ಒಟ್ಟು 726 ಕಡೆಗಳಲ್ಲಿ , 90 ದಾಸರು , 622 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಸಂತಾನ ಗೋಪಾಲಕೃಷ್ಣ 141 ಗೋಪಿ ವಿನುತ ಧಾಮ ಅನಂತಾಸನ ಯೈದಿ ವಿಪ್ರನಿಗೆ ಸುಪುತ್ರನ್ನ ತಂದಿತ್ತ ಘೃಣೀಯೇ 1 ಅಂದು ವೈರಾಟಿಯು ಪಾಹಿ ಪಾಹಿ ಮಹಾ ಯೋಗಿನ್ ದೇವ ದೇವ ಜಗತ್ ಪತೇ ನಾನ್ಯಂ ತತ್ ಅಭಯಂ ಪಸ್ಯೆ ಎಂದು ನಾಥನೇ ನಿನ್ನ ಮೊರೆ ಹೋಗಲು ಅವಳ ಉದರ ಪ್ರವೇಶಿಸಿ ಶಿಶುವ ರಕ್ಷಿಸಿದ ಚಕ್ರಿ 2 ಸುಸ್ಪಟಿಕ ಕಾಂತಿಮಾನ್ ಶಿವ ಶಿವಾ ಪೋಲು ಈ ದಂಪತಿಗಳು ಯಥಾ ಯೋಗ್ಯ ಪ್ರೇಮ ಪರಸ್ಪರ ಬೆಳೆಸಿ ಹರಿ ಗುರು ಭಕ್ತಿ ವರ್ಧಿಸಿ ಸುಪುತ್ರ ಸಂತಾನ ಭಾಗ್ಯವಿತ್ತು ಸಲಹುದು 3 ಕಲ್ಯಾಣ ತಮರೂಪ ಅಂಬುಜ ಸುದರ್ಶನ ಬಲು ಚೆÀಲುವ ಶಂಖ ಕೌಮೋದಕೀಧರನೇ ಮಾಲಕ್ಷ್ಮೀ ವಕ್ಷನೀ ವರ ಅಭಯ ಪ್ರದನಾಗಿ ಸಲುಹುತಿಯೇ ಭಕ್ತರನ ಗುರುಗ ಶ್ರೀ ಕೃಷ್ಣ 4 ಗುರುಗಳೋಳಿಪ್ಪ ವರ ವಾಯು ಅಂತರ್ಗತನೇ ವಾರಿಜಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸ ಶರಣು ಭಾಗೀರಥಿ ಜನಕ ಪಾವನ ನಾಮನೇ ಪೂರ್ಣ ಕಾಮನೇ ಭಕ್ತ ವಾಂಛಿತ ಪ್ರದನೇ 5 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಹರಿಸ್ತುತಿ ಎಂದೆಂದಿಗೂ ಎನಗೆ ತಂದೆ ನೀ ದೇವಾಬಂದೆನ್ನ ಕರಪಿಡಿಯೊ ಬಿಂದು ಮಾಧವಾ ಪ ಸಾರ ಮಾರ ಜನಕನೆ 1 ಮಂದರಗಿರಿಯನ್ನೆ ಚಂದಾದಿಂದೆತ್ತಿದೋಕಂದನೆಂತೆಂದೆನ್ನ ಮುಂದಕೆ ಕರೆಯೋ 2 ವರಾಹ ರೂಪವ ತಾಳಿ ಧರೆಯ ಸಲಹಿದೆಯೋದುರುಳ ಮನವನಳಿದು ತ್ವರದಿ ನೀ ಕಾಯೋ 3 ಕಂಬದಿಂದಲಿ ಬಂದ್ಯೊ ಅಂಬುಜನಯನಬಿಂಬನ ಪಾಲಿಸೊ ಅಂಬುಧಿಶಯನ 4 ಇಳೆಯ ದಾನವ ಬೇಡಿ ಬಲಿಯ ಮೆಟ್ಟಿದೆಯಾಭಳಿರೆ ಪಾದವ ತೋರಿ ಉಳಹೊ ಮಹರಾಯ 5 ಛಲದಿಂದ ಕ್ಷತ್ರಿಯ ಕುಲವನಳಿದನೆಬಲವಾದ ದುರಿತವ ಕಳೆಯೊ ಸುರವರನೆ 6 ಶಿಲೆಯ ಸತಿಯ ಮಾಡಿ ಸಲಹಿದ ರಾಮಾನಲಿನಲಿವುತ ಬಾರೊ ಜಲಜ ಸಂಭವ ಪ್ರೇಮಾ 7 ಆಕಳ ಕಾಯ್ದೆಯೊ ಗೋಕುಲನಾಥಏಕಭಕ್ತಿಯನೀಯೋ ಲೋಕವಿಖ್ಯಾತ 8 ಉತ್ತಮ ಸ್ತ್ರೀಯರ ಚಿತ್ತವ ಹರಿಸಿದ್ಯೋಉತ್ತಮ ಜ್ಞಾನವನಿತ್ತು ಪೊರೆಯೊ 9ತುರಗ ರಾವುತನಾಗಿ ಮೆರೆದಂಥಾ ವೀರಭರದಿ ಕಾಡುವ ಖಳರ ತರಿಯೊ ಗಂಭೀರ 10 ಶರಧಿಶಯನ ತಂದೆವರದವಿಠಲನುಶರಣು ಬಂದವರನ್ನು ನಿರುತ ಕಾಯುವನು 11
--------------
ಸಿರಿಗುರುತಂದೆವರದವಿಠಲರು
ಶ್ರೀಕೃಷ್ಣ ಕಂಡಿರೆ ಅದ್ಭುತ ಕೂಸ ಕಂಡಿರೆ ಕಂಡಿರೆ ಅದ್ಭುತ ಕೂಸ ನಾಭಿ- ಪ. ಮಂಡಲದೊಳಗಬ್ಜಕೋಶ ಅಹ ರಿಪು ಪುಂಡರೀಕ ಚಕ್ರ ಪಾಂಡವ ವನರುಹ ಚಂಡಗದಾದಂಡ ಮಂಡಿತ ಹಸ್ತನ ಅ.ಪ ಈರೇಳು ಭುವನದೊಳಿಲ್ಲದಂಥ ಚಾರು ಶೃಂಗಾರಗಳೆಲ್ಲ ಸಿರಿನಲ್ಲ ನಿನ ಗ್ಯಾರು ಸರ್ವೋತ್ತಮರಿಲ್ಲ ಅಹ ಕ್ರೂರ ಕಂಸಭಯಭೀರುಗಳಾಗಿಹ ಶೌರಿ ದೇವಕಿಯಯಿದಾರನೆಯ ಮಗುವನು 1 ಪಾದ ವೃತ್ತ ಜಂಘೋರು ಪರಿಗತವಾದ ಜಾನು ಶೃಂಗದಂತೆ ಪೂರ್ಣಮಾದ ಮಾ ತಂಗ ಹಸ್ತಸಮನಾದ ಅಹ ಪೀವರೋರು ಸಂಗಿ ಸರ್ವಲೋಕ ಮಂಗಲದಾಯಿ ಶುಭಾಂಗವಾಸನನ್ನು 2 ತ್ರಿಭುವನ ಕಮಲಾಧಾರ ನಾಳ ನೆಗೆದು ಬಂದಿರುವ ಗಂಭೀರ ನಾಭಿ ಸ್ವಗತ ಭೇದದಿಂದ ದೂರ ನಾನಾ ಬಗೆಯಾದ ಲೀಲಾವತಾರ ಅಹ ನಗುವ ರಮೆಯ ಸ್ತನಯುಗ ಮಧ್ಯದೊಳಗಿಟ್ಟ ಖಗಪತಿವಾಹನ ಮಗುವಾದ ಬಗೆಯನು 3 ಕಂಬುಸಮಾನ ಸುಗ್ರೀವ ಲಲಿ- ತಾಂಬುಜಮಾಲೆಯ ಭಾವ ವಿಧಿ- ಕೌಸ್ತುಭ ಶೋಭಾ ಕರು ಣಾಂಬುಧಿ ಭಕ್ತ ಸಂಜೀವಾ ಅಹ ಬಿಂಬಾಧರ ಕಮಲಾಂಬಕ ಮೃದುನಾಸ ನಂಬಿದ ಭಕ್ತ ಕುಟುಂಬಿಯಾಗಿರುವವನ 4 ಮಕರಕುಂಡಲ ಯುಗ್ಮಲೋಲ ದಿವ್ಯ ಕಪೋಲ ಭವ ಚಕಿತರ ಸಲಹುವ ಬಾಲ ಪೂರ್ಣ ಅಕಳಂಕ ತಾರೇಶ ಲೀಲಾ ದಿವ್ಯ ಮುಖ ಲಲಾಟ ರತ್ನ ನಿಕಲ ಕಿರೀಟ ಸೇ- ವಕರ ರಕ್ಷಿಪ ಪೂರ್ಣ ಶಿಖರೀಂದ್ರವಾಸನ5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಗೋಪಾಲ ಕೃಷ್ಣಾತ್ಮಕ ಶ್ರೀರಾಮ ಭಜನೆ ರಾಮ ರಾಮ ಜಯರಾಮ ಪರಾತ್ಪರ | ನೌಮಿ ಪದಾಂಬುಜ ಶ್ರೀರಾಮಸೋಮ ಕುಲೋದ್ಭವ ಭೂಮ ಗುಣಾರ್ಣವ | ಕಾಮ ಪಿತನೆ ಶ್ರೀಕೃಷ್ಣ 1 ಖೂಳರ ಬಾಧೆಗೆ ಸುಜನರು ಮೊರೆಯಿಡೆ | ಪಾಲುಂಬುಧಿ ಶಯ ಶ್ರೀರಾಮಪಾಲಿಪೆನೆಂದ್ವರ ಪಾಲಿಸಿದನು | ಪಾಲಾಂಬುಧಿಶಯ ಶ್ರೀಕೃಷ್ಣ 2 ದಶಮುಖ ದೈತ್ಯನು ಲೋಕವ ಬಾಧಿಸೆ | ದಶರಥಗುದಿಸಿದ ಶ್ರೀರಾಮವಸುಧೆಯ ಭಾರವ ನೀಗುವೆನೆಂ | ದ್ವಸುದೇವ ಸುತನಾದ ಶ್ರೀಕೃಷ್ಣ 3 ಅನುಜರು ಲಕ್ಷ್ಮಣ ಭರತ ಶತೃಘ್ನರ | ಅನುಮೋದಿಸುತಲಿ ಶ್ರೀರಾಮಅನುಜನು ತಾ ಬಲರಾಮನಿಗಾಗುತ | ಅನುಜೆಯಳೊಂದಿಗೆ ಶ್ರೀಕೃಷ್ಣ4 ಶಿಶುತನ ಲೀಲೆಯ ದಶರಥಗೇ | ಕೌಸಲ್ಯಗೆ ತೋರಿದ ಶ್ರೀರಾಮಶಿಶುತನ ಲೀಲೆ ಯಶೋದೆಗೆ ನಂದೆಗೆ | ಸಂತೋಷವು ಶ್ರೀಕೃಷ್ಣ 5 ಯಾಗವ ರಕ್ಷಿಸೆ ಕರೆದೊಯ್ದನು | ಆ ಗಾಧಿಜ ನಿನ್ನನು ಶ್ರೀರಾಮಬಾಗುತ ಬಂದ ಕ್ರೂರನು ಧನು | ರ್ಯಾಗಕೆ ಒಯ್ದ ನಿನ್ನ ಶ್ರೀಕೃಷ್ಣ 6 ಮಾರ್ಗದಿ ಮಂತ್ರಗಳುಸುರಿದ ಮುನಿ | ನೈರರ್ಗಳದೀ ಶ್ರೀರಾಮಗರ್ಗಾಚಾರ್ಯನು ಭೋದಿಸೆ ಮಂತ್ರವ | ನಿರ್ಗಮಿಸಿದೆಯೋ ಶ್ರೀಕೃಷ್ಣ 7 ಪ್ರಥಮದಲಾಹುತಿ ಇತ್ತೆಯೊ ಕ್ರತುವಿಗೆ | ದಿತಿಜೆಯ ತಾಟಕಿ ಶ್ರೀರಾಮದಿತಿಜೆಯು ಪೂಥಣಿ ಅಸುವನು ಹೀರಿದೆ ಪ್ರಥಮದಿ | ಕವಳಕೆ ಶ್ರೀಕೃಷ್ಣ 8 ಅಸುರ ಸುಬಾಹುವನಳಿಯುತಲಬ್ದಗೆ | ಎಸೆದೆ ಮಾರೀಚನ ಶ್ರೀರಾಮ |ಉಸಿರನು ಹೀರಿದೆ ತೃಣವರ್ತನ ನೀ | ಅಸುರ ಶಕಟನ ಅಳಿದೆಯೊ ಶ್ರೀಕೃಷ್ಣ 9 ಚಾರು ಸುಂದರನೇ ಶ್ರೀರಾಮತೋರಿದೆ ವದನದಿ ವಿಶ್ವವ ಮಾತೆಗೆ | ಚಾರ್ವಾಂಗನೆ ಶ್ರೀಕೃಷ್ಣ 10 ವರಪದ ಶಿಲೆ ಸೋಕಲಹಲ್ಯಾ | ಶಾಪ ವಿಮೋಚನೆ ಶ್ರೀ ರಾಮವರಳೆಳೆಯುವಾಗ ಮಣಿಗ್ರೀವರ | ಶಾಪ ವಿಮೋಚನೆ ಶ್ರೀಕೃಷ್ಣ 11 ವ್ಯಾಕುಲರಾಗಿದ್ದಾ ಋಷಿಕುಲ ನಿ | ರಾಕುಲರಾದರು ಶ್ರೀರಾಮಗೋಕುಲವೂ ತವ ಲೀಲೆಗಳಿಂ ನಿ | ರಾಕುಲ ವಾಯಿತು ಶ್ರೀಕೃಷ್ಣ 12 ವೃಂದಾರಕ ವೃಂದವ ಸಲಹಿದನೂ | ಸುಂದರ ಮೂರುತಿ ಶ್ರೀರಾಮವೃಂದಾವನ ವೃಂದವ ಸಲಹೆ ದು | ರ್ವೃಂದವನಳಿದನು ಶ್ರೀಕೃಷ್ಣ 13 ಭಾಮಿನಿ ಸೀತೆಯ ಸ್ವಯಂವರ ನೇಮದಿ | ಪ್ರಾಣಿ ಗ್ರಹಣ ಶ್ರೀರಾಮಭೈಷ್ಮೀ ರುಕ್ಮಿಣಿ ಸ್ವಯಂವರ ನೇಮದಿ | ಪಾಣಿ ಗ್ರಹಣ ಶ್ರೀಕೃಷ್ಣ 14 ಭಾರ್ಗವನೂ ತಾ ನೊಂದೆಂಬುದ ನೈ | ರರ್ಗಳ ತೋರ್ದನು ಶ್ರೀರಾಮ |ವಾಕು ಸಲಿಸೆ ಬಹು ಪತ್ನಿಯರಾಳಿದ |ಏಕ ಮೇವ ತಾ ಶ್ರೀಕೃಷ್ಣ 15 ಏಕಮೇವ ತಾನೇಕ ಪತ್ನಿತ್ವವ | ಲೋಕಕೆ ತೋರಿದ ಶ್ರೀರಾಮ |ವಾಕು ಸಲಿಸೆ ಬಹು ಪತ್ನಿಯರಾಳಿದ | ಏಕಮೇವ ತಾ ಶ್ರೀಕೃಷ್ಣ 16 ರಾಜ್ಯವ ಬಿಟ್ಟನ ರಾಜ್ಯವ ಸಾರ್ದ ನಿ | ರ್ಲಜ್ಜರ ಸದೆಯಲು ಶ್ರೀರಾಮರಾಜ್ಯವ ಕಟ್ಟಿ ಸ್ವರಾಜ್ಯವ ಮಧುರೆಲಿ ನಿ | ರ್ಲಜ್ಜರ ಹನ ಶ್ರೀಕೃಷ್ಣ 17 ಭಂಜನ ಶ್ರೀಕೃಷ್ಣ 18 ದಂಡಕ ವನದಲಿ ಪುಂಡರ ದಂಡಿಸೆ | ದಂಡವ ಪಿಡಿದನು ಶ್ರೀರಾಮ |ಮಂಡೆಯ ಪಿಡಿದು ಕಂಸನ ಶಿರ | ಚೆಂಡಾಡಿದನು ಶ್ರೀಕೃಷ್ಣ 19 ಶಬರಿಯ ಭಕ್ತಿಗೆ ಎಂಜಲ ಮೆ | ದ್ದಬುಜಾಂಡೋದರ ಶ್ರೀರಾಮ |ಕುಬುಜೆಯ ಭಕ್ತಿಗೆ ವಕ್ರವ ತಿದ್ದಿದ | ಅಬುಜಾಂಡೋದರ ಶ್ರೀಕೃಷ್ಣ 20 ಕಾಯ ಛೇದ ಉ | ಪಾಯದ ಗೈದೆಯೊ ಶ್ರೀಕೃಷ್ಣ 21 ವಾಹನ ಗೈಯುತ | ಮೋಕ್ಷವನಿತ್ತನು ಶ್ರೀಕೃಷ್ಣ 22 ಸೀತೆಯ ಕಳಕೊಂಡ್ವೆಥೆಯನೆ ನಟಸಿದ | ಪೃಥ್ವೀಪತಿಯು ಶ್ರೀರಾಮಕೌತುಕ ತೋರಿದ ನಾರದಗೇ ಬಹು | ಪತ್ನಿಯರಲ್ಲಿ ಶ್ರೀಕೃಷ್ಣ 23 ಮಾಯಾ | ವೈಭವ ಪೊಗಳಿರಿ ಶ್ರೀಕೃಷ್ಣ 24 ಜೋಡಿಸಿ ಬಹು ಸೈನ್ಯವ ಹೂಡಿದ | ರಾವಣ ಸಂಗರ ಶ್ರೀರಾಮಜೋಡಿಸಿ ಬಹು ಸೈನ್ಯವ ಜರೆ ಜನು | ಹೂಡಿದ ಯುದ್ಧವ ಶ್ರೀಕೃಷ್ಣ 25 ಮುರ ನಬಕರು ಮಡಿದರು | ದೇವ ನೀ ಬಾಣವ ಬಿಡೆ ಶ್ರೀಕೃಷ್ಣ 26 ಸೀತೆಯನಗ್ನಿ ನಿವೇಶವ ಗೈಸುತ | ಪೂತಳು ಎನಿಸಿದ ಶ್ರೀರಾಮ |ಕೌತುಕಳು ವೇದ್ವತಿಯಳ ನೀ | ನಾಂತೆಯೊ ಶ್ರೀ ವೆಂಕಟ ಕೃಷ ್ಣ 27 ಪ್ರಥಮಾಂಗನು ಮಾರುತನಿಂ | ಪೃಥ್ವೀ ಭಾರವನಿಳುಹಿದೆ ರಾಮ |ಪ್ರಥಮಾಂಗನು ಭೀಮನಿಂ | ಪೃಥ್ವೀ ಭಾರವನಿಳುಹಿದೆ ಕೃಷ್ಣ 28 ಭರತನಿಂ ವಾರ್ತೆಯ ಕಳುಹಿ | ಭರತನ ಉಳುಹಿದೆ ಶ್ರೀರಾಮ |ಅರದಿ ರವಿ ಮರೆ ಮೌಡುತ ನೀ | ನರನನು ಉಳುಹಿದೆ ಶ್ರೀಕೃಷ್ಣ 29 ಸೀತೆಯ ಸಹ ಪುರಿ ಕೋಸಲೆಗೆ ನೀ | ಮಾತುಳಹಲು ಬಂದೆ ಶ್ರೀರಾಮ |ನೀತರು ನರಕನಿಂದಾ ತರುಣಿಯರ | ಪ್ರೀತಿಲಿ ತಂದೆಯೊ ಶ್ರೀಕೃಷ್ಣ 30 ಪಟ್ಟವಗಟ್ಟಲಯೋಧ್ಯಾಪುರಿಲಿ | ಶಿಷ್ಟರ ಸರ್ವರ ಮಾಡಿದೆ ರಾಮಪಟ್ಟ ಭದ್ರ ಪ್ರಭು ದ್ವ್ಯಷ್ಟಸಾಸಿರ ಪ | ತ್ನ್ಯಷ್ಟರನಾಳಿದೆ ಶ್ರೀಕೃಷ್ಣ 31 ಕುಶಲವರ್ಹ ಸುಳೆಗಳಾ ಮಗೆ | ಅಸಮ ಸಾಹಸಿಗಳ್ ಶ್ರೀರಾಮ |ಶಿಶುಗಳ್ಕøಷ್ಣಗೆ ಗಣನೆಗಸಾಧ್ಯವು | ಅಸಮ ಸಾಹಸಿಗಳ್ ಶ್ರೀಕೃಷ್ಣ 32 ರಾಜ್ಯ ಸುಭೀಕ್ಷವು ಪತಿವ್ರತೆರೆಲ್ಲರು | ವ್ಯಾಜ್ಯ ರಹಿತ ಸ್ವರಾಜ್ಯದಿ ಶ್ರೀರಾಮಪರ್ಜನ್ಯವರ್ಷಿಸಿ ರಾಜ್ಯ ಸುಭಿಕ್ಷವು | ಆರ್ಜವರು ಪ್ರಜೆ ರಾಜ್ಯದಿ ಕೃಷ್ಣ 33 ಪಾಲನ ಪಾಲನ ಶ್ರೀಕೃಷ್ಣ 34 ಭಕ್ತಲಿ ರಾಮನ ಚರಿತೆಯ ಕೇಳಿ | ಮುಕ್ತಿದನು ಕೃಷ್ಣಾತ್ಮಕ ರಾಮಭಕ್ತಿಯಿಂದಾಲಿಸೆ ಭಾಗವತಾ ಕಥೆ | ಮುಕ್ತಿದನು ಗುರು ಗೋವಿಂದ ವಿಠಲ 35
--------------
ಗುರುಗೋವಿಂದವಿಠಲರು
ಶ್ರೀಜಾನಕಿದೇವಿ ನಿನ್ನ ನಾ ಧ್ಯಾನಿಪೆ ತಾಯಿ ಪ ಸುಜ್ಞಾಪ್ರದೆಯೆನ್ನ ಮನೋಭೀಷ್ಟವನೀಯ್ಯೆ ಅ.ಪ ಸಂಸಾರವಾರ್ಧಿಯೊಳಗೆ ಮುಳುಗಿ ಬಳಲುವೆನಮ್ಮ | ಇದು ಪಾರುಗಾಣೋದೆಂದಿಗೊ ನಿನ್ನ ಪತಿಯ ಕೇಳಮ್ಮ 1 ವಿನುತ ಪದಾಂಬುಜಯುಗಳೆ ಜಗದಂಬೆ ನಿನ್ನ ನಂಬಿದೆ ವಿಶ್ವಂಭರಪ್ರಿಯಳೆ 2 ಸಾಮಜರಾಜವರದ ಶ್ರೀಗುರುರಾಮವಿಠಲನ | ಹೃ ದ್ಧಾಮದಲ್ಲಿ ತೋರಿಸಿ ಪರಚಿಂತೆ ಬಿಡಿಸೆನ್ನ 3
--------------
ಗುರುರಾಮವಿಠಲ
ಶ್ರೀಪತಿಯೆ ನಿನ್ನ ಒಲುಮೆಯೊಂದಿರಲಿಕ್ಕೆತಾಪಗಳಾವೆನಗೆ ಮಾಡುವವೊ ಪ ಪಾಪಿಯಂತೆದೆನ್ನ ಕೈಯನು ಬಿಡಬೇಡಗೋಪಾಲನೆ ಎಲ್ಲಕ್ಕೂ ಕರ್ತೃ ನೀನಲ್ಲವೆ ಅ.ಪ. ಭಾರ ಹೊತ್ತವನೆಂಬಅಂಶವನರಿಯದೆ ವ್ಯರ್ಥ ಬಳಲಿದೆನೊ 1 ಅಪಶಕುನಗಳು ಆ ವಿಘ್ನಗಳೆಲ್ಲವೂವಿಪರೀತ ಕಾಲವು ಉಪದ್ರವಂಗಳುಕೃಪೆಯಿಂದ ಪರಿಣಾಮಗೊಳ್ಳವೆಂದೆಂದಿಗೂಕೃಪೆಯ ಮಾಡಯ್ಯ ನೀ ಭಕ್ತವತ್ಸಲನೆ 2 ಯೋಚಿಸುವವ ನಾನು ಯೋಜಿಸುವ ನೀನುತೋಚದು ಗತಿಯೆಂದು ಚಿಂತಿಸುತಿರಲುಸೂಚನೆಗೊಡದೆ ಪರಿಹರಿಸಿ ಪೊರೆಯುವಿನಿಗಮಗೋಚರ ನಿನ್ನ ಕಾರುಣ್ಯವನರಿಯನೋ 3 ಅಂಬುಜಾಕ್ಷನೆ ನಿನ್ನ ನಂಬಿದ ಜನರನುಬೆಂಬಿಡದೆ ಕಾಯುವ ನೀ ಕೃಪಾಳೋತುಂಬ ಒಲುಮೆಯನೀಯೊ ನಿತ್ಯದಿ ಭಕ್ತಕು ಟುಂಬಿಯೆ ಗದುಗಿನ ವೀರನಾರಾಯಣ 4
--------------
ವೀರನಾರಾಯಣ
ಶ್ರೀವಾಸಾನತಮಾಕಲಯಾಚ್ಯುತ ಶ್ರೀವಾಸುಕಿಶಯಮಾಮನಿಶಂಹೃದಾ ಪ ಪುಂಡರೀಕ ನಯನಾಂಡಜವಾಹನ ಕುಂಡಲಶಯ ಮಾಂಡವ್ಯಸೇವ್ಯಪದ 1 ಪುಂಡರೀಕ ಸುಮಂಡಿತಾಂಗಪದ ಪುಂಡರೀಕಶ್ರಿತ ಪಾಂಡುತನಯ ಭೋ 2 ನಂದಗೋಪವರ ನಂದಸುಮನೋ ನಂದನಮುನಿಜನ ವಂದಿತಪದಯುಗ 3 ಧರ್ಮತನಯ ಸಹಧರ್ಮಚಾರಿಣಿ ವರ್ಮಪಾಲ ಸದ್ಧರ್ಮ ಶ್ರೀಲಹರಿ 4 ವ್ಯಾಘ್ರನಾಮ ದೈತ್ಯಾಗ್ರನಿಗ್ರಹ- ಣೋಗ್ರಸೇನ ತನಯಾಗ್ರವಿದಾರಣ 5 ಬಾಲಭಕ್ತ ಪರಿಪಾಲ ಹೇಮಮಯ ಚೇಲ ವಿಧೃತ ವನಮಾಲ ನರಹರೆ 6 ಮಾರಜನಕ ಸುರವಾರವಂದ್ಯ ಮಂ ದಾರ ಹಾರ ಸುಕುಮಾರಶರೀರ 7 ಮಂದರಧರ ಪೂರ್ಣೇಂದು ವದನ ಗೋ ವಿಂದ ಮುಕುಂದ ಸನಂದವಂದಿತ 8 ಖಂಡಪರಶು ಕೋದಂಡ ವೇ ತಂಡ ಹಸ್ತಭುಜದಂಡ ರಘೂದ್ವಹ 9 ಅಂಬರೀಷ ವರದಂಬುಜಾಸನಾ ಲಂಬಮಾನ ಚರಣಾಂಬುಜ ಕೇಶವ 10 ಸಾರವಸ್ತು ಪರಿಪೂರ ವ್ಯಾಘ್ರನಗ ಪಾರಿಜಾತ ವರದಾರ್ಯವಿಠಲ ಶ್ರೀ 11
--------------
ವೆಂಕಟವರದಾರ್ಯರು
ಶ್ರೀಹರಿ ಕೀರ್ತನೆ ಅಗಲದಿರೋ ಮನ ಮಂದೀರದಿಂದ ಲೆನ್ನ ಎಂದೆಂದಿಗೂ ಕೃಷ್ಣ ಪ ಅಗಲದಿರೋ ಬ್ರಹ್ಮಾದಿ ವಂದಿತ ಪರಿ ಪೂರ್ಣ ಏಕನೆ ವಿಶ್ವ ಸಗುಣ ನಿರ್ಗುಣ ನಿರಜ ನಿಸ್ಸೀಮ ಅ.ಪ. ಕಷ್ಟವಿಲ್ಲದೆ ಸಕಲ- ಚೇಷ್ಟೆಯ ನಡಿಸುವೆ ಕೊಟ್ಟು ದೇಹಾದಿಗಳ- ಬಿಟ್ಟೇ ಜೀವರ ಭವದಿ ಗಿಟ್ಟೀಸೆ ತಮ್ಮ ತಮ್ಮ- ಪಟ್ಟಾ ಮುಕ್ತಿಯ ಬೇಗ ಒಟ್ಟಿನಿಂದಲಿ ಜೀವ ಜಗವಂದಿಷ್ಟು ಚಲಿಸದು ಬಿಟ್ಟು ನಿನ್ನನು ಗುಟ್ಟು ತಿಳಿಯದೆ ಭವದಿ ಕಂ- ಗೆಟ್ಟು ಬಳಲಿದೆ ಭಕ್ತಬಾಂಧವ ನಷ್ಟಕಷ್ಟಗಳಿಲ್ಲದಾ ಸಂತುಷಷ್ಟ ನೀಡುವ ಪ್ರಭುವೆ ಕರುಣಾ- ದೃಷ್ಟಿ ಬೀರುತ ಭಕ್ತಿ ಭಾಗ್ಯವ ಪುಷ್ಟಿಗೈಸುತಲೆನಗೆ ಸಂತತ 1 ಶ್ರೀಶಾನೊಬ್ಬನೆ ಸರ್ವ ತಂತ್ರ ಸ್ವತಂತ್ರನು ನಾಶರಹಿತನಿಗೆಲ್ಲಾ ದಾಸರೆ ಸರಿಸತತಾ ವಾಸುದೇವನು ಜೀವ ಜಗದಿಂ ವಿಲಕ್ಷಣನು ಈಸುಜ್ಞಾನವನೀಯೋ ಜನ್ಮಜನ್ಮಾಂತರಕು ದೋಷದೂರ ವಿಶೇಷ ಮಹಿಮ ಪೂರ್ಣ ವಿಶ್ವಗ ಶಶ್ವದೇಕ ವಿ- ಲಾಸ ಮಿಷಣಾಭರಣ ಭೂಷಿತ ಸಾಮಸರ್ವಾಧಾರ ನಿರುಪಮ ಓಸು ಶಬ್ದಗಳಿಂದ ವಾಚ್ಯನೆ- ನಾಶಗೈಸುತ ಕರ್ಮತ್ರಯಗಳ ಹೃದಯಗುಹೆಯಲಿ 2 ನಿತ್ಯನಿಗಮಾತೀತ-ನೀನೆ ಸತ್ಯರ ಸತ್ಯ ನಿತ್ಯತೃಪ್ತನು ಸ್ವರತ-ಮುಕ್ತೇಶ ಚಿನ್ಮಯನೂ ನಿತ್ಯಜೀವಗೆ ನೀನಿರ್ನಿಮಿತ್ತ ಬಂಧು ಸತತ ನಿತ್ಯಸ್ತೋತ್ರವನು ನುಡಿಸು-ಮೃತ್ಯೋಮೃತ್ಯುವೆ ದೇವಾ ಧಾಮ ವಿಶ್ವೋ ತ್ಪತ್ತಿ ಸ್ಥಿತಿಲಯ ಕರ್ತ ಪರಿಪರಿ ಜೀವ ಸತ್ತಾದಿ ಭಾಸಕ ನಾಥ ಮುಕ್ತಾಮುಕ್ತ ವಂದಿತ - ಭೂತಿ ಭೂರಿದನಾಂತಾತ್ಮ ಖ್ಯಾತ ಸರ್ವೋತ್ತಮ ಪರತ:ಪರಾಕ್ಷರ ವಿಷ್ಣುಸರ್ವಜ್ಞ 3 ಅಂಬುಜಾಕ್ಷನು ನೀನೇ-ಉಂಬುವೆ ಸರ್ವಸಾರ ತುಂಬಿರುವೆ ಒಳಹೊರಗೆ-ಬೆಂಬಲನು ಜಗಕೆಲ್ಲ ಬಿಂಬ ನೀ ಚಲಿಸೆ ಪ್ರತಿ ಬಿಂಬಾ ನಾ ಚಲಿಸುವೆ ನಂಬಿದೆ ಸಲಹಯ್ಯ-ಕಂಬುಚಕ್ರಾಂಕಿತನೆ ಕುಂಭಿಣೀಪತಿ ಕೃಷ್ಣಕೈಬಿಡೆ ಗೊಂಬೆ ಸರಿನಾಲ್ಲವೇನೈ ಡಿಂಬದೊಳಗಿನ ವೈರಿವೃಂದವು ಹಂಬಲಿಸಲೆಡೆಗೊಡವುಭವ ದೊಂಬಿ ಅಡಗಿಸು ದಕ್ಷಣಾಕ್ಷಿಗ-ಸ್ಥಂಭರೂಪಿಯೆ ಶರಣುಶರಣು ಎನಿಸೈ ನೀಡಿ ವಿಜ್ಞಾನ 4 ಮಂದರೋದ್ಧರ ಗೋವಿಂದ ನಿನ್ನಯ ಮಹಿಮೆ ಇಂದಿರೆಗಾಗದು ಸಾಕಲ್ಯ ತಿಳಿಯೆಸಿದ್ಧವಿದೂ ಛಂದಾ ಛ್ಚಾದಿತ ಗಾತ್ರ-ಬಂಧ ಮೋಕ್ಷಪ್ರದನೆ ಎಂದು ಕಾಂಬೆನೋ ನಿನ್ನ-ಮಂದನಾನಿಹೆ ಜಗದೀ ಸದ್ಮ ಪೂರ್ಣಾನಂದ ನಿನ್ನಯ ನಾಮ ವೃಂದದಿ ಬಂಧಿಸಿಹೆ ಜಗವೆಲ್ಲ ವಿಷ್ಣುವೆ-ಛಂದಬೃಹತೀಪತಿಯೆ ನೀನೈ ನಾಡಿ ಮೆರೆಯುವ ಇಂದಿರಾಪತಿ ಕೃಷ್ಣವಿಠಲನೆ-ನಿಂದು ತೋರುತ ನಿನ್ನ ರೂಪವ 5
--------------
ಕೃಷ್ಣವಿಠಲದಾಸರು
ಶ್ರೀಹರಿ ನಿನ್ನನ್ನೆ ಪಡೆವುದು ಭಾಗ್ಯ ಬಾಹಿರನೆನಿಸದೆ ಸೇರಿಸು ಯೋಗ್ಯ ಪ ಹೃದಯಾರವಿಂದದೆ ದೇವಿಯರುಸಹಿತ ಸದಯ ಸನ್ನಿಧಿ ಮಾಡು ಅದು ನನಗೆ ವಿಹಿತ 1 ಭಾಗವತ ಕೈಕಂರ್ಯ ಹಗಲಿರುಳು ಇರಲಿ ನಿತ್ಯ ಸಿದ್ಧಿಸಲಿ 2 ಇಡುದೇವ ಪದಕಮಲ ನನ್ನ ತಲೆಮೇಲೆ ಅನುದಿನ ಲೀಲೆ 3 ಕೊನೆಗಾಲದಲಿ ಬಂದು ನೆನೆವಂತೆ ನೀಡೈ ಮನಕೆ ಮಂಗಳರೂಪ ಧ್ಯಾನ ದಯಮಾಡೈ 4 ಅವತಾರಫಲಗಳ ಸ್ಮರಣೆ ಬರುತಿರಲಿ ಭವವೆಲ್ಲ ಕರಣಗಳು ನಿನ್ನ ಸೇವಿಸಲಿ 5 ದಾಸನ್ನ ಚರಣಾಂಬುಜದÀಡಿಯಿರಿಸು ಶ್ರೀಶನೆ ಪ್ರೇಮದ ಸವಿಯನುಣಬಡಿಸು 6 ಎಲ್ಲವು ನಿನ್ನದೆ ನನ್ನದೇನಿಲ್ಲ ಬಲ್ಲವನೆ ನೀನಾಗಿ ಮುಕ್ತಿಕೊಡು ನಲ್ಲ 7 ಹಿಂದೇಳು ಮುಂದೇಳು ತಲೆಮಾರಿನವರು ತಂದೆ ನಿನ್ನಂಘ್ರಿ ಶೇಷಾಂಕಮುದ್ರಿತರು 8 ಕುಲಧನವೆ ನೀನಮ್ಮಕುಲಕೋಟಿಯನ್ನ ಒಲಿದು ಕಾಪಾಡಯ್ಯ ಕರುಣಿ ಪ್ರಸನ್ನ 9 ಹೆಜ್ಜಾಜಿ ಕೇಶವ ಇದು ನಮ್ಮ ಮೋಕ್ಷ ಅರ್ಜುನಸಾರಥಿ ಕಾಣು ಪ್ರತ್ಯಕ್ಷ10
--------------
ಶಾಮಶರ್ಮರು
ಶ್ರೀಹರಿಯ ಸ್ತುತಿ ಅಂಬುಜಾಕ್ಷನೆ ಪಾಲಿಸೊ ಅಂಬುಜಾಕ್ಷನೆ ಕೇಳು ಕಂಬುಕಂಧರ ನಿನ್ನ ನಂಬಿದ ಜನರನು ಇಂಬಾಗಿರಕ್ಷಿಸುವ ಪ ಹರಿಯೆ ನೀ ಭಕುತರ ಸುರತರುವೆಂದು ಅರಿದು ನಿನ್ನಡಿಗೆ ಬಂದು ಕರುಣಾಸಿಂಧು ವರವೇನು ಎನ್ನ ಪರಿಚರ್ಯವೆಲ್ಲವನು ಜರಿದು ಎನ್ನನು ಪೊರಿಯೆಂದು ಭಕ್ತರ ಬಂಧು ಕರಿವರದನೀತರಿವಿದುರುಳನ ಪೊರೆವಿ ಸುಜನರ ಅರವಿದೂರನೆ ಸ್ಮರಣೆಮಾತ್ರದಿ ತರಣಿಸುತನ ಪುರದಭಯವನು ಪರಿಹರಿಸುವಿ 1 ಭವರೋಗವೈದ್ಯ ನೀ ಅವಧಿಯೂ ಇಲ್ಲದೆ ಸ್ವವಶವ್ಯಾಪಿಯಾಗಿ ದಿವಿಜಯ ಪೊರೆವಿ ಭಕುತರ ಕಾಯ್ಯಿ ಅವನೀಲಿ ಜನಿಸಿದ ಪವನ ವೈರಿಯ ಕವಿಶಿ ಮೋಹದಿ ಕೆಡಿಶಿದಿ ನರನನ್ನು ಪೊರದಿ ಅವನಿಪಿತ ನಿನ್ನ ಯುವತಿ ವೇಷವ ಕವಿಗಳೆಲ್ಲರು ಸ್ತವನ ಮಾಳ್ಪರು ಪವನ ಪ್ರಿಯನೆ ಭುವನ ತಾತನೆ ಶಿವಗೆ ವರವಿತ್ತೆ ಪವನನಯ್ಯನೆ 2 ತರಳ ಪ್ರಹ್ಲಾದನ ಪೊರೆದು ಪಾಂಚಾಲಿಗೆ ವರವಿತ್ತೆ ಕರಿಪುರಾಡರಸರ ಪ್ರಭುವೆ ಸುರತರು ವೇಷಶರಣಾಗತರನು ಪೊರೆವನೆಂಬ ನಿಜ ಬಿರುದನು ಮೆರಿಸುತ ಶಿರಿಯಿಂದೊಪ್ಪುತ ವರ ಭಕ್ತಾಗ್ರೇಸರ ನರಪಾಂಬರೀಷನ ಪೊರೆವಂಥ ಸುರಪತಿ ಶಿರಿವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ಸಕಲ ದಿವಿಜಾರಾಧ್ಯ ಚರಣ ಪ ಕಂದರ್ಪ ಕೋಟಿ ಮೋಹನ್ನ ಕಾಯಾ | ಕಂಸ ಚಾಣೂರ ಮರ್ದನಕಾಲಿಯ ವಿಷಕಲಿಲ ಸಲಿಲಯಾನಕಲಪ್ರಾಣ ಗೋಗೋಪ ಜೀವನಾ | ಈಯ್ಯಾ ಈಯ್ಯಾ || ಗೋಕುಲದಿ ಗೋಪಿಯರ ಮನೆಗಳಲಿ ಗೋರಸ ಚೌರ್ಯ ಸಂಪನ್ನಾ |ಮಧುರ ಮುರಲಿ ನಿನಾದದಿಂದ ಮೋಹಿಪ್ಪ ||ಮೌನಿಗಳ ಮಾನಸಗಳಲ್ಲಿ | ಸಸ ಸಾನಿಸಾನಿ ನಿಸನಿ |ನಿಸನಿ ಸಾಸನಿನಿ ಸರಿಗರಿ ಮಗಗರಿಸ ನಿಧನಿಧ ನಿಧಪಮ || ಧಿಕ್ಕತಾ ಧಿಕ್ಕತಾ ಧಿಮಿ ಧಿಮಿಕಿತಾ ಧಿಮಿಕಿತಾ ಗಿಕಿಟ ತೋಂ |ಗಿಕಿಟ ತೋಂ ಗಿದಿಗದಿಗ ಥೈಯಾ ಥೈಯಾ || ಪರಿ ನಂದನಂಗಳದಲ್ಲಿ ಕುಣಿಕುಣಿದಾಡುವ ಶ್ರೀವಿಠ್ಠಲನಪಾದಾಂಬುಜದ ಭಜನದಿಂದೆ ತರಿಸುವೆನೆಂದು ಪಾಡುವೆನುಗೀತ ಪ್ರಬಂಧ ಬರೆಹಗಾರ ರುಕ್ಮಾಂಗದನು ||
--------------
ರುಕ್ಮಾಂಗದರು
ಸಕಲ ಸದ್ಗುಣಪೂರ್ಣ ಶ್ರೀನಿವಾಸ ವಿಕಸಿತ ಕಮಲವದನ ಮಕರ ಕುಂಡಲಮಣಿ ಮಕುಟ ಕೌಸ್ತುಭಾ ಹಾರ ಅಖಿಳ ಜಗದಾಧಾರ ಅಂಬುಜಾಕ್ಷ ಸಿರಿ ನಲ್ಲ ನಿನ್ನ ಸಮಾನ ರಿಲ್ಲವೆಂಬುದ ಸರ್ವ ಶ್ರುತಿ ತತ್ವವ ಬಲ್ಲ ಬುಧರಿಂದರಿದು ಸೊಲ್ಲಸೊಲ್ಲಿಗೆ ತ್ರಿಜಗ ಪಾದ ಪಲ್ಲವವÀ ನಂಬಿದೆನು 1 ಚಕ್ರ ಶಂಖಾಬ್ಜಧರ ವಿಕ್ರಯ ವಿರಾಟರೂ- ಪಾ ಕ್ರಾಂತ ಸಕಲ ಭೂಚಕ್ರವನ್ನು ಶಕ್ರಗೊಲಿದಿತ್ತತಿಪರಾಕ್ರಮ ತ್ರಿವಿಕ್ರಮನೆ ಶುಕ್ರ ಶಿಷ್ಯನಿಗಧಿಕ ಶುಭವ ಪಾಲಿಸಿದಿ 2 ಜಯ ಜಯ ಜಗನ್ನಾಥ ಜಾನಕೀವರ ಸರ್ವ ಭಯ ನಿವಾರಣ ಭಕ್ತ ಕಲ್ಪತರುವೆ ಲಯದೂರ ಲಾವಣ್ಯ ಚಯಮಮಾಲಯದಲ್ಲಿ ದಯವಾಗು ಜ್ಞಾನ ಸುಖಮಯ ವೆಂಕಟೇಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಖಿ ಕೇಳೇ ಇನ್ನು ಹರುಷದ ಮಾತಾ| ಸಕಲ ಜನರಿಗೆ ಆನಂದ ವೀವಾ| ಪ ಇಂತೆಂದು ಹರಿಯು ನಾನಾಪರಿ ವಿರಹದ| ಸಂತಾಪ ಮಾತವ ನುಡಿಯಲು ಕೇಳಿ| ಅಂತರಂಗದ ಕೋಪವಬಿಟ್ಟು ಎದ್ದು|ಅ| ನಂತನ ಬಿಗಿದಪ್ಪಿದಳು ಅಂಬುಜಾಕ್ಷಿ 1 ಲಲಿತಾಂಗಿ ಆಲಿಂಗನವ ನೀಯೇ ಹರಿಗಾಗಾ| ಒಲಿದು ಉಕ್ಕೇರಿತು ಆನಂದ ಉದಧಿ| ಸತಿ ಮಾತಾಡುವ ದೇವ ಶ್ರೀ| ಲಲನೇಯಾ ಸದ್ಬುವನೆಯಾ ಪೂರಿಸಿದನು 2 ಈ ಪರಿಯಾಡಿದ ಶ್ರೀ ಹರಿ ಚರಿತೆಯಾ| ನಾ ಪೇಳಿದುದು ಭಾವ ಭಕುತಿಯಲಿಂದಾ| ಆ ಪದಿಂದಲಿ ಕೊಂಡಾಡುವ ಮನುಜನ| ತಾ ಪಾಲಿಸುವಾ ಮಹಿಪತಿ ಸುತ ಪ್ರೀಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸತತ ಪಾಲಿಸೋ ಎನ್ನ | ಯತಿ ರಾಘವೇಂದ್ರ | ಪತಿತ ಪಾವನ ಪವನ | ಸುತಮತಾಂಬುಧಿ ಚಂದ್ರ ಪ ನಂಬಿದೆನು ನಿನ್ನ ಚರಣಾಂಬುಜವ ಮನ್ಮನದ ಹಂಬಲವ ಪೂರೈಸೊ ಬೆಂಬಿಡದಲೆ || ಕುಂಭಿಣೀಸುರ ನಿಕುರುಂಭ ವಂದಿತ ಜಿತ ಶಂಬರಾಂತಕ ಶಾತಕುಂಭ ಕಶ್ಯಪ ತನಯ 1 ಕ್ಷೋಣಿಯೊಳು ನೀ ಕುಂಭಕೋಣ ಕ್ಷೇತ್ರದಿ ಜನಿಸಿ ವೀಣ ವೆಂಕಟ ಅಭಿದಾನದಿಂದ ಸಾನುರಾಗದಿ ದ್ವಿಜನ ಪ್ರಾಣ ಉಳುಹಿದ ಮಹಿಮೆ | ಏನೆಂದು ಬಣ್ಣಿಸಲಿ ಜ್ಞಾನಿ ಕುಲತಿಲಕ2 ಮಂದಮತಿಗಳ ಸಂಗದಿಂದ ನಿನ್ನಯ ಚರಣ ಇಂದಿನ ತನಕ ನಾ ಪೊಂದಲಿಲ್ಲ ಕುಂದು ಎಣಿಸದೆ ಕಾಯೊ ಕಂದರ್ಪಪಿತ ಶಾಮ ಸುಂದರನ ದಾಸಕರ್ಮಂದಿ ಕುಲವರ್ಯ 3
--------------
ಶಾಮಸುಂದರ ವಿಠಲ