ಒಟ್ಟು 573 ಕಡೆಗಳಲ್ಲಿ , 76 ದಾಸರು , 466 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವೈಕುಂಠಕೆ ಸರಿಯಾದ ದ್ವಾರಕೆಯಲಿ ಶ್ರೀಕೃಷ್ಣ ರುಕ್ಮಿಣಿದೇವಿಯರ ವಿವಾಹ ಶೋಭನದಿ ಉತ್ಸಾಹದಲಿ ಸರಸ್ವತಿಭಾರತಿದೇವಿಯರು ಸರ ಋಷಿ ಭಾವೆಯರು ಸಂಗೀತಕೋವಿದೆಯರು ಹಸೆಗಿಬ್ಬರನು ಕರೆದರು ಪ.ಅಗಣಿತಬ್ರಹ್ಮಾಂಡವ ರಚಿಸಿನಗುತಲೆ ನುಂಗೇಕಾಕಿಯಲಿಮಗುವೆನಿಸಿ ವಟಪತ್ರದಲಿ ಮಲಗಿದೆಮಲಗಿದಪ್ರಾಕೃತ ನಂದನಮಗನೆ ಬಾ ಕಸ್ತೂರಿ ಮೃಗನೆ ಬಾ ಶ್ರೀ ತ್ರಿಯುಗನೆ ಬಾರೆಂದು ಹಸೆಗೆ ಕರೆದರು 1ಕಡೆಗಣ್ಣಿನ ನೋಟದಿ ಕಮಲಜಮೃಡÀಮುಖ್ಯರ ಪಾಲಿಸುವೆ ಪಾಲ್ಗಡಲೊಡೆಯನ ಪಟ್ಟದರಂಭೆ ಜಗದಂಬೆಜಗದಂಬೆ ಮೋಹನ ಮಾಯದಬೆಡಗೆ ಬಾ ಭಾಗ್ಯದ ಹಡಗೆ ಬಾ ವ್ರಜದಕಡೆಗೆ ಬಾರೆಂದು ಹಸೆಗೆ ಕರೆದರು 2ಪೂತನಿ ಶಕಟಾಂತಕನೆ ಬಾ ಚಕ್ರವಾತನ ಘಾತಿಸಿದವನೆ ಬಾಪಾತಕಿಬಕಧೇನುಕಹರ ನವನೀತಚೋರ ನವನೀತಚೋರ ಭುವನಕಪ್ರತಿಪೂತನೆ ಬಾ ದೇವಕಿ ಜಾತನೆ ಬಾ ಬೊಮ್ಮನತಾತನೆÉ ಬಾರೆಂದು ಹಸೆಗೆ ಕರೆದರು 3ಯಮಳಾರ್ಜುನಭಂಜನಬಾ ಸಂಯಮಿ ಕುಲ ಮನರಂಜನ ಬಾರಮಣಕಪತಿ ಮದಹರಶುಭಯಮುನಾವಿಹಾರಯಮುನಾವಿಹಾರ ಗೋಪವಧೂಟೀರರಮಣ ಬಾ ಖಳಕುಲದಮನ ಬಾಖಗವರಗಮನಬಾರೆಂದು ಹಸೆಗೆ ಕರೆದರು4ಹೆಂಗಳ ಪಣೆಮಣಿಯೆ ಬಾ ಮನಮಂಗಳ ಗುಣಮಣಿಯೆ ಬಾ ಭುವನಂಗಳ ಬೆಳಗುವ ಚೆಲ್ವಿಕೆಯ ನಗೆಮೊಗದನಗೆಮೊಗದ ನೈದಿಲೆಗಂಗಳೆ ಬಾ ಸುರಮುನಿಜಂಗುಳಿ ಬಾ ಮಾತಿನಹೊಂಗಿಳಿಬಾರೆಂದು ಹಸೆಗೆ ಕರೆದರು 5ಸ್ವರ್ಧುನಿಯಳ ಜನಕನೆ ಬಾಭವಕರ್ದಮ ಶೋಷಕನೆ ಬಾ ಸುರಶಾರ್ದೂಲಸದ್ಗುಣಜಾಲ ಸಂಗೀತಲೋಲಸಂಗೀತಲೋಲ ಗೋಪಾಲಕವರ್ಧನಬಾ ರಿಪುಚಯ ಮರ್ದನ ಬಾಧೃತಗೋವರ್ಧನಬಾರೆಂದು ಹಸೆಗೆ ಕರೆದರು6ಅಂಬುಜಮಾಲಿನಿಯೆ ಬಾ ಮತ್ತಂಬುಜಜ ಜನನಿಯೆ ಬಾ ಹೇಮಾಂಬರೆ ಸಂಪಿಗೆಯ ಕಬರೆ ಬಿಂಬಾಧರೆಬಿಂಬಾಧರೆ ಬಹಳ ಉದಾರಿಗಳಿಂಬೆ ಬಾ ಜಗದ ವಿಡಂಬೆ ಬಾಕುಂದಣಬೊಂಬೆ ಬಾರೆಂದು ಹಸೆಗೆ ಕರೆದರು 7ರಾಜನಗಜ ಮಡುಹಿದನೆ ಬಾಮತ್ತಭೋಜೇಂದ್ರನ ಕೆಡಹಿದÀನೆ ಬಾಈ ಜನನೀ ಜನಕರ ಬಂಧನ ನಿವಾರಣನಿವಾರಣ ಕಾರಣ ಪೂರಣತೇಜಬಾ ರಾಜಾಧಿರಾಜ ಬಾ ದ್ವಿಜಸುರಭೋಜ ಬಾರೆಂದು ಹಸೆಗೆ ಕರೆದರು 8ವೈದರ್ಭ ಗರ್ಭಜಾ ತೇಜಾ ಅಲರೈದಂಬನ ಮಾತೆ ಬಾವೈದಿಕ ವಿಖ್ಯಾತೆ ಸ್ವಯಂಜ್ಯೋತೆ ದಾತೆಸ್ವಯಂಜ್ಯೋತೆ ದಾತೆ ನಿತ್ಯಮುತ್ತೈದೆ ಬಾ ಮುಕ್ತಿಯ ಬೋಧೆ ಬಾ ಮುದ್ದಿನಮೋದೆ ಬಾರೆಂದು ಹಸೆಗೆ ಕರೆದರು 9ಪಾಂಡವ ಸ್ಥಾಪಕನೆ ಬಾ ಮಹಾಖಾಂಡವವನ ದಾಹಕನೆ ಬಾಹೆಂಡರು ಹದಿನಾರು ಸಾವಿರದ ನೂರೆಂಟುನೂರೆಂಟರನಾಳುವಕದನಪ್ರಚಂಡ ಬಾ ಉದ್ದಂಡೋದ್ದಂಡ ಬಾ ಪುಂಡರಗಂಡಬಾರೆಂದು ಹಸೆಗೆ ಕರೆದರು10ಮುತ್ತಿನ ಸೂಸಕಳೆ ಬಾ ನವರತ್ನದ ಭೂಷÀಕಳೆ ಬಾಕಸ್ತೂರಿ ತಿಲಕದ ಪುತ್ಥಳಿಯೆ ಅಳಿಕುಂತಳೆಯೆಅಳಿಕುಂತಳೆಯೆ ಮದವಳಿಗನಚಿತ್ತೆ ಬಾ ನಿಜಪತಿವ್ರತ್ತೆ ಬಾಸುಪ್ಪಾಣಿಮುತ್ತೆ ಬಾರೆಂದು ಹಸೆಗೆ ಕರೆದರು 11ತುರಗಾಸ್ಯನ ಹೂಳಿದನೆ ಬಾ ಮಂದರಬೆನ್ನಲಿ ತಾಳಿದನೆ ಬಾವರಹ ನರಹರಿ ವಾಮನಭಾರ್ಗವರಾಮರಾಮರ ರಾಮ ಕೃಷ್ಣಯೋಗಿವರನೆ ಬಾ ಕಲಿಮಲಹರನೆ ಬಾ ಶಾಮಸುಂದರನೆ ಬಾರೆಂದು ಹಸೆಗೆ ಕರೆದರು 12ಶಂಕಿಣಿ ಪದ್ಮಿಣಿಯರು ರುಕ್ಮಿಣಿಪಂಕಜನಾಭನ ಪೂಜಿಸಿ ರತ್ನಾಂಕಿತ ಹರಿವಾಣದಲಿ ಆರತಿಯೆತ್ತಿಆರತಿಯೆತ್ತಿ ಪಾಡಿದರು ಅಕಳಂಕನ ಅಹಿಪರಿಯಂಕನ ಪ್ರಸನ್ನವೆಂಕಟರಮಣಗೆ ವಿಜಯವ ಹರಸಿದರು 13
--------------
ಪ್ರಸನ್ನವೆಂಕಟದಾಸರು
ಶ್ರೀ ಶೇಷದೇವರು73ಶೇಷದೇವ ಶೇಷದೇವ ವಾರುಣೀಶಪಾಹಿಮಾಂ ಶೇಷದೇವಪಷಡ್ಗುಣೈಶ್ವರ್ಯಪೂರ್ಣ ಕೇವಲಾನಂದರೂಪಜಡಜಾಕ್ಷ ಜಯೇಶನಿಗೆಪರ್ಯಂಕನಮೋ ನಮೋ1ದ್ಯುಭ್ವಾದಿಗಳಿಗಾಧಾರ ವೇದವತೀಶಕೂರ್ಮವಿದ್ಯುನ್ ರಮಣ ಕೂರ್ಮರ ಒಲುಮೆ ನಿನ್ನಲಿ ಸದಾ 2ಗಿರಿಸಿಂಧುಯುತಧರೆ ಬ್ರಹ್ಮಾಂಡ ಸರ್ವವಧರಿಸಿರುವೆ ಫಣಿಯ ಮೇಲೆ ಶರ್ಷಪದಂತೆ ನೀನು 3ಖದ್ರೂಜಾದಿ ವಿಷ ಸರ್ವದೋಷವೆನಗೆ ತಗಲದಂತೆಕರ್ದಮರ ಸುತನಲ್ಲಿ ಭಕ್ತಿಜ್ಞಾನ ಸತತವೀಯೊ 4ಶ್ರಷ್ಟಿಧರ ಶುಕ್ಲವರ್ಣ ಸಹಸ್ರಫಣಿ ನೀಲವಾ¸ Àಸೃಷ್ಟಿಕರ್ತ ವೇಧತಾತ ಪ್ರಸನ್ನ ಶ್ರೀನಿವಾಸನ ತೋರೊ 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸುಧಾಮ ಚರಿತ್ರೆಶ್ರೀ ಹರಿಪ್ರಿಯ ಸಖನು ಕುಚೇಲನುವರವಿಪ್ರೋತ್ತಮನವನೂ ಪಘೋರದಾರಿದ್ಯ್ರದ ಬಾಧೆಯೊಳಿರುತಲಿಚಾರುಸಚ್ಚರಿತೆಯ ಆಗರವಾಗಿಹ ಅ.ಪ.ಶೀಲ ಸದ್ಗುಣವತಿಯು ಸುಸೀಲೆಯುಸತಿಮಣಿ ಪತಿವ್ರತೆಯುಬಾಲಕ ಸಲಹಲು ಕಡು ಕಷ್ಟ ಬಡುತಲಿ ಶ್ರೀಲೋಲನ ಧ್ಯಾನದಿ ಕಾಲಕಳೆಯುತಲಿಹಳು 1ಮನದಲಿ ಯೋಚಿಸುತ ಅನುನಯದೊಳುಪತಿಗೆ ತಾ ನುಡಿದಳೆಂದೂಅನುಭವಿಸಲಾರೆಘನದಾರಿದ್ರ್ಯವನುಸಂ ಮ್ಮಂಧಿಗಳು ಸ್ನೇಹಿತರಲ್ಲವೇ ನಿಮಗೆ 2ಅಂದ ಮಾತನು ಕೇಳುತ ಕುಚೇಲ ತಾಹಿಂದೆ ಗುರುಕುಲ ವಾಸದಿನಂದ ಬಾಲನ ಕೂಡ ಹೊಂದಿದ ಸ್ನೇಹವತಂದು ಸ್ಮರಣೆಗೆ ಶ್ರೀ ಕೃಷ್ಣ ಸಖನು ಎಂದಾ 3ಕಡುಹರುಷದಿ ಸತಿಯುಒಡನೆ ತಂದು ಪ್ರಥಕು ತಂಡುಲವ ನೀಡೀಕಡಲೊಡೆಯಪಾದದರುಶನ ಕೊಂಡು ನೀವಸಡಗರದಲಿ ಬನ್ನಿರೆಂದು ಕಳುಹಿದಳು 4ಭರತ ಮಾರ್ಗದಿ ಹರಿಯಾಸ್ಮರಿಸುತಲೆ ಮನದೊಳು ಪೂಜಿಸುತಸುರ ವೈಭವದಲಿ ಮೆರೆಯುವ ದ್ವಾರಕಾಪುರವನುನೋಡುತ ಬೆರಗಾಗಿ ನಿಂದನು 5ಚಾರರೊಡನೆ ಪೇಳಿದಾಶ್ರೀ ಕೃಷ್ಣನ ಬಾಲ್ಯದಸಖತಾನೆಂದುದೂರದಿ ಬಂದು ದ್ವಾರದಿ ನಿಂದಿಹುದನುಅರುಹಿರಿ ಹರಿಗೆಂದು ಕಳುಹಿದನವರನು 6ವಾರುತಿಯನು ಕೇಳುತಾಶ್ರೀಕೃಷ್ಣ ತಾ ವಿಪ್ರನೆಡೆಗೆ ಬರುತಾಕರಪಿಡಿದವನ ಕರೆತಂದನರಮನೆಗೆ ತಾವರಸಿಂಹಾಸನದಲ್ಲಿ ಕುಳ್ಳಿರಿಸಿದನಾಗ 7ದೂರದ ದಾರಿಯನು ನಡೆದು ಬಂದಶ್ರಮ ಪರಿಹಾರಕೆಂದುನಾರಿ ರುಕ್ಮಿಣಿ ನೀರ ನೆರೆಯ ಪಾದವ ತೊಳೆದುಭಾರಿ ಉಪಚಾರ ಮಾಡುತಿದ್ದನು ಕೃಷ್ಣಾ 8ಮಡದಿ ಮಕ್ಕಳ ಕ್ಷೇಮವ ವಿಚಾರಿಸಿಕಡು ಸಂಭ್ರಮವ ತೋರುತಷಡುರಸದನ್ನವ ಮಡದಿ ರುಕ್ಮಿಣಿ ಬಡಿಪೆಸಡಗರದಲಿ ಸುಭೋಜನವ ಮಾಡಿಸಿದನು 9ಅಂದಿನಿರುಳು ಕಳೆಯೇತಂದಿಹುದೇನುಕಾಣಿಕೆತಮಗೆನುತಾಚಿಂದೆ ಬಟ್ಟೆಯೊಳಿದ್ದ ಪ್ರಥಕು ತಂಡುಲವ [ಅವಲಕ್ಕಿ]ಬ್ರಹ್ಮಾಂಡದೊಡೆಯ ತಾ ಕೊಂಡೆ ಸಂಭ್ರಮದಿಂದ 10ಪ್ರಥಕು ತಂಡುಲವ ಕೊಂಡುಸುಧಾಮನ ಭಕುತಿ ಭಾವನೆ ಕಂಡುಅತುಲ ಐಶ್ವರ್ಯದ ಸುಖ ಸಂಪದವಿತ್ತುಮುಕುತಿ ನೀಡಿದ ನಮ್ಮ ಭಕುತ ವತ್ಸಲ ಕೃಷ್ಣಾ 11ಮಂಗಲಂ ಮಚ್ಛಕೂರ್ಮವರಹ ನರಸಿಂಹ ಸುಂದರ ವಾಮನಮಂಗಲಂ ಭ್ರಗುರಾಮ ದಶರಥ ತನಯಗೆಮಂಗಲಂಸಿರಿಕೃಷ್ಣ ಬೌದ್ಧ ಸುಕಲ್ಕಿಗೆ 12ಮಂಗಲಂ ಪ್ರದ ಚರಿತ್ರೆಯಾಭಕುತಿಯಿಂ ಪೇಳಿ ಕೇಳಿದ ಜನಕೆಹಿಂಗದೆ ಸಕಲ ಸೌಭಾಗ್ಯ ಸಂಪದ ವೀವಾಅಂಗಜಪಿತ ತಂದೆಸಿರಿವಿಠಲ ಸ್ವಾಮಿ 13ಶ್ರೀಹರಿಪ್ರಿಯ ಸಖನು ಕುಚೇಲನುವರವಿಪ್ರೋತ್ತಮನವನುನೀರಜನಾಭನ ಕರುಣೆಯಿಂದಲಿ ತಾಭೂರಿಸಂಪದಸಿರಿಭೋಗಿಸುತಿದ್ದನು 14ಶ್ರೀ ಸುಧಾಮ ಚರಿತ್ರ ಸಂಪೂರ್ಣಂ
--------------
ಸಿರಿವಿಠಲರು
ಶ್ರೀ ಸೌಭಾಗ್ಯ ಸಪ್ತತ್ರಿಂಶತಿ71ಶರಣುವಿಧಿವಾಣೀಶ ಶರಣು ಧೃತಿ ಶ್ರಧ್ದೇಶ |ಶರಣು ಋಜುವರ್ಯರಲಿ ಶರಣು ಶರಣಾದೆ ಪಮೀನಕೂರ್ಮಕ್ರೋಡನರಸಿಂಹ ವಟುರೂಪರೇಣುಕಾತ್ಮಜ ರಾಮ ಶ್ರೀ ಕೃಷ್ಣ ಜಿನಜ ||ವಿಷ್ಣು ಯಶಸ್ಸುತ ಅಜಿತ ಶ್ರೀಶನಿಗೆ ಪ್ರಿಯತಮ |ಅನುಪಮ ಜೀವೋತ್ತಮರ ಚರಣಕಾನಮಿಪೇ 1ಪುರುಷವಿಧಿ ಕಾಲವಿಧಿ ವಾಸುದೇವೋತ್ಪನ್ನ |ವಿರಿಂಚ ಮಹತ್ತತ್ವತನು ಅನಿರುದ್ಧ ಜಾತ ||ನಾರಾಯಣ ನಾಭಿ ಕಮಲಜ ಚತುರ್ಮುಖನು |ಸರಸ್ವತೀಪತಿ ರುದ್ರ ತಾತನಿಗೆ ನಮಿಪೆ 2ಈ ನಾಲ್ಕು ಬ್ರಹ್ಮನ ಅವತಾರದಲಿ ಶುಕ್ಲ |ಶೋಣಿತಸಂಬಂಧ ಇಲ್ಲವೇ ಇಲ್ಲ ||ಜ್ಞಾನಾದಿ ಐಶ್ವರ್ಯದಲಿ ಯಾರು ನಾಲ್ಮುಗಗೆ |ಎಣೆ ಇಲ್ಲ ಹದಿನಾಲ್ಕು ಲೋಕದಲಿ ಎಲ್ಲೂ 3ಭಯವು ಅಜ್ಞಾನವು ಸಂಶಯವು ಇವಗಿಲ್ಲಸತ್ಯ ಲೋಕಾಧಿಪನ ಸುರರ ಅಧ್ಯಕ್ಷ ||ಹಯಮುಖ ತ್ರಿವೃತ್ತುರೀಯ ಹಂಸ ಇತರಾಸೂನು |ತೋಯಜಾಕ್ಷಕೇಶವನ ಪ್ರಥಮ ಪ್ರತಿಬಿಂಬ4ಜಗಜ್ಜನ್ಮಾದ್ಯಷ್ಟಕ ಕರ್ತನ ನಿಯಮನದಿ |ಜಗವ ಪಡೆದಿಹ ಬ್ರಹ್ಮಸತ್ವವಿಗ್ರಹನು ||ಖಗಪ ಭುಜಗಪ ಶಿವಾದ್ಯನಂತ ಜೀವೋತ್ತಮನು |ಅಘರಹಿತತಾರಕಗುರುಶತಾನಂದ5ಅವನಿಯಲಿ ಅವತಾರ ಬ್ರಹ್ಮದೇವನಿಗಿಲ್ಲ |ಭಾವಿ ಬ್ರಹ್ಮನು ಮುಖ್ಯವಾಯುದೇವ ||ದೇವೀಜಯಾ ಸಂಕರುಷಣಾತ್ಮಜನು ಈ |ಭುವಿಯಲ್ಲಿ ತೋರಿಹನು ಹರಿಯಪ್ರಥಮಾಂಗ6ಧೃತಿಪ್ರಭಂಜನವಾಯುಸ್ಮರಭರತ ಗುರುವರನು |ಮಾತರಿಶ್ವನುಸೂತ್ರಪವಮಾನ ಪ್ರಾಣ ||ಎದುರು ಸಮರಿಲ್ಲ ಈ ಬ್ರಹ್ಮ ಧಾಮನಿಗೆಲ್ಲೂ |ಸದಾ ನಮೋ ಭಾರತೀರಮಣ ಮಾಂಪಾಹಿ 7ರಥನಾಭಿಯಲಿ ಅರವೋಲ್ ಪ್ರಾಣನಲಿ ಸರ್ವವೂ |ಪ್ರತಿಷ್ಠಿತವೂ ಜೀವರ ದೇಹಕಾಧಾರ ||ತ್ರಾತಪೋಷಕ ಸರ್ವವಶಿ ಪ್ರಜ್ಞಾಶ್ರೀದನು |ತತ್ವಾದಿ ದೇವ ವರಿಷ್ಠ ಚೇಷ್ಟಕನು 8ಶ್ರೀಶ ಹಂಸಗೆ ಪ್ರಿಯಶ್ವಾಸಜಪ ಪ್ರವೃತ್ತಿಸುವ |ಬಿಸಜಜಾಂಡವ ಹೊತ್ತು ಕೊಂಡು ಇರುತಿಹನು ||ಅಸಮ ಸಾಮಥ್ರ್ಯದಿ ಸರ್ವ ಕ್ರಿಯೆ ಮಾಡಿಸುವ |ಶಾಸ್ತನಾಗಿಹ ಪಂಚಅವರಪ್ರಾಣರಿಗೆ9ಬಲ ಜ್ಞಾನಾದಿಗಳಲ್ಲಿ ಹ್ರಾಸವಿಲ್ಲವು ಇವಗೆ |ಎಲ್ಲ ಅವತಾರಗಳು ಸಮವು ಅನ್ಯೂನ ||ಶುಕ್ಲಶೋಣಿತಸಂಬಂಧ ಇಲ್ಲವೇ ಇಲ್ಲ |ಇಳೆಯಲಿ ಜನಿಸಿಹ ಹನುಮ ಭೀಮ ಮಧ್ವ 10ವಾಯುದೇವನ ಒಲಿಸಿಕೊಳ್ಳದ ಜನರಿಗೆ |ಭಯ ಬಂಧ ನಿವೃತ್ತಿಯು ಸದ್ಗತಿಯು ಇಲ್ಲ ||ಮಾಯಾಜಯೇಶನಪರಮಪ್ರಸಾದವು |ವಾಯು ಒಲಿದರೆ ಉಂಟು ಅನ್ಯಥಾ ಇಲ್ಲ 11ಶ್ರೀರಾಮಚಂದ್ರನು ಒಲಿದ ಸುಗ್ರೀವಗೆ |ಮಾರುತಿಯ ಒಲಿಸಿಕೊಂಡವನವನೆಂದು ||ಮಾರುತಿಯ ಒಲಿಸಿಕೊಳ್ಳದ ವಾಲಿ ಬಿದ್ದನು |ಕರ್ಣನೂ ಹಾಗೇವೇ ಅರ್ಜುನನು ಗೆದ್ದ 12ರಾಮನಿಗೆ ಸನ್ನಮಿಸಿ ವನದಿ ದಾಟುತ ಹನುಮ |ಶ್ರಮರಹಿತನು ಸುರಸೆಯನು ಜಯಿಸೆಸುರರು||ಪೂಮಳೆ ಕರೆಯಲು ಸಿಂಹಿಕೆಯನು ಸೀಳಿ |ಧುಮುಕಿದ ಲಂಕೆಯಲಿ ಲಂಕಿಣಿಯ ಬಡಿದ 13ರಾಮ ಪ್ರಿಯೆಗುಂಗುರವ ಕೊಟ್ಟು ಚೂಡಾರತ್ನ |ರಾಮಗೋಸ್ಕರ ಕೊಂಡು ವನವ ಕೆಡಹಿ ||ಶ್ರಮ ಇಲ್ಲದೆ ಅಕ್ಷಯಾದಿ ಅಧಮರ ಕೊಂದು |ರಾಮ ದೂತನು ಹನುಮ ಲಂಕೆಯ ಸುಟ್ಟ 14ಶ್ರೀರಾಮನಲಿ ಬಂದು ನಮಿಸಿ ಚೂಡಾಮಣಿಯ |ಚರಣದಿ ಇಡೆ ರಾಮ ಹನುಮನ ಕೊಂಡಾಡಿ ||ಸರಿಯಾದ ಬಹುಮಾನ ಯಾವುದು ಇಲ್ಲೆಂದು |ಶ್ರೀರಾಮ ತನ್ನನ್ನೇ ಇತ್ತಾಲಿಂಗನದಿ 15ಮೂಲ ರೂಪವನೆನೆದ ಲಕ್ಷ್ಮಣನ ಎತ್ತಲು |ಕೈಲಾಗದೆ ರಾವಣನು ಸೆಳೆಯೆ ಆಗ ||ಲೀಲೆಯಿಂದಲಿ ಎತ್ತಿ ರಾಮನಲಿ ತಂದನು |ಬಲವಂತ ಹನುಮ ಶೇಷಗುತ್ತಮತಮನು 16ಮೃತ ಸಂಜೀವಿನಿಯಾದಿ ಔಷಧಿ ಶೈಲವನು |ತಂದು ಸೌಮಿತ್ರಿ ಕಪಿಗಳಿಗೆಅಸುಇತ್ತ ||ಮುಂದಾಗಿ ಪೋಗಿ ಶ್ರೀರಾಮ ಬರುವುದು ಪೇಳಿ |ಕಾಯ್ದ ರಾಮಾನುಜನ ಅಗ್ನಿ ಮುಖದಿಂದ 17ಇತರರು ಮಾಡಲು ಅಶಕ್ಯ ಸೇವೆ ಹನುಮ |ಗೈದಿ ಮೋಕ್ಷವು ಸಾಲ್ದು ಏನು ಕೊಡಲೆನ್ನೆ ||ಸದಾ ಸರ್ವ ಜೀವರಿಂದಧಿಕ ಭಕ್ತಿ ಒಂದೇ |ಕೇಳ್ದ ಶ್ರೀರಾಮನ್ನ ವೈರಾಗ್ಯ ನಿಧಿಯು 18ಗಂಡು ಶಿಶು ಬೀಳಲು ಗುಂಡು ಪರ್ವತ ಒಡೆದು |ತುಂಡು ನೂರಾಯಿತು ಕಂಡಿಹರು ಅಂದು ಬೋ - ||ಮ್ಮಾಂಡದಲಿ ಪ್ರಚಂಡ ಭೀಮಗೆ ಸಮ |ಕಂಡಿಲ್ಲ ಕೇಳಿಲ್ಲ ನೋಡಿ ಭಾರತವ 19ಉಂಡು ತೇಗಿದಗರಳತಿಂಡಿಯ ಭೀಮನು |ಉಂಡು ಹಾಲಾಹಲವ ಹಿಂದೆ ಈ ವಾಯು ||ಹಿಂಡಿ ಸ್ವಲ್ಪವ ಮುಕ್ಕಣ್ಣಗೆ ಕೊಟ್ಟನು |ಬಂಡುಮಾತಲ್ಲವಿದುಕೇಳಿವೇದವನು20ಅರಗು ಮನೆಯಿಂದ್ಹೊರಟು ಸೇರಿ ವನವನು ಅಲ್ಲಿ |ಕ್ರೂರ ಹಿಡಿಂಬನ ಕೊಂದವನ ಸೋದರಿ ||ಭಾರತೀ ಯಕ್ಸ ್ವರ್ಗ ಶಿಕಿಯು ಹಿಡಿಂಬಿಯಕರಪಿಡಿದ ಭೀಮನು ಅನುಪಮ ಬಲಾಢ್ಯ 21ಬಕ ಕೀಚಕ ಜರಾಸಂಧಾದಿ ಅಸುರರು |ಲೋಕ ಕಂಟಕರನ್ನ ಕೊಂದು ಬಿಸುಟು ||ಲೋಕಕ್ಕೆ ಕ್ಷೇಮವ ಒದಗಿಸಿದ ಈ ಅಮಿತ |ವಿಕ್ರಮಭೀಮನಿಗೆ ಸಮರಾರು ಇಲ್ಲ22ಕಲಿಕಲಿಪರಿವಾರ ದುರ್ಯೋಧನಾದಿಗಳ |ಬಲವಂತ ಭೀಮನು ಬಡಿದು ಸಂಹರಿಸಿದ ||ಕಲಿಹರ ಸುಜನಪಾಲ ಭೀಮ ಸಮ್ರಾಟನ |ಕಾಲಿಗೆ ಎರಗುವೆ ದ್ರೌಪದೀ ಪತಿಗೆ 23ಮಾಲೋಲ ಕೃಷ್ಣನ ಸುಪ್ರೀತಿಗಾಗಿಯೇ |ಬಲ ಕಾರ್ಯಗಳ ಮಾಡಿ ಅರ್ಪಿಸಿದ ಭೀಮ ||ಕಲಿಯುಗದಿ ಈ ಭೀಮ ಅವತಾರ ಮಾಡಿಹನು |ಕಲಿಮಲಾಪಹ ಜಗದ್ಗುರು ಮಧ್ವನಾಗಿ 24ಹನುಮಂತನ ಮುಷ್ಠಿ ಭೀಮಸೇನನ ಗದೆ |ದಾನವಾರಾಣ್ಯವ ಕೆಡಹಿದ ತೆರದಿ ||ಆಮ್ನಾ ಯಸ್ಮøತಿ ಯುಕ್ತಿಯುತ ಮಧ್ವ ಶಾಸ್ತ್ರವು |ವೇನಾದಿಗಳ ಕುಮತ ತರಿದು ಸುಜನರ ಕಾಯ್ತು 25ಇಳೆಯ ಸುಜನರ ಭಾಗ್ಯಶ್ರುತಿಪುರಾಣಂಗಳು |ಪೇಳಿದಂತೆಕೊಂಡಯತಿರೂಪ ವಾಯು ||ಮೇಲಾಗಿ ಇದ್ದ ನಮ್ಮ ಅಜ್ಞಾನ ಕತ್ತಲೆಯ |ತೊಲಗಿಸಿದನು ಈ ಮಧ್ವಾಖ್ಯಸೂರ್ಯ26ದುರ್ವಾದ ಕುಮತಗಳು ಸಜ್ಜನರ ಮನ ಕೆಡಿಸೆ |ತತ್ವವಾದವ ಅರುಪಿ ಸಜ್ಜನರ ಪೊರೆದ ||ಮೂವತ್ತು ಮೇಲೇಳು ಗ್ರಂಥ ಚಿಂತಾಮಣಿ |ಸುವರ್ಣಕುಂದಣಪದಕ ಯೋಗ್ಯರಿಗೆ ಇತ್ತ27ದುಸ್ತರ್ಕ ದುರ್ಮತ ಬಿಸಿಲಿಲ್ಲಿ ಬಾಡುವ |ಸಸಿಗಳು ಸಾತ್ವಿಕ ಅಧಿಕಾರಿಗಳಿಗೆ ||ಹಸಿ ನೀರು ನೆರಳು ಈ ಮಾಧ್ವ ಮೂವತ್ತೇಳು |ಸಚ್ಛಾಸ್ತ್ರಪೀಯೂಷಗೋಕಲ್ಪ ತರುವು28ಮೂಢ ಅಧಮರ ದುಷ್ಟ ಮತಗಳ ಸಂಪರ್ಕದಿ |ಈಡಿಲ್ಲದ ಮೋದಪ್ರದ ಜ್ಞಾನ ಕಳಕೊಂಡು ||ಬಡತನದಿ ನರಳುವ ಸಜ್ಜನರ ಪೋಷಿಪುದು |ನೋಡಿ ಈಸುರಧೇನುಮಾಧ್ವ ಮೂವತ್ತೇಳ29ಬಿಲ್ವಪ್ರಿಯ ಶಿವ ಈಡ್ಯ ಸಾರಾತ್ಮ ಕೃಷ್ಣನ |ಚೆಲ್ವಉಡುಪಿಕ್ಷೇತ್ರದಲಿ ನಿಲ್ಲಿರಿಸಿ ||ಎಲ್ಲ ಭಕ್ತರಕಾವಸುಖಮಯ ಜಗತ್ಕರ್ತ |ಮೂಲ ರಾಮನ ಸಾಧು ಜನರಿಗೆ ಕಾಣಿಸಿದ 30ಮಹಿದಾಸ ಬೋಧಿಸಿದ ತತ್ವವನು ವಿವರಿಸುತ |ಮಹಂತಪೂರ್ಣಪ್ರಜÕಬದರೀಗೆ ತೆರಳಿ ||ಮಹಿಶಿರಿಕಾಂತ ಶ್ರೀ ವ್ಯಾಸನ ಬಳಿ ಇಹನು |ಅಹರಹ ಪ್ರೇಮದಿಂಸಂಸ್ಮರಿಸೆತೋರ್ವ 31ರಾಮ ಕೃಷ್ಣವ್ಯಾಸ ಜಾನಕೀಸತ್ಯಾ |ರುಕ್ಮಿಣೀಅಂಭ್ರಣಿಪ್ರಿಯತಮ ಹನುಮ ||ಭೀಮ ಮಹಾ ಪುರುಷೋತ್ತಮ ದಾಸರಿಗೆ |ನಮಿಪೆ ವಿಪಶೇಷ ಶಿವಾದ್ಯಮರ ಸನ್ನತರ್ಗೆ 32ಚತುರ್ಮುಖ ವರವಾಯು ಸರಸ್ವತಿ ಭಾರತಿಗೆ |ಸದಾ ಶ್ರೀಹರಿಯಲ್ಲಿ ಭಕ್ತಿ ಅಚ್ಛಿನ್ನ ||ಅತಿರೋಹಿತ ಜ್ಞಾನ ಪ್ರಾಚುರ್ಯರಾಗಿಹರು |ಸಾಧಾರಣವಲ್ಲ ಋಜುಗಳ ಮಹಿಮೆ 33ಋಜುಗಳರಾಜೀವಚರಣಗಳಿಗಾ ನಮಿಪೆ |ಭುಜಗಶಯ್ಯನಲಿ ಭಕ್ತಿ ಸಹಜ ಇವರಲ್ಲಿ ||ಭುಜಗಭೂಷಣಾದಿಗಳಿಗಧಿಕತಮ ಬಲಜ್ಞಾನ |ತ್ರಿಜಗಮಾನ್ಯರು ತ್ರಿಗುಣ ತಾಪವರ್ಜಿತರು 34ಅಪರೋಕ್ಷಋಜುಗಣಕೆ ಅನಾದಿಯಾಗಿಯೇ ಉಂಟು |ತಪ್ಪದೇ ಶತಕಲ್ಪ ಸಾಧನವ ಗೈದು ||ಶ್ರೀಪನಅಪರೋಕ್ಷಇನ್ನೂ ವಿಶೇಷದಿ |ಲಭಿಸಿ ಕಲ್ಕ್ಯಾದಿಸುನಾಮಧರಿಸುವರು35ಕಲ್ಕ್ಯಾದಿ ಪೆಸರಲ್ಲಿಪ್ರತಿಒಂದು ಕಲ್ಪದಲು |ಅಕಳಂಕ ಇವರು ಬಹು ಸುವಿಶೇಷ ಸಾಧನದಿ ||ಭಕ್ತ್ಯಾದಿ ಗುಣಕ್ರಮದಿ ಅಧಿಕ ಅಭಿವ್ಯಕ್ತಿಯಿಂ |ಮುಖ್ಯ ವಾಯು ಬ್ರಹ್ಮಪದವ ಪೊಂದುವರು 36ಈ ಬ್ರಹ್ಮಾದಿಗಳೊಳು ಇದ್ದು ಕೃತಿಮಾಡಿಸುವ |ಶಿರಿಸಹ ತ್ರಿವೃನ್ನಾಮ ಪ್ರಸನ್ನ ಶ್ರೀನಿವಾಸ ||ಸುಹೃದ ಸೌಭಾಗ್ಯದಗೆ ಜಯ ಜಯತು ಅರ್ಪಿತವು |ಹರಿವಾಯು ನುಡಿಸಿದಿದು ಜಯತು ಹರಿವಾಯ 37
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಆನಂದಮಯಸ್ತೋತ್ರ40ಪೂರ್ಣ ಸುಗುಣಾರ್ಣವನೆಅನಘಪರಮೇಶ್ವರನೆಆ ನಮಿಪೆ ಶ್ರೀರಮಣಆನಂದಮಯವಿಷ್ಣುಪನಿನ್ನಯ ಸುಮಹಿಮೆಗಳ ನಿನ್ನಿಚ್ಛೆಯಿಂದಲೇಚೆನ್ನಾಗಿ ತಿಳಿಸಿ ಅಚ್ಛಿನ್ನ ಭಕ್ತಿಯನೀಯೊ ಅಪಸುಖರೂಪ ಪಾಲನಾಲಯಕರ್ತ ಲಕ್ಷ್ಮೀಶನಿಷ್ಕಳನು ನೀ ಸದಾಕೈವಲ್ಯಸುಖದಆಗಮಸುಶಾಸ್ತ್ರೈಕ ವಿಜÉÕೀಯ ಪರಬ್ರಹ್ಮಅಂಗಾಂಗ್ಯಭಿನ್ನ ಆನಂದ ಸಂಪೂರ್ಣ 1ಬ್ರಹ್ಮಶಬ್ದದಿ ಮುಖ್ಯವಾಚ್ಯ ಬಹು ಆವರ್ತಿಬ್ರಹ್ಮಆನಂದಮಯನೀ ಇತರರಲ್ಲಬ್ರಹ್ಮಪರಿಪೂರ್ಣಹರಿಸರ್ವನಾಮದಿ ನೀನೆಬಹುರೂಪ ಸರ್ವಸ್ಥ ಈಶ್ವರಆನಂದಮಯ2ಚಿತ್ಪ್ರಕೃತಿ ನಾಲ್ಮೊಗನು ಅಷ್ಟಮೂರುತಿ ಎಂಬರುದ್ರನು ದೇವೇಂದ್ರ ಸುರಗುರುವಿಪ್ರಇಂಥ ಯಾರೂ ವಸ್ತು ಯಾವುದೊ ಅಲ್ಲವುಆನಂದಮಯನೀನು ವಿಷ್ಣು ಪರಬ್ರಹ್ಮ3ಪ್ರಕೃತಿ ಪ್ರಜಾಪತಿ ಸದಾನಂದ ದಶಪ್ರಮತಿರುದ್ರಾಷ್ಟಮೂರ್ತ್ಯಾದಿ ಸರ್ವ ಶಬ್ದಂಗಳುಪರನೆ ಬ್ರಹ್ಮನೆ ವಿಷ್ಣು ಮುಖ್ಯ ವಾಚಕ ನಿನಗೆಇರುವ ಈ ಸರ್ವರೊಳು ಸುಖಪೂರ್ಣ ಸ್ವಾಮಿ 4ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯಆನಂದಮಯಎಂಬ ಐದು ಶಬ್ದಂಗಳು 1ಆನಂದಮಯಶಬ್ದದಿಂದ ಗ್ರಹಿಸಲುಬೇಕುಆನಂದಮಯಬ್ರಹ್ಮ ನೀನೆ ಇತರರು ಅಲ್ಲ5ಶಿರ ಬಾಹುದ್ವಯ ಮಧ್ಯಚರಣಅಂಗಾಂಗಗಳುಪೂರ್ಣಆನಂದಮಯಎಂದೂ ಅಭಿನ್ನಉರು ಸುಗುಣ ಪರಿಪೂರ್ಣ ವಿಷ್ಣು ಆತ್ಮನು ಬ್ರಹ್ಮಶೃತಿಯು ಬಹುಸಾರುತಿದೆ ಸುಖಮಯನು ಎಂದು 6ಅನ್ನಮಯ ಅನಿರುದ್ಧ ಪ್ರಾಣಮಯ ಪ್ರದ್ಯುಮ್ನಮನೋಮಯ ಸಂಕರ್ಷಣನು ವಿಜ್ಞಾನಮಯನುಅನಘಮಾಯಾರಮಣ ಪರವಾಸುದೇವ ನೀಆನಂದಮಯಶ್ರೀಶ ನಾರಾಯಣ ಬ್ರಹ್ಮ7ಪಂಚ ಕೋಶಂಗಳಲಿ ತನ್ನಾಮ ತದ್ಭಿನ್ನಕಿಂಚಿತ್ತು ಲೇಪವಿಲ್ಲದೆ ಇದ್ದು ನಿಯಮಿಸುವೆಪಂಚ ಸುಖರೂಪದಿಂ ಪಂಚವರ್ಣದಿ ಜ್ವಲಿಪೆಸಂಚಿಂತಿಪರ್ಗೆ ಸುಖವೀವೆ ಸುಖಮಯ ಬ್ರಹ್ಮ 8ಅಧಿಕಾರಿ ಆನಂದಪ್ರಚುರಬಹುರೂಪ ನೀಸರ್ವರೂ ನಿನ್ನಿಂದ ಉಪಜೀವ್ಯರೊ ಸ್ವಾಮಿಸರ್ವರಿಗು ಪ್ರೇರಕನು ಸತ್ತಾಪ್ರವೃತ್ತಿದನುಸರ್ವೇಶ ಸುಖಪೂರ್ಣ ಸರ್ವವ್ಯಾಪಿಯೆ ದೇವ 9ಆನಂದಮಯನೀನೆ ಆನಂದೋದ್ರೇಕದಿಂಪ್ರಾಣಿಗಳ ಧರ್ಮಗಳ ಪ್ರವೃತ್ತಿ ಮಾಡುವೆಯೊಆನಂದೋದ್ರೇಕದಿಂ ಸರ್ವತ್ರವ್ಯಾಪ್ತ ನೀಆನಂದಮಯಇತರ ಲೋಕಚೇಷ್ಟಕರಿಲ್ಲ10ಅಂಗಾಂಗಿತ್ವದಿ ಭಗವಂತ ನೀ ಕ್ರೀಡಿಸುವೆರಂಗ ನೀ ಸತ್ಯಂ ಜ್ಞಾನಮನಂತಂ ಬ್ರಹ್ಮನೆಂದುಹೊಗಳುತಿದೆ ಶೃತಿಯು ಸುಖಸಾರಾತ್ಮ ಚಿನ್ಮಾತ್ರಚಾರ್ವಾಂಗ ನಿನ್ನ ತಿಳಿಯದೆ ಬೇರೆ ಗತಿಯಿಲ್ಲ 11ಸತ್ಯ ಸತ್ಸøಷ್ಟಿಕರ್ತ ಜೀವನಪ್ರದನುಸರ್ವ ಪ್ರವರ್ತಕನು ಸಂಹಾರಕರ್ತಅಶೇಷಸಾಮಾನ್ಯ ವಿಶೇಷಜ್ಞಾನವು ಜ್ಞಾನದೇಶಾದಿಪರಿಚ್ಛೇದ ಶೂನ್ಯವು ಆನಂತ 12ಅನ್ನಮಯದಿಂ ಸೃಷ್ಟಿ ಸಂಹಾರಜೀವನವುಪ್ರಾಣಮಯ ಶಬ್ದ ಸಹ ಜೀವನಪ್ರದವುಮನೋಮಯ ಶಬ್ದದಿಂ ಸಾಮಾನ್ಯಜ್ಞಾನವುವಿಜ್ಞಾನಮಯ ಶಬ್ದದಿ ವಿಶೇಷಜ್ಞಾನ 13ಆನಂದಮಯಶಬ್ದದಿಂದಲಿ ಜÉÕೀಯವುಆನಂದಾದ್ಯಖಿಳಗುಣ ಅಪರಿಚ್ಛಿನ್ಮತ್ವಅನ್ನಮಯ ಪ್ರಾಣಮಯ ಸತ್ಯಂ ಬ್ರಹ್ಮಮನೋಮಯ ವಿಜ್ಞಾನಮಯ ಜ್ಞಾನಂ ಬ್ರಹ್ಮ 14ಆನಂದಮಯಆನಂತಂ ಬ್ರಹ್ಮ ಎಂದೀ ರೀತಿಮಂತ್ರವರ್ಣೋಕ್ತ ಶಬ್ದಗಳಿಗೇಕಾರ್ಥಆನಂದಮಯಮೊದಲಾದ ಶಬ್ದಗಳಿಂದಆನಂದಪರಿಪೂರ್ಣ ವಿಷ್ಣು ನೀನೇ ವಾಚ್ಯ 15ಆತ್ಮ ನೀಆನಂದಮಯಇತರರು ಅಲ್ಲಆನಾತ್ಮರು ಸಂಪೂರ್ಣಸ್ವತಂತ್ರರು ಅವರುಚೇತನಾಚೇತನದಸತ್ತಾನಿನ್ನಿಂದಲೇಆನಂತ ನೀ ಸರ್ವಗನು ಆಸಮ ಪ್ರಭು ಐರ 16ಬ್ರಹ್ಮ ವಿದಾಪ್ನೋತಿ ಪರಂ ಎಂದು ಉಪನಿಷದ್ವಾಕ್ಯಬ್ರಹ್ಮಾಪರೋಕ್ಷವೇ ಮೋಕ್ಷಕ್ಕೆ ಕಾರಣಬ್ರಹ್ಮೇತರ ವಿರಿಂಚಾದಿ ಜೀವರ ಜ್ಞಾನಮೋಕ್ಷಕೊಡಲು ಎಂದು ಶೃತಿಯು ಪೇಳುತಿದೆ 17ತಮೇವಂ ವಿದ್ವಾನಮೃತ ಇಹಭವತಿನಾನ್ಯಃ ಪಂಥಾ ಅಯನಾಯ ವಿದ್ಯತಾಎಂಬ ಶೃತ್ಯನುಸಾರ ನಿನ್ನಾಪರೋಕ್ಷ ವಿನಾಮುಕ್ತಿಯು ಲಭಿಸದು ಅನ್ಯಜ್ಞಾನದಿ ಎಂದೂ 18ಆನಂದಪ್ರಚುರ ಪೂರ್ಣಾನಂದಮಯ ನೀನೆಆನಂದ ತರತಮದಿ ಜೀವರಲಿ ಉಂಟುಅತ್ಯಂತ ಭೇದವು ನಿನಗೂ ಜೀವರಿಗೂಅನಂತ ಅಪರಿಮಿತ ಆನಂದಿ ನೀನೆ 19ರುದ್ರನ ಶತಗುಣಿತ ಆನಂದ ನಾಲ್ಮೊಗನಒಂದು ಆನಂದವು ಎಂಬುವುದು ಶೃತಿಯುಆನಂದ ಪರಿಮಿತವು ಜೀವರಿಗೆ ಈ ರೀತಿಆನಂದ ಅಪರಿಮಿತ ನಿನ್ನಯ ಸ್ವರೂಪ 20ಸುಖಮಯ ನಿನ್ನಪರಿಮಿತಾನಂದಾದಿಗಳನುಸಾಕಲ್ಯತಿಳಿದವರು ಇಲ್ಲವೇ ಇಲ್ಲಸಾಕಲ್ಯಶಬ್ದಗಳು ಪೊಗಳಲರಿಯವು ನಿನ್ನಏಕಸುಖಮಯ ನೀನು ಜೀವರಿಗೆ ಭಿನ್ನ 21ತತ್ವಮಸ್ಯ ಹರಿಬ್ರಹ್ಮಾಸ್ಮಿ ಪುರುಷಯೇ ವೇದಂಸರ್ವಂ ಎಂಬಂಥಾ ಇಂಥ ಶೃತಿ ಮಾತುಗಳುಜೀವೇಶ ಐಕ್ಯವನು ಬೋಧಿಸುವವಲ್ಲವುಸರುವಿಚಾರ ನಿರ್ಣಯದಿ ಭೇದಬೋಧಕವೆ 22ಜೀವರಿಗೆ ಜನ್ಮಜೀವನಸತ್ತಾದಾತನುಸರ್ವಾಶ್ರಯ ಸರ್ವನಿಯಾಮಕನು ಆತ್ಮಜೀವರು ಪರಬ್ರಹ್ಮಜ್ಞಾನದಿಂ ಪೊಂದುವಸೋಚಿತಪೂರ್ಣತ್ವ ಕೊಡುವ ನೀ ಬ್ರಹ್ಮ 23ಸರ್ವಕ್ಕೂ ಭಿನ್ನ ನೀ ಸರ್ವತ್ರ ಸರ್ವದಾಸರ್ವದೊಳು ಇರುವಂಥ ಸರ್ವೇಶ್ವರಸರ್ವ ಸತ್ತಾದಿ ಪ್ರದತ್ವ ಸ್ವಾಮಿತ್ವದಿಂಸರ್ವ ನೀನೆಂದೆನಿಸಿಕೊಂಬೆಯೊ ದೇವ 24ಸರ್ವವಂದ್ಯನು ವಿಷ್ಣು ಸರ್ವಾಂತರ್ಯಾಮಿಯುಸ್ವತಂತ್ರ ಈಶನು ಸರ್ವಜೀವರಿಗೆ ಭಿನ್ನಸರ್ವಸ್ವಾಮಿಯು ನೀನು ಎಂದರಿತು ಭಜಿಪರಿಗೆಸರ್ವಶೋಕವ ಬಿಡಿಸಿ ಮೋಕ್ಷಸುಖವೀವೆ 25ಸರ್ವಜಡ ಚೇತನದಿ ಅಂತರ್ನಿಯಾಮಕನುಸರ್ವಜಗದಾಧಾರ ಏಕ ಬಹುರೂಪತ್ವಂ ಅಸೌ ಅಹಮೆಂದು ಸರ್ವನಾಮದಿ ವಾಚ್ಯಸರ್ವಜಡ ಚೇತನಕೆ ವಿಲಕ್ಷಣನು ಸ್ವಾಮಿ 26ಅತೀಂದ್ರಿಯವು ಬ್ರಹ್ಮವಿಷಯಕ ಜ್ಞಾನಶೃತ್ಯನುಸಾರವಿಲ್ಲದ ಅನುಮಾನದುಸ್ತರ್ಕದಿಂದಲಿ ಲಭಿಸದು ಯಾರಿಗೂಮೋದಮಯ ಶ್ರೀ ವಿಷ್ಣು ಜೀವರಿಂ ಭಿನ್ನ 27ಬದ್ಧರೊಳು ಮುಕ್ತರೊಳು ಇದ್ದು ನೀ ನಿಯಮಿಸುವೆಬದ್ಧರಂತೇ ಮುಕ್ತಜೀವರಿಗೂ ಭಿನ್ನಮುಕ್ತರಿಗೆ ಅವರವರ ಆನಂದ ಅನುಭವವುಅಧೀನ ನಿನ್ನಲ್ಲಿಆನಂದಮಯಶ್ರೀಶ28ಸದಮಲ ಬ್ರಹ್ಮ ನಿನ್ನ ಪರೋಕ್ಷಜ್ಞÕನಿಗೆಪದುಮಸಂಭವ ಸಹ ನೀನು ಸಹ ಇದ್ದುಒದಗಿಸುವೆ ಸೋಚಿತ ಮೋಕ್ಷಸುಖ ಅವರಿಗೆಹೇ ದಯಾನಿಧೇ ನಮೋ ಆನಂದಪೂರ್ಣ 29ಅನ್ನ ಪ್ರಾಣ ಮನೋವಿಜ್ಞಾನಆನಂದಮಯಪರಿಣಾಮ ಅಭಿಮಾನರಹಿತ ಅಧಿಕಾರಿಆನಂದ ಪ್ರಚುರನೇ ಲೋಕಚೇಷ್ಟಕ ನೀನೆಮಂತ್ರವರ್ಣೋಕ್ತ ಮಹಾಮಹಿಮ ಸುಖಪೂರ್ಣ 30ವನಜಾಸನಾದಿಗಳು ಆನಂದಮಯರಲ್ಲನಿನ್ನಿಂದ ಉಪಜೀವ್ಯ ಭಿನ್ನರು ಅವರುಆಮ್ನಾಯದಿಂ ವೇದ ದುಸ್ತರ್ಕಕತಿ ದೂರಆನಂದಮಯವಿಷ್ಣು ಮುಕ್ತರಿಗೂ ಆಶ್ರಯನು31ಜ್ಞಾನಸುಖಪೂರ್ಣ ಪ್ರಸನ್ನ ಶ್ರೀನಿವಾಸಪೂರ್ಣಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಎನ್ನ ಒಳಹೊರಗಿದ್ದು ನೀನೆ ನುಡಿದೀ ಗ್ರಂಥನಿನಗೆ ಅರ್ಪಣೆ ಸುಹೃದನಿತ್ಯಸಂತೃಪ್ತ32
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಮಾಧವ ದಾಮೋದರ ನಾಮಾರ್ಚಿತಕಾಮಾಸೋಮಾನನದಾಮಾ ರಿಪುಭೀಮಾ ಎಚ್ಚರಿಕೆ ಪಬೃಂದಾರಕಬೃಂದಾರ್ಚಿತ ವಂದಿತ ಮುಚುಕುಂದಸುಂದರ ರಥ ವಂದಿತ ನವಕುಂದಾ ಎಚ್ಚರಿಕೆ 1ಗಂಗಾಪದರಂಗೇಶ ಭುಜಂಗಾರಿತುರಂಗಶೃಂಗಾರ ಶುಭಾಂಗ ಭವಭಂಗ ಎಚ್ಚರಿಕೆ 2ಮಾರಾರಿಸಮಾಧಿತವಾರಾಸಿಗಭೀರಸೂರ ಸುಕುಮಾರಾ ರಣಧೀರಾ ಎಚ್ಚರಿಕೆ 3ಶೇಷಾಚಲ ಭೂಷಾಹತದೋಷಾ ಮೃದುಭಾಷಾಭಾಷಾಪತಿಪೋಷಾ ದಶವೇಶಾ ಎಚ್ಚರಿಕೆ 4ಶ್ರೀಮದಖಿಲಾಂಡಕೋಟಿ ಬ್ರಹ್ಮಾಂಡನಾಯಕಆದಿಮಧ್ಯಾಂತರಹಿತ ಘನಸಾರವಿಲಸನ್ಭ್ರೂಮಧ್ಯಕಸ್ತೂರಿ ತಿಲಕೋಜ್ವಲಾ ದಿವ್ಯ ಪೀತಾಂಬರಧಾರೀಶ್ರೀಯಲಮೇಲ್‍ಮಂಗಾ ಮನೋಹರಶ್ರೀಭಾರ್ಗವಾಸರ ಭಜನೋಲ್ಲಾಸಾಶ್ರೀಚಾಮರಾಟ್ಪಾಲಿತ ಸತ್ಸಂಪ್ರದಾಯ ಸುಜ್ಞಾನಬೋಧಿನೀ ಸಮಾಜೋದ್ಧಾರಕಾ ಎಚ್ಚರಿಕೆ 5
--------------
ತುಳಸೀರಾಮದಾಸರು
ಶ್ರೀರಾಮ ಜಯರಾಮ ಜಯತುಜಯತು ಸೀತಾರಾಮ ರಾಮ ಚರ-ಣಾರವಿಂದದ ಭಕ್ತಿ ದೃಢವಾಗಿ ಕೊಡು ಜಯ ರಾಮ ರಾಮಕ್ರೂರಕಾಮಾದಿಗಳ್ಸೂರೆಗೊಂಬರು ಸೀತಾರಾಮ ರಾಮ ರಾವ-ಣಾರಿ ನೀನಲ್ಲದೆ ಯಾರಿಲ್ಲಗತಿಜಯ ರಾಮ ರಾಮ1ಬುದ್ಧಿ ಜ್ಞಾನ ಶಕ್ತಿ ಸಿದ್ಧಿದಾಯಕ ಸೀತಾರಾಮ ರಾಮ ಗುಣ-ವೃದ್ಧಿಕಾರಣ ಭಕ್ತಿಶ್ರದ್ಧೆಯ ಕೊಡು ಜಯ ರಾಮ ರಾಮಬಿದ್ದೆನಜ್ಞಾನಸಮುದ್ರಮಧ್ಯದಿ ಸೀತಾರಾಮ ರಾಮ ಎನ್ನ-ನುದ್ಧರಿಸುವರೆ ಪ್ರಸಿದ್ಧ ನೀನೆ ಜಯ ರಾಮ ರಾಮ 2ನಿನ್ನ ನಾಮವೆ ಪ್ರಸನ್ನ ಪಾವನ ಸೀತಾರಾಮ ರಾಮ ಸ-ರ್ವೋನ್ನತ ಮಹಿಮವರೇಣ್ಯ ಶಾಶ್ವತ ಜಯ ರಾಮ ರಾಮನಿನ್ನಾಧೀನವು ನಿಖಿಲ ಜಗವು ಸೀತಾರಾಮ ರಾಮ ಪರಿ-ಪೂರ್ಣಾತ್ಪೂರ್ಣವರೇಣ್ಯ ಶಾಶ್ವತ ಜಯ ರಾಮ ರಾಮ 3ಸ್ವಾಂತರಂಗಭಕ್ತಿಚಿಂತಾಮಣಿ ಸೀತಾರಾಮ ರಾಮ ಆತ್ಮ-ತಂತ್ರನಿಯಂತ್ರ ಸರ್ವಾಂತರಾತ್ಮಕ ಜಯ ರಾಮ ರಾಮಭ್ರಾಂತಿ ತ್ಯಜಿಸುವುದಕೆಂತುಪಾಯವು ಸೀತಾರಾಮ ರಾಮ ಏ-ಕಾಂತಸ್ಮರಣೆಯ ನಿರಂತರ ಕೊಡು ಜಯ ರಾಮ ರಾಮ 4ಮುಖ್ಯ ಸಚಿವ ಮಹಾ ಮುಖ್ಯಪ್ರಾಣನುಸೀತಾರಾಮ ರಾಮ ದುಷ್ಟ-ರಕ್ಕಸಾಳಿಯ ಸೊಕ್ಕಡಗಿತು ಜಯ ರಾಮ ರಾಮಕರ್ಕಶಕಲಿಕಾಲ ಮಿಕ್ಕಿ ಬಂದುದು ಸೀತಾರಾಮ ರಾಮ ಮನ-ಸೊಕ್ಕಿ ಮೋಹದ ಬಲೆಗೆ ಸಿಕ್ಕಿಬಿದ್ದುದು ಜಯ ರಾಮ ರಾಮ 5ದಾಸಜನರ ಹೃದಯಸ್ಥಿತ ಸೀತಾರಾಮ ರಾಮ ಶ್ರೀನಿ-ವಾಸ ನಿನ್ನವರಭಿಲಾಷೆಯ ಕೊಡು ಜಯ ರಾಮ ರಾಮವಾಸವಮುಖ್ಯ ವಿಬುಧಾಸುರನುತಸೀತಾರಾಮ ರಾಮ ಸಾಧು-ವಾಸಸಂತೋ ಪ್ರಕಾಶವ ಕೊಡು ಜಯ ರಾಮ ರಾಮ 6ಜ್ಞಾನವಜ್ಞಾನವು ಭಾನುತಿಮಿರ ಸೀತಾರಾಮ ರಾಮ ಸತ್ಯ-ಜ್ಞಾನ ಭಕ್ತಿಭಾಗ್ಯ ನೀನಿತ್ತುಪೊರೆಜಯ ರಾಮ ರಾಮಹೀನರೈವರು ಸ್ವಾಧೀನಗೊಂಬರು ಸೀತಾರಾಮ ರಾಮ ಪವ-ಮಾನವಾಹನ ನಿನ್ನ ಧ್ಯಾನವ ಕೊಡು ಜಯ ರಾಮ ರಾಮ 7ಚಿತ್ತಕೆ ನಿಲವಿಲ್ಲ ಚಿಂತೆ ಹಲವು ಸೀತಾರಾಮ ರಾಮ ತವಭೃತ್ಯನಾಗಿರುವ ಸದ್ಭಕ್ತಿಯ ಕೊಡು ಜಯ ರಾಮ ರಾಮಬತ್ತಿಹೋಗಲಿ ಮೋಹದುತ್ತುಂಗಾರ್ಣವಸೀತಾರಾಮ ರಾಮ ಪರ-ವಸ್ತುತ್ವದೇಕಾಸಕ್ತಿಯ ಕೊಡು ಜಯ ರಾಮ ರಾಮ 8ಆಧಿವ್ಯಾಧಿ ಭವಾಂಬೋಧಿಕುಂಭಜ ಸೀತಾರಾಮ ರಾಮ ತವಪಾದಾಂಭೋಜಪ್ರಸಾದಪಾಲಿಸು ಜಯ ರಾಮ ರಾಮಸಾಧುಸಂಗಸುಖಬೋಧೆಯ ಕೊಡು ಸೀತಾರಾಮ ರಾಮ ಕಲಿ-ಬಾಧೆ ಪರಿಹರಿಪ ಹಾದಿ ತೋರಿಸು ಜಯ ರಾಮ ರಾಮ 9ಧ್ಯಾನವಿರಲಿ ಎನ್ನ ಮಾನಸದಲಿ ಸೀತಾರಾಮ ರಾಮ ವಿಷಯಾನುಭವದಿ ಬಲು ಹಾನಿಯಾದೆನು ಜಯ ರಾಮ ರಾಮದೀನಜನರ ಕಾಮದೇನು ರಘುವರ ಸೀತಾರಾಮ ರಾಮ ಖಲ-ದಾನವಾರಣ್ಯಕೃಶಾನು ಮಾನದ ಜಯ ರಾಮ ರಾಮ 10ದುಷ್ಟರ ಸಂಗದಿಂದೆಷ್ಟೊ ನೊಂದೆನು ಸೀತಾರಾಮ ರಾಮ ಸುವಿ-ಶಿಷ್ಟರ ಸಂಗವ ಕೊಟ್ಟು ಸಲಹೊ ಜಯ ರಾಮ ರಾಮಭ್ರಷ್ಟ ಪ್ರಕೃತಿಯನ್ನು ಕುಟ್ಟಿ ಕಳಚು ಸೀತಾರಾಮ ರಾಮ ಪರ-ಮೇಷ್ಟ್ಯಾದಿ ಸುಮನಸರಿಷ್ಟದಾಯಕ ಜಯ ರಾಮ ರಾಮ 11ತನ್ನ ಕೇಡು ತಾನರಿಯದಾದೆ ಸೀತಾರಾಮ ರಾಮ ಸುಪ್ರ-ಸನ್ನ ನಿನ್ನ ಸ್ಮರಣೆಯನಿತ್ತುಪೊರೆಜಯ ರಾಮ ರಾಮಹಣ್ಣೆಂದು ದೀಪವ ತಿನ್ನ ಪೋದೆನು ಸೀತಾರಾಮ ರಾಮ ಹೆಣ್ಣುಹೊನ್ನಿಗಾಗಿ ಪರವನ್ನು ಮರೆತೆ ಜಯ ರಾಮ ರಾಮ 12ನಿತ್ಯನಿನ್ನ ದಾಸ್ಯವಿತ್ತು ರಕ್ಷಿಸು ಸೀತಾರಾಮ ರಾಮ ಯಾವ-ಚ್ಚಿತ್ತ ತವ ಧ್ಯಾನದಿ ತೃಪ್ತಿಯಾಗಲಿ ಜಯ ರಾಮ ರಾಮಸತ್ಯಾತ್ಮರ ಸಂಗಸತ್ವ ವರ್ಧಿಸು ಸೀತಾರಾಮ ರಾಮ ಪರ-ಮಾರ್ಥವಿಚಾರ ಸತ್ತತ್ತ್ವವರುಹು ಜಯ ರಾಮ ರಾಮ 13ಕರ್ತಾಕಾರಯಿತನು ಭರ್ತಾರನು ಸೀತಾರಾಮ ರಾಮ ಪುರು-ಷಾರ್ಥರೂಪ ತವ ಭಕ್ತಿ ಪ್ರಾರ್ಥನೆ ಜಯ ರಾಮ ರಾಮಪ್ರತ್ಯಗಾತ್ಮ ಮನೋವೃತ್ತಿಯೊಳಿರು ಸೀತಾರಾಮ ರಾಮ ಸ್ವಾಮಿ-ಭೃತ್ಯನ್ಯಾಯದಿ ನಿಯಮಿಸುತ್ತ ನಡೆಸು ಜಯ ರಾಮ ರಾಮ 14ಅಕುಟಿಲಗುಣಗಳ ಪ್ರಕಟಿಸೆನ್ನೊಳುಸೀತಾರಾಮ ರಾಮ ವಾಯು-ಸಖಸ್ಪರ್ಧಾತ್ಮಕ ಸಾಧುಪ್ರಕೃತಿಪಾಲಿಸು ಜಯ ರಾಮ ರಾಮಲಕ್ಷುಮಿನಾರಾಯಣ ತ್ರಿಕಣಕುದ್ಧಾಮನೆಸೀತಾರಾಮ ರಾಮ ಬ್ರಹ್ಮಾ-ದ್ಯಖಿಳ ಚೇತನಾತ್ಮಕ ಸರ್ವೋತ್ತಮ ಜಯ ರಾಮ ರಾಮ 15
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀವ್ಯಾಸರಾಜರು105ಪಾಲಿಸೋ ಯತಿರಾಜ ಪಾಲಿಸೋಪಾಲಿಸೋ ಮುನಿ ವ್ಯಾಸ ರಾಜ | ಜಗ -ತ್ತಲ್ಲಿ ನಿನ್ಮಹಿಮೆ ಸುಭ್ರಾಜ | ಅಹ |ಕಾಲಲ್ಲಿ ಶರಣಾದೆ ಶ್ರೀಲೋಲಪ್ರಿಯ ನಿನ್ನಆಳೆಂದು ಗಣಿಸಿ ಪಾಲಿಪುದೆನ್ನ ಪ್ರತಿಕ್ಷಣ | ಪಾಲಿಸೋ | ಪದಿನಪ ಸುತೇಜ ಬ್ರಹ್ಮಣ್ಯ | ತೀರ್ಥಮುನಿಸಾರ್ವಭೌಮರ ದಿವ್ಯ |ಚಾರುವನರುಹಕರದಿಂದ ಉದಯ | ಇನ್ನುಏನೆಂಬೆ ನಿನ್ನ ಪ್ರಾಬಲ್ಯ | ಅಹ |ದೀನ ವತ್ಸಲ ನಿನ್ನ ಶರಣು ಹೊಕ್ಕೆನು ನಾನುಎನ್ನ ಭಾಗ್ಯೋದಯ ತವ ಕಾರುಣ್ಯದಿ ಇನ್ನು 1ಕರುಣಿ ಸುಶಾಂತ ಸುವರ್ಣ | ವರ್ಣತೀರುಥಕರ ಕಂಜೋತ್ಪನ್ನ | ಸುಸ್ಥಿರ ವರಭಕ್ತಿವಿಜ್ಞಾನ| ಸಂ-ಪನ್ನ ಶ್ರೀ ಪಾದಾರ್ಯರನ್ನ | ಅಹ |ಸೇರಿ ಸೇವಿಸಿ ವಾದಿಕರಿಪಂಚಾನನಾದಸೂರಿಸಜ್ಜನನುತ ವ್ಯಾಸ ಮುನೀಂದ್ರ2ಮಾಲೋಲ ಕೃಷ್ಣಸುಪ್ರಿಯರು |ನಿತ್ಯಕಾಳೀಶ ನಿಮ್ಮೋಳ್ ಪ್ರಚುರರು | ಮತ್ತುವ್ಯಾಳೇಶ ಅಂಶ ಸಂಯುತರು | ಎಂದುಹೇಳೋರು ಹೀಗೆ ವಿಬುಧರು | ಅಹ |ಕೀಳುವಿಷಯದಿ ಎನ್ ಮನ ಸೋಲದೇ ಹೊರಒಳಗಿಪ್ಪ ಹರಿರೂಪ ವ್ಯಾಳೆ ವ್ಯಾಳೆಗೆ ತೋರು 3ದ್ವಾಸಪ್ತತಿ ಸºಸ್ರ | ನಾಡಿತತ್ರಸ್ಥರೂಪಸಮೀರ| ಅವನವಿಂಶತಿ ಮೇಲೇಳು ನೂರು | ಪ್ರತಿಮನೀ ಸ್ಥಾಪಿಸದಿಯೋ ಹೇ ಧೀರ | ಅಹಈ ಸಮಸ್ತ ಹನುಮರೂಪ ಒಂದೊಂದರೊಳ್ಶತರೂಪ ಸ್ಮರಣೀಯ ಶ್ರೀಶ ಸಾಸಿರ ನಾಮ 4ಸಾತ್ಯವತೀಯ ವೇದಾರ್ಥ | ಅರಿತುಮಧ್ಯಗೇಹನು ವಿವರಿಸಿದ | ಆಗಜಯರಾಯ ತತ್ ಟೀಕೆ ಬರೆದ | ಈಗವ್ಯಾಸರಾಯನು ವಿವರಿಸಿದ | ಅಹಮಿಥ್ಯಾ ತತ್ವವ ಪೇಳ್ದ ಮಾಯ್‍ಗಳ ಬಾಯ್ ಮುಚ್ಚಿನಿತ್ಯಸುಖವನೀವ ತತ್ವ ಬೋಧಿಸಿದಿ5ಮಾರ್ತಾಂಡಕತ್ತಲೆ ಕಳೆವ | ತರ್ಕತಾಂಡವ ದುಸ್ತರ್ಕ ತರಿವ |ಬಂಡುಮಿಥ್ಯಾವಾದಿಗಳ ದುರ್ಮತವ | ತುಂಡುತುಂಡುಮಾಡಿದ ನ್ಯಾಯಾಮೃತವ | ಅಹಕೊಂಡಾಡಳಲವೇ ಚಂದ್ರಿಕಾಈವಆಹ್ಲಾದವಬ್ರಹ್ಮಾಂqದೊಡೆಯನ ಅಮೃತ ಪ್ರಸಾದವ 6ಪ್ರಣವಮಂತ್ರದಿ ಲಕ್ಷ್ಮೀರಮಣ | ಎಂಟುವರ್ಣ ಮಂತ್ರದಿ ಶ್ರೀರಮಣ | ವಿಷ್ಣುಷಡ್ವರ್ಣದಲ್ಲಿ ಸತ್ಯಾರಮಣ ಹಾಗೂವರ್ಣ ಸರ್ವದಿ ರಮಾ ರಮಣ | ಅಹಧ್ವನಿ ವರ್ಣ ಪ್ರತಿಪಾದ್ಯ ಸತ್ತಾದಿದಾತಅನುತ್ತಮಹರಿರೂಪಗುಣಕ್ರಿಯಾ ಹಾಡಿದಿ7ಭೂಪನ ಹರಿಯಾಸನವ ನೀ ಏರ್ದಿ | ಏರಿನೃಪವರನಪಮೃತ್ಯು ತರಿದಿ | ಯತಿತಪಸ್ವಿಗಳಿಗೆ ಪಾಠ ಪೇಳ್ದಿ | ಸರ್ವವಿಭುದರಿಂದಲಿ ಪೂಜ್ಯನಾದಿ | ಅಹ |ಗೋಪಾಲ ಅಸುಪಾಲನ್ನೊಲುಮೆ ನಿನ್ನಲ್ಲೆಷ್ಟೋಶ್ರೀಪನ ದಾಸವೃಂದಬ್ಜ ಕೂಟಕೆ ಸೂರ್ಯ 8ನರಸಿಂಹ ಗೋಪಾಲ ಕೃಷ್ಣ | ಯಜÕವರಾಹಪಟ್ಟಾಭಿರಾಮನ್ನ | ಬಹುಪರಾಶರ್ಯಾದಿ ರೂಪನ್ನ |ನಿತ್ಯನಿರುತ ಸಂಪೂಜಿಪ ಘನ್ನ | ಅಹವರಭಕ್ತಾಗ್ರಣಿ ನೀನು ಸರಸಿಜಾಸನ ಪಿತ'ಪ್ರಸನ್ನ ಶ್ರೀನಿವಾಸ' ನ್ನೊಲಿಸೋ ಎನಗೆಜೀಯ9 ಪ|| ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಸಜ್ಜನರ ನಡತಿದೊ ಶ್ರೀ |ಅರ್ಜುನ ಸಖನ ಪದಾಬ್ಜ ಭಜಿಸುವದೆ ಪಕುಹಕರ ಸಂಗವ ಮಾಡದೆಖೇಚರ|ವಹನನಾಳುಗಳ ಆಳಾಗೀ ||ಅಹರ್ನಿಶಿಯಲಿ ತತ್ವ ವಿಚಾರಿಸುತಲಿ |ಅಹಲ್ಲಾದವ ಮನದಲಿ ಬಿಡುತಿಪ್ಪುದೆ 1ನೀಚ ಸುರ ನರರ ಸೇವಿಸಿ ವರಶನ |ಯಾಚಿಸದೆ ಸ್ವಧರ್ಮವ ಬಿಡದೇ ||ಖೇಚರಜ ಮತವ ಪೊಂದಿಸು ಕರ್ಮಗ- |ಳಾಚರಿಸುತವಿಜ್ಞಾನಘಳಿಸುವದೆ 2ಪದ್ಮಜಮುಖರಿಗೆ ಕ್ಷಣ ಕ್ಷಣದಲಿ ಶಿರಿ |ಬುದ್ಧಿಯ ಪ್ರೇರಿಸುವಳು ಆರೇ ||ಪ್ರದ್ಯುಮ್ನನು ಮಾಡುವ ಲೀಲಿಯು ಬಳಿ |ಇದ್ದರು ಒಂದನು ಅರಿಯಳು ಎಂಬುದೆ 3ತತ್ವಭಿಮಾನಿಗಳೆಲ್ಲಸಮೀರಪ್ರ- |ವರ್ತಿಸಿದಂದದಿ ವರ್ತಿಪರೂ ||ಸತ್ಯವತಿ ಜಗತೊಬ್ಬನೆ ಅಚ್ಛಿನ್ |ಭೃತ್ಯಶಿವಾದ್ಯರು ಛಿನ್ನರು ಎಂಬುದೆ 4ಮೂಲದಲಿದ್ದ ಮಹತ್ಮಿ ನಿರುತ ಶ್ರೀ |ಲೋಲನ ಅವತಾರದೋಳುಂಟೂ ||ಕಾಳೀಶಗೆ ಕೊಂಡರೆ ಬರುತಿಪ್ಪುದು |ನೀಲಕಂಠ ಪ್ರಮುಖರಿಗಿಲ್ಲೆಂಬುದೆ 5ಚೇತನಚೇತನವಾದ ಜಗತ್ಯವು |ವಾತನಧೀನದೊಳಿರುತಿಹದೂ ||ಆತನು ರಮೆಯಧೀನವಳುಹರಿ|ದೂತಳೆಂದು ನಿಶ್ಚಯ ತಿಳಕೊಂಬುದೆ 6ಎಲ್ಲ ದಿವಿಜರವಲಕ್ಷಣ ಯುಕ್ತರು |ಬಲ್ಲಿದಹರಿಮಾರುತ ಮಾತ್ರಾ ||ಸಲ್ಲಕ್ಷಣರೆನುತಲಿ ತಿಳಿದು ಗಿರಿಜ |ವಲ್ಲಭಪ್ರಮುಖರಿಗೊಂದಿಸುತಿಪ್ಪುದೆ 7ಅಂಬುಜಭವ ಮೊದಲಾದವರಿಗೆ ಪೀ- |ತಾಂಬರತನ ಪೆಸರಿತ್ಯಹನೂ ||ಕಂಬಸದನ ತೊಲಿ ಜಂತಿಯು ಮಾಳಿಗಿ |ಎಂಬ ಶಬ್ದವಾಚ್ಯನುಹರಿಎಂಬುದೆ 8ಅರಸುಗಳಾದವರನುಗರ ಕೈಯಲಿ |ನರರ ಶೀಕ್ಷಿ ಮಾಡಿಸುವಂತೇ ||ಹರಿವಿಧಿಶಿವರೊಳು ತಾನಿಂತಾವಾಗ |ಮರಿಯಾದಿಗಳು ನಡಿಸುತಿಹ್ಯನೆಂಬುದೆ 9ಸೃಜಿಸುವ ಜನೊಳಿದ್ದು ಜಗವ ಪೊರವನು |ಭುಜಗಭೂಷಣನೊಳಿದ್ದು ಲಯಾ ||ದ್ವಿಜರೂಪಿಯೆ ಮಾಳ್ಪನು ಎಂತಿಳಿಯದ |ಕುಜನರು ನರಕವ ಐದುವರೆಂಬುದೆ 10ವಂದೊಂಧರಿ ನೇಮದಿ ಬಲ್ಲರು ಮರ |ಳೊಂದನರಿಯರಜಾದಿಗಳೂ ||ಮಂದರಧರಬಹು ಬಲ್ಲನು ಜೀವರ |ಬಂಧಕ ಶಕುತಿಯೊಳಿರಿಸಿಹನೆಂಬುದೆ 11ಜ್ಞಾನಾನಂದಾದಿ ಗುಣಭರಿತಹರಿ|ಹೀನತನವನೆಂದಿಗ್ಯು ಅರಿಯಾ ||ಕಾಣಿಸಿಕೊಳ್ಳನು ಎಂದಿಗು ಅಧಮರಿ- |ಗೇ ನಳಿನಾಕ್ಷನು ಎಂದುಚ್ಚರಿಪುದೆ 12ಝಷಮೊದಲಾದವತಾರವು ಮಿಥುನೀ |ದೆಶೆಯಿಂದಲಿ ಆಗಿಲ್ಲನಳಾ ||ಮಸಿಯಲು ಕಾಷ್ಠದಿ ತಾ ತೋರ್ವಂದದಿ |ವಸುದೇವಜನವ್ಯಕ್ತನು ಯಂದರಿವದೆ 13ಆಪಗ ವನಧಿಯನಳನಿಳಶಶಿರವಿ|ಈ ಪೊಡವೀವನನಿರಂತರದೀ ||ಶ್ರೀಪತಿಕಟ್ಟಲಿಯೊಳಗಿಹದೆಂದು ಪ- |ದೆ ಪದೆ ನೆನದು ಸುಖಬಡುತಲಿರುವುದೆ 14ನಿಶಿಯಲಿ ಕಂಡಿಹ ಸ್ವಪ್ನವು ನಿಶ್ಚಯ |ಅಸಮ ಸೃಜಿಸಿದ ಜಗತ್ಯವನೂ ||ಹುಸಿಎಂಬವ ಕುಲಭ್ರಷ್ಟನು ಎಂದಿಗು |ಹಸಗತಿ ಅವನಿಗೆ ಇಲ್ಲಿಲ್ಲೆಂಬುದೆ 15ಪ್ರಾಣಿಗಳೊಳಗಿದ್ದೆಲ್ಲ ಕೆಲಸವನು |ತಾನೆ ಮಾಡಿ ಮಾಡಿಸಿ ಫಲವಾ ||ಏನು ನೋಡೆ ನಿರ್ಮಲನಾಗಿಹಹರಿ|ಭಾನುಸಖ ಜಲದೊಳಿರುವಂತೆಂಬುದೆ16ತಾ ಬಂಧಿಸುತಿಹ ಸರ್ವ ಜಗತ್ಯವ |ನೂ ಬದ್ಧನು ಅಲ್ಲವು ಊರ್ಣಾ ||ನಾಭಿಯ ಜಾಲಿಯ ಹೊರಗಿರುವಂದದಿ |ಶ್ರೀ ಭಗವಂತನು ಇರುತಿಹನೆಂಬುದೆ17ಭಕ್ತಿಗೆ ಭೇದವು ಜ್ಞಾನಕೆ ಭೇದವು |ಮುಕ್ತಿಗೆ ಭೇದವು ಯಂತಿಳಿದೂ ||ಸುತ್ಪುರುಷರ ಸ್ನೇಹವ ಸಂಪಾದಿಸಿ |ಮತ್ತೊಂದೊಲ್ಲೆನು ಯಂದಿರುತಿಪ್ಪುದೆ 18ಸಾಧನತ್ರಯ ಫಲಗಳನು ವಿಚಾರಿಸಿ |ಮಾಧವನಗುಣಮಹತ್ಮಿಯನೂ ||ಸಾದರದಿಂ ಜ್ಞಾನಿಗಳ ಮುಖದಲಿ ದಿ- |ನೇ ದಿನೇಕೇಳಿವಿಜ್ಞಾನಘಳಿಸುವದೆ 19ಕಾಲಿಲ್ಲದೆ ನಡಿಯಲು ಬಲ್ಲನುಹರಿ|ಕೇಳುವ ಕಿಂವಿಯಿಲ್ಲದೆ ತನ್ನಾ ||ಲೀಲಿಯು ಹೀಂಗದೆ ಯಂದು ತಿಳಿಪುದಕೆ |ಈ ಲೋಕದಿಅಹಿಮಾಡಿಹನೆಂಬುದೆ 20ಚೇತನ ಕೃತ್ಯವ ಮಾಡುತಲಿಪ್ಪವ |ಚೇತನಗಳು ಚಿಂತಾಮಣಿ ದೇ- ||ವಾತರು ಸಂಜೀವನ ಪರ್ವತ ಶ್ರೀ-ನಾಥನ ಆಜÕವು ಯಿದು ಎಂದರಿವುದೆ 21ಸತ್ವಾದಿ ಗುಣರಹಿತ ಪರಮಾತ್ಮನು |ಚಿತ್ತು ಜ್ಞಾನಬಲ ಸುಖ ಪೂರ್ಣಾ ||ಮೃತ್ಯುಂಜಯಸಖಗುಣಶೂನ್ಯಂಬ ಪ್ರ- |ವರ್ತಕ ಹೀಗೆಂದೂ ತಿಳಿದೀಹದೆ 22ಯೇಸು ಯೇಸು ಕಲ್ಪಗಳಾದರು ಶ್ರೀ- |ವಾಸುಕಿಶಯನಗೆ ಎಂದೆಂದೂ ||ನಾಶವಿಲ್ಲ ವಿಶೋಕರು ಧರಿಯೊಳು |ಶ್ರೀಶನ ವ್ಯತಿರಿಕ್ತಾರಿಲ್ಲೆಂಬುದೆ 23ಬ್ರಹ್ಮಾದಿಗಳಿಗೆ ಜನಕನು ಶ್ರೀಪರ|ಬ್ರಹ್ಮಗೆ ಒಬ್ಬರು ಸರಿಯಿಲ್ಲಾ ||ಒಮ್ಮಿಗು ಅಧಿಕರು ಇಪ್ಪರೆ ಶೃತಿಯಲಿ |ಸಮ್ಮತವಾಗದೆ ಈ ನುಡಿಯಂಬುದೆ 24ಶತಸುಖಿ ವಿಧಿ, ಕೋಟಿ ಸುಖಿ ರಮಾ, ಪರಿ- |ಮಿತಯಿಲ್ಲದ ಸುಖಿ ಕೇಶವನೂ ||ಕ್ಷಿತಿಯೊಳು ಪರಮೇಶ್ವರನೈಶ್ವರ್ಯಕೆ |ಇತರರು ಆರುಂಟು ಸಮಾನೆಂಬುದೇ 25ತಾರಿಯು ಗಗನದೊಳೀಸವೆ ಯಂಬುದು |ಧಾರುಣಿಯೊಳಗೆಣಿಸಲಿ ಬಹುದೂ ||ನಾರಾಯಣನ ಮಹತ್ಮಿ ಗಣಣಿಯನು |ಆರಾರಿಲ್ಲವು ಬಲ್ಲವರೆಂಬುದೆ 26ವಿಶ್ವಾಸದಿ ದೂರ್ವಿಯ ದಳವಿತ್ತರೆ |ವಿಶ್ವಕುಟುಂಬಿಯು ಕೈಕೊಂಬಾ ||ಅಶ್ವಾದಿ ಮುಖದಿಂ ಪೂಜಿಸಲು ಅ |ವಿಶ್ವಾಸದವರು ಕೊಳ್ಳನು ಎಂಬುದೆ27ಗೋವಿಂದಗೆ ನಿಜ ನಾಮೆನಿಸುತಿಹವು |ಐವತ್ತೊಂದೂ ವರ್ಣಗಳೂ ||ಈ ವಿವರವು ತಿಳಿದೂ ನಿಂದಾಸ್ತುತಿಗಳು |ದೇವನ ಗುಣಕಥನಗಳೆಂದರಿವದೆ 28ದುರ್ಜನರಿಗೆ ಎಂದಿಗೂ ದಯಮಾಡನು |ನಿರ್ಜರೇಶ ಸಂತರಿಗೊಲಿವಾ ||ದುರ್ಜಯವಾದ ಮನಸು ನಿಶ್ಚೈಸುತ |ಅಬ್ಜದಳಾಕ್ಷನ ಒಲಿಸಿರೊ ಎಂಬುದೆ 29ಯಮ ನಿಯಮಾದಿಗಳಲಿ ದಾರಢ್ಯದಿ |ಕಮಲಾ ಸ್ವಸ್ತಿಕದಾಸನದೀ ||ಸಮಚಿತ್ತದಿ ರೇಚಕ ಪ್ರಮುಖದಲಿಂ |ಸಮಿರನ ಬಂಧಿಸಿ ಜಪವನು ಮಾಳ್ಪುದೆ 30ಸ್ವಾಗರ್ಭಕ ಆಗರ್ಭಕ ಎಂಬುವ |ಯೋಗದ ಲಕ್ಷಣ ತಿಳಕೊಂಡೂ ||ಮೂಗಿನ ತುದಿಯನೆ ಈಕ್ಷಿಸುತಲಿ ಶ್ರೀ |ಭಾಗೀರಥಿ ಪಿತನ ಸ್ಮರಿಸುತಿಪ್ಪುದೆ31ಅಂಗುಷ್ಠಾರಂಭಿಸಿ ಮಸ್ತಕತನ |ಕಂಗಜ ಜನಕನ ರೂಪವನೂ ||ಹಿಂಗದೆ ಧೇನಿಸಿ ಮೈರಧರುಷದಿ |ಕಂಗಳಿಂದುದಕ ಸೂಸುತಲಿಪ್ಪುದೆ 32ಈ ಕರ್ಮವ ಮಾಡಿದೆ ಯನಗೀಪರಿ|ಸಾಕಲ್ಲ್ಯೆವು ಆಯಿತು ಎಂದೂ ||ಲೋಕಕೆ ತಿಳಿಸದೆ ತನ್ನಯ ಭಾವವ |ಜೋಕಿಲಿ ಬಚ್ಚಿಟ್ಟೂಕೊಂಡಿರುವದೆ 33ಧ್ಯಾನಕೆ ಕುಳಿತರೆ ಮನ ಹರಿದೋಡಲು |ಜಾನಕಿರಮಣನ ಮೂರುತಿಯಾ ||ತಾನೀಕ್ಷಿಸುತಲಿ ಸರ್ವದ ತತ್ವದ |ರೇಣುದೊಳಗೆ ಮುಣಿ ಮುಣಿಗಿ ಯೇಳುವದೆ 34ಅಸುರರನಳಿಯಲು ಶಕ್ತನು ಶ್ರೀಹರಿ |ದಶರೂಪವ ತಾಳಿದನ್ಯಾಕೇ ||ವಸುಧಿಯೊಳಗೆ ಪಾಪಿಷ್ಠ ಜನರ ಮೋ- |ಹಿಸುವದಕೀಪರಿಲೀಲಗಳೆಂಬುದೆ 35ಅನ್ಯತ್ರದಿ ಇಂದ್ರಿಯಗಳ ಚಲಿಸದೆ |ತನ್ನೊಶದೊಳಗಿರಿಸನುದಿನದೀ ||ಪನ್ನಗಶಯನನ ಪೂಜಿಯ ಮಾಡುತ |ಧನ್ಯನು ಈ ನರನೆನಿಸುತಲಿಪ್ಪುದೆ 36ಕೋಪವ ಬಿಟ್ಟು ನಿರಂತರ ಜ್ಞಾನಿಗ- |ಳಾ ಪದ ಭಜಿಸುತ ಹರಿದಿನದೀ ||ಲೋಪವ ಮಾಡದೆ ನಿರ್ಜಲ ಜಾಗರ- |ವಾಪರಮಮುದದಿ ನಡಸುತಲಿಪ್ಪುದೆ 33ಋಣಕೆ ಕಾಳಕೂಟವ ಕುಡಿವಂತೆ ಮ- |ರಣದಂದದಿ ಸನ್ಮಾನಕ್ಕೇ ||ಕುಣುಪದಂತೆ ಪರಸ್ತ್ರೀ ನೋಡಲ್ ಭಯ |ವನು ಬಡುವನು ಬ್ರಾಹ್ಮಣನೆಂದರಿವದೆ 38ಶತಮಖನಿಗೆ ಈಶಬಲ ಅವಗೆ ಬಲ ಮ- |ರುತವಗೆ ಬಲಹರಿಅವಗೆಂದೂ ||ಇತರರ ಬಲ ಬೇಕಿಲ್ಲ ಸ್ವತಂತ್ರ |ಚ್ಯುತಸರ್ವಜÕ ಸುಗುಣ ಪೂರ್ಣೆಂಬುದೆ 39ಸಂಸಾರವ ಹೇಯಿಸಿಕೊಂಡಾವಗ |ಕಂಸಾಂತಕನೂಳಿಗವನ್ನೂ ||ಸಂಶಯವಿಲ್ಲದೆ ಮಾಡುತೊಂದಧಿಕ |ವಿಂಶತಿ ಕುಲ ಉದ್ಧಾರ ಮಾಡುವದೆ 40ಪ್ರಥಮ ವಯಸದಲಿ ವಿದ್ಯಾಭ್ಯಾಸವು |ದ್ವಿತಿಯದಲ್ಲಿ ಗೃಹಕರ್ಮವನೂ ||ತೃತಿಯದಿ ಸತ್ತೀಥ್ರ್ಯಾತ್ರಿಗಳನುಮಾ|ಡುತಲಲ್ಲೆಲ್ಲಿಹ ಮಹಿಮಿ ಕೇಳುವದು 41ಘೋರತರ ಕುಸಂಸಾರವೆಂಬ ಈ |ವಾರಿಧಿತ್ವರದಾಟುವದಕ್ಕೇ ||ಮಾರಮಣನ ನಾಮೋಚ್ಚಾರವೆ ನವ |ತಾರಕವೆಂದುಪದೇಶ ಮಾಡುವದೆ 42ಜಲದೊಳಗುದ್ಭವಿಸಿದ ಮುತ್ತುದಕ ಮ- |ರಳೆ ಹ್ಯಾಂಗಾಗದೊ ಅದರಂತೇ ||ಕಲಿಕ್ಯವತಾರನ ಶರಣರು ಎಂಬರು |ಇಳಿಯೊಳು ನರರೆಂದೆನಿಸಲು ಯಂಬುದೆ 43ದ್ವಾದಶ ನಾಮವ ಪಂಚಮುದ್ರಿಗಳು |ಆದರದಲಿ ಧರಿಸುತ ಪಂಚಾ ||ಭೇದವ ತಿಳಿದು ನಿರಂತರದಲಿ ದು- |ರ್ವಾದಿಗಳ ಮತವ ಹಳಿವುತಲಿಪ್ಪುದೆ 44ಮಧ್ವಮತದ ಸರಿ ಮತಗಳು ಸಪ್ತ ಸ- |ಮುದ್ರತನಕ ಹುಡುಕಿದರಿಲ್ಲಾ ||ಬುದ್ಧಿವಂತರೆಲ್ಲೀತನ ಸೇವಿಸಿ |ಸದ್ವೈಷ್ಣವರೆಂದೆನಿಸಿರೊ ಎಂಬುದೆ 45ಮಾತಾಪಿತೃರ ಆರಾಧನಿ ಬಲು |ಪ್ರೀತಿಲಿ ಮಾಡುತ ಭಾಸ್ಕರಗೇ ||ಪ್ರಾತರಾದಿ ಸಂಧ್ಯಾಘ್ರ್ಯವ ಕೊಡುತಲಿ |ಆ ತರುವಾಯ ಜಪಂಗಳ ಮಾಳ್ಪುದೆ 46ಗುರುಹಿರಿಯರ ಚರಣವ ವಂದಿಸುತಲಿ |ಪರರಿಗೆ ಉಪದ್ರವನು ಕೊಡದೇ ||ಮರುತಾಂತರ್ಗತನೋಲ್ಗವನಲ್ಲದೆ |ನರಸ್ತೋತ್ರವ ಸ್ವಪ್ನದಿ ಮಾಡದಿಹದೆ 47ನಡಿಯಲು ದಾರಿಯ ಮನಿಯೊಳಗಿದ್ದರು |ನುಡಿ ನುಡಿಗನಿರುದ್ಧನ ನೆನದೂ ||ಬಡವರೆ ಗೋಪಾಲನ ಹೊಂದಿದವರು |ಅಡವಿಯೊಳಿದ್ದರು ಧೊರಿಗಳೆ ಎಂಬುದೆ 48ಪರಮಾಣುಗಳೊಳು ತಾನಿಹ್ಯ ತನ್ನೊಳ- |ಗಿರಸಿಹನಗಣಿತ ಬೊಮ್ಮಾಂಡಾ ||ಶಿರಿಗೆಂದೆಂದಿಗಸದಳವು ತಿಳಿಯಲು |ಕರಿವರದಿಂಥ ಮಹತ್ಮನು ಎಂಬುದೆ 49ಹೊತ್ತರಾದಿನಿಶಿಪ್ರಹರಾಗುವನಕ |ಮೃತ್ತಿಕಿ ಶೌಚಾದಿ ಸುಕರ್ಮಾ ||ತತ್ತಲವಾಗದೆ ಶ್ರೀ ಮುದತೀರ್ಥರ |ಉಕ್ತ್ಯನುಸಾರಾಚರಿಸುತಲಿಪ್ಪುದೆ 50ಹಾನಿ ಲಾಭ ಜಯ ಅಪಜಯ ಮಾನಪ- |ಮಾನಸುಖಾಸುಖ ಸಮ ಮಾಡೀ ||ಈ ನರರಿಗೆ ತನ್ನಿಂಗಿತ ತೋರದೆ |ಪ್ರಾಣೇಶ ವಿಠಲನ ಕರುಣವ ಪಡೆವದೆ 51
--------------
ಪ್ರಾಣೇಶದಾಸರು
ಸುಳ್ಳೇ ತೋರಿದೆ ಜಗವೆಲ್ಲಸುಳ್ಳಾದವರಿಗೆ ಸುಳ್ಳುಸುಳ್ಳೇ ತೋರಿದೆ ಜಗವೆಲ್ಲಪಮೂರು ಮೂರುತಿ ಮೂರು ಶಕ್ತಿಯೆ ಸುಳ್ಳುಮೂರು ಸ್ಥಾನ ಮೂರು ಗುಣಗಳೇ ಸುಳ್ಳುಮೂರು ಮೂಲವೇ ಸುಳ್ಳು ತಾನಿಹುದೇ ಸುಳ್ಳು1ಚಂದ್ರ ಸೂರ್ಯರುಗಳೆಂಬುವರೆ ಸುಳ್ಳುಇಂದ್ರರು ಅಹಮಿಂದ್ರರು ಸುಳ್ಳುಸಾಂದ್ರನಕ್ಷತ್ರವೇ ಇದು ಸುಳ್ಳು ತಾನಿಹುದೆ ಸುಳ್ಳು2ದಿಗ್ಗಜಗಳು ದಿಕ್ಪಾಲಕರೆ ಸುಳ್ಳುವಗ್ಗಿಗರಹ ವಸು ಎಂಬರು ಸುಳ್ಳುಸ್ವರ್ಗವೆಂಬುದು ಅದು ಸುಳ್ಳು3ಬಹುಲೋಕವು ಭುವನಂಗಳು ಸುಳ್ಳುಇಹಪರ ಎಂಬವು ಎರಡಿವು ಸುಳ್ಳುಬಹಿರಂಗವೆಂಬುದಿದು ಸುಳ್ಳು ತಾನಿಹುದೆ ಸುಳ್ಳು4ನಾನಾರೂಪದ ಬಹೂರೂಪವೆ ಸುಳ್ಳುನಾನಾ ವಿನೋದಂಗಳು ಇವು ಸುಳ್ಳುನಾನಾ ಬೆಳಕುಗಳು ಅವು ಸುಳ್ಳು ತಾನಿಹುದೆ ಸುಳ್ಳು5ಬ್ರಹ್ಮಾಂಡವು ತಾನಿಹುದೇ ಸುಳ್ಳುಪಿಂಡಾಂಡವು ತಾ ಮೊದಲಿಗೆ ಸುಳ್ಳುಕಂಡೆನೆಂದೆಂಬುವು ಎಲ್ಲ ಸುಳ್ಳು ತಾನಿಹುದೆ ಸುಳ್ಳು6ಸುಳ್ಳು ಚಿದಾನಂದನೆಂಬುದು ಸುಳ್ಳುಸುಳ್ಳಿನ ಕೀಲನು ಅರಿತರಿಗೆ ಸುಳ್ಳುತಿಳಿಯದವರಿಗೆ ನಿಜಸುಳ್ಳು ತಾನಿಹುದೇ ಸುಳ್ಳು7
--------------
ಚಿದಾನಂದ ಅವಧೂತರು
ಹರಿಮಂದಿರಹರಿಮಂದಿರ ಈ ಸ್ಥಳವುಹರುಷದಿ ಚಿಂತಿಪರಿಗೆ ಪಹರಿಹರ ಬ್ರಹ್ಮಾದಿಗಳು ಪೊಗಳುತಿರೆಸುರಮುನಿ ನಾರದ ಋಷಿಗಳು ಸ್ತುತಿಸಲುಸುರರುಪುಷ್ಪ ವೃಷ್ಟಿಯ ಕರೆಯಲು ಅ-ಪÀ್ಸರಸ್ತ್ರೀಯರುನರ್ತನ ಮಾಡುವ ಸ್ಥಳಅ.ಪಸಿರಿನಾರಾಯಣ ಶೇಷಶಯನದಲಿಶಯನಿಸಿ ನಿದ್ರಿಸುತಿರೆಸಿರಿಭೂದುರ್ಗಾಂಬ್ರಣಿಯರು ಸೇವಿಸಲುನಾಭಿ ಕಮಲದಲಿಸರಸಿಜೋದ್ಭವ ಸ್ತುತಿಸುತ ಧ್ಯಾನಿಸಲುಕರಜೋಡಿಸಿ ಸುಜನರು ನಮೋ ನಮೋ ಎನೆಭರದಿ ಜಾಗಟೆಭೇರಿತಾಳ ತುತ್ತೂರಿಯುಕರದಿ ಶಂಖು ಗಂಟೆ ನಾದ ಮೊಳಗೆಹರಿಭಜನೆ ಮಾಡುತ ತದ್ಧಿಮಿಕೆನ್ನುವ ಸ್ಥಳ 1ಹರಿವೈಕುಂಠದಿ ಸಿರಿಯೊಡಗೂಡಿರಲುಭೃಗುಮುನಿ ತಾಡನದಿಸಿರಿದೇವಿ ಕೋಪಿಸಿ ಹರಿಯನು ಬಿಡಲುಸಿರಿಇಲ್ಲದೆ ಒಬ್ಬನೆ ಇರಲಾಗದೆ ವೆಂಕಟಗಿರಿಗಿಳಿತರಲುಸರಸಿಜಾಕ್ಷ ಕರಿಬೇಟೆಯ ನಾಡುತಬರುತ ಪದ್ಮಾವತಿಯನು ಮೋಹಿಸಿಕೊರವಿರೂಪತಾಳುತ ಕಣಿ ಹೇಳಲುಭರದಿ ಕಲ್ಯಾಣವು ನಡಸಿದ ಸ್ಥಳವಿದು 2ಸುರರುಅಸುರರು ಶರಧಿಯ ಮಥಿಸಿರಲುಅಮೃತವನೆ ಕಂಡುಹಿರಿ ಹಿರಿ ಹಿಗ್ಗುತ ನುಗ್ಗೆ ದಾನವರುಶ್ರೀಹರಿತಿಳಿದು ತ್ವರದಿಂದ ಮೋಹಿನಿರೂಪ ತಾಳಿಬಿರಿಬಿರಿ ನೋಡುತಲಿರೆ ದಾನವರುಸುರರಿಗೆ ಅಮೃತವನುಣಿಸುತ ಮೋಹಿನಿಪರವಶದಲಿ ಮೈ ಮರತಿರೆ ಅಸುರರುಸುರರಿಗೆ ಅಭಯವ ನೀಡಿದ ಸ್ಥಳವಿದು 3ವಿಶ್ವಾಸದಿ ತಪಗೈದ ಸುರನ ನೋಡಿಮಹದೇವರು ಒಲಿದುಭಸ್ಮಾಸುರ ಬೇಡಿದ ವರಗಳ ಕೊಡಲುನಿಜ ನೋಡುವೆನೆಂದು ಭಸ್ಮಾಸುರ ಬೆನ್ನಟ್ಟುತ ಬರುತಿರಲುವಿಶ್ವವ್ಯಾಪಕಹರಿತಾ ತಿಳಿದುತಕ್ಷಣ ಸ್ತ್ರೀ ರೂಪವ ಧರಿಸುತ ಬರೆಭಸ್ಮಾಸುರ ತನ್ಹಸ್ತದಿ ಮೃತಿಸಲುಭಕ್ತರನುದ್ಧರಿಸಿದ ಈ ಸ್ಥಳವು 4ಲೋಕ ಲೋಕದ ಜನರೆಲ್ಲರು ಕೂಡಿಪ್ರಜಾ ಕಂಟಕನಾದಮೂಕಾಸುರನನು ಗೆಲ್ಲಲು ಸಾಗದಲೆಶ್ರೀಕಾಂತನ ಪ್ರಾರ್ಥಿಸೆಮೂಕಾಂಬಿಕೆ ನಾಮದಿಂದಲಿ ಪ್ರಜ್ವಲಿಸಿಮೂಕಾಸುರನನು ವಧಿಸಿದ ಶ್ರೀ ಕೋಲಾ-ಪುರದಲಿ ವಾಸಿಸುತಲಿ ಸಂತತಶ್ರೀಕರ ಕಮಲನಾಭ ವಿಠ್ಠಲಏಕಾಂತದಿ ಭಕ್ತರ ಸಲಹಿದ ಸ್ಥಳವಿದು 5
--------------
ನಿಡಗುರುಕಿ ಜೀವೂಬಾಯಿ
ಹರಿಯಲ್ಲದನ್ಯ ದೈವಂಗಳು ಕೈವಲ್ಯವೀವವೇನೈ ಶ್ರೀಹರಿಯ ಕರುಣಾಸಾಗರಕೆ ಕೂಪವಾಪಿಯು ಹೋಲ್ವವೇನೈ ಪ.ಹಳುವದ ಬಿದಿರಮೃತದ ಮಳೆಯಲಿ ಇಕ್ಷುವಹದೇನೈಹಲಕಾಲವರೆಯ ಬೇಯಿಸಿದರೆ ಮೃದುರುಚಿಯಹದೇನೈ 1ಕೆಸರು ಮಳಲು ಮೆದ್ದರೊಡಲಗ್ನಿ ತಣ್ಣಸವಹದೇನೈಬಿಸಿಲ ತೊರೆಗೆ ಮಂಜುವನಿಗೆ ಧಗೆಯತೃಷೆಹೋಹದೇನೈ2ಮಲಯಜಲೇಪಕೆ ಬಲವತ್ತರ ಭವತಾಪ ಶಾಂತವೇನೈಎಳೆಗರು ಮಣ್ಣಾವಿನ ಮೊಲೆಯುಂಡು ಜೀವಿಪುದೇನೈ 3ಹರಿಯೊಪ್ಪದಿರದಾ ಹಲವು ಧರ್ಮಕರ್ಮದ ಕಾರಣೇನೈಕರಿಯುಂಡ ಬೆಳವಲ ಹಣ್ಣಿನ ತಿಳಲೆಂದಿಗುಳಿವುದೇನೈ 4ಏಕೋ ನಾರಾಯಣ ಆಸೀತ್ ಹಾಗಂದಿಲ್ಲವೇನೈಸಾಕು ನ ಬ್ರಹ್ಮಾ ನ ಚ ಶಂಕರ:ಎಂಬೊ ಮಾತದೇನೈ 5ವಾಸುದೇವನ ಡಿಂಗರರಿಗೆ ಅಶುಭ ಹೊಂದಬಲ್ಲದೇನೈಕ್ಲೇಶಾಧಿಕವು ನೋಡಿ ಅವ್ಯಕ್ತಾಸಕ್ತರಿಗಲ್ಲವೇನೈ 6ಪ್ರಸನ್ನವೆಂಕಟಪತಿ ಅರ್ಚನೆದಾರಿಲಿ ಕಂಟಕೇನೈಹುಸಿಯಲ್ಲ ಧ್ರುವಬಲಿವಿಭೀಷಣರೆ ಸಾಕ್ಷಿ ನಂಬಿರಿನ್ನು7
--------------
ಪ್ರಸನ್ನವೆಂಕಟದಾಸರು
ಹರಿಯೆ ಅಚ್ಯುತಾನಂತ ಗೋವಿಂದದುರುಳಹಿರಣ್ಯಕ ಅಸುರ ಅವತರಿಸಿದರೆ ಎಲ್ಲಿಪರಿಪರಿಯ ಲೋಕ ಪಾತಾಳ ಸ್ವರ್ಗವ ಗೆದ್ದುಪಡೆದು ಅವನ ಸತಿಯ ಸುರಪತಿಯು ಎಳೆತರಲುಅಲ್ಲಿ ಗರ್ಭದಲಿ ಪ್ರಹ್ಲಾದನಿಹನೆಂದುಹರಿಯೆ ಚಂಡಹಿರಣ್ಯಕ ಅಸುರ ದಂಡಿಸುವದುಷ್ಟಮರ್ದನ ದೂರಾತಿದೂರ ಜಗ-ಪರಿಪರಿಯಿಂದ ತುತಿಸುತ್ತ ಕರಗಳ ಮುಗಿಯೆಇತ್ತ ಸುರರೆಲ್ಲ ತಮ್ಮ ತತ್ತಸ್ಥಾನಕೆ ಪೋಗೆಒರೆದೊರೆದು ಪೇಳಿ ಬಹು ಬಗೆ ಬಗೆಯಿಂದಲಿನಮ್ಮ ಅಂತರ ತತ್ವ ನಿಶ್ಚಯವೆ ಇದು ಸರಿಅನ್ಯರಲ್ಲವು ನಾವು ಹಿತವರೆ ನಿನಗಿನ್ನುಭಿನ್ನ ದೇಹ್ಯವುನೋಡುಮುನ್ನಿಂದಲಿ ಇನ್ನುಬಾಧ್ಯ ಬಾಧಕ ಹರಿಯೆ ಸಾಧ್ಯ ಸಾಧನಕೆಹರಿಚಂಡಮಾರ್ಯರು ತಾವು ಚೆಲುವ ಬಾಲಕಿ ಕೇಳುಆವ ವಿಪರೀತವನೆ ಅಲ್ಲದ್ದು ನುಡಿದನುಏಸುಬಗೆಯಿಂದ ಉಪಾಯದಲಿ ಕೇಳಿದರುಈಸು ದಿನ ಇವ ಎನ್ನ ಸುತನು ಎಂದರಿದಿದ್ದೆನಾನಾ ಬಗೆಯಿಂದ ವಧೆಗೇನೇನು ಉಪಾಯಎಲ್ಲಿ ಪ್ರಹ್ಲಾದ ನಿನ್ನೊಡೆಯನು ಇನ್ನುಭುಂಗಿ ಭುಂಗಿಗೆ ಬ್ರಹ್ಮಾಂಡವೆಲ್ಲ ಗದ್ದರಿಸಿನ್ನುಬಿರಬಿರನೆ ಕಣ್ಣುಗಳ ಬಿಡುವುತ್ತ ಹೂಂಕರಿಸಿಕೆಡಿಸದೆ ತಾನಿತ್ತವರಸತ್ಯವೆಂದೆನಿಸಿಪರಿಪರಿಯಿಂದ ಸಿರಿದೇವಿಗೆಇದೆ ಸಮಯವೆಂದುಸಿರಿಅಜಭವಾದಿಗಳೆಲ್ಲಪರಿಪರಿಯಿಂದಸುರ ಋಷಿಪಿತೃ ಗಂಧರ್ವಕಂದ ಪ್ರಹ್ಲಾದನ್ನ ಮುಂದಕ್ಕೆ ಕರೆದು ನಿಮ್ಮಮೆಚ್ಚಿದೆನು ಪ್ರಹ್ಲಾದ ವರವ ಬೇಡೆಂದೆನಲುಆಗ ಪ್ರಹಲ್ಲಾದಗೆ ಕರಕಮಲಗಳಿಂದಹರಿಯೆ ಜಗಕಿನ್ನು ಇರತೋರಿನ್ನು ಪ್ರಹಲ್ಲಾದಜಯ ಜಯತು ಪ್ರಹ್ಲಾದವರದ ಜಗದಾಧಾರ
--------------
ಗೋಪಾಲದಾಸರು
ಹಸಿವು ಬಹಳಾಗುತ್ತಿದೆ ಕೇಳಮ್ಮಯ್ಯಹಸನಾಗಿ ಉಣಬಡಿಸೇ ಪಬಿಸಿ ಬಿಸಿ ಕಡುಬು ಕಜ್ಜಾಯ ದೋಸೆಯು ಹುಗ್ಗಿಹಸನಾಗಿ ಬಡಿಸಮ್ಮ ಬಿಸಿ ಬಿಸಿಪರಮಾನ್ನಅ.ಪನೀರೊಳು ಮುಳುಗಿ ಬಂದೆ ಭಾರವ ಪೊತ್ತುಕೋರೆಲಿ ಧರಣಿ ತಂದೆಪೋರನೊಡನೆ ವೈರಿಯಾದ ದೈತ್ಯನ ಕರು-ಳ್ಹಾರವ ಮಾಡುತ್ತಭಾಳಬಳಲಿ ಬಂದೆ1ಪೊಡವಿ ದಾನವ ಬೇಡಿದೆ ರಾಜರ ಗೆದ್ದುಕೊಡಲಿ ಕಯ್ಯಲಿ ಪಿಡಿದೆಮಡದಿಯನರಸುತ ಅಡವಿಗಳ ಚರಿಸಿದೆಬಿಡದೆ ದೈತ್ಯರ ಸದೆ ಬಡಿದು ದಣಿದು ಬಂದೆ 2ವಿಷವನುಣಿಸಿದ ದೈತ್ಯಳ ಅಸುವನೆ ಹೀರಿಅಸುರ ಶಕಟನ ಸೀಳಿದೆವಸುದೇವ ಸುತನು ಈ ಅಸುರ ಮರ್ದನನಾಗಿಬಸುರೊಳು ಬ್ರಹ್ಮಾಂಡ ಧರಿಸಿದ ಕಾರಣ 3ಕಿಚ್ಚನುಂಗಿದ ಕಾರಣ ಹೊಟ್ಟೆಯ ಹಸಿವುಹೆಚ್ಚುತಲಿದೆ ನೋಡಮ್ಮಾಕಚ್ಚ ಬರುತಿಹ ಕಾಳಿ ಸರ್ಪನ ಹೆಡೆ ಮೇಲೆನರ್ತನ ಮಾಡುತಭಾಳಬಳಲಿ ಬಂದೆ4ಬತ್ತಲೆ ತಿರುಗಿ ಬಂದೆ ತೇಜಿಯನೇರಿಸುತ್ತಿದೆ ಧರಣಿಯನುಕರ್ತೃ ಶ್ರೀಹರಿಕಮಲನಾಭ ವಿಠ್ಠಲನಿಗೆತೃಪ್ತಿಯ ಪಡಿಸಮ್ಮ ಮುಕ್ತಿಪಥವನೀವೇ 5
--------------
ನಿಡಗುರುಕಿ ಜೀವೂಬಾಯಿ
ಹುಚ್ಚು ಹತ್ತಿತು ಹುಚ್ಚು ಹುಚ್ಚು ಜ್ಞಾನದ ಹುಚ್ಚುಹುಚ್ಚು ತಿಳಿವುದಲ್ಲ ಹುಚ್ಚನ ಗುರುವೇ ಬಲ್ಲಪನಿರ್ಮಳಾಂಗದ ಹುಚ್ಚುನಿಗಮಶಿರದ ಹುಚ್ಚುಕರ್ಮರಹಿತನ ಹುಚ್ಚುಕಮನೀಯಹುಚ್ಚು1ಸಜ್ಜನ ಸಂಗದ ಹುಚ್ಚು ಸಂತೋಷಪೂರಿತ ಹುಚ್ಚುವೆಚ್ಚವಿಲ್ಲದ ಹುಚ್ಚು ಎಣಿಸಬಾರದು ಹುಚ್ಚು2ಬ್ರಹ್ಮಾನಂದದ ಹುಚ್ಚು ಭೇದರಹಿತದ ಹುಚ್ಚುಹಮ್ಮನಳಿದ ಹುಚ್ಚು ಪರಿಪೂರ್ಣ ಹುಚ್ಚು3ಮತವ ಕಡಿದಾ ಹುಚ್ಚು ಮಹತ್ತೆನಿಪಾ ಹುಚ್ಚುಸತತ ಶಾಂತಹ ಹುಚ್ಚು ಸಹಜಾನಂದದ ಹುಚ್ಚು4ಲೋಕ ಸಾಕ್ಷಿಕ ಹುಚ್ಚು ಲೋಕವುತಾನಾದ ಹುಚ್ಚುಏಕವೆಂಬ ಹುಚ್ಚು ಯಮನ ಗೆಲಿದಾ ಹುಚ್ಚು5ಆರರ ಮೇಲಣ ಹುಚ್ಚು ಅನ್ಯಮನಸ್ಕದ ಹುಚ್ಚುಚಾರುತಾಮಸಹುಚ್ಚು ಚಲನೆಯಿಲ್ಲದ ಹುಚ್ಚು6ಗುರುಭಕ್ತಿಯ ಹುಚ್ಚು ಗುರೂಪದೇಶದ ಹುಚ್ಚುಸ್ಮರಣೆ ಬಲಿದ ಹುಚ್ಚು ಸಮನಿಸಿದ ಹುಚ್ಚು7ಜ್ಯೋತಿರ್ಮಯದ ಹುಚ್ಚು ಜಾತಿ ನಿರ್ಮೂಲದ ಹುಚ್ಚುಖ್ಯಾತಿಯಾಗಿಹ ಹುಚ್ಚು ಭೇದರಹಿತದ ಹುಚ್ಚು8ಚಿನ್ಮಯ ಚಿದ್ರೂಪದ ಹುಚ್ಚು ಚಿದಾನಂದನ ಹುಚ್ಚುತನ್ಮಯವಾಗಿದೆ ಹುಚ್ಚು ತಿಳಿಯಲರಿಯುವುದು ಹುಚ್ಚು9
--------------
ಚಿದಾನಂದ ಅವಧೂತರು