ಒಟ್ಟು 6420 ಕಡೆಗಳಲ್ಲಿ , 135 ದಾಸರು , 4140 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪೇಂದ್ರ ಹರಿ ವಿಠಲ ಕೃಪೆಯಲಿಂದಲಿ ಇವನಕಾಪಾಡ ಬೇಕೆಂದು ಪ್ರಾರ್ಥಿಸುವೆ ಹರಿಯೇ ಅ.ಪ. ಹರಿಗುರೂ ಭಕ್ತಿಯುತ | ತರಳ ನಿರುವನು ಹರಿಯೆಸುರರಾಜ ಭೋಗಗಳ | ಕರುಣಿಸುತ ಇವಗೇ |ಒರೆದು ತತ್ವ ಜ್ಞಾನ | ಮರಳಿ ಭಕ್ತ್ಯಭಿವೃದ್ಧಿಕರುಣಿಸುತ ಕಾಪಾಡೊ | ಕರಿವರದ ಹರಿಯೆ 1 ವಿಯದಧಿಪ ಸುತನಿಗೆ | ಭಯವ ಪರಿಹರಗೈದುದಯದಿಂದ ಪೊರೆದಂತೆ | ಕಾಯಬೇಕೋಹಯವೇರಿ ಇಂದ್ರಿಯದ | ಜಯಸೂಚಿ ಸ್ವಪ್ನದಲಿಭಯಕೃತೂ ಭಯನಾಶ | ಅಭಯನೀಯೋ2 ಪಿತೃ ಮಾತೃ ಸೇವೆಯಲಿ | ರತನನ್ನ ಮಾಡುತಲಿಹಿತ ಆಹಿತ ವೆರಡನ್ನು | ಸಮತೆಯಲಿ ಉಂಬಾಮತಿಯನ್ನೆ ಕರುಣಿಸುತ | ಕೃತಕಾರ್ಯನೆಂದೆನಿಸಿಸತತ ತವ ಸಂಸ್ಕøತಿಯ | ಇತ್ತು ಪೊರೆ ಇವನಾ 3 ಕಾಕು ಪಾದ | ಪಂಕಜವ ತೋರೋ 4 ಪಾವಮಾನಿಯ ಪ್ರೀಯ | ಶ್ರೀವರನೆ ಈಶಿಯವಕೋವಿದನ ಗೈಯ್ಯತ್ತ | ಭುವಿಯೊಳಗೆ ಮೆರೆಸೋಗೋವಿದಾಂಪತಿಯೆ ಗುರು | ಗೋವಿಂದ ವಿಠ್ಠಲನೆನೀ ವೊಲಿಯದಿನ್ನಾರು | ಕಾವರನು ಕಾಣೇ 5
--------------
ಗುರುಗೋವಿಂದವಿಠಲರು
ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ ಇಪ್ಪ ಮುಕುತರಿಗೆ ಸಲ್ಲದು ನಿದ್ರೆ ನಿನಗಿಲ್ಲ ಕಲ್ಪಾಂತದಲಿ ನಿತ್ಯವಾದ ವೇದವ ನೆನೆವ ಸುಪ್ರಭಾವನಿಗೇಕೆ ಹೀನಮನುಜರ ಸಾಮ್ಯ ಪ. ಹರಿನಾಲ್ಕು ಮನ್ವಂತ್ರಗಳನು ಹಗಲನು ಮಾಳ್ಪ ವಿಧಿ ನಿನ್ನ ಕುವರನೆ ನಿದ್ರೆಗೊಪ್ಪದೆ ಬಂದ ಇದು ಸರ್ವಸೊಪನ ಅನಿಮಿಷರೆಂಬ ಬಿರುದಿನವ ರಿದಕೆ ಕೋಪಿಸಿ ಬಂದರು ವಿಧಿ ತನ್ನ ಹಗಲ ನಡೆಸುತ ನಿನಗೆ ಈ ತೆರನ ಮದನಪಿತ ತಾಳದೆ ಇಳೆಗೆ ನಡೆತಂದ ಸದುಬುಧರು ತಮ್ಮ ವಿಷಯವ ನೆನೆವ ಜಂತುಗಳು ಇದು ತಾಳೆವೆನುತ ಬಾಗಿಲೊಳು ಬಂದೈದಾರೆ 1 ನಿದ್ರೆಗೈವರ ಹೃದಯದಲ್ಲಿ ಭೂಭೂಯೆಂಬ ಎದ್ದು ಬಹ ಶ್ವಾಸದಭಿಮಾನಿ ಮುಖ್ಯಪ್ರಾಣ ಕ್ಷುದ್ರಗತಿ ತನ್ನಾಳ್ದಗಿದು ಪುಸಿಯೆನುತ ಬಂದ ಮಧ್ವಸದ್ಭಾಷ್ಯಕಾರ ಹೊದ್ದಿ ಕರಗಳ ಮುಗಿದು ಜೀವರಿಗು ನಿನಗು ಪ್ರ- ಬುದ್ಧಜನೆನುತ ಬಂದ ವೇದಾಂತದೇವಿಯರು ನಿರ್ದೋಷ ನೀನೆತ್ತ ನಿದ್ರೆಯೆತ್ತೆನುತ ಪಾದ- ಪದ್ಮಗಳ ಪಿಡಿದು ಪಾಡುವ ಸಾಮಗಳ ಸವಿದು 2 ಅಪ್ರಾಕೃತನೆ ನಿನಗೆ ಈ ಪ್ರಕೃತಿಗುಣಗಳಿಂ- ದಿಪ್ಪ ಯುಕ್ತಿಗಳ ಸುಪ್ತಿಗಳು ಸಲ್ಲವು ದೇವ ಅಪ್ರಬುದ್ಧರ ಮುಂದೆ ಆಡುವಾಟಗಳು ಈ ಸುಪ್ರಬುದ್ಧರ ಸಭೆಯಲಿ ಸರ್ಪತÀಲ್ಪನೆ ತೋರಿದಯ್ಯ ಸಾಕೈನಟನೆ ಸುಪ್ರಭಾತವು ಬಂತು ಹಯವದನ ದಿನದಿನದಿ ತಪ್ಪದೆ ಮಾಡುವಘ್ರ್ಯದಿ ಸತ್ಕರ್ಮಗಳ ಒಪ್ಪುಗೊಳು ಅಪ್ರತಿಮಮಹಿಮ ತ್ರಿವಿಕ್ರಮರಾಯ 3
--------------
ವಾದಿರಾಜ
ಉಯ್ಯಾಲೆ ಉತ್ಸವಗೀತೆ ಜೊ ಜೊ ಜೊ ಜೊ ಶ್ರೀರಂಗನಾಥ ಜೊ ಜೊ ರಂಗನಾಯಕಿರಮಣನೆ ಭೂಮಿಕಾಂತ ಪ. ಮಂಟಪವನು ಶೃಂಗರಿಸಿದರಂದು ಎಂಟುದಿಕ್ಕಿಗೆ ಪುಷ್ಪಗಳಲಂಕರಿಸಿ ವೈ ಕುಂಠವಾಸನ ಉಯ್ಯಾಲೆಮಂಟಪವನ್ನು ಭಂಟರು ಬಂದು ಶೃಂಗಾರ ಮಾಡಿದರು 1 ಆಶ್ವೀಜ ಮಾಸದ ಶುಕ್ಲಪಕ್ಷದಲ್ಲಿ ಆ ತುಲಾ ಮಾಸದ ಆರುದಿವಸದಲ್ಲಿ ವಾರಿಜಮುಖಿಯರ ಒಡಗೊಂಡು ರಂಗ ವೈ ಯ್ಯಾರದಿಂದಲೆ ಬಂದನು ಮಂಟಪಕೆ 2 ಮತ್ತೆ ಮರುದಿನದೊಳಗಚ್ಚುತನಂತ ಕುತ್ತನಿಅಂಗಿ ಕುಲಾವಿ ಧರಿಸಿ ರತ್ನದ ಪಾನುಪಟ್ಟಿಯು ಅರಳೆಲೆ ಕಟ್ಟಿ ಭಕ್ತವತ್ಸಲನಾಡಿದನುಯ್ಯಾಲೆ 3 ಮೂರುದಿವಸದಲಿ ಮುರವೈರಿ ತಾನು ಭಾರಿ ವಜ್ರದ ಮಕರಕಂಠಿಯಾ ಧರಿಸಿ ನೀರಜನೇತ್ರನು ನಿಗಮಗೋಚರನು ವೈ ಯ್ಯಾರದಿಂದಲಿ ಆಡಿದನುಯ್ಯಾಲೆ 4 ನಾಲ್ಕು ದಿವಸದಲಿ ನಂದನಕಂದ ನವ ರತ್ನದ ಮಕರಕಂಠಿಯಧರಿಸಿ ಧರಿಸಿ ನಾಗಶಯನನಾಡಿದನುಯ್ಯಾಲೆ 5 ಐದು ದಿವಸದಲಿ ಅಕ್ರೂರವರದಗೆ ಕರಿ ದಾದ ಕುಲಾವಿ ಕಲ್ಕಿಯ ತುರಾಯಿ ಗಂಡಭೇರುಂಡಪಕ್ಷಿಯ ಪದಕವನಿಟ್ಟು ಪುಂಡರಿಕಾಕ್ಪನಾಡಿದನುಯ್ಯಾಲೆ 6 ಆರು ದಿವಸದಲಿ ಅಂಗಜನಯ್ಯಗೆ ಕೂರೆ ಕುಲಾವಿ ವೈಯಾರದಿಂಧರಿಸಿ ಹಾರ ಮಾಣಿಕ ರತ್ನ ಸರಗಳಳವಡಿಸಿ ನೀರಜನೇತ್ರನಾಡಿದನುಯ್ಯಾಲೆ 7 ಸಪ್ತದಿವಸದಲಿ ರತ್ನ ಮೌಳಿಯ ಧರಿಸಿ ಹಸ್ತದಿ ರತ್ನಹಾರ ಗಂಧವಿರಿಸಿ ಅರ್ತಿಯಿಂದಲೆ ತನ್ನ ಮಿತ್ರರು ಸಹಿತಲೆ ಬತ್ತವಳಿಸಿ ಬಂದ ಭಕ್ತವತ್ಸಲನು 8 ಓರೆಗೊಂಡೆಯ ವೈಯಾರದಿಂ ಧರಿಸಿ ನಾರಿಯರೆಡಬಲದಲಿ ಕುಳ್ಳಿರಿಸಿ ವಾರಿಜನೇತ್ರನು ನಡುವೆ ಕುಳ್ಳಿರಲು ವಾರಾಂಗನೆಯರೆಲ್ಲ ಪಾಡುತಿರಲು 9 ಅಷ್ಟಮ ದಿವಸದಿ ಅರ್ತಿಯಿಂದಲೆ ಕೃಷ್ಣಮೂರುತಿಗೆ ರಾಜಮುಡಿಯನು ಧರಿಸಿ ಹಿಂದಿನ ತೋಳಿಗೆ ಬಂದಿ ತಾಯಿತನಿಟ್ಟು ಇಂದಿರೆ ರಮಣನಾಡಿದನುಯ್ಯಾಲೆ 10 ಎಡಬಲದಲಿ ಭಕ್ತರು ನಿಂತಿರಲು ಪಿಡಿದು ಚಾಮರ ವ್ಯಜನವ ಬೀಸುತಿರಲು ಬೆಡಗಿನಿಮ್ಮ[ಡಕೆ]ಲೆ ಕರ್ಪೂರದ ಗುಳಿಗೆಯ ಎ ನ್ನೊಡೆಯಗೆ ಭಕ್ತರು ಪಿಡಿದು ನಿಂದಿರಲು 11 ದಾಸರಿಸಂದವು ಧಗಧಗನುರಿಯೆ ಸಹ ಸ್ರ ಸೂರ್ಯನಂತೆ ಪದಕಗಳೊಳೆಯೆ ಲೇಸಾದ ರತ್ನದ ಪಾದುಕೆಯನು ಧರಿಸಿ ವಾಸುದೇವನು ಆಡಿದನುಯ್ಯಾಲೆ 12 ಇಂದಿರೆ ರಮಣ ಒಂಭತ್ತು ದಿನದೊಳು ಚಂದ್ರ ಪುಷ್ಕರಣೀಲಿ ತೀರ್ಥವನ್ನಿತ್ತು ಬಂದು ಮಜ್ಜನವನ್ನು ಮಾಡಿ ವೆಂಕಟರಂಗ ಇಂದಿರೆಸಹಿತಲೆ ನಿಂದ ಹರುಷದಲಿ 13
--------------
ಯದುಗಿರಿಯಮ್ಮ
ಉರಗಗಿರಿವಾಸ ವಿಠಲ | ಪೊರೆಯ ಬೇಕಿವಳಾ ಪ ಪರಮಕರುಣಾಮೂರ್ತಿ | ಪ್ರಾರ್ಥಿಸುವೆ ಹರಿಯೇ ಅ.ಪ. ನಿರತ ನಿನ ಸ್ಮರಿಪರಘ | ಪರಿಹರಿಪೆ ನೆಂಬನುಡಿಪರಮ ಸಾರ್ಥಕ ಗೊಳಿಸೊ | ತರಳೇ ಇವಳಲ್ಲಿಕರುಣ ಸಾಗರ ನಿನ್ನ | ಬೇರೊಂದಪೇಕ್ಷಿಸದೆ |ಸರಸದಲಿ ತವರೂಪ | ಚಿಂತೆಯಲ್ಲಿಹಳೋ 1 ಮರುತ ಮತವನೆ ಪೊಂದಿ | ತರತಮದ ಸುಜ್ಞಾನ ಪರಪಂಚಬೇಧಗಳ | ಅರಿತು ಭಜಿಸುವಳೋನೆರೆನಂಬಿ ತವಪಾದ | ಹಾರೈಸುತಿರುತಿಹಳವರ ಸುಸಾಧನವನ್ನೆ | ಅಭಿದೃದ್ಧಿಗೊಳಿಸೊ 2 ಪತಿಸುತರು ಹಿತರಲ್ಲಿ | ವ್ಯಾಪ್ತ ಶ್ರೀಹರಿಯೆಂಬಮತಿಯಿಂದ ಸೇವಿಸುತ | ದ್ರವ್ಯ ವಿಭಮನಾಹತಗೈದು ಕತೃಪ್ವ | ಅಂತಕಾರಕ ಭ್ರಮವಕ್ಷಿತಿರಮಣ ಪರಿಹರಿಸಿ | ಆರ್ತಳುದ್ಧರಿಸೋ3 ಜ್ಞಾನ ಸದ್ವೈರಾಗ್ಯ | ಅನುವಂಶಿಕವಾಗಿನೀನಾಗಿ ಕರುಣಿಸಿಹೆ | ಜ್ಞಾನಾತ್ಮಹರಿಯೆಮೌನಿಕುಲ ಸನ್ಮಾನ್ಯ | ಜ್ಞಾನಿ ಜನಸಂಗವನುನೀನಾಗಿ ಕೊಟ್ಟಿವಳ ಉದ್ಧರಿಸೋ ಹರಿಯೆ 4 ಸರ್ವಜ್ಞ ಸರ್ವೇಶ | ಸರ್ವಾಂತಾರಾತ್ಮಕನೆದರ್ವಿ ಜೀವಿಯ ಹೃದಯ | ಗಹ್ವರದಿ ನಿನ್ನಾಭವ್ಯರೂಪವ ತೋರಿ | ಉದ್ದಾರ ಗೈ ಇವಳಾಶರ್ವವಂದ್ಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಉರುಟಣೆ ಪದ ಜಯ ಜಯ ರಾಮ ಜಯಜಯ ಜಯ ನಮ್ಮ ಜಾನಕೀ ರಮಣಗೇ ಪ ಇಂದಿರಾದೇವಿ ರಮಣಿ ಶರಣ್ಯಮಂದರ ಗಿರಿಧರ ಶರಣ್ಯಕಂದನ ನುಡಿ ಕೇಳಿ ಕಂಬದಿಂದಲಿ ಬಂದಸಿಂಧು ಶಯನ ಸಲಹುವಾದೆನ್ನ 1 ಗುರು ವಿಜಯದಾಸರ ಚರಣಾಸರಸಿರುಹವ ಮನದೊಳಾಗಿರಿಸಿಹರಿ ಸರ್ವೋತ್ತಮ ಮಂಗಳ ಚರಿತೆಯವಿರಚಿಸುವೆನು ಸುಜನರು ಕೇಳಿ 2 ಮುತ್ತೈದೆರೆಲ್ಲಾ ಬೇಗಾದಿ ಬಂದುಅರ್ತಿಯಿಂದಲಿ ಶೃಂಗಾರವಾಗಿಚಿತ್ತಜನಯ್ಯನ ಉರುಟಣೆ ಎನುತಾಲಿಮತ್ತ ಗಮನೇರು ಬಂದರಾಗಾ 3 ಸರಸ್ವತಿ ಭಾರತಿ ಮೊದಲಾದಸರಸಿಜ ಮುಖಿಯರೆಲ್ಲಾರು ನೆರೆದುಸರಸ ಉರುಟಣಿಯ ಮೊಡಬೇಕೆನುತಾಲಿಕರೆಸಿದರಾಗ ಮುತ್ತೈದೆರಾಗ 4 ಹೇಮಮಯದ ಮಂಟಪದೊಳಗೆಪ್ರೇಮದಿಂದಲಿ ಹಾಸಿಕೆ ಹಾಕಿಸೋಮವದನನ ಗುಣವ ಕೊಂಡಾಡುತಕಾಮಿನಿಯರು ಕರೆದಾರು ಹಸೆಗೇ 5 ಕೌಸಲ್ಯಾದೇವಿ ತನಯಾನೆ ಕೇಳುಹರ್ಷದಾಯಕ ರಕ್ಷಕನೇಳುಹಂಸವಾಹನನಯ್ಯನೆ ಹಸೆಗೆ ಏಳೇಳೆಂದುಹಂಸಗಮನೆಯರು ಕರೆದರು ಹಸೆಗೆ 6 ನಿಗಮವ ತಂದಾ ಮಚ್ಚ್ಯಾನೇಳುನಗವ ಬೆನ್ನಿಲಿ ಪೊತ್ತ ಕೂರ್ಮನೇಳುಜಗವನುದ್ಧರಿಸಿದ ವರಹ ಮೂರುತಿ ಏಳುಮೃಗ ನರ ರೂಪ ಹರಿಗೇಳೆಂದಾರು 7 ಸುರನದಿಯ ಪಡೆದ ವಾಮನನೇಳುಪರಶುರಾಮ ಮೂರುತಿ ಏಳುಶರಧಿಯ ದಾಟಿ ಸೀತೆಯ ತಂದಶಿರಿ ರಾಮಕೃಷ್ಣ ಹಸೆಗೇಳೆಂದರು 8 ವ್ರತವನಳಿದ ಬೌದ್ಧನೇಳುಅತಿಬಲ ರಾಹುತನೇಳುಪೃಥಿವಿಗೊಡೆಯ ರಾಮನೇಳೆಂದುಅತಿ ಚಮತ್ಕಾರದಿ ಕರೆದರಾಗ 9 ಇಂತು ಬಗೆಯಾಲಿ ತುತಿಸಿ ಕರೆಯೇಕಂತುಜನಕನು ಹರುಷದಾಲೆದ್ದುಕಾಂತೆ ಕೈ ಪಿಡಿದು ನಡೆ ತರಲಾಗಲುನಿಂತಾರು ನಾರಿಯರೆಲ್ಲರಾಗ 10 ಎತ್ತಿಕೊಂಬುವದು ರಾಘವ ನಿಮ್ಮಪತ್ನಿಯ ನಡೆಸಲಾಗದು ಕೇಳಿನೀ ಪೃಥ್ವೀಶನಾದರೆ ನಮಗೇನೆನುತಾಲಿಸುತ್ತು ಕಟ್ಟಿದರು ವಾಮಾಕ್ಷಿಯರು 11 ಮಂಗಳಾಂಗಿಯನು ಎತ್ತಿಕೊಂಡು ರಾಮಹಿಂಗಾದೆ ದ್ವಾರದಲ್ಲಿಗೆ ಬರಲುಮಂಗಳದೇವಿಯ ಹೆಸರು ಹೇಳೆನುತಾಲಿಅಂಗನೆಯರು ಅಡ್ಡಗಟ್ಟಿದರಾಗಾ 12 ನಾಳೆ ಹೇಳುವೆನು ಇವಳ ಹೆಸರುತಾಳಲಾರೆನು ಭಾರವು ಎನಲುಶ್ರೀ ಲಕ್ಷ್ಮೀದೇವಿಯ ಹೆಸರು ಹೇಳಿದೆ ಬಿಡೆವೆಂದುಬಾಲೆಯರೆಲ್ಲಾರು ಇಟ್ಟರು ಕದವಾ 13 ಪುತ್ಥಳಿ ಗೊಂಬೆ ಹೆಸರು ಹೇಳೆನೆ ರಘು-ನಾಥಾನು ಎಂದಾಳು ಜಾನಕೀ 14 ಅಂಗಜನಯ್ಯಾ ಸತಿಯು ಸೀತೆಯ ಸಹಿತರಂಗು ಮಾಣಿಕದ ಹಾಸಿಕೆಯ ಮೇಲೆಶೃಂಗಾರದಿಂದಾಲಿ ಬಂದು ಕುಳ್ಳಿರಲಾಗಸುರರೆಲ್ಲಾ ಹಿಗ್ಗಿ ಕರೆದರು ಪೂ ಮಳೆಯಾ 15 ಸಾಸಿರ ನಾಮದ ಒಡೆಯ ಬಂದಾಶೇಷಶಯನಾ ಮೂರುತಿ ಬಂದಾಭಾಸುರಾಂಗನೆ ಸೀತೆ ಆಳಿದಾ ರವಿಕುಲಾ-ಧೀಶ ಬಂದಾನು ಎಂದಾರು ಕೇಳೆ 16 ವಾನರಾಧೀಶನೊಡೆಯಾ ಬಂದಾದಾನವಾಂತಕ ರಾಘವ ಬಂದಾ ಶ್ರೀ-ಜಾನಕೀದೇವಿ ಪ್ರಾಣದೊಲ್ಲಭ ಜಗ-ತ್ರಾಣ ಬಂದಾನು ಎಂದಾರು ಕೇಳೆ 17 ಸತ್ಯ ಸಂಕಲ್ಪ ಶ್ರೀ ಹರಿಯು ಬಂದಾಭೃತ್ಯ ಪಾಲಕ ದೊರೆಯು ಬಂದಾಮಿತ್ರೆ ಜಾನಕಿದೇವಿ ಪ್ರಾಣದೊಲ್ಲಭ ಸ-ರ್ವೋತ್ತಮ ಬಂದನೆಂದಾರು ಕೇಳೇ 18 ಸುಗ್ರೀವನ ಪರಿಪಾಲಕ ಬಂದಾ ಕ-ರಿಗ್ರಾಹ ಸಂಹಾರಿಕ ಬಂದಾವ್ಯಾಘ್ರ ಚರ್ಮಾಂಬರ ಸಖ ಸುಂದರವಿಗ್ರಹ ಬಂದಾ ಎಂದಾರು ಕೇಳೇ 19 ಇಂದ್ರನ್ನ ಪರಿಪಾಲಕ ಬಂದಾಚಂದ್ರನ್ನ ಪ್ರಭೆಯಾ ಸೋಲಿಪ ಬಂದಾಇಂದುವದನೆ ಸೀತೆ ಪ್ರಾಣದೊಲ್ಲಭ ರಾಮ-ಚಂದ್ರ ಬಂದನೆಂದಾರು ಕೇಳೇ 20 ಚಂದನ ಗಂಧೆಯರು ಎಲ್ಲಾರು ಕೂಡಿಗಂಧ ಕುಂಕುಮ ಅರಿಷಿಣ ಕಲಿಸಿಇಂದುವದನೆ ಸೀತೆಯ ಕೈ ಒಳಗಿಟ್ಟು ಶ್ರೀರಾಮ-ಚಂದ್ರಗೆ ಹಚ್ಚಿಸಿರೆಂದರಾಗ 21 ವಾರಿಜೋದ್ಭವ ಮೊದಲಾದವರುತಾರತಮ್ಯದಿಂದಾಲಿ ಕುಳಿತುವಾರಿಜಾಮುಖಿ ಸೀತೆ ನುಡಿಯೆಂದೆನುತಾಲಿಸಾರಿದರಾಗ ಸಂದಣಿಯರೆಲ್ಲಾ 22 ವಾಕು ಕೇಳಬೇಕೆಂದುಜಲಜ ಸಂಭವನು ನುಡಿದಾನು ನಗುತಾ 23 ಕಂಜವದನೆ ಜಾನಕೀದೇವಿಅಂಜಲಾಗ ನಿಮ್ಮ ಪುರುಷಾರಿಗೆಕುಂಜರ ವರದಾ ದಾಕ್ಷಿಣ್ಯ ಬ್ಯಾಡೆಂದುಅಂಜಾದೆ ನುಡಿದಾರು ನಸುನಗುತಾ 24 ದೋಷ ವರ್ಜಿತನೇ ಹರಿ ನಿಮ್ಮದೂಷಣೆ ಮಾಡಿದಳೆನ ಬ್ಯಾಡಿಮೋಸದಿಂದಲಿ ಬಲು ದೈತ್ಯರ ಕೊಂದ ಜಗ-ದೀಶ ನಿಮ್ಮ ಮುಖವಾ ತೋರೆಂದಾಳು 25 ದೇವಿ ಹಸ್ತದೊಳು ಅರಿಶಿನವ ಪಿಡಿದುಭಾವಜನಯ್ಯನ ನುಡಿದಾರಾಗದೇವರ ದೇವೋತ್ತಮ ಶಿಖಾಮಣಿದೇವಾ ನಿಮ್ಮಯ ಮುಖವಾ ತೋರೆಂದಾಳು 26 ಭಸ್ಮಾಸುರನ ಕೊಂದಾ ಬಹು ಶೂರನಾರಿಕಂಸನಳಿದಾ ಧೀರ ಅಸುರ ಹಿರಣ್ಯಕನಅಸುವ ಹೀರಿದ ದೊಡ್ಡಅಸುರಾಂತಕ ಮುಖವಾ ತೋರೆಂದಾಳು 27 ವಾಲಿಯ ಸಿಟ್ಟಿನಿಂದಾಲಿ ಕೊಂದುಕಾಲ ಯಮನಾನಸುವ ಯುಕ್ತಿಯಿಂದಾಭಳಿರೆ ಮಧುಕೈಟಭರ ಕೊಂದಾಕಾಲಾಂತಕ ಮುಖವ ತೋರೆಂದಾಳು 28 ಶ್ರೀನಾಥ ದ್ವಾರಕಾಪುರ ಮಾಡಿಆ ನಂದಿ ಗೋಮಂತಾ ಗಿರಿಗೊಲಿದೆವಾನರಾಧೀಶನಾ ಬಲು ಕೊಂಡಾಡುತ್ತದಾನವಾಂತಕಾ ಮುಖವಾ ತೋರೆಂದಾಳು 29 ಅರಿಶಿನವಾನು ಹಚ್ಚಿದಳು ಸೀತೆಅರಸನ ಫಣೆಗೆ ಕುಂಕುಮವಾ ಹಚ್ಚಿಸರಸದಿ ವದನಕ್ಕೆ ಗಂಧವಾ ಹಚ್ಚಲುಸುರರೆಲ್ಲಾ ನಕ್ಕಾರು ಕೈ ಹೊಡೆದು 30 ಪತಿ ಮೊದಲಾಗಿ ಚಪ್ಪಾಳೆನಿಟ್ಟುಹರಸಿದರಾಗ ಜಾನಕಿದೇವಿಶಿರಿಯು ಗೆದ್ದಳು ಅಯೋಧ್ಯದಅರಸು ಸೋತನೆಂದು ನಗುತೆ 31 ಬಾಹುಗಳಿಗೆ ಗಂಧವಾ ಹಚ್ಚಿಸಿಮ್ಯಾಲೆ ಪರಿಮಳಾ ಪೂಸಿದಳುಶ್ರೀ ಹರಿಯ ಚರಣಾವ ಪಾಲಿಸಬೇಕೆನುತಲಿಸರಸಾದಿಂದಾಲಿ ನುಡಿದಾಳು ಜಾನಕೀ 32 ಪಾಷಾಣ ಪೆಣ್ಣಾ ಮಾಡಿದಾ ಚರಣಶೇಷನಾ ಮ್ಯಾಲೆ ಮಲಗಿದ ಚರಣಭಾಸುರಾಂಗಿ ನಿನ್ನ ಲೀಲೆಯಾ ತೋರಿದಾಶೇಷಶಯನ ಚರಣಾ ಪಾಲಿಸೆಂದಾಳು 33 ಆಕಾಶಗಂಗೆಯ ಪಡೆದಾ ಚರಣಾಶಕಟನ ಮುರಿದೊಟ್ಟಿದ ಚರಣಾಭಕುತ ಜನರ ಸೇವೆ ಕೊಂಬ ಚರಣರಕ್ಕಸ ದಲ್ಲಣ ಚರಣಾವ ಪಾಲಿಸೆಂದಾಳು 34 ಅಂಕುಶದೊಜ್ರ ರೇಖೆಯ ಚರಣಾಕುಂಕುಮಾಂಕಿತ ರಾಶಿಯ ಚರಣಾಬಿಂಕದಿಂದ ಕುರುಪತಿಯ ಕೆಡಹಿದ ಬಿರು-ದಾಂಕ ನಿನ್ನಯ ಚರಣಾ ಪಾಲಿಸೆಂದಾಳು 36 ನಸುನಗುತ ಹರಿ ಚರಣ ವೀಕ್ಷಿಸಿಶಶಿಮುಖಿ ಸೀತೆ ಆನಂದದಿಂದಾಮಿಸಣಿಯಂತೊಪ್ಪುವ ಅರಿಶಿನೆಣ್ಣೆಯಾಎಸೆವ ಪಾದಕ್ಕೆ ಹಚ್ಚಿದಳಾಗ 37 ಪಾದ ಪದ್ಮಕ್ಕೆ ಎರಗಿಪಾಲಿಸಬೇಕೆಂದಾಳು ಅಂಗನೆ 38 ಕರಗಳ ಪಿಡಿದೆತ್ತಿದನು ರಾಮಾಹರಸಿದ ಮುತ್ತೈದಾಗೆಂದುಪರಮ ಪತಿವ್ರತೆಯೆನಿಸು ಎನುತಾಲಿಹರಿ ಹರಸೀದಾನು ಹರುಷದಲ್ಲಾಗ 39 ಅಂಡಜವಾಹ ಭಗವಂತನುಹೆಂಡತಿಯ ಮುಖವ ನೋಡೆನುತಲಿಗಂಡು ಮಕ್ಕಳ ಘನವಾಗಿ ಪಡೆಯೆಂದುಪುಂಡರೀಕಾಕ್ಷ ಹರಸಿದನಾಗ 40 ಮಂದಗಮನಿಯ ಕುಳ್ಳಿರಿಸಿಇಂದಿರೇಶ ಮುಂಗುರಳಾ ತಿದ್ದಿಎಂದೆಂದಿಗೆ ಅಗಲದಿರೆಂದು ರಾಮ-ಚಂದ್ರಾನು ಹರಸಿದನಾಗ 41 ಭೂಲೋಕದೊಡೆಯ ರಾಘವರಾಯನಶ್ರೀಲತಾಂಗಿಯ ಕುಳ್ಳಿರಿಸಿದನುಬಾಲಕಿಯರೆಲ್ಲಾರು ಗಲಿಬಿಲಿ ಮಾಡಾದಿರೆಂದುಫಾಲಾಲೋಚಾನು ನುಡಿದನು ನಗುತ 42 ಕಂತುಜನಕ ರಾಘವಾ ನಿಮ್ಮಾಪಂಥ ಸಲ್ಲಾದು ಜಾನಕಿಯೊಡನೆಯಂತ್ರವಾಹಕ ಶ್ರೀರಾಮ ಏಳೇಳೆಂದುಕಾಂತೆಯರೆಲ್ಲರು ನುಡಿದಾರು ನಗುತಾ 43 ಭಾಗೀರಥಿ ಪಾರ್ವತಿದೇವಿಬೇಗದಿ ಅರಿಷಿನ ಕೈಲಿ ಕಲಿಸಿಸಾಗರ ಶಯ್ಯನ ಕೈಯೊಳಗಿಟ್ಟುಬಾಗಿ ಸೀತೆಯ ಮುಖಕೆ ಹಚ್ಚೆಂದಾರು 44 ನಿಂದಲ್ಲಿ ನಿಲ್ಲಾದೆ ಚಂಚಳೆ ಲಕ್ಷ್ಮೀಬಂಧು ಬಳಗವನಗಲಿಸುವ ತರಳೆತಂದೆ ಮಕ್ಕಳೊಳಗೆ ಕದನವ ನಿಡುವಂಥಮಂದಹಾಸೆ ಮುಖವ ತೋರೆಂದಾನು ರಾಮಾ 45 ಅಣ್ಣನ ವಂಚಿಸಿ ಬೇಡಿದವಳೇಮನ್ನೆ ಮನ್ನೆಯರಾ ಕಳಿಸಿದವಳೇಚೆನ್ನಾಗಿ ಮನೆಯೋಳಿದ್ದು ಪೋಗುತಚೆನ್ನಾಯಿತೆ ಮುಖವ ತೋರೆಂದಾನು 46 ಭಾಷೆಯನು ಕೊಟ್ಟು ತಪ್ಪಿಸುವಳೆಕಾಸುವೀಸಾಕೆ ವತ್ತಿ ಬೀಳುವಳೆಹೇಸಿಕಿಲ್ಲದೆ ಕುಲಹೀನನ ಮನೆಯೊಳುವಾಸವಾಗಿರುವಾ ಮುಖವ ತೋರೆಂದಾನು 47 ರಾಮಚಂದ್ರಾನು ಅರಿಶಿನ ಗಂಧವಭೂಮಿಜಳಿಗೆ ಹಚ್ಚಿದನಾಗಾಸಾಮಜಗಮನೆಯ ಹಣೆಗೆ ಕುಂಕುಮ ಹಚ್ಚಿಪ್ರೇಮದಿ ಪರಿಮಳ ಪೂಸಿದಾನು 48 ಕುಸುಮ ದಂಡೆಯ ಮಾಡಿದರುಬಾಸಿಂಗವನು ಕಟ್ಟಿದಾರುಭೂಸುರರೆಲ್ಲರು ಮಂತ್ರಾಕ್ಷತೆ ತಳಿದು ನಿ-ರ್ದೋಷನಾಗೆಂದು ಹರಸಿದರು 49 ಇಂದುಮುಖಿಯರೆಲ್ಲಾರು ಕೂಡಿನಂದದಿ ಜಾನಕಿಗೆ ವೀಳ್ಯವನಿತ್ತುಅಂದಮಾಣಿಕದ ಅಕ್ಷತೆಗಳ ತಳಿದುಮಂದರೋದ್ಧರನ ಹರಿಸಿದರು 50 ದೇವಿಯನ್ನೆತ್ತಿಕೊಂಡು ರಾಮದೇವರ ಮನೆಗೆ ಬಾಹೋದು ಕಂಡುಭಾವುಕರೆಲ್ಲಾ ಹೆಸರು ಪೇಳೆಂದೆನುತದೇವಿ ರಘುನಾಥನೆಂದು ಪೇಳಿದಳಾಗ 51 ಇಂದುಮುಖಿಯರೆಲ್ಲಾರು ಕೂಡಿಇಂದಿರೇಶಾನೆ ಹೆಸರು ಪೇಳೆನಲುಎಂದಾ ಮೇಲೆ ಜಾನಕಿಯೆಂತೆಂದುಮಂದರಧರನು ನುಡಿದನಾಗ 52 ಸತಿಪತಿಯರಿಬ್ಬರು ಕೂಡಿಅತಿಶಯದಲಿ ನಮಸ್ಕರಿಸಿದಾರುಕ್ಷಿತಿಯ ಸುರರಿಗೆ ಲೀಲೆಯ ತೋರಿದ ದೇವಾಪತಿತ ಪಾವನ್ನ ಎನ್ನ ಸಲಹು ಎಂದಾನು 53 ಈ ಕಥೆಯನು ಆದರದಿಂದಾ ಬರೆದು ಹೇ-ಳಿ ಕೇಳುವ ಜನರಾಶ್ರೀಕಾಂತನೊಲಿದು ಕರುಣಿಸುವ ತಾ ಸಿದ್ಧನೇಮದಿಂದಾ ಪಾಡಿರಿ ಜನರು 54 ಕುರುಡಾನು ಈ ಕಥೆಯಾನು ಕೇಳಿದರೆಕರುಣದಿಂದಾಲಿ ಕಂಗಳ ಬರಿಸುವಶರಣವತ್ಸಲ ತನ್ನ ಶರಣರೊಳಿಟ್ಟುಪರಿಪಾಲಿಸುವನು ಶತಸಿದ್ಧ 55 ಸಿರಿ ಒದಗುವದುದಾರ ಇಲ್ಲದ ಬ್ರಹ್ಮಚಾರಿ ತಾ ಕೇಳಲುನಾರಿಯ ಸಹಿತೆ ವಾಸಿಸುವನು 56 ಉದ್ಯೋಗ ಇಲ್ಲದವನು ಕೇಳಿದರೆಸದ್ಯ ಐಶ್ವರ್ಯ ಒದಗುವದು ಸಿದ್ಧಮುದ್ದು ಸುತರಿಲ್ಲದ ಸ್ತ್ರೀಯು ಕೇಳಲುಬುದ್ಧಿವಂತ ಸುತರಾಗುವರು ಸಿದ್ಧ 57 ಮೂರ್ತಿ 58 ಕಮಲ ಧರಿಸಿಪ್ಪಪಾವನ ಮೂರುತಿ ಹೃದಯಾದಲ್ಲಿದೇವಿ ಸಹಿತವಾಗಿ ಕಾವನು ಕರುಣಾದಿನೀವೆಲ್ಲಾರು ತಿಳಿರಿ ಜನರು 59 ಜಾಹ್ನವಿ ಜನಕನುಜಯ ಜಯವೆಂದು ಮಂಗಳವ ಪಾಡೇ 60
--------------
ಮೋಹನದಾಸರು
ಉರುಠಾಣೆ ಮಾಡುವೆ ಅರಸ ನಿನಗೆ ನಾ ಪ ಸ್ಮರಶತ ಸುಂದರ ಸರ್ವಲೋಕೇಶ್ವರ ಚರಣಸೇವೆಕಳ ಕರುಣದಿ | ನೋಡು ದ- ಶುಭ ಚರಿತ ಅ.ಪ ಕರಕಮಲವ ದಯಮಾಡು | ನಿನಗೆ ನಾ ಅರಿಸಿನ ಪೂಸುವೆ ಸರಸಿಜನಯನ 1 ದಿಟ್ಟ ಲಲಾಟವ ಕೊಟ್ಟರೆ | ಕುಂಕುಮ ವಿಟ್ಟು ತಿದ್ದುವೆನು ಸೃಷ್ಟಿಗೊಡೆಯನ 2 ಪರಮ ಪುರುಷ ನಿನ್ನ | ಶಿರಕೊರಳಿಗೆ ನಾ ಧರಿಸಿ ಲೇಪಗೈಯ್ಯುವೆ ಪ್ರಾಣೇಶಾ 3 ಪರುಷೋತ್ತಮ ಭಾಸ್ಕರ ಕುಲತಿಲಕ 4 ಹೇಮದ ತಟ್ಟೆಯ ತಾಂಬೂಲವ | ಗುರು- ರಾಮವಿಠಲ ತವಕದಿ ಸ್ವೀಕರಿಸೈ 5
--------------
ಗುರುರಾಮವಿಠಲ
ಊಟ ಮಾಡಿದೆನು ಬ್ರಹ್ಮಾನಂದದ ಊಟವಆರು ಅರಿಯದ ಯೋಗ್ಯರು ಎಂಬ ಊಟ ಪ ಸದ್ಗುರು ಎಂದೆಂಬ ಅನ್ನಪೂರ್ಣ ತಾನುಶುದ್ಧ ಹೃದಯವೆಂಬ ಹರಿವಾಣದೊಳಗೆಸಿದ್ಧನೆಂಬ ನಾನಾ ಭಕ್ಷ್ಯ ಭೋಜ್ಯ ಪಾಯಸವಸಿದ್ಧ ಗುರುವೇ ತಂದು ಎನ್ನ ಮುಂದಿಡಲು1 ಆತ್ಮ ಎಂಬ ಅನ್ನಕ್ಕೆ ಅಷ್ಟಾಂಗ ತೊವ್ವೆಯನು ಹಾಕಿಸ್ವಾತ್ಮ ಸುಖವೆಂದೆಂಬ ತುಪ್ಪವನೆ ಹೊಯ್ದುಆತ್ಮ ನಾನೆರಡಲ್ಲವೆಂಬ ಸಮರಸವ ಕಲಸಿಎತ್ತಿ ಸವಿದೆನು ನಾನು ಅನುಭವದ ತುತ್ತ 2 ಸಾರಾಮೃತವೆಂಬ ಸಾರನೇ ಸುರಿಯುತತೋರುತಿಹ ಚಿದ್ಬಿಂದು ಹಿಂಡಿಯನೆ ನಂಜಿಮೀರಿದಾನಂದಗುಳ್ಹೂರಿಗೆಯ ಮಂಡಿಗೆಯತೋರುವೆಚ್ಚರು ಮರೆತು ಹಾಯೆನುತಲುಂಡು 3 ಹೇಳಬಾರದ ಪರಮಾತ್ಮ ಪರಮಾನ್ನ ಸುರಿದುಮೇಲೆ ಗುರುದಯದ ಉದಕವನೆ ಕುಡಿದುಮೂಲನಾದವ ಘೋಷ ಸುತ್ತೆಲ್ಲ ಪಸರಿಸಲುಗೋಲ ನಾನಾ ತೇಜ ದೀಪ ಬೆಳಕಿನಲ್ಲಿ 4 ಇಂತೂಟವನೆ ಉಂಡು ನಿಜ ತೃಪ್ತಿಯದಾಗೆಅಂತು ಕಳೆದೆನು ಅವಿದ್ಯದ ಕಡು ಹಸಿವನುಚಿಂತಯಕ ಚಿದಾನಂದ ಅನ್ನ ಪೂರ್ಣನು ಎಣಿಸೆಎಂತು ಹೇಳಲಿ ಮರೆತೆ ಸರ್ವವನು ತೃಪ್ತಿಯಲಿ5
--------------
ಚಿದಾನಂದ ಅವಧೂತರು
ಊಟವನು ಮಾಡು ಬಾ ಉದಧಿಶಯನಾ | ಆಟವನು ಸಾಕುಮಾಡಿ ಅತಿ ವೇಗದಿಂದಲಿ ಪ ಪರಿ | ತೋಯ ಸಂಡಿಗೆ ಪಳದೆ ಹುಳಿ ಸಾರು || ಪಾಯಸ ನೊರೆಹಾಲು ಸಕ್ಕರೆಗೂಡಿಸಿ | ತಾಯಿ ದೇವಕಿಯು ಎಡೆಯ ಮಾಡಿದಳು ತಂದು 1 ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ | ಸಲೆ ಶಾಲ್ಯೋದನ ಕರಿದ ಭಕ್ಷ್ಯಾ || ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ | ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು 2 ಕಸಕಸಿ ಎಳ್ಳು ಲಡ್ಡಿಗೆಯು ಅಪ್ಪಾಲು ಅರೆ-| ರಸ ದೋಸೆ ಬೆಣ್ಣೆ ಸೂಸಲುಕಡಬು || ಹಸನಾಗಿ ಕರಿದ ಹಪ್ಪಳ ಸಂಡಿಗೆ ನಿನ್ನ ಸೊಸೆ ಸರಸ್ವತಿ ಎಡೆ ಮಾಡಿದಳು ತಂದು 3 ಕಾದಾಕಳ ತುಪ್ಪ ಅಳಗಳಗ ತಿಳಿತುಪ್ಪ | ಮಾಧುರ್ಯವಾಗಿದ್ದ ಜೇನು ಘೃತವು || ಕಾದಾರಿದ ಪಾಲು ಕಟ್ಟುಸುರು ಕೆನೆಮೊಸರು | ಭೂದೇವಿ ನಲಿನಲಿದು ಎಡೆ ಮಾಡಿದಳೊ ತಂದು4 ಸರಳಿಗೆ ಗೌಲಿ ಬಟಿವೆ ಪರಡಿ ಸಜ್ಜಿಗೆ | ಸರಸವಾಗಿದ್ದ ಚಿತ್ರಾನ್ನಂಗಳು || ಪರಿ ಫಲ ಪಕ್ವಾನ್ನ ಸೋಪಚಾರದಿ | ಗಿರಿಜಾದಿಗಳು ತಾವು ಎಡೆ ಮಾಡಿದರೊ ತಂದು5 ಖಾರುಳ್ಳ ಪಚ್ಚಡಿ ಹಚ್ಚಗೆ ಹಸಿರು ವರ್ಣದ | ವಾರುಣದಿ ಉಪ್ಪಿನಕಾಯಿ ಕೂಟಾ || ನೀರು ಮಜ್ಜಿಗೆ ನಿಂಬೆÀಹಣ್ಣನೆ ಹಿಂಡಿ | ಭಾರತೀದೇವಿ ಎಡೆಮಾಡಿದಳೊ ತಂದು 6 ಉಂಡ ತರುವಾಯದಲಿ ಹರಿಯೇ ಪೀಠದಿ ಕುಳಿತು | ಕೊಂಡು ಬಂದ ಗಂಧ ತಾಂಬೂಲವ || ಸಿರಿ ವಿಜಯವಿಠ್ಠಲ | ಕೊಂಡನಾದ ಪುರಂದರಗೆ ಒಲಿದು ಒಲಿದು 7
--------------
ವಿಜಯದಾಸ
ಊರ ದೇವರ ಮಾಡಿ ಊರ ಶಾಂತಿಯಾಗಲಿಊರದೇವತೆ ಗುರು ಚಿದಾನಂದ ತಾನೆನುತ ಪ ಶುದ್ಧ ಸುನಾದವೆನಿಸುವ ಡಂಗುರವ ಸಾರಿಸಾಧು ಶಮೆ ದಮೆ ಎಂಬ ಮೊಳಕೆ ಹೊಯ್ದುವೇದಾಂತವೆಂದೆಂಬ ಹಂದರವನೆ ಹಾಕಿವಾದಾತೀತಾತ್ಮದೇವಿಯ ಎದುರುಗೊಂಡು 1 ಹಲವು ನಾದಗಳೆಂಬ ವಾದ್ಯಗಳನೇ ನುಡಿಸಿಬೆಳಗುತಿಹ ತೇಜಃಪುಂಜಗಳ ಮುಟ್ಟಿಸಿಯೆಹೊಳೆಯುತಿಹ ನಾನಾ ಕಳೆ ಬರಿಸು ಬತ್ತಿಯ ಹಚ್ಚಿಬಳಿಕ ಚಿತ್ಕಳೆ ಎಂಬ ದೇವಿಯನು ಮೆರೆಸುತ್ತ 2 ಅಡ್ಡಾಡುವ ಮನವ ಹಿಡಿ ತಂದು ಕಟ್ಟಿದೊಡ್ಡ ಅಹಂಕಾರದ ಕೋಣವನು ಕಡಿಸಿಹೆಡ್ಡ ಕಾಮವದೆಂಬ ಕುರಿಯ ತಲೆ ಕಡಿಸಿಗೊಡ್ಡು ಗುಣಗಳು ಎಂಬ ಚೆರುಗ ಚೆಲ್ಲಿಸುತ್ತ3 ಸಿದ್ಧ ತಾನೆಂದೆಂಬ ಅಡುಗೆಯದು ಆಗಲುಸಿದ್ಧ ಪುರುಷರು ಎಲ್ಲ ಉಣಲು ಕುಳ್ಳಿರೆಶುದ್ಧ ತೃಪ್ತಿಯು ಎಂಬ ಔತಣವು ಮುಗಿಯಲುಅದ್ದಿಸಿರಿ ಆನಂದದಲಿ ಊರ ಜನರ 4 ಊರೆಂಬುದು ನಿಮ್ಮ ದೇಹವೇ ತಿಳಿಯಿರೋಊರ ದೇವತೆ ನೀನು ನಿಜವನರಿಯೋಊರ ದೇವರ ಮಾಡಿ ಆನಂದಪಡೆಯೋಇದಕೆ ತಾ ಸಾಕ್ಷಿ ಚಿದಾನಂದನರಿಯೋ 5
--------------
ಚಿದಾನಂದ ಅವಧೂತರು
ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ- ಸಿಂಧುಶಯನ ವನದಿಂದ ಇಂದಿರೇಶ ಮುದದಿಂದ ಮೌನಿಮುನಿ- ವೃಂದದಿಂದ ಸ್ತುತಿವಂದನೆಗೊಳ್ಳುತ1 ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು ಕಾಸಿಗೆ ಮಾರುವ ರೊಟ್ಟಿ ದಾಸರ ಕೂಡಿ ಜಗಜಟ್ಟಿ ಬಹು ದೇಶವ ತಿರುಗುವ ಶೆಟ್ಟಿ ದೂಷಣಾರಿ ಪಾದಾಶ್ರಿತಜನರಭಿ- ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ2 ದೊಡ್ಡವನೈ ಮಹಾರಾಯ ಹಳೆ ದುಡ್ಡಿಗೆ ನೀಡುವ ಕೈಯ ಅಡ್ಡಿಗೈದರೆ ಬಿಡನಯ್ಯ ಇವ ಬಡ್ಡಿಕೇಳುವ ತಿಮ್ಮಯ್ಯ ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ3 ತಿರುಪತಿಗೆ ಪ್ರತಿಯಾಗಿ ಪಡು ತಿರುಪತಿಯೆಂದಿಹ ಯೋಗಿ ಮೆರಸುವನೈ ಸ್ಥಿರವಾಗಿ ಶ್ರೀ ವರ ವೆಂಕಟ ಲೇಸಾಗಿ ಶರಣರು ಏನೆಂದು ಸಂತೋಷಿಪ ಕರುಣಾಕರ ಚಪ್ಪರ ಶ್ರೀನಿವಾಸನು4 ಈ ಪರಿಯಲಿ ಒಲಿದಿಪ್ಪಾ ಬಹು ಕಾಪಟ್ಯರಿಗೆ ತಾನೊಪ್ಪನಮ್ಮ ಗೋಪಾಲಕ ಜಗದಪ್ಪ ಶ್ರೀಪರಮಾತ್ಮ ನಾನಾಪರಿ ವಿಭವದಿ ಗೋಪುರದಲಿ ತಾ ವ್ಯಾಪಿಸಿ ನಿಂದನು5 ರಂಭೆ : ನಾರೀವರ್ಯಾರಮ್ಮ ನೋಡಲು ಸಾರಹೃದಯರಮ್ಮ ತೋರಣಛತ್ರಚಾಮರ ಬಿರುದುಗಳಿಂದ ಭೂರಿ ವಿಭವದಿಂದ ಸಾರಿಬರುವರಮ್ಮ1 ಕರದಿ ಕಲಶವಿಹುದು ಶಾಲಿನ ನಿರಿ ಮುಂದಿರುತಿಹುದು ಬೆರಳಿನೊಳುಂಗುರು ವರ ದ್ವಾದಶನಾಮ ಧರಿಸಿ ಸಮಂತ್ರೋಚ್ಚರಿಸುತ ಬರುವರು2 ಮಂದಿಗಳೊಡ್ಡಿನಲಿ ಬರುವರು ಮಂದಸ್ಮಿತದಲಿ ಚಂದದಿ ಜನಗಳ ಸಂದಣಿ ಮಧ್ಯದಿ ಇಂದಿರೆಯರಸನ ಧ್ಯಾನದಿ ಬರುವರು3 ಹಿಂಗದೆ ಬರುತಿಲ್ಲಿ ಮನಸಿನ ಇಂಗಿತವರಿತಿಲ್ಲಿ ಬಂಗಾರದ ಭೂಷಣಸಮುದಾಯದಿ ಅಂಗಜಪಿತನಿಗೆ ಶೃಂಗಾರಗೈವರು4 ವಿಪ್ರೋತ್ತಮರ ಗುಣ- ಕೆಂತು ಸೈರಣೆಯಾಂತು ನಾನಿರಲಿ ಚಿಂತಿತಾರ್ಥವನೀವ ಲಕ್ಷ್ಮೀ- ಸಂತಸದಿ ಪೂಜಾದಿ ಸತತಿ- ಯಾಂತಕೊಂಡಿಹೇಕಾಂತಭಕ್ತರು1 ಕೀರ್ತಿಯನು ಧರಿಸಿ ಮ- ತಾವೆಂದು ಧರ್ಮವನು ಪಾಲಿಸಿ ಸಿಂಧುಶಯನನ ಚಾರುಚರಣ- ದ್ವಂದ್ವಕಾನತರಾಗಿ ಲೋಕದಿ ವಂದ್ಯರೆನಿಸಿಯಾನಂದ ಪರರಿವ- ರೆಂದು ಶ್ರೀಗೋವಿಂದ ನಡೆಸುವ2 ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ ವಾದಗೈವ ಕುವಾದಿಗಳ ಮನ- ಭೇದಿಸುತ ನಿಜವಾದ ಮಾರ್ಗವ ಸಾಧುಗಳಿಂದ ದೃಢವಾದ ಮಾತಿದು3 ಮೇಗರೆಡಂಭಮಾತಲ್ಲ ಧನಿಯ ಕು- ಗೊಂಬರೆ ಎಲ್ಲ ಸಂತಸ ಸಂಭ್ರಮದಿ ವೇದ್ಯಾಂಬುನಿಧಿಯಲಿ ತುಂಬಿರುವರೀ ಕುಂಭಿನಿಯೊಳು ಜ- ಸಂಬಡುವುದು ವಾಸಿಷ್ಠಗೋತ್ರಜ- ರೆಂಬ ವಿಪ್ರಕದಂಬಪೂಜ್ಯರು4 ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1 ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ ಮಹಾಲೀಲೆ2 ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ ಲೀಲೆಯ ನಾನರಿಯೆ3 ಫಾಲೇಂದು ಕುಂದದ ವರ್ಣಕೋಲು ಚಾಮರಗಳ ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು4 ಚಂಡವೈಶ್ವಾನರನ ತೇಜಾಖಂಡದಿಂದೋರಂತೆ ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ5 ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ ಆದಿನಾರಾಯಣ ಮದುಸೂದನನೆ ಮುದದಿ6 ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು ನಾದಿನಿ ಕೇಳಿದರ ಪರಿಯನೀ ದಯದಿಂದುಸುರು7 ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ- ದೇವನಾಗಮನವೆಲ್ಲನೂ ದೀವಟಿಗೆ ಸೇವೆಯೆಂದು ಪೇಳುವರು ಭಾವುಕರು ಮನದೊಳಂದು1 ಸಾಯನವನು ಸುರಿದು ಸಾವಿರ ಸಾಲದು ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ3 ದೈತ್ಯವಿನಾಶನ ಜಯಜಯ ಜಾಹ್ನವಿತಾತ ಜಯಜಯ ಜಗದಾತ ಆಶ್ರಿತ ಸುರಭೂಜ ತೋರುತ ಒಲಿದು4 * * * ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ- ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ1 ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2 ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ- ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ3 ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ- ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ4 ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5 ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ- ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ6 ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ- ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ7 ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ- ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ8 ನಿತ್ಯ ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ9 ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ10 ನೋಡೆ ತಂಗಿ ನಮ್ಮ ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ11 ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ- ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12
--------------
ತುಪಾಕಿ ವೆಂಕಟರಮಣಾಚಾರ್ಯ
ಋಗ್ವೇದ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ ಋಗ್ವಿನುತ ನೀನಾಗಿ | ಈಕೆಯನು ಪೊರೆಯೋ ಅ.ಪ. ವೇದಾಧಿಕಾರವನು | ನೀ ದಯದಿ ತ್ಯಜಿಸದೆಮೋದದಿಂ ತೋರಿ | ಋಗ್ವೇದ ವಾಚಿಸಿದೇ |ಮೋದ ಮುನಿ ಮತದಲ್ಲಿ | ಸಾಧಿಸಿವಳಲಿ ದೀಕ್ಷೆಭೇದ ಪಂಚಕ ತಿಳಿಸಿ | ಉದ್ಧರಿಸೊ ಇವಳಾ 1 ಹರಿದಾಸ್ಯ ಕಷ್ಟವೆನೆ | ಹಿರಿಯರ ಮತವಿಹುದುತರಳೆ ಆದ ಕಾಂಕ್ಷಿಪಳು | ಪೂರ್ವ ಪುಣ್ಯದಲೀಮುರವೈರಿ ನೀನಾಗಿ ಕರುಣಿಸುತ ತವದಾಸ್ಯಪರಿಹರಿಸು ಭವನೋವ | ಕಾರುಣ್ಯಮೂರ್ತೇ 2 ಭವ | ಮೋಚನವ ಗೈಯ್ಯೋ 3 ಲೌಕಿಕವು ವೈದಿಕವು | ಸಕಲವರ್ಣಾತ್ಮಕನೆವಾಕು ಸಕಲವು ತವ ಆ | ಲೌಕಿಕದ ಮಹಿಮಾವಾಕಾಗಿ ವರ್ತಿಸುತ | ಬೇಕಾದ ವರ ನೀಡಿನೋಕ ನೀಯನೆ ಕಾಯೊ | ಈಕೆಯನು ಹರಿಯೇ 4 ಭಾವಿ ಮರುತರ ಪ್ರೀಯ | ಆವಾವ ಕಾಲಕ್ಕುದೇವ ತವ ಸ್ಮøತಿಯಿತ್ತು | ಕಾವುದೀಕೆಯನೂನೋವು ಸುಖಗಳ ಸಮತೆ | ಭಾವದಲಿ ಅನುಭವಿಪಭಾವ ಕೊಡುವುದು ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಋಣವೆಂಬ ಪೈಶಾಚ ಋಜುವಾಗಲೀಸದುನೆನ'ಗೆ 'ಘ್ನವ ನಿಲಿಸುವದು ಪಮನದೊಳು ನೆಲೆಗೊಂಡು ಮಂಕುಮರುಳ ಮಾಡಿಕಣ್ಣು ಗೆಡಿಪುದ ನೋಡಿ ಕರುಣಬಾರದೆ ರಾಮಾ ಅ.ಪಪತಿತ ಪಾವನನೆಂಬ ಬಿರುದುಳ್ಳ ನಿನ್ನಂಘ್ರಿಸತಿಯಹಲ್ಯೆಯ ಸೋಕಿ ಸಲ'ದುದೂಸತತ ಸ್ಮರಿಸಲು ಮಾರೀಚನಂ ಭಯದಿಂದಗತಿಗೊಟ್ಟು ಸಲಹಲೈದಿದವು ನಿನ್ನಡಿಗಳೂ 1ಮನು ಮುನಿಗಳು ಸ್ಮøತಿ ಮಾರ್ಗದಿ ನಿಷ್ಕøತಿಯನು ಪೇಳಲಿಲ್ಲ'ೀ ಋಣ ದೋಷಕೆಪುನಹ ವೃದ್ಧಿಯು ಸಹ ಪೂರೈಸಿಕೊಳಲದನುಭವ ಬಿಡದಾವ ಜನ್ಮಕ್ಕೆಂಬುದ ಕೇಳಿ2ಸಾಕು ಸಾಕಾುತು ಸಂಸಾರ ಕೋಟಲೆಬೇಕಾುತು ನಿನ್ನ ಭಜಿಸುವದೂಈ ಕಷ್ಟವನು ಬಿಡಿಸೈ ಕರುಣಾಬ್ಧಿಯೆನೀಕರಿಸುವರಿಂದ ಆನಂದ ದೊರಕಿತು 3ಸಂತುಷ್ಟ ಚಿತ್ತನಾಗಿರಬೇಕು 'ಪ್ರನುಚಿಂತಿಸಬಾರದೆಂಬೀ ಪಥವಾಎಂತಾದರು ಹೊಂದಲೀಸದಲೆವ ಋಣಕಂತವಾಗುವ ಹಾಗೆ ಧನವ ಪಾಲಿಸಬೇಕು 4ಕೊಟ್ಟವರೊಡವೆಯ ಕೊಡುವಂತೆ ದ್ರವ್ಯವುಪುಟ್ಟುವಂದದಿ ಕೃಪೆಮಾಡೆನಗೆಪಟ್ಟಾಭಿರಾಮ ನಿನ್ನವನೆಂದ ಬಳಿಕಿನ್ನುಕೆಟ್ಟನೆಂಬೀ ಮಾತ ಕೇಳದಂದದಿ ಮಾಡಿ 5ಗುರು ವಾಸುದೇವಾರ್ಯನಾಗಿ ಚಿಕನಾಗಪುರದಿ ನೆಲಸಿ ತಿಮ್ಮದಾಸನನೂಪೊರೆದನೆಂಬೀ ಮಾತು ಹರಿದಿದೆ ಜಗದೀ ತಪ್ಪಿರಲಿ ನೆಪ್ಪಿರಲಿ ನೀ ಸಲಹು ವೆಂಕಟರಾಯಾ 6
--------------
ತಿಮ್ಮಪ್ಪದಾಸರು
ಎ. ಬಿಡಿ ಹಾಡುಗಳು ವಿತ್ತ ವಿಚಾರ ವಿತ್ತವೇ ಸರ್ವ ಪ್ರಮತ್ತಮರ್ಥದಾ ಪ ವಿತ್ತವಿಲ್ಲದಿರೆ ಭಿತ್ತಿವರ ಬೊಂಬೆಯಂತೆ ಅ.ಪ. ವಿತ್ತವಿರಲು ಪ್ರಾಥರುತ್ಥಾಯ ಸ್ನಾನವುವಿತ್ತದಿಂದಲಿ ಮಾಗಳಾರ್ಥಿಗಳುವಿತ್ತದಿಂದಲಿ ಪತ್ನಿ ಪುತ್ರರು ಸ್ವಾಧೀನಾವಿತ್ತ ಹೀನಾಮೂಲ ವಸ್ತಿ ಮಾಡುವನು 1 ವಿತ್ತದಿಂದಲಿ ಪುರಾಣೋಕ್ತ ವ್ರತಗಳಗ್ನಿಹೋತ್ರಶ್ವಮೇಧಾನ್ನ ಸತ್ರಗಳುವಿತ್ತದಿಂದಲಿ ಮಧ್ಯಾನ್ಹೊತ್ತಿಲೀ ಬಹುಜನಾತಿಥ್ಯವು ಹರಿಪೂಜೆ ನರ್ತನಾ ತತಿಗಳು 2 ವಿತ್ತದೊಳಗೆ ಹರಿಪತ್ನಿಯೂ ಕುಣಿಯುವಳುವಿತ್ತದಿಂದಲಿ ಮಹಾಪತ್ತು ನಾಶಾವಿತ್ತದಿಂದಲಿ ಸುವಿರಕ್ತಿ ಭಕ್ತಿ ಜ್ಞಪ್ತಿವಿತ್ತಮಿಂದಿರೇಶ ನೊಕ್ತ್ರ ತೋರಿಸುವನು 3
--------------
ಇಂದಿರೇಶರು
ಎಚ್ಚರಾದರು ದೇವಗಣರಿಂದು ನಮ್ಮ ಲಕ್ಷ್ಮೀರಮಣ ಕೃಷ್ಣ ರಥವನೇರುವನೆಂದು ಪ. ಶಿಂಶುಮಾರ ಚಕ್ರದಂಶಮಕರ ತಿ- ಗ್ಮಾಂಶು ಸಂಕ್ರಮಿಸುವ ಸಮಯದಲಿ ಕಂಸಮರ್ದನ ಯದು ವಂಶಾಬ್ಧಿ ಚಂದ್ರ- ವಿಪಾಂಗಗಮನನಾಗಿ ವೀಧಿಗೆ ಬಹನೆಂದು 1 ಕಂದನ ಸಂಭ್ರಮ ತಂದೆಗೆ ಸುಖಕರ- ವೆಂದು ಪೇಳುವ ಮಾತ ನಿಜವ ದೋರಿ ಮಂದರಧರ ಮನ್ಮಥನ ಕೇತು ಬೆಳಗುವಾ- ನಂದದಿ ರಥವೇರುತ್ತಿಂದು ಬರುವನೆಂದು 2 ಮೋಕ್ಷದಾಯಕ ಕಮಲಾಕ್ಷ ಕೃಷ್ಣನ ಸ- ತ್ಕಟಾಕ್ಷ ಸಂಪಾದಿಪಪೇಕ್ಷೆಯಲಿ ತ್ರ್ಯಕ್ಷಾಧ್ಯಕ್ಷಲೋಕಾಧ್ಯಕ್ಷರೆಲ್ಲರು ಕೂಡಿ ಪಕ್ಷಿವಾಹನನನ್ನು ಈಕ್ಷಿಪ ತವಕದಿ 3 ಪೃಥೆಯ ಕುಮಾರನ ರಥವ ನಡಸುತತಿ- ರಥರನು ಗೆಲಿಸಿ ಸಾಮ್ರಾಜ್ಯವಿತ್ತ ಕಥೆಯ ಕೇಳ್ಪರ ಮನೋರಥಗಳ ಕೊಡುವ ಮ- ನ್ಮಥನ ಜನಕ ಮುಕ್ತಿ ಪಥವ ತೋರುವನೆಂದು 4 ಸಿದ್ಧಿ ವಿಘ್ನಮುಖ ದೋಷಭೇಷಜ ಭಕ್ತಿ ಸಿದ್ಧ ಜಪರಿಗೆ ಸಿದ್ಧಿಸುವನೆಂದು ಮಧ್ವಮುನಿಯು ತಂದಿಲ್ಲಿರಿಸಿ ಪೂಜಿಸಿದಂಥ ಸಿದ್ಧಾಂತವೇದ್ಯನಿರುದ್ಧನಿಲ್ಲಿಹನೆಂದು 5 ಧಾರುಣಿಯೊಳಗಿನ ವಿಷ್ಣುಭಕ್ತರ ಸಂಘ ಸೇರಿ ಸಂತೋಷದಿ ಜಯವೆನಲು ಪಾರಿವ್ರಾಜರು ಕೂಡಿ ಪರತತ್ವ ನುಡಿಯೆ ಸ- ರ್ಪಾರಿಯನೇರಿ ಸಮೀರೇಡ್ಯಬಹನೆಂದು 6 ಮಾಯಿಜನರ ಮುರಿದೊತ್ತುತ ತತ್ವರ- ಸಾಯನ ಸುಧೆಯ ಸಜ್ಜನರಿಗಿತ್ತು ವಾಯುಮುನಿಯು ಪ್ರತಿಷ್ಠೆಯ ಗೈದ ಪುರುಷಾರ್ಥ ದಾಯಕ ವೆಂಕಟರಾಯನೀತನೆಯೆಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ಎಚ್ಚರಿಕೆ ಎಚ್ಚರಿಕೆ ಎಲೋ ದೇವ | ಎಚ್ಚರಿಕೆ ಎಚ್ಚರಿಕೆ | ಅಚ್ಚ ಕಲ್ಯಾಣ ಮೂರುತಿ ತಿರುವೆಂಗಳಾ ಪ ಅಜ ದ್ವಿಜಗಜ ಅಜಾಮಿಳ ಪರಿಪಾಲನೆಯಾ | ದ್ವಿಜ ರಾಜಾಂಗಾ ಗಂಗಜ ಭಕ್ತವರದನೆಯಾ | ಗಜ ಕುಜ ದನುಜ ಭೂ ಭುಜರ ಸಂಹಾರನೆಯಾ | ಪಂಕಜ ಹೃದಯಾರ್ಕನೆಯಾ1 ಪರಮೇಷ್ಠಿ ವಂದನೆಯಾ | ಶರಧಿ ತಾರಾ ಕರುಗಳ ಕಾಯಿದನೇಯಾ | ಎರಡೇಳು ಲೋಕ ಪೊರೆವಾ ಭಾರಣ ಹರಿಯಾ | ಶರಣು ಹೊಕ್ಕೆನು ಎನ್ನ ಮೊರೆ ವಿಚಾರಿಸೊಯಾ 2 ಜಯ ಜಯಾ ಚಿತ್ತಾವಾಧಾರು ಪರಾಕ್ರಮಯಾ | ಭಯ ನಿವಾರಣ ನಿಜ ಭಂಟರಿಗೆ ಬಂಟಯಾ | ನಯ ಮೂರುತಿ ನಮ್ಮ ವಿಜಯವಿಠ್ಠಲರೇಯಾ ಯಾ | ತ್ರಿಯಗುಣ ವಿರಹಿತ ಶೇಷಗಿರಿವಾಸಯಾ 3
--------------
ವಿಜಯದಾಸ