ಒಟ್ಟು 143 ಕಡೆಗಳಲ್ಲಿ , 44 ದಾಸರು , 137 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯಾ | ಶರಣಾಶ್ರಯಾ | ಪರಮಾ ನಂದೋದಯಾ | ಗರಿಯೋ ನಿಮ್ಮದಯಾ | ಚರಣಕ ನಂಬಿಹೆನಯ್ಯಾ | ತರಳನು ನಾನತಿ ಜೀಯಾ | ಅರಿಯೆನು ಅನ್ಯೋಪಾಯಾ | ಪಾವನ ಕಾಯಾ 1 ಅಘಹಾರಿ | ಭಕುತಿಯ ದೋರಿ | ಸುಗಮವ ತೋರಿ | ನಿಗಮಾರ್ಥ ಸಾರಿ | ಉಗಮದ ಬೋಧವ ಬೀರಿ | ಪರಿ | ಬಗೆವದು ದೀನೋದ್ಧಾರಿ | ಭಕುತರ ನಿಜ ಸಹಕಾರಿ2 ನಿನ್ನವನಾ | ಮುನ್ನಗಾಯ್ದನಾ | ಎನ್ನೊಳಿಹನ್ಯೂನಾ | ಇನ್ನಾರಿಸುದೇನಾ | ಬೆನ್ನವ ಬಿದ್ದಿಹದೀನಾ | ಬನ್ನ ಬಡಿಸದನುದಿನಾ | ಚನ್ನಾಗಿ ಕಾಣಿಸಿ ಖೂನಾ | ಮನ್ನಿಸು ಹಿಡಿದಭಿಮಾನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಿನಾ ಬಲಗೊಂಬೆ | ಪರಗತಿ ಪಡಕೊಂಬೆ | ಸಿರಿಯಾ | ಧರಿಯಾ | ಧೊರಿಯಾ | ಚರಿಯಾ | ಸಾರಿ ಬೀರಿ ತಾರಿಸುವ ಪಾರಾವಾರ ಮಹಿಮನಾ ಪ ಶುಭ ಚರಣಕೆರಗಿ | ಕೆಡ ಗುಣಗಳ ನೀಗಿ | ಇಡುವಾ | ತುಡುವಾ | ಮುಡುವಾ | ಕುಡುವಾ | ನುಡಿ ನುಡಿಗಳಲ್ಲಿ ಬಿಡದೇ ಅಡಿಗಡಿಗೆ ನೆನೆವುತಾ 1 ಹರಿಯಲ್ಲರೊಳಗಿರಿಸೀ | ಹಮ್ಮಮತೆಯನೆ ಬಿಡಿಸಿ | ದೋರಿ ದೋರಿ ಅರಿವೈರಿ ಬೇರೆ ತೋರಿಸಿದನಾ 2 ಮೂರ್ತಿ | ಆರವಾ | ಮುರವಾ | ಘನದಿರುವ್ಹಾ ಪರವಲಿಟ್ಟನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಾಲಕೃಷ್ಣ ಬಾರೊ ಗೋವಿಂದ ಗೋಪಾಲಕೃಷ್ಣ ಬಾರೊ ಪ. ಮಾಧವ ಗೋಪಿಯ ಕಂದ ಬಾರೊ ಅ.ಪ. ನವನೀತ ಚೋರ ಸುಂದರ ಮೂರುತಿ ಬಾ ಕೃಷ್ಣ ಸುಂದರ ಚಂದನ ಗಂಧ ಲೇಪಿತಾನಂದ ಅಂದದಿ ಮೋಹಾಕಾರ ಮುಕುಂದ 1 ಮುರಳೀಧರನೆ ಮುರಮರ್ಧನನೆ ಚಂದ್ರವಂಶನೆ ಬಾ ಕೃಷ್ಣ ಹರುಷವ ಬೀರಿ ಚರಣವ ತೋರಿ ವರಗೆಜ್ಜೆ ನಾದದೊಳು ಸುಂದರ 2 ಚಂದಿರ ಸದೃಶಾನಂದನೆ ಬಾ ಬಾ ಕುಂದರದನೆ ಬಾ ಶ್ರೀಕೃಷ್ಣ ಅಂದದ ಪದುಮಿಣಿವಲ್ಲಭ ಶ್ರೀ ಶಾ ಶ್ರೀ ಶ್ರೀನಿವಾಸನೆ ಬಾ ಗೋವಿಂದಾ 3
--------------
ಸರಸ್ವತಿ ಬಾಯಿ
ಘನನಂದನ ರಾಮಚಂದ್ರ ಪ ತಂದೆ ತಾಯಿ ಬಂಧು ನೀನು ಸಂದ ಯೆನ್ನ ಮಿತ್ರನೀನು ಕಂದನಿಗಾನಂದ ಬೀರಿ ಅಂದವಾದ ಪಾದತೋರು1 ಸ್ವಾಮಿ ನಿನ್ನ ನಾಮವನ್ನು ನೇಮದಿಂದ ಧ್ಯಾನಿಪೆನ್ನ ಪ್ರೇಮದಿಂದ ಕ್ಷೇಮ ಕೊಟ್ಟು ಸಾಮಗಾನಗೈಸು ವಿಷ್ಣು 2 ಅಗ್ರಹಾರಪಾಲಾಧೀಶ ಅಗ್ರಪೂಜೆಗೊಂಬ ಶ್ರೀಶ ಸುಗ್ರೀವನ್ನ ಪೊರೆದ ಉಗ್ರದೈತ್ಯನಾಶ ಹೆಜ್ಜಾಜೀಶ 3
--------------
ಶಾಮಶರ್ಮರು
ಚಾರು ಚರಣವ ಸಾರಿದೆ ಶರಣ ಮಂದಾರ ಕರುಣವ ಬೀರಿ ಭವವನಧಿ ತಾರಿಸು ತವಕದಿ ಸೂರಿ ಸುಧೀಂದ್ರ ಕುಮಾರ ಉದಾರ ಪ ಪಾದ ವನರುಹ ಧ್ಯಾನ ಪ್ರಣವನ ಸ್ತವನ ಅರ್ಚನೆ ಮಾಳ್ಪ ನಾನಾ ಜನರ ವಾಂಛಿತವೀವಗುಣ ಪೂರ್ಣ ಜ್ಞಾನ ಧನಪ ಪಾಲಿಸೆನಗೀಕ್ಷಣ ನಿನ್ನಾಧೀನ ಮನುಜನ ನೀ ಪ್ರತಿದಿನದಿ ದಣಿಸುವುದು ಘನವೆ ಗುರುವೆ ಪಾವನತರ ಚರಿತ 1 ಪಾದ ಕೀಲಾಲಜ ಮಧುಪಾ ಬಾಲಕನ ಬಿನ್ನಪವ ಲಾಲಿಸೋ ಮುನಿಪ ತಾಳಲಾರೆನೊ ತಾಪತ್ರಯದ ಸಂತಾಪ ಕೇಳೋವಿಮಲಜ್ಞಾನ ಶೀಲ ಸ್ವರೂಪ ಭೂಲಲನಾಧವ ಕೋಲನಂದನಾ ಕೂಲಗವರ ಮಂತ್ರಾಲಯ ನಿಲಯ 2 ಕಲಿಕಲ್ಮಷವಿದೂರ ಕುಜನ ಕುಠರಾ ನಳಿನಾಕ್ಷ ವಿಮಲ ಶ್ರೀ ತುಲಸಿಯ ಹಾರ ಗಳ ಸುಶೋಭಿತ ಕಮಂಡಲ ದಂಡಧರಾ ಜಲಧಿ ವಿಹಾರಾ ಸುಲಲಿತ ಕರುಣಾಂಬುಧಿಯೆ ಜಗನ್ನಾಥ ವಿ ಠಲನೊಲಿಮೆಯ ಪಡೆದಿಳೆಯೊಳು ಮೆರೆದಾ 3
--------------
ಜಗನ್ನಾಥದಾಸರು
ಚೆನ್ನಕೇಶವದೇವರಾಯಇನ್ನು ಸುಖಿಪೆನೆಂತೆನಗೆ ಅನ್ಯಥಾ ಗತಿಯಿಲ್ಲ ಪ. ಅನುದಿನ ಸಂದಣಿಸೆ 1 ಉಡುವಾಸೆ ನುಡಿವಾಸೆ ಬೇಡುವಾಸೆ ಕೊಡುವಾಸೆಒಡಲ ತುಂಬಬೇಕೆಂಬ ಆಸೆಕೊಡದವನ ಬಡಿದು ಜಡಿವಾಸೆ ಬಿಡದಿರಲು 2 ಹಯವದನನೆ ದೇವ ನಿನ್ನ ನೆನೆಯದಿದ್ದೀಮನಕೆಭಯವೆಲ್ಲಿಹುದು ಜಗನ್ನಾಥ ನಿನ್ನದಯವನೆ ಬೀರಿ ನಿರ್ದಯನನ್ನುದ್ಧರಿಸೊ 3
--------------
ವಾದಿರಾಜ
ಛಳಿಸದಿರು ಚಂಡಿ ತನುವೆ ನೀನುಒಳಗಾಗದೊರಟುತನವೆ ತರವೆ ಪಗರ್ಭವಾಸವಗಳಿಸಿದೆ ಹಾಗೆ ನೀನರ್ಭಕತ್ವದಲಾಡಿದೆ ಬಿಡದೆನಿರ್ಭಯದಿ ನೀ ಬದುಕಿದೆ ಭೋಗದಲಿದುರ್ಭಗರ ದಾರಿಗೊಲಿದೆ ನಲಿದೆ 1ಕಾಮಾಂಧಕಾರಕೆಳೆದೆ ನನ್ನ ನಿಷ್ಕಾಮದಲಿ ನಿಲಿಲೀಸದೆ ಕಳದೆನೇಮಕ್ಕೆ ನೀನಲಸಿದೆ ಶೀತೋಷ್ಣಭೀಮಕ್ಕೆ ನೀ ಬೆದರಿದೆ ಬರಿದೆ 2ಕಾಲಗಳ ಬಹು ಕಳಸಿದೆ ವ್ಯರ್ಥದಲಿಶ್ರೀಲೋಲನನುಸರಿಸದೇ ಹೋದೆಮೂಲವನೆವರೆ ಮಾಡಿದೆ ದೋಷಗಳಕೀಲುಗಳಿಗಳಿಕಾಲ್ನೀಡಿದೆ ಜಡಿದೆ 3ಮನವೀಗ ಮಾಡಿತಿನಿತಾ ನಾನಿದಕೆಮನೆ ಮಾತ್ರವಾಗೆ ಮಾತನಿಡುತಾತನುವಿನಲಿ ತಪ್ಪಿಡಿಯುತಾ ಯಾಕೆ ನೀನೆನುವೆಯನೆ ನೀನೆ ಚಿತ್ತವ್ರಾತಾ 4ಮನ ನೀನೆ ನೀನೆ ಮನವೂ ಕ್ರಿಯೆಯಮನ ಮಾಡೆ ಮೂಡ್ದೆತನುವೂ ಘನವೂನೆನೆಯಲೆರಡಿಲ್ಲ ನೀವು ಏಕತ್ವವೆನುತೆಂದೆನಿರೆ ಬಂಧವೂ ದಿಟವೂ 5ಕಾರಣವೆ ಮನವಾದರೆ ಅದರೊಡನೆಹೋರುವೆನು ನಾನು ಹೆದರೆನದರೆತೋರೆ ನೀ ಮುಂದೆ ಬೇರೆ ಬಂಧನವೂಬೀರಿತಿದು ನೀ ಕಯ್ಯಾರೆ ತಾರೆ 6ನೀ ಬಾರದಿರುವೆಯಲ್ಲ ುೀಮಾತನಾ ಬಾಯಲೆನ್ನೆನಲ್ಲಾ ಸೊಲ್ಲಾಆ ಬಗೆಯ ಮೂಡಿತಿಲ್ಲ ಇದಿರಾಗಿನೀ ಬಂದು ನಿಲಲು ಸಲ್ಲಾ ಹೊಲ್ಲಾ 7ನನಗುಂಟು ಮನಸಿಗುಂಟು ವ್ಯವಹಾರನಿನಗಾಗಬಾರದಂಟೂ ನಂಟುಜನಿಸಿಬರೆ ಬಂತುಗಂಟು ಆವರಣವೆನಗಾುತು ಪದರವೆಂಟೂ ಬಂಟೂ 8ಅನುಮಾನವಿಲ್ಲವಿಸಿದಕೆ ಪ್ರತ್ಯಕ್ಷವನುಭವಿಸಿ ಪೇಳ್ದೆನದಕೆ ಅಳುಕೆಜಿನುಗದಿರು ಮುಂದೆ ಜೋಕೆ ಹರಿಯಂಘಿü್ರಯನುಸರಿಸದಂದವೇಕೆ ಬೇಕೆ 9ಹರಿಪಾದಪದ್ಮವನ್ನು ನಾನುಬೆರೆವೆ ನೀ ಬಳಲಿಕೆಯನೂ ುನ್ನೂತರಬೇಡ ತಥ್ಯವನ್ನು ಪಡೆವದಕೆಬರೆ ಮುಂದೆ ಬಹುಮಿತ್ರನೂ ನೀನು 10ಶರೀರವಿರೆ ಶ್ರಮವು ನಿನಗೆ ಜನ್ಮಗಳಧರಿಸುತ್ತ ದಣಿವು ನಿನಗೆ ಹೀಗೆಸರಿಯಾಯ್ತು ದುಃಖ ನಮಗೆ ಇದಕಂಡುಇರುವ ಬಗೆ ವಿಶ್ವದೊಳಗೆ ಹೇಗೆ 11ಅದರಿಂದ ನೀನು ನಾನು ಒಂದಾಗಿಹುದುಗಲಾದಿಯನೀಶನೂ ತಾನುಪದವಿಯನು ಪಾಲಿಸುವನು ಬಳಿಕಲಿನ್ನುದುಸುವಕಷ್ಟಗಳನೂ ಕೊಡನೂ 12ಬರುವದಾನಂದ ನಮಗೆ ತಿರುಪತಿಯವರದ ವೆಂಕಟರಮಣಗೆ ಎರಗೆಭರಿತಾತ್ಮಗಾವು ಹೊರಗೆ ಹೀಗೆ ನಾವಿರಲುಂಟು ದೇವನೊಳಗೆ ಸಲುಗೆ 13ಕಂ||ಛಂದಾನುವೃತ್ತಿ ಮೂರ್ಖರಿಗೆಂದಾಡಿದ ನುಡಿಯು ಸತ್ಯವಾುತೀ ದೇಹವುಮುಂದೊರದೆ ಪೇಳಲುತ್ತರನೀಂದೊಡಬಡಿಸುತ್ತ ಕೇಳಿಕೊಳುತಿಹದೊಲವಿಂ
--------------
ತಿಮ್ಮಪ್ಪದಾಸರು
ಜಯ ಜಯಾ ದೇವ ದೇವಾ ಮಾರ್ತಾಂಡ ಭೈರವಾ ದಯದಿಂದ ಪಾಲಸೆನ್ನಾ ಭಕ್ತರನುದಿನಕಾವಾ ಪ ಶರಣರ ಮೊರೆಯ ಕೇಳಿ | ಶಿವ ಅವತಾರವ ತಾಳಿ ಭವರೂಪಮಣಿಮಲ್ಲನಾ | ಮರ್ಧಿಸಿದೆ ತನುಶೀಳಿ 1 ವಿವೇಕಹಯವನೇರಿ | ಭೋಧನಾಸ್ತ್ರವನು ದೋರಿ ಅವಗುಣ ಬಲಮುರಿದೇ | ಜಗಕಭಯವ ಬೀರಿ 2 ಮ್ಯಾಲಕರದಿಂದ ಉಘೇ | ಯನ್ನಲು ಕೂಗಿ 3 ಘನಗುರು ಮಹಿಮಪತಿ | ಸುತ ಪ್ರಭು ಮಾಪತಿ ಮನದೊಳು ಜ್ಞಾನ ದೀಪಾ | ದಿಂದಬೆಳಗುವೆ ಆರತಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯಜಯವೆನ್ನಿರಯ್ಯ ಜ್ಯೋತಿರ್ಮಯಗೆ ಜಯಜಯವೆನ್ನಿರೊ ಜಯಜಯವೆನ್ನಿರೊ ಧ್ರುವ ಕಂಗಳದೆರಸಿ ಅಂತರಂಗದೋರಿದವಗೆ ಮುಂಗಡÀಲೆ ಇದ್ದು ಸುಸಂಗದೋರಿದವಗೆ ಹಿಂಗಿಸೆನ್ನ ಭವಭಯ ಭಂಗಮಾಡಿದವಗೆ ಮಂಗಳಾತ್ಮಕನ ಸಂಗಸುಖ ಬೀರಿದವಗೆ 1 ಆರು ಅರಿಯದ ವಸ್ತು ಸಾರಿದೋರಿದವಗೆ ಶಿರದಲಿ ಕರವಿಟ್ಟು ಕರುಣಿಸಿದವಗೆ ಮೂರುಗುಣಕೆ ಮೀರಿದ ತಾರಕ ಗುರುವಿಗೆ ಸಾರವಾಡದಲಿ ನಿಂದು ಪಾರದೋರಿದವಗೆ 2 ಸೋಹ್ಯ ಸೊನ್ನೆಯದೋರಿಸಿನ್ನು ಸಾಹ್ಯ ಮಾಡಿದವಗೆ ಗುಹ್ಯ ಗುರುತ ತೋರಿದ ಗುರುಮೂರ್ತಿಗೆ ಕೈಪಿಡಿದು ಮಹಿಪತಿಗೆ ದಯಮಾಡಿದವಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಂಗಿ ಮೊಸರ ಸುತ್ತ ಚೆಲ್ಲಿದ ಮುದ್ದುರಂಗ ಬೆಣ್ಣೆಯ ಮೆದ್ದ ಬಲ್ಲಿದ ಪ. ಪುಟ್ಟ್ಟಿದಾಗಲೆ ಮೂಲರೂಪವ ತೋರಿಅಟ್ಟಿದ ಸುಜನರ ತಾಪವಕೊಟ್ಟ ನಮಗೆ ಜ್ಞಾನದೀಪವ ಕೃಷ್ಣತೊಟ್ಟ ದುರ್ಜನರೊಳು ಕೋಪವ1 ಯಶೋದೆಯ ಮೊಲೆವಾಲನುಂಬಾಗ ನಸುಬಿಸಿನೀರನೆ ಎರೆಸಿಕೊಂಡಾಗಶಿಶುವು ಪೂತಣಿಯ ಕೊಂದಿತೆಂಬಾಗ ರ-ಕ್ಕಸರಿಗೆ ಇವ ಬಲುದಿಮ್ಮಿಗ 2 ಇಂದಿರೆಯನು ಬಿಗಿದಪ್ಪಿದ ಸಖವೃಂದಾರಕರೊಳಗೊಪ್ಪಿದಕಂದರ ಕಲ್ಲಿಂದ ಜಪ್ಪಿದ ತಾಯಿಹಿಂದಟ್ಟಿ ಬರಲೋಡಿ ತಪ್ಪಿದ3 ಪುಟ್ಟ ಕೃಷ್ಣನ ಕಟ್ಟಬೇಕೆಂದು ತಂ-ದೊಟ್ಟಿ ಹಗ್ಗಗಳ ತಂದುಬೆಟ್ಟವಾಗಿರಲು ದುರ್ಜನರ ಕೊಂದು ಈಗಗಟ್ಟಿಮಾಡಿದಳಿವ ಹರಿಯೆಂದು4 ಒರಳನೆಳೆದ ಬಲುಮತ್ತಿಯ ದೊಡ್ಡಮರನ ಕಿತ್ತಿದ ನೋಡಿವನರ್ಥಿಯತರಳಾಕ್ಷಿ ಕೃಷ್ಣನ ನೆತ್ತಿಯ ಬೆಣ್ಣೆಸುರಿಯೆ ಪಾಡಿದಳವನ ಕೀರ್ತಿಯ5 ಗಗನಕೆ ಏರಿ ವಾತನ ಕೊಂದ ನೀರೊ-ಳಗೆ ಪೊಕ್ಕು ತಂದೆಯ ಕರೆತಂದಖಗನಂತೆ ಕಡಹದಮರದಿಂದ ಹಾರಿವಿಗಡ ಸರ್ಪನ ಹೆಡೆಯೇರಿ ನಿಂದ6 ತುಳಿದಹಿತಲೆಯನು ಬಿಚ್ಚಿದನಾಗಲಲನೆಯರುಕ್ತಿಗೆ ಮೆಚ್ಚಿದ ಅಲರು ಮಳೆಯ ಸುರಿಯ ಹಚ್ಚಿದ ಕೃಷ್ಣಖಳರಳಕೆಗಳ ಕೊಚ್ಚಿದ 7 ನಂದನ ರಾಣಿಗೆ ಮೆಚ್ಚಿದ ತಾಯಚಂದದ ಕೈಗಳಿಂದುಚ್ಚಿದಇಂದೆನ್ನ ಮನೆಯೊಳು ಸಚ್ಚಿದಾ-ನಂದ ಹಿಡಿಯೆ ಕೈಯ್ಯ ಕಚ್ಚಿದ 8 ಕಣ್ಣೊಳು ಪಾಲನುಗುಳಿ ಪೋದ ಈಚಿಣ್ಣಗೆ ನೋಡಿದೆ ವಿನೋದಮಣ್ಣಮೆದ್ದಖಿಳವ ತೋರಿದ ಕೃಷ್ಣಸಣ್ಣ ಬಾಯನು ಮುಚ್ಚಿ ಮಗುವಾದ 9 ಕುಸುಮವೆತ್ತ ಖಡುಗ ವೆತ್ತ ಈಹಸುಗೂಸು ಎತ್ತ ಪರ್ವತವೆತ್ತಹಸಿವು ತೃಷೆಯ ಬಿಟ್ಟು ಗಿರಿಯ ಪೊತ್ತ ಈಶಶಿಮುಖಿ ಜನಕಿವನು ಸುಖವಿತ್ತ10 ಮೂರು ಲೋಕವಾಳುವ ಸಖಿಯರ ಗಂಡ ನೀಲ-ವರ್ಣನು ತೊಂಡರತೊಂಡ ಬಾಲಕನೀತಸರ್ವೇಶ ಕಂಡಾ ಇವಕೀಳೆಂದವ ಜಗದಲಿ ಭಂಡ 11 ಅರಳೆಲೆ ಮಾಗಾಯಿ ಮುಂಗೈಯ್ಯಲಿಟ್ಟುಸರಭಂಗಿ ಕೂಡಿ ತ್ರಿಭಂಗಿಯವರವೇಣುವನು ತನ್ನಂಗೈಯಲಿಟ್ಟ-ಧರದಲ್ಲೂದಿದ ನಮ್ಮ ರಂಗಯ್ಯ12 ಪಶುಪಕ್ಷ್ಷಿಗಳು ತರತರದಲ್ಲಿಎಸೆವ ಗೀತವ ಕೇಳಿ ವನದಲ್ಲಿಹಸುಳೆಯ ನೆನೆಯುತ್ತ ಮನದಲ್ಲಿ ಪರ-ವಶವಾದುವು ಆಕ್ಷಣದಲ್ಲಿ13 ಕೊಳಲೂದಿ ಸುರರನ್ನು ಸೋಲಿಸಿದ ರಾಗಕಲೆಗಳಿಂದೆಲ್ಲವ ಒಲಿಸಿದಇಳೆಯೊಳು ಗೀತವ ಕಲಿಸಿದ ಇಂತುಒಲಿದು ವಿಠಲ ನಮ್ಮ ಪಾಲಿಸಿದ14 ತÀರುಲತೆಗಳು ಪುಳಕಿತವಾಗೆ ಈಚರ ಪ್ರಾಣಿಗಳೆಲ್ಲ ಸ್ಥಿರವಾಗೆಹರಿಯ ವೇಣುನಾದ ಹೊಸಬಗೆ ಅತಿಹರುಷವ ನೋಡಲೈದಿದೆವೀಗ 15 ಚೆಲ್ಲಿದ ಕೈಯಿಂದಮಲ ನೀರ ನಮ್ಮೆಲ್ಲರ ನೀರಿಗಂಜನು ಧೀರನಲ್ಲ ನಾವಂದ ಮಾತನು ಮೀರನಿವಸುಲಭನೊಮ್ಮೆ ಮೊಗವ ತೋರ 16 ಪಾಲನೊಲೆಯೊಳಿಟ್ಟು ಪೋದೆವು ಈಕಾಲಭೂಷಣ ಕೈಗಾದವುಬಾಲರ ಕೆಲರು ಮರೆತು ಪೋದೆವು ಗೋ-ಪಾಲ ಸಂಗಕ್ಕೆ ಮರುಳಾದೆವು 17 ಉಂಬುವರಿಗೆ ಬಡಿಸಲಿಲ್ಲ ಪತಿಎಂಬುವನಾಜ್ಞೆಯೊಳಗೆ ನಿಲ್ಲದೆನಂಬಿದೆವು ನಾವು ಹರಿಯಲ್ಲದೆ ಅನ್ಯರೆಂಬುದು ಭಕ್ತ ವರ್ಗಕೆ ಸಲ್ಲದೆ18 ಧೇನು ಮಾತ್ರದಿಂದ ಫಲವೇನು ಕಾಮ-ಧೇನು ಶ್ರೀಕೃಷ್ಣನ್ನ ಕರೆದೆನುಮಾನಿನಿ ಮೊದಲು ಕರೆವಧೇನು ಬಿಟ್ಟುಜಾಣೆ ಸೇರಿದಳು ಕೃಷ್ಣನ ಪದವನು 19 ಶಿಶುವ ಬಿಟ್ಟೊಬ್ಬಳು ನಿಜಕನ್ಯೆತನದೆಸೆಯ ತೋರಿಸಬಂದಳಚ್ಚುತನ್ನಎಸೆವ ಶ್ರೀಪತಿ ತನ್ನ ರಮಣನು ಎಂದುಸುಟಳು ಮೊದಲಾಳ್ದ ಗಂಡನ 20 ಲಲನೆ ಕಣ್ಣಂಜನವಬಿಟ್ಟಳು ಜ್ಞಾನಚೆಲುವನಂಜನಕೊಡಂಬಟ್ಟಳುಒಲೆಯಪಾಲಗ್ನಿಗೆ ಕೊಟ್ಟಳು ಕೃಷ್ಣ-ಗೊಲಿದಧರ ಮನವಿಟ್ಟಳು21 ಇಂತು ತೊರೆದು ವಿಷಯಂಗಳ ಆ ಶ್ರೀ -ಕಾಂತನೆ ಕಾವ ಜಗಂಗಳಚಿಂತೆಯ ತೊರೆದೆವು ಮಂಗಳ ಲಕ್ಷ್ಮೀ -ಕಾಂತನೆ ಕಾಯೊ ಜಗಂಗಳ 22 ಕೇಶಿಯೆಂಬ ದೈತ್ಯನ ಕೊಂದ ಖಳನಾಶದಲಿ ಸದಾ ಮುಕುಂದಆ ಸಮಯದಲಿ ಅಕ್ರೂರ ಬಂದ ಅವಂಗೆಲೇಸÀಪಾಲಿಸಿ ಕೃಷ್ಣ ನಡೆತಂದ 23 ಮಧುರೆಯಲಿ ಮಲ್ಲರ ಸೋಲಿಸಿದ ತನ-ಗಿದಿರಾದ ಕಂಸÀನನೊರೆಸಿದಕದನಕೋಲಾಹನೆನಿಸಿದ ನಮ್ಮಮದನಶರಕೆ ಗುರಿಮಾಡಿದ24 ಎಲ್ಲ ದೇವರನಿವ ಮೀರಿದ ಸಖಿಬಲ್ಲವರಿಷ್ಟವ ಬೀರಿದಕಲ್ಲಕಂಬದಿ ಬಂದು ತೋರಿದ ಖಳರೆÉಲ್ಲಿದ್ದರಲ್ಲಿಗೆ ಹಾರಿದ 25 ದಯದಿಂದ ಸಖನಮಗಾದವ ಚೆಲ್ವಹಯವದನ್ನ ಕೃಪೆಯಾದವನಯದಿ ಜಲವ ಪೊಕ್ಕು ಪೋದವ ವೈ-ರಿಯ ಕೊಂದು ವೇದವ ಕಾಯ್ದವ 26
--------------
ವಾದಿರಾಜ
ತಪ್ಪ ಪಾಲಿಸಯ್ಯ ತಿಮ್ಮಯ್ಯ ತಪ್ಪ ಪಾಲಿಸಯ್ಯಪ. ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳು ಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆಅ.ಪ. ಜಲಜನಾಭ ನಿನ್ನ ಮಹಿಮೆಯ ನೆಲೆಯನರಿಯದೆನ್ನ ಮನವದು ನೆಲೆಯಿಲ್ಲದ ಭವಜಲಧಿಯೊಳಾಡುತ್ತ ಲಲನಾ ವಿಷಯದ ಬಲೆಗೆ ಮೋಹಿಸಿ ಮನ ಸಿಲುಕಿ ಮಲಿನವಾಯ್ತು ತತ್ವದ ನೆಲೆಯನರಿಯದಾಯ್ತು ಹೀಗೆನ್ನುತ ಕಳೆದುಹೋಯ್ತು ವಿಂಶತಿ ವತ್ಸರಗಳು ತೊಳಲಿ ಸಕಲ ಭವದೊಳಗಾರ್ಜಿತವಹ1 ಹಾಳು ಮನವು ಕೂಡಿ ನಾನಾ ಚಾಳಿ ಮಾಳ್ಪುದಾಡಿ ಬುದ್ಧಿಯ ಪೇಳಿದಷ್ಟು ದುಶ್ಯೀಲವೆ ಮಾಳ್ಪುದು ಆಲೋಚನೆಯೊಳಗೆ ಬಿದ್ದರೆ ಮೇಲಿಲ್ಲವು ಕ್ಷಣಕೆ ತನ್ನಯ ಶೀಲವನೆ ಸ್ವೀಕರಿಸುತಿರುವುದು ಪೇಳಲೇನು ಕರುಣಾಳು ನೀ ಯೆನ್ನಯ2 ನಾನಾ ಕಷ್ಟಪಟ್ಟೆ ಇನ್ನಾದರು ಮಾನಿಸಬೇಕಷ್ಟೆ ಎನ್ನೊಳು ಊನ ಗ್ರಹಿಸಿ ಅನುಮಾನ ಸಾಧಿಸಿದರೆ ನಾನೆಂಬುವದೇನು ಸ್ವತಂತ್ರವ ಕಾಣೆನು ಎನ್ನೊಳಗೆ ಸಂತತ ನೀನೇ ಗತಿಯೆನಗೆ ಇದಕನು- ಮಾನವಿಲ್ಲ ಪಾದಾನತಜನರಾ ಧೀನನೆಂಬ ಬಿರುದಾನಬೇಕಾದರೆ3 ಅಪರಾಧಿಯೆ ನಾನು ಹೇಗೈ ಅಖಿಲಾತ್ಮನು ನೀನು ಹೃದಯದಿ ಕೃಪೆಯ ಬೀರಿ ತೋರಿಪ ಪರಮಾತ್ಮನೆ ಚಪಲನಾಗಿ ಎನ್ನುಪಮೆಗೆಯೊಡ್ಡಿದೆ ಸಫಲವಾಯ್ತು ಎನಗೆ ಕೀರ್ತಿಯು ಅಪಕೀರ್ತಿಯು ನಿನಗೆ ಪಾದವ ಜಪಿಸುವಂತೆ ಕರುಣಿಪುದಿನ್ನಾದರೂ ಕಪಟವಾಯ್ತೆ ಸರೀಸೃಪಗಿರಿರಾಜನೆ4 ದೂಷಣಾರಿ ನಿನ್ನ ಪಾದದ ದಾಸಗೈಯ್ಯೊ ಎನ್ನ ಎನ್ನೊಳು ದೋಷವಿಲ್ಲ ಜಗದೀಶ ಜನಾರ್ದನ ದಾಶರಥಿಯ ಕರುಣಾಶರಧಿಯೊಳಗೆ ಈಸಾಡಿದ ದಾಸ ಕಾರ್ಕಳಾ ಧೀಶ ಶ್ರೀನಿವಾಸ ರವಿಶತ ಭಾಸ ಶ್ರೀಲಕ್ಷ್ಮೀನಾರಾಯಣ ಸ ರ್ವೇಶ ಭಕ್ತಜನಪೋಷ ನೀಯೆನ್ನಯ5
--------------
ತುಪಾಕಿ ವೆಂಕಟರಮಣಾಚಾರ್ಯ
ದಾಸಗುರೂ | ದಾಸಗುರೂ | ವಾಸವ ನಾಮಕ ಪ ಭೂಸುರರಿಗೆ ಧನರಾಶಿ ಸಮರ್ಪಿಸಿ ವ್ಯಾಸರಾಯರುಪದೇಶಗೊಂಡ ಹರಿ ಅ.ಪ ಜಲಜಭವನ ಪಿತನಾಜ್ಞೆಯಲಿ ಕಲಯುಗದಲಿ ಜನ್ಮ ತಾಳುತಲಿ ಅಲವ ಬೋಧಾಮೃತ ನೆಲೆಯನು ಸುಲಭದಿ ತಿಳಿಗನ್ನಡದಲ್ಲಿ ತಿಳಿಸಿ ಸಲುಹಿದ 1 ಪವನದೇವನ ಒಲಿಸುತಲಿ | ಮಾ ಧವನ ಸ್ತುತಿಸಿ ಸಲೆ ಕುಣಿಯುತಲಿ ಕವನದಿ ಭಕುತಿಯ ನವವಿಧ ಮಾರ್ಗವ ಅವನಿಗೆ ಬೀರಿದ ದಿವಜ ಮೌನಿವರ 2 ಕಾಮಿತ ಫಲಗಳ ಗರಿಯುತಲಿ ಬಲು ಪಾಮರ ಜನರನು ಸಲಹುತಲಿ ಶ್ರೀಮನೋವಲ್ಲಭ ಶಾಮುಂದರ ನಾಮಾಮೃತವನು ಪ್ರೇಮದಿಂದುಣಿದ 3
--------------
ಶಾಮಸುಂದರ ವಿಠಲ
ದೂರ ತರುವಿರೇನೆ ಕೃಷ್ಣನ ಮೇಲೆ ಪ ದೂರ ತರುವಿರೇನೆ ಚೋರಾಗ್ರೇಸರನೆಂದು ಕ್ಷೀರ ತಕ್ರಗಳನ್ನು ಸೂರೆ ಮಾಡಿದನೆಂದು ಅ.ಪ ನೊರೆಹಾಲ ಕುಡಿಬಾ ದೊರೆ ಬಾರೋ ಬಾ ಎಂದು ಕರದಿಂದಲೆತ್ತಿ ಮುತ್ತಿಟ್ಟೆಯಂತೆ ಬಿರುಗಾಳಿ ಬಂತೆಂದು ಬಿಗಿದಪ್ಪಿ ಕೊರಳಿಂಗೆ ಕೊರಳಿಟ್ಟು ಬರಿಗೈಯ ತೋರಿದೆಯಂತೆ 1 ಹಸಿದೆ ಬಾ ಕಂದ ಮೊಸರ ಕುಡಿಯೆಂದು ಹುಸಿನಗೆಯ ಬೀರಿ ಕೈಹಿಡಿದರವಳು ಉಸಿರಾಡದಂತೆ ಅಧರಕಧರವನ್ನಿಟ್ಟು ಹಸಿವಾರಿತಿನ್ನು ನೀ ಹೋಗೆಂದಳಂತೆ 2 ಮಲ್ಲಿಗೆ ಹಾಸಿನಲ್ಲಿ ಮಲಗು ಬಾರೆನ್ನುತ ಬೆಲ್ಲ ತುಪ್ಪವ ನೀ ತಿನ್ನಿಸಿದೆಯಂತೆ ಹಲ್ಲ ತೋರಿಸು ಹೊಂಬೆಳಕ ನೋಡುವೆನೆಂದು ಮೆಲ್ಲನೆ ಬಾಗಿ ಬಾಗಿ ಗಲ್ಲವ ಕಚ್ಚಿದೆಯಂತೆ 3 ಬೆಣ್ಣೆಗಳ್ಳನು ಎಂದು ಹಿಂದೋಡಿ ಓಡಿ ಬಂದು ಸಣ್ಣ ತೋಳನು ಹಿಡಿದು ಎಳೆದಾಡಲವಳು ಕಣ್ಣಿನಲಿ ಕಣ್ಣಿಟ್ಟು ದೃಷ್ಟಿ ದೋಷವ ಬೀರೆ ಚಿಣ್ಣ ಮಾಂಗಿರಿರಂಗ ಕಣ್ಣಬಿಡಲೊಲ್ಲ ನೋಡೆ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೇವ ಗುರುಸ್ತುತಿ ಅಂಗವೇ ಶ್ರೀ ಮಹಾಂಗಿರೀಶ ಲಿಂಗವಾದುದು ಸಂಗ ಸುಖದ ದುರಿತವೆಲ್ಲ ಹಿಂಗಿ ಪೋದುದು ಪ ನಿರ್ಮಲಾತ್ಮ ಗುರುಕಟಾಕ್ಷ ಮರ್ಮಸಿಕ್ಕಿತು ಕರ್ಮ ಹರಿದು ಜ್ಞಾನಜ್ಯೋತಿ ಬೆಳಕು ಮಿಕ್ಕಿತು ಧರ್ಮ ತತ್ವದಮೃತವೆಂಬ ಶರಧಿಯುಕ್ಕಿತು ಪ್ರೇಮದಿಂದ ಪ್ರಕಟವಾದ ಬ್ರಹ್ಮ ದಕ್ಕಿತು 1 ಮಾಯೆಯಿಂದ ಮಮತೆಯೆಲ್ಲ ಸತ್ಯವಾದುದು ನ್ಯಾಯಪಥವ ತಿಳಿಯೆ ಸರ್ವ ಮಿಥ್ಯವಾದುದು ಸಾಯುತೊಡನೆ ಹುಟ್ಟುವುದರ ಭೀತಿಪೋಪುದು ಕಾಯದೊಳಗೆ ದಿವ್ಯಜ್ಯೋತಿ ಪಥ್ಯವಾದುದು 2 ಪರಶಿವಾತ್ಮಲಿಂಗವೆನ್ನ ಮನಕೆ ಸಾರಿತು ತುಂಬಿ ತುಳುಕಿ ಬೀರಿತು ಪರಮಾನಂದರಸದ ಲಹರಿ ಉಕ್ಕಿ ಹರಿಯಿತು 3
--------------
ಭಟಕಳ ಅಪ್ಪಯ್ಯ
ಧ್ಯಾನಿಸೋ ಮಾನವಾ ದೀನೋದ್ಧಾರಿ ವಿಜಯದಾಸರನಾ | ದೇವಮಾನಿತರು ಧೇನು ಸಮ ಪ. ಭೃಗುಮುನಿಯೆ ಈ ಜಗದಿ | ಸಂಜನಿಸಿ ಮದಪಾಲಿಸಿ ಘೋರ ಭವಕ್ಲೇಶ ಪರಿಹರಿಸಿ ಸುಖವಾ ಬೀರಿದಾ1 ಗುರುಪವನ ಶಾಸ್ತ್ರವ ಕನ್ನಡದಿ ವಿರಚಿಸಿ | ಜ್ಞಾನಪಥ ತೋರಿ ಶಿರಿವದನ ಮಹಿಮೆ ಸಾರಿದಾ2 ಶ್ರೀವರ ಶಾಮಸುಂದರನ ಸ್ತವಿಸಿ ಸಂಸೇವಿಸಿ | ಭಾವದಲಿ ನೋಡಿ ನಲಿದವರು ಕರುಣಾಶಾಲಿ 3
--------------
ಶಾಮಸುಂದರ ವಿಠಲ