ಒಟ್ಟು 1269 ಕಡೆಗಳಲ್ಲಿ , 91 ದಾಸರು , 959 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಯ್ಯ ಬೇಗ ಶ್ರೀ ಶ್ರೀನಿವಾಸ ಭಕ್ತರ ನುಡಿಗೆ ಪ. ಬಾರೋ ನಿನ್ನ ಮುಖ ತೋರೊ ತ್ವರಿತದಲಿ ಸಾರಸಾಕ್ಷ ನಿನ್ನ ಸಾರಿದೆನಯ್ಯ ಅ.ಪ. ವೈಕುಂಠದಿಂದ ಬಂದೆಯೊ ಗಿರಿಗೆ | ಲಕ್ಷ್ಮಿಯು ತಾ ಪೋಗೆ ಬೇಕಾಗಲಿಲ್ಲವೊ ಅರಮನೆ ನಿನಗೆ | ಮುನಿಗಳ ವರದನಿಗೆ ಬೇಕಾದ್ವೈಭವ ನೀ ಕೈಕೊಳುತ ಸಾಕುತಲಿಪ್ಪೆಯೊ ನೀ ಕರೆದವರನು 1 ಶ್ರೀಸ್ವಾಮಿ ಪುಷ್ಕರಣಿಯ ದಡದಲ್ಲಿ | ನೀ ವಾಸಿಸುತಲ್ಲಿ ಸೇವಾದಿಗಳನು ಬಗೆಬಗೆ ಕೊಳ್ಳುತಲಿ | ಸುಜನರ ಪೊರೆಯುತಲಿ ಈ ವಿಧದಿಂದಲಿ ಭಾವಜನಯ್ಯನೆ ಪಾವಕಸಖನೊಳು ಪಾವನನಾಗಿಹೆ 2 ವರ್ಣಿಸಲರಿಯೆ ನಿನ್ನನು ದೊರೆಯೆ | ಲೋಕದಿ ಅಚ್ಚರಿಯೆ ಘನ್ನ ಸುಮಹಿಮನೆ ಬೇಡುವದರಿಯೆ | ನೀನೆ ಕೈಪಿಡಿಯೆ ಮುನ್ನ ಮಾಡಿದ ಘನ್ನ ಪಾಪಗಳು ಇನ್ನಿರಲಾರವೊ ಮನ್ನಿಸಿ ಪೊರೆಯೊ 3 ಜಗಸೃಷ್ಟಿಯಿಂದ ಜೀವರ ಮಾಳ್ಪೆ | ಜೀವರ ಸೃಷ್ಟಿಪೆ ತ್ರಿಗುಣಾದಿಗಳಿಂದ ತಿರುಗಿಸುತಿರ್ಪೆ | ಕರ್ಮದ ತೆರೆಮಾಳ್ಪೆ ವಿಗಡ ದೇಹದೊಳು ಬಗೆ ಬಗೆ ದೇವರು ತಗಲಿ ನಿನ್ನ ಪದನಗಧರ ಕಾಣರೊ 4 ಕಣ್ಣ ಬಿಟ್ಟಿರುವೆ ಬೆನ್ನೊಳೆ ಬೆಟ್ಟವೆ | ಮಣ್ಣ ತಿನುತಿರುವೆ ಚಿಣ್ಣ ನಿನಗೊಲಿದು ಚಿಣ್ಣನಾಗ್ವೆ | ಬೆನ್ನೊಳು ಪರಶುವೆ ಹಣ್ಣು ಕೊಟ್ಟವಳಿಗೆ ಒಲಿದು ಗೋಪಿಯರ ಕಾಯ್ದು ಬಣ್ಣಗೆಟ್ಟು ಹಯವನ್ನೇರಿದೆ5 ಆಕಾಶರಾಯನ ಮಗಳ ತಂದೆ | ಈ ಗಿರಿಯಲಿ ನೀನೆ ಸಾಕುವ ಬಿರುದು ನಿನ್ನದೆಂದೆ | ನೀ ಕಾಯಲೆಬೇಕೆಂದೆ ನೂಕಿ ಎನ್ನ ಭವತಾಪನೀಗಲೆ ಶ್ರೀಕಳತ್ರ ನಿನ್ನ ಭಕ್ತರೊಳಿಡಿಸೊ 6 ಅಪಾರಮಹಿಮ ಅದ್ಭುತಚರಿತ | ಶೇಷಾದ್ರಿಯೊಳ್ ನಿರುತ ವ್ಯಾಪಾರ ಮಾಡುತ ಗುಪ್ತದೊಳಿರುತ | ನಿಜ ಭಕ್ತಗೆ ಕಾಣುತ್ತ ಪರಿ ಅದ್ಭುತ ಚರಿತೆಯ ತೋರುವ ಗೋಪಾಲಕೃಷ್ಣ ವಿಠ್ಠಲನೆ ನೀ ಕಾಯೊ 7
--------------
ಅಂಬಾಬಾಯಿ
ಬಾರೆ ವೆಂಕಟರಮಣಿ ಶ್ರೀದೇವಿ ನೀ ಬಾರೆ ವೆಂಕಟರಮಣಿ ಪ ನಿತ್ಯ ಅ.ಪ. ಏನು ಪುಣ್ಯವೆ ನಂದು ಪಾರಾಯಣನೀನು ಕೇಳುವಿ ಬಂದುಹೀನ ಮಾನವನಿಗೆ ನೀನು ಬರುವಿ ಎಂಬೊಜ್ಞಾನವಿಲ್ಲದೆ ಉಚ್ಚ ಸ್ಥಾನದೊಳಗೆ ಬಾರೆ 1 ಸ್ವಪ್ನದೊಳಗೆ ಬರುವಿ ಶ್ರೀದೇವಿ ನೀಕ್ಷಿಪ್ರದಿಂದಲಿ ಪೋಗುವಿಸರ್ಪಶಯನ ನಮ್ಮಪ್ಪ ಗೋಕುಲ ಬಾಲಅಪ್ಪಿಕೊಳ್ಳುವ ಸುಖ ಒಪ್ಪಿಸಬೇಕಮ್ಮ 2 ಸಿರಿ ರಂಗನಂಕದಿ ಕೂತುಭೃಂಗಕುಂತಳೆ ಹೃದಯಂಗಳದೊಳಗಾಡೆ 3 ಎಲ್ಲ ದೇವತೆಗಳನೆ ತಪಾದಿಯೆಪುಲ್ಲ ವಾರಿಜನಯನೆಗೊಲ್ಲ ಬಾಲನಪಾದ ಪಲ್ಲವ ನೋಡದೆನಿಲ್ಲಲೊಲ್ಲದು ಮನಸೊಲ್ಲು ಲಾಲಿಸೆ ತಾಯೆ4 ಇಂದಿರೇಶನ ರಾಣಿ ಎನ್ನಯ ಮನೋ-ಮಂದಿರದೊಳು ಬಾ ನೀನಂದಗೋಕುಲ ಬಾಲಾನಿಂದು ಕರದೊಳೆತ್ತಿತಂದು ತೋರಿಸೆ ಅರವಿಂದನಿಲಯೆ ಲಕ್ಷ್ಮಿ 5
--------------
ಇಂದಿರೇಶರು
ಬಾರೊ ಭಾಗ್ಯದ ನಿಧಿಯೆ, ದಯಾಂಬುಧಿಯೆ ಪ ಸಾರಿದವರ್ಗಿತ್ತೆ ಸುಧೆವಾರಿಜಾರಿ ಕೌಮುದಿವಾರಿಜಧರ ಮುದದಿಸಾರಸ ಹೃದಯದಿಕೇರಿ ಕೇರಿಯಲಿ ಶೃಂಗಾರದಿ ಮೆರೆವ ಅಪಾರ ದಯಾನಿಧಿ ಅ ಪಾದ ಸಾರಥಿ ಪರ ರವಿಜನ ನೀ ಸೋಲಿಸಿತ್ರಿಜಗ ವಿಜಯ ವೇಷ ವಿಜಯಗಿತ್ತು ಮೆರೆದೆವಿಜಯ ಮೂರುತಿಯೆ 1 ದಶಶಿರ ಸಂಹರದಶರೂಪದಲಿ ಖಳದಶನ ಮೂರುತಿಯೆಂದುಹೆಸರು ಹೇಳುವರು2 ಪದುಮನಾಭ ಪದ್ಮೇಶ ಪದುಮಮಾಲಿ ಪದ್ಮಾಕ್ಷಪದುಮ ಪಾಣಿ ಪದ್ಮಾಂಘ್ರಿ ಪದುಮಸಖ ತೇಜಿಪದುಮ ಕಲ್ಪದಿ ನಾಭಿ ಪದುಮದಿ ಚತುರ್ಮುಖಪದುಮ ಜನ ಪಡೆದು ಪದುಮಜಾಂಡವಡೆದಿಪದುಮ ಪೀಠನ ಹೃತ್ಪದುಮದಿ ನಿನ್ನಪದುಮ ತೋರುತ ಬಾರೊ ಕಾಗಿನೆಲೆಯಾದಿಕೇಶವಹದುಳದಿಂದ ಬಾರೊ ಭಾಗ್ಯದ ನಿಧಿಯೆ 3
--------------
ಕನಕದಾಸ
ಬಾರೋ ಗೋಪಿಯ ಬಾಲಾ ಮಾನಸದೊಳುತೋರಿಸೋ ಮುಖಕಮಲಾ ಪ ಸೇರಿಸೊ ನಿನ್ನ ಪದ ಸಾರಸಯುಗಳ-ಪಾರ ಸದ್ಗುಣ ಶೀಲ ಅಪ್ಪಯ್ಯ ಕೃಷ್ಣಅ.ಪ. ವಕ್ತ್ರಲಂಬಿತವಾಲಾ ಮಣಿಮಯ ಚಿತ್ರಶೋಭಿತ ಭಾಲಾರತ್ನಕುಂಡಲ ನವಮೋಕ್ತಿಕ ಮಾಲಾ ಭೃತ್ಯಭಾಷಿತ ಪಾಲಾ 1 ಶುಭ ವೇಷಾಶಂಕರಮುಖ ಸುರಾತಂತಂ ವಿನಾಶ ಕಿಂಕರ ಜನ ಘೋಷ 2 ವೇದವನಿತ್ತವನೇ ವಾರಿಧಿಯೊಳು ಭೂಧರ ಪೊತ್ತವನೆಮೇದಿನಿಯನು ಕೋರಿಲ್ಯಾ ಧರಿಸಿದನೇ ನರ ಮೃಗದಾ ಮೊಗದವನೆ 3 ಧಾರುಣಿ ಅಳೆದವನೆ ಭಾರ್ಗವ ಸೀತಾ ಚೋರನ ಗೆಲಿದವನೆ ನಾರಿಮೋಹನ ಜಿನಾಚಾರ್ಯ ಸುತನೆ ಘೋರ ಮ್ಲೇಂಛರ ಹರನೇ 4 ಸಾಮಜ ಶರಣಾ 5
--------------
ಇಂದಿರೇಶರು
ಬಾರೋ ಬಾಲಾ ಬಾ ಅಪ್ಪುವೆ ತಾರೋ ತೋಳನು ತಾಭೂರಿ ದೃಷ್ಟಿಯ ಮಾಲಿಯನ್ಹಾಕಿದಾಪಾರ ಮಹಿಮ ಬಾ ಪ ಐದು ವರುಷ ಬಾ ಎನಗೆ ಬೋಧವ ನೀಡಿದಿ ಬಾಸಾಧು ಸೇವಿತ ಶ್ರೀಧರ ಭೂಧರ ಗೋಧರಧರನೇ ಬಾ 1 ಗೌರ ಮುಖನೆ ಬಾ ಕರುಣಾವಾರಿ ನಿಧಿಯೇ ಬಾಆರ ಮಾತನು ಹಚಿಕೋ ಬ್ಯಾಡೆಲೆ ಸಾರಿದ ಕೃಷ್ಣ 2 ಗೋಪಿ ಬಂಧನ ಹರಣಾ ಬಾಮುಂದೆ ನಿಲ್ಲುತ ಮಾತುಗಳಾಡಿಸಿ ಇಂದಿರೇಶ ಬಾ 3
--------------
ಇಂದಿರೇಶರು
ಬಾರೋ ವೆಂಕಟಗಿರಿನಾಥ| ದಯ- ದೋರೈ ಭಕುತರ ಪ್ರೀತ ಪ. ಮಾರಪಿತ ಗುಣಹಾರ ಮಂದರ- ಧಾರ ದೈತ್ಯಸಂಹಾರ ಸುಜನೋ ದ್ಧಾರ ಮಮಹೃದಯಾರವಿಂದಕೆ ಬಾರೋ ಕೃಪೆದೋರೋ ವೆಂಕಟ ಅ.ಪ. ವೃಷಭಾಸುರನೊಳು ಕಾದಿ ಸಾ- ಹಸವ ಮೆರೆಸಿದ ವಿನೋದಿ ವಶಗೈದು ದೈತ್ಯನ ಶಿರವ ಕತ್ತ- ರಿಸುತಲಿ ನೀನಿತ್ತೆ ವರವ ವಸುಧೆಯೊಳಗಿಹ ಸುಜನರನು ಮ- ನ್ನಿಸುತಲಿಷ್ಟವನಿತ್ತು ಕರುಣಾ- ರಸದಿ ಸಲಹುವ ಬಿಸಜನಾಭ ಶ್ರೀ- ವೃಷಭಾಚಲವೊಡೆಯ ವೆಂಕಟ 1 ಅಂಜನೆಯೆಂಬಳ ತಪಕೆ ಭಕ್ತ- ಸಂಜೀವನೆಂಬ ಶಪಥಕೆ ರಂಜಿಪ ಪದವಿತ್ತೆ ಮುದದಿ ಖಿಲ- ಭಂಜನಮೂರ್ತಿ ಕರುಣದಿ| ಮಂಜುಳಾಂಗ ಶ್ರೀರಂಗ ಸುರವರ ಕಂಜಭವವಿನುತಾದಿ ಮಾಯಾ- ರಂಜಿತಾಂಘ್ರಿ ಸರೋರುಹದ್ವಯ ಅಂಜನಾಚಲವೊಡೆಯ ವೆಂಕಟ 2 ಶೇಷನ ಮೊರೆಯ ತಾ ಕೇಳಿ ಬಲು ತೋಷವ ಮನಸಿನೊಳ್ತಾಳಿ ದೋಷರಹಿತನೆಂದೆನಿಸಿ ಕರು- ಣಾಶರಧಿಯ ತಾನೆ ಧರಿಸಿ ಶ್ರೀಶ ಹರಿ ಸರ್ವೇಶ ನತಜನ- ಪೋಷ ದುರ್ಜನನಾಶ ರವಿಶತ- ಭಾಸ ಕೌಸ್ತುಭಭೂಷ ವರ ಶ್ರೀ- ಶೇಷಾಚಲವಾಸ ವೆಂಕಟ 3 ಮಾಧವವಿಪ್ರ ವಿರಹದಿ ಭ್ರಷ್ಟ ಹೊಲತಿಗಳನು ಸೇರ್ದ ಮುದದಿ ಸಾದರದಲಿ ನಿನ್ನ ಬಳಿಗೆ ಬರೆ ನೀ ದಯಾನಿಧಿ ಕಂಡು ಅವಗೆ ಶೋಧಿಸುತ ಪಾಪಗಳೆಲ್ಲವ ಛೇದಿ ಬಿಸುಡುತ ನಿಂದು ವೆಂಕಟ- ಭೂಧರದ ನೆಲೆಯಾದ ನಾದವಿ- ಭೇದಬಿಂದು ಕಲಾದಿಮೂರುತಿ 4 ಧನಪತಿಯೊಳು ತಾನು ಸಾಲ ಕೊಂಡ ಘನಕೀರ್ತಿಯಿಂದ ಶ್ರೀಲೋಲ ವನಿತೆ ಪದ್ಮಾವತಿಪ್ರೀತ ಭಕ್ತ- ಜನಸುರಧೇನು ಶ್ರೀನಾಥ ವನಧಿಶಯನ ಮುರಾರಿ ಹರಿ ಚಿ- ಧ್ವನಿನಿಭಾಂಗ ಸುಶೀಲ ಕೋಮಲ ವನಜನಾಭ ನೀಯೆನ್ನ ಕೃಪೆಯೊಳ- ಗನುದಿನದಿ ಕಾಯೊ ಕೃಪಾಕರ 5 ಛಪ್ಪನ್ನೈವತ್ತಾರು ದೇಶದಿಂದ ಕಪ್ಪವಗೊಂಬ ಸರ್ವೇಶ ಅಪ್ಪ ಹೋಳಿಗೆಯನ್ನು ಮಾರಿ ಹಣ- ಒಪ್ಪಿಸಿಕೊಂಬ ಉದಾರಿ ಸರ್ಪಶಯನ ಕಂದರ್ಪಪಿತ ಭಜಿ- ಸಿರ್ಪವರ ಸಲಹಿರ್ಪ ಕುಜನರ ದರ್ಪಹರಿಸುತ ಕಪ್ಪಕಾಣಿಕೆ ಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6 ಚಾರುಚರಣತೀರ್ಥವೀಂಟಿ ನಿನ್ನೊ- ಳ್ಸಾರಿ ಬರುವ ಪುಣ್ಯಕೋಟಿ ಸೇರಿದೆ ಕೊಡು ಮನೋರಥವ ಲಕ್ಷ್ಮೀ- ನಾರಾಯಣನೆನ್ನೊಳ್ದಯವ ತೋರು ನಿರತ ಸಮೀರಭವ ವರ- ದಾರವಿಂದದಳಾಕ್ಷ ತಿರುಪತಿ ವೀರ ವೆಂಕಟರಮಣ ಮದ್ಬಹು-ಭಾರ ನಿನ್ನದು ಪಾಲಿಸೆನ್ನನು 7
--------------
ತುಪಾಕಿ ವೆಂಕಟರಮಣಾಚಾರ್ಯ
ಬಾಲಕ ಕಂಡೆನು ನಿನ್ನ | ಬಾಲಕ ಪ. ಬಾಲಕ ಕಂಡೆನು ನಿನ್ನಾ | ಮುದ್ದು ಬಾಲ ತೊಡಿಗೆ ಇಟ್ಟರನ್ನಾ | ಆಹ ಕಾಲ ಕಾಲದ ಪೂಜೆ ಮೇಲಾಗಿ ಕೈಕೊಂಡು ಪಾಲಿಪ ಸುಜನರ ಅ.ಪ. ವಸುದೇವ ಕಂದ ಗೋವಿಂದ ವಸುಧಿ ಭಾರವನಿಳುಹೆ ಬಂದಾ | ಪುಟ್ಟ ಹಸುಗಳ ಕಾಯ್ವ ಮುಕುಂದ | ರ ಕ್ಕಸರನೆಲ್ಲರ ತಾನೆ ಕೊಂದಾ | ಆಹಾ ಹಸುಮಕ್ಕಳೊಡಗೂಡಿ ಮೊಸರು ಬೆಣ್ಣೆಯ ತಿಂದು ಶಶಿಮುಖಿಯರಮನಕಸಮ ಸಂತಸವಿತ್ತು 1 ವಿಶ್ವವ್ಯಾಪಕನಾದ ಬಾಲಾ | ಸರ್ವ ವಿಶ್ವ ತನ್ನೊಳಗಿಟ್ಟ ಬಾಲಾ | ಸ ರ್ವೇಶ್ವರನೆನಿಸುವ ಬಾಲಾ | ಬ್ರಹ್ಮ ಈಶ್ವರ ಸುರ ಪರಿಪಾಲಾ | ಆಹ ವಿಶ್ವ ಪ್ರದೀಪಕ ವಿಶ್ವನಾಟಕ ಸರ್ವ ವಿಶ್ವಚೇಷ್ಟಕನಾದ 2 ಸಿರಿಗರಿಯದ ಗುಣನೀತಾ | ಮತ್ತೆ ಸಿರಿಯ ತನ್ನೊಳಗಿಟ್ಟಾತಾ | ಆ ಸಿರಿಯಲ್ಲಿ ತಾನಿರುವಾತಾ | ಸೃಷ್ಟಿ ಸಿರಿಯಿಂದ ಮಾಡಿಸುವಾತಾ | ಆಹ ಸಿರಿಯ ಬಿಟ್ಟಗಲದೆ ಸಿರಿಗೆ ಮೋಹಕನಾಗಿ ಸಿರಿ ಸೇವೆ ಕೈಕೊಂಬ ಸಿರಿಕಾಂತ ಶ್ರೀಕೃಷ್ಣ 3 ಪ್ರಳಯಾಂಬುವಟಪತ್ರ ಶಯನಾ | ಥಳ ಥಳಿಸುವ ಪದತಳ ಅರುಣಾ | ವರ್ಣ ಎಳೆಗೂಸಿನಂತಿಹ ಚಿಣ್ಣಾ | ಆರು ತಿಳಿಯಲಾಗದ ಗುಣಪೂರ್ಣ | ಆಹ ನಳಿನಭವನ ಪೊಕ್ಕಳಲಿ ಪಡದು ತನ್ನ ನಿಲಯ ತೋರಿಸಿ ಕಾಯ್ದ ಚಲುವ ಚನ್ನಿಗ ದೇವ4 ಸತಿ ಪ್ರಾಯ ಕೆಡಿಸದೆ ತನ್ನಾ | ಮೈಯ್ಯೋಳ್ ಸುತರ ಪಡೆದಂಥ ಸಂಪನ್ನಾ | ವೇದ ತತಿಗೆ ಶಿಲ್ಕದ ಸುಗುಣಾರ್ಣ | ಅ ದ್ಭುತ ರೂಪ ಜಗದೇಕ ಘನ್ನಾ | ಆಹ ಜಿತಮಾನಿಗಳಿಗೆ ಹಿತಕೃತಿ ಕಲ್ಪಿಸಿ ಜತನದಿ ಜಗಜೀವತತಿಗಳ ಕಾಯೂವ 5 ಸುರತತಿಗಳನೆ ನಿರ್ಮೀಸಿ | ಅವರೊಳ್ ತರತಮ ಭೇದ ಕಲ್ಪಿಸಿ | ತನ್ನ ವರಪುತ್ರನೋಶಕೆ ವಪ್ಪೀಸಿ | ಸೃಷ್ಟಿ ಗರಸನ್ನ ಮಾಡಿ ನೀ ನಿಲಿಸೀ | ಆಹ ಪರಮೇಷ್ಟಿ ಪದವಿತ್ತು ಸರುವ ಜೀವರ ಶ್ವಾಸಕ್ಕರಸನೆಂದೆನಿಸಿದ 6 ಸರಿ ಇಲ್ಲ ವಾಯುಗೆಂದೆನಿಸೀ | ತತ್ವ ಸುರರಿಗಧೀಶನೆಂದೆನಿಸೀ | ತನ್ನ ಶರಣರ ಕಾಯ್ವನೆಂದೆನಿಸೀ | ಅವ ನಿರುವಲ್ಲಿ ತಾ ಸಿದ್ಧನೆನಿಸೀ | ಆಹ ತರಣಿಜಗೊಲಿಯುತ್ತ ಕುರುಕುಲವಳಿಯುತ್ತ ಪರಮತ ಖಂಡಿಸಿ ಕರೆಯೆ ತನ್ನನು ಬಂದಾ 7 ತ್ರಿವಿಧ ಜೀವರಗತಿದಾತಾ | ನಮ್ಮ ಪವನನಂತರ್ಯಾಮಿ ಈತಾ | ಪದ್ಮ ಭವ ರುದ್ರ ತ್ರಿದಶರ ಪ್ರೀತಾ | ಭಕ್ತ ರವಸರಕೊದಗುವ ದಾತಾ ಪವನಜ ಸತಿಭಕ್ತ ನಿವಹ ತಾಪದಿ ಕೂಗೆ ಭುವಿಯಲ್ಲಿ ಪೊರೆದಂಥ 8 ಶೋಣಿತ ನೀಲ ಕಾಯಾ | ದೇವ ಅಕ್ಲೇಶ ಆನಂದಕಾಯಾ | ಯುಗಕೆ ತಕ್ಕಂಥ ವರ್ಣಸುಕಾರ್ಯ | ಮಾಳ್ಪ ರಕ್ಕಸಾಂತಕ ಕವಿಗೇಯಾ | ಆಹ ಪೊಕ್ಕಳ ನಾಡಿಯೊಳ್ ಸಿಕ್ಕುವ ಜ್ಞಾನಿಗೆ ದಕ್ಕುವ ಸುರರಿಗೆ ಠಕ್ಕಿಪ ದನುಜರ 6 ಸಚ್ಚಿದಾನಂದ ಸ್ವರೂಪ | ಭಕ್ತ ರಿಚ್ಛೆ ಸಲ್ಲಿಸಿ ಕಳೆವ ತಾಪಾ | ಶ್ರೀ ಭವ ಕೂಪಾ | ದಲ್ಲಿ ಮುಚ್ಚಿಡ ತನ್ನನ್ನೆ ಸ್ತುತಿಪಾ | ಆಹ ಅಚ್ಚ ಭಾಗವತರ ಮೆಚ್ಚಿ ಕಾಯುತ ಅಘ ಕೊಚ್ಚಿ ತನ್ನುದರದಿ ಬಚ್ಚಿಟ್ಟು ಕಾಯುವ 10 ವಲ್ಲನು ಸಿರಿಸತಿ ಪೂಜೆ | ಮತ್ತೆ ವಲ್ಲನು ಸುರ ಸ್ತುತಿ ಗೋಜೆ | ತಾ ನೊಲ್ಲನು ಮುನಿಗಳ ಓಜೆ | ಹರಿ ವಲ್ಲನು ಋಷಿಯಾಗವ್ಯಾಜೆ | ಆಹ ಬಲ್ಲಿದ ಭಕುತರ ಸೊಲ್ಲಿಗೊದಗಿ ಬಂದು ಚಲ್ವರೂಪದಿ ಹೃದಯದಲ್ಲಿ ನಿಲ್ಲುವ ಕರುಣಿ11 ಅಂಬುದಿಶಯನ ಶ್ರೀಕಾಂತಾ | ಸರ್ವ ಬಿಂಬನಾಗಿಹ ಮಹಶಾಂತ | ತನ್ನ ನಂಬಿದ ಸುಜನರ ಅಂತಾ | ರಂಗ ಅಂಬುಜ ಮಧ್ಯ ಪೊಳೆವಂಥಾ | ಆಹ ಭಂಜನ ಪಶ್ಚಿ- ಮಾಂಬುಧಿ ತಡಿವಾಸ ಶಂಬರಾರೀಪಿತ12 ಸ್ವಪ್ನದಿ ಗೋಪಿಕರ ತಂದು | ಎನ ಗೊಪ್ಪಿಸೆ ತನ್ನ ಕೂಸೆಂದು | ಚಿನ್ನ ದಪ್ಪಾರಭರಣವದೆಂದೂ | ನಾನು ವಪ್ಪದಿರಲು ಎತ್ತೆನೆಂದೂ | ಆಹಾ ತಪ್ಪಿಸಿಕೊಳ್ಳೆ ಮತ್ತೊಪ್ಪಿಸಿ ಪೋದಳು ಅಪ್ಪಿ ಎನ್ನ ತೋಳೊಳೊಪ್ಪಿದ ಶಿಶುರೂಪ 13 ಶ್ರೀ ಮಾಯಾಜಯ ಶಾಂತಿ ರಮಣಾ | ಕೃತಿ ನಾಮಕ ಶಿರಿವರ ಕರುಣಾ | ಪೂರ್ಣ ಹೇಮಾಂಡ ಬಹಿರಾವರ್ಣ | ವ್ಯಾಪ್ತ ಮಾ ಮನೋಹರ ಪ್ರಣವ ವರ್ಣಾ | ಆಹ ಸ್ವಾಮಿ ಸರ್ವೋತ್ತಮ ಧಾಮತ್ರಯದಿ ವಾಸ ಶ್ರೀಮದಾಚಾರ್ಯರ ಪ್ರೇಮ ಮೂರುತಿ ಮುದ್ದು14 ದ್ವಿ ದಳ ಮಧ್ಯದಿ ರಥ ನಿಲಿಸೀ | ಪಾರ್ಥ ನೆದೆಗುಂದೆ ತತ್ವಾರ್ಥ ತಿಳಿಸೀ | ನಿನ್ನ ಅದುಭುತ ರೂಪ ತೋರಿಸೀ | ಸ- ನ್ಮುದವಿತ್ತು ಕುರುಕುಲವರಸಿ | ಆಹ ವಿದುರನ ತಾತ ನಿನ್ನೊಡೆಯ ಬಾಣದಿ ಫಣೆ ಯದುವೀರ ಚಕ್ರ ಹಸ್ತದಿ ಧರಿಸುತ ಬಂದ 15 ನಿತ್ಯನೂತನ ದೇವ ದೇವಾ | ಸರ್ವ ಶಕ್ತ ನಿನ್ಹೊರತಾರು ಕಾವಾ | ಎನ್ನ ಚಿತ್ತದಿ ನೆಲಸು ಪ್ರಭಾವಾ | ಸರ್ವ ಕೃತ್ಯ ನಿನ್ನದೊ ವಿಜಯ ಭಾವಾ | ಆಹಾ ಮುಕ್ತಿ ಪ್ರದಾತನೆ ಮುಕ್ತರಿಗೊಡೆಯನೆ ತತ್ವ ನಿಯಾಮಕ ತತ್ವಾರ್ಥ ತಿಳಿಸೈಯ್ಯಾ 16 ಚರಣತಳಾರುಣ ಪ್ರಭೆಯೂ | ಹತ್ತು ನಖ ಪಂಕ್ತಿಯ ಪರಿಯೂ | ಗೆಜ್ಜೆ ಸರಪಳಿ ಪಾಡಗರುಳಿಯೂ | ಮೇಲೆ ಜರೆಯ ಪೀತಾಂಬರ ನೆರಿಗೆಯೂ | ಆಹ ವರ ಜಾನುಜಂಘೆಯು ಕರಿಸೊಂಡಲಿನ ತೊಡೆ ಸರ ಮಧ್ಯ ಉರುಕಟಿ ಕಿರಿಗೆಜ್ಜೆ ಉಡುದಾರ 17 ಸರಸಿಜೋದ್ಭವ ವರಸೂತ್ರ | ಮೇಲೆ ಮೆರೆವಂಥ ಸಿರಿಯ ಮಂದೀರ | ಹೃದಯ ವರರತ್ನ ಪದಕದ ಹಾರ | ಸ್ವಚ್ಛ ದರ ವರ್ಣ ಪೊಲ್ವ ಕಂಧಾರಾ | ಆಹ ಕರದ್ವಯ ಕಂಕಣುಂಗುರ ತೋಳ ಬಾಪುರಿ ಸುರರಿಗಭಯ ತೋರ್ಪ ಕರಕಮಲದ ಪುಟ್ಟ 18 ಮೊಸರರ್ಧ ಕಡದಿರೆ ಜನನೀ | ಬಂದು ಹಸುಗೂಸು ಮೇಲೆ ಬೇಡೆ ನನ್ನೀ | ಯಿಂದ ಮುಸುಗಿಟ್ಟು ಪಾಲ್ಕುಡಿಯಲು ನೀ | ಒಲೆ ಬಿಸಿ ಹಾಲುಕ್ಕಲು ಪೋಗೆ ಜನನೀ | ಆಹ ಹಸಿವಡಗದ ಕೋಪಕ್ಮಸರ್ಗಡಿಗೆಯ ವಡ- ದೆಸೆವ ಕಡಗೋಲ್ವಡಿದ್ಕೊಸರೋಡಿ ಬಂದ ಹೇ19 ಪದ್ಮ ಮುಖದ ಕಾಂತಿ ಸೊಂಪೂ | ಅಧರ ತಿದ್ದಿ ಮಾಡಿದ ದಂತ ಬಿಳುಪೂ | ತುಂಬಿ ಮುದ್ದು ಸುರಿಸುವ ಗಲ್ಲದಿಂಪೂ | ಕರ್ಣ ಕುಂಡಲ ಕೆಂಪೂ | ಆಹ ಮಧ್ಯ ಮೂಗುತಿ ನಾಸ ಪದ್ಮದಳಾಕ್ಷವು ಸದ್ಭಕ್ತರೇಕ್ಷಣ ಶುದ್ಧಾತ್ಮ ಸುಖಪೂರ್ಣ20 ಕಮಲಸಂಭವ ವಾಯುಚಲನಾ | ಹುಬ್ಬು ವಿಮಲ ಫಣೆ ತಿಲುಕದಹನಾ | ಮೇಲೆ ಭ್ರಮರ ಕುಂತಳ ಕೇಶ ಚನ್ನಾ | ವಜ್ರ ಅಮಿತ ಸುವರ್ಣ ಮುತ್ತೀನಾ | ಆಹ ಕಮನೀಯ ಮಕುಟವು ಸುಮನಸರೊಂದಿತ ಕಮಲ ತುಳಸಿಹಾರ ವಿಮಲಾಂಗ ಸುಂದರ 21 ಅಂತರ ಬಹಿರ ದಿವ್ಯಾಪ್ತಾ | ಸರ್ವ ರಂತರ ಬಲ್ಲ ನೀ ಗುಪ್ತಾ | ಜೀವ ರಂತರಂಗದಿ ವಾಸ ಸುಪ್ತಾ | ದಿಗ ಳಂತಾನೆ ನಡೆಸುವ ಆತ್ತಾ | ಆಹ ಸಂತತ ಚಿಂತಿಪರಂತರಂಗದಿ ನಿಂತು ಕಂತುಪಿತ ಇನಕೋಟಿಕಾಂತಿ ಮೀರಿದ ಪ್ರಭ22 ಎಚ್ಚತ್ತು ಇರುವ ಸರ್ವದಾ | ಕಾಲ ಮುಚ್ಚಿ ಕೊಂಡಿಪ್ಪೊದೆ ಮೋದಾ | ಅಜ ನುಚ್ವಾಸದುತ್ಪತ್ತಿಯಾದ | ಬಾಯ ಪಾದ | ಆಹ ಮುಚ್ಚೆ ಭೂವ್ಯೋಮವು ಹೆಚ್ಚಿನ ಕೋಪವು ಇಚ್ಚಿಪವನವಾಸ ಸ್ವೇಚ್ಛಾ ವಿಹಾರನೇ 23 ಗೊಲ್ಲರೊಡನಾಟ ಬಯಸೀ | ವಸ್ತು ವಲ್ಲದೆ ಪರಸ್ತ್ರೀಯರೊಲಿಸೀ | ಮತ್ತೆ ಚಲ್ವ ಕುದುರೆ ಏರಿ ಚರಿಸೀ | ತಾ ನೆಲ್ಲಿ ನೋಡಲು ಪೂರ್ಣನೆನಿಸೀ | ಆಹ ವಲ್ಲದೆ ದ್ವಾರಕೆ ಇಲ್ಲಿಗೈತಂದು ಮ ತ್ತೆಲ್ಲರ ಕಾಯುವ ಚೆಲ್ವ ಮಧ್ವೇಶ ಶ್ರೀ 24 ಗೋಪಿ ಕಂದನೆ ಮುದ್ದು ಬಾಲಾ | ಚೆಲ್ವ ರೂಪ ಸಜ್ಜನ ಪರಿಪಾಲಾ | ಗುರು ನಿತ್ಯ ನಿರ್ಮಾಲಾ | ದೇವಾ ಗೋಪಾಲಕೃಷ್ಣವಿಠ್ಠಾಲ | ಆಹ ಪರಿ ನಿಂತು ಮ ಕೊಂಡ ಶ್ರೀಪತಿ ಮರುತೇಶ 25
--------------
ಅಂಬಾಬಾಯಿ
ಬಾಲಕೃಷ್ಣ ಕೊಳಲನೂದುವ ಸುಂದರನ್ಯಾರೆ ತಂಗಿಸುಂದರನಿವನೆ ಮಂದರೋದ್ಧರನೆ ಪ ಪುರುಷರೂಪದಿ ಪಾಲುದಧಿ ಕಟಿದಾ ತಂಗಿತರುಣಿರೂಪದಿ ಸುಧೆ ಸುರರಿಗಿತ್ತನು ತಂಗಿ 1 ಸತಿಯಲ್ಲದಲೆ ಸುತರನು ಪಡೆದನು ತಂಗಿಪತಿಯ ಕೂಡದ ಅಪ್ರತಿಮ ತರುಣಿ ತಂಗಿ 2 ಮುಂಜಿ ಆಗದಲೆ ಮಕ್ಕಳ ಪಡೆದವ ತಂಗಿಸಂಜೆ ಆಗದಲೆ ರಾತ್ರಿ ಮಾಡಿದ ತಂಗಿ 3 ಅತ್ತೆಯಾ ಕಾಲಿಂದ ಪಡೆದಾನೆ ತಂಗಿಚಿತ್ರ ಚರಿತ್ರೆ ವೃಜದೊಳಾಡಿದ ತಂಗಿ 4 ವಾಸುದೇವ ಇಂದಿರೇಶ ಇವನ ತಂಗಿಕೂಸು ತರುಣನಾಗಿ ಮೋಸ ಮಾಡಿದ ತಂಗಿ 5
--------------
ಇಂದಿರೇಶರು
ಬಾಲನೇನೆ ನಿನ್ನ ಮಗನು ಗೋ- ಪಾಲಕೃಷ್ಣನು ಪ. ಬಾಲನೇನೆ ನಿನ್ನಮಗನು ಬಾಲಕಿಯರಾಲಯ ಪೊಕ್ಕು ಶೀಲಗೆಡಿಸಿ ಸಾಲದೆ ಗೋ- ಕುಲವನು ಸೂರೆಮಾಡಿದ ಅ.ಪ. ಕಾಲು ಇಲ್ಲದೆ ನಡೆವನೀತ ಮೇಲುಗಿರಿಯ ಬೆನ್ನಲಾಂತ ಮೂಲಬೇರ ಮೆಲ್ಲುವಾತ ಜ್ವಾಲರೂಪಿ ಸ್ಥೂಲಕಾಯ ಬಾಲನಾಗಿ ಭೂಮಿಬೇಡಿದ ಹಾಲು ಕುಡಿಸಿದ ತಾಯ ಎರವು ಮಾಡಿದ ವಲ್ಕಲವನುಟ್ಟು ಅಡವಿ ಆಲಯವ ತಿರುಗಿದ ಶ್ರೀರಾಮಚಂದ್ರ ವೇಲಾಪುರದ ಸೋರುಮುಡಿಯ ಬಾಲೆಯನು ಸೋಲಿಸಿ ಕಾಲದಲ್ಲಿ ಕಲ್ಕ್ಯನಾದ 1 ಮಡುವಿನಲ್ಲಿ ಅಡಗಿಯಿರುವ ಪೊಡವಿ ದೊಡ್ಡನೆತ್ತಿ ಪೊರೆವ ಅಡವಿಯಲ್ಲಿ ಆಡುತಿರುವ ಕಡುಕ್ರೂರ ಹಿಡಿದ ಹಟವ ಹುಡುಗನಾಗಿ ಪೊಡವಿ ಬೇಡಿದ ಕೊಡಲಿ ಪಿಡಿದು ಕಡಿದು ಕ್ಷತ್ರಿಯರ ಕುಲವ ತರಿದನೆ ರಾವಣಾದಿ ಪಡೆಯನೆಲ್ಲ ಸಂಹರಿಸಿದ ಶ್ರೀರಾಮಚಂದ್ರ ತುಡುಗು ಮಾಡಿ ಗಡಿಗೆ ಪಾಲ ಕುಡಿದು ಕಡಹದಲ್ಲಿ ಅಡಗಿ ಬಿಡದೆ ತ್ರಿಪುರವ್ರತಕೆಡಿಸಿ ಪಿಡಿದು ತೇಜಿಯ ನಡೆಸುತಿಹನು 2 ನೀರಪೊಕ್ಕು ವೇದತಂದು ಭಾರಪೊತ್ತು ಬೆನ್ನಲಿಟ್ಟು ಕೋರೆಹಲ್ಲು ತೋರುವ ಕ್ರೂರವದನ ಅಪಾರ ಮಹಿಮ ಪಾದ ಭೂಮಿ ಬೇಡಿದ ವಿಪ್ರರ ಕರೆಸಿ ಧಾರುಣಿಯನೆ ದಾನ ಮಾಡಿದ ಪರ್ವತಗಳ ತರಿಸಿ ಶರಧಿಯನ್ನು ಸೇತುಕಟ್ಟಿದನೆ ಶ್ರೀರಾಮಚಂದ್ರ ಜಾರ ಚೋರ ಮಾರನಯ್ಯ ನಾರೇರಪ್ಪಿ ಮರುಳುಮಾಡಿ ವಾರಿಜಾಕ್ಷ ಹಯವದನ ಏರಿ ಕುದುರೆ ವೈಹಾಳಿಮಾಡಿದ 3
--------------
ವಾದಿರಾಜ
ಬಾಲಲೀಲ ಲೋಲ ಕೃಷ್ಣನ|ನೆನೆವೆನಾ| ಬಾಲಲೀಲ ಲೋಲ ಕೃಷ್ಣ ಈ ಲೋಕಾಳಿ ಪಾಲಿಪಾ|ವಿ- ಶಾಲ ಬಾಲ ನೀಲಗಾತ್ರನಾ|ನೆನೆವೆನಾ ಪ ಪಡುಲ ಕರಿಯಕಣ್ಣಲಿಟ್ಟರು|ಒಡನೆ ಕೇಳಿ ಕರ್ತನೃಪನ| ಮಡದಿ ಜನಕನಹಿತ ಸರಿಕನಾ|ವೈರಿಯ ಒಡಲಲುದಿಸಿದಾತ್ಮಭವನ|ಸಡಗರದಿ ಕಿರಿಯ ತಮ್ಮನ ಪಡೆದ ಜನನಿಯಣ್ಣ ಕಂದನಾ||ನೆನೆವನಾ 1 ಮುದದಲಿಂದ ಮಸುಧೆಯನ್ನು|ಎದೆಯಲೊತ್ತಿ ನಡೆವನಿಂದ| ಒದಗಿ ತನ್ನ ಶರೀರ ತೊರೆದನಾ|ತಂದೆಯಾ ವಿದಿತ ಮುತೈಯ್ಯನ ಮಗನ|ಚದುರತಮ್ಮನರಸಿ ಪಡೆದ ಉರದಿ ಮಗಳ ಪ್ರಾಣದರಸನಾ||ನೆನೆವೆನಾ 2 ನೃಪನಬಿಂಕ ಶಿಷ್ಯರಿಂದ|ಅಪಹರಿಸಿದವನ ಮಗನ| ಚಪಲ ಬಾಣ ಬರಲು ಸ್ಥಳವನು|ತಪ್ಪಿಸಿ ವಿಷದ ಹರಿಸಿ ಕಾಯ್ದೆನೈವರ|ನಿಪುಣ ಮಹೀಪತಿನಂದನ| ಕೃಪೆಲಿ ಪೊರೆವ ಉತ್ತುಮೊತ್ಮನಾ||ನೆನೆವೆನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಿಟ್ಟಿರಲಾರೆ ಬಾ ಗೋವಿಂದಾ ಸೃಷ್ಟಿಶಾನಂದ ಪ ಬಿಟ್ಟಿರಲಾರೆ ಮನಮುಟ್ಟಿ ಭಜಿಪೆನಯ್ಯ ಅಷ್ಟಮಹಿಷೇರ ಸಹಿತ ನಾಟ್ಯವಾಡುತ ಬೇಗ ಬಾ ಅ.ಪ ಗೊಲ್ಲರ ಮನೆ ಪೊಕ್ಕು ಪಾಲ್ಬೆಣ್ಣೆಗಳ ಮೆದ್ದು ಚೆಲ್ವ ಲಲನೇರ ಗಲ್ಲ ಮುದ್ದಾಡುತ ಬೇಗ 1 ಮಂದಗಮನೆಯರ ಮಂದಹಾಸದಿ ಅಪ್ಪಿ ದ್ವಂದ್ವ ಕುಚದಲ್ಲಿಟ್ಟ ನಂದಜ ಕರಗಳಿಂದ 2 ಮಿರಿಮಿರಿ ಮಿಂಚುವ ಕಿರೀಟ ಕುಂಡಲ ಧರಿಸಿ ವಾರೆ ನೋಟದಿ ನಾರೇರ ಮನ ಸೆಳೆವ 3 ಸುಮನಸರೊಂದಿತ ಯಮುನಾ ಪುಳಿನದಿ ವಿಮಲ ವೇಣುಸ್ವರದಿ ಕಮಲಾಕ್ಷಿಯರೊಲಿಸಿದ 4 ಶ್ರೀವತ್ಸ ಕೌತ್ಸುಭ ಪವಳ ಮುತ್ತಿನಹಾರ ನ್ಯಾವಳ ಸರಿಗಿಟ್ಟು ಗೋವಳರೊಡಗೂಡಿ 5 ತುತ್ತೂರಿ ಝಾಂಗಟೆ ಒತ್ತಿ ಪಿಡಿದಿಹ ಕಹಳೆ ಬತ್ತೀಸ ರಾಗದಿ ತತ್ಥೈವಾದ್ಯದೀ 6 ಎತ್ತಿ ಪಿಡಿದಿಹ ಛತ್ರಿ ಸುತ್ತು ಮಾಗಧ ಮಂದಿ ಸ್ತೋತ್ರವ ಮಾಡೆ ನೇತ್ರೋತ್ಸವ ತೋರುತ 7 ದಿವಪನ ಸೋಲಿಪ ನವ ಪೀತಾಂಬರ ಧರಿಸಿ ಭುವನವ ಮೋಹಿಪ ನವ ಸುವಿಶೇಷನೆ 8 ವಿಜಯ ರಾಮಚಂದ್ರವಿಠಲರಾಯನೆ ನಿಜ ಪರಿವಾರದಿಂ ಭಜಕರ ಪಾಲಿಪ 9
--------------
ವಿಜಯ ರಾಮಚಂದ್ರವಿಠಲ
ಬಿಡಬೇಡ ರಂಗಯ್ಯ ಬಡವನೂ ಪಿಡಿಕಯ್ಯ ಒಡೆಯ ನಿನ್ನಡಿ ಪಿಡಿದೆ ದಯೆಮಾಡೊ ಜೀಯ ಪ ಕಡಲಣುಗಿಯಣ್ಮನೇ ಕಡೆಹಾಯ್ಸೊ ಕಷ್ಟದಿಂ ಕಡುಮುದದಿ ಕೊಂಡಾಡಿ ಬೇಡುವೆನೊ ದೊರೆಯೆ ಅ.ಪ ಸಪ್ತ ಋಷಿಗಳು ಸತತ ಗುಪ್ತದಿಂ ಧ್ಯಾನಿಸುತ ತೃಪ್ತರಪ್ಪರು ಅಪ್ತ ನಿನ್ನ ನುತಿಸಿ ಅಪ್ಪ ನೀನವರಿಂದೆ ವಿಪ್ರತ್ವವಂ ತೋರಿ ಅಪ್ರತಿಮ ತಾರಕ ಬ್ರಹ್ಮ ಬೋಧಿಸಿದೆ 1 ಉತ್ತರೆಯ ಬಸುರೊಳಗೆ ಬ್ರಹ್ಮಾಸ್ತ್ರ ಬಾಧಿಸಲು ಅತ್ಯಗತ್ಯದಿ ಪ್ರಭುವೆ ಚಕ್ರ ಪಿಡಿದು ಸುತ್ತೆತ್ತಲಾಶಿಶುವ ಸಂರಕ್ಷಣೆಯಗೈದೆ ಉತ್ತಮೋತ್ತಮ ದೈವ ನೀನೆ ಜಗದಯ್ಯ 2 ಅಂಬರೀಷನ ಮೇಲೆ ಜಂಭದಿಂ ಮುನಿ ಮುನಿಯೆ ಕಂಬುಧಾರಿಯೆನೀಂ ಸುನಾಭ ಕಳುಹಿ ಬೆಂಬಿಡದೆ ಸುತ್ತಿಸಲು ಇಂಬಿನಿಂ ಪದಪಡಿಯೆ ಸಂಭ್ರಮದಿ ಕಾಯ್ದಂಥ ಸದ್ಭಕ್ತ ಬಂಧು 3 ಗಜರಾಜನಂ ಸರದಿ ಮೊಸಳೆ ಪೀಡಿಸುತಿರಲು ನಿಜರಥಾಂಗವ ಕಳುಹಿ ನಕ್ರನಂ ಸೀಳಿ ಅಜಪಿತನೆ ನೀನವರ ವಕ್ರ ಹರಿಸುತ ಕಾಯ್ದೆ ತ್ರಿಜಗಾದಿ ನಾಥನೇ ಭಕ್ತಪಾಲ 4 ಶರಣ ರಕ್ಷಣೆಗಾಗಿ ನೀಂ ಸುದರ್ಶನ ಪಿಡಿದೆ ವರದ ವೇಂಕಟರಮಣ ವೈಷ್ಣವೋದ್ಧರಣ ಕರುಣಿ ನನ್ನಪರಾಧವಪರಿಮಿತವಿದೆ ಕ್ಷಮಿಸು ತರಳನಂ ಕಾಪಾಡು ಜಾಜೀಶ ನೋಡು 5
--------------
ಶಾಮಶರ್ಮರು
ಬಿನ್ನವೆನ್ನೆಣೆಸದಿರು ಎಲೆ ಮಾನವಾ ಚನ್ನಕೇಶವ ಸ್ವಾಮಿ ಒಲಿದು ಪಾಲಿಸುವಾ ಪ ವಸುಧೆಯಲಿ ಚಲಿಸುತಿಂತ ಸಕಲ ಜಂತುಗಳೆಲ್ಲ ಹಸನಾಗಿ ತಿಳಿಯದೆ ನಿನ್ನಾತ್ಮವೆಂದು ತೃಷೆ ಕ್ಲೇಶಗಳು ಮುರಿದೊಗೆವ ಜೀವವನು ಕಸಕಸರಿ ಮಾಡದಿರು ಪರರಾತ್ಮವೆಂದು 1 ಅವರಿವರು ಬಂಧುಗಳು ಅಪ್ತೇಷ್ಟ ಸಹೃದರು ಇವರವರು ದೂಷಕರು ಪರಜಾತಿಯೆಂದು ಸವಿಸುತಲಿ ಮನಸನ್ನು ಪರಪಂಚವೆನಿಸುತ್ತ ಭವವನ್ನೆ ಸೆಲೆ ನಂಬಿ ಪರರಾತ್ಮವೆಂದು 2 ದಾಸದಾಸರಿಗೆಲ್ಲ ವಂದನೆಯ ಮಾಡುತ್ತ ದಾಸರೆಲ್ಲರು ಜಗದಿ ಏಕಾತ್ಮರೆಂಬ ವಾತನೆಯ ನಂಬದಲೆ ಬಿನ್ನಾತ್ಮರೆಂದೆಣಿಸಿ ವಾಸುಕೀಶಯನನೂ ಭಿನ್ನಾತ್ಮನೆಂದು 3
--------------
ಕರ್ಕಿ ಕೇಶವದಾಸ
ಬಿಸಜ ಕಾನಮಿಪೇ ಪ ವಾತಸುತನೆನ್ನಿಸುತ | ಸೀತೆ ರಮಣನ ಕಂಡುಸೀತೆ ವಾರ್ತೆಯ ನರುಹಿ | ಖ್ಯಾತ ನೀನಾದೇ |ಮಾತರಿಶ್ವನೆ ಹರಿಯ | ಪ್ರೀತಿ ನಿನ್ನೊಳಗೆಂತೋಪೋತ ಭಾವ ದೊಳಾಂತೆ | ಪ್ರೀತಿ ಅಪ್ಪಿಗೆಯಾ 1 ಉರ ರಕ್ತವನು | ಕುಡಿದಂತೆ ತೋರಿ ಜಗನಡುಗುವಂತೆಸಗಿವೆಯೊ | ಕಡುಗಲಿಯ ಭೀಮಾ 2 ಸನ್ಯಾಸದಾಶ್ರಮವ ಅ | ನ್ಯಾಯದಲಿ ಗೊಂಡುಶೂನ್ಯ ಮತ ತತ್ವ ಪ್ರ | ಚ್ಛನ್ನದಲಿ ಪೇಳ್ದಾಅನ್ಯಾಯ ಕಳೆವುದಕೆ | ಜನ್ಯನಾಗುತ ಮಧ್ವಚೆನ್ನ ಪೆಸರಲಿ ಪೇಳ್ದ | ಘನ್ನ ತತ್ವಗಳಾ 3 ಆರು ಕೋಣ್ಯು ಪರಿಯಾ | ಕಾರದಲಿ ವಲಯಾಮೂರು ಕೋಟಿಯ ಸಂಖ್ಯೆ | ವಾನರಾಕೃತಿ ಬದ್ಧವೂ |ಚಾರು ಯಂತ್ರದಿ ಸೌಮ್ಯ | ದಾಕಾರದಲಿ ಜಪದಹಾರ ಪಿಡಿಯುತ ವ್ಯಾಸ | ತೀರಥಿರಿಗ್ವೊಲವೇ 4 ವಕ್ರ ಮನವನು ತ್ಯಜಿಸಿ | ಚಕ್ರತೀರ್ಥದಿ ಮಿಂದುವಕ್ರ ಬಕರಿಪು ನಿನ್ನ | ಚೊಕ್ಕ ರೂಪವ ಸೇವಿಸೀಅಕ್ರೂರ ವರದ ಗುರು | ಗೋವಿಂದ ವಿಠ್ಠಲನಅಕ್ಕರದಿ ಭಜಿಸುವಗೆ | ಚಕ್ರಿಪುರ ವೀವೇ5
--------------
ಗುರುಗೋವಿಂದವಿಠಲರು
ಬೆಳುದಿಂಗಳಿನೊಳು ಬೇಟೆಯನಾಡಿರಿಬಲ್ಲವರಾದವರೆಲ್ಲಒಳ್ಳೊಳ್ಳೆಯವರು ಕೂಡಿ ಆಡಿರಿ ಶಮದಮ ಶಾಂತರು ಎಲ್ಲ ಪ ತನ್ನ ಸರಿಯದ ಅವಿದ್ಯೆ ಹುಲಿಯದುಘುಡುರು ಘುಡುರು ಘುಡುರೆಂದೆನಲುಸುಮ್ಮನೆ ಪ್ರಣವದ ಧನುವನು ಎಳೆದು ನಾದ ಬಾಣದಿ ಬೀಳಿಸಿರಿ 1 ನಾನು ಎಂಬ ಕರಡಿಯು ಬಂದುಅಡರಲು ನಿಮ್ಮನು ನಿಲುವುದ್ಧಸ್ವಸ್ಥ ವಿವೇಕದ ಕೋಲಲಿ ಬಡಿಯಿರಿಕೆಡಹಿರಿ ನೋಡದೆ ನೀವೆಲ್ಲ2 ಅಪರೋಕ್ಷವೆಂಬ ಬಲೆಯನೆ ಒಡ್ಡಿದುರ್ಗುಣ ಮೃಗಗಳನೆ ಬಡಿದುಭವ ಹರ ಚಿದಾನಂದನ ನೆನೆಯುತಬೇಟೆಯನಾಡಿರಿ ಎಲ್ಲ 3
--------------
ಚಿದಾನಂದ ಅವಧೂತರು