ಒಟ್ಟು 8605 ಕಡೆಗಳಲ್ಲಿ , 133 ದಾಸರು , 4891 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟರಮಣ ವೇದಾಂತಕೋಟಿವಂದ್ಯಶಂಕರಪ್ರಿಯಪತಿಏಳೆನ್ನುತಪ.ಪಂಕಜಮುಖಿಪದ್ಮಾವತಿ ಸರ್ವಾ-ಲಂಕಾರದ ನಿದ್ದೆ ಸಾಕೆನ್ನುತ ಅ.ಪ.ಮಂಗಲಚರಿತ ಭುಜಂಗಶಯನ ನಿ-ನ್ನಂಗದಾಯಾಸವ ಪರಿಹರಿಸಿಪೊಂಗಲಶದಿ ಉಷ್ಣೋದಕ ಗಂಧ ತೈಲಾ-ಭ್ಯಂಗಮಾಡುವರೇಳು ಶೃಂಗಾರದ ಮೂರ್ತಿ 1ದಧಿಯ ಪೃಥುಕದಲಿ ಹದಗೈದು ಮಧುರದಿಮಧುಸೂದನ ನಿನ್ನ ಪದದ ಮುಂದೆಸದ್ ಹೃದಯರು ತಂದಿಹರು ಸಮರ್ಪಿಸೆಮದಜನಕ ನಿನ್ನ ಓಲೈಸುವರಯ್ಯ 2ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿಚೆನ್ನಾದ ಗೋಕ್ಷೀರವನ್ನು ತಂದುಉನ್ನತ ಮಹಿಮನೆ ಉಣ್ಣೆಂದು ಲಲಿತ ಸು-ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ 3ವಿಧವಿಧ ಷಡುರಸಭರಿತ ಮನೋಹರಸುಧೆಗೆಯಿಮ್ಮಡಿ ಮಧುರತ್ವದಲಿಮೃದುವಾದ ಉದ್ದಿನ ದೋಸೆಯ ಸವಿಯೆಂದುಪದುಮನಾಭನೆ ನಿನ್ನ ಹಾರೈಸುವರಯ್ಯ 4ಸಕ್ಕರೆಕದಳಿಉತ್ತಮ ಫಲಗಳ ತಂದುರಕ್ಕಸವೈರಿಯೆ ನಿನ್ನ ಮುಂದೆಚೊಕ್ಕಟವಾಗಿಡೆ ಲೆಕ್ಕ ಲೇಖನಗಳಒಕ್ಕಣಿಪರುವಾಸುದೇವನೀನೇಳಯ್ಯ5ಸಾರಹೃದಯ ಗೌಡಸಾರಸ್ವತವಿಪ್ರಭೂರಿವೇದಾದಿ ಮಂತ್ರದ ಘೋಷದಿಶ್ರೀರಮಣನೆ ದಯೆದೋರೆಂದು ಕರ್ಪೂರ-ದಾರತಿಯನು ಪಿಡಿದಿಹರು ಶ್ರೀಹರಿಯೇ 6ಭಾಗವತರು ಬಂದು ಬಾಗಿಲೊಳಗೆನಿಂದುಭೋಗಿಶಯನಶರಣಾದೆನೆಂದುಜಾಗರದಲಿ ಮದ್ದಳ ತಾಳರಭಸದಿರೇಗುಪ್ತಿರಾಗ ಸಂಗೀತ ಪಾಡುವರಯ್ಯ 7ಕರುಣಾಸಾಗರ ನಿನ್ನ ಚರಣದ ಸೇವೆಯಕರುಣಿಸೆಂದೆನುತಾಶ್ರಿತ ಜನರುಕರವಮುಗಿದು ಕಮಲಾಕ್ಷ ನಿನ್ನಯ ಪಾದ-ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ 8ನಾನಾ ಜನರು ಬಂದುಕಾಣಿಕೆಕಪ್ಪವಶ್ರೀನಿವಾಸನೆ ನಿನ್ನ ಪದಕೆ ಒಪ್ಪಿದಾನವಾಂತಕ ನಿನ್ನ ದಯವೊಂದೆ ಸಾಕೆಂದುಧ್ಯಾನಮಾಳ್ಪರು ದಯಮಾಡೆಂದು ಹರಿಯೇ 9ನೀನೆ ಗತಿಯೆಂದು ನಿನ್ನ ನಂಬಿಹರು ಲ-ಕ್ಷ್ಮೀನಾರಾಯಣ ಪುರುಷೋತ್ತಮನೆಮಾನದಿ ಭಕ್ತರ ಸಲಹಯ್ಯ ಸಂತತಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ 10
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವೆಂಕಟಾಚಲ ವಾಸ ವಂದಿಪೆನೋ ತವ ಪದ |ಪಂಕಜವ ನಿರ್ದೋಷ ವಾರಾಶಿಜಾದ್ರುಹಿಣ|ಶಂಕರ ಪ್ರಮುಖ ಪೋಷ ಶ್ರೀ ಶ್ರೀನಿವಾಸ ಪವೆಂಕಟ ಗದಾ ಸುದರುಶನವಿಜಯ|ಅಂಕಿತನೆಗಾಂಗೇಯಚೈಲತ- |ಳಂಕ ನನುಜ ಪಾಲಿಪುದು ಯನ್ನ ಮೀ |ನಾಂಕ ಜನಕ ಶಶಾಂಕ ಭಾಸ ಅ.ಪ.ಸ್ವಾಮಿ ಹೇ ನಿರಪೇಕ್ಷಝಷಕೂರ್ಮವರಾಹ|ಹೇಮಕಶ್ಯಪು ತೀಕ್ಷವಟುಭೃಗು ಕುಲೋದ್ಭವ ||ರಾಮ ಪಾಂಡವಪಕ್ಷ ತ್ರಿಪುರಾರಿ ಕಲ್ಕಿ |ಭೀಮವಂದಿತ ತ್ರ್ಯಕ್ಷಸಖವ್ರತತಿಜಾಕ್ಷ ||ಕಾಮಿತಪ್ರದ ಕೈರವದಳಶ್ಯಾಮಸುಂದರ ಕೋಟಿಮಾರಸು- |ಧಾಮಪ್ರಿಯ ಭಯವಿಪಿನವಹ್ನಿಸು ||ತ್ರಾಮ ನಂದನ ಪ್ರಾಣರಕ್ಷಕ |ಭೂಮಿಯೊಳು ದುರುಳರಿಪು ಸಾಲಿ ||ಗ್ರಾಮ ಮಂದಿರ ಲಕುಮೀ ಮನೋಹರ |ಸಾಮಜೇಂದ್ರನ ಪೊರೆದ ಸಹಸ್ರನಾಮ ಕಾಳೀಮದಾಹ ದೇವತ್ರ ||ಈಮಾಯಾತೃಣಕಾಷ್ಠಾದಿ ವ್ಯಾಪುತ |ಚಾಮೀಕರಭೂಷಣ ಶೋಭಿತ ||ಹೇಮಾಚಲ ಮಂದಿರ ಮುನಿಗಣಸೋಮಾರ್ಚಿತ ಕರುಣಿಸು ತ್ವರ್ಯಾ 1ನೀರಚರನಗಧರಕಿಟಿನೃಹರಿ ವಾಮನ |ಧರಣಿಪ ಸಂಹರ ಕೋದಂಡಕರ ಸ- ||ತ್ಯಾರಮಣಅಂಬರವರ್ಜಿತ |ತುರಂಗಮವೇರಿಕುಂಭಿಣಿಭಾರವಿಳುಹಿದ ಉದಾರ ||ಪರಾಶರ ಸುತ ಕಪಿಲರೂಪಿ ಸ- |ಮೀರ ವಂದ್ಯ ಅನಸೂಯವರಕುಮಾರ ಪು- ||ಷ್ಕರ ಕೇಶನನುಜ ಮಂದಾರನತ ಜನವಿಶ್ವ|ಧರಣ ಶರೀರವ್ಯೋಮಸಂತ್ಪತಿ ನಘ ತು- ||ಷಾರ ಗಣ ವೈದುವರೊ ನಿನ್ನಯಾ |ಪಾರಮಹಿಮೆಯ ತಿಳಿಯಲಾರರುನೀರಜಾಕ್ಷ|| ಯ ||ಪಿತಾಮಾತಾ ಮಹಿಮಯ ||ಕ್ಕಾರಿಂದೊಶ ಅಗ್ನಿಭಯ ನಿವಾರಣ ||ಸಾರೆಗರೆದು ಪೂರೈಸಭಿಲಾಷೆಯ |ಘೋರಿಸುತಿಹ ತಾಪತ್ರಯ ಬಿಡಿಸೊ ರ- |ಮಾರಮಣನೇ ಪ್ರಣತಾರ್ಥಿ ಪರಿಹರ 2ವೇದೋದ್ಧರಕೂರ್ಮಈ ಕ್ಷಿತಿಯ ಮಾಯದಲೊ- |ಯ್ದದುರ್ಮತಿ ಭರ್ಮ ಲೋಚನರತರಳಪ್ರ- ||ಹ್ಲಾದ ವರದ ಸುಕರ್ಮಸ್ಥಿತ ಮಾತೃಹಿಂಸಕ |ನಾದ ನಿರಶ ಸುಶರ್ಮ ಪ್ರಮುಖರನ ಮರ್ಮ ||ಭೇದಿಸೇಳಿದ ಭೈಷ್ಮೀವಲ್ಲಭ|ಶ್ರೀದಬುದ್ಧಖಳಕುಲಭಂಜನ||ಬಾದರಾಯಣನಿಗಮವೇದ್ಯನೆ |ಮೋದಮಯ ಪ್ರಾಣೇಶ ವಿಠ್ಠಲ ||ಕಾದುಕೋ ನಿನ್ನವರನು ಎಂದಾದಿಮಧ್ಯ |ವಿದೂರ ಯನ್ನ ವಿಷಾದಗುಣಗಳೆಣಿಸದೆ ಕುಬುಜೆಗೆ ||ಮೋದತೋರಿದ ದೀನಬಂಧು |ಶ್ರೀಧರಕೌಸ್ತುಭವಕ್ಷಸ್ಥಳ ||ದ್ವಾದಶವಪು ಸನ್ನಿಭ ನಿನ್ನಯ ಕ್ರೋಧಿಗಳೊಳು ಸ್ನೇಹವ ಪುನರಪಿ |ಮೇದಿನಿಯೊಳು ಜನ್ಮವ ಕೊಡದಿರು 3
--------------
ಪ್ರಾಣೇಶದಾಸರು
ವೆಂಕಟಾದ್ರಿವರದ ಶಂಕರನುತಪಾದ ಪ.ಶಂಖಾರಿ ಅಹಿಪರಿಯಂಕಶಾಯಿ ಉದಾರಿಕಿಂಕರಕೋಶ ಸಂಕಟನಾಶಪಂಕಜನಾಭಾಸಂಖ್ಯಾತ ರವಿಭಾ 1ಗಜಬಂಧನ ನಿವಾರಿ ಕುಜಮಸ್ತಕವಿದಾರಿಅಜಮಿಳರಕ್ಷ ನಿಜಜನಪಕ್ಷಕುಜನ ವಿಶಿಕ್ಷಾಂಬುಜ ಪತ್ರಾಕ್ಷ 2ಕಂಸ ಮಥನಕಾರಿ ಹಂಸಡಿಬಿಕವೈರಿಸಂಶಯಹರ ಗೋಪಾಂಸು ಲಿಪ್ತಾಂಗ ಹಿಮಾಂಶುಕುಲೇಶ ಭವಶರಧಿನಾಶ 3ಭೈಷ್ಮೀ ಸತ್ಯಾರಮಣ ಭೂಷಿತ ಅಖಿಳಾಭರಣದ್ವೇಷಕೃತ ದಮಘೋಷಜಹರ ಮಹೀಶೆಜÕ ಭೋಕ್ತಾಗ್ರೇಸರ ಶಕ್ತ 4ಸ್ವಾಮಿ ತೀರ್ಥಕರ್ತ ಕಾಮಿತ ಫಲದಾತಸ್ವಾಮಿ ಪ್ರಸನ್ವೆಂಕಟಾಮಲಮೂರ್ತಿನಾ ಮೊರೆಹೊಗುವೆ ಪ್ರೇಮದ ಪ್ರಭುವೆ 5
--------------
ಪ್ರಸನ್ನವೆಂಕಟದಾಸರು
ವೆಂಕಟೇಶನ ಮಹಿಮೆಯ ಹೊಗಳುವಕಿಂಕರಧನ್ಯನಯ್ಯಪ.ಇಳೆಯ ಭಕ್ತರ ನೋಡಿದ ವೈಕುಂಠದಿಂದಿಳಿದು ಶ್ರೀಸಹಿತ ಬಂದಸಲೆ ಸುವರ್ಣಮುಖರಿಯ ತೀರವಒಲಿದು ನಿಂತನು ತಿಮ್ಮ್ಮಯ್ಯ 1ಭೂವರಾಹ ಸ್ವಾಮಿಯ ಸನ್ನಿದಶ್ರೀವತ್ಸಲಾಂಛನಿಹಶ್ರೀವಿಮಾನಸಹಿತ ದೇವಾಧಿದೇವ ತಾನಿಲ್ಲಿ ನಿಂತ 2ಸ್ವಾಮಿ ಪುಷ್ಕರಿಣಿಯೆಂಬ ತೀರ್ಥದನಾಮದ ಮಹಿಮೇನೆಂಬೆಆ ಮಹಾ ದುಷ್ಕøತವು ಸ್ನಾನದನೇಮದಲ್ಲೋಡುವುದು 3ರಾಜಾಧಿರಾಜನಿತ್ಯಉಪಚಾರಪೂಜೆ ಲೋಕಾರ್ಥದೊಳು ತಾಮೂಜಗಕಾನಂದವವರಕರುಣಾಜಲಧಿ ಕೊಡುವ 4ನಿತ್ಯಸ್ವಾರಿಗೈದುವಸುರಋಷಿಮೊತ್ತದಿ ಚರಿಪದೇವಮತ್ತೆ ಆ ಲಕ್ಷ್ಮಿಯ ಕೂಡ ಮುನಿವದೊಂದರ್ತಿಯ ಬುಧರು ನೋಡಿ 5ನುಡಿವ ಸಾವಿರ ಪೇರ್ಗಂಟೆ ಉಬ್ಬುಬ್ಬಿಹೊಡೆವರ್ಯೊಡೆ ಜಾಗಟೆಬಡಿವ ಕರಡೆ ಭೇರಿಯು ಮುಂದೆ ಉಗ್ಗಡಿಪ ಸಾಮಗಾನವು 6ಚಿತ್ರವರ್ಣದ ಸತ್ತಿಗೆ ಸಾಲ್ಗಳುಸುತ್ತಲು ಕೈ ದೀವಿಗೆಉತ್ತಮ ವಾಹನವೇರಿ ವಿಶ್ವದಕರ್ತಬಂದನು ಉದಾರಿ7ಉದಯ ತೋಮಾಲೆ ಸೇವೆ ಪುಳುಕಾಪುಮೊದಲಾದ ದಿವ್ಯಸೇವೆಒದಗಿದವಸರಂಗಳು ನೈವೇದ್ಯಮೃದುಭಕ್ಷ್ಯವರಪೊಂಗಲು8ಅತಿರಸ ಮನೋಹರವುದಧ್ಯನ್ನಅತಿರುಚಿ ಅನ್ನವಾಲವುಕ್ಷಿತಿಯ ಮೇಲಿಹ ಭಕ್ತರು ಶ್ರೀಲಕ್ಷ್ಮೀಪತಿಗೆ ಅರ್ಪಿಸುತಿಹರು 9ಹೂವಿನಂಗಿಯ ತೊಡುವಮೃಗಮದಲಾವಣ್ಯ ತಿಲಕಿಡುವಕಾವನಂತರ ತೇಜವ ಗೆಲ್ಲುವಸಾವಿರ ಹೆಸರ ದೇವ 10ತಪ್ಪದೆ ನುಡಿವಂದನು ಮುಡಿಪಿನಕಪ್ಪವೆಣಿಸಿ ಕೊಂಬನುಚಪ್ಪನ್ನ ದೇಶಸ್ತರು ಬಂದು ಸಮರ್ಪಣೆ ಮಾಡುವರು 11ಕೊಟ್ಟ ವಾಕ್ಯಕೆ ತಪ್ಪನು ವರಭಯವಿಟ್ಟು ಸಾಕುತಲಿಪ್ಪನುಇಷ್ಟಾರ್ಥದಾತನಯ್ಯ ವಿಶ್ವದಶಿಷ್ಟರೊಡೆಯ ತಿಮ್ಮಯ್ಯ 12ಕಿರೀಟ ಕುಂಡಲವಿಟ್ಟನು ತಿಮ್ಮಯ್ಯಕರುಣ ನೋಟದ ಚೆಲ್ವನುಅರಿಶಂಖವನು ಧರಿಸಿದ ಹಾರಕೇಯೂರ ಕೌಸ್ತುಭದಲೊಪ್ಪಿದ 13ತೋಳಬಂದಿಯು ಕಂಕಣಮುದ್ರಿಕೆಕೀಲುಕಡಗಒಡ್ಯಾಣನೀಲಮಾಣಿಕ ಪಚ್ಚದ ಮುತ್ತಿನಮಾಲೆಗಳಿಂದೊಪ್ಪಿದ 14ಮಣಿಮಯ ಕವಚ ತೊಟ್ಟ ಗಳದಲಿಮಿನುಗುವಾಭರಣವಿಟ್ಟಕನಕಪೀತಾಂಬರವು ಕಟಿಯಲ್ಲಿಅಣುಗಂಟೆಗಳೆಸೆದವು 15ರನ್ನದಂದುಗೆಯನಿಟ್ಟಿಹ ಪಾದಕೆಪೊನ್ನಹಾವುಗೆಮೆಟ್ಟಿಹಘನ್ನ ದೈತ್ಯರ ಸೋಲಿಪ ಬಿರುದಿನಉನ್ನತ ತೊಡರಿನಪ್ಪ 16ದಿನಕೆ ಸಾವಿರ ಪವಾಡ ತೋರುವಜನಕೆ ಪ್ರತ್ಯಕ್ಷ ನೋಡಘನಶಾಮ ತಿರುವೆಂಗಳ ಮೂರ್ತಿಯಮನದಣಿಯೆ ಹೊಗಳಿರೆಲ್ಲ 17ಭೂವೈಕುಂಠವಿದೆಂದು ಸಾರಿದಭಾವಿಕ ಭಕ್ತ ಬಂಧುಶ್ರೀ ವಾಯುಜಾತ ವಂದ್ಯ ಶ್ರೀನಿವಾಸಗೋವಿಂದ ನಿತ್ಯಾನಂದ 18ಸೇವಕಜನರಪ್ರಿಯಅರುಣರಾಜೀವಲೋಚನ ತಿಮ್ಮಯ್ಯದೇವಶಿಖಾಮಣಿಯು ಬ್ರಹ್ಮಾದಿದೇವರಿಗೆ ದೊರೆಯು 19ಕಶ್ಚಿಜ್ಜೀವನೆನ್ನದೆ ನನ್ನನುನಿಶ್ಚಯದಲಿ ಹೊರೆವನುಆಶ್ಚರ್ಯಚರಿತ ನೋಡಿ ಶರಣರವತ್ಸಲನ ಕೊಂಡಾಡಿ 20ಆರಾಶ್ರಯಿಲ್ಲೆನಗೆ ದ್ರಾವಿಡವೀರನೆ ಗತಿಯೆನಗೆಭೂರಿಪ್ರಸನ್ವೆಂಕಟಪತಿ ಸುಖತೀರಥವರದ ನಮೊ 21
--------------
ಪ್ರಸನ್ನವೆಂಕಟದಾಸರು
ವೇಗದಿ ಪಿಡಿ ಎನ್ನ ಕೈಯ್ಯಾ ಪಆಗಾಮಿಸಂಚಿತಭೊಗಗಳುಳ್ಳಭವ-ಸಾಗರದಲ್ಲಿ ಬಿದ್ದೆ ವೇಗದಿ ನೀ ಬಂದು ಅ.ಪಭಾವದ್ರವ್ಯ ಕ್ರಿಯಾದ್ವೈತ ಇದರನು-ದೇವರೆಂದನುದಿನ ಭಾವಿಸಿದೆನ್ನನು 1ಅಶನವಸನಕಾಗಿ ನಾಪರಅಸಮ ನಿನ್ನಯಪಾದಬಿಸಜಭಜಿಸದೆವಸುಮತಿಯೊಳು ಬಲು ಹಸನಗೆಟ್ಟೆನ್ನನು 2ಸರಿಯನೀಸೀಪರಿ ಧೆರೆಯೊಳು ಪಾಲಿಸು 3
--------------
ಗುರುಜಗನ್ನಾಥದಾಸರು
ವೇಣುಗೋಪಾಲವಿಠಲದಾತಮಹಾಪ್ರಭುವೆಸಾಧು ಜೀವರ ಸೃಜಿಸಿದುದಕೆ ಫಲವೇನಿಲ್ಲ ಬಾಧೆ ತಂದಿತ್ತ ಬಳಿಕಚಿಂತ್ರಣಿಯ ವೃಕ್ಷ ವಿಷಾದಕಾರಣ ಎಲ್ಲಿ ಚಿಂತಿಪರು ಸಂತರುಗಳುಬಿತ್ತಿ ಬೀಜವ ಬೆಳೆಸಿ ಕೊಯ್ಯಕುಳಿತವಗೆ ಮಾರುತ್ತರವು ಭಿರಿಯಲ (?)ಆವ ಜನುಮದಲಿಂದ ಸಾವವೊ ಅರಿಯೆ ನೋವು ಮೊಳಕಿನ್ನು ಬಹಳಪ್ರಾರ್ಥಿಸಿದೆ ನಿನ್ನ ಭಕುತನ ಅರ್ತಿಯನ್ನು ಮನದಲಿ ಸ್ಫೂರ್ತಿ ಆರದರಿಂದಲಿ
--------------
ಗೋಪಾಲದಾಸರು
ವೇಣುನಾದ ಬಾರೊ, ವೆಂಕಟರಮಣನೆ ಬಾರೊ |ಬಾಣನ ಭಂಜಿಸಿದಂಥ ಭಾವಜನಯ್ಯನೆ ಬಾರೊ ಪಪೂತನಿಯ ಮೊಲೆಯುಂಡ ನವ-|ನೀತ ಚೋರನೆ ಬಾರೊ ||ದೈತ್ಯರಾವಣನ ಸಂಹರಿಸಿದ |ಸೀತಾನಾಯಕ ಬಾರೊ 1ಹಲ್ಲು ಮುರಿದು ಮಲ್ಲರ ಗೆದ್ದ |ಘುಲ್ಲನಾಭನೆ ಬಾರೊ ||ಗೊಲ್ಲತಿಯರೊಡನೆ ನಲಿವ |ಚೆಲ್ವ ಮೂರುತಿ ಬಾರೊ 2ಮಂದಾರವನೆತ್ತಿದಂಥ |ಇಂದಿರಾ ರಮಣನೆ ಬಾರೊ ||ಕುಂದದೆ ಗೋವುಗಳ ಕಾಯ್ದ |ನಂದನಂದನನೆ ಬಾರೋ 3ನಾರಿಯರ ಮನೆಗೆ ಪೋಪ |ವಾರಿಜಾಕ್ಷನೆ ಬಾರೋ ||ಈರೇಳು ಭುವನವ ಕಾಯ್ವ |ಮಾರನಯ್ಯನೆ ಬಾರೊ 4ಶೇಷಶಯನ ಮೂರುತಿಯಾದ |ವಾಸುದೇವನ ಬಾರೊ ||ದಾಸರೊಳು ವಾಸವಾದ |ಶ್ರೀಶಪುರಂದರವಿಠಲ ಬಾರೊ5
--------------
ಪುರಂದರದಾಸರು
ವೈದ್ಯ ಬಂದ ನೋಡಿ - ವೆಂಕಟನೆಂಬ |ವೈದ್ಯ ಬಂದ ನೋಡಿ ಪ.ವೈದ್ಯ ಬಂದನು ವೇದವೇದ್ಯ ನೋಡೀಗಲೇಶ್ರೀದೇವಿರಮಣನು ಶ್ರೀನಿವಾಸನೆಂಬ ಅಪಎಷ್ಟು ದಿನದ ರೋಗಗಳೆಂಬುದ ಬಲ್ಲ |ಗಟ್ಟಿಯಾಗಿ ಧಾತುರಸಗಳನು ಬಲ್ಲ ||ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |ಶಿಷ್ಟವಾದ ದೇಹ ಕೊಟ್ಟು ಕಾಯುವನಿವ 1ಹೊನ್ನು - ಹಣಂಗಳ ಅನ್ನವ ಅನುಸರಿಸಿ |ತನ್ನ ದಾಸನೆಂಬ ನಿಜವ ನೋಡಿ ||ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |ತನ್ನ ನಾಮಾಮೃತ ದಿವ್ಯ ಔಷಧವೀವ 2ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |ಈ ತನುವಿಗೆಂದೆಂದು ರೋಗಬರಲರಿಯದು ||ಈತ ಅನಂತರೂಪದಿ ಜೀವರಿಗೆ ಮುನ್ನ |ಪ್ರೀತಿಯಿಂದಲಿ ಭವರೋಗ ಬಿಡಿಸುವ 3ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ |ಮರ್ಮಬಲ್ಲ ರೋಗಜೀವಂಗಳ ||ನಿರ್ಮಲವಾಗಿಹ ತನ್ನ ನಾಮಸ್ಮರಣೆ |ಒಮ್ಮೆ ಮಾಡಲು ಭವರೋಗ ಬಿಡಿಸುವ 4ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ ? |ಅನ್ನ ಮಂತ್ರ - ತಂತ್ರ - ಜಪವೇತಕೆ ? ||ಚೆನ್ನ ಪುರಂದರವಿಠಲನ್ನ ನೆನೆದರೆ |ಮನ್ನಿಸಿ ಸಲಹುವ ವೈದ್ಯ ಶಿರೋಮಣಿ 5
--------------
ಪುರಂದರದಾಸರು
ವೈದ್ಯವ ನಾನರಿಯೆ - ಭವರೋಗದ-|ವೈದ್ಯ ನೀನೆ ಹರಿಯೆ ಪನೀ ದಯದಿಂದೆನ್ನ ರಕ್ಷಿಸು-ಆದಿವೈದ್ಯ ಮುನ್ನ |ಪಾದೋದಕವನು ಎನಗೆ ಕೊಡಿಸು ಸರ್ವ-||ವ್ಯಾಧಿನಿವಾರಣ ಕಷಾಯ ನೀ ಕೊಡು 1ಹರಿನಿನ್ನ ಕರುಣವೆಂಬ-ಸ್ಮರಣೆಯ |ತ್ವರಿತ ಙ್ಞÕನದಿಂದ ||ಉರುತರ ಮಹಾತ್ಮೆಯ ಎನಗೆ ಕೊಡಿಸು ಸರ್ವ ||ದುರಿತನಿವಾರಣ ಕಷಾಯ ನೀ ಕೊಡು 2ಕೃಷ್ಣ ನೀ ಕೃಪೆವಿಡಿದು-ಕಪಟದ-|ಉಷ್ಣವಾಯುವಳಿದು ||ವಿಷ್ಣುಶಕ್ತಿಯೆಂದ ಅಭಯವ ಎನಗಿತ್ತು |ಇಷ್ಟವ ಸಲಿಸುವ ತೃಪ್ತಿಪಡಿಸುವಂಥ 3ನಿನ್ನ ದಾಸ ನಾನು-ದುರಿತಗ-|ಸಳೆನ್ನ ಕಾಡುವುವೇನು ||ಚೆನ್ನಾಗಿ ಕಾಯಕೆ ಶಕ್ತಿಯನಿತ್ತು ದೃಢ-|ವನ್ನು ಮಾಡಿ ಶ್ರೀಹರಿ ಸಲಹೆನ್ನನು 4ಪಂಡಿತದಯಾಸಿಂಧು-ಕಾಡುವ-|ಪಾಂಡುರೋಗ ಕೊಂದು ||ಪುಂಡರೀಕಾಕ್ಷಶ್ರೀಪುರಂದರವಿಠಲ ಅ-|ಖಂಡಮೂರುತಿ ಶ್ರೀಹರಿ ಸಲಹೆನ್ನನು 5
--------------
ಪುರಂದರದಾಸರು
ಶಂಕರಿ ಸರ್ವೇಶ್ವರಿ ಮೃಗಾಲಂಕಶೇಖರಿ ಜಯ ಜಯ ಪ.ಶಾಂಭವಿದೇವಿ ಸುರಕದಂಬಸಂಜೀವಿಅಂಬುಜಾಯತಾಕ್ಷಿ ಖಲಶುಂಭಮರ್ದಿನಿ 1ಬುದ್ಧಿದೇವತೆ ಸುರಸಿದ್ಧಸನ್ನುತೆಅದ್ರಿಜಾತೆ ರುದ್ರಪ್ರೀತೆ ಶುದ್ಧ ಭಾಗವತೆ 2ಧ್ಯೇಯರೂಪಿಣಿ ಮಹಾದೇವ ಮೋಹಿನಿಶ್ರೀಯಶೋದೆ ಲಕ್ಷ್ಮೀನಾರಾಯಣಭಗಿನಿ 3(ಕುಮಟಾದಲ್ಲಿಯ ಶಾಂತೇರಿ ಕಾಮಾಕ್ಷಿ)
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶರಣಾಗತನಾದೆನು ಶಂಕರ ನಿನ್ನಚರಣವ ಮರೆಹೊಕ್ಕೆನು ಪ.ಕರುಣಿಸೈ ಕರಿವದನಜನಕಾ-ವರಕದಂಬಪೂಜ್ಯ ಗಿರಿವರ-ಶರಸದಾನಂದೈಕವಿಗ್ರಹದುರಿತಧ್ವಾಂತವಿದೂರದಿನಕರಅ.ಪ.ಹಸ್ತಿವಾಹನವಂದಿತ ವಿಧುಮಂಡಲ-ಮಸ್ತಕಗುಣನಂದಿತಸ್ವಸ್ತಿದಾಯಕ ಸಾವiಗಾನಪ್ರ-ಶಸ್ತ ಪಾವನಚರಿತ ಮುನಿಹೃದ-ಯಸ್ಥಧನಪತಿಮಿತ್ರ ಪರತರ-ವಸ್ತು ಗುರುವರ ಶಾಸ್ತಾವೇಶ್ವರ 1ಮಂದಾಕಿನೀಮಕುಟಶಿವ ಶಿವ ನಿತ್ಯಾ-ನಂದಮ್ನಾಯ ಕೂಟಚಂದ್ರಸೂರ್ಯಾಗ್ನಿತ್ರಿಲೋಚನಸಿಂಧುರಾಸುರಮಥನ ಸ್ಥಿರಚರ-ವಂದಿತಾಂಘ್ರಿಸರೋಜ ಉದಿತಾ-ರ್ಕೇಂದುಶತನಿಭ ನಂದಿವಾಹನ 2ನೀಲಕಂಧರ ಸುಂದರ ಸದ್ಗುಣವರು-ಣಾಲಯ ಪರಮೇಶ್ವರಕಾಲಕಾಲಕಪಾಲಧರ ಮುನಿ-ಪಾಲ ಪದ್ಮಜವಂದಿತಾಮಲ-ಲೀಲ ಡಮರು ತ್ರಿಶೂಲಪಾಣಿ ವಿ-ಶಾಲಮತಿವರ ಭಾಳಲೋಚನ 3ಮಾರಸುಂದರ ಸಂಕರ ಶ್ರೀಲಕ್ಷ್ಮೀ-ನಾರಾಯಣಕಿಂಕರಮಾರಹರ ಮಹನೀಯ ಶ್ರುತಿಸ್ಮøತಿ-ಸಾರವಿಗತಾಮಯ ಮಹೋನ್ನತವೀರ ರಾವಣಮದನಿಭಂಜನಚಾರುತರವರಭಾರಪುರಹರ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶರಣು ಪೊಕ್ಕೆನೋ ನಿನ್ನ ಕರುಣಾಸಾಗರಾ ಪಶರಣು ಪೊಕ್ಕಚರಣಯುಗಕೆ ಕರುಣಿಸೆನ್ನ ಶರಣನೆಂದುxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಗುರವೇ ತ್ವರದಿ ಪೊರೆಯೊ ಸ್ವಾದಿ -ಧ್ವರಿಯೆಕರವಪಿಡಿದು ನಿರುತÀಅ.ಪಎನ್ನಬಿನ್ನಪಕೇಳೋ ಅಪನ್ನಪಾಲಕಾಘನ್ನ ಜ್ಞಾನವಿತ್ತು ಮುನ್ನ ಮನ್ನಿಸೋ ಯತಿರನ್ನನೇ 1ದಾತನಿನ್ನಪೋತನಾನು ಮಾತು ಕೇಳನಾಥ ಪೇಳ್ವೆಖ್ಯಾತ ಮಹಿಮನೆ 2ಪರಮ! ಕರುಣಿಸೋ ನಿನ್ನ- ಶಿರದಿ ನಮಿಸುವೆಸರಸ ಗುರುಜಗನ್ನಾಥ ವಿಠಲ ದೂತ 3
--------------
ಗುರುಜಗನ್ನಾಥದಾಸರು
ಶರಣು ಭಾರತೀ ತಾಯೆ |ಕರವಬಿಡದಲೆ ಕಾಯೆ ||ಮರುತದೇವನ ರಮಣಿ | ಸುರ ನದಿಯ ಭಗಿನಿ ಪಪ್ರದ್ಯುಮ್ನ ದೇವಸುತೆ | ರುದ್ರಾದಿ ಸುರ ವಿನುತೆ ||ಭದ್ರ ವಿಗ್ರಹೆ ದಯಾ ಸ | ಮುದ್ರೆ ಕುಲಿಶೆ ||ಅದ್ರಿಯೋಪಮ ದೋಷ | ಕಿದ್ದ ದುರ್ಮತಿಕ್ಲೇಶ||ವೊದ್ದು ನಿನ್ನವನೆನ್ನು | ಬುದ್ಧಿ ಕೊಡು ಇನ್ನೂ 1ನೀರಜಾಂಬಕೆ ಯನಗೆ | ತೋರು ಸಾಧನ ಕುನಗೆ |ಜಾರಿಸು ಭಕುತಿಯನ್ನು | ತೋರು ಕರುಣಾ ||ವಾರಿಧಿಹರಿಯಪಾದ| ಆರಾಧಿಸಲುಮೋದ|ವಾರವಾರಕೆ ಈಯೇ |ವಾರಣಗಮನೆಯೇ 2ಪ್ರಾಣೇಶ ವಿಠಲನ | ಧ್ಯಾನದೊಳಗಿರಿಸು ಮನ |ವಾಣೀ ಪದವೈದುವಳೇ |ಮಾನನಿನ್ನದೆಲೆ ||ಹೀನ ವಿಷಯಗಳೊಲ್ಲೆ | ನೀನೇ ಸ್ವಾಂತದಿ ನಿಲ್ಲೆ |ಕ್ಷೋಣಿಯೊಳಗತಿ ಮಾನೀ | ಜ್ಞಾನೀ ಅಹಿವೇಣೀ 3
--------------
ಪ್ರಾಣೇಶದಾಸರು
ಶರಣು ಶರಣಯ್ಯಾ ಪಶರಣು ಹರಿಗುಣ ಲೋಲಗೆ ಅ.ಪಬದ್ಧಶ್ರೀಹರಿ ದ್ವೇಷಿಮಾಯಿಗಳಗೆದ್ದಹಯಮುಖ ದಾಸಗೆ 1ನಿತ್ಯನಿರ್ಮಲನಿಗಮಸ್ತೋತ್ರಗೆಸ್ತುತ್ಯಯತಿವರಸುಜನಮಿತ್ರಗೆ2ಆದಿ ಗುರುಜಗನ್ನಾಥವಿಠಲಗೆ 3
--------------
ಗುರುಜಗನ್ನಾಥದಾಸರು
ಶರಣು ಶರಣು ಜಯ ಮುನಿರಾಯ ಸ್ವಾಮಿಶರಣಾಗತ ತಾತ್ವಿಕ ಪ್ರಿಯ ಪ.ಶ್ರೀ ಮಧ್ವಗುರು ದಯವನು ಪಡೆದು ಅದೇ ಮಹಿಮನ ಮನೆಯೊಳು ಬಂದುನೇಮದಿ ತುರ್ಯಾಶ್ರಮ ಬಲಿದೆ ಈಭೂಮಿಗಿಂದ್ರನಪರಿ1ಅಶ್ರುತ ಪ್ರಭೆ ಬುಧರೊಳು ಬೀರಿ ನಾನಾ ಶ್ರುತಿಯರ್ಥ ಪ್ರಕಟದೋರಿಶಾಶ್ವತಕ್ಷಾದಿ ತ್ರಿಪ್ರಮಾಣವ ನಿಜಾಶ್ರಿತರಿಗೆ ಪೇಳಿದೆ ಅನುವ 2ವೇದಾಂಬುಧಿಯೊಳು ಸುಧೆದೆಗೆದೆ ರಾಮಪಾದಕರ್ಪಿಸಿ ಬುಧಜನಕೆರೆದೆಕೈದುಗಳಂತೆ ಪ್ರಮೇಯಾರ್ಥವಿಡಿದೆ ಜಯನಾದದಿಂ ದುರ್ವಾದಿಗಳನ್ಯೆಚ್ಚಿದೆ 3ಮರುತಮತದ ವಿಬುಧರ ನೆರಹಿಸಿಮೂರೇಳರಿ ಬಲವ ಜರಿದಟ್ಟಿದೆಅವರಬಿರುದು ಸೀಳಿದೆ ಈ ಧರೆಯ ವೈಷ್ಣವರಭಯವ ಕಳೆದೆ4ಈ ಕ್ಷೋಣಿಯೊಳು ಪ್ರತಿವರ್ಜಿತನೆ ಶ್ರೀಅಕ್ಷಯಪ್ರಜÕ ಕೃಪಾನ್ವಿತನೆಅಕ್ಷೋಭ್ಯತೀರ್ಥರ ತನಯನೆವಿಶ್ವಕುಕ್ಷಿಪ್ರಸನ್ನವೆಂಕಟಪ್ರಿಯನೆ5
--------------
ಪ್ರಸನ್ನವೆಂಕಟದಾಸರು