ಒಟ್ಟು 18608 ಕಡೆಗಳಲ್ಲಿ , 136 ದಾಸರು , 8432 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾ ವರಯೋಗಿ ರಾಯಗೆ | ಮಂಗಳಾ ಪರಮ ಅವಧೂತಗೆ |ಮಂಗಳಾ ಪರಮಾತ್ಮ ಶ್ರೀ ಗುರು ಸಿದ್ಧ ಬಸವಂಗೆ | ಜಯ ಜಯ ಮಂಗಳಾ ಪ ಆದಿ ಮಧ್ಯಾವಸಾನವಿಲ್ಲದ ನಾದ ಬಿಂದು ಕಲಾ ಶೂನ್ಯಗೆ |ಸಾಧಿಸುವ ಸಿದ್ಧಾಂತ ಅಗಣಿತವಾದ ಬ್ರಹ್ಮವನು | ವೇದ ವೇದಾಂತವ ವಿಚಾರಿಸಿ ನಾದ ಋಷಿ ಅಪಾರ ಚಿಂತ್ಯನು | ಮೇದಿನಿಯ ಭಕ್ತರನುಗ್ರಹಕಿತ್ತ ಬಂದ ಬಸವರಾಜಯೋಗದಲಿ 1 ಮತ್ಸ್ಯ ಕೂರ್ಮ ವರಾಹನಾದ ಮಾಧವಗೆ 2 ಮಾಧವ ಕಲಿಯೊಳಗವತರಿಸಿದ ಬಳಿಕಾ ಬಾಲಕೃಷ್ಣಂಗೆ 3 ನೋಡಿದರೆ ದುರಿತವನು ಕೆಡುವನು, ಬೇಡಿದರೆ ಸಾಯೋಜ್ಯನೀವನು ಮಾಡಿ ಪಾದದ ತೀರ್ಥಕೊಂಡಡೆ ಮರಳಿ ಪುಟ್ಟಗಡ | ಖೇಡನಾಗದೆ ನಾಮಕೀರ್ತಿಯ ಮಾಡು ಮರುಳೆ ಆದಿಪುರುಷನರೂಢಿಯೊಳು ಈಡ್ಯಾಡಿ ಮೆರೆದ ಬಸವರಾಜಯೋಗದಲಿ 4 ಇಂತು ಭಕ್ತರ ಭಕ್ತಿಗೋಸುಗ ಅಚಿಂತ್ಯ ಮಹಿಮನು ಶರೀರವತಾ- ನಂತು ಧರಿಸಿಹನಿಲ್ಲದಿದ್ದಡೆ ದೇಹ ತಾನೇ ತಾ |ಕಂತು ಹರನವತಾರವಲ್ಲದೆ ಭ್ರಾಂತಿ ಬಿಡಿಸಿದ ಕೊಳಕೂರದಲಿಸಂತತವೆ ನೆಲೆಸಿಹನು ಬಸವರಾಜಯೋಗದಲಿ 5
--------------
ಭೀಮಾಶಂಕರ
ಮಂಗಳಾಂಗ ಮನ್ನಿಸು ತಪ್ಪನು ರಂಗನಾಥ ರಕ್ಷಿಸೈ ತಂದೆ ಯೆನ್ನನು ಪ ಅಮಿತ ಕಮಲ ರವಿತನಾಗದ ಮನುಜನೇಕೆ1 ಕಣ್ಣು ಇಲ್ಲದ ರೂಪು ಯಾಕೆ | ರಂಗನಾಥ ಹೊನ್ನು ಇಲ್ಲದ ಬಾಳು ಯಾತಕೆ | ಮುನ್ನ ಮೂಗು ಇಲ್ಲದ ಮೊಗವು ಮಣ್ಣು ತಿಂದು ಹೋದರೇನು ಅಣ್ಣ ನಿನ್ನ ಭಕುತಿ ಇಲ್ಲದ ಸಣ್ಣ ಮನುಜ ಸತ್ತರೇನು 2 ದಾನವಿಲ್ಲದ ಧನವಿದೇತಕೆ | ರಂಗನಾಥ ಜ್ಞಾನವಿಲ್ಲದ ವಿದ್ಯೆ ಯಾತಕೆ ಆಣೆಯಿಲ್ಲದ ಅರಸು ತಾನು ಅಡವಿಪಾಲು ಆದರೇನು ದೀನಬಂಧು ನಿನ್ನ ನಂಬದ ಮಾನಹೀನ ಮನುಜನೇಕೆ 3 ಮಕ್ಕಳಿಲ್ಲದ ಮನೆಯು ಯಾತಕೆ | ರಂಗನಾಥ ಅಕ್ಕರಿಲ್ಲದ ಊಟ ಯಾತಕೆ ಸೊಕ್ಕಿ ನಡೆವ ಬಂಟನೇಕೆ ಮಿಕ್ಕು ಮೀರ್ವ ಶಿಷ್ಯನೇಕೆ ರಕ್ಕಸಾರಿ ನಿನ್ನ ಸೇರದ ಸೊಕ್ಕು ನರ ಜನ್ಮವೇಕೆ ? 4 ಕಾಕು ಮಾಡಿಯೆ ವೈಕುಂಠ ನಗರದೊಡೆಯ ನಾರಸಿಂಹ ಏಕಭಕ್ತಿಯಿಂದಲಿರುವೆ ಏಕೆ ಕೈಯ ಬಿಡುವೆ ದೊರೆಯೆ 5
--------------
ಅನ್ಯದಾಸರು
ಮಂಗಳಾಚರಣ ಜಯ ಜಯ ರಮಾಕಾಂತ ಜಯತು ದೈತ್ಯಕೃಪಾಂತ ಜಯ ಸರ್ವ ವೇದಾಂತ ಜಯತು ನಿಶ್ಚಿಂತಾ ಪ. ಬ್ಯಾಡ ವೇಷವ ತಾಳಿ ಓಡಿಸುತ ತುರಗವನು ಹೂಡೆ ಪದ್ಮಾವತಿಯ ನೋಡಿ ನಸುನಗುತ್ತ ಜೋಡಾತು ತನಗೆಂದು ಗಾಡಿಕಾರನ ಮಾತ- ನಾಡಿ ಕ್ರೋಡಾಲಯಕೆ ಓಡಿ ಬಂದವನೆ 1 ತಾಯಿ ಬಕುಳೆಯ ಕಳುಹಿ ಮಾಯಕದ ಕೊರವಂಜಿ ಕಾಯದಿಂದಾಕಾಶ ರಾಯನರಮನೆಗೆ ಜೋಯೆಂದು ಪೋಗಿಸದುಪಾಯಗಳ ನಡಿಶಿ ತ- ನ್ನಾಯ ಕೈಕೊಂಡು ಕಮನೀಯ ಮೂರುತಿಯೆ 2 ಶುಕಮುನಿಯ ಮುಖದಿಂದ ಸುಖವಾರ್ತೆಯನು ಕೇಳಿ ಸಕಲ ದೇವೋತ್ತಮರ ನಿಕರವನು ನೆರಹಿ ಅಕಳಂಕ ಲಗ್ನದಲಿ ಸುಕವೋಲೆಗೊಲಿದುರಗ ಶಿಖರಿಯಲಿ ನೆಲೆಯಾದ ಲಕುಮಿವಲ್ಲಭನೆ ಜಯ ಜಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳಾರತಿ ಎತ್ತುವೆ ಮಾರಮಣಗೆ ಪ ಅಂಗಜ ಜನಕ ಶುಭಾಂಗ ಶ್ರೀರಂಗಗೆ ಅ.ಪ ವೈರಾಜ್ಯ ಸ್ಯಾರಾಜ್ಯ ಮಹ ಪರಮೇಷ್ಠಿ ರಾಜ್ಯ ಸಾರ್ವಭೌಮ ನೀನೆಂದು 1 ವೇದೋಕ್ತ ಮಂತ್ರ ಪುಷ್ಪಾಂಜಲಿಯಿಂದ ನಿನ್ನಯ ಪಾದಕ್ಕೆರಗಿ ಪುನಃ ಪ್ರಾರ್ಥನೆಗೆಯ್ಯುತ 2 ಪಾಪಿಗಳೊಳಗತಿ ಪಾಪಿಯು ನಾನೆನ್ನ ತಾಪತ್ರಯವ ಬಿಡಿಸಿ ಕಾಪಾಡು ನೀನೆಂದು 3 ಪದಜಾನುಕರಗಳಿಂ ಉದರ ಹೃದಯದಿ ಶಿ- ರದಿ ದೃಷ್ಟ್ಯಮನಸವಚನಸಾಷ್ಟಾಂಗದಿಂ ಮಣಿದು 4 ಕಂದರ್ಪ ಕೋಟಿ ಲಾವಣ್ಯ ಸರ್ಪಶಯನ ನಮ್ಮಪ್ಪಾ ತಿಮ್ಮಪ್ಪನೆಂದು 5 ವಾಹನ ವಸ್ತೂಗಳರ್ಪಿಸಿ ಸರ್ವೋತ್ತಮ ನೀನೆಂದ್ಹೊಗಳಿ 6 ಅಪರಾಧವೆಮ್ಮಿಂದಲಾಗುವುದೆಲ್ಲ ಕ್ಷಮಿಸು ಕಪಟನಾಟಕ ಸೂತ್ರಧಾರೀ ಗುರುರಾಮವಿಠಲ 7
--------------
ಗುರುರಾಮವಿಠಲ
ಮಂಗಳಾರತಿ ನಮ್ಮ ರಂಗನಾಥನಿಗೆ ಜಂಗಮಾರ್ಚಿತಪಾದ ಕಲುಷವಿಭಂಗರಂಗನಿಗೆ ಪ ಜಾಜಿಯ ಪುಷ್ಪಂಗಳಂ ದಿವ್ಯ ಸ ಭಾಜ ಭಜಂತ್ರಿಗಳಿಂ ಮೂಜಗದೊಯನೆ ಮುಕ್ತಿಕೃಪಾಕರ ಶ್ರೀಜಯವೆನ್ನುತಲಿ 1 ವಾರುಧಿ ಶಯನನಿಗೆ ದಿವ್ಯ ಸು ಚಾರುಸನಯನಗೆ ನಮ್ಮ ನಾರಿಯರೆಲ್ಲರು ನಮಿಸುವ ಲಕ್ಷ್ಮೀ ನಾರಾಯಣನಿಗೆ 2 ರಾಧಾರುಕ್ಮಿಣಿ ಜಯಪತಿಗೆ ಸಂತೆ ಸರಗೂರೊಳಗಿಹ ನಮ್ಮಯ ಶ್ರೀ ಗುರು ತುಳಸೀರಾಮನಿಗೆ 3
--------------
ಚನ್ನಪಟ್ಟಣದ ಅಹೋಬಲದಾಸರು
ಮಂಗಳಾರತಿ ಮಾಡಿ ಭಾವದಿಂದ ಮಂಗಳ ಮಹಿಮನಾದ ದೇವಾದಿ ಶ್ರೀದೇವಗೆ ಧ್ರುವ ನೋಡಿರೋ ಬ್ರಹ್ಮಾನಂದ 1 ಕಂಗಳದೆರೆದು ನೋಡಿ ಮಂಗಳಾರತಿ ಪಾಡಿ 2 ಆರ್ತ ಭಾವದಾರತಿ ಅರ್ತು ಮಾಡಿ ನಿತ್ಯಪ್ರತಿ 3 ಸೇವೆ ಇದೆ ಬಲು ಸುಖ ಪಾವನೆಗೈಸುವ ಕೌತುಕ 4 ದೀನ ಮಹಿಪತಿ ಸ್ವಾಮಿ ಭಾನುಕೋಟಿ ತೇಜಗಿನ್ನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಾರತಿ ಮಾಡಿ ಮಂಗಳ ಮಹಿಮಾನಂಗಜನಕ ಹರಿ ತುಂಗವಿಕ್ರಮಗೆ ಮಂಗಳಾರತಿಯ ಧ್ರುವ ಅಗಣಿತಗುಣ ಅಗಮ್ಯಗೋಚರ ಸುಗಮದಲಾಡುವ ನಿಗಮೋದ್ಧಾರಗೆ 1 ಬಗೆದು ಬೆನ್ನಿಲಿ ಭಾರವ ನೆಗೆದಿಹ ನೋಡಿ ಭಗತವತ್ಸಲ ಸ್ವಾಮಿ ನಗಧರಗೆ 2 ಜಗತಿಯ ಕದ್ದೊಯ್ದ ಸುರನ ಸೀಳಿದ ಜಗದೋತ್ತಮನಾದ ಜಗದೋದ್ಧಾರಗೆ 3 ದುರುಳದೈತ್ಯನ ಬೆರಳುಗುರಿಲಿ ಸೀಳಿದ ತರಳ ಪ್ರಹ್ಲಾದಗೊಲಿದ ನರಹರಿಗೆ 4 ಬಲಿಯ ದಾನವ ಬೇಡಿ ನೆಲೆಗೆ ಅಳೆದುಕೊಂಡು ಬಲಿಯ ಬಾಗಿಲ ಕಾಯ್ದ ಶ್ರೀನಿಧಿಗೆ 5 ಪರಶುಪಿಡಿದು ಕ್ಷತ್ರಿಯರ ಸಂಹರಿಸಿದ ಪರಮಪುರುಷನಾಗಿಹ ತಪೋನಿಧಿಗೆ 6 ದೇವತಿಗಳ ಸೆರೆಯ ಬಿಡಿಸಿದ ದೇವನು ಪಾವನಮೂರುತಿ ಅಹಲ್ಯೋದ್ದಾರಗೆ 7 iÀುದುಕುಲತಿಲಕ ವಿದುರವಂದಿತನಾದ ಬುಧಜನಪಾಲ ಮದನಮೋಹನಗೆ 8 ಸುಳಿದು ತ್ರಿಪುರದಲಿ ಹಳಿದು ನಾರೆರ ವ್ರತ ಹೊಳೆವದೋರಿದ ಚಲುವಿಲಿ ಮಹಾಮುನಿಗೆ 9 ಮುದ್ದು ತೇಜಯನೇರಿ ತಿದ್ದಿ ರಾವುತನಾದ ಮಧ್ವಾಂತ್ರದ ಮಹಿಪತಿ ಪ್ರಾಣಪತಿಗೆ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳಾರತಿಎತ್ತಿ ಮಾಮನೋಹರನಿಗೆ ಪ ಅಂಗನೆಯರೆಲ್ಲ ಬಂಗಾರದ ತಟ್ಟೆಯಲ್ಲಿ ಅ.ಪ ವೇದಚೋರನ ಕೊಂದು ಭೂಧರವನು ಪೊತ್ತು ಮೇದಿನಿಯನು ಎತ್ತಿ ಕಂಬದಿ ಬಂದವಗೇ 1 ಭೂಮಿದಾನವ ಕೇಳಿ ಭೂಮಿಪರನು ಸೀಳಿ ಭೂಮಿಜಾತೆಯನಾಳಿ ಭೂ ಭಾರವಳಿದವಗೆ 2 ಮುದ್ದುಕುದುರೆಯ ಏರಿದ ಗುರುರಾಮ ವಿಠಲಗೆ 3
--------------
ಗುರುರಾಮವಿಠಲ
ಮಂಗಳಾರತಿಯ ಬೆಳಗೆ ಮಧುಸೂದನಗೆ ದಿವ್ಯ ಮಂಗಳಾರತಿಯ ಬೆಳಗೆ |ಪ|| ಮಂದರ ಕೃಷ್ಣ ಮಚ್ಛನಾಗಿ ವೇದವ ತಂದಿಟ್ಟು ಅಮೃತ ಬೀರಿದಂಥ ಹರಿಗೆ1 ಎತ್ತಿ ತಂದು ಹರವಿ ಕೃಷ್ಣ ಸುತ್ತಿ ಒಯ್ದ ಸುರುಳಿಭೂಮಿ ಸುತ್ತಿ ಒಯ್ದ ಸುರುಳಿ ಭೂಮಿ ಹೊಟ್ಟೆ ಬಗೆದು ಕರುಳ ತನ್ನ ಕುತ್ತಿಗ್ಯಲ್ಲಿ ಧರಿಸಿದಾತಗೆ 2 ಕೂಸಿನಂತೆ ಬಂದು ಬೆಳೆದಾಕಾಶವ್ಹಿಡಿಯದೆ ಕೃಷ್ಣ ಕೂಸಿನಂತೆ ಬಂದು ಬೆಳೆದ ನಾಶಮಾಡಿ ಕ್ಷತ್ರಿಯರ ಪರಶುರಾಮನೆನಿಸಿದಾತಗೆ 3 ಕುಂಭಕರ್ಣನಣ್ಣ(ನ) ಹತ್ತು ರುಂಡ ಹಾರಿಸಿ ಕೃಷ್ಣ ಕುಂಭಕರ್ಣನಣ್ಣ(ನ) ಚೆಂಡನಾಡುತಲಿ ಕಾಳಿಂಗನ್ಹೆಡೆಯ ತುಳಿದ ಹರಿಗೆ4 ಬಟ್ಟೆ ತೊರೆದು ಬೌದ್ಧನಾಗಿ ಹತ್ತಿ ಹಯವನೇರಿ ಕೃಷ್ಣ ಬಟ್ಟೆ ತೊರೆದು ಬೌದ್ಧನಾಗಿ ದುಷ್ಟಕಲಿಯ (ಕೊಂದ) ಭೀಮೇಶಕೃಷ್ಣನಂಗ ಪೂಜಿಸುತಲಿ5
--------------
ಹರಪನಹಳ್ಳಿಭೀಮವ್ವ
ಮಂಗಳಾರತಿಯ ಮಾಡಿರೊ ಶ್ರೀನಿವಾಸಗೆ ಪ. ಸಂಗಸುಖದ ಭಂಗವೆಲ್ಲ ಹಿಂಗಿತೆಂದು ಹೊಂಗಿ ಮನದಿ ಅ.ಪ. ಘಟ್ಟಿಹೃದಯ ತಟ್ಟೆಯಲ್ಲಿ ಕೆಟ್ಟ ವಿಷಯ ಬತ್ತಿ ಮಾಡಿ ಶ್ರೇಷ್ಠ ಜ್ಞಾನ ತೈಲವೆರೆದು ವಿಷ್ಣುನಾಮ ಬೆಂಕಿ ಉರಿಸಿ 1 ಶ್ರದ್ಧೆಯಿಂದ ಎತ್ತಿ ಮನದ ಬುದ್ಧಿಪ್ರಕಾಶಗಳು ತೋರಿ ಎದ್ದ ಕಾಮಕ್ರೋಧಗಳನು ಅದ್ದಿ ಪಾಪಗೆದ್ದು ಮನದಿ 2 ತತ್ತ್ವಪ್ರಕಾಶಗಳ ತೋರಿ ಚಿತ್ತಮಾಯಕತ್ತಲೆಯನು ಕಿತ್ತುಹಾಕಿ ಹರಿಯ ಮೂರ್ತಿ ಸ್ವಸ್ಥ ಚಿತ್ತದಿಂದ ನೋಡಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳಾರುತಿ ತಂದು ಬೆಳಗಿರೆ | ಅಂಗನೇಯರು ರಂಗಗೇ ||ಅ|| ತುಂಗ ಮಹಿಮ ಶುಭಾಂಗ ಕರುಣಾ | ಪಾಂಗ ಶ್ರೀನರಸಿಂಗಗೇ ಅ.ಪ. ಪ್ರಳಯ ಜಲಧಿಯೊಳಾಲದೆಲೆಯಲಿ | ಮಲಗಿ ಬೆರಳು ಸವಿದಗೇಶ್ರೀಲತಾಂಗಿಯು ಸ್ತೋತ್ರ ಗೈಯ್ಯಲು |ಒಲಿದು ಜೀವರ ಸೃಜಿಸಿದವಗೆ 1 ಮೂಲಕಾರಣ ಮಾಡಿ ಪ್ರಕೃತಿಯ | ನಾಲಕ್ಕಿಪ್ಪತ್ತು ತತ್ವದಾಲೀಲೆಯಿಂದಲಿ ಸೃಜಿಸಿ ಬೊಮ್ಮನ ಚೆಲುವ ತನುವನೆ ಮಾಡ್ದಗೇ2 ಮತ್ತೆ ವಾರಧಿ ಶಯ್ಯನಾಗುತ | ತತ್ವಮಾನಿ ಬೊಮ್ಮನಪೆತ್ತು ತನ್ನಯ ಪೊಕ್ಕಳಿಂದಲಿ | ಕೀರ್ತಿಯನು ಪಡೆದಾತಗೇ 3 ನೀರೊಳಾಡಿ ನಗವ ನೆಗಹಿ | ಕೋರೆದಾಡೆಯ ತೋರ್ದಗೇನರಸಿಂಹಗೆ ದಾನ ಬೇಡ್ದಗೆ | ಧೀರ ಪರಶುರಾಮ ರಾಮಗೇ 4 ಗಿರಿಯ ನೆಗಹಿ ನಗಗಳ್ವೈರಿಯ | ಮರುಳು ಮಾಡಿದ ಚೆಲುವಗೇಬರಿಯ ಮೈಯ್ಯಗೆ ತುರಗನೇರಿದ | ಗುರು ಗೋವಿಂದ ವಿಠಲಗೇ 5
--------------
ಗುರುಗೋವಿಂದವಿಠಲರು
ಮಗಳೆ ಜಾನಕಿ ನಿನ್ನ ಸುಗುಣಸನ್ಮೋಹನ್ನ ಖಗಕುಲರನ್ನ ಮನೋರಮಣ ಮನೋರಮಣ ಕಾಂತ ಶ್ರೀರಾಮನ ಅಗಲದಿರು ಕಾಣೆ ಮರಿಯಾನೆ ಶೋಭಾನೆ 1 ಪತಿಯೇಳ್ವ ಮೊದಲು ಜಾಗ್ರತೆಯಾಗಿ ಯೆದ್ದು ಗೃಹ- ಕೃತ್ಯಕೆಲ್ಲಕ್ಕನುಸರಿಸಿ ಅನುಸರಿಸಿ ನಡೆ ನೀ ಮಗಳೆ ಹಿತವಾಗಿ ಬಾಳು ಪತಿಯೊಳು ಶೋಭಾನೆ 2 ಗಂಡನ ಮಾತಿಗೆ ದುರ್ಚಂಡಿಸದಿರು ಮಗಳೆ ಗಂಡನುಣ್ಣದ ಮೊದಲು ನೀ ಮೊದಲು ನೀನುಣ್ಣದಿರು ಪುಂಡರೀಕಾಕ್ಷಿ ಪುಣ್ಯರಾಶಿ ಶೋಭಾನೆ 3 ಮುಗುಳು ನಗೆಯ ಬೀರು ಜಗಳವ ಮಾಡದಿರು ಜಗದೊಳು ಕೀರ್ತಿಯುತಳಾಗು ಯುತಳಾಗು ಬಂಧುಗಳಲಿ ನೀ ಹಗೆಯ ಮಾಡದಿರು ಕೃಪೆದೋರು ಶೋಭಾನೆ 4 ಪಾದ ಹೊದ್ದಿ ಸೇವೆಯ ಮಾಡು ಸುದ್ಧ ಭಾವದೊಳು ನಡೆ ಮಗಳೆ ನಡೆ ಮಗಳೆ ನಿತ್ಯಸುಮಂಗಲೆ ಮುದ್ದಾಗು ಬಂಧು ಬಳಗಕ್ಕೆ ಶೋಭಾನೆ 5 ಅತ್ತೆಯ ಮಾತಿಗೆ ಪ್ರತ್ಯುತ್ತರ ಕೊಡದಿರು ಪ್ರತ್ಯೊಬ್ಬಳೆ ಸ್ಥಳದಿ ನಿಲದಿರು ನಿಲದಿರು ನೀರಜಗಂಧಿ ಸತ್ಯ ವಚನವನೆ ಸವಿಮಾಡು ಶೋಭಾನೆ 6 ಮೈದುನರನ್ನು ತನ್ನ ಮಕ್ಕಳೆಂಬಂತೆ ನೋಡು ಸಾಧುಭಾವದದಲಿ ನಡೆ ಮಗಳೆ ನಡೆ ಮಗಳೆ ಪಂಕ್ತಿಯಲಿ ಭೇದ ಮಾಡದಿರು ಕೃಪೆದೋರು ಶೋಭಾನೆ 7 ಕಂಡರೆ ಶಿಷ್ಟರ ದಂಡ ನಮಸ್ಕರಿಸು ಹಿಂಡು ದಾಸಿಯರ ದಣಿಸದಿರು ದಣಿಸದಿರು ಉತ್ತಮಳೆಂದು ಭೂ- ಮಂಡಲದಿ ಕೀರ್ತಿಪಡು ಪೂರ್ತಿ ಶೋಭಾನೆ8 ಚಂಡಿತನವ ನಿನ್ನ ಗಂಡನೊಳ್ಮಾಡದಿರು ಗಂಡಸರ ಮುಂದೆ ಸುಳಿಯದಿರು ಸುಳಿಯದಿರು ಸಂತತ ಸೌಖ್ಯ- ಗೊಂಡು ಬಾಳಮ್ಮ ಸೀತಾಭಾಮಾ ಶೋಭಾನೆ 9 ಕ್ಷಮೆಯಲ್ಲಿ ಧಾತ್ರಿಯುಂಬ ಕ್ರಮದಲ್ಲಿ ಮಾತೆ ಸುರತ ಸಮಯದಿ ವೇಶ್ಯಾ ತರುಣಿಯಳ ತರುಣಿಯಳ ತೆರದಿ ರಾಮನ ಸತಿಯಂ- ತೆ ಮಾಡವ್ವ ಸುಖಂ ಜೀವಾ ಶೋಭಾನೆ 10 ಲಕ್ಷ್ಮೀನಾರಾಯಣರಂತೆ ಸೀತಾರಾಮರು ನೀವು ಕುಕ್ಷಿ ಈರೇಳು ಜಗವನ್ನು ಜಗವನ್ನು ನಮ್ಮನ್ನು ಸರ್ವರ ರಕ್ಷಣ್ಯ ಮಾಡಿ ಸುಖಿಯಾಗಿ ಶೋಭಾನೆ 11
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳೆಂದು ಬೆಳಗಿರಾರುತಿ ರಂಗಗೇ ನೀಲಾಂಗಗೆ ಪ ತುಂಗವಿಕ್ರಮನಿಮಗಿ ಭೂವರದಗೆ ನರಮೃಗನಿಗೆ ಅ.ಪ ಬಾಲ ಭಾರ್ಗವ ರಾಮ ಮಾತುಳಕಾಲ ವೀತಚೈಲಗೆ | ಶೀಲ ಮೂರುತಿಯಾದ ಕಲ್ಕಿರೂಪಗೆ | ರಮೆಯರಸಗೆ 1 ಧುರದಿ ರವಿಸುತ | ಉರುಗಗಳವನು ಭರದಿ ಬಿಡೆ ಕಡು ಕರುಣದಿ ನರನರಧ ಧರೆಗೊತ್ತಿ ಸಲಹಿದ ಶೌರಿಗೆ ಮುರವೈರಿಗೆ 2 ವಟದ ವೃಕ್ಷದಿ ವಟುರೂಪಿಯಲಿ ಪವಳಿಸಿದ ಪರಮಾತ್ಮಗೆ | ತಟತಸನ್ನಿಭ ಶಾಮಸುಂದರವಿಠಲಗೆ ವಿಪಗಮನಗೆ 3
--------------
ಶಾಮಸುಂದರ ವಿಠಲ
ಮಂಗಳೆನ್ನಿರೆ ಉಮಾ ಮನೋಹರಗೆ ದಿವಾಂಗನೆಯರು ಬಂದು ಬೇಗನೆ ಪ ಛಂದದಾರುತಿ ತಂದು ಬೆಳಗಿರೆ ಇಂದುಧರಸುತ ಮಂದಜಾಸನಗೆ ಅ.ಪ. ಮೋದಬಡುತಲಿ ಮೋದಪುರ ನಿವಾಸ ಜನರಭಿಲಾಷೆ ಸಲಿಸುವ ಚಾರುನವಕುಶ ತೀರನದಿ ಧರ ಧೀರ ಸುಗುಣ ಸುಶಾಸ್ತ್ರ ಪೇಳ್ವಸುತನಾರ್ಯರಿಗೆ ಬಂದು ಬೇಗನೆ 1 ಸನ್ನುತ ಬ್ರಹ್ಮೇಶತಂದೆವರದಗೋಪಾಲವಿಠ್ಠಲನ ದಾಸನೆನಿಪಗೆ ಬಂದು ಬೇಗನೆ 2
--------------
ತಂದೆವರದಗೋಪಾಲವಿಠಲರು
ಮಂಗೀಶಾ ಮಂಗೀಶಾ ಮಮ ಪ್ರಾಣಲಿಂಗೇಶಾ ಶಿವಹರ ಪ ಕುಟುಂಬ ರಕ್ಷಕ ನೀನು ಎನಗೆ ಸಟೆಂಬ ಸ್ವತಂತ್ರವೇನು ಶಿವಹರ 1 ರಾಮನ ಹೃದಯದಿ ನಲಿದೆ ನೀ ಬಲು ಪ್ರೇಮದಿ ಲಕ್ಷ್ಮಣಗೊಲಿದೆ ಶಿವಹರ 2 ಬೆಳೆಸಿದೆ ಈ ಸಂಸ್ಥಾನಾ ಇಂದಿಗೆ ಉಳಿಸಿದೆ ಎನ್ನಭಿಮಾನಾ ಶಿವಹರ 3 ಎನಗಿನ್ಯಾವುದು ಬೇಕು ನಿನ್ನಯ ನೆನಹಿನೊಳಿರುವದೆ ಸಾಕು ಶಿವಹರ 4 ಕುಶಸ್ಥಲದೆಡೆಯಲಿ ನಿಂದಾ ಶ್ರೀಗುರು ಪಶುಪತಿ ವಿಮಲಾನಂದಾ ಶಿವಹರ 5
--------------
ಭಟಕಳ ಅಪ್ಪಯ್ಯ