ಒಟ್ಟು 35 ಕಡೆಗಳಲ್ಲಿ , 26 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಡುಸಾಧು ಸೇವೆಯ ಬೇಡು ಆಭಯಕೂಡು ನಂತರ ನೀ ನಿರಂತರೀಡಾಡಿದರೆಅಂಜಿ ಓಡದೆ ಆತ್ಮ ಪ.ಸಂತರೊಳು ಕುತರ್ಕ ಕಲ್ಪಾಂತ ರೌರವನರ್ಕಸಂತರೊಳು ಉಗ್ರ ಮನಸು ಆದ್ಯಂತ ಪಾಪದ ಬೆಳಸುಸಂತರ ಕೂಡ ದುಶ್ಚಿತ್ತ ದೇಹಾಂತ ಪ್ರಾಯಶ್ಚಿತ್ತಸಂತರಾಧೀನನಾದರೆಹರಿತಾ ಸಂತೋಷದಿಂದ ಒಲಿವನುನಿತ್ಯ1ತೀರ್ಥ ಸ್ನಾನವು ಹಲವು ಕಾಲೋತ್ತರಕಾಹುದು ಫಲವುಮೂರ್ತಿಔಪಾಸನವು ಧರ್ಮಾರ್ಥ ಮುಂದಣ ಅನುವುಅರ್ಥಗಳ ವಿತರಣವು ಶೂನ್ಯಾರ್ಥ ಸಮಯಕೆ ದಣಿವುಸಾಥರ್Àಕವು ಸಧ್ಯ ಸಾಧುನಿಕರದಗಾತ್ರಕ್ಷೇತ್ರಯಾತ್ರೆಯ ಬಿಡದೆ2ಸಾಧುಸಂಗವಗಿಲ್ಲ ಮುಕ್ತಿಯ ಹಾದಿ ಅವನಿಂಗಿಲ್ಲಸಾಧುರದಾವಹಳಿವ ತಮಸಕೈದುವುದು ಅವನ ಕುಲವುಸಾಧುಕೃಪೆ ದಾವಗುಂಟು ಎಲ್ಲಿ ಹೋದರಾನಂದದ ಗಂಟುಸಾಧುಪ್ರಿಯ ಪ್ರಸನ್ವೆಂಕಟರಮಣನು ಸಾಧುರ ಮೆಚ್ಚಿದವರಿಗೆಮೆಚ್ಚುವನು 3
--------------
ಪ್ರಸನ್ನವೆಂಕಟದಾಸರು
ಯಾರೆನ್ನ ಕಾಯುವರು | ಶ್ರೀಹರಿಯೆ |ಹರಿಯೇ | ನೀ ದೂರ ಮಾಡುವರೇ ಪಘೋರಪಾತಕವೆಂಬೀ | ಶಾರೀರವನು ಪೊತ್ತು |ಪಾರಗಾಣದ ದುಃಖಕರ್ಹನಾದೆನು ಹರಿಯೆ 1ಜೀವದಂತ್ಯದಿ ಯಮನೀವ ಪಾಶವ ಕಡಿದುಕಾಯುವರಿಲ್ಲ | ದಯಾಕರ ಮೂರುತಿ 2ಕಾಸು ಕನಕವಿರಲಾಸೆ ಮಾಡುವರೆಲ್ಲ |ದೇಶ ಬಿಕ್ಷುಕನಾದ | ರೀಸು ಮೆಚ್ಚುವರಿಲ್ಲ 3ಬಂಧು ಬಳಗವೆಂಬುದೊಂದು | ಸಂಸಾರದಿ |ಬಂದು ನೋಯುವೆನು | ಗೋವಿಂದ ನೀನಲ್ಲದೆ 4
--------------
ಗೋವಿಂದದಾಸ
ಸತ್ಯಕೆ ಶಿವನೀಗ ಮೆಚ್ಚುವಸತ್ಯವಿಲ್ಲದಿರೆ ಶಿವನೆಂತು ಒಲಿವಪಕೊಟ್ಟನಲ್ಲವೆ ಶಿಖಿಧ್ವಜ ಕೃಷ್ಣಗರ್ಧ ದೇಹವಕೊಡನೆ ಶಿಬಿಯು ಕೊಯ್ದು ಇಂದ್ರಗೆ ಮಾಂಸವಕೊಡನೆ ಚಂದ್ರಹಾಸ ಕೊರೆದು ಹೋಮ ಕಂಗವಕೊಡನೆ ಕಪೋತ ಶಿಬಿಗೆ ಶರೀರವ1ಕೊಡನೆ ಭದ್ರಾಯು ತನ್ನ ಕುಲವಧುವಕೊಡನೆ ದಧೀಚಿ ಕಲಹಕೆ ಬೆನ್ನೆಲುವಕೊಡನೆ ಶಿರಿಯಾಳನೀಗ ತನ್ನ ಮಗನಕೊಡನೆ ಕರ್ಣನೀಗಕರ್ಣಕುಂಡಲವ2ಈ ಪರಿಯ ನಿಷ್ಠೆಯಂತೋ ಆಶ್ಚರ್ಯವನೀಗಪಾಪಲೇಪಕೆ ತಾನು ಹೊರತೀಗ ಆದವಕಾ ಪಥಗಳನ್ನೆಲ್ಲಾ ಕಡೆಯ ದಾಟಿದವಭೂಪ ಚಿದಾನಂದ ಬಗಳೆ ಯಾದವ3
--------------
ಚಿದಾನಂದ ಅವಧೂತರು
ಸುವ್ವಿ ಸುವ್ವಾಲಿ |ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ ಪಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ 1ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದುಬುಧಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ 2ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ 3ಮೃತ್ತಿಕೆಮಾಲೆಅಂಗಾರದಿವ್ಯ ಮಂತ್ರಾಕ್ಷತೆಯು |ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |ಕತ್ತಲಿಲ್ಲ ಶತಸಿದ್ಧ ಮತ್ತೇನುಕೇಳಿ| ಸುವ್ವಿ 4ಪಂಡಿತರು ಮೊದಲಾಗಿಹಸ್ತಿಉಷ್ಟ್ರ ಕುದುರೆಯ |ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||ದಂಡ ಜಗತಿಗೂರಿ ತೋಯ ತೆಗಿಸಿಯವನೀ |ಮಂಡಲದೊಳಗೆ ಪೆಸರಾದರಿವರು | ಸುವ್ವಿ 5ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ |ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ |ಗಟ್ಟಿ ಸಂಕಲ್ಪರಿವರು ಮುನಿವರರು | ಸುವ್ವಿ 6ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ |ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||ನೆಪ್ಪು ಧರೆಗಾಗಲೆಂದುಗುರುಸುಧೀಂದ್ರ ಕುಮಾರ |ಸರ್ಪನ ತೋರಿಸಿ ಸುಪ್ರಖ್ಯಾತರಾದರು | ಸುವ್ವಿ 7ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ |ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ |ಭಜಿಸಿರಿವರನ್ನು ಮಕ್ಕಳು ಬೇಡುವವರು | ಸುವ್ವಿ 8ಮುತ್ತಿನ ಮಾಲಿಕೆನೃಪಭಕ್ತಿಯಿಂದ ಕೊಡಲಾಗಿ |ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ |ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು | ಸುವ್ವಿ 9ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ |ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ |ಸಂದೇಹವಿಲ್ಲದೆ ಸುಲೋಕವನಿತ್ತರು | ಸುವ್ವಿ 10ತುಂಗಾತೀರ ಮಂತ್ರಾಲಯದಲ್ಲಿಶ್ರಾವಣಬಹುಳ |ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು |ಕಂಗಳುಸಾಲವು ನೋಡ ಹೊದ್ದ ಶಾಠಿಯ | ಸುವ್ವಿ 11ಅಂಧಕಬಧಿರಕುಂಟ ನಾನಾ ರೋಗಿಗಳು ಮತ್ತೆ |ಕಂದ ವಜ್ರ್ಯ ಮೊದಲಾದವರಿಗೆಕಾಮ್ಯ| ಸುವ್ವಿ ||ತಂದುಕೊಡುವರು ಬೇಗ ಇತರ ಸಂಶಯವಿಲ್ಲ |ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ 12ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು |ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||ಧಾತಾ ಪಿತ ನಿಲಯವಿದೇನೋಯೆಂದು ತೋರುವದು |ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ | ಸುವ್ವಿ 13ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ |ಒಡ್ಡಿಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||ಕಡ್ಡಿಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ |ದೊಡ್ಡ ರಥವೇರಿ ಮಠವ ಸುತ್ತುವರು | ಸುವ್ವಿ 14ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು |ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು |ಎಷ್ಟು ಪೇಳಿದರೂ ಎನ್ನಿಂದಲಿ ತೀರದು | ಸುವ್ವಿ 15
--------------
ಪ್ರಾಣೇಶದಾಸರು