ಒಟ್ಟು 63 ಕಡೆಗಳಲ್ಲಿ , 25 ದಾಸರು , 48 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಸುದೇವನ ಭಜಿಸೊ ಪ ವೇಷಹಾಕಿದರೇನು ವೇದಾರ್ಥ ತಿಳಿದೀತೆ ಅ.ಪ ಉದರಂಭರಣಕ್ಕಾಗಿ ಪದ ಪದ್ಯಗಳ ಹೇಳಿ ತುದಿಮೊದಲಿಲ್ಲದ ದೋಷಕೆ ಗುರಿಯಾಗಿ ಸದಮಲನೆಂದರೆ ಸರ್ವರು ನಗರೇನೊ 1 ದುರಿತ ಪರಿಹರವೆಂದು ಆಡುತಲಿದೆ ಶೃತಿಯು ಕರಣತ್ರಯವು ಶುದ್ಧಿಯಿರ ಬೇಕದಕೆ ಮುಖ್ಯ ಕಾರಣ ಬಾಯಿಂದ ನುಡಿದರೇನಾಯಿತು2 ಪಂಚಸದ್ವರ್ಣಾವು ಪರಮಾತ್ಮನ ನಾಮ ವಂಚನೆ ಇದರೊಳಿಲ್ಲಾ ಸರ್ವರು ನುಡಿವರು ಗರ್ವವೇತಕೆ ನಿನಗೆ 3 ಕಾಲಕಾಲಕೆ ಹರಿಯೋಲಗವ ಮಾಡಿ ವೇಳೆಗೆ ದೊರೆತದ್ದು ಭುಂಜಿಸುತಲಿ ಲಕ್ಷ್ಮೀ- ಲೋಲನ ಕಂಡ ಕಂಡಲಿ ಸ್ಮರಣೆಗೈದೂ 4 ಹೊರಗೆ ಡಂಭವ ಬಿಡು ಒಳಗೆ ನಿಶ್ಚಲನಾಗು ಪರರಿಗೆ ಹಿತವ ತೋರು ಗುರುರಾಮವಿಠಲನು ಕರುಣದಿ ಕೈಪಿಡಿದು ಪರಮಸೌಖ್ಯವನೀವ ನಿಜಭಕ್ತನಾದರೆ 5
--------------
ಗುರುರಾಮವಿಠಲ
ಶ್ರೀ ಕರಗ್ರಹ ಎನ್ನ ಸಾಕಲಾರದÉ ಹೀಗೆ ನೂಕಿ ಬಿಡುವುದು ನ್ಯಾಯವೆ ಪ. ಬೇಕೆಂದು ನಿನ್ನ ಪದ ನಾ ಕಾಣ ಬಂದರೆ ಈ ಕಪಟತನವು ಸರಿಯೆ ಹರಿಯೆ ಅ.ಪ. ಎಲ್ಲರನು ಸಲಹಿದಂತೆನ್ನ ನೀ ಸಲಹೆನ ನಿಲ್ಲದೆ ನೀರ ಪೊಗುವೆ ಸೊಲ್ಲು ಸೊಲ್ಲಿಗೆ ನಿನ್ನ ಸ್ತುತಿಪೆನೊ ಬಾರೆನಲು ಕಲ್ಲಡೀ ಅವಿತುಕೊಳುವೆ ಖುಲ್ಲನಲ್ಲವೊ ನಾನು ತಲ್ಲಣಿಪೆ ಪೊರೆ ಎನಲು ಹಲ್ಲು ಕೋರೆಯ ತೋರುವೆ ಎಲ್ಲಿ ಹೋಗಲೊ ನಾನು ಇಲ್ಲವೊ ಇನ್ನೊಬ್ಬ ಸೊಲ್ಲು ಕೇಳುವರನರಿಯೆ | ದೊರೆಯೆ 1 ತಡಬಡಿಸುತಿಹೆನೆನ್ನ ಪಿಡಿದು ಕೈ ಸಲಹೆನಲು ಘುಡು ಘುಡಿಸಿಕೊಂಡು ಬರುವೆ ಬಡವನೋ ನಾನು ನಿನ್ನಡಿಯನೇ ನೀಡೆನಲು ಹುಡುಗತನದಲಿ ಬೇಡುವೆ ತಡೆಯಲಾರೆನೊ ಭವದ ದಡವ ಸೇರಿಸು ಎನಲು ಕೊಡಲಿಯ ಪಿಡಿದು ಬರುವೆ ಕಡು ಬವಣೆ ಬಿಡಿಸೆಂದು ಅಡಿಗಡಿಗೆ ಎರಗಲು ಅಡವಿ ಅಡವಿಯ ತಿರುಗುವೆ | ಥರವೇ 2 ಹತ್ತು ನಾಲ್ಕು ಲೋಕಕೆ ತೆತ್ತಿಗನೊ ನೀನೆನಲು ಮುತ್ತ್ಯದೊರೆ ಎಂದೆನ್ನುವೆ ಸುತ್ತಿರುವ ಆವರಣ ಮತ್ತೆ ನೀ ಛೇದಿಸೆನೆ ಬತ್ತಲೆ ನೀ ನಿಲ್ಲುವೆ ಭೃತ್ಯ ನಾ ನಿನಗೆನಲು ಹತ್ತಿ ಕುದುರೆಯ ಓಡುವೆ ನಿತ್ಯ ಮೂರುತಿ ನಿನ್ನ ಕೃತ್ಯವೇ ಹೀಗಿರಲು ಮತ್ತಿನ್ನ ಹ್ಯಾಗೆ ಪೊರೆವೆ | ಕರೆವೆ 3 ದÉೂರೆಯು ನೀ ಜಗಕೆಂದು ಸುರರೆಲ್ಲ ನುಡಿಯುವರೊ ಅರಿಯೆ ನಾನದರ ಮಹಿಮೆ ಸಿರಿಗೊಡೆಯನಾದರೆ ಪೊರೆಯದೆಲೆ ಎನ್ನನು ಕರೆಕರೆಗೊಳಿಸುವರೆ ತಿರಿಯ ಬರಲಿಲ್ಲ ನಾ ಸಿರಿಯ ನೀಡೆಂದೆನುತ ಉರುತರದ ಭಯವೇತಕೆ ಚರಣ ಧ್ಯಾನವನಿತ್ತು ಪರಮ ಭಕ್ತರೊಳಿಡಿಸಿ ದೊರೆಯೆ ನೀ ಸಲಹ ಬೇಕೋ | ಸಾಕೋ4 ಆಪಾರ ಮಹಿಮನೆ ಆರ್ತಜನ ರಕ್ಷಕ ಪಾಪಿ ನಾನಿಹೆನೋ ಈಗ ನೀ ಪಿಡಿದು ಪೊರೆಯದಿರೆ ಕಾಪಾಡುವವರ್ಯಾರೊ ಶ್ರೀ ಪತಿಯೆ ನೀನೆ ತೋರೊ ತಾಪಪಡಲಾರೆ ಭವಕೂಪದೊಳು ಬಿದ್ದಿಹೆನು ನೀ ಕೃಪಾದಿಂದೀಕ್ಷಿಸೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಕಾಪಾಡುವವರನರಿಯೆ ದೊರೆಯೆ 5
--------------
ಅಂಬಾಬಾಯಿ
ಶ್ರೀ ಕಲ್ಯಾಣಿ ಸುಗುಣಮಣಿ ಗಿರಿಜೆ ಪ-ರಾಕೆ ಬಾಗಿಲ ತೆಗೆಯೆಸಾಕು ನೀನಾರು ನಿನ್ನಯ ನಾಮವನು ಪ-ರಾಕು ಮಾಡದೆ ಪೇಳಯ್ಯ 1 ಕಾಮಿನಿಯರೊಳು ಕಟ್ಟಾಣಿ ಪಾರ್ವತಿ ಕೇಳೆಕೌಮಾರಿ ಕಾಣೆ ಜಾಣೆಕೌಮಾರಿಯಾದರೊಳ್ಳಿತು ನಡೆ ಋಷಿಗಳಸ್ತೋಮದ ವನಕಾಗಿ 2 ಕಾಳ ಪನ್ನಗವೇಣಿ ಕಲಕೀರವಾಣಿಕೇಳೆ ಶೂಲಿ ಕಾಣೆಲೆ ಕೋಮಲೆಶೂಲಿ ನೀನಾದರೊಳ್ಳಿತು ನಡೆ ವೈದ್ಯರಜಾಲವಿದ್ದೆಡೆಗಾಗಿ3 ನೀಲಕುಂತಳೆ ನಿಗಮಾಗಮನುತೆ ಕೇಳೆನೀಲಕಂಠನು ಕಾಣೆನೀಲಕಂಠನು ನೀನಾದರೆ ತರುಗಳ ಮೇಲೆಕುಳ್ಳಿರು ಪೋಗಯ್ಯ4 ಸೋನೆ ಕೋಕಿಲಗಾನೆಸ್ಥಾಣು ನಾನೆಲೆ ಜಾಣೆನೀನಾದರೊಳ್ಳಿತು ನಡೆ ವಿಪಿನಸ್ಥಾಣದೊಳಿರು ಪೋಗಯ್ಯ5 ಎಸಳುಗಂಗಳ ಬಾಲೆ ಎಸವ ಮೋಹನಮಾಲೆಪಶುಪತಿ ಕಾಣೆ ಕೋಮಲೆಪಶುಪತಿಯಾದರೊಳ್ಳಿತು ನಡೆಗೋಗಳವಿಸರವ ಕಾವುದಕೆ 6 ಜಾತಿನಾಯಕಿ ಕೇಳೆ ನೂತನವೇತಕೆಭೂತೇಶ ಕಾಣೆ ಜಾಣೆಭೂತೇಶನಾದರೊಳ್ಳಿತು ನಡೆ ಭೂತವ್ರಾತದ ವನಕಾಗಿ7 ಮಿಂಚಿನ ಗೊಂಚಲ ಮುಂಚಿ ಪಳಂಚುವಚಂಚಲನೇತ್ರಯುಗೆಅಂಚಿತಮಾದ ವಿಪಂಚಿಯ ಸ್ವರವ ಪಳಂಚುವಿಂಚರದಬಲೆ 8 ಕರಗಿಸಿ ಕರುವಿಟ್ಟೆರದ ಚಿನ್ನದ ಬೊಂಬೆಸುರುಚಿಕರ ಸುನಿತಂಬೆಪರಿಪೂರ್ಣ ಶರದಿಂದುವದನೆ ಕುಂದರದನೆವರಸುಗುಣಾವಲಂಬೆ 9 ಕುಂಕುಮರೇಖಾಲಂಕೃತೆ ಪರತರೆಪಂಕಜಸಮಪಾಣಿಶಂಕರಿ ಪಾಪಭಯಂಕರಿ ಸರ್ವವಶಂಕರಿ ಶುಭವಾಣಿ10 ಚಂಡಮುಂಡಾಸುರಖಂಡನ ಪಂಡಿತೆಮಂಡಲತ್ರಯನಿಲಯೆಮಂಡಿತ ನವರತ್ನಖಚಿತ ಮಹೋಜ್ವಲಕುಂಡಲೆ ಮಣಿವಲಯೆ 11 ವರದಾನದಿಯ ತೀರವಾಸ ಶ್ರೀ ಕೆಳದಿಯಪುರದ ರಾಮೇಶ ಕಾಣೆಪುರದ ರಾಮೇಶನಾದರೆ ನೆರೆಬಾಯೆಂದುಕರೆದಳು ಗಿರಿಜಾತೆ12 ಗಿರಿಜಾ ಶಂಕರರ ಸಂವಾದದ ಪದಗಳಬರೆದೋದಿ ಕೇಳ್ದರಿಗೆಪರಮ ಸೌಭಾಗ್ಯ ಸಂತಾನಗಳನು ಕೊಟ್ಟುಪೊರೆವನು ರಾಮೇಶ13
--------------
ಕೆಳದಿ ವೆಂಕಣ್ಣ ಕವಿ
ಸಂದೇಹ ವೇತಕೆ ಸರ್ವೇಶಾ ಇಂದೆನ್ನ ಹೃದಯಾದಿ ನಿಂದೆನ್ನ ರಕ್ಷಿಸಲು ಪ ಹಿಂದೆ ನೀ ಸಲಹಿದವರು ಹೊಂದಿದವರೇನಾ ಪಾದ ಹೊಂದಲಲ್ಲೇ ಬಂದೆನ್ನ ಅತಿತ್ವರದಿಂದೆನ್ನ ಕೈಯಪಿಡಿದು ಅಂಧ ನಾ ತೋರಿಸಾ ನಂದನ ಸುತಹರಿ 1 ಭಂಡಾರ ವುಳ್ಳವನಾಗಿ ನೀನುಯನ್ನ ಕಂಡಾರೆ-------------- -------------- ಏನು ಹೆಂಡಾರ ಮೇಲೆ ದೃಷ್ಟಿ ಗಂಡಾರಿಗಿಲ್ಲದಿರೆ ದುಂಡೇರಿಗೇನುಗತಿ ಪುಂಡರೀಕ್ಷಾಕ ಹರಿ 2 ನಿನ್ನನ್ನೇ ನಂಬಿದವ ನಾನು ಇನ್ನು ಯನ್ನಾ ನೀಕಡೆ ದೃಷ್ಟಿ ನೋಡ್ವದೇ ನೋ ನಿನ್ನಾಣೆ ನಿನಗೆ ಇನ್ನು ಎನ್ನ ನೀ ಸಲುಹದಿರೆ ಮುನ್ನೀನಾ ದೋಷ ಕಳೆದು 'ಹೆನ್ನೆಯ ವಿಠಲಾ’ 3
--------------
ಹೆನ್ನೆರಂಗದಾಸರು
ಸರಿತಪ್ಪುಗಳ ಗೊಡವೆ ನನಗೇತಕೋ ಸರಿತಪ್ಪ ನಡೆಸುವವನು ನೀನಾಗಿರೇ ಪ ಹರಿ ನಿನ್ನ ಕೈಗೊಂಬೆ ನಾನಾಗಿರೆ ಪರಿಪರಿಯ ಯೋಚನೆಯು ನೀನಾಗಿರೇ ಅ.ಪ ಹಗಲಿರುಳ ಬಗೆ ಭಾವ ಎನಗೇತಕೆ ನಗುವಳಲ ಶೋಕಂಗಳು ಇನ್ನೇತಕೇ ಜಗವೆಲ್ಲ ತುಂಬಿರುವೆ ಭಯವೇತಕೆ ಭಗವಂತ ನಿನ್ನದಯೆ ಇರದೇತಕೆ 1 ಹರಿಚರಣ ಶರಣೆಂಬುದೆನಗಾಗಲಿ ಕರವಿಡಿದು ನಡೆಸುವುದು ನಿನಗಾಗಲೀ ಗುರುದೇವ ನೀನೆಂಬುದರಿವಾಗಲೀ ಸಿರಿ ಮಾಂಗಿರಿಯರಂಗ ದಯೆದೋರಲಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
167ಅಂಜಿಕಿನ್ನೇತಕಯ್ಯ-ಸಜ್ಜನರಿಗೆ |ಅಂಜಿಕಿನ್ನೇತಕಯ್ಯ ಪಸಂಜೀವರಾಯರ ಸ್ಮರಣೆ ಮಾಡಿದ ಮೇಲೆ ಅ.ಪಕನಸಿನೊಳ್ ಮನಸಿನೊಳ್ ಕಳವಳವೇತಕೆಹನುಮನ ನೆನೆದರೆ ಹಾರಿ ಹೋಹುದು ಪಾಪ 1ರೋಮ ರೋಮಕೆ ಕೋಟಿ ಲಿಂಗವುದುರಿಸಿದಭೀಮನ ನೆನೆದರೆ ಬಿಟ್ಟು ಹೋಹುದು ಪಾಪ 2ಪುರಂದರವಿಠಲನ ಪೂಜೆಯ ಮಾಡುವಗುರುಮಧ್ವರಾಯರ ಸ್ಮರಣೆ ಮಾಡಿದ ಮೇಲೆ3
--------------
ಪುರಂದರದಾಸರು
ಆರು ಬಾರರು ಸಂಗಡಲೊಬ್ಬರು |ನಾರಾಯಣನ ದಿವ್ಯನಾಮ ಒಂದಲ್ಲದೆ ಪಹೊತ್ತು ನವಮಾಸಪರಿಯಂತಗರ್ಭದಲಿ |ಅತ್ಯಂತ ನೋವು ಬೇನೆಗಳ ತಿಂದು ||ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು |ಅತ್ತು ಕಳುಹುವಳಲ್ಲದೆ ಸಂಗಡ ಬಾಹಳೆ 1ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ |ಕರವಿಡಿದು ಕೈಧಾರೆ ಎರಸಿಕೊಂಡ ||ತರುಣಿ ತನ್ನಯ ಗಂಡನನು ಮುಟ್ಟಲಮ್ಮದೆ |ನೆರೆಏನುಗತಿತನಗೆ ಹೇಳಲಮ್ಮಳಲ್ಲದೆ2ಮನೆ-ಮಕ್ಕಳಿವರೆನ್ನ ತನುವು ಒಡವೆ ಎರಡು |ಘನವಾಗಿ ನಂಬಿರೆ ನನ್ನವೆಂದು |ಅನುಮಾನವೇತಕೆ ಜೀವ ಹೋದಬಳಿಕ |ಘನಹೊತ್ತು ಮನೆಯಲಿ ಇರಿಸಿಕೊಳ್ಳರೊ ದೇವ 3ಆತ್ಮ ಬಳಲಿದಾಗ ಬಂಧುಗಳು ಬಂದು |ಹೊತ್ತು ಹೊರಗೆ ಹಾಕು ಎಂತೆಂಬರು ||ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟು |ಮತ್ತೆ ಬೆನ್ನನು ತಿರುಗದಲೆ ಬಾಹೋರಲ್ಲದೆ 4ಹರಣಹೋಗದ ಮುನ್ನ ಹರಿಯ ಸೇವೆ ಮಾಡಿ |ಪರಲೋಕಸಾಯುಜ್ಯಪಡೆದುಕೊಂಡು |ಕರುಣಿ ಕೃಪಾಳು ಶ್ರೀ ಪುರಂದರವಿಠಲನ |ನೆರೆನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ 5
--------------
ಪುರಂದರದಾಸರು
ಈ ವಸುಧೆಯೊಳೆಲ್ಲರಿಗಿಂತ ಕೃಷ್ಣನು ಆವುದರಿಂದಧಿಕಾ ಪವಾರಿಧಿಮನೆಯಲ್ಲೆ ಈಗಿನರಸರಿಗೆ |ನೀರೊಳಗೇಸೊಂದು ಊರಿಲ್ಲವೇ ||ಶಾಙ್ರ್ಗ ಧನುವಾದರೇನು ದುರ್ಲಭವಲ್ಲ |ಧಾರಿಣಿಯೊಳು ಮನೆ ಮನೆಯಲ್ಲಿ ಕಾರ್ಮುಖವು 1ಲೇಸೇನು ಕೌಸ್ತುಭವೊಂದೆಯೇ ಮಣಿಗಳು |ಏಸೊಂದಿಲ್ಲದೆ ಭಾಗ್ಯವಂತರಲ್ಲಿ ||ಶೇಷನ ಹಾಸಿಗೆ ಹಾವಾಡಿಸಿ ಹೊಟ್ಟೆ |ಪೋಷಿಸಿಕೊಳ್ಳರೆ ಗಾರುಡಿಗರೆಲ್ಲ 2ಪೀತಾಂಬರಂತು ಎಲ್ಲರಿಗಿಹದು ದೊಡ್ಡ |ಮಾತಲ್ಲ ವನಮಾಲೆವೈಜಯಂತಿ||ಖ್ಯಾತಿಗೆ ಶಂಖಚಕ್ರವು ಹೇಳಿಕೊಳ್ಳಲು |ಜಾತಿಕಾರಗಿಲ್ಲೇ ಬಡಿವಾರವೇತಕೆ3ಶ್ರೀವತ್ಸ ಶ್ರೀವತ್ಸವೆಂಬರು ಮಂದೆಲ್ಲ |ಆವ ಹುಣ್ಣಿನ ಕಲೆಯಾಗಿಹದೋ ||ಆವಾನಿ ಹಯರಥ ಮುದಿಹದ್ದುಯೇರುವ |ಕೋವಿದರೆಲ್ಲೇನು ನೋಡಿ ವಂದಿಸುವರೋ 4ವೈಕುಂಠ ಮೊದಲಾದ ಮೂರೇ ಊರವನಿಗೆ |ಲೋಕದೊಳರಸರಿಗೇಸೋ ವೂರು ||ಶ್ರೀಕಾಂತ ಪ್ರಾಣೇಶ ವಿಠಲನ ಸಂಗ |ಬೇಕೆಂದು ಬಯಸುವರೆಲ್ಲರೂ ತಿಳಿಯದೆ 5
--------------
ಪ್ರಾಣೇಶದಾಸರು
ದುರಿತವೆತ್ತಣದೊ ದುರ್ಗತಿಯು ಎಲ್ಲಿಹುದೊ ?ಹರಿನಾಮ ಸ್ಮರಣೆಯೆಚ್ಚರದಲ್ಲಿದ್ದವರಿಗೆ ಪ.ಸ್ನಾನವೇತಕೆ ಸಂಧ್ಯಾ ಜಪತಪವೇತಕೆಮೌನವೇತಕೆ ಮಾಸವ್ರತವೇತಕೆ ||ಮಾನಸದಲಿ ವಿಷ್ಣುಧ್ಯಾನವ ಮಾಡುವಜ್ಞÕನವಂತರ ಸಂಗಸುಖದೊಳಿಪ್ಪವರಿಗೆ 1ಯಾತ್ರೆಯೇತಕೆ ಕ್ಷೇತ್ರಗಳ ನೋಡಲೇತಕೆಗೋತ್ರಧರ್ಮದ ಪುಣ್ಯ ಫಲವೇತಕೆ ? ||ಸೂತ್ರದಿ ಜಗವ ಮೋಹಿಸುವ ಮುರಾರಿಯಸ್ತೋತ್ರ ಮಾಡಿ ಪೊಗಳುವ ಭಾಗವತರಿಗೆ 2ಅಂಗದಂಡನೆ ಏಕೆ ಆತ್ಮಗಾಸಿಯು ಏಕೆತಿಂಗಳ ಚಾಂದ್ರಾಯಣವೇತಕೆ ? ||ಮಂಗಳ ಮಹಿಮ ಶ್ರೀ ಪುರಂದರವಿಠಲನಹಿಂಗದರ್ಚನೆ ಮಾಡುವ ಭಕ್ತ ಜನರಿಗೆ 3
--------------
ಪುರಂದರದಾಸರು
ದೇಹವೇಕೆ ನಮಗೆ ದೇಹ - ದೇಹ ಸಂಬಂಧಗಳೇಕೆ |ಆಹುದೇನೊ ಹೋಹುದೆನೊ ಇದರಿಂದ ಹರಿಯೆ ಪ.ಮೆಚ್ಚಿ ಕಟ್ಟಿದ ಚೆಲುವ ಮಾಳಿಗೆ ಮನೆ ಏಕೆ |ಮುಚ್ಚಿ ಹೂಳಿದ ಹೊನ್ನು ಹಣವೇತಕೆ |ಪಚ್ಚೆ ಮಾಣಿಕವಜ್ರ ವೈಡೂರ್ಯವೇತಕೆ |ಅಚ್ಯುತನ ದಾಸರಲಿ ಭಕ್ತಿ ಇಲ್ಲದ ಬಳಿಕ 1ಹೆಂಡಿರು ಮಕ್ಕಳು ಏಕೆ - ಹಣ ಹೊನ್ನು ಎನಲೇಕೆ |ಕಂಡ ವೇದ ಶಾಸ್ತ್ರಗಳನೋದಲೇಕೆ - ಭೂ ||ಮಂಡಲಾಧಿಪತ್ಯವೇಕೆ - ಮೇಲೆ ಸೌಂದರ್ಯವೇಕೆ |ಪುಂಡರೀಕಾಕ್ಷನ ದಾಸನಲಿ ಭಕ್ತಿಯಿಲ್ಲದ ಬಳಿಕ 2ಮಂದಾಕಿನಿ ಮೊದಲಾದ ತೀರ್ಥಯಾತ್ರೆಗಳೇಕೆ |ಚೆಂದುಳ್ಳ ವಿಹಿತ ಕರ್ಮಗಳೇತಕೆ |ಇಂದಿರೇಶ ನಮ್ಮ ಪುರಂದರವಿಠಲನ |ಪೊಂದಿ ಭಜಿಸಿದವನ ಇಂದ್ರಿಯಂಗಳೇಕೆ 3
--------------
ಪುರಂದರದಾಸರು
ನೀನೇ ದಯಾಳು ನಿರ್ಮಲಚಿತ್ತ ಗೋವಿಂದನಿಗಮಗೋಚರ ಮುಕುಂದಪಜ್ಞಾನಿಗಳರಸು ನೀನಲ್ಲದೆ ಜಗಕಿನ್ನುಮಾನದಿಂದಲಿಕಾವದೊರೆಗಳ ನಾ ಕಾಣೆಅ.ಪಬಗೆಬಗೆಯಲಿ ನಿನ್ನ ಸ್ತುತಿಪೆನೊನಗಧರಖಗಪತಿವಾಹನನೆ ||ಮಗುವಿನ ಮಾತೆಂದು ನಗುತ ಕೇಳುತ ನೀನುಬೇಗದಿಂದಲಿ ಕಾಯೋ ಸಾಗರಶಯನನೆ 1ದಾನವಾಂತಕ ದೀನ ಜನ ಮಂದಾರನೆಧ್ಯಾನಿಪರ ಮನದೊಳು ಸಂಚರನೆ ||ಮೌನನಾದೆನು ನಿನ್ನ ಧ್ಯಾನಾನಂದದಿ ಈಗಸಾನುರಾಗದಿ ಕಾಯೊ ಸನಕಾದಿ ವಂದ್ಯನೆ 2ಮಂದರೋದ್ಧರ ಅರವಿಂದ ಲೋಚನ ನಿನ್ನ ||ಕಂದನೆಂದೆನಿಸೂ ಎನ್ನ ||ಸಂದೇಹವೇತಕೆ ಸ್ವಾಮಿ ಮುಕುಂದನೆಬಂದೆನ್ನ ಕಾಯೊ ಶ್ರೀಪುರಂದರವಿಠಲನೆ3
--------------
ಪುರಂದರದಾಸರು
ಪರಾನ್ನವೇತಕೆ ಬಂತಯ್ಯ - ಎನಗೆಇಂದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಪರಾನ್ನವೇತಕೆ ಬಂತಯ್ಯ ? ಪ.ಪರಾನ್ನವೇತಕೆ ಬಂತು ಪರಮೇಷ್ಟಿಜನಕನ |ಪರನೆಂದು ತಿಳಿಸದೆ ಪರಗತಿ ಕೆಡಿಸುವ ಅಪಸ್ನಾನ ಮಾಡಿಕೊಂಡು - ಕುಳಿತು ಬಹು |ಮೌನದಿಂದಿರಲೀಸದು ||ಶ್ರೀನಿವಾಸನ ಧ್ಯಾನಮಾಡದೆ ಮವಿದು |ತಾನೆ ಓಡುವದು ಶ್ವಾನನೋಪಾದಿಯಲಿ 1ಜಪವ ಮಾಡುವ ಕಾಲದಿ - ಕರೆಯ ಬರೆ |ವಿಪರೀತವಾಗುವುದು ||ಸ್ವಪನದಂತೆ ಪೊಳೆದು ನನ್ನ ಮನಕೆ ಬಲು |ಸುಪಥವ ತಪ್ಪಿಸಿ ಅಪಗತಿ ಕೊಡುವಂಥ 2ಪ್ರಸ್ಥದ ಮನೆಯೊಳಗೆ - ಕರೆಯದೆ ಪೋಗಿ |ಸ್ವಸ್ಥದಿ ಕುಳಿತುಕೊಂಡು ||ವಿಸ್ತಾರವಾಗಿ ಹರಟೆಯನೆ ಬಡಿದು ಪ್ರ |ಶಸ್ತವಾಯಿತು ಎಂದು ಮುಸ್ತಕ ತಿರುವುವ 3ಯಜಮಾನನು ಮಾಡದ - ಪಾಪಂಗಳ |ವ್ರಜವು ಅನ್ನದೊಳಿರಲು ||ದ್ವಿಜರು ಭುಂಜಿಸಲಾಗಿಅವರ ಉದರದೊಳು ||ನಿಜವಾಗಿ ಸೇರುವುದು ಸುಜನರು ಲಾಲಿಸಿ 4ಮಾಡಿದ ಮಹಾಪುಣ್ಯವು - ಓದನಕಾಗಿ - |ಕಾಡಿಗೊಪ್ಪಿಸಿ ಕೊಡುತ |ರೂಢಿಗಧಿಕನಾದ ಪುರಂದರವಿಠಲನ |ಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ 5
--------------
ಪುರಂದರದಾಸರು
ವಿವೇಕವ ಪಡೆಯಿರೋ ವಿಭುಗಳ ಕೃಪೆಯಿಂದವಿವೇಕವ ಪಡೆದರೆ ಈಶ್ವರಗಿಂ ಮಿಗಿಲಯ್ಯಪಮನವು ನಿಲ್ಲದು ಎಂದು ಮರುಗುವಿರೇಕಯ್ಯಮನವು ನಿಲ್ಲಲಿಕೆ ನಿಮ್ಮಧೀನವೆಮನವು ಆದಾತನಾನೇ ಮಹತ್ತು ಆದಾತನಾನೇಮನಕೆ ವಿರಹಿತುಮಾಪತಿಯು ತಾನೆಂದು1ಪಾಪವ ಮಾಡಿದೆನೆಂದು ಹಿರಿದು ಮರುಗಲದೇಕೆಪಾಪ ಪುಣ್ಯವು ಪ್ರಕೃತಿಯಲಾದವುಪಾಪವೆಲ್ಲಿಹವೆಲೆ ಪುಣ್ಯವೆಲ್ಲಿಹವೆಂದುಪರಪುರುಷ ತಾನಾಗದೆಂದೂ2ಆತ್ಮನರಿಪೆನೆಂದು ಅತಿ ಕಷ್ಟಬಡಲೇಕೆಆತ್ಮನ ವಿವರಿಸೆ ಅವನಲ್ಲವೆಆತ್ಮನೇ ತಾಕಂಡ್ಯಾಅಗಣಿತಮಹಿಮನುಆತ್ಮ ಅನಂತನಾಮನೆ ತಾನೆಂದು3ಅರಿವುಮರೆವೆ ಎಂಬ ಅಜ್ಞಾನವೇತಕೆಅರಿವುಮರೆವುಅಂಗದಧರ್ಮವುಅರಿವುಮರೆವೆಯುಂಟೆ ಆತ್ಮತಾನಾದವನಿಗೆಅರಿವುಮರೆವುಅಂಬುಧಿತೆರೆಯುಂಟು4ಇಂತು ವಿವೇಕವನ್ನು ವಿಭುಗಳಿಂದಲರಿದುಚಿಂತೆ ಹರಿದು ಚಿದಾನಂದ ಗುರುವಾಮುಂತೆ ದೃಷ್ಟಿಸಿಕೊಂಡು ಮರೆತು ತನುವನು ನಿ-ಶ್ಚಿಂತ ರಾಗಿಯೆ ನಿಜವಿದೆಯಂತೆಂದು5
--------------
ಚಿದಾನಂದ ಅವಧೂತರು
ವೈದ್ಯ ಬಂದ ನೋಡಿ - ವೆಂಕಟನೆಂಬ |ವೈದ್ಯ ಬಂದ ನೋಡಿ ಪ.ವೈದ್ಯ ಬಂದನು ವೇದವೇದ್ಯ ನೋಡೀಗಲೇಶ್ರೀದೇವಿರಮಣನು ಶ್ರೀನಿವಾಸನೆಂಬ ಅಪಎಷ್ಟು ದಿನದ ರೋಗಗಳೆಂಬುದ ಬಲ್ಲ |ಗಟ್ಟಿಯಾಗಿ ಧಾತುರಸಗಳನು ಬಲ್ಲ ||ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |ಶಿಷ್ಟವಾದ ದೇಹ ಕೊಟ್ಟು ಕಾಯುವನಿವ 1ಹೊನ್ನು - ಹಣಂಗಳ ಅನ್ನವ ಅನುಸರಿಸಿ |ತನ್ನ ದಾಸನೆಂಬ ನಿಜವ ನೋಡಿ ||ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |ತನ್ನ ನಾಮಾಮೃತ ದಿವ್ಯ ಔಷಧವೀವ 2ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |ಈ ತನುವಿಗೆಂದೆಂದು ರೋಗಬರಲರಿಯದು ||ಈತ ಅನಂತರೂಪದಿ ಜೀವರಿಗೆ ಮುನ್ನ |ಪ್ರೀತಿಯಿಂದಲಿ ಭವರೋಗ ಬಿಡಿಸುವ 3ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ |ಮರ್ಮಬಲ್ಲ ರೋಗಜೀವಂಗಳ ||ನಿರ್ಮಲವಾಗಿಹ ತನ್ನ ನಾಮಸ್ಮರಣೆ |ಒಮ್ಮೆ ಮಾಡಲು ಭವರೋಗ ಬಿಡಿಸುವ 4ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ ? |ಅನ್ನ ಮಂತ್ರ - ತಂತ್ರ - ಜಪವೇತಕೆ ? ||ಚೆನ್ನ ಪುರಂದರವಿಠಲನ್ನ ನೆನೆದರೆ |ಮನ್ನಿಸಿ ಸಲಹುವ ವೈದ್ಯ ಶಿರೋಮಣಿ 5
--------------
ಪುರಂದರದಾಸರು
ಸಕಲ ಗ್ರಹಬಲ ನೀನೆ ಸರಸಿಜಾಕ್ಷ |ನಿಖಿಳವೇತಕೆ ಎನಗೆ ವಿಶ್ವವ್ಯಾಪಕ ಮೋಹಿ ಪರವಿಚಂದ್ರಬುಧನೀನೆರಾಹುಕೇತುವು ನೀನೆಕವಿಗುರುವು ಶನಿಯು ಮಂಗಳನು ನೀನೆ ||ದಿವಸ ರಾತ್ರಿಯು ನೀನೆ ನವವಿಧಾನವು ನೀನೆಭವರೋಗಹರ ನೀನೆ ರಕ್ಷಕನು ನೀನೆ 1ಪಕ್ಷಮಾಸವು ನೀನೆ ಪರ್ವಕಾಲವು ನೀನೆನಕ್ಷತ್ರಯೋಗ ಕರಣಗಳು ನೀನೆ ||ಅಕ್ಷಯವೆಂದು ದ್ರೌಪದಿಯಮಾನವಕಾಯ್ದಪಕ್ಷಿವಾಹನ ದೀನ ರಕ್ಷಕನು ನೀನೆ 2ಋತು ಕಾಲಗಳು ನೀನೆ ವ್ರತದಿನಂಗಳು ನೀನೆಕ್ರತುವುಸಂಧ್ಯಾನಸದ್ಗತಿಯು ನೀನೆಜಿತವಾಗಿ ಎನ್ನೊಡೆಯಪುರಂದರವಿಠಲನೆಶ್ರುತಿಗೆ ನಿಲುಕದ ಮಹ್ಮಾತ್ಮನು ಹರಿಯು ನೀನೆ 3
--------------
ಪುರಂದರದಾಸರು