ಒಟ್ಟು 145 ಕಡೆಗಳಲ್ಲಿ , 47 ದಾಸರು , 141 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾಗಿಸಬೇಕು ಜಗದ್ಗುರುವಿನ ಕೃಪೆಯಿಂದ ಧ್ರುವ ಜಾಗಿಸದಲ್ಲದೆ ಖೂನ ಸುಗಮ ಸುಪಥದೋರದು ನಿಧಾನ ಯೋಗಿಜನರ ನಿಜಧನ ಆಗುದು ಸ್ವಾಧೀನ 1 ಜಾಗಿಸಿ ನೋಡಲು ಸ್ವಸುಖ ಬಗೆಬಗೆದೋರುತದೆ ಅನೇಕ ಅಗಣಿತಗಮ್ಯಾಲೋಲಿತ ಶ್ರೀಗುರು ಕೌತುಕ 2 ಝಗಿಝಗಿಸುವ ಜಗಜ್ಯೋತಿ ಜಾಗಿಸಿದ ಶ್ರೀ ಸದ್ಗುರುಮೂರ್ತಿ ಸಾಗಿ ಭವನಿದ್ರೆಯವಾರ್ತಿ ನೀಗಿದ ಮಹಿಪತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಂಗಿ ಕೇಳೆ ಅತಿಕೌತುಕ ಒಂದು ಸುದ್ಧಿಯ ಸಿಂಗನ ಮೋರೆ ಮಗುವು ಪುಟ್ಟಿ ಮಾಡಿದಾ ಚರ್ಯ ಪ. ತಂದೆ ತಾಯಿಗಳಿಲ್ಲಾದ್ಹಾಂಗೆ ಕಂದ ಪುಟ್ಟಿತು ಬಂಧು ಎತ್ತು ಕೊಂಬೇನೆಂದರೆ ಗುಡು ಗುಡುಗುಟ್ಟಿತೂ ಅಂದ ಛಂದವ ನೋಡೇನೆಂದರೆ ಘೊರಾಕೃತಿಯಾಯ್ತು ತಂದ ತೊಟ್ಟಿಲೊಳಿಟ್ಟೀನೆಂದರೆ ಹೊಸಲೊಳ್ ಕೂತೀತು 1 ತೊಡೆಯಲ್ಲಿಟ್ಟು ತಟ್ಟೀನೆಂದರೆ ಕಿಡಿ ಕಿಡಿ ಉಗುಳೀತು ಕಡುಪಾಪಿ ರಕ್ಕಸನ ತನ್ನ ತೊಡೆಯಲ್ಲಿಟ್ಟಿತೂ ಕಡು ಕೋಪದಿಂದಾಲಿ ಅವನ ಒಡಲ ಬಗೆದಿತು. ಎಡಬಲಕೊಬ್ಬರು ಬರದಂತೆ ಆರ್ಭಟಿಸುತಲಿದ್ದಿತು 2 ರುಧಿರ ಪಾನವ ಮಾಡಿತು ಮಾಲೆ ಹಾಕಿ ಮುದ್ದಿಪನೆನೆ ಕರುಳ್ಮಾಲೆ ಹಾಕೀತು ಮೇಲೆ ಕೇಶ ಕಟ್ಟೀನೆಂದರೆ ಕೆದರಿಕೊಂಡೀತೂ ಬಾಲಲೀಲೆ ನೋಡೇನೆಂದರೆ ಜಗವ ಬೆದರಿಸಿತು 3 ಸಿರಿಕಂಡೂ ಬೆರಗಾಗೆ ಮನವು ಕರಗದೆ ಕಲ್ಲಾಯ್ತು ತರಳನೊಬ್ಬನ ಕೂಡೆ ತಾನೂ ಆಟವನಾಡಿತು ಉರಿಮುಖ ಹುಬ್ಬೂ ಗಂಟೂ ಬಿಟ್ಟು ಕಿರುನಗೆ ನಕ್ಕೀತು 4 ಶ್ರೀಪತಿ ಎಂದು ತರಳನು ಪೊಗಳೇ ಸಿರಿಯ ಬೆರತೀತು ಆಪತ್ತನು ಪರಿಹರಿಪ ಲಕ್ಷ್ಮೀನರಹರಿ ಎನಿಸೀತು ದ್ವಾಪರದಲ್ಲಿ ಮತ್ತೆ ಪುಟ್ಟಿ ಮುದುವ ಬೇಡೀತು ಗೋಪಾಲಕೃಷ್ಣವಿಠ್ಠಲನೆನಿಸಿ ಗೋಪಿಯ ಮಗುವಾಯ್ತು 5
--------------
ಅಂಬಾಬಾಯಿ
ತಾ ಕಾಯುತಿದ್ದ ಕೃಷ್ಣನು ಗೋಪಾಲರನೂಗೋಕುಲದಲ್ಲಿ ಗೂಢನೂ ಪುೀಕುಂಭಿನಿಯೊಳಗಿರುತಿಹ ದುಷ್ಟರನೂಕುವ ಬಿಲದಲಿ ಅನುಪಮ ಧೀರಾ ಅ.ಪಅಸಿತ ಪಕ್ಷವು ಬಂದುದೂ ಮಾಸಗಳೊಳುಎಸೆವೇಕಾದಶಿಯೆಂಬುದು ಬರಲು ಅಂದುಬಸವಾಸುರಾನಾ ಬಡಿದು ತಾನಂದು ವ್ರಜದಿ ವಸುಧೇಶ ನಿದ್ದನೊಲಿದು ಅಸುರನು ಅಳಿಯಲು ಆ ವ್ರಜವುಳಿಯಲು ಹಸುಗಳು ಹೆಚ್ಚಲು ಹರಿ ತಾನಲಿಯಲು ವಸಗೆವ್ರಜದೊಳಗೆ ಬಹುಮಸಗೆ ಹೆಸರಾಗೆ 1ದ್ವಾದಶೀ ದಿವಸಾದಲ್ಲಿ ಉದಯಕಾಲವಾದುದು ''ತದಲ್ಲಿ ಶ್ರೀಕೃಷ್ಣನಿಗೆಬೋಧವಾಗಲು ಬೇಗದಲಿ ಬಾಲರು ಸಹಾ ಮಾಧವಾ ಮುದದಿಂದಲಿಕಾದಿರೆ ಗೋವ್ಗಳ ಕಾನನಮಧ್ಯದಿಕಾದಲು ಬಂದಾ ಕೇಶಿಯನುದಯದಿಕಾದಿ ಅಸುವಸಿಗಿದಿ ವೊದ'ದೀ ಈ 'ಧದಿ 2ವೃಂದಾಖ್ಯವಾದವನಾದಿ ಗೋಪಾಲಕರಾ ವೃಂದದಾ ವರಸ್ತೋಮವಾಮದಿ ನಿಂದಿದ್ದನಾಗಾಕಂದರ್ಪಕೋಟಿತೇಜದಿ ಕುಂಭಿನಿಯನ್ನು ಹೊಂದಿಸಿದನು ಹರುಷದಿ ಮಂದರಧಾರನು ಮಂಜುಳ ಮ'ಮನು ನಿಂದಿಹ ನೀರನು ನಿಜಗುಣಧಾಮನು ಅಂದು ಅಜಬಂಧು ತಾನೆಂದೂ ಅಲ್ಲಿನಿಂದು3ಘನ ನೀಲಾಳಕದ ವೃಂದ 'ುಶ್ರಿತವಾದಾಮಣಿಮಯ ಮಕುಟದಿಂದಾ ಮೂಡುವ ಕಾಂತಿಪಣೆಯಲ್ಲಿ ಮೊಳೆಯುವಂದಾ ಕಸ್ತುರಿತಿಲಕ ಗಣನೆಗೆ ಬರುವ ಛಂದಾ ಗುಣಿಸುವರಾರಿದ ಗುಣನಿಧಿಯೊಪ್ಪಿದ ಪ್ರಣತಪ್ರೇಮದ ಪದ ಮುಖ ಪದ್ಮದಗುಣನೂ ಗುರುತರನೂ 'ನಯವನೂ 'ವರಿಪನೂ 4ಸಿಂಗಾರಿಯ ಸೋಲಿಸುವಾ ಸುಭ್ರುವದಿಂದಾಮಂಗಳವಾದ ಮುಖದ ಮನ್ನಿಸುತಿಹಕಂಗಳ ಕೋಡಿವರಿವಾ ಕಟಾಕ್ಷವನ್ನೂ ಸಂಗಿಸಿದ ಸುಸ್ಮಿತವಾ ತೊಂಗುತ ತೋರಲು ತನ್ನಾಸಿಕವೂರಂಗಿಸಿ ರಾಜಿಸೆ ರದನಚ್ಛದವೂಹೊಂಗೆ ುೀರಂಗೆ ನೋಳ್ಪಂಗೆ ಭವ'ಂಗೆ 5ಕುಂಡಲಗಳ ಕಾಂತಿಯೂ ಕರ್ನಾಗಳಲ್ಲಿಮಂಡಿತವಾಗಿ ಮತ್ತೆಯೂ ಮುಕುರದಂಥಾಗಂಡ ಸ್ಥಳಗಳಲ್ಲಿಯೂ ಗೋಚರಿಸುತ ದಿಂಡಾಗಿ ತೋರೆ ದೀಪ್ತಿಯೂ ಪುಂಡರೀಕಾಕ್ಷನು ಪೊಳೆಯುತಲಿದ್ದನು'ಂಡುತ ಖಳರನು ಹೆದರುವ ಜನರನುಕಂಡೂ ಕರಕೊಂಡೂ ಕೈಕೊಂಡೂ ಹುರಿಗೊಂಡೂ6ವೇಣುವ 'ವರಿಸಲು 'ೀರನಾ ಮುದ್ದೂತಾನೊಂದು ತೇಜ ತೋರಾಲು ಅಂಗುಲೀಗಳುಅನುಕೂಲಗಳಾಗಾಲು ಉಂಗುರಗಳೊಳು ಮಾಣಿಕ್ಯಗಳು ಮೂಡಲುಭಾನುವ 'ುೀರಲು ಬಾಹುಗಳೊಪ್ಪಲುಗಾನಗಳಾಗಲು ಗೋವ್ಗಳು ಕೇಳಲುತಾನು ತೋರಿದನು ಜಾಣುವನು ಜಗಧರನೂ 7ಭೋಗಿಯ ಭೋಗದ ಹಾಗೆ ಬಾಹುಗಳಿರೆತೂಗಿ ಜಾನುಗಳ ತಾಗೆ ಕೇಯೂರಗಳರಾಗ ರಂಜಿತಗಳಾಗೆ ಕಂಕಣವಲಯ ಯೋಗದಿಂದಿರೆ 'ೀಗೆಆಗಿನ ಕಾಲದಲಮರಿದ ಶೃಂಗದುೀಗುರು ಕೃಷ್ಣನ ಇಷ್ಟ ಕೊಳಲಿನಯೋಗೀ ಇಹಭಾಗೀ ಗತರಾಗೀ ಗುರಿಯಾಗೀ8ಕಂಬುಕಂಧರದಿಂದಲೂ ಅಲ್ಲಿರುತಿಹತೊಂಬೆ ತಾರಹಾರಗಳು ಲಕ್ಷ್ಮಿಯು ತಾನುಇಂಬೀನುರದಲಿರಲು ಕೌಸ್ತುಭಕಾಂತಿ ತುಂಬಿ ನಾಭಿಯ ತಾಕಲುಅಂಬುಜ ಸಂಭವನಾಲಯ'ರಲುಜೃಂಭಿಸಿ ಮಾಲೆಯು ಜೋಲಿಡುತಿರಲೂನಂಬೀ ಬಹುತುಂಬೀ ುಹವೆಂಬೀ ಜಗದಿಂಬೀ 9ಕಟಿತಟದತಿಶಯವು ಕಾಂಚಿಯಧಾಮಾಸ್ಪುಟವಾಗಿ ಸ್ವರ್ಣವಸ್ತ್ರವು ಊರುಗಳಲ್ಲಿಗೆಘಟಿಸಿರೆ ಗೂಢವಾದವೂ ಜಾನುಗಳಿಂದ ಪಟು ಜಂಘೆ ಪುದುಗಿಹವೂಕಟಕಗಳಿಂದಲು ಕಡುಚೆಲುವೆನ್ನಲುಅಟಸುತಲಡಿಗಳು ಅತಿಮೃದುವೆನ್ನಲುದಿಟನೂ ನರನಟನೂ ಭವತಟನೂ ಪಟುತರನೂ 10ಕಮಲ ಸೋಕಲು ಕಂದುವ ಲಕ್ಷ್ಮೀಯಕರಕಮಲಕೆ ಕಾಂತಿಯನೀವ ಯೋಗಿಯ ಹೃದಯಕಮಲದಿ ಕುಳಿತಿರುವ ುೀ ದಿವ್ಯಪಾದ ಕಮಲವಕಾಣಿಸುವಾಕಮಲೆಯ ಕಾಂತನ ಕಮಲಜ ಜನಕನ ಕಮಲವ ಕಾವನ ಕಾಂತಿಯ 'ುೀರ್ವನಕ್ರಮವೂ ಕಾಮದವೂ ಶ್ರಮ ಶಮವೂ ಶೋಭನವೂ 11ಬಲಿಯ ಬಳಿಗೆ ಬಂಜವು ಭಾಗ್ಯವನಿತ್ತುಸಲ'ದ ಸೌಮ್ಯಗಳಿವು ಬ್ರಹ್ಮನು ಬಂದುತೊಳೆಯಲು ಬಂದು ತೋರುತಿದ್ದವು ಆ ಪಾದಗಳೆ ಇಳೆಯೊಳಗಿರುತಿಹವೂಕಲಿಮಲಹರಗಳು ಕಲಿಗಳ ಕಾವವುತಾಳಿದವು ನಾಗನ ತದ್ವಶವಾಗಲುಸಿಲುಕೀ ಸಿರಿತುಳುಕೀ ಅಘಕಲಕೀ ಅವು ನಿಲುಕೀ 12ಅಂಕುಶವರ'ಂದವು ಧ್ವಜವಜ್ರವಂಕೀತವಾಗಿಯಾಢ್ಯಾವು ಲಕ್ಷ್ಮಿಯ ಕುಚಕುಂಕುಮವನ್ನು ಕದ್ದವು ಭೂ'ುಗೆ ಪಾದ ಪಂಕಜಗಳು ಬಂದಾವುಕಿಂಕರರಭಿಮತ ಕಂಕೆಯನಟ್ಟುತಮಂಕುಗಳೆನಿಸುತ ಮಲೆವರ ಮುರಿಯುತಶಂಕೆ ಸಲೆ ಕೊಂಕೆ ಹೊರೆುಂಕೆ ಸಿರಿಸೋಂಕೆ13ಈ ರೀತಿಯಲಿ ಈಶನು ಇರುತಲಿರೆನಾರದ ಬಂದು ನಿಂದನು ಕಾಣುತ ಕೃಷ್ಣಕಾರುಣ್ಯ ನಿಧಿ ಕೇಳ್ದನು ಕ್ಷೇಮಗಳನು ತೋರುತ ರೂಪವ ತಾನುವಾರಿಜನೇತ್ರನು ವರದವರೇಣ್ಯನು'ುೀರದೆ ಮುನಿಯನು ಮಾತನು ನುಡಿದನುಸಿರೀ ಅನುಸಾರೀ ಬಗೆದೋರೀ ಮುರವೈರೀ 14ಅರಿತನು ಆತನನುವ ಆ ಕಂಸಗಾಗಅರು' ತೋರಿಸಿದರ್ಥವ ಅದು ತನ್ನ ಕಾರ್ಯನೆರವೇರುವತಿಶಯವ ತಾನಾಗಿ ಮುನ್ನ ಪಿರಿದಾಗಿ ಪ್ರೇರಿಸಿರುವಕರುಣಾವನಧಿಯು ಕಾರ್ಯವ ತೋರಿಯುಮುರಹರಮೂರ್ತಿಯು ಮುಂದಿರುವಲ್ಲಿಯುಅರಿತೂ ಅಲ್ಲಿಕುಳಿತೂ ಬರೆಹೊತ್ತೂ ುದಿರಿತ್ತು 15ಕಾಣುತ ಮುನಿಕೃಷ್ಣನ ಮಾನಸದಲ್ಲಿಧ್ಯಾನಿಸಿದನು ದೇವನ ತಾ ಬಂದುದನ್ನುತಾನು ತೋರಿಸಲು ತತ್ತ್ರಾಣ ಬಂದಾಗ ನ'ುಸಿ ಪ್ರಾಣೇಶಗತಿಪ್ರ'ೀಣಾಕೃಷ್ಣಾ ಕಂಸಗೆ ಹೊದ್ದುವ ರೀತಿಗೆಶ್ರೀನಿಧಿಯಾದಗೆ ಸೂಚಿಸಿ ಸ್ವಾ'ುಗೆತಾನು ಅಜಸೂನು ಅರು'ದನು ಅರಿತದನೂ 16ಮಾನುಷಮೂರ್ತಿಯಾಗಿಯೆ ಭೂ'ುಗೆ ಬಂದುಆನತರನು ಆಳಿಯೆ ಅರ್ಥವ ಸಲಿಸಿಧೇನುವಾಗಿಹೆ ಧೊರೆಯೆ ಯೆನ್ನುತ 'ೀಗೆ ಆನತನಾಗುತಲಿಯೆಮಾನಸಪುತ್ರನು ಮಾತನು ನುಡಿದನುಶ್ರೀನಿಧಿ ತಿರುಪತಿ ವೆಂಕಟರಮಣನುತಾನೂ ತಾಳಿದನೂ ಮಾನಸನೂ ಮಾಡ್ದುದನೂ 17
--------------
ತಿಮ್ಮಪ್ಪದಾಸರು
ತೊರವಿ ನರಸಿಂಹ ಕರವ ಪಿಡಿಯೊ ತೊರವಿ ನರಹರೆಆಹಾ ತೊರವಿ ನರಹರೆ ಪ ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆಬಿಂಬದಂತೆ ಪಾಲಿಸೆನ್ನ ಸಾಂಬವಿನುತನೆ 1 ಛಟಿಛಟೆಂದು ಒಡೆದು ಕಂಬ ಪುಟಿದು ಸಭೆಯೊಳುಕಟಿಯ ತಟದೊಳಿಟ್ಟು ರಿಪುವ ಒಡಲ ಬಗೆದೆಯೊ 2 ಇಂದಿರೇಶ ಎನ್ನ ಹೃದಯ ಮಂದಿರದೊಳು ಬಂದು ತೋರೆ ಮುಖವ ನಿನ್ನ ವಂದಿಸುವೆನು 3
--------------
ಇಂದಿರೇಶರು
ತೊರವಿ ನರಸಿಂಹನ ಸ್ತೋತ್ರ ನರಹರೀ | ಪಾಲಿಸೊ ಎನ್ನ | ನರಹರೀ ಪ ನರಹರೀ | ನಮಿಸೂವೆ ನಿನ್ನ | ಚಾರುಚರಣ ಕಮಲಕ್ಕೆ ಮುನ್ನ | ಅಹತೊರವಿ ಕ್ಷೇತ್ರದಲ್ಲಿ | ಪರಿಪರಿ ಭಕುತರಮೊರೆಯ ಕೇಳ್ಕರುಣದಿ | ವರವ ನೀಡುತಲಿಹ ಅ.ಪ. ಪೂರ್ವ ಸಾಲಿಗ್ರಾಮ ರೂಪ | ದಲ್ಲಿದೂರ್ವಾಸ ಪೂಜಿತ | ರೂಪ | ಇದ್ದುಓರ್ವ ಭಕ್ತನಿಗೆ ಸಲ್ಲಾಪ | ತೇಜಗೈವದ ಕೇಳ್ವದು ಅಪರೂಪ | ಅಹಊರ್ವಿಯೊಳ್ ಚಿಮ್ಮಲಗಿ | ಸರ್ವಾಧಿಕವು ಕ್ಷೇತ್ರಇರ್ವೆ ನಾನಲ್ಲೀಗ | ತರ್ವೋದು ತೊರವೀಗೆ 1 ಸೊಲ್ಲ ಲಾಲಿಸಿ ಗಾಢ ಭಕ್ತ | ಎದ್ದುಚೆಲ್ಲೀದ ವಾರ್ತೆ ಸರ್ವತ್ರ | ಜನರಲ್ಲಸ ಗೊಳದೆ ಮುಂದತ್ತ | ಹಸಿಹುಲ್ಲನು ತೆಂಕದಿಶಿಯಿತ್ತ | ಅಹಚೆಲ್ಲುತ ಪೋಗುತಿರೆ | ಜ್ವಲೀಸಿತದುಚಿಮ್ಮಲ್ಲಿಗಿ ಊರ್ಬಳಿ | ಒಳ್ಳೆ ಕೃಷ್ಣಾತೀರ 2 ಸ್ವಪ್ನ ಸೂಚಿತ ತಾಣ ಬಗೆದು | ನೋಡೆಅಪ್ಪ ನೃಹರಿ ಕಂಡನಂದು | ಭಕ್ತರಪ್ಪಿ ಆನಂದಾಶ್ರು ಬಿಂಧು | ಕೈಚಪ್ಪಾಳೆ ಬಡಿದುಘೇಯೆಂದು | ಆಹಅಪ್ಪಾರ ಮಹಿಮನ | ಗೊಪ್ಪಾದ ಘನಮೂರ್ತಿಉಪ್ಪರಿ ತಂದಿಡುತ | ದರ್ಪದಿ ನಿಂತರು 3 ಶಿರಿ ಹಾಗೂ ಪ್ರಹ್ಲಾದರಾಯ | ಯುಕ್ತಹಿರಣ್ಯಕನ ತನ್ನ ತೊಡೆಯ | ಮೇಲೆಇರಿಸಿ ಉದರ ಸೀಳ್ದ ಬಗೆಯ | ಕೇಳಿಕರುಳನು ಮಾಲೆಯ ಪರಿಯ | ಆಹಧರಿಸುತ್ತ ತೋರ್ದನು | ಹಿರಣ್ಯಕಶಿಪೂಜತರಳ ಭಕ್ತನ ತೆರ | ತರಳನರಿದಿಷ್ಟೆಂದು 4 ಶಿಷ್ಟ ಮತ್ಸ್ಯಾವತಾರ | ಯುಕ್ತಶ್ರೇಷ್ಠ ಪ್ರಭಾವಳಿಹಾರ | ಸುವಿಶಿಷ್ಟದಿ ನರ ಮೃಗಾಕಾರ | ನಾಗಿಅಷ್ಟವು ಭುಜಯುಕ್ತಾಕಾರ | ಆಹಶಿಷ್ಟ ಭಕ್ತರಿಂದ ಕಷ್ಟವಿಲ್ಲದೆ ತೆರಳಿಶ್ರೇಷ್ಠ ತೊರವಿಯಲ್ಲಿ ಇಷ್ಟನಾಗಿ ನಿಂದ 5 ಮುನ್ನಿದ್ದ ನೃಹರಿಯ ಶಿಲೆಯ | ಕೊಂಡುಚೆನ್ನ ತೀರ್ಥದಿ ನರಹರಿಯ | ಇಡಲುಕೃಷ್ಣೆಗೆ ಪೋಗುವ ಪರಿಯ | ಪೇಳೆಘನ್ನ ಮೂರ್ತಿಯ ಒಯ್ದ ಬಗೆಯ | ಆಹ ಇನ್ನು ಮುನ್ನು ಪೇಳ್ವ | ನನ್ನೆಯ ಜನರಿಹರು ಮನ್ನಿಸುತೀವಾರ್ತೆ ಚಿನ್ಮಯನ ಕೊಂಡಾಡಿ 6 ಗುಪ್ತಾವು ಗಂಗಾ ಸನ್ನಿಹಿತ | ತೀರ್ಥಉತ್ತಮ ದಿಂದಭಿಷೇಚಿತ | ನಾಗಿನಿತ್ಯವು ಪವಮಾನ ಸೂಕ್ತ | ಪಂಚಯುಕ್ತವು ಪೂಜಾದಿ ಕೃತ | ಆಹಭಕ್ತಿ ಪೂರ್ವಕವಾದ | ಉತ್ತಮ ಸೇವೆಯನಿತ್ಯ ಕೈಗೊಳ್ಳುತ | ಭಕ್ತರಭೀಷ್ಟದ 7 ಮಾಸ | ಎರಡುಉತ್ಸವ ವೈಭವ ಘೋಷ | ಕೇಳಿ ಕುತ್ಸಿತ ಜನರೊಲ್ಲ ಈಶ | ಅಂತೆ ಸಚ್ಛಾಸ್ತ್ರ ಪ್ರವಚನ ಪೋಷ | ಆಹವತ್ಸಾರಿ ದುರುಳನ | ಕುತ್ಸಿತ ಉದರವವಿಸ್ತ್ರುತ ನಖದಿಂದ | ಕುತ್ತಿದ ಚಿಂತಿಸು 8 ನರಹರಿ ನಾಮಕ ಕವಿಯು | ಇಲ್ಲಿತೊರವಿಯ ನರಹರಿ ಸನಿಯ | ಚೆಲ್ವವರರಾಮ ಕಥೆಯನ್ನು ಬರೆಯು | ಅವ - ಕುವರ ವಾಲ್ಮೀಕಿಯೆ ಮೆರೆಯು | ಆಹತೊರವೆ ರಾಮಾಯಣ | ವಿರಚಿತ ವಾಯ್ತಿಲ್ಲಿಹರಿಯನುಗ್ರಹ ಜಾತ | ವರ ಕವಿತೆ ಉಲ್ಲಾಸ 9 ಹೃದಯ ಗುಹೆಯಲ್ಲಿ ವಾಸ | ಉಪನಿಷದು ಪೇಳ್ವದು ಅಂತೆಲೇಸ | ಬಲುಮುದದಿಂದ ಮಾಳ್ಪದ ವಾಸ | ಅಂಥಬುಧಜನಕಹುದು ಸಂತೋಷ | ಆಹವಿಧವು ಈ ಪರಿಯೆಂದು | ವಿಧಿಸಲು ಜಗತೀಗೆಹದುಳದಿ ತೊರವಿ ಸ | ನ್ನಿಧಿ ಗುಹೆಯೊಳುವಾಸ 10 ವಿಭವ | ದಿಂದಲೀವನು ಮುಕ್ತಿಯ ಸುಖವ | ಈತಕೈವಲ್ಯಾಕಧಿಪತಿ ಇರುವ | ಆಹತಾವಕನಾಗಿ ಗುರು | ಗೋವಿಂದ ವಿಠಲನಭಾವದಿ ನೆನೆವಂಗೆ | ತೀವರ ವರವೀವ11
--------------
ಗುರುಗೋವಿಂದವಿಠಲರು
ದುಮು ದುಮು ಬಸವಂತನ ಹಬ್ಬಾ ಪ ರಾಮಕೃಷ್ಣ ಗೋವಿಂದ ಮುರಾರಿ | ಶಾಮ ಸುಂದರ ಸುರಜ ಸಹಕಾರಿ | ಕಾಮಿತ ಫಲಗಳ ನೀವ ಉದಾರಿ | ಶ್ರೀ ಮಾಧವನೇ ಕಾಯೋ ಚರಣವ ದೋರಿ 1 ಬನ್ನ ಬಡುತಲಿ ಬಲು ಭವದಲಿ ಬಂದೆ | ಮುನ್ನಿನ ತಪ್ಪವನೆಣಿಸದೆ ತಂದೆ | ಚೆನ್ನಾಗಿ ರಕ್ಷಿಸು ನಮೋ ನಮೋ ಎಂದೆ 2 ಈ ರೀತಿಯಿಂದಲಿ ಹರಿಯ ಕೊಂಡಾಡಿ | ಆ ರಾಧಿಪ ನವವಿಧದಲ್ಲಿ ಕೂಡಿ | ನಾರಕ ಭಯಗಳುವನು ಮೂಲದೀಡ್ಯಾಡೀ | ಸೂರ್ಯಾಡು ಸ್ವ ಸುಖ ಎಲೊ ಹುಚ್ಚು ಖೋಡಿ 3 ಮುನ್ನಿನ ಪುಣ್ಯದಿ ನರದೇಹ ತಾಳಿ | ಮಾನವನಾಗಿ ಹರಿಕಥೆ ಕೇಳಿ | ಚೆನ್ನಾಗಿ ವಿಷಯದಲನುದಿನ ಬಾಳೀ | ವೈರಿ ನೀನಾದೆ ಗೈಯ್ಯಾಳಿ 4 ಮೃಗಜಲ ಹೋಲುವ ವಿಷಯಾ ನಂದಾ | ಬಗೆದೆಲೋ ಶಾಶ್ವತವೆಂದು ನಿನ್ನಿಂದಾ | ಭಕುತಿಯ ಮಾರ್ಗವ ಬಿಟ್ಟೆಲೋ ಛಂದಾ | ಜಗ ದೊಳಗಾದೆಲೋ ನೀ ಮತಿ ಮಂದಾ 5 ಹೆಂಡರು ಮಕ್ಕಳು ಮಮತೆಯ ಸ್ಥೂಲಾ | ಖಂಡದಿ ಬಿದ್ದಿದೆ ಕಾಲಿಗೆ ಕೋಳಾ | ಅಂಡಲೆವುತ ಹೊಟ್ಟೆಹೊರೆದೆಲೋ ಮೂಳಾ 6 ಸುಖವಿಲ್ಲ ಇದರೊಳಗಿಂದು | ಪಾದ ಹೊಂದು 7 ತ್ವರಿತದಿ ಭಾವಭಕ್ತಿಗೆ ಗಮನವಿಟ್ಟು | ತರಳನಾಗಿ ಹೋಗದಿರೆಲೋ ಕೆಟ್ಟು 8 ಚಿನುಮಯ ಗೆಚ್ಚರಗಳೆದೆಲೋ ಭ್ರಾಂತಾ | ಕುಣಿಸ್ಯಾಡುತಿ ಹನು ಅಚ್ಯುತಾನಂತಾ 9 ಒಬ್ಬರು ಶಾಸ್ತ್ರದ ಮದದಲಿ ಬಿಗಿದು ಉಬ್ಬುಬ್ಬಿ ಕುಣಿದರು ಹೇಳಲೇನಿಂದು 10 ಅಷ್ಟಮದದಿಂದ ಕಣ್ಣು ಮುಚ್ಚಿ | ಕುಟ್ಟುವಾಗ ನೆಲ್ಲಿಕಾಲನು ಘಟ್ಟಿಸಿ 11 ಸಂತರ ಕಥೆ ಕಿವಿಯಲಿ ಕೇಳಲಿಲ್ಲಾ | ಭ್ರಾಂತನೆ ನಾಳೆ ಮುರಿವನು ಹಲ್ಲಾ 12 ನೆರೆದಹಿಸುತ ದುರ್ಮದ ಬೂದಿ ಚೆಲ್ಲಿ | ನರಜನ್ಮ ಸಾರ್ಥಕ ಮಾಡೆಲೊಹುಳ್ಳಿ 13 ಕಂದನು ಸಾರಿದಾ ಹೋಳಿಯಾ ವಂದಾ | ಭವ ಬಂದಾ 14
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದ್ಯಾವಿ ನಮ್ಮ ದ್ಯಾವರು ಬಂದರು ಬನ್ನೀರೆ, ನೋಡ ಬನ್ನಿರೆ ಪ ಕೆಂಗಣ್ಣ ಮೀನನಾಗಿ ನಮ ರಂಗಗುಂಗಾಡು ಸೋಮನ ಕೊಂದಾನ್ಮ್ಯಾಗುಂಗಾಡು ಸೋಮನ ಕೊಂದು ವೇದವನುಬಂಗಾರದೊಡಲನಿಗಿತ್ತಾನ್ಮ್ಯಾ1 ದೊಡ್ಡ ಮಡುವಿನೊಳಗೆ ನಮ ರಂಗಗುಡ್ಡವ ಹೊತ್ಕೊಂಡು ನಿಂತಾನ್ಮ್ಯಾಗುಡ್ಡವ ಹೊತ್ಕೊಂಡು ನಿಂತು ಸುರರನುದೊಡ್ಡವರನ್ನ ಮಾಡ್ಯಾನ್ಮ್ಯಾ 2 ಚೆನ್ನ ಕಾಡಿನ ಹಂದಿಯಾಗಿ ನಮ ರಂಗಚಿನ್ನದ ಕಣ್ಣನ ಕೊಂದಾನ್ಮ್ಯಾಚಿನ್ನದ ಕಣ್ಣನ ಕೊಂದು ಭೂಮಿಯವನಜಸಂಭವಗಿತ್ತಾನ್ಮ್ಯಾ 3 ಸಿಟ್ಟಿಂದ ಸಿಂಹನಾಗಿ ನಮ ರಂಗಹೊಟ್ಟೆಯ ಕರುಳ ಬಗೆದಾನ್ಮ್ಯಾಹೊಟ್ಟೆಯ ಕರುಳ ಹಾರವ ಮಾಡಿ ಪುಟ್ಟಗೆ ವರವ ಕೊಟ್ಟಾನ್ಮ್ಯಾ4 ಹುಡುಗ ಹಾರುವನಾಗಿ ನಮ ರಂಗಬೆಡಗಲಿ ಮುಗಿಲಿಗೆ ಬೆಳೆದಾನ್ಮ್ಯಾಬೆಡಗಲಿ ಮುಗಿಲಿಗೆ ಬೆಳೆದು ಬಲಿಯನ್ನಅಡಿಯಿಂದ ಪಾತಾಳಕೊತ್ತ್ಯಾನ್ಮ್ಯಾ 5 ತಾಯ ಮಾತನು ಕೇಳಿ ಸಾಸಿರ ತೋಳಿನಆವಿನ ಕಳ್ಳನ ಕೊಂದಾನ್ಮ್ಯಾಆವಿನ ಕಳ್ಳನ ಕೊಂದು ಭೂಮಿಯಅವನಿಸುರರಿಗೆ ಇತ್ತಾನ್ಮ್ಯಾ 6 ಪಿಂಗಳ ಕಣ್ಣಿನ ಕೊಂಗಗಳ ಕೂಡಿಛಂಗನೆ ಲಂಕೆಗೆ ಪೋದಾನ್ಮ್ಯಾಛಂಗನೆ ಲಂಕೆಗೆ ಪೋಗಿ ನಮ ರಂಗಹೆಂಗಸುಗಳ್ಳನ ಕೊಂದಾನ್ಮ್ಯಾ7 ಕರಿಯ ಹೊಳೆಯ ಬಳಿ ತುರುಗಳ ಕಾಯುತಉರಗನ ಮಡುವ ಧುಮುಕ್ಯಾನ್ಮ್ಯಾಉರಗನ ಹೆಡೆ ಮೇಲೆ ಹಾರ್ಹಾರಿ ಕುಣಿವಾಗವರವ ನಾರೇರ್ಗೆ ಕೊಟ್ಟಾನ್ಮ್ಯಾ 8 ಭಂಡನಂದದಿ ಕುಂಡೆಯ ಬಿಟುಗೊಂಡುಕಂಡ ಕಂಡಲ್ಲಿಗೆ ತಿರುಗ್ಯಾನ್ಮ್ಯಾಕಂಡ ಕಂಡಲ್ಲಿಗೆ ತಿರುಗಿ ತ್ರಿಪುರರಹೆಂಡಿರನೆಲ್ಲ ಕೆಡಿಸ್ಯಾನ್ಮ್ಯಾ 9 ಚೆಲುವ ಹೆಂಡತಿಯ ಕುದುರೆಯ ಮಾಡಿಒಳ್ಳೆ ರಾಹುತನಾದಾನ್ಮ್ಯಾಒಳ್ಳೆ ರಾಹುತನಾಗಿ ಮ್ಲೇಚ್ಛರಡೊಳ್ಳು ಹೊಟ್ಟೆಯ ಮ್ಯಾಲೊದ್ದಾನ್ಮ್ಯಾ 10 ಡೊಳ್ಳಿನ ಮ್ಯಾಲ್ ಕೈ ಭರಮಪ್ಪ ಹಾಕ್ಯಾನುತಾಳವ ಶಿವನಪ್ಪ ತಟ್ಟಾನ್ಮ್ಯಾಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನುಚೆಲುವ ಕನಕಪ್ಪ ಕುಣಿದಾನ್ಮ್ಯಾ11
--------------
ಕನಕದಾಸ
ನಗುರೋರಧಿಕಂ ನಗುರೋರಧಿಕಂ ನಗುರೋರಧಿಕೆಂಬುದೆ ಪಂಥ ಬಗೆದನುಭವ ಜಗದೊಳು ನೆಲೆಗೊಂಬುದಿದೊಂದೆ ಪಂಥ ನಿಗಮಗಳಿಗೆ ಸುಗಮಾಗಿ ತೋರುವ ಪಥ 1 ಖರೆ ಮಾಡುವದಿದೊಂದೆ ಪಥ ಯತಿ ಮುನಿಜನ ಮನೋಹರ ಮಾಡುವದಿದೊಂದೆ ಪಥ ಅತಿಶಯಾನಂದನುಪಮವಾಗಿಹ ನಿಜ ಸತ್ಯ ಸನಾತನ ಗುರುಪಥ 2 ಅನಾಥನಾಥನಾಗ್ಯನುಭವ ತೋರುವದಿದೊಂದೆ ಪಥ ಅಣು ರೇಣುಕ ಪರಿಪೂರ್ಣವಾಗಿಹದಿದೊಂದೆ ಪಥ ದೀನ ಮಹಿಪತಿಗೆ ಸನಾಥ ಮಾಡುವ ಪಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮಿಸು ಮನವೆ ನೃಹರಿ ರೂಪವಾ | ರೋಗ ಹರಣನಾ ಪ ಹರಣ | ಸುರಪ ಪಾಲಕನಾ ಅ.ಪ. ಸಕಲ ಸುರರ ದನುಜ ಭಾದಿಸೆ | ಹರಿಗೆ ಮೊರೆಯಿಡೇಅಕಳಂಕ ಮಹಿಮ ಅಭಯವಿತ್ತು | ಅವರ ಕಳುಹಿದಾ 1 ಸುರರು ಪಾಡಿದರೂ 2 ಪಿತನು ತನ್ನ ಸುತನ ಭಾದಿಸೆ | ಹರಿಯೆ ಚರಣವಾಸತತ ನಮಿಸಿ ಭಜಿಸಿ ಭರದಿ | ಕಂಬದಿ ಕರೆದನೂ 3 ಭೃತ್ಯನ್ವೊಚನ ಸತ್ಯ ಮಾಡೆ | ಸ್ತಂಭವ ಸೀಳುತಾವೃತ್ಯಸ್ತವಾಗೆ ಸಕಲರ್ ಹೃದಯ | ಘಡ ಘಡೀಸುತಾ 4 ದೈತ್ಯನುದರ ಬಗೆದು ಕರುಳ | ಮಾಲೆ ಧರಿಸುತಾನೃತ್ಯವಾಡಿ ತನ್ನ ಪ್ರಳಯ ರೂಪವ ತೋರಿದಾ 5 ಅಕ್ಷರಜ್ಞೆ ಲಕುಮಿ ದೇವಿ | ಪಕ್ಷಿವಾಹನನಾಲಕ್ಷಣ ವೀಕ್ಷಿಸಿ ಕುಕ್ಷಿಯ ಬಿಡುತ | ವತ್ಸನ ನೂಕಿದಳು 6 ಮೋದ ಪಡಿಸುತಾಸದಯದಿಂದ ಗೈದ ಅವನ | ಭಕ್ತ ಶ್ರೇಷ್ಟನಾ 7 ಪತಿ 8 ಭವ ಕೂಪಾ9
--------------
ಗುರುಗೋವಿಂದವಿಠಲರು
ನರಸಿಂಹಾ ಲಕ್ಷ್ಮೀನರಸಿಂಹ ಪ ನಮಿಸುವೆ ಲಕ್ಷ್ಮೀನರಸಿಂಹ ಅಹಾ ಕನಕಕಶ್ಯಪನಳಿದು ಜನಕೆ ಸುಖವನಿತ್ತು ಘನಪುರುಷನೆ ಕ್ಷಣ ಕ್ಷಣ ನಮಿಸುವೆ ಅ.ಪ ಅಟ್ಟಹಾಸದಿ ಕಂಭಸಿಡಿದೂ | ಬಲು ಕಟ್ಟುಗ್ರತನದ ಕೆಟ್ಟ ಹಿರಣ್ಯನ ಹೊಟ್ಟೆಯ ಬಗೆದಂಥ ಶ್ರೇಷ್ಠಮಹಿಮನೆ 1 ತೊಡೆಯ ಮೇಲಿಟ್ಟಿ ಬಹು ಕಂಡೆ ಈ ದಿನ 2 ಸೂರಿಗಳರಸ ಒಡೆಯಾ | ಮೋಲೆ ಸುರಸೋದರರೊಳುಮೆರೆಯ | ಆಹಾ ಕ್ರೂರ ದೈತ್ಯನ ಕೊರಳಹರಿದ ಅ- ಪಾರ ಮಹಿಮಸಿರಿವರ ಸಿಂಹವಿಠಲ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ನರಸಿಂಹಾವತಾರ ಕಮಲ ಸ ಮಾಧಿರೂಢ ಪದಾಬ್ಜ ಪೂರ್ಣ ಸು ಭಂಜನ ಮಾಧವ ಮುರಾರೆ ವ್ಯಾಧಿ ಪೀಡೆಯ ಪರಿಹರಿಸು ಮಹ ದಾದಿ ತತ್ವಯಂತ್ರೆ ನುತ ಪ್ರ ಲ್ಹಾದ ರಕ್ಷಕ ನರಹರಿಯೆ ದಹಿಸಖಿಳ ಶತ್ರುಗಳ 1 ಪ್ರಳಯಕಾಲದ ರವಿ ಸಮೂಹದ ಕಳೆಗು ಮಿಗಿಲಾಗಿರುವ ಮುಖದೊಳ್ ಥಳತಳಿಪ ದಂಷ್ಟ್ರಗಳ ತೋರುತ ಕಳೆದು ವದನವನು ಛಲದಿ ಚೀರುತ ದಾನವನ ಕಂ- ಗಳನು ಮುಚ್ಚಿಸಿ ಪಿಡಿದು ತಿಕ್ಕಿದ ಬಲ ಪಯೋನಿಧಿ ನರಹರಿಯೆ ದಹಿಸಖಿಳ ಶತ್ರುಗಳ 2 ಕಂಭದೊಳಗಂದಾದ ರವ ಕೇ- ದಿವಿಜ ಕ- ದಂಬ ಭಯಗೊಂಡಂಬರದ ಮೇಲಿಂಬುಗೊಂಡಿರಲು ಜಂಭ ವೈರಿಯ ಜರಿದು ಕೆಡಹಿದ ಕುಂಭಿ ಕುಂಭ ಭುಜದ್ವಯನ ಮುರಿ ದಂಬುಜಾಲಯರಮಣ ನರಹರಿ ದಹಿಸಖಿಳ ಶತ್ರುಗಳ 3 ಅಡಿಯಿಡುವ ರಭಸಕೆ ದಿಗಿಭಗಳು ನಡು ನಡುಗಲು ನಿಶಾಮುಖದಿ ಕೆಂ ಗಿಡಿಯನುಗುಳುತಲಾದಿ ದೈತ್ಯನ ಪಿಡಿದು ಖತಿಯಿಂಗ ತೊಡೆಯೊಳಿಕ್ಕೀರೈದು ಖರತರ ಕೊಡಲಿಯಂತಿಹ ನಖಗಳಿಂದ ನೊಡಲ ಬಗೆದಿಹ ನರಹರಿಯೆ ದಹಿಸಖಿಳ ಶತ್ರುಗಳ 4 ವರರಥಾಂಗಾದಿಗಳ ದ್ವಾದಶ ಕರದಿ ಧರಿಸುತಲೆರಡು ಕರದೊ ಳ್ಕರುಳಮಾಲೆಯ ಪಿಡಿದು ಮಿಕ್ಕಾದೆರಡು ಹಸ್ತಗಳ ಬೆರಳ ಕೊನೆಗಳ ತಿರುಹಿ ದಾನವ ಸುರವರನಖ ಮುಖದಿಂದ ಬಿಚ್ಚಿದ ನಿರವಧಿಕ ಬಲಪೂರ್ವ ನರಹರಿ ದಹಿಸಖಿಳ ಶತ್ರುಗಳ 5 ದತ್ತ ಸ್ವಾತಂತ್ರ್ಯವನು ಮೀರ್ದಾ ಪತ್ತು ಘಟಿಸುವ ಕಾಲದಲಿ ಪುರು- ಷೋತ್ತಮನ ನೆನೆದವರ ಕೈಪಿಡಿದೆತ್ತುತಿಹನೆಂದು ನಿತ್ಯ ಶಾಸ್ತ್ರಾದಿಗಳ ಶೋಧಿಸು ತುತ್ತುಮರು ಮೊದಲೆಂದ ಪೌರಾ- ಣೋಕ್ತಿಗಳ ನಿಜದೋರು ನರಹರಿ ದಹಿಸಖಿಳ ಶತ್ರುಗಳ 6 ಶೇಷಶಿಖರನಿವಾಸ ತತ್ಪದ ದಾಸರನು ಕಾಪಾಡಿ ಸಲಹುವ ಭಾಷೆಯನು ನೀ ಮರೆಪರೆ ಮದುಪಾಸ್ಯ ಸರ್ವೇಶ ಈಷದಂಜದ ದ್ವೇಷಿ ದುರ್ಜನ ನಾಶಗೈಸುವುದುಚಿತವೈ ಸವ ಕಾಶವ್ಯಾತಕೆ ನರಹರಿಯೆ ದಹಿಸಖಿಳ ಶತ್ರುಗಳ 7
--------------
ತುಪಾಕಿ ವೆಂಕಟರಮಣಾಚಾರ್ಯ
ನರಹರಿ ದೀನದಯಾಳೊ ನರಹರಿ ಪ ನರಹರಿ ಕಾಯೊ ನೀಯೆನ್ನ | ಮಹಾ ದುರಿತಂಗಳ ಮರಿಯೊ ಮುನ್ನ | ಆಹ ಪರಮ ಭಕುತಿಲಿ ನಿನ್ನ ಚರಣಾರಾಧನೆ ಮಾಳ್ಪೆ ವರಭಯ ಹಸ್ತವೆನ್ನ ಸಿರದಲಿಡುತಲಿ ಅ.ಪ. ಹಿಂದೆ ಪ್ರಹ್ಲಾದದೇವನಂದು | ಪಿತನ ಬಂಧನದೊಳು ಸಿಲ್ಕಿ ಬಹುನೊಂದು | ತಾನು ಸಂಧ್ಯಾಕಾಲದೊಳಾಗ ನಿಂದು ನಿನ್ನ ಒಂದೇ ಮನದಿ ಸ್ತುತಿಸೆ ದಯಸಿಂಧು | ಆಹ ಮಂದಮತಿಯ ಹಿರಣ್ಯಕನುದರವ ಬಗೆದು ಛಂದದಿ ಕರುಳ ಮಾಲೆಯ ಧರಿಸಿದ ಧೀರ 1 ಕಂದು ಕೊರಳನಂತರ್ಗತದೇವ | ಸಕಲ ವೃಂದಾರಕ ವೃಂದವ ಕಾವ | ಭಕುತ ಸಂದಣಿಗೆ ಬೇಡಿದನೀವ | ಭವ ಬಂಧನವೆಂಬ ವಿಪಿನಕೆ ದಾವ | ಆಹ ಎಂದಿಗೆ ನಿನ್ನಯ ಸಂದರುಶನವೀವೆ ಮಂದಮತಿಯಾದೆನ್ನ ಮುಂದಕೆ ಕರೆಯೊ 2 ನೊಂದೆ ಸಂಸಾರದೊಳು ಮಾಲೋಲ | ಕರುಣ ದಿಂದ ನೋಡೆನ್ನ ದೀನಜನಪಾಲ | ದಿವ್ಯ ಸುಂದರ ಮೂರುತಿಯೆ ಗೋಪಾಲ | ಪವನ ವಂದಿತ ಶ್ರೀ ರಂಗೇಶವಿಠಲ | ಆಹ ಬಂದೆನ್ನ ಹೃದಯಮಂದಿರದಿ ನೆಲೆಯಾಗಿ ನೀ ನಿಂದು ಸಲಹೋ ಎನ್ನ ಕುಂದುಗಳೆಣಿಸದೆ 3
--------------
ರಂಗೇಶವಿಠಲದಾಸರು
ನಾನೀಯದಿದ್ದರೆ ನೀನೇನನೀವೆ ಪ ನಾನು ಎಂಬುದು ಮಾತ್ರ ನಾ ನಿನಗಿತ್ತರೆ ಏನನೀಯುವೆ ರಂಗ ದೀನದಯಾಳು ಅ.ಪ ಅವಲಕ್ಕಿಯನು ತಂದವಗೆ ಭಾಗ್ಯವನಿತ್ತೆ ನವಫಲವನಿತ್ತವಳಿಗೆ ಒಲಿದೆ ನವನೀತವಿತ್ತರ್ಗೆ ಸುವಿಲಾಸಗಳನಿತ್ತೆ ಭುವಿಯೆಲ್ಲವಿತ್ತಂಥವನ ಬಾಗಿಲಕಾಯ್ದೆ 1 ಗಜರಾಜನಂದು ಪಂಕಜವೊಂದನಿತ್ತಂದು ಅಜಗರನನು ಕೊಂದು ಸೌಜನ್ಯವನಿತ್ತೆ ಭುಜದ ಮೇಲೆ ನಿನ್ನನಂಗಜ ಪೊತ್ತು ತಿರುಗಲು ರಜತಪದವಿಯನಿತ್ತು ವಿಜಯ ನೀ ಗೈದೆ 2 ಮಡದಿಮಣಿಯು ತಾನುಟ್ಟ ಪೀತಾಂಬರ ದೆಡ್ಡೆಯ ಹರಿದು ನಿನ್ನ ಅಡಿಗೆ ಕಟ್ಟಲ್ಕೆ ಮಡದಿಗೆ ಅಕ್ಷಯದುಡುಗೆಯ ನೀನಿತ್ತೆ ಮೃಡನು ತಾನೇನು ಕೊಡಲೋ ಗೋವಿಂದಾ 3 ಜಗಜಟ್ಟಿ ಹನುಮನು ಬಗೆದು ನಿನ್ನಯ ದುಗುಡವ ಬಿಡಿಸಿದ ಬಗೆಯ ನೀನÀರಿತೂ ಜಗದೊಳು ಸರಿಯಾದುಡುಗರೆಯಿಲ್ಲದೆ ನಗುತ ನಿನ್ನನು ನೀನೆ ಸೊUಸಿನಿಂದಿತ್ತೆ 4 ನಾನೆಂಬುದಲ್ಲದೆ ಏನುಂಟು ಎನ್ನೊಳು ನೀನೀವೆನಿದ ಮಾತ್ರ ಶ್ರೀನಾಯಕೇಶ ಏನನಾದರೂ ಸರಿ ನೀನೀಯೋ ಮುರವೈರಿ ನಾನು ನನ್ನದು ನಿನ್ನಧೀನ ಮಾಂಗಿರಿರಂಗ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾರಸಿಂಹ ಶ್ರೀ ನಾರಸಿಂಹ ಪಾರುಗಾಣಿಸಿ ದುರಿತೌಘಹರಿಸಿ ಕಾಯೊ ಪ ನರಹರಿ ಜ್ವರಹರ ಘೋರವ್ಯಾಧಿಯ ಪರಿಹಾರಗೈಸಿ ಪರಿಪಾಲಿಸಬೇಕಯ್ಯಾ ಅ.ಪ ಘುಡು ಘುಡಿಸುತ ಪಲ್ಕಡಿದು ಚೆಂಡಾಡುತ ಮೃಡನೆ ಪರನು ಎಂದು ನುಡಿದ ಕಶಿಪುವಿನ ಒಡನೆ ಕಂಭದಿ ಬಂದು ಒಡಲ ಬಗೆದು ನಿನ್ನ ಧೃಡ ಭಕುತಗೆ ಬಂದೆಡರ ಬಿಡಿಸಿದೆ1 ತುಷ್ಟಿಪಡಿಸೊ ಪರಮೇಷ್ಟಿಯ ಪಿತ ನಿನ್ನ ದೃಷ್ಟಿಯಿಂದ ಅನಿಷ್ಟ ನಿವಾರಣ ಅಷ್ಟಕರ್ತೃತ್ವದ ಪ್ರಭೋಕಷ್ಟಹರಿಸಿಭಕ್ತ- ರಿಷ್ಟ ಪಾಲಿಪ ಸರ್ವಸೃಷ್ಟಿಗೊಡೆಯ ದೇವ2 ಸಂಕಟ ಬಿಡಿಸೊ ಭವಸಂಕಟದಿಂದ ಶ್ರೀ ವೇಂಕಟೇಶಾತ್ಮಕ ಭೀಕರ ರೂಪ ಶಂಕರಾಂತರ್ಗತ ಸಂಕರುಷಣ ಮೂರ್ತೇ ಮಂಕುಹರಿಸಿ ಪಾದಪಂಕಜ ತೋರಯ್ಯ 3
--------------
ಉರಗಾದ್ರಿವಾಸವಿಠಲದಾಸರು
ನಾರಸಿಂಹನೆ ಧೀರ | ನಂಬಿದೆನೊ ಪೊರೆಯೊ ಶ್ರೀ ರಮಾಪತಿ ವೀರ | ಕರಿಗಿರಿ ವಿಹಾರ ಪ. ಸಾರಿದೆನೊ ನಿನ್ನ ಪದವ ಅನುದಿನ ಸೇರಿಸೆನ್ನನು ಭಕ್ತಕೂಟದಿ ಗಾರು ಮಾಡುವುದುಚಿತವೇ ಹರಿ ಭವ ಸಮುದ್ರದಿ ಅ.ಪ. ತಾಪ | ನಾನಾರಿಗುಸುರಲೊ ಒಡಲ ದುಃಖವ ಭೂಪ | ನೀನಲ್ಲದಿಲ್ಲವೊ ಭವ ಶ್ರೀಪ | ತೋರದಿರು ಕೋಪ ಘುಡು ಘುಡುಸಿ ನೀ ಎನ್ನ ಬೆದರಿಸೆ ತಡೆವೆನೇ ನಿನ್ನ ಕೋಪದಗ್ನಿಗೆ ಬಿಂಕ ಎನ್ನೊಳು ತಡೆಯೊ ಎನ್ನ ದುರುಳತನಗಳ ಕಡುಕರುಣಿ ನೀನಲ್ಲವೆ ಹರಿ ಒಡಲೊಳಗೆ ಪ್ರೇರಕನು ನೀನೆ ನಡಸಿದಂದದಿ ನಡೆವೆನಲ್ಲದೆ ಒಡೆಯ ಎನ್ನ ಸ್ವತಂತ್ರವೇನೊ? 1 ದುರುಳತನದಲಿ ದೈತ್ಯ | ಭೂವಲಯವೆಲ್ಲವ ಉರವಣಿಸಿ ದುಷ್ಕುತ್ಯ | ಎಸಗುತಿರೆ ದುಃಖದಿ ಸುರರು ಮೊರೆಯಿಡೆ ಸತ್ಯ | ದೃಢಮನದಿ ಭೃತ್ಯ ಕರಕರೆ ಪಿತ ಬಡಿಸುತಿರಲು ದೊರೆಯೆ ನೀ ಪೊರೆ ಎಂದು ಮೊರೆಯಿಡೆ ಸರ್ವವ್ಯಾಪಕನೆಂದು ತೋರಲು ತ್ವರಿತದಲಿ ಕಂಭದಲಿ ಬಂದು ಸರಸಿಜವು ಕಂಗೆಡುವೊ ಕಾಲದಿ ಧರಿಸಿ ತೊಡೆಯ ಮೇಲಸುರ ಕಾಯವ ಕರುಳ ಬಗೆದು ಮಾಲೆ ಧರಿಸಿ ಪೊರೆದೆಯೊ ಸ್ತುತಿ ಕೇಳಿ ಬಾಲನ 2 ಅಜಭವಾದಿಗಳೆಲ್ಲ | ಸ್ತುತಿಸಿದರೆ ಮಣಿಯದ ಭುಜಗಶಾಯಿ ಶ್ರೀ ನಲ್ಲ | ನಾ ನಿನ್ನ ಸ್ತುತಿಸಿ ಭಜಿಸಲಾಪೆನೆ ಕ್ಷುಲ್ಲ | ಮಾನವನ ಸೊಲ್ಲ ನಿಜಮನವ ನೀ ತಿಳಿದು ಸಲಹೊ ಕಮಲ ತೋರಿ ಕುಜನನಲ್ಲವೊ ಹಿರಿಯರೆನಗೆ ಪಥ ತೋರುತಿಹರೊ ರಜ ತಮವ ದೂರಟ್ಟಿ ಶುದ್ಧದಿ ಭಜಿಸುವಂದದಿ ಕೃಪೆಯ ಮಾಡಿ ಸುಜನರೆನ್ನನು ಪಾಲಿಸುತ್ತಿರೆ ನಿಜದಿ ಗೋಪಾಲಕೃಷ್ಣವಿಠ್ಠಲ3
--------------
ಅಂಬಾಬಾಯಿ