ಒಟ್ಟು 77 ಕಡೆಗಳಲ್ಲಿ , 30 ದಾಸರು , 75 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬನ್ನಿ ಮಹಂಕಾಳಿ ಜಯವ ನೀಡಮ್ಮ ಮನ್ನಿಸಿ ಬಾಲಗೆ ಪ ನಿನ್ನ ನಂಬಿಕೊಂಡು ಕೆನ್ನೆಯೋಳ್ಮುಡಿವರ ಬನ್ನ ಕಳೆದು ಜಯವನ್ನು ಕೊಟ್ಟು ನೀ ಭಿನ್ನವಿಲ್ಲದೆ ಮನ್ನಿಸಿ ಸಲಹು ಪನ್ನಂಗವೇಣಿಯೆ ಉನ್ನತ ಕರುಣಿ 1 ಪರಮ ಪವಿತ್ರಳೆಂದು ಪರಮ ಪ್ರೀತಿಯಿಂದ ಹರನು ಬಿಡದೆ ನಿನ್ನ ಶಿರದಿ ಧರಿಸಿಕೊಂಬ ಪರಮಮಹಿಮ ನಿನ್ನನರಿನು ಪೇಳುವೆನಾ ತರಳನ ಮೊರೆ ಕೇಳೆ ಕರುಣಿ ಶುಭಕರಿ2 ನೇಮದಿ ಭಜಿಪೆ ನಿಸ್ಸೀಮೆ ನಿರಾಮಯೆ ಕ್ಷೇಮಶರಧಿ ತ್ರಿಭೂಮಿಜಯಂಕಾರಿ ಈ ಮಹಭವನಿಧಿ ಕ್ಷೇಮದಿ ಗೆಲಿಸು ಶ್ರೀ ರಾಮನಾಮ ಪ್ರಿಯೆ ಕೋಮಲಹೃದಯೆ 3
--------------
ರಾಮದಾಸರು
ಬಾಯಂದು ಕರೆವೆನೊ ದೇವನಿನ್ನ ವೈರಿ ಮಧ್ವರಾಯರ ಪ್ರೀಯನೆ ಪ ರಾಮ ನಿರಾಮಯ ಮಾಮನೋಹರ ಶೌರಿ ಸೋಮಧತಾರ್ಚಿತ ಸಾಮನುತಾ ಭೂಮಿಜ ಸಾಮಜ ಪಾಲ ಬಾರೊ ಕಾಲ ಪ್ರೇಮದಿ 1 ಬಿಸಿಜಾಭಾಸ್ಪಜನ ಮಾನಸಗೆ ಅಸುರ ವೈರಿ ಕುಸಮಶರ ಪಿತ ಸುಮನಸ ವಂದಿತಾ ಅಸಮ ಶೂರ ಬಾರೊ ವಸುಧಿಧರ ಬಾರೊ ವೈರಿ ಕುಶಲದಿ 2 ಇಂದಿರೆ ಮಂದಿರ ಸುಂದರ ಶಿರಿಗೋವಿಂದ ವಿಠಲ ಮಂದರಧರ ಬಾರೋ ಚಂದಿರ ಮೊಗ ಬಾರೊ ಛಂದದ ದೈವ ಬಾರೊ ಇಂದಿನ ಯನ್ನ ಮನಸಿಗೆ 3
--------------
ಅಸ್ಕಿಹಾಳ ಗೋವಿಂದ
ಭಕ್ತಜನ ಸಂರಕ್ಷಣ ಪ ಭಕ್ತಜನ ಸಂರಕ್ಷ ಭವದುರಿತ ಸಂಹಾರಿ ಭಕ್ತರಾ ಸುರಧೇನು - ತರುವೆ ಚಿಂತಾಮಣಿಯೆ ಪೊತ್ತ ತಿಮ್ಮಪ್ಪ ಏಳೊಅ.ಪ. ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು ತಾರಾ ನಿಕರವಂಬರದಿ ರೂಹುಮಾಸೆ ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು ಸರಸಿಜಾಂಬುಕ ಮಂಚದಿಂದೇಳೊ 1 ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ ಉರಗ ಪೆಡೆಯೆತ್ತಿದನು ಭಯದಿಂದ ಅಡಗಿದರು ದಶದಿಕ್ಕಿನೊಳಗೆ ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ ಧಂ ಧಂ ಧಣಾ ಸರಿಗಮಪದನೀ ಯೆಂದೆನುತ ತುರೆಸಿದರು ಸದಮಲಾನಂದ ತಿಮ್ಮಾ 2 ನಾರಿಯರು ಬಂದು ಅಂಗಳ ಬಳಿದು ಗಂಧದಾ ಸಾರಣಿಯದೆಳೆದು ಮುತ್ತಿನ ರಂಗವಾಲೆ ವಿ- ಮಕರ ಕನ್ನಡಿ ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲ ಕಟ್ಟಿಗೇ- ಕಾರ ಪರಿವಾರದವರೆಲ್ಲ ವೊಪ್ಪುತಿದಾರೆ ಕಂಸಾರಿ ಕೋನೇರಿವಾಸ 3 ನೃತ್ಯಗಾರರು ಬಂದು ತತ್ಥಿಗಿಣಿ ತಕ್ಥೈಯ ತಿತ್ತಿರಿ ಮೃದಂಗ ಜೊತೆ ತಪ್ಪದಂದದಿ ತಾಳ ಬತ್ತೀಸರಾಗದಲಿ ಎತ್ತಿ ಧ್ವನಿತೋರುತ್ತ ನೃತ್ಯ ಪಾಡುತ್ತ ಕುಣಿಯೆ ಮುತ್ತೈದೆಯರು ಬಂದು ಮುತ್ತಿನಾರತಿ ಪಿಡಿದು ಮಿತ್ರಭಾವದಿ ನಿಮ್ಮ ಅಡಿಗಳಿಗೆ ಹರಿವಾಣ ನೋಡುತ್ತಿದಾರೆ ಸರ್ವೇಶ4 ಕಾದೋದಂ ವಿಮಲ ಕಮ್ಮೆಣ್ಣಿ ಕಸ್ತೂರಿ ಸ್ವಾದು ಜವ್ವಾಜಿ ಚಂದನ ಗಂಧ ದ್ರವ್ಯಗಳ ಹೇಮ ಪಾದುಕಾ ಪಟ್ಟುವಸನ ಈ ಧರೆಯ ಮೇಲಿರ್ದ ಉಡಿಗೆ ತೊಡಿಗೆಯು ಕರ್ಪು ರಾದಿ ತಾಂಬೂಲ ನಿರ್ಮಲ ದಾದಿಯರು ಪಿಡಿದು ಮುಂದೆ ಆದಿಹರಿ ಪರಮಪುರುಷ 5 ದಂಡಿಗೆ ಶಂಖತಾಳ ತಂಬೂರಿ ಜಾಂಗಟೆಯ ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು ಬೊಮ್ಮಾಂಡ ಕಟಹÀ ಬಿಚ್ಚುವಂತೆ ತಂಡ ತಂಡದಿ ಗೆಜ್ಜೆಕಟ್ಟಿ ಅಭಿನಯ ತಿರುಹಿ ಕೊಂಡಾಡೆ ಶಬ್ದ ಪ್ರತಿ ಶಬ್ದವಾಗುತಿದೆ ಭೂ- ಬಲ್ಲವರಾರು ಕುಂಡಲಗಿರಿವಾಸ ತಿಮ್ಮಾ 6 ಗೋತ್ರಾರಿ ಹರಿಧರ್ಮ ಪುಣ್ಯಜನಪನು ವರುಣ ವೀತಿಹೋತ್ರನ ಸಖನು ಯಕ್ಷೇಶ ಕೈಲಾಸ- ಸೂರ್ಯ ಚಿತ್ತದಲಿ ಮುಖ್ಯರಾದ ವಿಶ್ವ - ಮಿತ್ರ ಸನಕಾದಿಗಳು ನಾರದರೆ ಮೊದಲಾಗಿ ಸ್ತೋತ್ರವನು ಮಾಡುತಲಿದ್ದಾರೆ ಲಕ್ಷ್ಮೀಕಳತ್ರ ಜಗದ್ಭರ್ತ ತಿಮ್ಮಾ 7 ನಿಚ್ಚ ಏಳುವ ಸಮಯ ಮೀರಿತೋ ಇಂದೀಗ ಎಚ್ಚರಿಕೆ ಪುಟ್ಟದೇ ಎಲೋ ದೇವ ಶ್ರೀದೇವಿ ಮೆಚ್ಚಿಸಿದ ಮಹಸರಸವೆ ಮುಚ್ಚಟೆಯಿದೇಂ ತಿಳಿಯಲಾಗದೆ ಸ್ವಾಮಿ ಸೊಲ್ಲು ಕರ್ಣಕೆ ಬೀಳದಾಯಿತೆ ಕಾಣೆ ಸಚ್ಚಿದಾನಂದಾತ್ಮಕ 8 ನಿದ್ರೆಗೆವೆ ಹಾಕದಿರೊ ನೀರೊಳಗೆ ನೀನಿರೊ ಉ- ಪದ್ರ ಭೂಮಿಗೆ ಕಳೆಯೊ ಕಶ್ಯಪನ ಸುತನಳಿಯೊ ಸ- ಮುದ್ರ ರಾಣಿಯ ಪಡೆಯೊ ರಾಯರಾಯರ ತÀಡೆಯೊ ಮುದ್ರೆ ಭೂಮಿಜೆಗೆ ಕಳುಹೊ ಅದ್ರಿಯುದ್ಧರಿಸೊ ಮುಪ್ಪುರವ ಸಂಹರಿಸೊ ಕಲಿ- ಕ್ಷುದ್ರ ಕಳೆ ನಿದ್ರೆ ಸಾಕೆಂದು ಶುಕ್ತಿ ಸಾರುತಿದೆ ವೆಂಕಟಕಾದ್ರವೇಯ ಹಾಸಿಗೆಯಿಂದೇಳು 9
--------------
ವಿಜಯದಾಸ
ಭಗವಂತನ ಸಂಕೀರ್ತನೆ ಅನುದಿನ ನೆನೆಯಲೊ ಹನುಮನಿಗತಿ ಪ್ರಿಯ ಪರಮ ಪಾವನ ರಾಮನಾಮ ಪ ಇನಕುಲ ಭೂಷಣ ಮುನಿಜನ ತೋಷಣ ಜಾನಕಿರಮಣನ ನಾಮ ಅ.ಪ ಗೌತಮ ಸತಿಯೆ ಪುನೀತಳ ಮಾಡಿ ಪ್ರ- ಖ್ಯಾತಿ ಪೊಂದಿದ ದಿವ್ಯನಾಮ ಶೀತಲ ಕಿರಣ ಭೂಷಣನ ಧನುವ ಮುರಿದು ಸೀತೆಯ ಪೊಂದಿದ ನಾಮ 1 ಜನಕನ ವಚನವನುಳಿಸುವ ನೆವದಲಿ ವನವಾಸ ಮಾಡಿದನ ನಾಮ ವನದಲಿ ಖರದೂಷಣ ಮುಖ ದನುಜರ ಹನನ ಮಾಡಿದ ದಿವ್ಯನಾಮ2 ಶರಭಂಗಮುನಿಗೆ ಪರಮ ಪದವನಿತ್ತ ಪರಮ ಪವಿತ್ರನ ನಾಮ ನಾಸಿಕ ಕರ್ಣ ಮುರಿಸಿದವನ ಶುದ್ಧ ನಾಮ 3 ಭೂಮಿಜೆಯನು ಮೋಸದಿಂದ ಅಗಲಿಸಿದ ಮಾರೀಚನ ಕೊಂದ ನಾಮ ಸ್ವಾಮಿಯ ಪ್ರೇಮಕ್ಕೆ ಮಡಿದ ಜಟಾಯುಗೆ ಅಭಯ ಹಸ್ತವನಿತ್ತ ನಾಮ 4 ಆ ಮಹಾ ಹನುಮನ ಕಾಮಿತದಂತೆ ಮಹೇಂದ್ರ ಸುತನ ಕೊಂದ ನಾಮ ಕಮಲ ಸುಹೃದತನಯನಿಗೆ ಸಾಮ್ರಾಜ್ಯವನಿತ್ತ ನಾಮ 5 ಪರಿಪರಿವಾರದಿಂ ಶರಧಿಯೊಳ್ ಸೇತು ಬಂಧನವ ಮಾಡಿದ ರಾಮನಾಮ ದುರುಳ ರಾವಣ ಮುಖ ರಕ್ಕಸರನೆ ಕೊಂದು ಧರಣಿ ಸುತೆಯ ಕಂಡ ನಾಮ6 ಶರಣವ ಪೊಂದಿದ ಭಕುತ ವಿಭೀಷಣಗೆ ತರುಣಿ ಸೀತೆ ಲಕ್ಷ್ಮಣರಿಂದ ಕೂಡಿ ಪು ಷ್ಪಕವನೇರಿದ ಸಾಧು ನಾಮ 7 ಉರುತರ ತಪದಲಿ ನಿರತನಾದ ತಮ್ಮ ಭರತನ ಉಳಿಸಿದ ನಾಮ ದೊರೆತನವೊಂದಿ ಸಕಲ ಸುಜನರುಗಳಿಗೆ ಪರತರ ಸುಖವಿತ್ತ ನಾಮ 8 ತನ್ನ ಭಕುತರೊಳು ಉನ್ನತನೆನಿಸಿದ ಘನ್ನಮಾರುತಿಗೊಲಿದ ನಾಮ ಪ್ರ ಸನ್ನನಾಗಿ ಸಂತತ ಇವನಿಗೆ ತನ್ನ ಸಹ ಭೋಗ ಸುಖವಿತ್ತ ನಾಮ 9
--------------
ವಿದ್ಯಾಪ್ರಸನ್ನತೀರ್ಥರು
ಭವಭಯಹರ ಶ್ರೀ ಮುಕ್ಕುಂದ ಭವರೋಗಕ್ವೈದ್ಯ ಶ್ರೀ ಗೋವಿಂದ ಪ ಧ್ರುವ ದ್ರುಪದತನುಜಾತೆಯೊರೆದ ಹರಿ ಶಿವನುತ ಸಚ್ಚಿತ್ತಾನಂದ ಅ.ಪ ಪಂಕಜಾನಪಿತ ಗೋವಿಂದ ಕಿಂಕರಾಶ್ರಿತ ಗೋವಿಂದ ಶಂಖಧಾರಣ ಸಿರಿಗೋವಿಂದ ಶಂಖಾಸುರನ ಹರ ಗೋವಿಂದ ಮಂಕು ದನುಜಕುಲ ಬಿಂಕ ಮುರಿದ ಅಕ ಳಂಕಮಹಿಮ ಮಹ ಗೋವಿಂದ1 ಸ್ಮರಿಪ ನೆರೆವಾಸ ಗೋವಿಂದ ದುರುಳರ ಕುಲನಾಶ ಗೋವಿಂದ ದುರಿತ ನಿವಾರಣ ಗೋವಿಂದ ಶರಣಜನರಪ್ರಾಣ ಗೋವಿಂದ ತರಳನೋದ್ಧಾರಣ ಕರಿರಾಜವರದನ ತರುಣೆಯ ರಕ್ಷಣ ಗೋವಿಂದ 2 ಜಗದಾಧಾರನೆ ಗೋವಿಂದ ಸುಗಣಗುಣಾಂತರಂಗ ಗೋವಿಂದ ರಘುಕುಲಪಾವನ ಗೋವಿಂದ ಖಗಪತಿವಾಹನ ಗೋವಿಂದ ನಿಗಮಕೆ ಸಿಲುಕದ ಅಗಾಧ ಮಹಿಮ ಜಗತ್ರಯ ಮೋಹನ ಗೋವಿಂದ 3 ನೀಲಮೇಘಶ್ಯಾಮ ಗೋವಿಂದ ಕಾಲಕಾಲಹರ ಗೋವಿಂದ ಪಾಲಸಾಗರಶಾಯಿ ಗೋವಿಂದ ಲೋಲ ವಿಶ್ವರೂಪ ಗೋವಿಂದ ಪಾಲಭಜಕ ಭವ ಜಾಲಹರಣ ಸರ್ವ ಮೂಲಮಂತ್ರ ಹರಿ ಗೋವಿಂದ 4 ಭೂಮಿಜಾತೆಪತಿ ಗೋವಿಂದ ಕಾಮಜನಕ ಶ್ರೀಶ ಗೋವಿಂದ ಕೋಮಲಾಂಗ ರಂಗ ಗೋವಿಂದ ಸ್ವಾಮಿ ಪುಣ್ಯನಾಮ ಗೋವಿಂದ ಶಾಮವರ್ಣನುತ ಪ್ರೇಮಮಂದಿರ ಶ್ರೀ ರಾಮ ದಾಮೋದರ ಗೋವಿಂದ 5
--------------
ರಾಮದಾಸರು
ಭೀಮ ಶೈನನೆ ಸತ್ಯಭಾಮಾ ಪ್ರಿಯನ ಪರಮ ಪ್ರೇಮ ಪಾತ್ರನೆ ಪಾಹಿಮಾಂ ಪ ಭೂಮಿಯೊಳು ಶೇವಿಸುವರಿಗೆ ಸುರ ಭೂಮಿರುಹ ವೆಂದೆನಿಸಿ ಪೊರೆಯಲು ಗ್ರಾಮ ಮೋತಂಪಲ್ಲಿ ಕ್ಷೇತ್ರ ಸುಧಾಮರಿಪುಕುಲ ಭೀಮನೆನಿಸಿದ ಅ.ಪ ರಾಮಕಾರ್ಯವನು ನಿಷ್ಕಾಮದಿ ಸಾಧಿಸಿ ಧಾಮ ಕಿಂಪುರುಷದಲ್ಲಿ ಭೂಮಿಜಾವಲ್ಲಭನ ಶುಭಗುಣ ಸ್ತೋಮಗಾನದಿ ರಮಿಸುತಿರೆ ಬಡ ಭೂಮಿದೇವನ ಪ್ರಾರ್ಥನದಿ ಬಂದೀ ಮಹಾ ಶಿಲೆ ಯೊಳಗೆ ನೆಲಸಿಹ 1 ರಾಜಕುಲಜ ಪಾಂಡುರಾಜ ನಾತ್ಮಜ ಧರ್ಮರಾಜನನುಜನೆನಿಸಿ ರಾಜ ಸೂಯಾಗವನೆ ಮಾಡಿಸಿ ಪೂಜಿಸಿದಿ ಸಿರಿಕೃಷ್ಣನಂಘ್ರಿಯ ರಾಜ ಕೌರವ ಬಲವ ಮದಿಸಿ ವಿರಾಜಿಸಿದ ಸುರರಾಜ ನಮೋ ನಮೋ 2 ಪುಟ್ಟಿಮೇದಿನಿ ಸುರಸದ್ಮದಿ ಗಜ ಪಂಚಾಸ್ಯನೆನಿಸಿಸು ಜನಕತಿ ಮೋದನೀಡಿದ 3 ಗಣಕೆ ಗಂಧವಾಹನನೆನಸಿ ಶೇಷ ಗಿರೀಂದ್ರಯಾತ್ರೆಗೆ ವೃಂದ ಸಲಹುವಿ 4 ಶೇರಿದವನೆ ಧನ್ಯನೋ ಭಜಿಸಿ ವಿಮುಕ್ತನಾದನು ಸುರಋಷಿಯ ಪದವನು 5 ಸುವಿಶಾಲ ಮಂಟಪ ಮಧ್ಯದಿ ಕೈಕೊಳುತ ಭಕುತರ ಗುರುವರ ಪಾಲಿಸೆನ್ನನು 6 ಬಂಗಾರದಾಭರಣಂಗಳಿಂದೊಪ್ಪುತ ಶೃಂಗಾರದಿಂ ಶೋಭಿತ ಸರ್ವೇಷ್ಟದಾಯಕ ಪ್ರಥಮಾಂಗನೆನಿಸಿದ 7
--------------
ಕಾರ್ಪರ ನರಹರಿದಾಸರು
ಭೂಮಿಜೆಯು ಸೀತೆಯು ಜನನಿ ಗರ್ಭವ ವಡೆದು ಬಂದಳು ದನುಜ ವಧಕೆಂದೇ ಪ ದುರುಳ ದನುಜರು ಪೆಸರು ರಾವಣ ಕುಂಭಕರ್ಣರು ಋಷಿ ಜನಂಗಳ ಮುಖವ ಕೆಡಿಸುತ ಮೆರೆಯುತಿರೆ ಕೇಳ್ದು 1 ಭವದ ಭಟ ಶ್ರೀರಾಮಚಂದ್ರನು ಮೂವರನು ಜರ ಕೂಡಿ ಜನಿಸಿದಾ ಭುವನ ಭಾರವ ಪರಿಹರಿಪೆನೆಂದಭಯ ತೋರುತಲೀ 2 ಸಿರಿಲಕುಮಿ ನಿಜವರನು ಜನಿಸಿದ- ನರಿತು ¥ರಮಾನಂದದಲಿ ತಾ ಭರದಿ ಮೈದೋರಿದಳು ಹರಿಗೆ ತಾನರಸಿ ಎನಿಸಿದಳು 3 ವಾನರರ ಸೇನಾಧಿಪನು ಪವ- ಸೂನು ಶ್ರೀ ಹನುಮನೆಂಬುವನು ದಾನವಾರಿ ಶ್ರೀ ರಾಮಚಂದ್ರಗೆ ಭೃತ್ಯನೆನಿಸಿದನು 4 ವಿಪಿನ ಚರವ್ಯಾಜದಲಿ ರಕ್ಕಸ- ರಪರಿಮಿತ ಕೆಡಹಿದನು ಧರಣಿಗೆ ವಿಪರೀತ ಬತ್ತದ ಶರಧಿಯನು ಹನುಮಂತನ್ಹಾರಿದನು 5 ಪ್ರತಿಭಟಿಸಿ ಶ್ರೀ ರಾಮಚಂದ್ರನು ಅತಿಮೆರೆವ ರಾವಣನ ಮಡುಹಿದಾ ಮತಿವಂತ ಹನುಮನಿಗೆ ಇತ್ತಾ ಚತುರವದನ ಪದಾ 6 ಧರಣಿ ಮಗಳಿಂಗೂಡಿ ರಾಮನು ಧರೆಯನೆಲ್ಲವನಾಳಿ ನ್ಯಾಯದಿ ಸ್ವರಗವಾಸಕೆ ತೆರಳಿದನು ನರಸಿಂಹವಿಠಲನು 7
--------------
ನರಸಿಂಹವಿಠಲರು
ಮಂಗಳಾರತಿಎತ್ತಿ ಮಾಮನೋಹರನಿಗೆ ಪ ಅಂಗನೆಯರೆಲ್ಲ ಬಂಗಾರದ ತಟ್ಟೆಯಲ್ಲಿ ಅ.ಪ ವೇದಚೋರನ ಕೊಂದು ಭೂಧರವನು ಪೊತ್ತು ಮೇದಿನಿಯನು ಎತ್ತಿ ಕಂಬದಿ ಬಂದವಗೇ 1 ಭೂಮಿದಾನವ ಕೇಳಿ ಭೂಮಿಪರನು ಸೀಳಿ ಭೂಮಿಜಾತೆಯನಾಳಿ ಭೂ ಭಾರವಳಿದವಗೆ 2 ಮುದ್ದುಕುದುರೆಯ ಏರಿದ ಗುರುರಾಮ ವಿಠಲಗೆ 3
--------------
ಗುರುರಾಮವಿಠಲ
ಮಾತರಿಶ್ವ ಮಹಾರಾಯಾ ನಿನ್ನ ದೂತನಾದೆನೊ ಪೊರಿ ಜೀಯಾ ಪ ಪುರುಹೂತ ಪ್ರಮುಖ ಸುರ ವ್ರಾತವಿನುತ ಶಿರಿನಾಥನ ನಿನ್ನೊಳು ಪ್ರೀತಿಲಿ ತೋರಿಸಿ ನೀತ ಜ್ಞಾನವಿತ್ತು ಮಾತು ಲಾಲಿಸೊ ಎನ್ನ ಮಾತೆಯ ತೆರದಿ ಅ.ಪ ಪ್ರಾಣಾದಿ ಪಂಚರೂಪಕನೆ ಜಗ ತ್ರಾಣ ಭಾವಿ ವಿರಿಂಚನೆ ಮಾಣದೆ ತವ ರೂಪ ಕಾಣಿಸೊ ಮನದಲ್ಲಿ ಪಾಣಿಯುಗವ ಮುಗಿವೆ ಕ್ಷೀಣಪಾಪನ ಮಾಡೊ ರೇಣು ಭಜನೆಯ ಗೈದು ಸರ್ವದ ವೀಣೆ ಪಿಡಿದತಿ ಗಾನ ಮಾಡುತ ಜಾಣನೆನಿಸಿ ಕ್ಷೋಣಿ ಪಾಲಿಪೆ 1 ಮೂಲರಾಮನ ಪಾದಕಮಲಾ ಯುಗಕೆ ನೀಲಷಟ್ಟದ ವರಬಾಲಾ ವಾಲಿಯಾನುಜ ಕಪಿ ಜಾಲಪಾಲಕನನ್ನು ಆಲಿಸಿ ಭೂಮಿಜ ಲೋಲರಾಮನ ಮೈತ್ರ್ಯ ಪಾಲಿಸೀ ಶರಧಿಯನು ನೀನೆ ಲೀಲೆಯಿಂದಲಿ ದಾಟಿ ಸೀತೆಗೆ ಬಾಲರೂಪದಿ ರಾಮವಾರ್ತೆಂiÀi ಪೇಳಿ ವನವನು ಹಾಳುಮಾಡಿದಿ 2 ಪಾತಕÀ ರಾವಣ ಮಗನಾ ರಣದಿ ಘಾತಿಸಿ ಯಮಗಿತ್ತವನಾ ತಾತಗುರು ಜಗನ್ನಾಥವಿಠಲ ನಿಜ ಪೋತನಾಗಿ ಜಗದಿ ಖÁ್ಯತಿಯ ಪಡೆದಿ ರೀತಿ ಏನಿದು ನಿನ್ನ ಪದಯುಗ ದೂತನಾಲ್ಪರಿವ ಮಾತನು ಯಾತಕೇ ಕಿವಿ ಕೇಳದೋ ಕಪಿ ನಾಥ ಪಾಲಿಸೊ ಎನ್ನ ತಾತಾ 3
--------------
ಗುರುಜಗನ್ನಾಥದಾಸರು
ಯತಿರಾಜ ಯತಿರಾಜ ಕ್ಷಿತಿದೇವ ತತಿನುತ ರಾಘವೇಂದ್ರ ಆದಿಯುಗದಿ ಪ್ರಹ್ಲಾದ ಸುನಾಮದಿ ಮೋಹದಿ ಭಜಿಸುತ ಮಾಧವನೊಲಿಸಿದ 1 ಘನ ವಿರಾಗ್ರಣಿ ಜನಪತಿ ಬಾಹ್ಲೀಕ ನೆನಿಸಿ ದ್ವಾಪರದಿ ಜನಿಸಿದ ಗುಣನಿಧಿ 2 ವಾಸವನಾಯಕ ದಾಸಾರ್ಯರಿಗುಪ ದೇಶಗೈದ ಗುರುವ್ಯಾಸ ಪೋಷಿಸೈ 3 ಕ್ಷೋಣಿಯೊಳಗೆ ಕುಂಭಕೋಣ ಸುಕ್ಷೇತ್ರದಿ ವೀಣೆ ವೆಂಕಟಾಭಿಧಾನದಿ ಜನಿಸಿದ 4 ದೀನ ಜನಾಮರಧೇನು ಸುಧೀಂದ್ರರ ಪಾಣಿಪದ್ಮಭವ ಮಾಣದೆ ಕಾಯೋ 5 ತುಂಗಭದ್ರ ಸುತರಂಗಿಣಿ ತೀರದಿ ಕಂಗೊಳಿಸುವ ಶತಪಿಂಗಳ ತೇಜ6 ಜಲಧಿ ಶಶಾಂಕ 7 ಬಾಲನ ಬಿನ್ನಪ ಲಾಲಿಸಿ ಪ್ರೇಮದಿ ಪಾಲಿಪುದೈ ಮಂತ್ರಾಲಯ ನಿಲಯ8 ಪರಿಮಳ ಗ್ರಂಥವ ವಿರಚಿಸಿ ದುರ್ಮತ ಮುರಿದು ಸಜ್ಜನರಿಗೊರೆದ ಮಹಾತ್ಮ 9 ಪರಿಪರಿಭವದೊಳು ಪರಿತಪಿಸುವೆನೈ ಪರಮ ಕರುಣದಲಿ ಪರಿಕಿಸಿ ಪೊರೆಯೊ 10 ಕಾಮಿತದಾಯಕ ಭೂಮಿಜೆನಾಯಕ ಶಾಮಸುಂದರನ ಪ್ರೇಮದ ಸೇವಕ 11
--------------
ಶಾಮಸುಂದರ ವಿಠಲ
ರಾಮಕೋಟಿ ನಾಮಭಜನಾ ನೇಮದಿಂದ ಮಾಳ್ಪನು ಧನ್ಯ ಪ ಪ್ರೇಮಪಾಶದಿಂದಬಿಗಿದುಸ್ವಾಮಿಯನ್ನ ಹೃದಯದಿನೆನೆದು ಅ.ಪ ಶಂಭು ತನ್ನ ಮನದಿನಿತ್ಯ ಇಂಬಿನಿಂದ ಧ್ಯಾನಿಸುತ್ತ ಅಂಬಿಕೆಗನುಮೋದಿಸುತ್ತ ಸಂಭ್ರಮದಿಂದೊರೆದ ಸತ್ಯ1 ನೇಮದಿ ಕಾರ್ಯವನು ಬಗೆದು ಭೂಮಿಜಾತೆಯ ಕಂಡವಗೊಲಿದ 2 ಕರುಣಾಮೂರುತಿಯೊಲುಮೆವಡೆದು ಪರಮಪುಣ್ಯ ವಿಭೀಷಣ ಒರದ 3 ಭರತಭೂಮಿಯೊಳಗೆ ಜನಿಸಿ ಹರಿಯ ಭಕ್ತ ಗಣ್ಯರೆನಿಸಿ ಪುರಂದರ ಕನಕದಾಸರು ಕರುಣದೊರೆದ ಭವತಾರಕವಾ 4 ಸಾಸಿರನಾಮವ ಪಠಿಸಿ ವಾಸುದೇವನಿಗೆ ವಂದಿಸಿ ಭೂಸುರರಾನಂದಿಸುವ ಕೇಶವ ಜಾಜೀಶನ ತೋರ್ಪ 5
--------------
ಶಾಮಶರ್ಮರು
ರಾಮಚಂದಿರ ಶ್ಯಾಮಸುಂದರ ಪ್ರೇಮಸಾಗರಾ ಪ ಭೂಮಿಜಾತೆಯರಸ ಬಂಧುರ ಕೋಮಲಾಕರ ಶರಣಪಾಲಾ ಅ.ಪ ವೇದವಿದಿತಾ ಮೋದಭರಿತ ಶ್ರೀಧರಾಚ್ಯುತ ಭಾರ ನಿನ್ನದು 1 ಶಿಲೆಯ ಸತಿಯಗೈವ ಪಾದವ ತೊಳೆದ ಜನಕನು ಸುಲಭಮಾರ್ಗದಿ ಶಬರಿ ನಿನ್ನಯ ಜಲಜಪಾದ ಸೇವೆಗೈದಳು 2 ಕರುಣವೇ ಶರಣರ ಪರಮಸೌಭಾಗ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮಚಂದ್ರನು ಶೋಭಿಪನಿಂದು ಸದ್ಭಕ್ತಬಂಧು ಪ ಸಾರಸಾಕ್ಷನು ಸಾಮಜವರದನು ಭೂರಿಫಲಪ್ರದ ಭೂಮಿಜೆಯುತನು ಅ.ಪ ಧರೆಯಭಾರವ ತಾಕಳೆಯಬಂದು ಕಾರುಣ್ಯಸಿಂಧು ನರರೂಪವ ಧರಿಸುತ್ರ ನಿಂದು ಕೋದಂಡವ ಪಿಡಿದು ದುರುಳ ದೈತ್ಯರ ಶಿರವನೆ ತರಿದು ಪರಿಪರಿ ವಿಧದಲಿ ಶರಣರಿಗೊಲಿಯುತ ದುರಿತ ಸಂಕುಲವ ಪರಿಹರಿಸಿ ಪೊರೆವ ಶ್ರೀ 1 ಸೂರ್ಯಸುತನ ಸೈನ್ಯದವರ ಸುಮನಸರ ಧೈರ್ಯದಿಂ ಸಮರಗೈದವರ ವೀರಾಧಿವೀರರ ಕಾರ್ಯವ ಸಾಧಿಸಿದಾ ವಾನÀರರ ಪಾರವಶ್ಯರನು ಪರಮೇಷ್ಠಿಯಿಂದ ಧಾರೆಯನೆರೆದಮೃತದಿ ಬದುಕಿಸಿದ ಶ್ರೀ 2 ಘನವಂತ ವಿಭೀಷಣಂಗೆ ಅನುವನು ತೋರಿ ಸಾರಿ ಅನುಜಾತ ಭಕುತಂಗೆ ಅನುಗ್ರಹಬೀರಿ ಆನಂದವೇರಿ ಜನನಿಯರಾಶೀರ್ವಚನವ ಪಡೆದು ಸನುಮತದಿಂ ಪುರಜನರೊಲುಮೆಯೊಳು ದಿನಕರಪ್ರಕಾಶ ಜಾನಕಿನಂದ ಜಾಜೀಶ್ರೀಶ ಶ್ರೀ 3
--------------
ಶಾಮಶರ್ಮರು
ರಾಮಚಂದ್ರವಿಠ್ಠಲನೆ ನೀನಿವನ ಕಾಮಿತಾರ್ಥಗಳಿತ್ತು ಕಾಪಾಡೊ ಹರಿಯೇ ಪ ಭೂಮಿಜೆಯ ರಮಣ ಸುರಸಾರ್ವಭೌಮನೆ ದೇವಪ್ರೇಮ ಈಕ್ಷಣದಿಂದ ನೋಡೊ ದಯಾಸಾಂದ್ರ ಅ.ಪ. ಗುರುದ್ವಾರವಿಲ್ಲದಲೆ | ಗರುಡವಾಹನ ಕರುಣದೊರಕಲಾರದು ಎಂಬ | ಸ್ಥಿರಮತಿಯನಿತ್ತೂಗುರುಭಕ್ತಿ ಹರಿ ಭಕ್ತಿ | ಕರುಣಿಸುತ ವೈರಾಗ್ಯಸ್ಥಿರಮಾಡಿ ಪಾಲಿಪುದು | ತರತಮದ ಜ್ಞಾನಾ 1 ಪತಿ ಪ್ರೀಯಪ್ರಾಕ್ಕುಕರ್ಮವ ಕಳೆದು ಕಾಪಾಡಬೇಕೋ 2 ಮಧ್ವಮತ ಸಿದ್ಧಾಂತ ಪದ್ಧತಿಯ ತಿಳಿಸುತ್ತಬುದ್ಧಿಪೂರ್ವಕ ನಿನ್ನ ಗುಣರೂಪ ಕ್ರಿಯೆಗಳಾಶ್ರದ್ಧೆಯಿಂದಲಿ ಭಜಿಪ ಸದ್ಬುದ್ಧಿ ಪಾಲಿಸುತಮಧ್ವೇಶ ಇವನ ಹೃನ್ಮಧ್ಯದಲಿ ಪೊಳೆಯೋ 3 ಶರ್ವಾದಿ ದಿವಿಜೇಡ್ಯ ದುರ್ವಿಭಾವ್ಯನೆ ದೇವಸರ್ವತ್ರ ಸರ್ವದಾ ತವಸ್ಮøತಿಯನಿತ್ತೂನಿರ್ವಿಘ್ನತೆಯಲಿವನ ಸಾಧನವ ಪೂರೈಸಿಅಸ್ವತಂತ್ರನ ಬಂಧ ಪರಿಹರಿಸಿ ಕಾಯೋ 4 ಭಕ್ತವತ್ಸಲನೆಂಬೊ ಬಿರಿದುಳ್ಳ ಶ್ರೀಹರಿಯೆಭೃತ್ಯನಿಗೆ ಬಪ್ಪ ಅಪಮೃತ್ಯು ಪರಿಹರಿಸೀಸತ್ಯ ಗುರು ಗೋವಿಂದ ವಿಠ್ಠಲನೆ ನೀನಿವಗೆನಿತ್ಯಾಯು ಪ್ರದನಾಗು ಎಂದು ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಲಾಲಿಸಿ ರಘುವರನ ಚರಿತೆಯ ಸಾರ ಪೇಳುವೆ ಸುಖನಾಥನ ಪ ಶ್ರೀ ಲಲಾಮನು ಸುರರ ಮೊರೆಯನು ಭಾರ ಹರಿಸಲು ಲೀಲೆಯಲು ದಶರಥ ನೃಪಾಲನ ಬಾಲನೆನಿಸುತ ಅವತರಿಸಿದನು ಅ.ಪ. ಕುಶಿಸುತನ ಯಜ್ಞವ ರಕ್ಷಿಸಿ ಪಥದಿ ಋಷಿ ಪತ್ನಿಯ ಶಿಲಾರೂಪವ ಬಿಡಿಸಿದ ದೇವ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯ ಕರವನು ಕುಶಲದಲಿ ಪರಿಗ್ರಹಿಸಿ ಲೀಲೆಯ ನಸಮ ಭಾರ್ಗವನೊಡನೆ ತೋರಿದ 1 ತಂದೆ ವಾಕ್ಯವ ಪಾಲಿಸೆ ತಾ ಧರಣಿಗೆ ಬಂದ ಕಾರ್ಯವ ಸಲ್ಲಿಸೆ ಋಷಿಗಳಾಸೆ ತಂದು ತಾ ಮನಕಂಡು ವನಕೆ ಸತಿ ಸೋದರರ ಸಹಿತದಿ ಮುಂದೆ ಗಂಗೆಯ ದಾಟಿ ಭರದ್ವಾಜ ನಿಂದ ಸತ್ಕಾರವನು ಕೊಂಡನು2 ಚಿತ್ರಕೂಟದಲಿರಲು ವಿನಯದಿ ಬಂದು ಭಕ್ತ ಭರತನು ಬೇಡಲು ಪಾದುಕೆಯಿತು ಮತ್ತೆ ದಂಡಕವನ ಪ್ರವೇಶಿಸಿ ದೈತ್ಯರನು ಸಂಹರಿಸಿ ಶರಭಂಗ ಗಿತ್ತು ಮುಕ್ತಿಯ ಕುಂಭಸಂಭವ ನಿತ್ತ ದಿವ್ಯಾಸ್ತ್ರಗಳ ಪಡೆದನು 3 ವರಪಂಚವಟಿಯೊಳಗೆ ಶೂರ್ಪನಖಿಯು ದುರುಳ ಬುದ್ಧಿಯೊಳು ಬರೆ ಕಿವಿಮೂಗ ಕೊಯ್ಸಿ ಹರಿಣರೂಪದಿ ಬಂದ ದೈತ್ಯನ ಹರಣಗೈದಾಶ್ರಮಕೆ ತಿರುಗಲು | ಧರಣಿಸುತೆಯನು ಕಾಣದೆಲೆ ತಾ ನರರ ಪರಿಯಲಿ ಹಂಬಲಿಸಿದನು 4 ವನಜಾಕ್ಷಿ ವೈದೇಹಿಯ ಪುಡುಕುತ ಪಂಪಾ ಸನಿಹಕ್ಕೈತಂದು ವಾಲಿಯ ಸಂಹರಿಸ್ಯವನ ಅನುಜ ಸುಗ್ರೀವನಿಗೆ ಹರುಷದಿ ವಿನುತ ವಾನರ ರಾಜ್ಯದೊಡೆತನ ವನು ಕರುಣಿಸಿದ ಬಳಿಕ ಜಾನಕಿ ಯನು ಪುಡುಕೆ ಕಳುಹಿದನು ಕಪಿಗಳ 5 ಸ್ವಾಮಿಯ ಸ್ತುತಿಗೈಯುತ ಶ್ರೀ ಹನುಮಂತ ಆ ಮಹೋದದಿಯ ದಾಟುತ ಲಂಕೆಯ ಪೊಕ್ಕು ಭೂಮಿಜಾತೆಯ ಕಂಡು ರಾಮನ ಕ್ಷೇಮ ವಾರ್ತೆಯ ತಿಳುಹಿ ಬಹುಜನ ತಾಮಸರ ಸದೆಬಡಿದು ರಾವಣ ನಾ ಮಹಾ ನಗರಿಯನು ದಹಿಸಿದ 6 ಮರಳಿ ರಾಮನ ಬಳಿಗೆ ಬೇಗದಿ ಬಂದು ಮರುತ ಸುತನು ರಾಮಗೆ ಸೀತೆಯ ಕ್ಷೇಮ ವರುಹಿ ಚೂಡಾಮಣಿಯ ನೀಡಲು ಕರದಿ ಕೈಕೊಂಡದನು ನೋಡುತ ನರರ ಪರಿಯಲಿ ಹರುಷಬಾಷ್ಪವ ಸುರಿಸಿದನು ಶ್ರೀ ಕರಿಗಿರೀಶನು 7
--------------
ವರಾವಾಣಿರಾಮರಾಯದಾಸರು