ಒಟ್ಟು 1122 ಕಡೆಗಳಲ್ಲಿ , 101 ದಾಸರು , 1027 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಹಿ ಶ್ರೀ ಗುರುರಾಘವೇಂದ್ರ ಅಮಿತಗುಣ ಸಾಂದ್ರ ಯತೀಂದ್ರ ಪ ಶ್ರೀದ ಮೋದತೀರ್ಥ ಮತವಾರಿಧಿ ವಿಧು ವಸುಧಾ ಸುವಿಬುಧಾ 1 ಅಮಿತ ಮಹಿಮಾಲಂಕೃತಾಂಗ ಕುಮತ ಗಜಸಿಂಗ ಶುಭಾಂಗ 2 ಶರಣು ಜನ ಮಂದಾರ ಕರುಣಾ ದುರಿತ ಘನ ಸುಪವನಾ3 ತ್ರಾಲಯಾ ನಿಲಯಾ ಸುಕೃಪಯಾ 4 ಚಾರು ಪದಕಮಲ ಸುಲೋಲ 5
--------------
ಕಾರ್ಪರ ನರಹರಿದಾಸರು
ಪಾಹಿಮಾಂ ತೀರ್ಥಧಾಮಾ | ಪಾಹಿಮಾಂತ್ರಿಜಗಾದಿ | ಪಾಹಿಮಾಂ ತನುಜಧವ | ಹೇಹಿಮರಾಚೂಡ | ದೇಹಿ ಮನೋಭೀಷ್ಮ | ಮಹೀಶಾಯಿಸುಖ ಆಕಾಶ | ವಾಹಿನಿ ಧರಾ | ಮೋಹನ ಚರಿತ ರಜತಗೇಹ ಸಾಂಬಾ ಪ ಈಶ ಅಘನಾಶ ಸರ್ವೇಶ ಸುರಕೋಶ ಮುನಿ | ತೋಷಗಜಾಸುರ ವಿನಾಶ ಭವಪಾಶ ಹರ | ವಾಸವಾದ್ಯನುತ ನಿರ್ದೋಷ ಶ್ರೀ ಭಸಿಶಿತ | ವಿ ಭೂಷಿತ ವಿನಾಶ ರಾಮೇಶ ಶಿವಶಂಭೋ 1 ವೀರ ರಣಧೀರ ಗಂಭೀರ ಸಾಕಾರವರ | ಪ್ರಾರ ಸಂಹಾರ ಭಯ ಪೂರಿತ ಪುರಾರಿ | ಮೌ ದಾರ ಚಿರಚಿರಂಡ ಜಾರಿವಿಹಾರಿ | ಶ್ರೀ ಹೇರಂಬ ತಾತದಯ ಪಾರಾವಾರ ಶಂಭೋ 2 ದುರಿತ | ಕಾಲಹರ ಗೋಗಮನ ಭಾಲನಯನಾರ್ತಜನ | ಪಾಲ ವಿಶಾಲಾ ತ್ರಿಶೂಲಧೃತನಿರುತ ಶುಭ ಲೀಲ ಶ್ರೀ ಗುರುಕೃಷ್ಣ ಬಾಲಕ ಪ್ರಭು ಶಂಭೋ3 ಅಂಕಿತ-ಶ್ರೀಗುರುಕೃಷ್ಣ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಹಿಮಾಂ ಪರಮೇಶ ಪಾಹಿಪನ್ನಗಭೂಷ ಪಾಹಿಕೈಲಾಸವಾಸ ಪ ಸ್ವಾಮಿ ಗಿರಿಜಾನಾಥ ಸಮರ ವಿಜಯ ತ್ರಿಣೇತ್ರ ಸುಜನ ವಿನುತ ಕಾಮಿತಾರ್ಥ ಪ್ರದಾತ ಕ್ಷೇಮತರ ಸುಚರಿತ್ರ ಸಾಮಗಜ ವದನ ತಾತರಾಮೇಶ ಕೇಶಪುನೀತ ಪ್ರಖ್ಯಾತ 1 ಕಾಲ ಭಾಳಾಕ್ಷಭಯ ಸಂಹಾರ ಜನಸಾರ ಶೂಲಧರ ಕರುಣಾಕರ ಶೀಲವರಗುಣ ಸುಂದರ ಹರಪಾಶ ಭಯವಶಂಕರ ಓಂಕಾರ 2 ಬಲಸಾಕಾರತ ವಿಶಾಲ ಏಕಮಯ ತ್ರಿಗುಣದಿಂದ ಖಿಲಲೋಕ ವಿಸೂತ್ರ ಜಾಲ ಸಾಕೆನ್ನ ಭವದಳಲ ಶೋಕವನು ನೀಕೇಳದೇಕೆ ಈ ಚೇಷ್ಟೆಬಹಳ ಕಾಲ ಮೂಕಾಂಬಿಕಾಂಬಲೋಲ3 ನಾಗವಾಹನ ನಮಿತನೆ ಯೋಗಮಾಯಾತೀತನೆ ಸಾಗರಾಂಬರದೊಡೆಯನೆ ಭಾಗವತ ಭಾಗಚಂದಿರಧರನೆ ಹರನೆ 4 ಧರಣಿಯೊಳಗೆ ವಿಶೇಷತರ ಗೌಜದೊಳುವಾಸ ವರಋಷಿ ಸ್ಥಾಪನೇಶ ಸರಸಕೀರ್ತಿ ವಿಲಾಸ ಸ್ಮರಹರ ಸುರಾಧ್ಯಕ್ಷ ದುರಳ ದಾನವ ವಿನಾಶ ದುರಿತಹರ ನಿರ್ದೋಶ ಧರಣಿ ಸುರಜನರಕ್ಷ ಕರಿಚರ್ಮಧರಮಹೇಶ ಉರಗರಾಜ ವಿಭೂಷವರ ಗುರು ವಿರೂಪಾಕ್ಷ ಪುರಮಥನ ಗೌತಮೇಶ 5
--------------
ಕವಿ ಪರಮದೇವದಾಸರು
ಪುರಹರ ಗೌರಿವರ ಕರುಣಾಕರ ಕರುಣಿಸೆನ್ನ ಪ ಫಾಲನೇತ್ರ ಪಾಲಯ ಜಗ ನೀಲಕಂಠ ಮೇಲುಮಂದಿರ ಶೂಲಪಾಣಿ ಕಾಲಮರ್ದನ ಬಾಲನೆಂದು ಪಾಲಿಸೆನ್ನ 1 ದುರಿತರಹಿತ ಕರುಣಭರಿತ ಪರಮಚರಿತ ಸ್ಮರನ ಭಂಜಿತ ಉರಗಭೂಷ ವರಮಹೇಶ ಹರಿಯ ಪ್ರೇಮ ದೊರಕಿಸೆನಗೆ 2 ಒಡೆಯ ಶ್ರೀರಾಮನಡಿಯ ಧ್ಯಾನ ಪಿಡಿದು ಬಿಡದ ದೃಢಭಕುತಿ ಗಡನೆಕೊಡೆಲೊ ಮೃಡನೆಯಿದನು ದೃಢದಿ ಬೇಡ್ವೆ ಜಡಧಿಧರನೆ 3
--------------
ರಾಮದಾಸರು
ಪೊಗಳಲರಿಯೆನೆ ಲೋಕಮಾತೇ ನಿನ್ನ ಸೊಗಸಾದ ರೂಪುರೇಖೆಯ ಸಿಂಧುಜಾತೇ ನಿಗಮವಿಖ್ಯಾತೇ ಪ ಅಳಕ ನಿಚಯವು ಇಂದ್ರನೀಲಗಳು ತುಂಬಿಗಳು ತಳಪುಗಳು ಯೆಸೆವ ನಳಿನಗಳು ಬಾಳೆಗಳು ಚೆಲುವಹಿ ಸುನಾಸಿಕವು ಅಲಕೆ ಸುಮವು ಚಂಪಕವು ಅಲರ್ವಿಲ್ಲಿನ ಧನುವೋ ಪುರ್ಬುಗಳೋ ಪೊಳೆವರದನದಸಾಲುಗಳುಕಳಸಗಳೋ ಕುಂಡಲಗಳೋ ವಿಲಸದಧರವು ಬಿಂಬಫಲವೋ ನವವಿದ್ರುಮವೋ ಅಳವಟ್ಟ ಸವಿನುಡಿಯು ಗಿಣಿಯ ಸೋಲಿಪ ಪರಿಯೋ ಕಳೆ ಪೆರ್ಚಿದಾನನವೋ ಶಶಿಯೋ ಭಳಿರೆ ಮಳಯಜಗಂಧಿನಿ ಮಹೇಶರಿಪು ಜನನೀ 1 ಗಳವು ಶಂಖವು ಮೆರೆವ ಕದಪುಗಳು ಮುಖರಗಳು ಕುಸುಮ ಮಾಲೆಗಳು ಸುಲಲಿತವಯವವೋ ಲತಾವಳಿಗಳ ತರಂಗವೋ ತಳಿವ ಪೂಜಡೆಯೋ ಸುಲಿಪಲ್ಲವವೋ ತೊಳಗುವ ತೊಡೆಯೆನಲೋ ಸಲಿಲಜಾಗಾರೇ ಸಮ್ಮೋಹನಾಕಾರೇ ಸೌಂದರ್ಯಭರಿತೆ 2 ವರಜಂಘೆಗಳು ಪಂಚಶರನ ಶರಧಿಗಳೋ ಸರಸೀರುಹ ಕೆಂದಳಿರೋ ಚರಣಗಳು ನಖಗಳು ಸುರುಚಿರಾಂಬಕೀ ದಯಾಕಾರೇ ಶುಭಚರಿತೆ ವಿಖ್ಯಾತೆ ಪುರಹರ ಸುರೇಶ್ವರ ಸುಪೂಜಿತಾಂಘ್ರಿಸರೋಜೇ ಭಕ್ತ ಮಂದಾರೇ ವರವೇಲಾನಗರವಾಸಿ ವೈಕುಂಠಚನ್ನಿಗರಾಯನರಸಿ ಗುಣರಾಸಿ ದುರಿತಾಸಿ ನಮೋ ಪರಮಪದದಾಯಕಿಯೆ ಸೌಮ್ಯನಾಯಕಿಯೆ 3
--------------
ಬೇಲೂರು ವೈಕುಂಠದಾಸರು
ಪೊರೆ ಸುರೇಶ ಶ್ರೀಶ ಶ್ರೀನಿವಾಸ ದುರಿತವಿನಾಶ ಪರಮಪ್ರಕಾಶ ಪ ಅನುದಿನ ನಿಮ್ಮಯ ನೆನವಿನಘನಸುಖ ಕರುಣಿಸಿ ಎನ್ನ ಕನಿಕರದೊಡನೆ 1 ಚಿಂತೆನಿವಾರಣ ಚಿಂತೆನೀಗಿಸಿ ಎನ್ನ ಸಂತತದಿಂಪೊರೆ ಸಂತರ ಪ್ರಿಯಕರ 2 ಹರಣಹೋದರು ನಿಮ್ಮ ಚರಣಭಕ್ತಿಯನು ಮರೆಯದದಟ ಮಿಗೆ ಕರುಣಿ ಶ್ರೀರಾಮ 3
--------------
ರಾಮದಾಸರು
ಪೊರೆದ್ಯಾಕೋ ಸೀತಾನಾಥ ತಂದೆ ಮಂದರಧರ ಎನ್ನೊಳ್ದಯ ಮಾಡಲೊಲ್ಲ್ಯಾಕೋ ಸೀತಾನಾಥ ಪ ಕರಿರಾಜ ನಿಮ್ಮಯ ಚರಣ ಸರೋಜಕ್ಕೆ ಸೀತಾನಾಥ ಹರಿ ಬರೆದೋಲೆ ನಿನ್ನನು ಕರೆಕಳುಹಿದನೇನೊ ಸೀತಾನಾಥ ತರುಣಿ ದ್ರೌಪದಿ ತನ್ನ ಅವಮಾನಕಾಲಕ್ಕೆ ಸೀತಾನಾಥ ಸಿರಿವರ ನಿನ್ನ್ವೊಯ್ಕುಂಠಕೆ ತಾರು ಕೊಟ್ಟಿರ್ದಳೇ ಸೀತಾನಾಥ 1 ಕಂಬದಿ ಬಾರೆಂದಂಬುಧಿಗೆ ಬಂದ್ಹೇಳ್ದನೇ ಸೀತಾನಾಥ ಡೊಂಬೆ ಮಾಡುವ ದೂರ್ವಾಸಮುನಿಯಂದು ಸೀತಾನಾಥ ನಿನ್ನ ಬೆಂಬಲಿಟ್ಟು ಅಂಬರೀಷ ವ್ರತಗೈದನೇ ಸೀತಾನಾಥ 2 ವರಧ್ರುವ ಧರೆಯೊಳು ಜನಿಸುವ ಕಾಲಕ್ಕೆ ಸೀತಾನಾಥ ದೇವ ಕರವ ಪಿಡಿದು ನಿಮ್ಮ ಜೊತೆಲಿ ಕರೆತಂದನೇ ಸೀತಾನಾಥ ಪರಮಪಾಪಿ ಅಜಮಿಳನಗೆ ಪದವಿಯು ಸೀತಾನಾಥ ದೇವ ಕರುಣಿಸಿದವನಿನಗೆ ನೆರವಾಗಿರ್ದನೇನೊ ಸೀತಾನಾಥ 3 ಛಲದ ರಾವಣನಳಿದು ವರವಿಭೀಷಣನಿಗೆ ಸೀತಾನಾಥ ಲಂಕ ಕರುಣಿಸಿ (ದಿವೈಕುಂ) ಠ ಬಾಗಿಲೊಳಿರ್ದನೇ ಸೀತಾನಾಥ ಸೀತಾನಾಥ ಅವ ಇಳೆಯೊಳು ನಿಮಗೆ ಪಕ್ಷದ ಗೆಳೆಯನೆ ಸೀತಾನಾಥ 4 ಹಿಂದಿನ ಹಿರಿಯರವರನು ದುರಿತದಿಂ ಸಲಹಿದಿ ಸೀತಾನಾಥ ಇದು ಚೆಂದವೆ ನಿನಗೆ ಕಂದನ ಬಿಡುವುದು ಸೀತಾನಾಥ ಕಂಟಕ ಬೇಗ ಬಯಲ್ಹರಿಸಯ್ಯ ಸೀತಾನಾಥ ರಂಗ ಸಿಂಧುಶಯನ ಮಮ ತಂದೆಯೇ ಶ್ರೀರಾಮ ಸೀತಾನಾಥ 5
--------------
ರಾಮದಾಸರು
ಪೊರೆಯದಿರುವರೇ _ ಶ್ರೀ ರಮಣಾ ಪ ದುರಿತಗಜಕೆ ನೀ ಪಂಚಾನನಾ ಅ.ಪ. ಸಿರಿಯ ಮದದಿ ನಾನರಿಯದೆ ಪೋದರೆ ಗರುಡಗಮನ ನೀ ಮರೆತುಬಿಡುವರೇ ಕರುಣಶರಧಿ ಸರಿ ಬಿರುದು ಪೊಳ್ಳಾಗದೇ ಚರಣಪಿಡಿವೆ ಪೊರೆ ಮರುತನೊಡೆಯ ಹರಿ1 ಪಾತಕಿ ಎಂಬುವ ನೀತಿಯನುಡಿದೊಡೆ ಪೂತರಮಾಡುವ ಖ್ಯಾತಿಯ ಬಿಡುವೆಯ ನಾಥನೆ ನಂಬಿದೆ ಕಾತರ ಪಡುತಿಹೆ ಪ್ರೀತಿಲಿ ಕಾಣಿಸು ಆರ್ತಿವಿದೂರ 2 ನಡಿಯುವ ಚರಣವು ಎಡುವುದು ಸಹಜವೆ ಮೃಡ ಭೃಗು ಭೀಷ್ಮರು ದುಡುಕಲಿಲ್ಲೆ ದೊರೆ ಮಿಡಕಿ ನಡುಗುತಿಹೆ ನಡೆವುದು ಜಗಬಿಡೆ ಕಡಲಶಯನ ಪಿಡಿ ಬಿಡದೆ ಕೊಡುತ ರತಿ 3 ಸಿರಿವಿಧಿ ಶಿವನುತ ಸ್ವರತ ಸ್ವತಂತ್ರನೆ ಶರಣರ ಪೊರೆಯುವ ವರಗುಣ ಭೂಷಣ ಅರಿಯೆನುಪಾಯವ ಶರಣುಶರಣೈಯ ಪರಮಪುರುಷ ಭಗಸರಸದಿ ನಲಿನಲಿ 4 ಸಾಕುವ ಬಿಂಬನೆ ನೂಕಿದೆ ಯಾತಕೆ ಹಾಕುತ ಮಂಕನು ಏಕಾಯತನ ನಾಕರೊಡೆಯ ಭವನೂಕುತ ಬೇಗನೆ ಸ್ವೀಕರಿಸೆನ್ನನು ಶ್ರೀ ಕೃಷ್ಣವಿಠಲಾ 5
--------------
ಕೃಷ್ಣವಿಠಲದಾಸರು
ಪೊರೆಯಲಿದು ಸಮಯ ಗೋವಿಂದ ದೇವ ಶರಣರಕ್ಷಕ ನೆಂಬ ಬಿರುದು ಮೆರೆದ ಮುಕುಂದ ಪ ಬಂಧನದ ಭವದೊಳಗೆ ನಾನೊಂದು ದಿನ ಸುಖವನರಿಯೆ ಮಂದ ಮತಿಯಲಿ ತೊಳಲಿ ಕಂದಿಕುಂದಿ ಮುಂದು ಗಾಣದೆ ಯಮನ ಬಂಧದೊಳು ಸಿಲುಕಿದನು ಮಂಧರಧರ ಕರುಣಸಿಂಧು ನೀ ಬಂದು 1 ಘೋರ ತಾಪವು ಬಂದು ಸಾರಿ ಎನ್ನನು ಮುಸುಕೆ ಭೋರ ನುರಿಯಲಿ ಬಳಲಿ ಚೀರಿಹಾರಿ ದುರಿತ ವಾರಿಧಿಯೋಳ್ ಬಿದ್ದು ಬಾಯಾರಿ ಮೊರೆಯಿಡುವೆ ನರಕಾರಿ ದಯತೋರಿ 2 ತಂಡತಂಡದಿ ವೈರಿಗಳು ಕೂಡಿ ಕಾಯದೊಳು ಅಂಡುಗೊಂಡೆನ್ನಳೆದು ತಂದು ಕೊಂಡು ಹಿಂಡು ಖಂಡವನು ಸುಟ್ಟುರುವಿ ನುಂಗುವರೆನುತ ಕಂಡು ಕೊಂಡಾನು ಸಾರಿದೆನಿಂದು ಬಂದು 3 ತರಳತನ ದಾಯಸದÀಲಿ ನೊಂದೆ ಮುನ್ನಬಲು ತರುಣಿಯರ ಸಂಗದಲಿ ಮರುಳಾದೆನು ಜರೆಬಂದು ಮುಸುಕಿ ಕಣ್ಗಾದೀ ಪರಿಯಭವ ಶರಧಿಯೊಳು ಮುಳುಗಿ ಮೊರೆಯಿಡುವ ಚಿನ್ಮಯನೆ 4 ಹಿಂಗದಿದು ಭಯವ ಪೇಳಲು ತೀರದೆನಗೆ ಶ್ರೀ ರಂಗನಿನ್ನಧೀನ ಜನವರಿಯಲೂ ಮಂಗಳಾತ್ಮಕ ವಾಯುಜನ ಕೋಣೆ ಲಕ್ಷ್ಮೀಶ ನಿನ್ನ ಡಿಂಗರಿಗನ ಕಾಯ್ವುದೀಗ ಸಮಯ ಕೃಪಾಳೋ 5
--------------
ಕವಿ ಪರಮದೇವದಾಸರು
ಪೊರೆಯೊ ಶ್ರೀಶನೆ ಸರುವ ಲೋಕ ಪೊರೆವನೆ ಪ ಅರಿತು ಅರಿಯದಂತೆ ನಾನು ಗರುವದಿಂದ ಮೆರೆದನಯ್ಯ ಅ.ಪ ಅರುಣ ಉದಯದಲ್ಲಿ ಎದ್ದು ಹರಿಯೆ ನಿನ್ನ ಸ್ಮರಣೆ ಬಿಟ್ಟು ಗೊರಿಕೆ ಹೊಡಿದು ನಿದೆÀ್ರಮಾಡಿ ದುರಿತದಲ್ಲಿ ಪೊರಳುವವನ 1 ಕುತುಬ ಕಾಲದಲ್ಲಿ ಬಂದ ಅತಿಥಿಗಳನು ಜರೆದು ನೂಕಿ ಮಿತಿಯ ಮೀರಿ ಸವಿಯುತ ಪರ- ಗತಿಯ ದಾರಿ ಕಾಣದವನ 2 ದಾನಧರ್ಮ ಕೇಳಬಂದ ಮಾನವಂತ ಜನರ ಬಹಳ ಹೀನ ಮಾತಿನಿಂದ ಬೈದ ಜ್ಞಾನರಹಿತನಾದ ನರನ 3 ರೊಕ್ಕವಿರುವದೆಂದು ಬಹಳ ಸೊಕ್ಕಿನಿಂದ ಬಡವರನ್ನು ಲೆಕ್ಕಿಸದೆ ಮಾತನಾಡಿ ಧಿಕ್ಕರಿಸಿದ ಅಧಮ ನರನ 4 ಪಟ್ಟದರಸಿಯಿರಲು ಅವಳ ಬಿಟ್ಟು ಪರರ ಸತಿಯ ಬಯಸಿ ಅಟ್ಟಹಾಸದಿಂದ ನಗುತ ಕೆಟ್ಟು ಹೋದ ಭ್ರಷ್ಟ ನರನ 5 ಎಷ್ಟು ಮಾಡಲೇನು ಎಳ್ಳಿ ನಷ್ಟು ಸುಖವ ಕಾಣಲಿಲ್ಲ ಇಷ್ಟ ಮಿತ್ರ ನೀನೆಯೆಂದು ಗಟ್ಟಿಯಾಗಿ ತಿಳಿದುಕೊಂಡೆ 6 ಶ್ರಿಷ್ಟಿಗೊಡೆಯನು ರಂಗೇಶ- ವಿಠಲನೆಂಬ ಮತಿಯ ಎನಗೆ ಎಷ್ಟು ಮಾತ್ರ ಕೊಟ್ಟು ಸಲಹೊ ಕೆಟ್ಟ ಮೇಲೆ ಬುದ್ಧಿ ಬಂತು 7
--------------
ರಂಗೇಶವಿಠಲದಾಸರು
ಪ್ರಭು ಪಾಂಡುರಂಗ ವಿಠಲ | ಅಭಯಪ್ರದಾತಾ ಪ ಇಭವರದ ನೀನಾಗಿ | ಪೊರೆಯ ಬೇಕಿವನಾ ಅ.ಪ. ಮರ್ಮಗಳ ನರಿಯದಲೆ | ಕರ್ಮೂನುಭವದೊಳಗೆಪೇರ್ಮೆಯಲಿ ಸಿಲ್ಕಿ ಬಲು | ನೊಂದಿಹನೊ ಬಹಳಾಧರ್ಮಕೃದ್ಧರ್ಮಿ ಹರಿ | ಧರ್ಮಸೂಕ್ಷ್ಮವ ತಿಳಿಸಿನಿರ್ಮಮನ ಮಾಡಿವನ | ಕರ್ಮನಾಮಕನೇ 1 ಮಧ್ವರಾಯರ ಕರುಣ | ಬದ್ಧ ನಿರುವನು ಈತಸಿದ್ದಾಂತ ತತ್ವಗಳು | ಬುದ್ದಿಗೇ ನಿಲುಕೀಅದ್ವಯನು ನೀನೆಂಬ | ಶುದ್ಧಬುದ್ಧಿಯನಿತ್ತುಉದ್ಧಾರಮಾಡೊ ಹರಿ | ಕೃದ್ಧಖಳಹಾರೀ 2 ನಾನು ನನ್ನದು ಎಂಬ | ಹೀನಮತಿಯನು ಕಳೆದುನೀನು ನೀನೇ ಎಂಬ | ಸುಜ್ಞಾನವಿತ್ತುದಾನವಾರಣ್ಯ ಕೃ | ಶಾನು ಶ್ರೀ ಹರಿಯೇಸಾನುರಾಗದಿ ಪೊರೆಯೊ | ದೀನವತ್ಸಲ್ಲಾ 3 ಹರಿ ನಾಮ ವೆಂತೆಂಬೊ | ವಜ್ರಕವಚವತೊಡಿಸಿದುರಿತಾಳಿ ಅಟ್ಟುಳಿಯ | ದೂರಗೈ ಹರಿಯೇಸರುವ ಕಾರ್ಯಗಳಲ್ಲಿ | ಹರಿಯು ಓತಪ್ರೋತನಿರುವ ನೆಂಬುದ ತಿಳಿಸಿ | ಪೊರೆಯ ಬೇಕಿವನಾ 4 ಪಾದನಾತ್ಮಕನೆನಸಿ | ಪಾವ ಮಾನಿಯ ಪ್ರೀಯಧೀವರನೆ ಶ್ರೀವರನೆ | ಕಾವ ಕರುಣಾಳುಗೋವುಗಳ ಕಾವ ಗುರು | ಗೋವಿಂದ ವಿಠಲನೆನೀವೊಲಿಯದಿನ್ನಿಲ್ಲ | ದೇವ ದೇವೇಶಾ 5
--------------
ಗುರುಗೋವಿಂದವಿಠಲರು
ಪ್ರಾಣಕ್ಕೆ ಕಡೆಗಾಲ ಬಂದಿತೋ ಶಿವ ಶಿವ ಇನ್ನೇನಿನ್ನೇನು ಬೋಣನ ಸಗದ್ದೆಯೊಳಿರುತಿದೆ ನಾಡಿನಲಿನ್ನೇನಿನ್ನೇನು ಪ ಬಂತು ಇನ್ನೇನಿನ್ನೇನು ಮನೆಯೊಳು ಸಿಕ್ಕಿದೆ ಜಾರಲಿ ಕಣಿಯಿಲ್ಲವಿನ್ನೇನಿನ್ನೇನು ದನ ಕರುಗಳ ನೊಂದ ನುಳಿಸದೆ ವೈದ್ಯರು ಇನ್ನೇನಿನ್ನೇನು ಜನರೆಲ್ಲ ಕೈಸೆರೆಯನು ಸಿಕ್ಕಿ ಹೋಯಿತು ಇನ್ನೇನಿನ್ನೇನು 1 ಅಂಗಳದೊಳು ಪಾದವಿಕ್ಕೀತು ಜನರಿಗೆ ಇನ್ನೇನಿನ್ನೇನು ಭಂಗಾರವ ತನ್ನಿರೆಂದು ಝಂಕಿಸಿದರು ಇನ್ನೇನಿನ್ನೇನು ಭಂಗಪಡುವ ಕಾಲಬಂತು ಮಾನವರಿಗೆ ಇನ್ನೇನಿನ್ನೇನು ಅಂಗನೆಯ ಹಿಡಿದೆಳೆದು ಸುಲಿದರು ಇನ್ನೇನಿನ್ನೇನು2 ಉಡಿಗೆ ತೊಡಿಗೆಯನ್ನು ಸೆಳೆದರು ಸತಿಯರ ಇನ್ನೇನಿನ್ನೇನು ಕಡಿದರು ಕೆಲರ ತೋಳ್ ತೊಡೆಗಳ ಶಿರಗಳ ಇನ್ನೇನಿನ್ನೇನು ಕಡಲಿಟ್ಟು ಹರಿದುದು ರಕ್ತ ಪ್ರವಾಹವು ಇನ್ನೇನಿನ್ನೇನು ಕಡುಪಿಂದೆ ಕಾಲ್‍ಕೈಗೆ ಮುರವಾಳವಿಕ್ಕಿದರಿನ್ನೇನಿನ್ನೇನು 3 ಸುಲಿದರು ಚಿನ್ನ ಚಿಗುರು ಬೆಳ್ಳಿ ವಸ್ತುವ ನಿನ್ನೇನಿನ್ನೇನು ಹೊಳಲಿಗೆ ಬೆಂಕಿಯ ನಿಕ್ಕಿದರಲ್ಲಲ್ಲಿ ಇನ್ನೇನಿನ್ನೇನು ಉಳಿದೆನು ಇನ್ನೇನಿನ್ನೇನು ಜಲಜಾಕ್ಷ ನಿನ್ನಯ ಕರುಣ ಕಟಾಕ್ಷದಲಿನ್ನೇನಿನ್ನೇನು 4 ಹಿಂದಂಬರೀಶ ಗಜೇಂದ್ರನ ಕಾಯ್ದಂತೆ ಇನ್ನೇನಿನ್ನೇನು ಇಂದಿನ ದುರಿತವ ಪರಿಹರಿಸಿದೆ ನೀನು ಇನ್ನೇನಿನ್ನೇನು ಬಂಧಿಸಿ ಹೊಡೆದ ಗೋಕುಲವನು ತಂದಿತ್ತೆ ಇನ್ನೇನಿನ್ನೇನು ಮಂದ ಮಾರುತ ನಣುಗನ ಕೋಣೆ ಲಕ್ಷ್ಮೀಶ ಇನ್ನೇನಿನ್ನೇನು 5
--------------
ಕವಿ ಪರಮದೇವದಾಸರು
ಪ್ರಾಣನ ನೋಡಿರೈ ಮುಖ್ಯಪ್ರ್ರಾಣನ ಪಾಡಿರೈ ಪ. ಕ್ಷೋಣಿಯೊಳಗೆ ಎಣೆರಹಿತ ಪಾವನಚರಿತ ಸದ್ಗುಣಭರಿತಅ.ಪ. ಅಂಜನೆ ಸುತನೊ ಮಹಾ ಅದ್ಭ್ಭುತನೊತರÀಣಿ ಮಂಡಲಕೆ ಮುಟ್ಟಿಹಾರಿದ ಬಲದ ಶ್ರುತಿಯೊ ವಿಕ್ರಮಗತಿಯೊಸುರರಾಯುಧ ನೆಗ್ಗಿಸಿದ ಕಪಿಯಗ್ರಣಿಯೊ ವಜ್ರದ ಖಣಿಯೊಶರಣ ವಂದಿತ ಚರಿತ ಮೂರ್ಲೋಕ ಗುರುವೊ ಕಲ್ಪತರುವೊ1 ರಾಮ ಪದಾಂಬುಜ ಬಿಂಬಪರಾಗ ಮಧುಪನೊ ದೇವಾಧಿಪನೊತಾಮಸ ರಾವಣನೆದೆಗೊತ್ತಿದ ಈ ಕರವೊ ಸಿಡಿಲಬ್ಬರವೊಪ್ರೇಮದಿ ರಣದೊಳಗ್ಹಾರಿ ರಥವನೊದ್ದ ಮಾರುತಿಯೊ ಪುಣ್ಯ ಮೂರುತಿಯೊರೋಮಕೆ ಸಿಲ್ಕದ ಹನುಮನ ಬಾಲದ ಸರಳೊ ದೈತ್ಯರಿಗುರುಳೊ 2 ಪಾದ ಪಡೆದಂಥ ಪದವೊ ಸಾಗರ ಮದವೊನೆನೆಯಲು ದುರಿತನಿವಾರಣ ಕರುಣಾವಾರಿಧಿಯೊ ಭಕ್ತರ ಸುಧೆಯೊಅನುದಿನದಲಿ ಹಯವದನನ ನೆನೆಯುವ ದಯವೊ ಗತಿ ಆಶ್ರಯವೊ3
--------------
ವಾದಿರಾಜ
ಪ್ರಾಣನ್ನೋಡೀರೇ ಮುಖ್ಯ ಪ್ರಾಣನ್ನೋಡಿರೇ ಪ ಕ್ಷೋಣಿಯೊಳಗ ಸುಖ ಬೀರುವ ಪಾದನ ಚರಿತಾ ಸದ್ಗುಣ ಭರಿತಾ ಅ.ಪ. ನರಲೀಲೆಯಲವ - ತರಿಸದ ಅಂಜನಿ ಸುತ-ನೊ ಮಹಾದ್ಬುತನೋ ಮಲೆಯೊ ವಿಕ್ರಮ ಸ್ಥಿತಿಯೋ 1 ಸುರರಾಯುಧವನೆ ಲೆಕ್ಕಿಸ ಕಪಿ ಯಾಗ್ರಣಿಯೊ ವಜ್ರದ ಖಣಿಯೋ ಶರಣರ ವಾಂಛಿತ ಪೂರಿಪ ಮೂಲೋಕ ಗುರುವೋ ಕಲ್ಪ ತರುವೋ2 ರಾಮ ಪದಾಂಬುಜ ಕೊಂಬ ಪರಾಗ ಮಧುಪನೋ ದೇವಾಧಿ ಪನೋ ಪ್ರೇಮದಿ ರಣದಲಿ ಹರಿರಥವಾದ ಮೂರುತಿಯೋ ಪುಣ್ಯ ಮೂರುತಿಯೋ3 ತಾಮಸ ರಾವಣ ನೆದಿಗೊತ್ತದ ಕರಮೋ ಸಿಡಿಲದ ಧರಮೋ ಮ್ಯೋಮಕ ಮೀರುವ ಹನುಮನ ಬಾಲದ ಸರುಳೋ ದೈತ್ಯರ ಉರುಳೋ4 ಕ್ಷಣದಲಿ ಸಂಜೀವನ ಗಿರಿ ತಂದಿಹ ಪದವೋ ಸಾಧುರ ಮುದಮೋ ವನಜ ಭವನ ಪದವಿಯ ಪಡಕೊಂಡಾ ತಪಮೋ ತಾ ಅಪರೂಪಮೋ 5 ದುರಿತ ನಿವಾರಿಪ ಕರುಣಾ ನಿಧಿಯೋ ಭಕ್ತರ ಸುಧೆಯೋ ಅನುದಿನ ಮಹಿಪತಿ ನಂದನ ಸಲಹುವ ದಯಮೋ ಗತಿ ಆಶ್ರಯಮೋ ||6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪ್ರಾಣಸನ್ನುತ ನರಸಿಂಹ | ವಿಠಲ ಪೊರೆ ಇವಳಾ ಪ ಕಾಣೆನಾನನ್ಯರನು | ಕಾರುಣ್ಯ ಮೂರ್ತೇ ಅ.ಪ. ವಾಸುದೇವ ಹರೀ |ಕೇಶವನೆ ಪೂಜಿಸೀ | ವೇಷದಲಿ ಸೂಚ್ಯ ಪರಿಆಶಿಷವನಿತ್ತು ಉಪ | ದೇಶ ಮಾಡಿಹೆನೋ 1 ಕಾಮಾರಿ ಸಖಕೃಷ್ಣ | ಕಾಮಿತವನೇ ಇತ್ತುಭಾಮಿನಿಯ ಸಲಹೆಂದು | ನೇಮದಲಿ ಬೇಡ್ವೇಶ್ರೀ ಮನೋಹರ ಹರಿಯೆ | ದುರಿತಾಳಿ ಪರಿಹರಿಸಿನಾಮಸ್ಮøತಿ ಸುಖ ಕೊಟ್ಟು | ಭವವನುತ್ತರಿಸೋ 2 ಪಾದ ಮಾನಿಯ ಪ್ರೀಯಪಾವನ್ನ ತವನಾಮ | ನಾಲಿಗ್ಯೆ ಒದಗೀಜೀವನದಿ ಸಂತೋಷ | ಒದಗಲೀ ಎನುತ ಹರಿದೇವ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು