ಒಟ್ಟು 1086 ಕಡೆಗಳಲ್ಲಿ , 97 ದಾಸರು , 899 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮವೆಂಬಿರಿ ನಿಮ್ಮ ಬರಿದೆ ಮಾತಲ್ಲದೆಬ್ರಹ್ಮನಾದವನ ಬಗೆಯನು ಹೇಳುವೆ ಕೇಳಿ ಪ ಆಶಾಪಾಶಗಳಿಗೆ ವಶವಾಗದವ ಬ್ರಹ್ಮಮೋಸಹೋಗದೆ ಮಾಯೆಗೆ ಇರುವವ ಬ್ರಹ್ಮಕೂಸಿನಂದದಿ ಭಾವ ಕೂಡಿಹನವ ಬ್ರಹ್ಮಘಾಸಿಯಾಗನು ಮದನಗೆ ಅವನು ಬ್ರಹ್ಮ 1 ಸತಿಸುತರಿಚ್ಛೆಯ ಸಮನಿಸದವ ಬ್ರಹ್ಮಇತರರ ವಾಕ್ಯಕೆ ಕಿವಿಗೊಡದವ ಬ್ರಹ್ಮಗತಿ ಯಾವುದೆನಗೆಂದು ಗುಣಿಸುತಿಪ್ಪವ ಬ್ರಹ್ಮಅತಿ ಹರುಷದಿಂ ಬಾಳುತಿರುವವನು ಬ್ರಹ್ಮ2 ಸಕಲ ವಿಶ್ವವು ಎನ್ನ ಸರಿಯು ಎಂಬುವವ ಬ್ರಹ್ಮಸುಖ ದುಃಖವನು ಸಮದೃಷ್ಟಿಯಲಿ ನೋಡುವವ ಬ್ರಹ್ಮಭಕುತಿ ಭಾವನೆಯಿರುವ ಮಾನವನು ತಾ ಬ್ರಹ್ಮಮುಕುತಿ ಮರ್ಗದಲಿರುವ ಯೋಗಿಯವ ಬ್ರಹ್ಮ 3 ಹುಚ್ಚರಂದದಿ ನೋಡೆ ಹುದುಗಿಕೊಂಡಿಹ ಬ್ರಹ್ಮಅಚ್ಚರಿಯ ಅವನಾಟ ತಿಳಿವವನು ಬ್ರಹ್ಮನಿತ್ಯಕಾಲದಿ ಜ್ಞಾನ ಬೇಕೆನ್ನುವವ ಬ್ರಹ್ಮಕೊಚ್ಚಿತೆಂಬನು ಎಲ್ಲ ಕುಲಜ ಬ್ರಹ್ಮ4 ದಾಸದಾಸರ ದಾಸನಾದವನೆ ಬ್ರಹ್ಮಈ ದೇಹದಾ ಹಂಗ ತೊರೆದವನು ಬ್ರಹ್ಮಭಾಸುರ ಚಿದಾನಂದನ ಭಜಿಪ ಭಕ್ತನೆ ಬ್ರಹ್ಮವಾಸರಿಲ್ಲವೋ ಈ ವಾಕ್ಯಕೆಂಬುವವ ಬ್ರಹ್ಮ5
--------------
ಚಿದಾನಂದ ಅವಧೂತರು
ಬ್ರಹ್ಮಾನಂದದ ಸಭಾ ಮಧ್ಯದಲಿಸುಮ್ಮನೆ ಇರುತಿಹುದೇನಮ್ಮಬ್ರಹ್ಮಾದಿಗಳಿಗೆ ದೂರಾಗಿಹನಿರ್ಮಲ ನಿರುಪಮ ತಾನಮ್ಮ ಪ ಹೇಳಲು ಬಾರದ ಸುಖರೂಪದಲಿಹೊಳೆಯುತ ಅಹುದು ಏನಮ್ಮಮೇಳದ ಲೋಕಕೆ ಕರ್ತೃ ತಾನಾಗಿಹಲೋಲ ಪರಾತ್ಪರ ತಾನಮ್ಮ 1 ಬೋಧದ ರೂಪದಿ ಹಾ.... ಎಂಬಂದದಿಬೆಳಗುತಲಿಹುದದು ಏನಮ್ಮಆದಿ ಅನಾಧಿಯು ಅವ್ಯಕ್ತವೆನಿಪಅಚಲಾನಂದವೆ ತಾನಮ್ಮ 2 ತೃಪ್ತಾನಂದದಿ ತೂಷ್ಣೀ ಭಾವದಿದೀಪ್ತವಾಗಿಹುದದು ಏನಮ್ಮಸಪ್ತಾವರಣದ ಮೀರಿ ಮಿಂಚುವಗುಪ್ತಜ್ಞಪ್ತಿಯು ತಾನಮ್ಮ 3 ಕದಲದೆ ಚೆದುರದೆ ಕೈ ಕಾಲಿಲ್ಲದೆಉಕ್ಕುತಲಿಹುದದು ಏನಮ್ಮಸದಮಲ ಸರ್ವಾತ್ಮತ್ವವೆಯಾಗಿಹಸಾಕ್ಷೀಭೂತವು ತಾನಮ್ಮ4 ತೋರುತಲಡಗದ ಸಹಜಭಾವದಿಥಳಥಳಿಸುತಿಹುದದು ಏನಮ್ಮಕಾರಣ ಕಾರ್ಯವ ಕಳೆದ ಚಿದಾನಂದಕಾಲಾತೀತನು ತಾನಮ್ಮ 5
--------------
ಚಿದಾನಂದ ಅವಧೂತರು
ಭಕುತರ ಸಂರಕ್ಷಣಾ ನಾರಾಯಣ ಪ ಖಗಪನ ಸ್ಕಂದರೋಹ ಅಘದೂರ ಅಭಯಹಸ್ತ ಸ್ವಗತಭೇದಶೂನ್ಯ ಸರ್ವಾವಸ್ಥೆಯೊಳೆನ್ನ ವಿಗತಕ್ಲೇಶನ ಮಾಡಿ ಸತತಕಾಪಾಡಲಿ ನಿಗಮವಿನುತ ಜಗದಾದಿ ವಂದ್ಯನೆ ದೇವಾ 1 ವರುಣಪಾಶಗಳಿಂ ಜಲಚರಜಂತುಗಳಿಂ ಮತ್ಸ್ಯ ಮೂರುತಿ ತಾ ರಕ್ಷಕನಾಗಿರಲಿ ಧಾರುಣಿ ನೆಲದೊಳು ಶ್ರೀ ವಾಮನ ಕಾಯಲಿ ಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ2 ದುರ್ಗರಣಾಗ್ರವನ ಅರಿವರ್ಗಗಳಲಿ ನರಹರಿದೇವ ಸಂರಕ್ಷಕನಾಗಿರಲಿ ಮಾರ್ಗಗಳಲ್ಲಿ ಹಿರಣ್ಯಾಕ್ಷ ವೈರಿಯು ಕಾಯಲಿ ದುರ್ಗಮಶೈಲದೊಳು ಶ್ರೀ ಭಾರ್ಗವ ರಕ್ಷಿಸಲಿ 3 ದಾಶರಥಿ ಪ್ರವಾಸದಲಿ ನಿತ್ಯ ದೇಶಾಂತರಗಳಲ್ಲಿದ್ದರು ಕಾಯಲಿ ಈಶ ಶ್ರೀಮನ್ನಾರಾಯಣ ಎನ್ನ ಕ್ರೂರ ಕರ್ಮಗಳಿಂದ ರಕ್ಷಿಸಲನುದಿನ ನರಾವತಾರ ಎನ್ನ ಗರುವಿನಿಂ ರಕ್ಷಿಸಲಿ 4 ವಿರೋಧಿವರ್ಗದಿ ದತ್ತಾತ್ರೇಯ ಕಾಯಲಿ ಸರ್ವಕರ್ಮಬಂಧಜ್ಞಾನದಿಂದ ಕಪಿಲಾ ಮೂರುತಿ ರಕ್ಷಿಸಲಿ ಅನುದಿನದಲಿ ಎನ್ನ ಸನತ್ಕೂ- ಮಾರನು ಎನ್ನ ಕಾಯಲಿ ಕಾಮದಲ್ಲಿ 5 ದಾನವ ಮಧುಕೈಟಭ ಹರೆ ಹಯವದನ ಘನ್ನಪರಾಧದಿ ರಕ್ಷಕನಾಗಿರಲಿ ಮನ್ನಿಸಿ ದೇವತೆಗಳು ಸಾಧನವೀಯಲಿ ಸನ್ನುತಾಂಗ ಧನ್ವಂತ್ರಿಮೂರುತಿ ಹರಿ ಎನ್ನ ರಕ್ಷಕನಾಗಿರಲಿ ರುಜೆಯೊಳು6 ಜ್ಞಾನರೂಪಿ ವೃಷಭ ಸೀತಾತಪದಿಂದ ಎ- ನ್ನನುದಿನ ಈ ದ್ವಂದ್ವÀದಿ ಕಾಯಲಿ ಯಜ್ಞಮೂರುತಿ ಲೋಕಾಪವಾದದಿ ಕಾಯಲಿ ಸುಜ್ಞಬಲರಾಮನು ದುರ್ಜನರ ಭಯದಿಂ ಅನುದಿನ ರಕ್ಷಿಸಲಿ 7 ಘನ್ನಮಹಿಮ ಶೇಷ ಸರ್ಪಬಾಧೆಗಳಿಂದ ಜ್ಞಾನದಾತೃ ಹರಿಸೇವೆಗೆ ಬರುತಿಹ ನಾನಾ ವಿಘ್ನಗಳಿಂದ ರಕ್ಷಿಸುತಿರಲಿ ಘನ್ನ ಮ- ಹಾ ನರಕ ಬಾಧೆಯಿಂ ತಪ್ಪಿಸಲಿ ಕೂರ್ಮಮೂರುತಿ ಕಾಪಾಡಲಿ ನಿತ್ಯದಿ 8 ವೇದವ್ಯಾಸನು ಶುಧ್ಧಜ್ಞಾನವನೀಯಲಿ ಬುದ್ಧಿಮೋಹದಿಂದ ಬುದ್ಧನುದ್ಧÀ್ದರಿಸಲಿ ಹೃದಯದ ಕಲಿಭಾಧೆ ಕಲ್ಕಿ ತಾ ಹರಿಸಲಿ 9 ಉದಯಕಾಲದಿ ಶ್ರೀ ಕೇಶವ ರಕ್ಷಿಸಲಿ ವೇಣು ಹಸ್ತ ಗೋವಿಂದ ಸಂಗಮದಲ್ಲಿ ಪೂರ್ಣಕರುಣೆ ಯಿಂದ ಎನ್ನ ಕಾಪಾಡಲಿ ಪೂರ್ವಾಹ್ನದಲಿ ನಾರಾಯಣ ರಕ್ಷಿಸಲಿ10 ಮಾಧವ ಅಪ ರಾಹ್ನದಲೆನ್ನ ರಕ್ಷಿಸಲಿ ಬಾಧೆಯಿಂ ಸಾಯಂಕಾಲದಿ ರಕ್ಷಿಸಲಿ 11 ಪ್ರದೋಷದಲಿ ಹೃಷೀಕೇಶ ರಕ್ಷಿಸಲೆನ್ನ ಪದುಮನಾಭ ಅರ್ಧರಾತ್ರಿಯಲಿ ಸಲಹಲಿ ಶ್ರೀಧರನೆನ್ನಪರಾತ್ರಿಯಲಿ ಸಲಹಲಿ12 ಜನಾದರ್Àನನು ಎನ್ನನು ಉಷಃಕಾಲದಲಿ ಸಂಧ್ಯಾಕಾಲದಿ ದಾಮೋದರ ರಕ್ಷಿಸಲಿ ಕಾಲನಾಮಕ ಬೆಳಗಿನಝಾವದಿ ಕಾಯಲಿ 13 ನಕ್ರನ ಹರಿಸಿದ ಚಕ್ರಾಯುಧವು ಎನ್ನ ಶತ್ರುಬಾಧೆಗಳಿಂದ ರಕ್ಷಿಸುತಿರಲಿ ವಿಕ್ರಮಗದೆಯು ಆಶ್ರಿತರುಪದ್ರದು- ಅನುದಿನ 14 ಪ್ರಮಥ ಭೂತ ಪಿಶಾಚ ಪ್ರೇತ ಭಯದಿ ಪಾಂಚಜನ್ಯ ಶಂಖರಾಜ ರಕ್ಷಿಸಲಿ ದುಮ್ಮನ ಶತ್ರು ಬಾಧೆಗಳಿಂದ ಖಡ್ಗವು ಖೇಟವು ಸರ್ವ ಅನಿಷ್ಟದಿಂ ರಕ್ಷಿಸಲಿ 15 ಅವನ ನಾಮರೂಪ ದಿವ್ಯಾಯುಧದ ಸ್ಮರಣೆ ಸರ್ವ ಬಂಧಗಳೆಲ್ಲ ತಕ್ಷಣದಲ್ಲಿ ನಿವಾರಣೆಯಾಗಿ ನಿವೃತ್ತಿಮಾರ್ಗಕ್ಕೆ ಶುಧ್ಧಭಾವ ಭಕುತಿಗೆ ಕಾರಣವು ಸತ್ಯ ಗರುಡ ವಿಷ್ಟಕ್ಸೇನ ಕಷ್ಟದಿಂದ ರಕ್ಷಿಸಲಿ 16 ಹರಿಯ ವಾಹನಾದಿಗಳು ವಿಪತ್ತುಗಳ ಹರಿಸಲಿ ಸರ್ವರಂತರ್ಯಾಮಿ ನಿನ್ನ ನಂಬಿರಲು ಸರ್ವಭಾಧೆಗಳಲ್ಲ ಪರಿಹಾರವಾಗಲಿ 17 ಕಾಲ ಸರ್ವಾವಸ್ಥೆಯೊಳೆನ್ನ ಸರ್ವೋತ್ತಮ ದೇವ ಸರ್ವದಾ ರಕ್ಷಿಸಲಿ ಸರ್ವರೊಡೆಯ ಶ್ರೀಮನ್ನಾರಾಯಣ ನಿನ್ನ ಕರುಣ ಕವಚವು ಎನಗಿರಲನುದಿನ 18 ಬಹಿರಾಂತರದಿ ಮೇಲ್ ಕೆಳಗು ಮಧ್ಯದಲ್ಲಿ ದಿಕ್ಕುವಿದಿಕ್ಕಿನೊಳು ಉರಗಾದ್ರಿವಾಸವಿಠಲ ಸ್ವಾಮಿ 19
--------------
ಉರಗಾದ್ರಿವಾಸವಿಠಲದಾಸರು
ಭಕುತಿಯ ಪಾಲಿಸು ಜೀಯಾ ಮುಂದೆ ಮುಕುತಿಗೊಡವೆ ಯಾಕೆ ನೀನೊಲಿದ ಮೇಲೆ ಪ ತನುವೆ ನಿನ್ನಾಧೀನವೆನಿಸು ಇದು ಅನುದಿನ ಕೊಡು ಏಕಪ್ರಕಾರ ಮನಸು ಧನ ವಡವೆಯ ಕಂಡ ಕನಸು ಎಂದು ನಿತ್ಯ ನಿನ್ನಂಘ್ರಿ ನೆನಸು 1 ತತ್ವದ ಮತದೊಳಗಿರುಸು ಪುಶಿ ಉತ್ತರ ಮತವೆಂಬ ಮಾರ್ಗವ ಮೆರೆಸು ಉತ್ತಮರೊಳಗೆನ್ನನಿರಿಸು ಭವ ವತ್ತುವ ನಿನ್ನ ನಾಮಮೃತ ಸುರಿಸು 2 ಶ್ರವಣ ಮನನ ಧ್ಯಾನವೀಯೋ ಎನ್ನ ಅವಗುಣವೆಣಿಸದೆ ಕರುಣಾಳು ಕಾಯೊ ಅವಸಾನದಲಿ ನೀನೆ ಗತಿಯೊ ತ್ರೈ ಭುವನೇಶ ವಿಜಯವಿಠ್ಠಲ ನೀ ದೊರೆಯೋ 3
--------------
ವಿಜಯದಾಸ
ಭಕುತೋದ್ಧಾರ ಪರಿಭವದ್ವೈದ್ಯ ನಿಖಿಲಬ್ರಹ್ಮಾಂಡ ಸುಸೂತ್ರ ಸಿರಿಬಾಧ್ಯ ನಿಖಿಲವ್ಯಾಪಕ ನಿಖಿಲರಕ್ಷ ಭಕುತರಾತ್ಮಕ ಭಕುತಪಕ್ಷ ಪ್ರಕಟರಕ್ಕಸಕುಲ ನಿರ್ಮೂಲನೆ ಮುಕುಟಮಾನಸ ಮನದಿ ಭಜಿಪರ ಮುಕುತಿದಾಯಕ ಮಣಿವೆನೈ ಮಹ ಮುಕುತಿಸಂಪದ ಕರುಣಿಸಭವ ಪ ಕಲ್ಪನೆಯಿಂದೊಂದೆತ್ರಯವೆನಿಸಿ ಕಲ್ಪ ಕಲಿಸಿ ಕಲ್ಪನೆಯಿಂದ ನಾಲ್ಕುಘೋಷ ರಚಿಸಿ ಕಲ್ಪನಿಲ್ಲದೆ ಕಲ್ಪಕಲ್ಪದರರ್ಹೊಗಳಿಸಿ ಕಲ್ಪಿತದಿ ನೆಲಸಿ ಕಲ್ಪಿತದಿ ಸಂಕಲ್ಪ ತೋರಿಸಿ ಕಲ್ಪಿತದಿಂ ಸಂಕಲ್ಪ ಮುಳುಗಿಸಿ ಕಲ್ಪ ಕಲ್ಪಾಂತರದಿ ಉದಿಸಿ ಕಲ್ಪತಕೆ ನೀ ಬೇರೆಯೆನಿಸಿ ಕಲ್ಪನದೊಳು ಕಲ್ಪ ಕೂಡಿಸಿ ಕಲ್ಪನಕೆ ಮಹಪ್ರಳಯವೆನಿಸಿ ಕಲ್ಪನೆಯನು ಮತ್ತು ತಿರುಗಿಸಿ ಕಲ್ಪಿಸಿದಿ ಪುನ:ಸಫಲವೆನಿಸಿ ಕಲ್ಪನೆಯನು ಪೊಗಳಲಿನ್ನಾವ ಕಲ್ಪನಕೆ ತುಸು ಶಕ್ಯವಲ್ಲವು ಕಲ್ಪ ಕಲ್ಪಾಂತರದಿ ಎನ್ನನು ಕಲ್ಪಿಸದಿರು ಕಲ್ಪತರುವೆ 1 ಕಲ್ಪಿಸಿದೆ ಕೋಟಿ ತ್ರಿದಶತ್ರಯೆನಿಸಿ ಕಲ್ಪ ಕಲ್ಪಕೆ ಕಲ್ಪಿತೀಯುವ ಮಂತ್ರ ಕಲ್ಪಿಸಿ ಕಲ್ಪಿಸಿದಿಯೊ ಕಲ್ಪ ಕಲ್ಪದಿ ಐದು ಮೇಲೆನಿಸಿ ಕಲ್ಪಸಾರೆನಿಸಿ ಕಲ್ಪನೆ ಮಹತಾರಕೆನಿಸಿ ಕಲ್ಪನೆ ಘನಗಾಯತ್ರೆನಿಸಿ ಕಲ್ಪನೆಯಲಿ ಸ್ಥೂಲವೆನಿಸಿ ಕಲ್ಪನೆ ಬಹುಸೂಕ್ಷ್ಮವೆನಿಸಿ ಕಲ್ಪನೆಯ ಮಹಕಾರಣೆನಿಸಿ ಕಲ್ಪನದಿ ಈ ಕಲ್ಪವಿರಿಸಿ ಕಲ್ಪನಕೆ ನೀನೆ ಸೂತ್ರನೆನಿಸಿ ಕಲ್ಪನಕೆ ನೀನೆ ಚೈತನ್ಯನೆನಿಸಿ ಕಲ್ಪ ಕುಣಿಸುವಿ ಕಲ್ಪನಿಲ್ಲದ ಕಲ್ಪದ ನೆಲೆಬುಡ ನೀನೆನ್ನಯ ಕಲ್ಪನೆಯೊಳುದಯನಾಗಿ ಕಲ್ಪನೆಯ ಕಡೆಗಾಣಿಸಭವ 2 ಕಲ್ಪ ಕಲ್ಪಕೆ ಆಚೆ ನೀನೆನಿಸಿ ಕಲ್ಪ ನಿರ್ಮಿಸಿ ಕಲ್ಪ ಕಲ್ಪದಿ ನೀನೆ ಆವರಿಸಿ ಕಲ್ಪ ನಡೆಸಿ ಕಲ್ಪ ಕಲ್ಪದಮೂಲ ನೀನೆನಿಸಿ ಕಲ್ಪದಿಂ ನುಡಿಸಿ ಕಲ್ಪದಲಿ ಮಿಥ್ಯಕಲ್ಪ ಪುಟ್ಟಿಸಿ ಕಲ್ಪದಲಿ ನಿಜಕಲ್ಪ ಸೃಷ್ಟಿಸಿ ಕಲ್ಪದಿಂ ತ್ರಿಕಲ್ಪ ರಕ್ಷಿಸಿ ಕಲ್ಪದಿಂ ಕಲ್ಪಕ್ಕೆ ಶಿಕ್ಷಿಸಿ ಕಲ್ಪವೇ ಮಹ ಮಾಯವೆನಿಸಿ ಕಲ್ಪದಿಂದಲೇ ಅದನು ಗೆಲಿಸಿ ಕಲ್ಪದಿಂ ಕಲ್ಪವನು ಬೆಳಗಿಸಿ ಕಲ್ಪದಿಂ ಕಲ್ಪವನು ತೊಲಗಿಸಿ ಕಲ್ಪನರಿಯುವ ಕಲ್ಪಕೆ ಮಹ ಕಲ್ಪನಿದು ಬಹು ಸುಲಭವೆನಿಸಿ ಕಲ್ಪಿತದಿಂ ರಕ್ಷಿಸುವ ಮಮ ಕಲ್ಪನಿಲ್ಲದವರ ಶ್ರೀರಾಮ 3
--------------
ರಾಮದಾಸರು
ಭಜತಿ ಭುಜಗಶಯನಂ ಸದಾಹೃದಿ ಪ ಭುಜಗಶೈಲ ಶಿಖರಾಲಯಮನಿಶಂ ಅ.ಪ ಶೇಷ ಪವನ ಸಂವಾದವದೇನ ವಿ ಶೇಷ ಕರುಣಾಯಾತ್ರಾಗಮೀಶಂ1 ಪುಂಡರೀಕ ದಿವ್ಯಾದ್ರಿವಿಹಾರಂ2 ಪುಂಡರೀಕ ದಿವ್ಯಾದ್ರಿವಿಹಾರಂ 3 ವರ ವಾಹನಗಮನಂ 4 ವರದವಿಠಲ ಮಮಚಿಂತಯದಾದ್ಯಂ 5
--------------
ವೆಂಕಟವರದಾರ್ಯರು
ಭಜರೇ ಧೀಮಂತಂ ಮಾನಸ ಪ ಭಜ ಹನುಮಂತಂ ನಿರುಪಮ ಶಾಂತಂ ಮ ಹಿಜಾನಾಯಕ ಸೇವಾಸಕ್ತಂ ಅ.ಪ ಪವನ ಕುಮಾರಂ ವಾನರವೀರಂ ತವ ಭಯಂಕರಂ ಅಕ್ಷ ಸಂಹಾರಂ ರಾವಣಗರ್ವವಿಭಂಜನ ಶೂರ ಅ ಭವ ಸಹೋದರ ಪ್ರಾಣ ದಾತಾರಂ 1 ಸಕಲ ಮಂತ್ರ ತಂತ್ರಾಗಮ ನಿಪುಣಂ ಸಕಲ ಕಲಾ ಸದ್ಗುಣ ಗಣ ಪೂರ್ಣಂ ರಾಮಾಯಣ ಮಹಾಮಾಲಾಭರಣಂ ಶ್ರೀ ಮರಕತಮಕುಟ ವಿರಾಜಿತಕರಂ 2 ಪಾಪವಿದೂರಂ ವಜ್ರಶರೀರಂ ಸೀತಾ ಮಾನಸಾನಂದ ಸಮೀರಂ ತಾರಕ ಮಂತ್ರೋಪಾಸನ ಚತುರಂ ಮಾಂಗಿರಿರಂಗ ಸೇವಾಪರಮಮರಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಯ ನಿವಾರಿಸೋ ಜಯ ಶ್ರೀ ಹರಿಯೆ ಭಯ ನಿವಾರಿಸಯ್ಯ ದಯದಿ ಭಯ ನಿವಾರನೆನ್ನ ಪ ಮರವೆಯೆಂಬುವ ಇರುಳಿನಲ್ಲಿ ದುರಿತಯೆಂಬುವ ಗಿರಿಯಲ್ಲಿ ಪರನಿಂದೆಂಬುವ ಶರಧಿಯಲ್ಲಿ ಕರುಣವಿಲ್ಲದ ಕಾಯದುರ್ಗದರಣ್ಯಕಂಜಿ ಕೊರುಗುತಿರುವೆ ಹರಿಯೆ ನಿಮ್ಮ ಸ್ಮರಣವೆಂಬ ನಿರುತ ಧೈರ್ಯ ಕರುಣಿಸಭವ 1 ವ್ಯಸನವೆಂಬ ಮುಸುಕಿನಿಂದ ಪಿಸುಣತೆಂಬುವ ದಸಕಿನಿಂದ ಪುಸಿಯುಯೆಂಬುವ ಮಿಸುನಿಯಿಂದ ವಿಷಯದಾಸೆ ತಸ್ಕರಗಂಜಿ ದೆಸೆಗೆ ಬಾಯ ಬಿಡುವೆನಯ್ಯ ಅಸಮಮಹಿಮನ್ವ ಚಶ್ರವಣೆಂಬೆಸೆವ ಧೈರ್ಯ ಕರುಣಿಸಭವ 2 ಆರು ಹುಲಿಗಳ ಘೋರಿಸುವ ಮೂರು ಮರಿಗಳ ಹಾರುತಿರುವ ಮೂರೇಳು ನಾಯ್ಗಳ ಘೋರತಾಪ ಸೈರಿಸದೆ ಸಾರಸಾಕ್ಷ ಮರೆಯ ಹೊಕ್ಕೆ ಶ್ರೀರಾಮ ನಿಮ್ಮ ಚರಣ ಭಕ್ತೆಂ ಬ್ವೀರತನವ ಕರುಣಿಸಭವ 3
--------------
ರಾಮದಾಸರು
ಭಯ ಹಾರಿಣೇ ದಯಾ ಕರುಣೀ ಪ ಜಯಲಕ್ಷ್ಮಿ ನಿನ್ನ ಪದದಿ ಜಯವು ಕೋರಲು ನಿ ರ್ದಯವೇನೆ ಜನನಿ ಅ.ಪ ಏನು ನೀಡಿದಿ ತಾಯಿ ಧ್ಯಾನಿಸಿ ಬೇಡುವಗೆ ಹೀನ ಅಪಜಯವಿದೇನು ಕಾರಣವು 1 ಪರಮಪರತರ ಕಲ್ಪತರುವಿನೊಳ್ಸುಖ ಬಯಸೆ ಪರಮ ಪರಿತಾಪವು ಬರುವುದೇನಮ್ಮ 2 ಸಿರಿಯರಾಮನ ಪ್ರಿಯೆ ಪರಮಮಂಗಳೆ ನಿನ್ನ ಪರಿ ಭಂಗ ಕಳೆಯೆ 3
--------------
ರಾಮದಾಸರು
ಭರ್ತø ಭವನದಿ ಮಗಳೆ ಚಿರಕಾಲ ಸುಖಿಸೌ ಕರ್ತ ಶ್ರೀಹರಿ ಪದವನರ್ಥಿಯಿಂ ಭಜಿಸೌ ಪ ಪತಿಯೆ ಸಿರಿವರನೆಂದು ಅತಿಶಯದಿ ಭಾವಿಸುತ ಸತತ ಸೇವೆಯ ಮಾಡಿ ಗತಿಯೆ ನೀನೆನುತ ಸತಿಶಿರೋಮಣಿಯಾಗಿ ಮಿಗಿಲು ಮೋದವ ಪಡೆದು ಕ್ಷಿತಿಯೊಳಗೆ ನೀ ಬಾಳು ಮತಿವಂತೆಯಾಗಿ1 ಅತ್ತೆಮಾವಂದಿರನು ತಾಯಿತಂದೆಗಳಂತೆ ಅತ್ತಿಗೆ ನಾದಿನಿಯ ಅಕ್ಕತಂಗಿಯರೋಲ್ ಉತ್ತಮಳೆ ಭಾವನಂ ಮೈದುನನ ಸಹಜರೆಂ ದರ್ಥಿಯಿಂದರಿಯುತ್ತ ಉಪಚರಿಸುತಿರು ನೀಂ 2 ಬಂಧುಗಳ ನೀ ಬಹಳ ಪ್ರೇಮದಿಂ ಕಾಣುತ್ತ ವಂದಿಸುವುದೌ ಪರಮಭಾಗವತರಡಿಗೇ ಇಂದಿರಾದೇವಿಯೆಂದೈದೆಯ ಪೂಜಿಸೌ ಸುಂದರ ವಿದ್ವರ ಸುತರಕೂಡ 3 ಸರ್ವತ್ರದಲಿನೀನು ಹಿತವಚನ ಮಾಡುತ್ತ ನಿತ್ಯ ಪಡೆಯುತ್ತ ಗರ್ವವರ್ಜಿತೆಯಾಗಿ ಗುಣಮುಖಿಯು ಎಂದೆನಿಸಿ ಸರ್ವಕಾಲವು ಗೌರವ ಕೀರ್ತಿಯನು ಬೀರೌ 4 ಜಾಜಿಕೇಶವ ನಿನ್ನ ಸೌಭಾಗ್ಯವತಿಯಾಗಿ ಸಾಜದಿಂ ಸಲಹುವನು ಸುಜನವಂದಿತನು ಪೂಜಿಪರ ಮರೆಯದಿಹ ಶ್ರೀಹರಿಯ ಕರುಣದಿಂ ಈ ಜಗದಿ ರಾಜಿಸೌ ಪರಮಮಂಗಳೆಯೇ 5
--------------
ಶಾಮಶರ್ಮರು
ಭವ ಕಾಮಹರ ನಿನ್ನಂಘ್ರಿ ತಾಮರಸಯುಗಳ ಭಜಿಸುವೆ | ಭಜಿಸಿ ಬಿನ್ನೈಸುವೆ ಶ್ರೀ ಮನೋಹರನ ತೋರಯ್ಯ 1 ಕೃತ್ತಿವಾಸನೆ ಎನ್ನ ಚಿತ್ತದಲಿ ಹರಿಯಪದ ನಿತ್ಯದಲಿ ಭಜಿಪ ಮತಿ ನೀಡೊ | ಮತಿ ನೀಡೊ ಪಾರ್ವತಿ ಚಿತ್ತದೊಲ್ಲಭನೆ ನಮಿಸುವೆ 2 ಸುವರ್ಣಮುಖರಿಯ ತೀರದಲಿ ನೆಲಸಿರುವೆ ಶ್ರೀ ವರಾಹನಂಘ್ರಿ ಭಜಿಸುತ್ತ | ಭಜಿಸುತ್ತ ನೆಲಸಿರುವ ಪಾವನರೂಪ ಸಲಹಯ್ಯ 3 ಕಾಳಸ್ತಿನಿಲಯನೆ ಪೇಳಲಿನ್ನೇನು ನಾ ತಾಳಲಾರೆನು ಈ ಭವಬಂಧ | ಭವಬಂಧ ಬಿಡಿಸುವ ವ್ಯಾಳ ಶಯನನ್ನ ತೋರೈಯ್ಯ 4 ಭಕ್ತರಿಗೊಲಿದು ಅಪಮೃತ್ಯು ಪರಿಹರಿಸಿದೆ ಸತ್ಯ ಸಂಕಲ್ಪ ನಿನ್ನಂಘ್ರಿ | ನಿನ್ನಂಘ್ರಿ ಕಮಲಗಳ ಚಿತ್ತದಲಿ ತೋರಿ ಸಂತೈಸು 5 ಮನಕೆ ಗುರು ನೀನಹುದು ಮನವ ಹರಿಯಲಿ ನೆಲಸೊ ವೈರಿ ಮಮತೆಯಿಂ | ಮಮತೆಯಿಂದಲಿ ನಿತ್ಯ ಮನಶುದ್ಧಿಗೈದು ಕಾಯಯ್ಯ 6 ಶಂಖಚಕ್ರವ ಪಿಡಿದ ಸಂಕರ್ಷಣನ ರೂಪ ನಿತ್ಯ ಭಜಿಸುವೆ | ಭಜಿಸುವೆ ಕೈಲಾಸ ಅಂಕದಲಿ ನೆಲಸಿ ಹರುಷದಿ 7 ನರಸಿಂಹ ರೂಪವನು ಸ್ಮರಿಸುತ್ತ ಮೈಮರೆವೆ ಉರುತರ ಭಾವ ಭಕ್ತಿಯಲಿ | ಭಕ್ತಿಯಲಿ ಭಜಿಪ ನಿನ್ನ ಸ್ಮರಿಸುವರ ಭಯವ ಹರಿಸುವೆ 8 ಶ್ರೀ ರಾಮನಾಮವನು ಪ್ರೇಮದಿಂದುಮೆಗರುಹಿ ಆರಾರು ಅರಿಯದಾನಂದ | ಆನಂದವಿತ್ತೆ ಭವ ತಾರಕವೆಂದು ಕರುಣಾಳೂ 9 ಅಜನ ಭ್ರೂಮಧ್ಯದಲಿ ಜನಿಸಿದೆಯೊ ಜಗದಲ್ಲಿ ಭಂಜನ | ಭಂಜನಗೊಳಿಸಿದೆ ತ್ರಿಜಗದಲಿ ನಿನಗೆ ಸರಿಯುಂಟೆ 10 ಶೇಷ ಪರ್ಯಂಕನಿಗೆ ಹಾಸಿಗೆಯಾಗಲು ತೋಷದಲಿ ತಪವಾಚರಿಸಿದೆ | ಚರಿಸಿ ಸಾಧಿಸಿದೆ ನೀ ಶೇಷ ಪದವಿಯನು ತ್ರಿನೇತ್ರ 11 ಶರಧಿ ಮಥಿಸಲು ಗರಳ ಉದ್ಭವಿಸಿ ಭಯವಾಗೆ | ಭಯವಾಗಿ ಪರಿಹರಿಸಿ ಗರಳವನೆ ಕುಡಿದೆ ಶ್ರೀ ಕಂಠ 12 ಅಸುರರ ವಂಚಿಸಿದ ವಶವಲ್ಲದ ಹೆಣ್ಣು ವಶವಾಗಲೆಂದು ಹಾರೈಸಿ | ಹಾರೈಸಿ ಬಳಲುತಿರೆ ಬಿಸಜಾಕ್ಷ ನಿನ್ನ ಸಲಹಿದ 13 ತಾರಕಾಸುರನಿಂದ ಘೋರಪಡುತಿರೆ ಜಗವು ಮಾರ ಪೂಅಸ್ತ್ರ ಎಸೆಯಲು | ಎಸೆಯಲು ದಹಿಸಿ ಕು- ಮಾರನನು ಪಡೆದೆ ಗಿರಿಜೇಶ 14 ಸ್ತುತಿಪ್ರಿಯ ನಿನ್ನ ನಾ ಸ್ತುತಿಸಲಾಪೆನೆ ಮಂದ ಮತಿ ಎಂದು ನೀನೆ ಸಂತೈಸೊ | ಸಂತೈಸಬೇಕಿನ್ನು ಮತಿಯಿತ್ತು ಹರಿಯ ಪದದಲ್ಲಿ 15 ಶಿರದಲ್ಲಿ ಗಂಗೆ ಚಂದ್ರನ ಮೆರೆಯುವ ಉರಗ ಭೂಷಣನೆ ಕೇಳಿನ್ನು | ಕೇಳಿನ್ನು ಎನ್ನ ಮನ ಮರೆಯದೆ ಹರಿಯ ನೆನೆಯಲಿ 16 ವಿಷ್ಣು ಭಕ್ತರೊಳಗೆ ಶ್ರೇಷ್ಠ ನೀನಹುದಯ್ಯ ಜಿಷ್ಣುವಿಗೆ ಮೆಚ್ಚಿ ಧನುವಿತ್ತೆ | ಧನುವಿತ್ತೆ ಗೋಪಾಲ- ಕೃಷ್ಣವಿಠ್ಠಲನ ತೋರಯ್ಯ 17
--------------
ಅಂಬಾಬಾಯಿ
ಭವ ಭಯ ಪರಿಹರಾ ಪ ಸನಕಾದಿ ಮುನಿವಂದ್ಯ | ಕನಕ ಗರ್ಭಜ ಜನಕಅನುನಯದಿ ಗೀತೆ ಫ | ಲ್ಗುಣಗೆ ಭೋಧಿಸಿದೇಎಣೆಯೆ ತವ ಕರುಣ | ಘನವರ್ಷಣಕೆ ಹರಿಅನಘ ನಿನ್ನಡಿ ನೆಳಲ | ನಾಶ್ರಯಿಪೆ ಎಂದೆಂದೂ 1 ಭುವನ ಮೋಹನ ದೇವ | ಭವಗು ಮೋಹಿಪ ಭಾವದಿವಿಭವರು ತವರೂಪ | ಯುವಗಳಿಕ್ಕದಲೇ |ಸುವನ ತ್ರಯದಲಿ ಕಂಡು | ಪವನಾಂತರಾತ್ಮಮಾಧವನೆ ಹಿಗ್ಗುತಲಿ | ಹವಿಷನರ್ಪಿಪರೋ 2 ಸರ್ವಶಬ್ಧಾಭಿಧನೆ | ಸರ್ವ ದೇವೋತ್ತಮನೆಪರ್ವ ಪರ್ವದಿ ಇದ್ದು | ಪರ್ವ ವಾಚ್ಯಾ |ದರ್ವಿಯಂದದಲಿಪ್ಪ | ಜೀವನ್ನ ಪೊರೆಯುವಸರ್ವಭಾರವು ನಿನ್ನದೊ | ಶರ್ವನೊಡೆಯಾ 3 ಇಂಬು ಅರಿ ತುಂಬಿ ಎನ್ನೊಳು ನೀನುಸಂಭ್ರಮದಿ ಕಾಯುವುದು | ಕುಂಭಿಣಿಯ ರಮಣಾ 4 ವಿಶ್ವ ತೈಜಸ ಪ್ರಾಜ್ಞ | ತ್ರೈಯವಸ್ಥೆ ಪ್ರವರ್ತಕನೆವಿಶ್ವ ವ್ಯಾಪಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಭವಭಯಹರ ಶ್ರೀ ಮುಕ್ಕುಂದ ಭವರೋಗಕ್ವೈದ್ಯ ಶ್ರೀ ಗೋವಿಂದ ಪ ಧ್ರುವ ದ್ರುಪದತನುಜಾತೆಯೊರೆದ ಹರಿ ಶಿವನುತ ಸಚ್ಚಿತ್ತಾನಂದ ಅ.ಪ ಪಂಕಜಾನಪಿತ ಗೋವಿಂದ ಕಿಂಕರಾಶ್ರಿತ ಗೋವಿಂದ ಶಂಖಧಾರಣ ಸಿರಿಗೋವಿಂದ ಶಂಖಾಸುರನ ಹರ ಗೋವಿಂದ ಮಂಕು ದನುಜಕುಲ ಬಿಂಕ ಮುರಿದ ಅಕ ಳಂಕಮಹಿಮ ಮಹ ಗೋವಿಂದ1 ಸ್ಮರಿಪ ನೆರೆವಾಸ ಗೋವಿಂದ ದುರುಳರ ಕುಲನಾಶ ಗೋವಿಂದ ದುರಿತ ನಿವಾರಣ ಗೋವಿಂದ ಶರಣಜನರಪ್ರಾಣ ಗೋವಿಂದ ತರಳನೋದ್ಧಾರಣ ಕರಿರಾಜವರದನ ತರುಣೆಯ ರಕ್ಷಣ ಗೋವಿಂದ 2 ಜಗದಾಧಾರನೆ ಗೋವಿಂದ ಸುಗಣಗುಣಾಂತರಂಗ ಗೋವಿಂದ ರಘುಕುಲಪಾವನ ಗೋವಿಂದ ಖಗಪತಿವಾಹನ ಗೋವಿಂದ ನಿಗಮಕೆ ಸಿಲುಕದ ಅಗಾಧ ಮಹಿಮ ಜಗತ್ರಯ ಮೋಹನ ಗೋವಿಂದ 3 ನೀಲಮೇಘಶ್ಯಾಮ ಗೋವಿಂದ ಕಾಲಕಾಲಹರ ಗೋವಿಂದ ಪಾಲಸಾಗರಶಾಯಿ ಗೋವಿಂದ ಲೋಲ ವಿಶ್ವರೂಪ ಗೋವಿಂದ ಪಾಲಭಜಕ ಭವ ಜಾಲಹರಣ ಸರ್ವ ಮೂಲಮಂತ್ರ ಹರಿ ಗೋವಿಂದ 4 ಭೂಮಿಜಾತೆಪತಿ ಗೋವಿಂದ ಕಾಮಜನಕ ಶ್ರೀಶ ಗೋವಿಂದ ಕೋಮಲಾಂಗ ರಂಗ ಗೋವಿಂದ ಸ್ವಾಮಿ ಪುಣ್ಯನಾಮ ಗೋವಿಂದ ಶಾಮವರ್ಣನುತ ಪ್ರೇಮಮಂದಿರ ಶ್ರೀ ರಾಮ ದಾಮೋದರ ಗೋವಿಂದ 5
--------------
ರಾಮದಾಸರು
ಭಾಗವತರ ಭಾಗ್ಯನಿಧಿಯೆ ಭೋಗಿಶಯನ ಭೋ ಶ್ರೀರಾಮ ಪ ವೇದಾಗಮಕೆ ಸಿಲುಕದಂಥ ನಾದಬ್ರಹ್ಮಾಯೋಧ್ಯ ರಾಮ ಸಾಧುಜನಸಂಪ್ರೀತ ಭವರೋಗ್ವೈದ್ಯ ಸಾಧನ ಸಾಧ್ಯ ರಾಮ 1 ಬೋಧ ರಾಮ ಮಹದಾದಿ ರಾಮ 2 ಕಂಟಕ ದೂರ ರಾಮ ಪರಕೆಪರಮ ಪರಮಪುರುಷ ಸರುವ ಜಗದಾಧಾರ ರಾಮ 3 ಹತ್ತು ಅವತಾರೆತ್ತಿ ಭೂಭಾರ್ಹೊತ್ತು ಇಳುಹಿದ ಸತ್ಯ ರಾಮ ಜಗತ್ಕರ್ಮ ರಾಮ 4 ದಾಸಜನರಭಿಲಾಷೆಯನು ಪೂರೈಸಲೋಸುಗ ಈಶ ರಾಮ ಶೇಷಾಚಲನಿವಾಸನಾದ ದಾಸಗಣ ಸಂತೋಷ ರಾಮ 5 ಅಸಮ ಪಾದಕುಸುಮಗಳನಿಟ್ಟೊಸುಧೆ ವೈಕುಂಠೆನಿಸಿ ರಾಮ ಜನರಿಂಗೊಸೆದು ರಾಮ6 ಬ್ರಹ್ಮಾದಿಗಳ ಹಮ್ಮನಳಿದ ಕರ್ಮಚರ ಪರಬ್ರಹ್ಮ ರಾಮ ಸುಖಧಾಮ ರಾಮ 7 ದಾತ ರಾಮ ಗುರುನಾಥ ರಾಮ 8 ತತ್ವದರ್ಥ ಉತ್ತರಿಸೆನ್ನ ಕಟ್ಟುಮಾಡೊ ಶಿಷ್ಟರಾಮ ಮೂರ್ತಿ ರಾಮ 9 ಹುಟ್ಟಿಬರುವ ಕಷ್ಟದ್ಹಾದಿ ಕಟ್ಟುಮಾಡೊ ಶಿಷ್ಟರಾಮ ನಿಷ್ಠೆಯಿಂ ನಿಮ್ಮ ಮುಟ್ಟಿ ಭಜಿಪ ಪಟ್ಟಗಟ್ಟೆಲೊ ದಿಟ್ಟ ರಾಮ 10 ದಾಸಜನರ ವಾಸದಿರಿಸೊ ಕೇಶವ ಜಗದೀಶ ರಾಮ ದೋಷರಾಶಿ ನಾಶಗೈದು ಪೋಷಿಸೆನ್ನನನುಮೇಷ ರಾಮ 11 ವೇದ ವಿದ್ಯದ್ಹಾದಿಸಾಧನ ಭೋಧಿಸೆನಗ್ವಿನೋದ ರಾಮ ಪಾದಭಕ್ತಿ ಮೋದದಿತ್ತು ಭವಬಾಧೆಯಳಿ ಸುಖಸ್ವಾದ ರಾಮ 12 ಕಳಿ ಮಮಜೀವ ರಾಮ ಬಿಡಿಸೆನ್ನಯ ರಾಮ 13 ಮತ್ತೆ ಮತ್ತೆ ಪೃಥ್ವಿ ಮೇಲೆ ಸತ್ತು ಹುಟ್ಟಿ ಬೇಸತ್ತೆ ರಾಮ ಕರ್ತು ನಿನ್ನ ಗುರ್ತು ಅರಿಯದನರ್ಥವಾದೆನಾತ್ಮ ರಾಮ 14 ಆಸೆಯೆಂಬ ಪಾಶದಿಂದ ಘಾಸಿಯಾದೆ ಭವನಾಶ ರಾಮ ದೋಷದೂರೆನ್ನ ಕ್ಲೇಶಗಳನು ನಾಶಿಸೈ ದಯಭೂಷ ರಾಮ 15 ಅರಿದು ಅರಿದು ಉರಿವದೀಪದೆರಗುವ ಹುಳದಿರವು ರಾಮ ಸಿರಿಯ ರಾಮ 16 ಮರೆದು ನಾನು ಧರೆಗೆ ಬಿದ್ದು ದುರಿತದೊಳಗೆ ಬೆರೆದೆ ರಾಮ ಪೊರೆಯೊ ರಾಮ 17 ಕರುಣಿಸುತ ತಂದೆ ರಾಮ ಬಯಲ್ಹರಿಸು ರಾಮ 18 ಮಾನ ಅಭಿಮಾನ ನಿನ್ನದು ಧ್ಯಾನಿಪರ ಸುರಧೇನು ರಾಮ ಜ್ಞಾನವಿತ್ತು ಮಾನದಿಂದ ನೀನೆ ಪೊರೆ ಜಗತ್ರಾಣ ರಾಮ 19 ಭಿನ್ನವಿಲ್ಲದೆ ನಿನ್ನ ನಂಬಿ ಧನ್ಯನಾದೆನಿನ್ನು ರಾಮ ಎನ್ನ ಮನಸಿಗಿನ್ನು ಸಂತಸವನ್ನು ಕೊಡು ಪಾವನ್ನ ರಾಮ 20 ಭೃತ್ಯನ ಮಹ ಚಿತ್ತಭ್ರಮೆ ಮುರಿದೊತ್ತಿ ಕರಪಿಡಿದೆತ್ತು ರಾಮ ಭಕ್ತಿಯುಕ್ತಿ ಮುಕ್ತಿ ಸುಖವನಿತ್ತು ಪೊರೆ ಗುರುದತ್ತ ರಾಮ 21 ನಿಖಿಲವ್ಯಾಪಕ ಅಖಿಲರಕ್ಷಕ ಸಕಲಬಲ ನೀನೇಕ ರಾಮ ಮುಕುತಿಸಂಪದ ಸಿದ್ಧಿ ನೀನೆ ಭಕುತಪ್ರಿಯ ಲೋಕೈಕ ರಾಮ 22 ಭಿನ್ನವಿಲ್ಲದೆ ನಿನ್ನ ನಾಮವನ್ನು ಪೊಗಳುವರಿನ್ನು ರಾಮ ಮಾನ್ಯರಾಗನನ್ಯ ಸುಖಸಂಪನ್ನರೆನಿಪನನ್ಯ ರಾಮ 23 ಉದಯದೆದ್ದು ಪದುಳದೀನಾಮ ಓದಿಕೇಳಲು ಸದಾ ರಾಮ ಸದಯ ರಾಮ 24 ನಿತ್ಯ ಭಕ್ತಿಯಿಂ ಬರೆಯುತ್ತ ಪಠಿಸಲು ಕರ್ತುರಾಮ ಮುಕ್ತಿಯೆಂಬ ಸಂಪತ್ತನಿತ್ತು ಬಿಡದ್ಹತ್ತಿರಿರುವನು ಸತ್ಯ ರಾಮ 25
--------------
ರಾಮದಾಸರು
ಭಾರತಿದೇವಿ ಭಕ್ತರತಾಯಿಭಾರತಿ ದೇವಿ ನಿಮ್ಮ ಆರಾಧಿಸುವೆವಮ್ಮನಾರಿಯರ ಸೋಲಿಸಮ್ಮಮಾರಿ ಮೇಲಾಗಿಸಮ್ಮ ಪ. ಮದನನತ್ತಿಗೆ ರಂಭೆ ಮೊದಲಿಗೆ ಬಲಗೊಂಬೆ ಮುದದಿಂದ ಗೆಲಿಸೆಂಬೆ ಸುದತೆ ಪುತ್ಥಳಿಗೊಂಬೆ1 ಸುಪ್ಪಾಣಿ ಕಲ್ಯಾಣಿ ನಿನ್ನನುಗಾಣೆ 2 ಪ್ರದ್ಯುಮ್ನನ ಮಗಳೆ ರುದ್ರಾದಿವಂದ್ಯಳೆಮುದ್ದು ರಾಮೇಶನ ಪ್ರವಾಳೆ ಶುದ್ಧಪಾತ್ರಳೆ ಕೇಳೆ 3
--------------
ಗಲಗಲಿಅವ್ವನವರು