ಒಟ್ಟು 70 ಕಡೆಗಳಲ್ಲಿ , 25 ದಾಸರು , 58 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಕ್ಕೆ ಕಡೆಗಾಲ ಬಂದಿತೋ ಶಿವ ಶಿವ ಇನ್ನೇನಿನ್ನೇನು ಬೋಣನ ಸಗದ್ದೆಯೊಳಿರುತಿದೆ ನಾಡಿನಲಿನ್ನೇನಿನ್ನೇನು ಪ ಬಂತು ಇನ್ನೇನಿನ್ನೇನು ಮನೆಯೊಳು ಸಿಕ್ಕಿದೆ ಜಾರಲಿ ಕಣಿಯಿಲ್ಲವಿನ್ನೇನಿನ್ನೇನು ದನ ಕರುಗಳ ನೊಂದ ನುಳಿಸದೆ ವೈದ್ಯರು ಇನ್ನೇನಿನ್ನೇನು ಜನರೆಲ್ಲ ಕೈಸೆರೆಯನು ಸಿಕ್ಕಿ ಹೋಯಿತು ಇನ್ನೇನಿನ್ನೇನು 1 ಅಂಗಳದೊಳು ಪಾದವಿಕ್ಕೀತು ಜನರಿಗೆ ಇನ್ನೇನಿನ್ನೇನು ಭಂಗಾರವ ತನ್ನಿರೆಂದು ಝಂಕಿಸಿದರು ಇನ್ನೇನಿನ್ನೇನು ಭಂಗಪಡುವ ಕಾಲಬಂತು ಮಾನವರಿಗೆ ಇನ್ನೇನಿನ್ನೇನು ಅಂಗನೆಯ ಹಿಡಿದೆಳೆದು ಸುಲಿದರು ಇನ್ನೇನಿನ್ನೇನು2 ಉಡಿಗೆ ತೊಡಿಗೆಯನ್ನು ಸೆಳೆದರು ಸತಿಯರ ಇನ್ನೇನಿನ್ನೇನು ಕಡಿದರು ಕೆಲರ ತೋಳ್ ತೊಡೆಗಳ ಶಿರಗಳ ಇನ್ನೇನಿನ್ನೇನು ಕಡಲಿಟ್ಟು ಹರಿದುದು ರಕ್ತ ಪ್ರವಾಹವು ಇನ್ನೇನಿನ್ನೇನು ಕಡುಪಿಂದೆ ಕಾಲ್‍ಕೈಗೆ ಮುರವಾಳವಿಕ್ಕಿದರಿನ್ನೇನಿನ್ನೇನು 3 ಸುಲಿದರು ಚಿನ್ನ ಚಿಗುರು ಬೆಳ್ಳಿ ವಸ್ತುವ ನಿನ್ನೇನಿನ್ನೇನು ಹೊಳಲಿಗೆ ಬೆಂಕಿಯ ನಿಕ್ಕಿದರಲ್ಲಲ್ಲಿ ಇನ್ನೇನಿನ್ನೇನು ಉಳಿದೆನು ಇನ್ನೇನಿನ್ನೇನು ಜಲಜಾಕ್ಷ ನಿನ್ನಯ ಕರುಣ ಕಟಾಕ್ಷದಲಿನ್ನೇನಿನ್ನೇನು 4 ಹಿಂದಂಬರೀಶ ಗಜೇಂದ್ರನ ಕಾಯ್ದಂತೆ ಇನ್ನೇನಿನ್ನೇನು ಇಂದಿನ ದುರಿತವ ಪರಿಹರಿಸಿದೆ ನೀನು ಇನ್ನೇನಿನ್ನೇನು ಬಂಧಿಸಿ ಹೊಡೆದ ಗೋಕುಲವನು ತಂದಿತ್ತೆ ಇನ್ನೇನಿನ್ನೇನು ಮಂದ ಮಾರುತ ನಣುಗನ ಕೋಣೆ ಲಕ್ಷ್ಮೀಶ ಇನ್ನೇನಿನ್ನೇನು 5
--------------
ಕವಿ ಪರಮದೇವದಾಸರು
ಬಂತೆಂದ್ಹಿಗ್ಗ ಬೇಡೆಲೊ ಖೋಡಿ ಹೋ ಯ್ತೆಂದಳಬೇಡೆಲೆ ಖೋಡಿ ಪ ಬಂತುಹೋಯ್ತೆಂಬುದರಂತರ ತಿಳಕೊಂ ಡಂದಕನನುವಿಗೆ ತ್ವರೆ ಮಾಡಿ ಅ.ಪ ಬಂದು ನಿನಗಾಗುವುದೇನೋ ಮತ್ತು ಹೋದರೆ ನಿಂತ್ಹೋಗುವುದೇನೋ ಮಂದನಾಗದೆ ನೀ ಬಂದ ಖೂನ ತಿಳಿ ದೊಂದಿ ಭಜಿಸಿ ಹರಿದಯ ಪಡಿ1 ಎಂಥಸಮಯವನು ನೀ ಪಡೆದು ಭವ ಸಂತೆಯೊಳಗೆ ನಿಂತಿ ಮೈಮರೆದು ಸಂತೆಯ ತಂತ್ರಕೆ ಸೋಲದೆ ಕಂತು ಪಿತನನೆನಿ ಲಗುಮಾಡಿ 2 ಕ್ಷಿತಿಯ ಸುಖವು ನಿನಗೊಂದಿಲ್ಲ ನಿಜ ಭವ ಮೂಳ ಸತತದಿ ಭಕುತಹಿತ ಶ್ರೀರಾಮನನ್ನು ನುತಿಸಿ ಮುಕ್ತಿ ಸುಖ ಪಡಿಬೇಡಿ 3
--------------
ರಾಮದಾಸರು
ಬ್ರಾಹ್ಮಣನುಣಲಿಕೆ ರಾಗಿ ಹಿಟ್ಟು ತನ್ನ ಬಂಧು ಜನಕ್ಕೆ ಒಬ್ಬಟ್ಟು ಪ ಪಾಮರ ಜನರಲಿ ವಾಡಿಕೆಯಿದು | ಶ್ರೀ ರಾಮನೊಲಿವನೆ ಎಂದಿಗಾದರು ಅ.ಪ ಮಾತು ಮಾತಿಗೆ ಸಾಲಮಾಡಿ | ಬಹ ಳಾತುರದಲಿ ಓಡಾಡಿ ಜಾತುಕನಂದದಿ ಜನಗಳ ಮೆಚ್ಚಿಸಿ ಪಾತಕವಾದರು ಲಾಭವಧಿಕ 1 ದೊಡ್ಡದಾಗಿ ಮನೆಕಟ್ಟಿದರೆ -ಸಾಲ ಹೆಡ್ಡಗಾದರು ಹುಟ್ಟುವುದು ದುಡ್ಡುದೇವರಿಗಿಂತ ದೊಡ್ಡದೇವರು ಯಾವುದು? ಬಡ್ಡಿ ಹಚ್ಚು ಬರುವನೆ ಮಹರಾಯನು2 ಹೊಟ್ಟೆಗೆ ತಿಂಬುವದ್ಯಾರು ಬಲ್ಲರು? ವುಟ್ಟ ಬಟ್ಟೆಯಲ್ಲರು ನೋಡುವರು ಸಿಟ್ಟು ಬಂದರೆ ಬೆಂಕಿಯಂತವ ನಾನು ಹೊಟ್ಟೆ ಚಿಕ್ಕದು ಕಣ್ಣು ದೊಡ್ಡದು 3 ಪರಲೋಕವು ಉಂಟೆಂದು ಪೇಳು ವರರಿಯದವರು ತಾವು ಮುಂದು ನರಕವುಸ್ವರ್ಗವು ಯಾರು ನೋಡಿರುವರು ಪುರಾಣ ಶಾಸ್ತ್ರಗಳು ಯಾತಕೆ ಬಿಡಿ4 ಅತಿಥಿಗಳಿಗೆ ನೀರುಮಜ್ಜಿಗೆ | ಮೊಸರು ಸತಿಸುತರಿಗೂ ಮತ್ತು ತನಗೆ ಯಿತರರಿಗೆಲ್ಲಾ ಎಣ್ಣೆಕರೆದ ಭಕ್ಷ್ಯ ಘೃತಭಕ್ಷ ತನಗೆ ಮಾತ್ರ 5 ಎಣ್ಣೆಯು ಬಲುರುಚಿ ನಮಗೆ | ತುಪ್ಪ ವಿನ್ನೇತಕೆ ಹೆಚ್ಚು ಬೆಲೆಗೆ ಕಣ್ಣಲಿ ಕಂಡದು ಮಾತ್ರ ಸತ್ಯ | ನಾ ವನ್ಯರ ನುಡಿ ನಂಬುವುದಿಲ್ಲವು 6 ವೊರಿಗೆಲ್ಲ ನಾ ಮೇಟಿ | ಯನ್ನ ನಾರು ಪೋಲುವರು ಸಾಟಿ ನೂರೆಲೆ ಬೀಳ್ವುದು ನಮ್ಮ ಮನೇಲೀ ಘೋರ ಕ್ಷಾಮದಲಿ ನಾನೆ ಪೊರೆವೆ 7 ಪರರಂತೆ ನಾನಿರಬೇಕು | ಶ್ರೀ ಹರಿ ಇಷ್ಟು ಕೊಟ್ಟರೆ ಸಾಕು ಗುರುಹಿರಿಯರು ನುಡಿಯೇತಕವರು ಮುದು- ಕರು ಏನು ಬಲ್ಲರು ಲೌಕೀಕವ 8 ಗುರುರಾಮವಿಠಲೆಲ್ಲಿ ಭ್ರಾಂತು -ಈ ಕರೆಕರೆ ನಮಗೇಕೆ ಬಂತು ಸೇರಿತು ಬಡವರಾವು 9
--------------
ಗುರುರಾಮವಿಠಲ
ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯನರಿಯದೆ ಭಕ್ತ ನಾನೆಂದಾಡುವರ್ಹೊರಿಯ ಧ್ರುವ ಚಕ್ಕಮಲಕು ಭಕ್ತಿಯ ನೋಡಿ ಉಕ್ಕಿ ದೋರುತಲ್ಯದ ಬಲಗೂಡಿ ಮಿಕ್ಕ ಮಾನವರಿಗೆ ದಯಮಾಡಿ 1 ಡಂಭದೋರು ವನೇಕಚಂದ ಗುಂಭಹೇಳನು ಸರಕ್ಕನೆ ಬಂದು ಕೊಂಬುಕೊಡುವ ಮಾತಿಗೆ ಬಂದರೆ ನಂಬದೆ ಹೋಗುವರತ್ತತ್ತ ಹಿಂದ 2 ಹೊಟ್ಟಿನಮ್ಯಾಲೆ ಸಾರಿಸಿದಂತೆ ನಿಷ್ಠೆನೋಡಿ ಜನ ಮೋಹಿಸುವಂತೆ ಘಟ್ಟಿಸುತ ತಮ್ಮ ಹೊಟ್ಟೆಯ ಹೊರೆದರು ಮುಟ್ಟ ಭಜಿಸುವ ಗುಟ್ಟುದೋರಿದಂತೆ3 ರಚ್ಚಿಗೆ ಬಂತು ಭಕ್ತಿ ಇದೇ ಬಹಳ ಹೆಚ್ಚು ನಮ್ಮದೆಂದು ಮಾಡುರು ಮ್ಯಾಳಿ ಮತ್ಸರದೊಳಗಿದ್ದು ಸಚಲಸ್ನಾನ ಮಾಡಿದೆವೆಂದು ಹೇಳುರು ನಿರ್ಮಲ4 ನಗೆ ಬರುತ್ತದೆ ಭಕ್ತಿಯ ಕಂಡು ಜಗದೊಳಗೆಲ್ಲ ಇದೇವೆ ಭಂಡು ಸುಗಮ ಸುಪಥ ಬ್ಯಾರದೆ ಎಂದು ಮಹಿಪತಿ ಘನಬೆರೆದು ಸದ್ಗುರು ಬಲಗೊಂಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನಸಿಗೆ ಬಂತು ತಾ ಘನ ಗುರುಮೂರ್ತಿ ಶ್ರೀಪಾದ ಧ್ರುವ ಕನಸಿಲೆ ಕಾಣದ ಕುರುಹು ಮನಸಿಗೆ ಬಂತೆನ್ನೊಳು ತಾ ಪೂರ್ಣ ಏನೆಂದ್ಹೇಳಲಿ ಸೂಕ್ಷ್ಮ ಅನುಭವದ ಖೂನ 1 ಮನಸಿಗೆ ಬಾರದೆ ಹೋಗಿ ಜನಸಿತು ನಾನಾ ಯೋನಿಲೆನ್ನ ಏನೋ ಎಂತೋ ತಿಳಿಯದು ಅನಂದ ಘನ 2 ಮನಸಿಗೆ ಬಂದ ತಾ ವಸ್ತು ಜನವನದೊಳು ತಾ ತುಂ ಬ್ಯಾದೆ ಅನುಕೂಲವಾಯಿತು ಎನಗೆ ದೀನ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮುನಿದ ಭಾವುನದಂಡು ಕಂಡು ನಿನ್ನ ಮನೆಮಾರಿ ನಾಸೆಯನು ನೀಡಾಡು ಪ ಲಂಬಾಣಿ ಜನ ಬಂತು ನೋಡು ನೀನು ದಿಬ್ಬವ ಹತ್ತಿ ಕಾನಿಗೆ ಓಡು ತಂಬಿಗೆಗಳ ಜೊತೆಮಾಡು ತಲೆ ಚಂಬಿಗೆ ಬಂತು ಮಾನವರಿಗೆ ಕೇಡು 1 ಕಂಡ ಕಂಡವರನು ಹಿಡಿದು ಕರ ಚೆಂಡಾಡಿ ಹೊಯ್ದು ಕೆಡಹಿ ಮೆಟ್ಟಿ ತಿವಿದು ಖಂಡೆಯದೊಳು ಘಾಯ ಗರೆದು ಮೈ ರೊಂಡಿ ಮುರಿದು ಗಂಟಿಗೆ ನೀರನೆರೆದು 2 ಕತ್ತಿಯ ಕಿತ್ತು ಕೈಯೆತ್ತು ಗೋಣ ಕುತ್ತಿ ಹಸ್ತಕೆ ಹಸ್ತವನು ತರಿದೊತ್ತಿ ರಕ್ತ ಮಾಂಸದ ಕರುಳೊತ್ತಿ ಹಾ ರಿತು ಗೂಡಿಂದ ಜೀವನು ಕಣ್ಣ ಕುತ್ತಿ 3 ಹಂತಕಾರಿಗಳೊಂದೆ ರೂಪು ಪಾಪ ವಂತರಿಗಿನಜ ತೋರಿಸುವ ವಿದೂಪ ನರ ಕಂತೆಯ ಬಿಡದೆ ಸುಲಿಯಲಿಕೆ ಸಾಪು 4 ಶೀಲವಂತರು ಶೀಲಗೆಟ್ಟರು ದುಃ ಶೀಲರು ಶೀಲದಾಚಾರವ ಸೊಟ್ಟರು ಕೀಳು ಮೇಲೊಂದಾಯಿತಷ್ಟು ಲಕ್ಷ್ಮೀ ಲೋಲ ಮಾಡಿಸುವ ಕುಚೇಷ್ಟೆ ಇವಿಷ್ಟು 5
--------------
ಕವಿ ಪರಮದೇವದಾಸರು
ರಚ್ಚೆ ಕಟ್ಟೆ ಪುರಾಣ ರಾದ್ಧಾಂತವು -ಇದು ಪ ಹುಚ್ಚುತನದಲಿ ನೀ | ಚೋಚ್ಚ ನುಡಿಗಳನಾಡುವುದು ಅ.ಪ ನವನವ ಆಸ್ತಿಗಳೆಲ್ಲ | ಇವನ ಮನೆಗೆ ಸೇರಿ ಬಂತು 1 ಸೊಟ್ಟಮೂತಿ ನಾಗಪ್ಪನ ಸೋದರಿಯರು ಏನು ಹೇಳಲಿ 2 ಇವನಿಗೆ ಬಂತು ಮತ್ತೆ ನಾವು ಬಡವರು ನಮಗೆಲ್ಲಿಂದ ಬಹುದು? 3 ದುರ್ಯೋಧನ ಯೋಗ್ಯ ಕುಂತೀತರಳರದೇ ಅನ್ಯಾಯ ಕೃಷ್ಣನು ನೆರೆ ಮೋಸಗಾರನು ಭಾರತ ಕಥೆಯೆಂಬುವುದು4 ಮೋಸಗಾರರೀವೂರೆಲ್ಲ ಆಶೆ ಪಾತಕರು 5 ತಂಗಿ ಆಸ್ತಿ ಸೇರಿತಿವಗೆ ಭಂಗಿ ಕೋರ ವೆಂಕಟರಾಯ ಮಂಗಿ ಸಂಗದಿಂದಲೀ ಕಮಂಗನಾನನು 6 ಮಧ್ವರಾಯನ ಮಗನ ಕಥೆ ಏನು ಹೇಳೋಣ 7 ಕಾಸಿದ್ದವರೇನು ಮಾಡಿದರೂ ಮಾಡಬಹುದು 8 ದಾರಿಹೋಕರೆಲ್ಲ ಕೂಡಿ ಭಾರಿ ಭಾರಿ ಮಾತುಗಳಾಡಿ ಸೂರೆಗೊಂಬುವರು ಪಾಪ ಶರಧಿಯನ್ನು 9 ಶರಣರ ದೂರಿಪಾತಕಕ್ಕೆ ಭಾಗಿಗಳಹರು 10
--------------
ಗುರುರಾಮವಿಠಲ
ಶುದ್ಧ ಸನ್ಮಾರ್ಗ ಸರ್ವರಿಗಿದು ಒಂದೆ ಬುದ್ಧಿವಂತರು ತಿಳಿದರು ಇದರಿಂದೆ 1 ಇದರಿಂದೇವೆಂಬುದು ನಿರ್ವಾಣ ಒದರುತಲಿಹುದು ವೇದಪುರಾಣ 2 ಪುರಾಣ ಪುಣ್ಯದ ಹಾದಿಯು ನಿಜ ಸುರಮುನಿಗಳಿಗಿದು ಹೊಳೆವದು ಸಹಜ 3 ಸಹಜಾನಂದದ ಸುಖಸಾಗರ ಬಾಹ್ಯಾಂತ್ರ ಸದೋತಿತ ಸಹಕಾರ 4 ಸಹಕಾರವು ಚಿನ್ಮಯ ಚಿದ್ರೂಪ ಸೋಹ್ಯದೋರುವ ಶ್ರೀ ಗುರುಸ್ವರೂಪ 5 ಸ್ವರೂಪವೆ ಸದ್ಗೈಸುವ ಹಾದಿ ಪರಮ ವೈಷ್ಣವರ ಮೂಲಾಗ್ರದ ಆದಿ 6 ಅಧಿವೆಂಬುದು ನಿಜನಿರ್ಧಾರ ಸಾಧಿಸುದವರಿಗೆ ಸಾಕ್ಷಾತಾರ 7 ಸಾಕ್ಷಾತ್ಕಾರವೆ ಮೋಕ್ಷದಮನೆಯು ಅಕ್ಷಯ ಪದ ಅದ್ವೈತದ ಖಣಿಯ 8 ಅದ್ವೈತವೆ ಆಧ್ಮಾತ್ಮ ಸುವಿದ್ಯ ಸಿದ್ದಸಾಧಕರಿಗೆ ಆಗುವ ಸಾಧ್ಯ 9 ಸಾಧ್ಯವೆಂಬುದು ನಿಜಸಿದ್ಧಾಂತ ಭೇದಿಸಿದವರಿಗೆ ಇದು ಸನ್ಮತ 10 ಸನ್ಮತವೆ ಮತ ಸರ್ವರಿಗೆಲ್ಲ ಉನ್ಮನಲೀಹ ಮಹಾಯೋಗಿಯು ಬಲ್ಲ 11 ಬಲ್ಲೆವೆಂಬುದು ಬಲು ಅಗಾಧ ಸೊಲ್ಲಿಗೆ ಸಿಲುಕದು ಗುರುನಿಜಭೋದ 12 ಬೋಧವೆ ಸದ್ಗುರುವಿನ ದಯಕರುಣ ಸದ್ಗತಿಸುಖ ಸಾಧನದ ಸ್ಫುರಣ 13 ಸ್ಫುರಣವೆ ಬ್ರಹ್ಮಾನಂದದ ಹರುಷ ತರಣೋಪಾಯದ ಮಹಾ ಉಪದೇಶ 14 ಉಪದೇಶವೆ ನಿಜ ಉಪನಿಷದ್ವಾಕ್ಯ ಒಪ್ಪಿಡುವದು ಭೂಸ್ವರ್ಗತ್ರೈಲೋಕ್ಯ 15 ತ್ರೈಲೋಕ್ಯಕೆ ಇದು ನಿಜನಿಧಾನ ಭಯವಿಲ್ಲದ ಮಹಾಸುಖಸಾಧನ 16 ಸಾಧನದಿಂದ ಸದ್ಗತಿ ಸಂಪೂರ್ಣ ಸಾಧು ಸಜ್ಜನರಿಗೆ ಸಕಲಾಭರಣ 17 ಸಕಲಾಭರಣ ಸದ್ಗುರು ನಿಜ ಅಭಯವು ಶುಕಾದಿ ಮುನಿಗು ಕೂಡಿದ ಪ್ರಭೆಯು 18 ಪ್ರಭೆಗಾಣಲು ತೋರದು ನೆಲೆನಿಭವು ನಿಭವೆ ಮಹಾಮಂಗಳಕರ ಶುಭವು 19 ಶುಭದೋರುದು ಸದ್ಗುರು ಕೃಪೆಯಿಂದ ಭ್ರಮೆಹಾರಿತು ಮಾಯೆ ಇದರಿಂದ 20 ಇದರಿಂದೆ ಇದರಿಟ್ಟಿತು ಪುಣ್ಯ ಒದಗಿ ಕೈಗೂಡಿತು ಬಂತು ತಾರ್ಕಣ್ಯ 21 ತಾರ್ಕಣ್ಯವು ಬಂತೆನ್ನೊಳು ಪೂರ್ಣ ಸರ್ಕನೆ ದೊರೆಯಿತು ಸದ್ಗುರುಖೂನ 22 ಖೂನವೆ ಎನ್ನೊಳಗಾಯಿತು ಧ್ಯಾನ ಘನಸುಖದೋರುವ ಅನುಸಂಧಾನ 23 ಅನುಕೂಲಾದ ನಮ್ಮಯ್ಯ ಪ್ರಸಿದ್ಧ 24 ಪ್ರಸಿದ್ಧವೆ ಪ್ರತ್ಯಕ್ಷ ಪ್ರಮಾಣ ಭಾಸುತಿಹುದು ಶ್ರೀಗುರು ಶ್ರೀಚರಣ 25 ಶ್ರೀಚರಣಕೆ ಎರಗಿಹ ಮಹಿಪತಿಯು ಸೂಚನೆ ಮಾತ್ರ ಕೊಂಡಾಡಿದ ಸ್ತುತಿಯು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರಯಧೇನು ಬಂತು ಮನಿಗೆ ದಯ ಕರುಣದಿಂದೊಲಿದು ಸರ್ವಾರ್ಥಗರೆವುತಲಿ ಧ್ರುವ ತನ್ನಿಂದ ತಾನೊಲಿದು ಚೆನ್ನಾಗಿ ತೋರ್ವಿಳಿದು ಭಿನ್ನವಿಲ್ಲದೆ ನೋಡಿ ಹಂಬಲಿಸುತ ಉನ್ನತೋನ್ನತ ಮೋಹ ಮೊಳಿಯೊಳಮೃತ ತುಂಬಿ ಪುಣ್ಯಧಾರಿಂದೊರಗಿ ಭೋರಿಡುತಗಲೆರವುತಲಿ 1 ಸುರಸ ಸಾರಾಯದನುಭವ ಬೆರಸಲಾಗಿ ತಾಂ ವರ ಮಹಾಕೃಪೆ ಘನದೊಳವಿನಿಂದ ಧರೆಯೊಳಾನಂದ ಸುಖ ಸಾರಿಡುತ ಪೂರ್ಣ ಇರ್ಹುಳಗಲೆನದೆ ಸರ್ವಪತಿ ಯಿಂದ್ಹರುಷಗರೆವಾ 2 ಬೆಳಗಿ ತನ್ನರ ಬೆಳೆಸಲಾಗಿ ಸದ್ವಸ್ತು ತಾಂ ತಿಳಿದು ಶ್ರಯಧೇನಾಗಿ ಬಂತು ಬಳಿಗೆ ಕಳವಳಿಸಿ ಕರುಣ ಕಟಾಕ್ಷದಿಂದಲಿ ನೋಡಿ ಎಳೆಗರುವ ಮಹಿಪತಿಗಮೃತನುಣಿಸಿಕೊಳಲಾಗಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ಅಕ್ಷೋಭ್ಯ ತೀರ್ಥರ ಚರಿತ್ರೆ ಅಕ್ಷೋಭ್ಯ ತೀರ್ಥಗುರು ಸಾರ್ವಭೌಮರು ಎಮ್ಮ ರಕ್ಷಿಪ ಕೃಪಾನಿಧಿಗೆ ಶರಣು ಶರಣೆಂಬೆ ಪಕ್ಷೀಶ ವಾಹನ್ನ ಲಕ್ಷ್ಮೀಶ ಕಮಲಾಕ್ಷ ವಿಷ್ಣು ಆತ್ಮಗೆ ಪ್ರಿಯ ಸತ್ತತ್ವವಾದಿ ಪ ಅಖಿಳಗುಣ ಆಧಾರ ನಿರ್ದೋಷ ಶ್ರೀರಮಣ ಜಗದಾದಿ ಮೂಲಗುರು ಅಗುರು ಶ್ರೀ ಹಂಸ ವಾಗೀಶ ಸನಕಾದಿ ದೂರ್ವಾಸಾದಿಗಳ ಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ 1 ಅಚ್ಯುತ ಪ್ರೇಕ್ಷಾಖ್ಯ ಪುರುಷೋತ್ತಮತೀರ್ಥ ಅಚ್ಯುತ ಪ್ರೇಕ್ಷರ ಶಿಷ್ಯರೆಂದೆನಿಪ ಅಚ್ಯುತನ ಮುಖ್ಯಾಧಿಷ್ಠಾನ ಶ್ರೀಮಧ್ವ ಖಚರೇಂದ್ರ ಫಣಿಪಮೃಡ ಅಮರೇಂದ್ರವಂದ್ಯ 2 ಕರ ಅಬ್ಜಜರು ಪದ್ಮನಾಭನೃಹರಿ ಮಾಧವಾಕ್ಷೋಭ್ಯ ಈ ಮಹಾಗುರುಗಳು ಸರ್ವರಿಗು ಆನಮಿಪೆ ಸುಮನಸ ಶ್ರೇಷ್ಠರು ಮಹಿಯಲಿ ಪುಟ್ಟಿಹರು 3 ಸಾಧು ವೈದಿಕ ವೇದಾಂತ ಸತ್ತತ್ವ ಮತ ಮಧ್ವ ಮತವೇ ಅನ್ಯ ಯಾವುವೂ ಅಲ್ಲ ಎಂದು ನಿಶ್ಚೈಸಿ ಶೋಭನಭಟ್ಟಸ್ವಾಮಿ ಶಾಸ್ತ್ರಿ ಮೊದಲಾದವರು ಮಧ್ವಗೆರಗಿದರು 4 ಸೂರಿವರ ಶೋಭನ ಭಟ್ಟಾದಿಗಳಂತೆ ಸಾರಾಸಾರ ವಿವೇಕಿ ಗೋವಿಂದ ಶಾಸ್ತ್ರಿಯು ಮಹಾ ದೊಡ್ಡ ಪಂಡಿತರು ತಾನೂ ಎರಗಿ ಶರಣಾದರು ಮಧ್ವರಾಯರಲಿ 5 ಇಂಥಾ ಮಹಾತ್ಮರ ಇನ್ನೂ ಬಹು ಸಜ್ಜರನ ಉದ್ಧರಿಸಲಿಕ್ಕೇವೆ ಹರಿ ಅಜ್ಞೆಯಿಂದ ಈ ಧರೆಯಲ್ಲಿ ತೋರಿಹ ಮಧ್ವರಾಯರ ಶಾಸ್ತ್ರಿ ಬೇಡಿದರು ಸಂನ್ಯಾಸ ಕೊಡು ಎಂದು 6 ಸಚ್ಚಾಸ್ತ್ರ ಪ್ರವಚನ ಪಟು ವಿದ್ವನ್ಮಣಿಯು ನಿಶ್ಚಲ ಭಕ್ತಿಮಾನ್ ಸವೈರಾಗ್ಯ ವಿಪ್ರ ಅಚಲ ಸತ್ತತ್ವನಿಶ್ಚಯ ಜ್ಞಾನಿ ಶಾಸ್ತ್ರಿಗೆ ಅಕ್ಷೋಭ್ಯ ನಾಮನ ಇತ್ತರಾಚಾರ್ಯ 7 ಪ್ರಣವ ಮೂಲಾದಿ ಸುಮಂತ್ರ ಉಪದೇಶಿಸಿ ತನ್ನ ಮಠದಲ್ಲಿ ಅಕ್ಷೋಭ್ಯತೀರ್ಥರಿಗೆ ವನರುಹನಾಭರಿಂದ ನಾಲ್ಕನೇ ಸ್ಥಾನವ ಘನದಯದಿ ಇತ್ತರು ಆನಂದಮುನಿಯು 8 ಬದರಿಗೆ ಮೂರನೇ ಬಾರಿ ತೆರಳುವ ಪೂರ್ವ ಮಧ್ವ ಮುನಿ ನೇಮಿಸಿದ ಕ್ರಮದಿಂದಲೇವೆ ಮಾಧವ ತೀರ್ಥರು ವೇದಾಂತ ಪೀಠದಲಿ ಕುಳಿತುಜ್ವಲಿಸಿದರು 9 ಪದ್ಮನಾಭತೀರ್ಥರ ಪಾದಪದ್ಮಗಳಿಗೆ ಸದಾ ನಮೋ ನಮೋ ಎಂಬೆ ಇವರ ಪೀಳಿಗೆಯ ವಿದ್ಯಾಕುಶಲರು ಸೂರಿಗಳ ಚರಣಕ್ಕೆ ಸಂತೈಪರೆಮ್ಮ ಸದಾ ನಮೋ ಸರ್ವದಾ 10 ನರಹರಿತೀರ್ಥರು ಚರಣ ಸರಸೀರುಹದಿ ಶರಣಾದೆ ಕಾಯ್ವರು ಈ ಮಹಾನ್ ಇಹರು ವರಾಹ ತನಯಾ ಸರಿದ್ವರಾಕ್ಷೇತ್ರದಲಿ ಶ್ರೀ ವೃಂದಾವನದೊಳು ಹರಿಯ ಧ್ಯಾನಿಸುತ 11 ಮಾಧವತೀರ್ಥರ ಪಾದಪದ್ಮಗಳಿಗೆ ಸದಾನಮೋ ನಮೋ ಎಂಬೆ ಇವರ ಪೀಳಿಗೆಯ ಯತಿಗಳೂ ಭಕ್ತಿಮಾನ್ ಜ್ಞಾನಿಗಳ ಚರಣಕ್ಕೆ ಆದರದಿ ನಮಿಸುವೆ ಸದಾ ಪೊರೆವರೆಮ್ಮ 12 ಸುಲಭರು ಸುಜನರಿಗೆ ಶರಣರ ಸಲಹುವರು ಮಾಲೋಲನೊಲಿದಿಹ ಅಕ್ಷೋಭ್ಯತೀರ್ಥ ಬಲು ಖಿನ್ನ ಬ್ರಾಹ್ಮಣನು ಬ್ರಹ್ಮ ಹತ್ಯ ಮಾಡಿದವ ಕಾಲಲ್ಲಿ ಬಿದ್ದು ಶರಣಾದ ಗುರುಗಳಲಿ 13 ಗುರು ದಯಾನಿಧಿ ಅಕ್ಷೋಭ್ಯತೀರ್ಥರು ಆಗ ಶರಣಾದ ಪುರುಷನ ಪಶ್ಚಾತ್ತಾಪ ಖರೆಯೇ ಎಂಬುವುದನ್ನು ಜನರಿಗೆ ತಿಳಿಸಲು ಏರಿ ಮರ ನದಿಯಲಿ ಬೀಳೆ ಹೇಳಿದರು 14 ತನ್ನಯ ಮಹಾಪಾಪ ಕಳೆಯುವ ಗುರುಗಳು ಏನು ಹೇಳಿದರೂ ಮಾಡುವೆ ತಾನೆಂದು ಸನ್ನಮಿಸಿ ಗುರುಗಳಿಗೆ ನದಿ ಬದಿ ಮರಹತ್ತೆ ದೀನ ರಕ್ಷಕ ಗುರು ಇಳಿಯೆ ಹೇಳಿದರು 15 ವೃಕ್ಷದಿಂದಿಳಿದ ಆ ವಿಪ್ರಘಾತುಕನ ಮೇಲೆ ಅಕ್ಷೋಭ್ಯತೀರ್ಥರು ಶಂಖತೀರ್ಥವನ್ನ ಪ್ರೋಕ್ಷಿಸಿ ಆತನ ಮಹಾ ಬ್ರಹ್ಮಹತ್ಯಾ ದೋಷ ಕಳೆದರು ಪಂಕ್ತಿಯಲಿ ಸೇರಿಸಿದರು 16 ಶಂಖತೀರ್ಥದ ಮಹಿಮೆ ಅಲ್ಲಿದ್ದ ಜನರಿಗೆ ಶಂಕೆಯಲ್ಲದೆ ತಿಳಿಸಿ ಬಂದು ಬೇಡುವವರ ಡೊಂಕು ಕೊರತೆಗಳೆಲ್ಲ ನೀಗಿಸಿ ಯೋಗ್ಯದಿ ಶ್ರೀಕಾಂತನಲಿ ಭಕ್ತಿ ಪುಟ್ಟಿಸಿಹರು 17 ತಮ್ಮಲ್ಲಿ ಬೇಡುವ ಅಧಿಕಾರಿಯೋಗ್ಯರಿಗೆ ಶ್ರೀಮಧ್ವಶಾಸ್ತ್ರದ ದಾಢ್ರ್ಯ ಜ್ಞಾನ ಶ್ರೀ ಮನೋಹರನನ್ನ ಅಪರೋಕ್ಷಿಕರಿಸುವ ಸುಮಹಾ ಉಪಾಯವ ಅರುಹಿಹರು ದಯದಿ 18 ಮಧ್ವಸಿದ್ಧಾಂತ ಸ್ಥಾಪನ ಮಾತ್ರವಲ್ಲದೇ ವೇದ ವಂಚಕ ದುರ್ಮತಗಳ ಖಂಡನವ ಪೋದಕಡೆ ಮಾಡುತ್ತಾ ದಿಗ್ವಿಜಯ ಜಯಶೀಲ - ರೆಂದು ಮರ್ಯಾದೆಗಳ ಕೊಂಡಿಹರು ಜಗದಿ 19 ಅದ್ವೈತವಾದಿಯು ಶಾಂಕರ ಮಠಾಧೀಶ ವಿದ್ಯಾರಣ್ಯರು ಪ್ರಸಿದ್ಧ ಪಂಡಿತರು ಎದುರು ನಿಂತರು ಅಕ್ಷೋಭ್ಯ ತೀರ್ಥರ ಮುಂದೆ ವಾದಿಸಿದರು ಮುಳುಬಾಗಿಲು ಸಮೀಪ 20 ಶ್ವೇತಕೇತು ಉದ್ದಾಲಕರ ಸಂವಾದ ತತ್ವ ಮಸಿ ವಾಕ್ಯವೇ ವಾದದ ವಿಷಯ ವೇದಾಂತ ದೇಶಿಕರು ರಾಮಾನುಜೀಯತಿಯ ಅಧ್ಯಕ್ಷತೆಯಲ್ಲಿ ಸಭೆಯು ಕೂಡಿತ್ತು 21 ಛಾಂದೋಗ್ಯ ಉಪನಿಷತ್ತಲ್ಲಿರುವ ವಾಕ್ಯವು ಸಆತ್ಮಾ ತತ್ವಮಸಿ ಎಂಬುವಂಥಾದ್ದು ಭೇದ ಬೋಧಕವೋ ಅಭೇದ ಬೋಧಕವೋ ಎಂದು ವಾದವು ಆ ಈರ್ವರಲ್ಲಿ 22 ಆತ್ಮ ಶಬ್ದಿತ ನಿಯಾಮಕಗು ನಿಯಮ್ಯ ಜೀವನಿಗೂ ಭೇದವೇ ಬೋಧಿಸುವುದು ಆ ವಾಕ್ಯವೆಂದು ಸಿದ್ಧಾಂತ ಬಹುರೀತಿ ಸ್ಥಾಪಿಸಿದರು ಅಕ್ಷೋಭ್ಯರು ಸೋತಿತು ವಿದ್ಯಾರಣ್ಯರ ಐಕ್ಯವಾದ 23 ಅಸಿನಾತತ್ವ ಮಸಿನಾ ಪರಜೀವಪ್ರಭೇದಿನಾ ವಿದ್ಯಾರಣ್ಯ ಮಹಾರಣ್ಯಂ ಅಕ್ಷೋಭ್ಯ ಮುನಿರಚ್ಛಿನತ್ ಎಂದು ಬರೆದರು ತಮ್ಮಯ ಗ್ರಂಥದಲ್ಲಿ ಮಧ್ಯಸ್ತ ವೇದಾಂತದೇಶಿಕ ಸ್ವಾಮಿಗಳು 24 ಇಳೆಯ ಸಜ್ಜನರಿಗೆ ಜಯತೀರ್ಥರನಿತ್ತ ಮಾಲೋಲಪ್ರಿಯ ಅಕ್ಷೋಭ್ಯರ ಮಹಿಮೆ ಅಲ್ಪಮತಿ ನಾನರಿಯೆ ಇಲ್ಲಿ ಒಂದೋ ಎರಡೋ ಸ್ಥಾಲಿ ಪುಲೀಕ ನ್ಯಾಯದಲಿ ಪೇಳಿಹುದು 25 ನದಿ ದಡದಿ ಕುಳಿತಿದ್ದ ಅಕ್ಷೋಭ್ಯತೀರ್ಥರು ಎದುರಾಗಿ ನದಿಯಲ್ಲಿ ಆಚೆ ದಡದಿಂದ ಕುದುರೆ ಸವಾರನು ವರ್ಚಸ್ವಿ ಯುವಕನು ಬೆದರದೆ ಪ್ರವಾಹದಲಿ ಬರುವುದು ಕಂಡರು 26 ಕುದುರೆ ಮೇಲ್ ಆಸೀನನಾಗಿದ್ದ ಯುವಕನು ಕ್ಷುತ್‍ತೃಷಿ ಶಮನಕ್ಕೆ ಯತ್ನ ಮಾಡುತ್ತಾ ಉದಕವ ಕೈಯಿಂದ ತುಂಬಿಕೊಳ್ಳದಲೇ ಎತ್ತುಗಳು ಕುಡಿವಂತೆ ಬಾಯಿ ಹಚ್ಚಿದನು 27 ಮಾಧವ ಮಧ್ವರು ಮೊದಲೇ ಸೂಚಿಸಿದಂತೆ ಇಂದು ಆ ಕುರುಹರಿತು ಅಕ್ಷೋಭ್ಯರು ಇದು ಏನು ಪಶುವಂತೆ ಎಂದು ಧ್ವನಿಗೂಡಲು ಹಿಂದಿನ ಜನ್ಮ ಯುವಕಗೆ ನೆನಪು ಬಂತು 28 ಪಶು ಶಬ್ದ ಗುರುಮುಖದಿಂಬಂದಲಾಕ್ಷಣ ಪೂರ್ವ ಸಂಸ್ಕಾರ ಪ್ರತಿಭೆಯು ಉದಯವಾಯ್ತು ದಶಪ್ರಮತಿಗಳ ತಾನು ಎತ್ತಾಗಿ ಸೇವಿಸಿದ್ದು ಹಸನಾಗಿ ಟೀಕೆ ಬರೆಯಲಾಜÉ್ಞ ಕೊಂಡದ್ದು 29 ನಗಾರಿಸಮ ಬಲಿಯುವಕನು ಪ್ರವಾಹದ ವೇಗ ಲೆಕ್ಕಿಸದಲೇ ದಡಕೆ ತಾ ಬಂದು ಮುಗಿದುಕರ ಬಾಗಿಶಿರ ನಮಿಸಿ ಅಕ್ಷೋಭ್ಯರ ಆಗಲೇ ಸಂನ್ಯಾಸ ಕೊಡಲು ಬೇಡಿದನು 30 ಗಾಧಿ ಅರ್ಜುನ ಸಮ ಬಲರೂಪದಲಿ ತೋರ್ಪ ಈತ ರಾಯರ ಸುತನಾದರೂ ವೈರಾಗ್ಯ ಯುತ ಭಕ್ತಿಮಾನ್ ಸುಶುಭಲಕ್ಷಣನು ಎಂದು ಹರಿ ಮಧ್ವನಿಯಮಿತ ಅವಗೆ ಕೊಟ್ಟರು ಸಂನ್ಯಾಸ 31 ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವ ದಯಾಶೀಲ ಹೊಸಯತಿಗೆ ಇತ್ತು ಅಭಿಷೇಕ ಅಕ್ಷೋಭ್ಯ ಗುರುಮಾಡೆ ಗಗನದಿಂ ಪೂವರ್ಷ ಜಯ ಘೊಷ ಹರಡಿತು ಪರಿಮಳ ಸುಗಂಧ 32 ಶ್ರೀಮಧ್ವಾಚಾರ್ಯರು ಬೋಧಿಸಿ ತೋರಿಸಿದ ರಮಾಪತಿ ಪೂಜಾಸತ್ತತ್ವವಾದ ದುರ್ಮತ ಖಂಡನದ ರೀತಿಯ ಜಯಾರ್ಯರಿಗೆ ಸುಮ್ಮುದದಿ ಅರುಹಿದರು ಗುರುಸಾರ್ವಭೌಮ 33 ಶೀಲತಮ ಗುರುವರ್ಯ ಅಕ್ಷೋಭ್ಯತೀರ್ಥರು ಇಳೆಯಲ್ಲಿ ಮಧ್ವಮತ ಹರಿಭಕ್ತಿಯನ್ನ ಬೆಳೆಸಲು ಪ್ರತ್ಯೇಕ ಮಠವ ಸ್ಥಾಪಿಸಿದರು ತ್ರೈಲೋಕ ಭೂಷಣ ತೀರ್ಥರ ಮೊದಲ್ಮಾಡಿ34 ಆದಿ ಮಠ ಹರಿನೈದು ಸಮೀಪ ಪಟ್ಟವ ಆಳಿ ಹನ್ನೊಂದು ನೂರು ಅರವತ್ತೇಳ ಶಕವರುಷ ವದ್ಯ ಪಂಚಮಿ ಮಾರ್ಗಶಿರ ವಿಶ್ವಾವಸುವಲ್ಲಿ ಮಧ್ವ ಹೃದಯಾಬ್ಜಗನ ಪುರವ ಐದಿದರು 35 ಮತ್ತೊಂದು ಅಂಶದಲಿ ಮಳಖೇಡ ಗ್ರಾಮದಲಿ ನದಿ ತೀರದಲಿ ಹರಿಯ ಧ್ಯಾನ ಮಾಡುತ್ತಾ ಬಂದು ಬೇಡುವವರಿಷ್ಟಾರ್ಥ ಪೂರೈಸುತ ವೃಂದಾವನದಲ್ಲಿ ಕುಳಿತಿಹರು ಕರುಣಿ 36 ಶಾಶ್ವತ ಸರ್ವಾಶ್ರಯ ಗುಣಗಣಾರ್ಣವ ಅನಘ ಜೀವ ಜಡ ಭಿನ್ನ ಪರಮಾತ್ಮ ವಿಧಿತಾತ ಮಧ್ವಹೃತ್ಪದ್ಮಗ ಶ್ರೀ ಪ್ರಸನ್ನ ಶ್ರೀನಿವಾಸಗೆ ಸರ್ವದಾಪ್ರಿಯ ಅಕ್ಷೋಭ್ಯ ಗುರೋ ಶರಣು 37 ಪ || ಶ್ರೀ ಅಕ್ಷೋಭ್ಯ ತೀರ್ಥಚರಿತೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು
ಸತ್ಯಂಬೋಧರ ಸ್ಮರಣೆ ನಿತ್ಯಮಾಡುಅತ್ಯಂತ ಕರುಣಾಳು ಅ'ುತ ಮ'ಮಾವಂತ ಪಸತ್ಯಬೋಧರ ಸ್ಮರಣೆ ನಿತ್ಯದಲಿ ಮಾಡಿದರೆ'ಷ್ಣು ಸರ್ವೋತ್ತಮದ ಜ್ಞಾನ ಪ್ರಾಪ್ತಿಕಷ್ಟಗಳ ಪರಿಹರಿಸಿ ಇಷ್ಟಾರ್ಥಗಳ ಕೊಟ್ಟುಭಕ್ತಿ ವೈರಾಗ್ಯ ಭಾಗ್ಯವನು ಕೊಡುವಾ 1ಸತ್ಯಪ್ರಿಯತೀರ್ಥರ ಕರಕಮಲದಿಂ ಜನಿಸಿಉತ್ತರಾದಿಮಠದ ವೈಭವವ ಬೆಳಿಸಿ'ಷ್ಣು ಸರ್ವೋತ್ತಮತ್ವದ ತತ್ವಜಯಭೇರಿಎತ್ತ ನೋಡಿದರತ್ತ ಸತ್ಯಬೋಧರಕೀರ್ತಿ 2ಪಾಪಿಷ್ಠರಿಂದ ಆಪತ್ತು ಜೀವಕೆಬಂತುಸಂಚಾರ ಕೆಲಕಾಲ ಸಂಕಟಮಯವಾಯ್ತುಶಾಪಾನುಗ್ರಹಶಕ್ತರಾದ ಶ್ರೀಪಾದರುಭೂಪತಿ'ಠ್ಠಲನ ಅಪರೋಕ್ಷ ಪಡೆದವರು 3
--------------
ಭೂಪತಿ ವಿಠಲರು
ಸಿಟ್ಟು ಮಾಡುವುದೆಂದಿಗು ಸಲ್ಲ ಪೂರ್ಣ ಸಿರಿನಲ್ಲ ಪ. ಮೋಹ ಪಾಶ ಮಿಕ್ಕು ಬಿಗಿದಿಹುದು ರಿಪು ವ್ಯೂಹ ಸುತ್ತಮುತ್ತ ನೆಗದಿಹುದು ದೇಹದಿ ದಿನದಿನ ಬಲಕುಂದಿ ಬಂತು ಚಿ- ದ್ದೇಹ ನೀನೊಲಿವ ಸನ್ನಹಗೊಳ್ವದೆಂತೊ 1 ಒಂದು ಸತ್ಕರ್ಮ ಸಾಧಿಸುವಲ್ಲಿ ಬೇಗ ಪಾತಕ ಝಲ್ಲಿ ಮಂದರಧರ ಮಧುಸೂದನ ಮನದಿ ನೀ ನಿಂದು ಸಾರ್ಥಕ ಮಾಳ್ಪ ತೆರವೆಲ್ಲ ಬಲ್ಲಿ 2 ಹಿಂದೆ ಮುಂದಿನ ಸರ್ವ ಕರ್ಮಫಲ ಎನ್ನ ತಂದೆ ಸ್ವೀಕರಿಸಿ ಮಾಡಿಸು ನಿರ್ಮಲ ಇಂದಿರೇಶ ವೆಂಕಟೇಶನೆ ತ್ವಚ್ಚರ- ಣೆಂದೀವರ ನೆರಳಿರಿಸನುಗಾಲ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸೂಳೆಯನಿಟ್ಟದ್ದೇವೆ ಕೇಳೈ ಆಶಾ ಪ ಸೂಳೆ ಮಾತುಗಳನ್ನು ಕೇಳಿ ಕೇಳಿ ದೇಹ ಜಾಳಾಗಿ ಹೋಯಿತು ಬೀಳೋಕಾಲವು ಬಂತು ಅ.ಪ ಮನೆಯ ಯೋಚನೆ ಬಿಡಿಸಿ ವಿಧವಿಧ ತಿಂಡಿ- ಯನು ತಾತಂದು ಕೊಡಿಸಿ ಮನುಮಥನಾಟವೆಘನ ಬೋಧೆಯೆನ್ನಿಸಿ ಕೊನೆಗೆ ರೋಗಗಳಿತ್ತು ಗತಿಶೂನ್ಯ ಮಾಡುವ 1 ಸತಿಯ ಬಿಡಿಸಿ ಬಿಟ್ಟಳು ಆತ್ಮಜರಲ್ಲಿ ಅತಿದ್ವೇಷವೇ ಕೊಟ್ಟಳು ಪಿತೃಮಾತೃಗಳಿಗಿಲ್ಲ ವಡಹುಟ್ಟಿದವರಿಗಿಲ್ಲ ಪ್ರೀತಿ ಹುಟ್ಟಿಸಿಯಿದ್ದದ್ದೆಲ್ಲಾ ಸೆಳಕೊಂಬುವ 2 ಇತರ ಚಿಂತೆ ಹೋಯ್ತು ಕುಲದಪ- ಧ್ಧತಿಯ ಮರಿಯ ಲಾಯ್ತು ಹಿತವೇ ಪೇಳಿದರ ಹಿತವಾಗಿ ತೋರುವೆ 3 ವಡವೆ ವಸ್ತ್ರವು ಬೇಕಂತೆ ಕೇಳಿದ್ದನೆಲ್ಲ ಕಡುಚಲ್ವೆ ಅವಳೆಂದು ಕಥೆಗಳ ಹೇಳುತ್ತ ಮಡದಿ ಮಕ್ಕಳ ಬಿಟ್ಟುಮನಸು ಅವಳಿಗೆ ಕೊಟ್ಟು 4 ಸ್ಮರನಾಟಯಾವಾಗಲು ಅವಳನೋಡಿ ಕರಗುತ್ತ ಹಗಲಿರುಳು ಪರಗತಿ ಕೊಡುವಂಥ ಗುರುರಾಮ ವಿಠಲನೆ ಅರಿಯವ ಸಂಸಾರ ತೊರೆದು ತುಂಟರಾಗಿ 5
--------------
ಗುರುರಾಮವಿಠಲ
ಹರಿದಾಸಮಹತಿ ಕ್ಷಮಿಸುವುದೆಮ್ಮ ತಪ್ಪುಗಳ ಸ್ವಾಮಿಕ್ಷಮಶೀಲವೆಂಬ ದಾಸೋಹ ಬಿರುದಿನೊಳು ಪ ಸುರರು ಸಾಧುಸಮರಲ್ಲವೆಂಬ ಶ್ರುತಿ ಸರಿಬಂತು ಸ್ವಾಮಿ ಅ ಶರಧಿಯೊಳಿರುತಿರ್ಪ ಚರಜೀವಿಗಳ ಗುಣಾ-ಕರಿಸಿ ಇಷ್ಟೆಂದು ಪೇಳಲುಬಹುದುಸಿರಿವರದನ ಅಂತಃಕರಣಕೊಪ್ಪಿದ ನಿಮ್ಮಇರವ ತಿಳಿಯಲು ನರರ ವಶವೆ ಸ್ವಾಮಿ1 ಆಢಕದೊಳಗಂಬರವನೆ ಅಳೆದು ಲೆಕ್ಕಕೂಡಿದ ಮಿತಿಯ ಪೇಳಲು ಬಹುದುರೂಢಿಗೀಶನ ಸೇವೆ ಮಾಡಿದ ಮುಕ್ತರಈಡಿಲ್ಲವೆಂಬುದನಿತರರರಿವರೆ ಸ್ವಾಮಿ 2 ಈ ಶರೀರದೊಳಗಿಪ್ಪ ಕೇಶಗಳೆಲ್ಲವನುಬೇಸರಿಸದೆಣಿಸಿ ಹೇಳಲು ಬಹುದುಶೇಷಶಯನ ಕಾಗಿನೆಲೆಯಾದಿಕೇಶವದಾಸರ ಮಹಿಮೆ ಕಾಣಲಿಕಾಗದು ಸ್ವಾಮಿ 3
--------------
ಕನಕದಾಸ
ಹ್ಯಾಗಾದರು ಮಾಡು ನಿನ್ನ ಸಂಕಲ್ಪ ಪ ಸೋತಿಹುದು ಕೈಕಾಲು ಬಾಯಾರಿಕೆ ಶೀತೇಶನುತ್ಸವವು ಬಹುಸಮೀಪಕೆ ಬಂತು ನಾಥನೈಯ್ಯ ನೀನು ಅನಾಥನು ನಾನು 1 ಬಹಳ ಹಿರಿಯರು ನಿನ್ನ ಕೊಂಡಾಡುತಿಹರು 2 ಹಿತವಾಗಬೇಕೆಂದು ನುತಿಸುವನು ನಾನಲ್ಲ ಪತಿತ ಪಾವನನೆ ಭಾರವು ನಿನ್ನದು ಸಟೆ ಮಾಳ್ಪುದುಚಿತವೆ 3
--------------
ಗುರುರಾಮವಿಠಲ