ್ಯಾಪ್ರಸನ್ನತೀರ್ಥರು
ದಾರಿಯ ತೋರೊ ಮುರಾರಿ ಮುಂದಣ ದಾರಿಯ ತೋರೊ ಮುರಾರಿಪ. ಕಂಸಾರಿ ಭವಾಂಜನ ಪಾರಾವಾರ ಉತ್ತಾರಣಗೈಯುವಅ.ಪ. ಮಾಯಾಶ್ರಿತನಾಗಿಹೆನಲ್ಲೊ ಮೋಕ್ಷೋ- ಪಾಯಭೇದಂಗಳ ಮರತೆನಲ್ಲೊ ಕಾಯಜಪಿತ ಕಮಲಾಯತಲೋಚನ ಕಾಯದೊಳಗೆ ಸನ್ನಾಯದಿ ನೋಡುವ 1 ದುಃಖವಿಲ್ಲದೆ ಸುಖವಿಲ್ಲ ಇದ ಒಕ್ಕಣಿಪರೆ ತುದಿಬುಡವಿಲ್ಲ ಸೊಕ್ಕಿ ನಡೆದು ಭವಯಿಕ್ಕುಳ ಬಾಯೊಳು ಸಿಕ್ಕಿದೆನಲ್ಲವೊ ರಕ್ಕಸವೈರಿಯೆ2 ಬಲ್ಲೆನೆಂಬರೆ ಬಲವಿಲ್ಲ ಭವ ಬಲ್ಲೆಯೊಳಗೆ ಸಿಲುಕಿದೆನಲ್ಲ ಕಲ್ಲೊಳಗ್ನಿ ಕಲಕಿರುವಂದದಿ ಮನ ದಲ್ಲಿ ನಿನ್ನ ಪದಪಲ್ಲವ ಭಜಿಸುವ3 ಸಾರರಹಿತ ಸಂಸಾರದಿ ಮಾಯಾ ನಾರಿ ಗೈದ ಮಮಕಾರದಿ ಘೋರ ದುರಿತವಪಹಾರಗೈವ ಲಕ್ಷ್ಮೀ ನಾರಾಯಣನು ಸೇರಿ ಸೇವಿಸುವಂಥ 4
--------------
ತುಪಾಕಿ ವೆಂಕಟರಮಣಾಚಾರ್ಯ
ದಾರಿಯ ತೋರೋ ಗೋಪಾಲ ಪ. ವಾರಿಜನಾಭ ವೈಕುಂಠÀಲೋಲಅ.ಪ. ಸಿಕ್ಕಿದೆ ಭವಕಾಡಿನೊಳಗೆಲೆಕ್ಕವಿಲ್ಲದ ಜಂತುಗಳಿಗೆದಿಕ್ಕೊಬ್ಬರಿಲ್ಲವೊ ಎನಗೆಕಕ್ಕಸವ ಕಳೆದು ನಿನ್ನಯ ಪಾದಗಳಿಗೆ1 ಗಜರಕ್ಷಕನು ನೀನೆಂದುಅಜರುದ್ರಾದಿಗಳಂದುನಿಜವಾಗಿ ಪೇಳಿದರೆಂದುಸುಜನÀರೊಡೆಯನೆ ಕೇಳಿದೆ ನಾನಿಂದು 2 ವರದ ಶ್ರೀಹಯವದನ ಬಾರೈಕರೆದೆನ್ನ ದಾರಿಯ ತೋರೈಪರಮ ಭಕ್ತರೊಳಿನ್ನಾರೈಪರಮಪುರುಷ ನೀನಲ್ಲದೆ ಗತಿಯಾರೈ 3
--------------
ವಾದಿರಾಜ
ದಾವನಿಹನೈಯ್ಯಾ ಕೃಷ್ಣಾ ಎನ್ನ ಕಾವವನು ನೀನಲ್ಲದೆ ಪ ನಾರಿ ದ್ರೌಪದಿ ನೆನೆಯಲು ಸಭೆಯಲ್ಲಿ ಶೀರಿ ದಾನವ ಮಾಡಿದೀ ಕೃಷ್ಣಾ ಘೋರ ದೂರ್ವಾಸ ಮುನಿಯು ನಡುವಿರುಳೆ ಹಾರೈಸಿ ಬರೆಯನ್ನವಾ ದೇವಾ ನಾರಿ ದ್ರೌಪದಿಯ ಮೊರೆಯ ದೊರೆಯು ಆಲಿಸೇ ಆ ರಾತ್ರಿ ಕಾಯ್ದ್ಯೋಬಲೆಯಾ 1 ಪರಿವಾರದಿಂದ ಕೂಡಿ ಕರಿರಾಜನಂಗ ನಾಟಕಂದೈದಲು ಭರದಿನೆಗಳಿಯು ಪಿಡಿಯಲು ಕಾಲನು ಇರದೆ ನಿನ್ನನು ಸ್ಮರಿಸಲು ದೇವಾ ಗರುಡವಾಹನನಾಗಿ ನೀನೈತಂದು ಕರುಣಿಸಿದ್ಯೋ ಕೊನೆಯ ಗತಿಯ 2 ದುರುಳ ಹಿರಣ್ಯಕನ ಶೀಳಿ ನರಹರಿಯೆ ತರಳ ಪ್ರಲ್ಹಾದನ ಪೊರೆದ್ಯೋ ದೇವಾ ಮರೆಯದಜಮಿಳ ನೆನೆಯಲು ಕೇಳ್ದು ನೀ ಪರಿಹರಿಸಿದೆ ಯಮಬಾಧೆಯ ದೇವಾ ನರಸಿಂಹವಿಠಲ ಸ್ವಾಮಿ ಧ್ರುವನನ್ನು ಪೊರೆದಂತೆ ರಕ್ಷಿಸೆನ್ನಾ 3
--------------
ನರಸಿಂಹವಿಠಲರು
ದಾಸನ ಮೇಲಿಷ್ಟು ಬೇಸರವ್ಯಾಕೋ ಶೇಷಶಯನನೆ ನಿನ್ನ ಧ್ಯಾಸದೊಳಿರುವ ಪ ನಶಿಸಿಹೋಗುವ ಕಾಯದ್ವ್ಯಸನವನು ಪರಿಹರಿಸಿ ಹಸನಾದ ಮತಿಯೆನಗೆ ಒಸೆದು ನೀಡೆಂದು ನಿಶಿದಿವದಿ ನಿನ್ನಡಿಕುಸುಮಗಳನಂಬಿ ಮಾ ನಸದಿ ಭಜಿಸಲು ಎನಗೊಶನಾಗದಿರುವಿ1 ಜಡತನದ ಸಂಸಾರ ತೊಡರೆಡರು ಕಡಿದು ಗಡ ಜಡಮತಿಯ ತೊಡೆದೆನಗೆ ದೃಢ ನಿಶ್ಚಯವನು ಕೊಡುಯೆಂದು ದೃಢದಿ ನಿನ್ನಡಿಗೆರಗಿ ಬೇಡಿದರೆ ಒಡಲೊಳಗೆ ನಿಂದೆನ್ನ ಜಡತನಳಿವಲ್ಲಿ 2 ಶ್ರೀಶ ಶ್ರೀರಾಮ ನಿನ್ನ ಧ್ಯಾನಮಾಡಲು ಒಮ್ಮೆ ಅಘ ನಾಶನಲ್ಲೇನು ದಾಸಜನಕರುಣಾಬ್ಧಿ ದಾಸನೊಳ್ದಯವಾಗಿ ಪೋಷಿಸೈ ತವಪಾದ ನಿಜಧ್ಯಾಸವಿತ್ತು 3
--------------
ರಾಮದಾಸರು
ದಾಸನಾಗೋ ಪ್ರಾಣಿ ಬರಿದೆ ಕಾಣಿ ಪ ದಾಸನಾಗು ರಮೇಶನ ಪಾದ ಹೇಸಿಮನಸಿನ ಕ್ಲೇಶವ ನೀಗಿ ಅ.ಪ ಹಮ್ಮು ಬಿಟ್ಟುಬಿಡೋ ಈಶತ್ವ ಸುಮ್ಮನಲ್ಲ ನೋಡೋ ಸಮ್ಮತ್ಹೇಳಬೇಡೋ ಮಹವಾಕ್ಯ ಮರ್ಮಶೋಧ ಮಾಡೋ ಹಮ್ಮು ಅಹಂಕಾರ ದೂಡಿ ನಿರ್ಮಲಮತಿಗೂಡಿ ಒಮ್ಮನದಿಂ ಪರಬ್ರಹ್ಮನ ಪಾಡಿ 1 ಶಂಕೆಯನೀಡ್ಯಾಡೋ ಚಿತ್ತದ ಕ ಲಂಕ ದೂರ ಮಾಡೋ ಓಂಕಾರರ್ಥ ಮಾಡೋ ಬ್ರಹ್ಮದ ಅಂಕಿತಿಟ್ಟು ಪಾಡೋ ಕಿಂಕರನಾಗದೆ ಶಂಕರ ನಿನಗೆಲ್ಲಿ ಮಂಕುತವನವ ಬಿಟ್ಟು ಸಂಕರುಷಣನ 2 ಹಾಳು ವಾಸನೆ ತೂರಿ ನಿಜವಾದ ಶೀಲಜನರ ಸೇರಿ ಮೂಲತತ್ತ್ವದಾರಿ ಅನುಭವ ಕೀಲಿ ತಿಳಿದು ಭೇರಿ ತಾಳನಿಕ್ಕುತ ಮಮಶೀಲ ಶ್ರೀರಾಮನ ಮೇಲೆಂದು ನಂಬಿ ಭವಮಾಲೆ ಗೆಲಿದು ನಿಜ 3
--------------
ರಾಮದಾಸರು
ದಾಸನಾಗೋ ಭವಪಾಶನೀಗೋ - ವಿಶೇಷನಾಗೋ ಪ ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗೊ - ಸಂತೋಷಿಯಾಗೊಅ ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೊ - ಅಲ್ಲಿ ಆಹೋದೇನೊದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ - ಉಪವಾಸದಲ್ಲಿಮೀಸಲಾಗಿ ಮಿಂದು ಜಪತಪ ಹೋಮನೇಮಗಳಏಸು ಬಾರಿ ಮಾಡಿದರೂ ಫಲವೇನೊ - ಇದು ಚೆಲುವೇನೊವಾಸುದೇವನೆಂಬ ಒಳಗಿಹ ಹಂಸನ ಸೇರಿಲೇಸನುಂಡು ಮೋಸಗೊಳದೆ ಮುಕ್ತನಾಗೊ - ನೀ ಶಕ್ತನಾಗೊ1 ಅತ್ತಲೋ ಇತ್ತಲೋ - ಎತ್ತಲೋ ಈ ಸಂಸಾರಬತ್ತಲೆಗೆ ಬತ್ತಲೆ ನಿತ್ಯವಲ್ಲ - ಪರಿಮಿತಿ ಇಲ್ಲಕತ್ತಲೆ ಕಾವಳದೊಳು ಕಾಣಲಾರದೆ ನೀನುಸತ್ಯವೆಂಬ ದಾರಿಯನು ಸೇರಲಿಲ್ಲ - ಲೇಸು ತೋರಲಿಲ್ಲಉತ್ತಮ ಅ ಉ ಮ ಎಂಬ ಓಂಕಾರ ಬೀಜಾಕ್ಷರಚಿತ್ತದಲಿ ಗ್ರಹಿಸು ನೀ ಬಿಡಬೇಡ - ಬಿಟ್ಟು ಕೆಡಬೇಡಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯನಿತ್ಯವೆಂದು ಸ್ಥಿರವೆಂದು ನಂಬಬೇಡ - ನಿನಗೆ ಡಂಬ ಬೇಡ 2 ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀರಘುರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು - ಭವದಿ ಮಮತೆ ಇಟ್ಟುನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದುಬಾಯಿ ಬಾಯಿ ಬಿಡುತಲಿ ಸಾವುದೇನೊ - ನೀ ನೋವುದೇನೊತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯದಾಯಕನ ಹೊಂದಿ ನೀ ಧನ್ಯನಾಗೊ - ಮುಕ್ತ ಮಾನ್ಯನಾಗೊ 3 ಸಿರಿ ಕಮಲೇಶನನ್ನುಒಂದು ಬಾರಿ ಅರುಹಿಂದ ನೆನೆಯಲಿಲ್ಲ - ಮನ ತಣಿಯಲಿಲ್ಲಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿನೊಂದು ಬೆಂದು ಒಂದರಿಂದ ಉಳಿಯಲಿಲ್ಲ - ಬಂಧ ಕಳೆಯಲಿಲ್ಲಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದುಇಂದು ಕಾಣು ದೇಹದಲಿ ಪಿಂಡಾಂಡ - ಹಾಗೆ ಬ್ರಹ್ಮಾಂಡಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕುತಿಯ ಬೇಡು ಕಂಡ್ಯ - ನೀ ನೋಡು ಕಂಡ್ಯ 4 ತುಂಬಿ ಲಂಡ
--------------
ಕನಕದಾಸ
ದಾಸರಾಯ ಪುರಂದರದಾಸರಾಯ ಪ. ಘಾಸಿಗೊಳಿಸದೆ ಇತ್ತು ಕರುಣಿಸಿ ವಾಸುದೇವನ ಕೃಪೆಗೈಸಿರಿ ಅ.ಪ. ದಾಸಕೂಟಕೆ ಮೊದಲನೆ ಗುರು ದೊಷವರ್ಜಿತ ಭಕ್ತರೆನಿಸಿ ಆಶಪಾಶವೆ ತೊರೆದು ಹರಿಯ ದಾಸತನವನು ತೋಷದಲಿ ಕೊಂಡು ಕೇಶವನು ಸರ್ವೋತ್ತಮನು ಎನ್ನುತ ಶ್ರೀಶನ ಗುಣಗಳನೆ ಪೊಗಳುತ ಭೂಸುರರ ರಕ್ಷಿಸುತ ಭಕ್ತರ ಕ್ಲೇಶಗಳೆÉದಂಥ ಗುರುವರ 1 ವೀಣೆ ಕರದಲಿ ಗಾನಮಾಡುತ ಜಾಣತನದಲಿ ಕೃಷ್ಣನೊಲಿಸುತ ಆನಂದದಲಿ ನರ್ತಿಸುತ್ತ ಧ್ಯಾನದಲಿ ಶ್ರೀ ಹರಿಯ ನೋಡುತ ಆನನವ ತೂಗುತ್ತ ವೇದ ವಿ- ಧಾನದಲಿ ಪದಗಳನೆ ರಚಿಸುತ ಮೌನಿವ್ಯಾಸರ ಶಿಕ್ಷೆಯಿಂದಲಿ ದಾನವಾಂತಕ ಹರಿಯನೊಲಿಸಿದ 2 ಪಾಪಿಗಳ ಪಾವನಗೈಸುತ ಶ್ರೀ ಪತಿಯ ಅಂಕಿತವ ನೀಡುತ ಈ ಪರಿಯಲಿ ಮೆರೆದ ಮಹಿಮೆಯ ನಾ ಪೇಳಲಳವಲ್ಲವಿನ್ನು ನಾ ಪಿರಿಯರಿಂ ಕೇಳಿದುದರಿಂ ದೀಪರಿ ನುಡಿದಿರುವೆನಲ್ಲದೆ ಗೋಪಾಲಕೃಷ್ಣವಿಠ್ಠಲನ ರೂಪ ನೋಡುತ ಸುಖಿಸುವಂಥ 3
--------------
ಅಂಬಾಬಾಯಿ
ದಾಸರಾಯರಾ ಚರಣಕಮಲ ಭಜಿಸೋ |ದುರ್ವಿಷಯವ ತ್ಯಜಿಸೋ ||ಶ್ರೀಶ ಭಜಕ ಗುರು ಪ್ರಾಣೇಶದಾಸಾರ್ಯ |ಹರಿದಾಸ ವರ್ಯಾ ಪ ಸದ್ವೈಷ್ಣವ ಅಧ್ಯಕ್ಷರೆಂದೆನಿಪರೊ |ಕರ್ಮಠರೆನಿಪರೋ |ಮಧ್ವಮತ ಪ್ರವರ್ತಕರೆನಿಪರೋ |ಜ್ಞಾನಿಗಳೆನಿಪರೊ ||ಪದ್ಧತಿ ಪೂರ್ವಕ ಕವನವ ಪೇಳುವರೊ |ಹರಿ ಪರನೆಂಬುವರೊ |ಶುದ್ಧಾತ್ಮರಿಗತಿ ಪ್ರಿಯರೆಂದೆನಿಸುವರೋ |ಸತ್ಕಥಾಲಾಪರೋ 1 ಕಾಮಕ್ರೋಧ ಮದಮತ್ಸರವನು ಗೆಲಿದೂ |ತಾಮಸರನು ಹಳಿದೂ |ನೇಮದಿಂದ ಯಮನಿಯಮಗಳನು ವಹಿಸೀ |ಇಂದ್ರಿಯಗಳ ಜೈಸೀ |ತಾಮುದದಿಂದಲಿ ಹರಿಗುಣ ಕೀರ್ತನೆಯಾ |ಮಾಡುತ ನರ್ತನೆಯಾ ||ಪ್ರೇಮದಿಂದ ಮಾಡಿ ದೇಶದಲ್ಲಿ ಮೆರೆದಾ |ನಾಮ ಸುಧೆಯನ್ನೆರದಾ 2 ಏಸು ಪೇಳಲಿ ಇವರ ಚರಿತೆಯನ್ನು |ಆ ಪಾರವು ಇನ್ನೂ |ಸೋಸಿನೋಡಲು ಎನಗೆ ವಶವಲ್ಲಾ |ಇದು ಪುಸಿಯೂ ಅಲ್ಲಾ ||ಮೀಸಲ ಮನದಲಿ ತುತಿಸಲು ಸಂತಾಪಾ |ಪೋಪದು ನಿರ್ಲೇಪಾ |ಶ್ರೀಶ ಪ್ರಾಣೇಶ ವಿಠಲ ತಾ ಬಲ್ಲಾ |ವಲಿದಿಹನಲ್ಲಾ 3
--------------
ಶ್ರೀಶಪ್ರಾಣೇಶವಿಠಲರು