ಒಟ್ಟು 602 ಕಡೆಗಳಲ್ಲಿ , 83 ದಾಸರು , 546 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗಾಪಿತ ವೆಂಕಟ ಪರ್ವತನಿಲಯಕೌಸಲ್ಯತನಯಾ |ಮಂಗಳವಲ್ಲಭಭವಕರಕರೆಯ ಪರಿಹರಿಪುದು ತ್ವರಿಯಾ |ಅಂಗಜಜನಕನೆ ಸಂಗರಹಿತ ಸತ್ಸಂಗ ಕೃಪಾಬ್ಧಿ ವಿಹಂಗವಾಹನನೇ ಪಸ್ವಾಮಿಲಾಲಿಸುಯನ್ನಯ ಮನದುಸರ ನೀನಲ್ಲದಿತರರ |ಭೂಮಿಯೊಳ್ಕಾಣೆನೋ ಉದ್ಧರಿಸುವರನವನೀತಚೋರ |ಸಾಮಜದ್ರೌಪದಿ ಆ ಮುಚುಕುಂದ ಸುಧಾಮರ ಪೊರೆದ ತ್ರಿಧಾಮ ಮಹಾತ್ಮ 1ವಾಸುಕೀ ಶಯನ ದಯಾ ಸಂಪನ್ನ ನಾರಾಯಣ ನಿನ್ನ |ದಾಸರೊಳಗಾಡಿಸೊ ಸದ್ಗುಣ ಪೂರ್ಣ ಸಾರ್ವರಿಗೆ ಪ್ರಸನ್ನ |ಈಸಲಾರೆ ಈ ಸಂಸಾರಶರಧಿಕೈ ಸೋತಿತೆಲೋ ಪರಾಶರ ತನಯ 2ನಿತ್ಯಾನಂದ ನಿಗಮೋದ್ಧಾರ ಪೂತನೀ ಸಂಹಾರ |ಮೃತ್ಯುಂಜಯಸಖರವಿದರ ಗದಾಧರ ಸುಖಪಾರಾವಾರ|ಭೃತ್ಯವತ್ಸಲ ಸುರೋತ್ತಮ ಪಾರ್ಥನ ತೊತ್ತಿಗನಾದಿ ಸುಸತ್ಯ ಸಂಕಲ್ಪ ಗಂಗಾ3ಮಂದರಾಚಲ ಧರಿಸಿದ ಗೋವಿಂದ ಶ್ರೀ ಯಶೋದಾನಂದ |ನಂದನ ಶ್ರೀ ಕೇಶವ ಮುಕುಂದ ವಾಮನ ಸುಖಸಾಂದ್ರ |ತಂದೆ ಸಲಹೊ ನಿನ್ನ ಬಂಧಕ ಶಕುತಿಯಲಿಂದ ದಣಿಸದೆ ಅರಿಂದಮ ಪ್ರಭುವೇ 4ಅಂತರಂಗವ ಬಲ್ಲ ಮಧುದ್ವೇಷಿ ಯನ್ನಯ ಮನದಾಸೀ |ಅಂತು ಪೂರ್ತಿಸಿ ದುಷ್ಕರ್ಮದ ರಾಶಿ ಉಳಿಸದೆ ಪರಿಹರಿಸಿ |ಸಂತತ ಹೃದಯದಿ ನಿಂತು ಪೊಳೆವುದೋ ಅನಂತ ಮುರಾಂತಕ ಚಿಂತಾರಹಿತನೆ 5ಶಕ್ರವರಪೂಜಿತ ಬಲವಂತ ರುಕ್ಮಣೀಪತಿ ದಂತ |ವಕ್ತ್ರಾರಿ ಬಾಧಿಸದಂತೆಕೃತಾಂತಮಾಳ್ಪುದು ಕೆಡದಂಥ |ಸುಕೃತಪೀಡಿಸೋ ತ್ರಿವಿಕ್ರಮ ಮೂರುತಿ ಶುಕ್ರ ಯುಕ್ತಿ ಹರ ಅಕ್ರೂರ ವರದ 6ಕಂಕಾನುಜ ಮಂದಿರ ಪ್ರಾಣೇಶ ವಿಠಲ ಗೋಕುಲ ಗೋಪಾಲ |ಪಂಕಜಾಸನ ಜನಕ ಶಕಟಕಾಲಜಾಂಬವತೀಲೋಲ|ಶಂಕರಾದ್ಯಮರರ ಕಳಂಕೆಣಿಸದ ಗರುಡಾಂಕಉರಗಪರ್ಯಂಕ ಸುಖಾತ್ಮ 7
--------------
ಪ್ರಾಣೇಶದಾಸರು
ಗಣೇಶ ಪ್ರಾರ್ಥನೆ1ಲಂಬೋದರ ಪಾಹೀ ಪಾಹೀ ಜಗದ್ಗುರು|ಶಂಭುನಂದನ ಸುರಸುತ ಪಾದಾ ಪಯೋಗೀಶಾರ್ಚಿತ ಶ್ರೀ ಪಾರ್ವತಿ ಪುತ್ರ ನತಮಿತ್ರಾ |ಆಗಸವಾಳ್ದಮೂಷಕರೂಢಾ ||ನಾಗಶಯನನಪಾದಧ್ಯಾನದಲ್ಲಿಡು ನಿತ್ಯಾ |ಶ್ರೀ ಗಣಪತಿ ನಿನ್ನ ಬಲಗೊಂಬೆ 1ಶ್ರೀವರ ಶ್ರೀರಾಮಚಂದ್ರ ಧರ್ಮರಾಯಾ |ದೇವೇಂದ್ರಾ ನಿನ್ನ ಪೂಜಿಸಿದಾರೋ ||ಕೇವಾಲಾಕಲಿದುರ್ಯೋಧನ ಪೂಜಿಸದೆ ಕೆಟ್ಟಾ |ಶ್ರೀ ವಿಘ್ನೇಶ್ವರ ನಿನ್ನ ಬಲಗೊಂಬೆ 2ದನುಜಾರ ಮೋಹೀಸೂವದಕೆ ಸಂಕಟ ಚೌತಿ |ಮನಿಸೀ ಪೂಜಿಸಿಕೊಂಬೆ ಖಳರಿಂದಾ ||ಮುನಿ ವ್ಯಾಸ ಕೃತ ಗ್ರಂಥಾರ್ಥವ ತಿಳಿದು ಬರೆದಾ |ಗಣರಾಜಾ ನಿನ್ನ ಪಾದಾ ಬಲಗೊಂಬೆ 3ಶಂಬು ಚಕ್ರಾಂಕಿತಾ ಪಾಶಧಾರನೇ ರಕ್ತ |ಅಂಬರಾದ್ವಯ ಭೂಷಾ ನಿರ್ದೋಷಾ ||ಶಂಬರಾರಿಪುಶರಾ ವಿಜತಾಮೃದ್ಭವ ಗಾತ್ರಾ |ಅಂಬಾರಾಧಿಪ ನಿನ್ನ ಬಲಗೊಂಬೆ 4(ಅಂಬೂಜಾಲಯಜಾನೆ ಬಲಗೊಂಬೆ)ಏಕವಿಂಶತಿಪುಷ್ಪಾನ ಮನ ಮೋದಕ ಪ್ರೀಯ |ನೀ ಕರುಣಿಪುದೂ ನಿನ್ನವಾನೆಂದು ||ಸಾಕು ವಿಷಯ ಸುಖಾ ಸುಜನಾರೋಳಾಡಿಸೊ |ಏಕಾದಂತನೆ ನಿನ್ನ ಬಲಗೊಂಬೆ 5ಏನು ಬೇಡುವೊದಿಲ್ಲಾ ಏನು ಮಾಡುವೊಕರ್ಮ|ಶ್ರೀನಿವಾಸನೆ ಮಾಡಿಸುವನೆಂಬೊ ||ಜ್ಞಾನಾವೆ ಯಂದೆಂದಿಗಿರಲಿ ತಾರಶಾಂತ- |ಕಾನುಜಾ ನಿನ್ನ ಬಲಗೊಂಬೆ 6ಪ್ರಾಣಸೇವಕ ಚಾಮೀಕರವರ್ಣ ಗಜಮುಖ |ಪ್ರಾಣೇಶ ವಿಠಲನಾ ಸುಕುಮಾರಾ ||ನೀನೊಲಿದೆಮಗೆ ವಿಘ್ನವ ಪರಿಹರಿಸುತ |ಪೋಣಿಸು ಸನ್ಮತೀ ಬಲಗೊಂಬೆ 7
--------------
ಪ್ರಾಣೇಶದಾಸರು
ಚಂಡಳಹುದೋ ನೀನುಕದನಪ್ರಚಂಡಳಹುದೋ ನೀನುದಿಂಡೆಯರನ್ನು ಖಂಡಿಸಿ ತುಂಡಿಪಚಂಡವಿಕ್ರಮಮಾರ್ತಾಂಡಮಂಡಿತ ದೇವಿಪಭುಗು ಭುಗು ಭುಗಿಲೆಂದು ಮಧು ಕೈಟಭೆಂಬುವರುನೆಗೆ ನೆಗೆ ನೆಗೆಯುತ ರಣಕೆ ಬರಲು ಪೋಗಿಜಿಗಿ ಜಿಗಿ ಜಿಗಿದವರ ನೀನು ಯುದ್ಧವ ಮಾಡಿನೆಗೆದುರೆ ಖಡ್ಗವನು ಝಡಿದು ಧಗ ಧಗಧಗಿಸುವ ಚಕ್ರವನು ಇಡಲು ಶಿರವುಜಿಗಿಯೆ ಚರ್ಮವ ಸೀಳಿ ಮಾಡಿದೆ ಭೂಮಿಯ ನೀನು1ಛಟ ಛಟಾಕೃತಿಯಿಂದ ಮಹಿಷಾಸುರನ ಬಲನಟ ನಟ ನಟಿಸುತ ಪಟು ಭಟರಿದಿರಾಂತುಘಟಿಸಿ ರಣಕೆ ಬರಲು ಫಲ್ಗಳ ಕಟಕಟನೆ ಕಡಿದು ನಿಲ್ಲಲು ಅಸುರ ಬಲಸೆಟೆದು ಹಿಂದಾಗುತಲಿರಲು ಸುರಕಟಕನಿಮ್ಮನ್ನು ಹೊಗಳಿ ಕೊಂಡಾಡಲು2ಘುಡು ಘುಡು ಘುಡಿಸುತ್ತ ಮಹಿಷಾಸುರನು ಬರೆದಢ ದಢನೆ ಪೋಗಿ ಹೊಡೆದು ನಿನ್ನಯಪಾದದಡಿಯೊಳವನ ಕೆಡಹಿ ಚದುರ ಬೀಳೆ-ಕಡಿದು ಕಂಡವ ಕೊಡಹಿ ನಿಲ್ಲಲು ಸುರರೊಡೆಯ ನೆಲ್ಲರ ನೆರಹಿನಿಲ್ಲಲು ನೀನುಬಿಡದೆ ಅಭಯವಿತ್ತು ಹರುಷದಿ ವಾರಾಹಿ3ಶುಂಭನಿಶುಂಭರೆಂಬ ರಾಕ್ಷಸರುಪಟಳಅಂಬುಜಾಂಡಕೆ ರಂಭಾಟವದು ಹೆಚ್ಚೆಜಂಭಾರಿದಿವಿಜರೆಲ್ಲ ನಿಲ್ಲದೆ ದೂರಬೆಂಬಿಡದ್ಹೇಳಲೆಲ್ಲ ಕೇಳಿಯೆ ಉ-ಗ್ರಾಂಬಕಳಾಗಿ ನಿಲ್ಲೆ ಅಸುರ ಕಾದಂಬ ನಿನ್ನನುಕಂಡು ಬೆದರಿ ವೋಡಿದರೆಲ್ಲ4ಆರು ನೀನೆಂದು ಶುಂಭನ ದೂತ ವಿಚಾರಿಸೆ ಕೇಳಿಯೆ ಎಮ್ಮರಸನಿಗೆನಾರಿ ನೀ ಸತಿಯಳಾಗು ಜಾಗತ್ಯಕ್ಕೆವೀರ ಶುಂಭನ ಸೊಬಗು ಬಣ್ಣಿಸುವೊಡೆಮೂರು ಲೋಕಕೆ ಹೊರಗು ಬಾ ಎನೆ ನೀನುಚೋರಗುತ್ತರ ವಿತ್ತೆ ಹೇಳ್ವೆನೇನದ ಬೆರಗು5ಕೇಳು ಶುಂಭನ ದೂತ ಖೇಳ ಮೇಳದಿ ನಾನುಕೀಳು ಸಪ್ತದಿಯಾಡ್ದೆ ಈರೇಳು ಲೋಕದಲಿತೋಳು ಸತ್ವವು ಬಲಿದು ಸಮರದಲಿಸೋಲಿಸೆನ್ನನು ಪಿಡಿದು ಒಯ್ಯಲು ಅವರಾಳು ಆಗಿಯೆ ನಡೆದು ಬಹೆನು ಪೋಗಿಖೂಳರ ಕರೆದು ತಾ ರಣಕೆಂದು ನುಡಿದು6ಅಂಬವಚನವಶುಂಭಕೇಳಿಸುಗ್ರೀವನೆಂಬ ನಿಶಾಚರ ಶುಂಭನಲ್ಲಿಗೆ ಪೋಗಿಶಾಂಭವಿಯಾಡಿದುದ ಶಬ್ದವ ಕೇಳ-ಲಂಬುದಿಯ ನೀಂಟುವುದ ವಡಬಾನಳ-ನೆಂಬವೋಲ್ ಕೋಪವ ತಾಳ್ದು ಬರಲು ಸರ್ವಸಂಭ್ರಮದಲಿ ನೋಡಿ ಎದ್ದು ನೀ ನಿಂದುದನು7ಸರಸರನೆ ಶುಂಭಾಸುರನ ಬಲ ಬರೆ ಕಂಡುಗರಗರನೆ ಹಲ್ಲ ಕೊರೆದು ಅವನ ದಂಡಸರಕುಗೊಳ್ಳದೆ ಛೇದಿಸಿ ಸುಭಟವೀರರಿರವನೆಲ್ಲಾ ಶೋಧಿಸಿಶುಂಭನಿಶುಂಭರಶೋಣಿತಕಾರಿಸಿ ಸುರರಿಗಿತ್ತೆಸ್ಥಿರವಪ್ಪ ಸೌಭಾಗ್ಯದವರ ನೀ ಪಾಲಿಸಿದೆ8ದುಷ್ಟ ಜನರೆಲ್ಲ ಸುಟ್ಟು ಭಸ್ಮಮಾಡಿಶಿಷ್ಟ ಜನರ ಪ್ರಾಣಗುಟ್ಟು ನೀನೆಂತೆಂಬರನಟ್ಟಿ ದಟ್ಟಿಸಿದೆ ಪರಾಂಬ ಭಕ್ತರ ಅ-ಭೀಷ್ಟ ಪಾಲಿಪ ಜಗದಾಂಬ ದುರ್ಜನರಘ-ರಟ್ಟಳಹುದೇ ತ್ರಿಪುರಾಂಬ ರಕ್ಷಿಸು ಎನ್ನಶಿಷ್ಟ ಚಿದಾನಂದಅವಧೂತಬಗಳಾಂಬ9
--------------
ಚಿದಾನಂದ ಅವಧೂತರು
ಚಂಡಿಯ ಕಂಡಿರಾ ಪ್ರಚಂಡೆಯ ಕಂಡಿರಾದಿಂಡೆಯರಾದವರ ಖಂಡಿಸುತಿರುವ ಕತ್ತಿಯತಿರುಹುತಿರುವ ಗದೆಯಪನಿಷ್ಟರಾಗಿಹ ಭಕ್ತರ ದೂರನುಕೇಳಿಕೋಪವತಾಳಿಕಟ್ಟುಗಳಿಲ್ಲದ ರೌದ್ರವು ತೋರಲುಮೋರೆಕಂಗಳುಕೆಂಪೇರಲುಉಟ್ಟಿಹ ಪೀತಾಂಬರವನೆ ಕಾಶಿಯಹೊಯ್ದು ದಿಟ್ಟ ನಿಟ್ಟುಸಿರಸುಯ್ದುಕಟ್ಟಿದಳು ಆಯುಧಂಗಳ ಧರಿಸಿ ಝಳಝಳ ಝಳಪಿಸಿ1ಹೂಕಾಂರವನೇ ಮಾಡುತ ದೇಹವ ಮರೆದು ಕಂಗಳ ತೆರೆದುಬೆಂಕಿಯ ಸುರಿಯಲು ಎಡಬಲ ಅದಿರೆ ಹರಿಹರ ಬೆದರೆಅಂಕೆಯಿಲ್ಲದ ಸಿಡಿಲಬ್ಬರದಂತಾಗೆ ಹಾ ಎಂದು ಕೂಗೆಪಂಕಜಮುಖಿತಾ ಕೂಗುತ ಅವುಡುಗಚ್ಚೆಭೂಮಿ ಬಾಯಿ ಬಿಚ್ಚೆ2ನಡೆದಳು ಶತ್ರುಗಳೆಡೆಗೆ ಆಗ ವೇಗದಲಿ ಮನೋ ಯೋಗದಲಿತೊಡರಿಕೊಂಡಳುವೈರಿಸೇನೆಯ ನಿಲಿಸಿ ತಾ ಘುಡು ಘುಡಿಸಿತುಡುಕಿ ಪಿಡಿದಳು ದುಷ್ಟರ ಜಿಹ್ವೆಯನೂಕಿ ತಾ ಮುಂದಕೆ ಜೀಕಿಖಡುಗದಿ ಸೀಳುತ ರೌದ್ರದಿ ನಿಂತಳು ವೀರೆಕಂಗಳುಕಿಡಿಯನೆ ಕಾರೆ3ಹೊಯ್ದಳಾಕ್ಷಣ ದುರ್ಜನ ಸೇನೆಯ ಬಗಳೆರಿಪುತಲೆಗಳು ಉರುಳೆತೊಯ್ದಳಾಕ್ಷಣ ರಕ್ತದ ಬಿಂದಿಗೆ ಉಕ್ಕೆ ಮುಖ ಪುಟವಿಕ್ಕೆಸುಯ್ದರು ವೈರಿಗಳೆಲ್ಲರು ಗತಿಮತಿಗೆಟ್ಟು ಬಹುಕೇಡ ಕೆಟ್ಟುಕಾಯ್ದಳು ತನ್ನನು ನಂಬಿದವರ ಭಯ ಹರಿಯೆಬಹು ಸುಖ ಸುರಿಯೆ4ಹಮ್ಮಿನವರನೆಲ್ಲರ ತೊಳೆದು ಶಾಂತಳಾಗಿ ಬಗಳೆ ತಾ ತೃಪ್ತಳಾಗಿಬ್ರಹ್ಮ ಚಿದಾನಂದ ಭಕ್ತನಾಥನ ಸೇರಿ ಅಮಿತಾನಂದವೇರಿಸುಮ್ಮಗೆ ಪೂಜಿಸಿಕೊಳುತ ಕೇವಲ ಘನದಿ ತಾ ನಿತ್ಯನುದಿನದಿಬ್ರಹ್ಮರಂದ್ರದಿ ವಾಸ ಮಾಡಿಹ ಸುಖಿಯಆ ಬಗಳಾಮುಖಿಯ5
--------------
ಚಿದಾನಂದ ಅವಧೂತರು
ಜಯ ಜಯತು ಹನುಮಂತ ಪವಿತ ಸಿಖ ಸಹಜಾತಜಯತು ಕಪಿರಾಜ ಯುವರಾಜ ಯತಿರಾಜ ಜಯತು ಪ.ಸುರರಿಗುತ್ತಮ ಜಗದಾಭರಣ ಶಿರೋಮಣಿ ಜಯತುಪರಮಅದ್ಭುತಚರಿತ ಸುವಟು ಜಯತುಧರಜೆಶೋಧಕ ನಿಶಾಚರಪುರದಹಕ ಜಯತುಜಯತು ವೈರಾಗಿ ಮಹಭೋಗಿ ಶುಭಯೋಗಿ ಜಯತು 1ಸುರರಿಪುಮಥÀನ ರಾಮಕಾರ್ಯಧುರಂಧರ ಜಯತುಚಿರಪ್ಲವಗ ಭವರೋಗಭೇಷಜ ಜಯತುಕರಿರಕರ್ಣ ದಶಮುಖಾಂಗ ಗಿರಿವರಕುಲಿಶ ಜಯತುಜಯತು ಅಕ್ಷಹರ್ತಾ ಕ್ರತುಕರ್ತಸುಖತೀರ್ಥಜಯತು2ತ್ರಿಕೋಟಿ ಪವನಾಖ್ಯರೂಪ ಪ್ರಕಟಾಪ್ರಕಟ ಜಯತುಅಕಳಂಕಾಮಿತರೂಪ ಮುಖ್ಯೇಶ ಜಯತುಶ್ರೀಕರ ಪ್ರಸನ್ವೆಂಕಟ ರಘುವೀರಾನುಮತ ಮತ ಜಯತುಜಯತು ಪರಸಿದ್ಧ ಬಕಮರ್ದ ಗುರುಮಧ್ವ ಜಯತು 3
--------------
ಪ್ರಸನ್ನವೆಂಕಟದಾಸರು
ಜಯ ಶ್ರೀಧರಾರಮಣ ಜಯ ಕೌಸ್ತುಭಾಭರಣ ಪಜಯ ದುರಿತನಿಧಿತರಣಜಯ ಪದ್ಮಚರಣಾ ಜಯಜಯಾ ಅ.ಪಜಯಪುಂಡರೀಕಾಕ್ಷಜಯ ತ್ರಿಭುವನಾಧ್ಯಕ್ಷಜಯ ಪಾಂಡುಸುತ ಪಕ್ಷ ಜಯ ಜಗದ್ರಕ್ಷಾ ಜಯಜಯಾ 1ಜಯ ಲೋಕಭಯನಾಶ ಜಯ ದಳಿತಭವಪಾಶಜಯ ವೇಂಕಟಾದ್ರೀಶ ಜಯಸುಪ್ರಕಾಶ ಜಯಜಯಾ 2ಜಯ ತುಲಸೀದಳದಾಮಜಯ ಶೇಷಗಿರಿಧಾಮಜಯದೈತ್ಯರಿಪುಭೀಮ ಜಯಕೃಷ್ಣರಾಮಾ ಜಯಜಯಾ 3ಜಯ ಕೋಟಿರವಿಭಾಸ ಜಯ ಸಾತ್ವಿಕೋಲ್ಲಾಸಜಯ ಜಯ ಭವದ್ದಾಸ ಜಯ ಶ್ರೀನಿವಾಸಾ ಜಯ ಜಯಾ4
--------------
ತುಳಸೀರಾಮದಾಸರು
ಜಯಜಯ ಜಲದುರ್ಗೆ ತ್ರಿಜಗನ್ಮಯೆ ಸದ್ಗುಣವರ್ಗೆ ಪ.ದಯಾಸಾಗರೆ ದಾರಿದ್ರ್ಯದುಃಖ ಭವ-ಭಯನಾಶಿನಿ ಮಣಿಮಯಕೃತಭೂಷಿಣಿ ಅ.ಪ.ಗಜವದನನ ಮಾತೆ ಸುಜನ-ವ್ರಜಸತ್ಫಲದಾತೆಕುಜನಭಂಜನಿ ನಿರಂಜನಿ ಶೈಲಾ-ತ್ಮಜೆ ಮಹೋಜೆ ನೀರಜದಳಲೋಚನಿ 1ಇಂದ್ರಾದ್ಯಮರನುತೆ ಪೂರ್ಣಾನಂದೆ ನಂದಜಾತೆಚಂದ್ರಾಸ್ಯೇ ಯೋಗಿವೃಂದವಂದಿತೆ ಮೃ-ಗೇಂದ್ರವಾಹಿನಿ ಮದಾಂಧರಿಪು ಮಥನಿ 2ಅಂಗಜಶತರೂಪೆ ಸದಯಾ-ಪಾಂಗೆ ಸುಪ್ರತಾಪೆಗಂಗಾಧರವಾಮಾಂಗಶೋಭೆ ಸಾ-ರಂಗನೇತ್ರೆ ಶ್ರೀರಂಗಸಹೋದರಿ 3ದಾಸಜನರ ಪೋಷೆ ರವಿಸಂ-ಕಾಶೆ ತ್ರಿಜಗದೀಶೆವಾಸುದೇವನ ಸ್ಮರಣಾಸಕ್ತಿಯ ಕೊಡುಭಾಸುರಜ್ಞಾನಪ್ರಕಾಶವಿಲಾಸಿನಿ 4ಸೌಖ್ಯವು ಭಕ್ತರ್ಗೆ ಸಲಿಸಲುಸೌಖ್ಯವು ನೀ ಭರ್ಗೆಲಕ್ಕುಮಿನಾರಾಯಣನ ಭಗಿನಿ ನಿ-ರ್ದುಃಖಪ್ರದಕಟಿಲಾಖ್ಯಪುರೇಶ್ವರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಜಯತು ಜಯತು ಜಯತು ಶ್ರೀ ಜಗ ಪ್ರೀತೆಜಯತು ಹರಿಹರ ಮಾತೆಜಯತು ಸುರಮುನಿಪೂತೆಭುವನವಿಖ್ಯಾತೆಪಜಡಿ ಜಡಿಜಡಿದುಕೋಪದಲಿ ಮಧು ಕೈಟಭರಿಬ್ಬರನುಘುಡು ಘುಡು ಘುಡಿಸು ಸಹಸ್ರ ಪಂಚಬುದ ಕಾದಿತಡೆ ತಡೆ ತಡೆಯೆ ಸುದರ್ಶನಾಸ್ತ್ರದಿಂದವರ ಶಿರವಕಡಿ ಕಡಿ ಕಡಿದೆ ಬಗಳಾಂಬ ಭಳಿರೆ ಜಗದಾಂಬ1ಒದ ಒದ ಒದರಿ ಭೋ ಎಂದು ಮಹಿಷಾಸುರನ ಬಲವಗದೆ ಗದೆಗದೆಯಿಂದವರ ಬೀಳಗೆಡಹಿಬೆದ ಬೆದ ಬೆದಕಿ ಸುಭಟಾಗ್ರಣಿಗಳೆಂಬುವರನ್ನೆಲ್ಲಸದೆ ಸದೆ ಸದೆದು ನೀಬಿಟ್ಟೆ ಅಖಿಲರಣದಿಟ್ಟೆ2ಭರ ಭರ ಭರದಿ ಬರಲು ಮಹಿಷಾಸುರನೆಂಬುವನತರಿ ತರಿ ತರಿದು ಅವನ ಸಾಹಸವ ಮುರಿದುಗರಗರಗರನೆ ಪಲ್ಗಳನೆ ಕೊರೆದು ಪದದಿಂದಲೊದ್ದೆಸರಿ ಸರಿ ಸರಿಯೆ ಶಾರದಾಂಬ ಭಳಿಕೆ ತ್ರಿಪುರಾಂಬ3ಖಣಿಖಣಿಖಣಿಲು ಖಣಿಲೆಂದುಶುಂಭನಿಶುಂಭರನುದಣಿ ದಣಿ ದಣಿಸಿ ಕಾಳಗದಿ ಬೇಸರಿಸಿ ಬಳಿಕಕಣೆಕಣೆಕಣೆಯಿಂದಲವರ ತಲೆಗಳನೆ ತರಿಸಿದೆ ನಿನಗೆಎಣೆ ಎಣೆ ಎಣೆಯಾರು ದಿನಮಣಿಯೆ ಕಣಿಯೆ4ಇಂತು ರಕ್ಕಸರನೆಲ್ಲ ಮರ್ದನವ ಮಾಡಿಸಂತಸದಿ ದಿವಿಜರಿಗೆ ಅಭಯವಿತ್ತೆಚಿಂತಾಯಕ ಚಿದಾನಂದಾವಧೂತನಿಗೆಪಂಥದಾಸತಿ ಎನಿಪ ಪ್ರೀತೆ ವಿಖ್ಯಾತೆ ಜಯತು ಜಯತು5
--------------
ಚಿದಾನಂದ ಅವಧೂತರು
ಜಯಮಂಗಳಂನಿತ್ಯ ಶುಭಮಂಗಳಂ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಜಯತುಂಗಲಕ್ಷ್ಮೀಪತಿ ನರಸಿಂಹಗೆಪ.ಕಂದರ್ಪನಯ್ಯಗೆ ಕೋಟಿ ಲಾವಣ್ಯಗೆಮಂದರೋದ್ಧಾರ ಮಧುಸೂದನನಿಗೆ ||ಕಂದ ಪ್ರಹ್ಲಾದನನು ಕಾಯ್ದ ದೇವನಿಗೆ ಶ್ರೀ -ಇಂದಿರಾ ರಮಣ ಸರ್ವೋತ್ತಮನಿಗೆ 1ಕರಿರಾಜ ವರದನಿಗೆ ಕರುಣಾ ಸಮುದ್ರನಿಗೆಸರಸಿಜೋದ್ಭವ - ಭವವಂದ್ಯ ಹರಿಗೆ ||ಗಿರಿಯರಸು ಕಾವೇರಿಪುರದ ರಂಗಯ್ಯಗೆಗಿರಿರಾಜಪತಿವಂದ್ಯ ಸುರರ ನಿಧಿಗೆ 2ಅಂಬರೀಷನ ಶಾಪ ಅಪಹರಿಸಿದವನಿಗೆತುಂಬುರ ನಾರದ ಮುನಿವಂದ್ಯಗೆ ||ಕಂಬುಕಂಧರಪುರಂದರ ವಿಠಲರಾಯಗೆಅಂಬುಜನಾಭಗೆ ಅಜನಪಿತಗೆ 3
--------------
ಪುರಂದರದಾಸರು
ಜಯಮಂಗಳಂನಿತ್ಯಶುಭಮಂಗಳಂಪ.ದುರುಳತಮ ವೇದವನು ಕದ್ದು ವಾತಾಳದಲಿಇರಲವನ ಕೊಂದು ವೇದಾವಳಿಗಳಸರಸಿಜೋದ್ಭವಗಿತ್ತು ಸುರಮುನಿಗಳನ್ನೆಲ್ಲಪೊರೆದ ಶ್ರೀ ವತ್ಸಾವತಾರಿ ಹರಿಗೆ 1ಸುರರು ದೈತ್ಯರಕೂಡಿ ಸಿಂಧುವನು ಮಧಿಸುತಿರೆಗಿರಿಮುಳಗಿ ಪಾತಳಕಿಳಿದು ಪೋಗೆಭರದಿಂದ ತಾ ಬಂದು ಗಿರಿಯ ಬೆನ್ನಳಗಾಂತುಸುರರ ಸಂರಕ್ಷಿಸಿದ ಶ್ರೀಕೂರ್ಮಹರಿಗೆ2ಭೂಮಿಯನು ಹಿರಣ್ಯಕ್ಷನೆಂಬ ದೈತ್ಯನು ಸುತ್ತಿಭೀಮ ವಿಕ್ರಮನು ಪಾತಾಳಕೊಯ್ಯುತಾಮರಸ ಸಂಭವನು ಬಿನ್ನೈಸಲವನಳಿದುಭೂಮಿಯನು ತಂದು ಶ್ರೀ ಭೂ ವರಾಹನಿಗೆ 3ಪರಮಭಾಗವತ ಪ್ರಲ್ಹಾದನ ಹಿರಣ್ಯಕನುಪರಿಪರಿಯ ಭಾದೆಯಿಂದಲಿ ಪೀಡಿಸಿಕರುಣಾಳು ಕೋಪದಲಿ ದೈತ್ಯನುದರವ ಬಗೆದಶರಣ ರಕ್ಷಕನಾದ ಶ್ರೀ ನರಸಿಂಹಗೆ 4ಬಲಿಚಕ್ರವರ್ತಿ ಭೂಮಿಯ ಧಾರೆಯರೆಯಲುಇಳೆಯನಳೆದವನ ಸುತಳಕೆ ಕಳುಹಿಸಿದಸಿಲುಕಿಭಕುತಿಗೆ ಮೆಚ್ಚಿ ಬಾಗಿಲವಕಾಯ್ದ ಶ್ರೀಬಲವಂಥಹರಿವಾಮಾನಾವತಾರನಿಗೆ5ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದಕೀರ್ತಿಯನು ಲೋಕದೊಳು ವಿಸ್ತರಿಸಿದಪ್ರಾರ್ಥಿವಾಂತಕ ಬಾಹುಬಲದಿ ಪರಿಪೂರ್ಣಗೆಆರ್ತಬಾಂಧವಗೆಭಾರ್ಗವರಾಮಗೆ6ದಶರಥನ ಮನೆಯುದ್ಭವಿಸಿ ಆ ರಾವಣನದಶಶಿರವ ನೀಡಾಡಿ ಅವನನುಜಗೆವಸುಧಾಧಿಪತ್ಯವನು ಲಂಕೆಯೊಳಗವಗಿತ್ತಅಸಮವಿಕ್ರಮ ರಾಮಚಂದ್ರ ಹರಿಗೆ 7ಯದುಕುಲದಿ ತಾ ಬಂದು ಕೊಂದು ಕಂಸನನಂದುಮುದದಿಂದ ಪಾಂಡವರನುದ್ಧರಿಸಿದಒದೆಗೆ ಕೌರವ ಬಲವ ಸಂಹರಿಸಿ ಪದವಿತ್ತುಮುದದಿ ಮನ್ನಿಸಿದ ಶ್ರೀ ಕೃಷ್ಣ ಹರಿಗೆ 8ತ್ರಿಪುರದ ಮುರಾರಿಗಳ ಸತಿಯರ ಪತಿವ್ರತವಅಪಹರಿಸಿ ದಿವ್ಯ ಮೋಹಕರೂಪದಿತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತಅಪರಮಿತ ಬುದ್ಧಾವತಾರ ಹರಿಗೆ 9ಕರಿಯುಗದ ಕಡಯಲಿ ಖಲನೃಪರನೆಲ್ಲರನುತುಳಸಿ ಕುದುರೆಯ ಖುರದ ಪುಟಗಳಿಂದಸುಲಭದಿಂ ನಡೆಸುತೀ ಕೃತಯುಗದ ಧರ್ಮವನುಒಲಿದಂಥ ಕಲ್ಕಿಯವತಾರ ಹರಿಗೆ 10ಮಂಗಳ ಪದಂಗಳನು ಭಕ್ತಿಯಲಿ ಮೋಹನತರಾಂಗನೆಯರೆಲ್ಲ ರಾಗದಿ ಪಾಡುತಮಂಗಳಾತ್ಮಕಗೆಸಿರಿ ಪುರಂದರವಿಠಲಗೆಅಂಗನೆಯರೆಲ್ಲ ಆರತಿಯೆತ್ತಿರೆ 11
--------------
ಪುರಂದರದಾಸರು
ಜಯಮಂಗಳಂನಿತ್ಯಶುಭಮಂಗಳಂಪ.ದುರುಳತಮ ವೇದವನು ಕದ್ದು ವಾತಾಳದಲಿಇರಲವನ ಕೊಂದು ವೇದಾವಳಿಗಳಸರಸಿಜೋದ್ಭವಗಿತ್ತು ಸುರಮುನಿಗಳನ್ನೆಲ್ಲಪೊರೆದ ಶ್ರೀ ವತ್ಸಾವತಾರಿ ಹರಿಗೆ 1ಸುರರು ದೈತ್ಯರಕೂಡಿ ಸಿಂಧುವನು ಮಧಿಸುತಿರೆಗಿರಿಮುಳಗಿ ಪಾತಳಕಿಳಿದು ಪೋಗೆಭರದಿಂದ ತಾ ಬಂದು ಗಿರಿಯ ಬೆನ್ನಳಗಾಂತುಸುರರ ಸಂರಕ್ಷಿಸಿದ ಶ್ರೀಕೂರ್ಮಹರಿಗೆ2ಭೂಮಿಯನು ಹಿರಣ್ಯಕ್ಷನೆಂಬ ದೈತ್ಯನು ಸುತ್ತಿಭೀಮ ವಿಕ್ರಮನು ಪಾತಾಳಕೊಯ್ಯುತಾಮರಸ ಸಂಭವನು ಬಿನ್ನೈಸಲವನಳಿದುಭೂಮಿಯನು ತಂದು ಶ್ರೀ ಭೂ ವರಾಹನಿಗೆ 3ಪರಮಭಾಗವತ ಪ್ರಲ್ಹಾದನ ಹಿರಣ್ಯಕನುಪರಿಪರಿಯ ಭಾದೆಯಿಂದಲಿ ಪೀಡಿಸಿಕರುಣಾಳು ಕೋಪದಲಿ ದೈತ್ಯನುದರವ ಬಗೆದಶರಣ ರಕ್ಷಕನಾದ ಶ್ರೀ ನರಸಿಂಹಗೆ 4ಬಲಿಚಕ್ರವರ್ತಿ ಭೂಮಿಯ ಧಾರೆಯರೆಯಲುಇಳೆಯನಳೆದವನ ಸುತಳಕೆ ಕಳುಹಿಸಿದಸಿಲುಕಿಭಕುತಿಗೆ ಮೆಚ್ಚಿ ಬಾಗಿಲವಕಾಯ್ದ ಶ್ರೀಬಲವಂಥಹರಿವಾಮಾನಾವತಾರನಿಗೆ5ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದಕೀರ್ತಿಯನು ಲೋಕದೊಳು ವಿಸ್ತರಿಸಿದಪ್ರಾರ್ಥಿವಾಂತಕ ಬಾಹುಬಲದಿ ಪರಿಪೂರ್ಣಗೆಆರ್ತಬಾಂಧವಗೆಭಾರ್ಗವರಾಮಗೆ6ದಶರಥನ ಮನೆಯುದ್ಭವಿಸಿ ಆ ರಾವಣನದಶಶಿರವ ನೀಡಾಡಿ ಅವನನುಜಗೆವಸುಧಾಧಿಪತ್ಯವನು ಲಂಕೆಯೊಳಗವಗಿತ್ತಅಸಮವಿಕ್ರಮ ರಾಮಚಂದ್ರ ಹರಿಗೆ 7ಯದುಕುಲದಿ ತಾ ಬಂದು ಕೊಂದು ಕಂಸನನಂದುಮುದದಿಂದ ಪಾಂಡವರನುದ್ಧರಿಸಿದಒದೆಗೆ ಕೌರವ ಬಲವ ಸಂಹರಿಸಿ ಪದವಿತ್ತುಮುದದಿ ಮನ್ನಿಸಿದ ಶ್ರೀ ಕೃಷ್ಣ ಹರಿಗೆ 8ತ್ರಿಪುರದ ಮುರಾರಿಗಳ ಸತಿಯರ ಪತಿವ್ರತವಅಪಹರಿಸಿ ದಿವ್ಯ ಮೋಹಕರೂಪದಿತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತಅಪರಮಿತ ಬುದ್ಧಾವತಾರ ಹರಿಗೆ 9ಕರಿಯುಗದ ಕಡಯಲಿ ಖಲನೃಪರನೆಲ್ಲರನುತುಳಸಿ ಕುದುರೆಯ ಖುರದ ಪುಟಗಳಿಂದಸುಲಭದಿಂ ನಡೆಸುತೀ ಕೃತಯುಗದ ಧರ್ಮವನುಒಲಿದಂಥ ಕಲ್ಕಿಯವತಾರ ಹರಿಗೆ 10ಮಂಗಳ ಪದಂಗಳನು ಭಕ್ತಿಯಲಿ ಮೋಹನತರಾಂಗನೆಯರೆಲ್ಲ ರಾಗದಿ ಪಾಡುತಮಂಗಳಾತ್ಮಕಗೆಸಿರಿ ಪುರಂದರವಿಠಲಗೆಅಂಗನೆಯರೆಲ್ಲ ಆರತಿಯೆತ್ತಿರೆ 11
--------------
ಪುರಂದರದಾಸರು
ತನುವ ನೀರೊಳಗದ್ದಿ ಫಲವೇನುಮನದಲ್ಲಿ ದೃಢಭಕುತಿ ಇಲ್ಲದ ಮನುಜನು ಪ.ಧಾನ - ಧರ್ಮಗಳನು ಮಾಡುವುದೇ ಸ್ನಾನಜಾÕನ - ತತ್ತ್ವಂಗಳ ತಿಳಿಯುವುದೇ ಸ್ನಾನಹೀನಪಾಪಂಗಳ ಬಿಡುವುದೆ ಸ್ನಾನಧ್ಯಾನದಿ ಮಾಧವನ ನಂಬುವುದೆ ಸ್ನಾನ 1ಗುರುಗಳ ಶ್ರೀಪಾದತೀರ್ಥವೆ ಸ್ನಾನಹಿರಿಯರ ದರುಶನ ಮಾಡುವುದೆ ಸ್ನಾನಕರೆದು ಅನ್ನವನು ಇಕ್ಕುವುದೊಂದು ಸ್ನಾನಸಿರಿಹರಿತರಣ ನಂಬುವುದೊಂದು ಸ್ನಾನ 2ದುಷ್ಟರ ಸಂಗವ ಬಿಡುವುದೊಂದು ಸ್ನಾನಕಷ್ಟಪಾಪಂಗಳನು ಹರಿವುದೆ ಸ್ನಾನಸೃಷ್ಟಿಯೊಳಗೆ ಸಿರಿಪುರಂದರವಿಠಲನಮುಟ್ಟಿ ಭಜಿಸಿ ಪುಣ್ಯ ಪಡೆವುದೇ ಸ್ನಾನ 3
--------------
ಪುರಂದರದಾಸರು
ತನುವಿನೊಳಗೆ ಅನುದಿನವಿದ್ದುಎನಗೊಂದು ಮಾತ ಪೇಳದೆ ಪೋದೆ ಹಂಸಾ ಪ.ಜಾಳಾಂದ್ರವೆಂಬದು ಒಂಬತ್ತು ಬಾಗಿಲ ಮನೆರೂವಾರವೆಂಬ ಒಂಬತ್ತು ಬಾಗಿಲ ದಾಟಿಗಾಳಿ ತಂಪಿನೊಳಿದ್ದು ತಾನು ಹಾರಿ ಪೋಪಾಗಕಾಯಕೆ ಹೇಳದೆ ಹೋಯಿತು ಒಂದು ಮಾತ 1ಹಳ್ಳ ಕೊಳ್ಳಗಳಲಿ ತಂಪಿನ ತಡಿಯಲಿಬಳ್ಳಿ ಕಾಯಿಕಾತು ಫಲವಾಯಿತುಒಳ್ಳೆಯ ತನಿಹಣ್ಣು ಉದುರಿ ತಾ ಪೋಪಾಗಬಳ್ಳಿಗೆ ಹೇಳದೆ ಹೋಯಿತು ಒಂದು ಮಾತ 2ಗಟ್ಟಿ - ಬೆಟ್ಟಗಳಲಿ ಶಾಖೆಯ ತುದಿಯಲಿಕಟ್ಟಿತು ಜೇನನು ಸುಖಕಾಗಿಗಟ್ಟಿ ತುಪ್ಪವನುಂಡು ನೊಣ ಹಾರಿ ಪೋಪಾಗಹಿಪ್ಪೆಗೆ ಹೇಳದೆ ಹೋಯಿತು ಒಂದು ಮಾತ 3ರವಿವಿಸ್ತಾರವ ಹಂಸ ಕೇಳಿದನೈ ನಿನ್ನಪೆಸರ ಪೇಳಲೆನ್ನಳವಲ್ಲರಸ ವಸ್ತುವನುಂಡು ಜ್ಯೋತಿ ತಾ ಪೋಪಾಗಪಣತಿಗೆ ಪೇಳದೆ ಹೋಯಿತು ಒಂದು ಮಾತು 4ಸಿರಿಪುರಂದರ ವಿಠಲನ ಮಾತು ಪುಸಿಯಲ್ಲಹಣೆಯ ಬರೆಹವ ಮೀರಲು ಬಲ್ಲುದೆ ?ಸರಸವನಾಣೆಯ ಮುತ್ತು ಆಗಲಿ ತಾ ಪೋಪಾಗತಿಪ್ಪಿಗೆ ಪೇಳಿದಾಯಿತು ಒಂದು ಮಾತ 5
--------------
ಪುರಂದರದಾಸರು
ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ ತೂಗುವೆಪುಟ್ಟಬಾಲಕರೊಳುಪರಮಶ್ರೇಷ್ಠನಾದನಾಪಮೀನನಾಗಿ ಭಾರಪೊತ್ತು ಬೇರು ಮೆಲ್ಲಿದನಕ್ನೂರರೂಪ ತೋರಿ ಭೂಮಿದಾನ ಬೇಡ್ದನ 1ಭೂಮಿಪರ ಸಂಹರಿಸಿದ ಶ್ರೀರಾಮಚಂದ್ರನಮಾವ ಕಂಸನ ತರಿದ ಬಲರಾಮನನುಜನ 2ಬುದ್ಧರೂಪದಿಂದ ತ್ರಿಪುರರನೊದ್ದ ಧೀರನಮುದ್ದು ತೇಜಿನೇರಿ ಮೆರೆದ ಪದ್ಮನಾಭನ 3ಉಲಿವು ಮಾಡಬೇಡಿರಮ್ಮ ಚಲುವ ಮಲಗುವನಳಿನನಾಭನನ್ನು ಸ್ಮರಿಸಿ ನಲಿದು ಪಾಡುವ 4ಕಮಲಮುಖಿಯರೆಲ್ಲ ಬನ್ನಿ ಕುಣಿದು ಪಾಡುವಕಮಲನಾಭ ವಿಠ್ಠಲನಂಘ್ರಿ ಸ್ಮರಣೆ ಮಾಡುವ 5
--------------
ನಿಡಗುರುಕಿ ಜೀವೂಬಾಯಿ
ತೋಳೆಂಬೆನು ತೋಳೆ ಲಕುಮಿಯಾಲಂಗಿಪ ತೋಳೆಬಾಲರತ್ನ ತೋಳನ್ನಾಡೈ ಬಾಲಕೃಷ್ಣ ನಾಡೆ ಪ.ಕಂದಿ ಕುಂದ್ಯಾಕ್ರಂದಿದ ನಾಗನಬಂದೆತ್ತಿದ ತೋಳೆನೊಂದ ಕಂದನೆಂದು ತೊಡೆಯಲಿಹೊಂದಿಸಿಕೊಂಡ ತೋಳೆ 1ಹರಧನುಜರಿದುಮುರಿದವಿಕ್ರಮಬಿರುದಾಂಕನ ತೋಳೆಮರೆಯದೆ ಕರೆದರರಿದಂಬರವವರಧಿಸ್ಯುಡಿಸಿದ ತೋಳೆ 2ದಾಸವಂಶ ವಿಪೋಷ ರಿಪುಜನನಾಶಕಾರಣ ತೋಳೆಶೇಷಗಿರೀಶ ಪ್ರಸನ್ವೆಂಕಟವಾಸ ರಂಗನ ತೋಳೆ 3
--------------
ಪ್ರಸನ್ನವೆಂಕಟದಾಸರು