ಒಟ್ಟು 48 ಕಡೆಗಳಲ್ಲಿ , 25 ದಾಸರು , 45 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ಪ ದಾತನು ನೀನೆಂದು ಬಯಸಿ ಬಂದೆನು ಮಾತನಾಡೈಅ.ಪ. ಸಿರಿ ಪೊಂಗೊಳಲೊ ಜಗ-| ದಾಧಾರದ ನಿಜ ಹೊಳೆಯೋ || ಪಾದದ ಪೊಂಗೆಜ್ಜೆ ಥಳಿಲೊ ಸರ್ವ | ವೇದಗಳರಸುವ ಕಲ್ಪಕ ಸೆಳಲೊ 1 ಕಸ್ತೂರಿ ತಿಲಕದ ಮದವೊ ಮ- ಕುಟ ಮಸ್ತಕದಿ ಝಗಝಗವೊ || ವಿಸ್ತರದಿ ಪೊತ್ತ ಜಗವೊ ಪರ- | ವಸ್ತುವು ನಂದ ಯಶೋದೆಯ ಮಗುವೊ 2 ನವನೀತವ ಪಿಡಿದ ಕರವೊ ನವ-| ನವ ಮೋಹನ ಶೃಂಗಾರವೊ || ಅವತರಿಸಿದ ಸುರತರುವೊ ಶತ- ರವಿಯಂದದಿ ಉಂಗುರವಿಟ್ಟ ಭರವೊ 3 ಆನಂದ ಜ್ಞಾನದ ಹೃದವೊ ಶುಭ-| ಮಾನವರಿಗೆ ಬಲು ಮೃದುವೊ || ಆನನ ಛವಿಯೊಳು ಮಿದುವೊ ಪಾಪ-| ಪಾವಕ ಪದವೊ 4 ತ್ರಿಜಗದಧಿಕ ಪಾವನನೊ ಪಂ-| ಕಜ ನೇತ್ರೆಯ ನಾಯಕನೊ || ಅಜಭವಾದಿಗಳ ಜನಕನೊ ನಮ್ಮ |ವಿಜಯವಿಠ್ಠಲ ಯದುಕುಮಾರಕನೊ 5
--------------
ವಿಜಯದಾಸ
ಮಾನವ ಸಿಂಗನಾದನು ಪ ರಂಗಮಾನವ ಸಿಂಗನಾಗಲು ಭಂಗಾರ ಗಿರಿಯ ಶೃಂಗಗಳಲ್ಲಾಡೆ ಹಿಂಗದೆ ಎಂಟು ಮಾತಂಗ ಸಪುತ ದ್ವೀ- ಪಂಗಳು ಕಂಪಿಸೆ ವಿಗಡದಿ ಅ.ಪ. ವನಜ ಭವನಂದನರಾನಂದದಿ ವನಧಿಯೊಳಿದ್ದ ವನಜನಾಭನ ವನಜಾಂಘ್ರಿ ದರುಶನಕ್ಕೋಸುಗದಿ ಘನ ವೈಕುಂಠ ಪಟ್ಟಣ ಸಾರೆ ವಿನಯರಲ್ಲದ ಜಯನು ವಿಜಯನವ- ರನು ತಡೆಯಲು ಮುನಿದೀರ್ವರಿಗೆ ದನುಜಾಂಗದಿಂದ ಜನಿಸಿರೋ ಎಂದು ಮುನಿಗಳು ಶಾಪವನ್ನು ಈಯೆ 1 ದಿಕ್ಕು ಎಂಟರೊಳು ಕಕ್ಕಸರೆನಿಸಿ ದಿಕ್ಕು ಪಾಲಕರ ಲೆಕ್ಕಿಸದಲೇವೆ ಸೊಕ್ಕಿ ತಿರುಗುವ ರಕ್ಕಸರಾಗಲು ಮುಕ್ಕಣ್ಣ ಬಲದಿಂದಕ್ಕೆ ಜದಿ ನಕ್ಕು ಪರಿಹಾಸ್ಯಕಿಕ್ಕಿ ಸರ್ವರನು ಮುಕ್ಕಿ ಮುಣಿಗಿ ಧರ್ಮಕೆ ವಿರೋಧಿಸಿ ಸಿಕ್ಕದಂತಲ್ಲಲ್ಲಿ ತುಕ್ಕುತಿರೆ 2 ಇತ್ತ ಶಾಪದಿಂದಲಿತ್ತಲೀರ್ವರಿಗಾ ಪೊತ್ತ ಸುರಾಂಗದಲಿತ್ತಲೋರ್ವವನಿಯು ಕಿತ್ತು ಒಯ್ಯಲು ಬೆಂಬುತ್ತಿ ಹರಿಯು ಕೊಲ್ಲೆ ಇತ್ತ ಹಿರಣ್ಯನುನ್ಮತ್ತದಿಂದ ಸುತ್ತುತಿರುವಾಗ ಪುತ್ರನು ಭಾಗವ ತ್ತೋತ್ತಮನಾಗಿ ಸರ್ವೋತ್ತಮ ಬ್ರಹ್ಮನ ಕರವ ಲೋ- ಕತ್ರಯವರಿವಂತೆ ಬಿತ್ತಿದನು3 ಸೊಲ್ಲು ಕೇಳುತಲಿ ಎಲ್ಲೆಲೊ ನಿನ್ನ ದೈ- ವೆಲ್ಲೊ ಮತ್ತಾವಲ್ಲೆಲ್ಲಿಹನೆನುತಲಿ ನಿಲ್ಲದರ್ಭಕನ್ನ ಕಲ್ಲು ಕೊಳ್ಳಿ ಮುಳ್ಳು ಕರವಾಳ ಬಿಲ್ಲು ನಾನಾ ಎಲ್ಲ ಬಾಧೆಯನ್ನು ನಿಲ್ಲದೆ ಬಡಿಸೆ ಎಳ್ಳನಿತಂಜದೆ ಎಲ್ಲೆಲ್ಲಿಪ್ಪನೆಂದು ಸೊಲ್ಲನು ಬೇಗದಿ ಸಲ್ಲಿಸೆನೆ 4 ಏನು ಕರುಣಾಳೊ ಏನು ದಯಾಬ್ಧಿಯೊ ಏನು ಭಕ್ತರಾಧೀನನೊ ಏನೇನು ನಾನಾ ಮಹಿಮನೊ ಏನೇನೊ ಏನೊ-ಈ- ತನ ಲೀಲೆ ಕಡೆಗಾಣರಾರೊ ದಾನವಾಭಾಸನ ಮಾನಹಾನಿ ಗೈಯೆ ಸ್ಥಾಣು ಮೊದಲಾದ ಸ್ಥಾನದಲ್ಲಿ ಸರ್ವ ದೀನರಿಗೆ ದತ್ತ ಪ್ರಾಣನಾಗ 5 ತುಟಿಯು ನಡುಗೆ ಕಟ ಕಟ ಪಲ್ಲು ಕಟನೆ ಕಡಿದು ನೇಟನೆ ಚಾಚುತ ಪುಟಪುಟ ನಾಸಪುಟದ ರಭಸ ಕಠಿನ ಹೂಂಕಾರ ಘಟುಕಾರ ನಿಟಿಲನಯನ ಸ್ಫುಟಿತ ಕಿಗ್ಗಿಡಿ ಮಿಟಿಯೆ ಹುಬ್ಬಿನ ನಿಟಿಲ ರೋಷದಿ ಮಿಟಿಯೆ ಚಂಚು ಪುಟದಂತೆ ರೋಮ ಚಟುಲ ವಿಕ್ರಮುದ್ಧಟ ದೈವ 6 ನಡುಕಂಭದಿಂದ ಒಡೆದು ಮೂಡಿದ ಕಡು ದೈವವು ಸಂಗಡಲೆ ಚೀರಲು ಬಡ ಜೀವಿಗಳು ನಡುಗಿ ಭಯವ ಪಡುತಲಿ ಬಾಯ ಬಿಡುತಿರೆ ಕಡೆಯೆಲ್ಲೊ ಹೆಸರಿಡಬಲ್ಲವರಾರೊ ತುಡುಗಿ ದುಷ್ಟನ ಪಡೆದ ವರವ ಪಿಡಿದು ಅವನ ಕೆಡಿಸಿ ಹೊಸ್ತಿಲೊ- ಳಡಗೆಡಹಿದನು ಪವಾಡದಲಿ 7 ವೈರಿಯ ಪಿಡಿದು ಊರುಗಳಲ್ಲಿಟ್ಟು ಘೋರ ನಖದಿಂದ ಕೊರೆದು ಉದರವ ದಾರುಣ ಕರುಳಹಾರ ಕೊರಳಲ್ಲಿ ಚಾರುವಾಗಿರಲು ಮಾರಮಣ ಸಾರಿಗೆ ಭಕ್ತಗೆ ಕಾರುಣ್ಯಮಾಡಿ ಶ್ರೀ ನಾರೀಶನಾನಂದದಿ ತೋರುತಿರೆ ಸುರ- ವರರ್ನೆರೆದು ಅಪಾರ ತುತಿಸಿ ಪೂ- ಧಾರೆ ವರುಷ ವಿಸ್ತಾರೆರೆಯೆ 8 ನೃಕೇಸರಿಯಾಗೆ ಭಕುತಗೆ ಬಂದ ದುಃಖವ ಕಳೆದು ಸುಖವನೀವುತ್ತ ಅಕಳಂಕದೇವ ಲಕುಮಿಪತಿ ತಾ- ರಕ ಮಂತ್ರಾಧೀಶ ಸುಕುಮಾರ ಅಖಿಳ ಲೋಕಪಾಲಕ ಪ್ರಹ್ಲಾದಗೆ ಸಖನಾಗಿ ಇಪ್ಪ ಸಕಲ ಕಾಲದಿ ಭಂಜನ ವಿಜಯವಿಠ್ಠಲ ಮುಕುತಿ ಈವ ಭಜಕರಿಗೆ9
--------------
ವಿಜಯದಾಸ
ಯತಿವೃಂದ ಜಯತೀರ್ಥ ಜಯತೀರ್ಥ ಪ ಭವ | ಭಯಹರ ಗುರುವರ ಅ.ಪ ಕಾಗಿಣಿ ತಟ ಸ್ಥಿತ | ಮೇಘನಾಥಪುರ ಆಗರವೆನಿಸಿದ ಯೋಗಿವರೇಣ್ಯ 1 ತತ್ವಗಳರ್ಥವ | ಪುಸ್ತಕ ಭಾರವ ಎತ್ತಿನ ರೂಪದಿ | ಪೊತ್ತ ಮಹಾತ್ಮ 2 ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ ಮುರಿದು ಕುಭಾಷ್ಯವ | ಮೆರೆದ ಮಹಂತ 3 ನೆರೆನಂಬಿದೆ ಶ್ರೀ | ಹರಿನಾಮವ ನಿರುತಗರಿದು ಪೊರಿ | ನರನವತಾರಿ 4 ಭೀಮ ಭವಾಟವಿ | ಧೂಮ ಶ್ರೀ ಶಾಮಸುಂದರ ಪ್ರೇಮದ ದಾಸ 5
--------------
ಶಾಮಸುಂದರ ವಿಠಲ
ಯಾವ ಪರಿಯಲಿ ಒಲಿಸಿ ಪಡೆವೆ ಹರಿಯೊಲವನು ಭೂವಿವರವನು ಪೊತ್ತ ಮಹಶೇಷಗರಿದು ಪ ಸುರನದಿ ಜಲದೊಳಭಿಷೇಕವ ಮಾಡುವರೆ ಚರಣದಲಿ ಜನಿಸಿಹಳು ದೇವಗಂಗೆ ಮೆರೆವ ದಿವ್ಯಾಸನವನೀಯೆ ವಿಶ್ವಾಧಾರ ಧರಿಸಿ ಕೊಡಲಿಕೆ ವಸ್ತ್ರ ಪೀತಾಂಬರ 1 ಹೇಮರಚಿತಾಭರಣದಿಂದ ಮೆಚ್ಚಿಸಲವಗೆ ಕಾಮಿನಿಯೆ ಶ್ರೀಮಹಾಲಕ್ಷ್ಮಿದೇವಿ ಪ್ರೇಮದಿಂ ಶಾಲ್ಯಾನ್ನದಿಂದ ತೃಪ್ತಿ ನಿತ್ಯ ತೃಪ್ತ 2 ಕ್ಷೀರದಿಂ ಮೆಚ್ಚಿಸಲಿಕವಗೆ ಪಾಲ್ಗಡಲೆಮನೆ ಮಾರುತಾತ್ಮಜ ಕೋಣೆ ಲಕ್ಷ್ಮೀಶ ನಂಘ್ರಿಗೆ ನಮಸ್ಕಾರದಿಂ ಮೆಚ್ಚಿಸಲಿಕವ ಜಗದ್ವಂದ್ಯಾ 3
--------------
ಕವಿ ಪರಮದೇವದಾಸರು
ಶ್ರೀ ಲಕ್ಷ್ಮೀನೃಸಿಂಹ ಪ್ರಾದುರ್ಭಾವ ದಂಡಕ ಶ್ರೀರಮಾ ಮಾನಿನೀ ಮಾನಸೇಂದೀವರೋತ್ಫುಲ್ಲ ಸಂಫುಲ್ಲ ಚಂದ್ರಾ ಚಿದಾನಂದ ಸಾಂದ್ರಾ ಸದಾ ಸನ್ನುತೇಂದ್ರಾ ನಮೋಪೇಂದ್ರ ನಿಸ್ತಂದ್ರ ನೀ ಕೇಳು, ಆ ರೀತಿ ಪ್ರಹ್ಲಾದನಲ್‍ಸಜ್ಜನಾಹ್ಲಾದನಲ್ ದೈತ್ಯ ಸತ್ಪುತ್ರರಾವೇಳೆ ಶ್ರೀಕಾಂತನ ಜ್ಞಾನ ಭಕ್ತಿ ಕ್ರಿಯಾಗಾಧೆಗಳ್ ಬೋಧೆಗಳ್ ಕೇಳಿ ತಾವೆಲ್ಲರಾಮಾರ್ಗದಲ್ಲೇ ಸುನಿರ್ದಿಷ್ಟ ಸನ್ಮಾರ್ಗದಲ್ಲೇ ಪರಾಭೂತ ಷಡ್ವರ್ಗದಲ್ಲೇ ಮನಸ್ಸಿತ್ತು ಧರ್ಮಾರ್ಥ ಕಾಮಸ್ಪøಹ ಗ್ರಂಥಗಳ್ 10 ಸಿದ್ಧ ಸಂಸಾರ ಸಂಬಂಧಗಳ ಹತ್ತುವೂದಾಗದೇ ದಾನವಾಚಾರ್ಯರಾಶ್ಚರ್ಯದಿಂದಾಗ ತಾವೇಸುರೀತಿಂದಲಾಯಾಸುರೀವಿದ್ಯೆಗಳ ಗದ್ಯಗಳ್ ಪದ್ಯಗಳ್ ಪಾಠ ಪೇಳ್ತಿದ್ದರಾ ಪಾಠಗಳ್ ಒಪ್ಪದೇ ತಪ್ಪದೇನಿಂತು ಮಾರಾಟಗಳ್ ಮಾಡುತಾ ವಿಷ್ಣುಭಕ್ತಿ ಕ್ರಿಯಾಪಾಠಗಳ್ ಪಾಡುತಾ ಎಲ್ಲರೊಂದಾಗೆ ತಾವ್‍ನೋಡಿ ಅಂಜ್ಯಾಡಿ ಇನ್ನೇನು ಈಸೂನುಗಳ ದೈತ್ಯರಾಟ್ ಸೂನನಲ್ ಬುದ್ಧಿ ಭೇದೈಸಿ ದುರ್ಬೋಧಗಳ್ ಕೇಳಿ ದುಸ್ಸಾಧ್ಯರಂ 20 ಕರ್ಣ ಕಾಠೋರ್ಯ ಬಾಣಾಳಿಗಳ್ ರೀತಿ ಅಪ್ರೀತಿಯಾಸೂತಿ ದುರ್ನೀತಿ ತಾ ಸೈಸದೇ ಕೋಪಸಂದೀಪನಾವೇಶದಿಂದಲ್ ಚಲದ್ಗಾತ್ರನಾಗೆದ್ದು ಪ್ರೋದ್ಯದ್ದಯಾಪಾತ್ರನಂತಿಪ್ಪ ತತ್ಪುತ್ರ ಸಂಹಾರದಲ್ ಚಿತ್ತವಂ ಪೆತ್ತವಂ ಪಾಪÀಸಂವೃತ್ತನೇತ್ರ ಪ್ರಮಾಕ್ಷೇಕ್ಷನಾಗಲ್ ಸಮ 30 ಕ್ಷೈಸಿ ದುಷ್ಟೋಕ್ತಿಗಳ್ ಬಾಗುತಾ ಕೂಗುತಾಸಾಧು ಸಧ್ಭಕ್ತಿಯಿಂದಲ್ ಮಹದ್ಭಕ್ತಿಯಿಂದಲ್ಲಿ ತನ್ನಲ್ಲಿ ಚೆನ್ನಲ್ಲಿ ಬದ್ಧಾಂಜಲಿಯಾಗಿ ಸಿದ್ಧಾಂತ ಸದ್ಭಕ್ತಿಯಿಂದಲ್ಲಿ ನಿಂದಿದ್ದ ಪ್ರಹ್ಲಾದ ಧೀಮಂತಗೇ ನಿರ್ಮಲಸ್ವಾಂತಗಾವೇಳೆ ಪಾದಾಹತವ್ಯಾಳಿಯಂತೇ ಭುಜಶ್ವಾಸಗಳ್ ಬೇಸಿಗಳ್ ಬೀಸುತಾಕಂದಗಾ ತಂದೆ ಸುಭಾಷಿಪಂ. ಹೋಯೆಲೋ ದುರ್ವಿನೀತಾಯೆಲೋ ಮಂದಬುದ್ಧೇಯೆಲೋಇಂತು ನೀ ಸ್ತಬ್ಧನಾದೇತಕೋ ವಂಶಘಾ40 ತೀಯೆಲೋ ಪಾಪಜಾತೀಯೆ ನೀ ಹೀಗೆ ಮಚ್ಛಾಸನಾತೀನಾಗಪ್ಪೊಡೇ ನಿನ್ನ ನಿನ್ನಾ ಯಮದ್ವಾರಕೇ ಕಳುಹುವೆಂ ನೋಡೆಲಾನಾನು ಕೋಪಿಷ್ಠನಾಗಿಪ್ಪೊಡೇ ಅಂಜಿ ಮೂರ್ಲೋಕಗಳ್ ಲೋಕಪಾನೀಕಗಳ್ ಕಂಪ ಕಾಣುತ್ತವಿಂಥಾ ಬಲಿಷ್ಠನ್ನ ನೀನೆನ್ನ ಸಂಪದ್ಬಲ ಶ್ರೀಯನಾಶ್ರೈಸದೇ ಬಿಟ್ಟರಿನ್ನಾವನಲ್ ನೀಂ ಬಲಶ್ರೀಯನಾಶ್ರೈಸುವೇಯೋ ಎಲಾ ಏಕೆ ಮಚ್ಛಾಸನಾತೀತನಾಗೂವಿಯೋ ಕಂದ ಪೇಳೆಂದರೇ, ತಂದೆಗಾ 50 ತಂದೆ ಕೇಳಯ್ಯ ಬ್ರಹ್ಮಾದಿ ಆಸ್ತಂಭಪರ್ಯಂತವುಂ ಜಂಗಮಸ್ಥಾವರಾತ್ಮ ಪ್ರಪಂಚೋಚ್ಚ ನೀಚ ಪ್ರಜಾನೀಕ ಯಾವತ್ತದಾವಾತನಾಧೀನದಲ್ಲಿಪ್ಪುದೋ ಆತನೇ ಎನ್ನಗೇ ನಿನ್ನಗೇಇನ್ನು ಮಿಕ್ಕಾದ ಚೈತನ್ಯಕೆಲ್ಲಾ ಬಲಶ್ರೀಯು ತಾನಾದನೇ ಕಾದನೇ ಕಾಲರೂಪೀಶ್ವರೋರುಕ್ರಮಾಕಾರನೆಂಬಾತನೇಆತನೇ ಆತನೇ ತೇಜ ಓಜಸ್ಸಹಾಸತ್ವ ಸಂಪದ್ಬಲ ಶ್ರೀಂದ್ರಿಯಾತ್ಮನ್ ಸ್ವಯಂ60 ಸ್ವಾಂತ ನೀನಿತ್ತು ಸರ್ವತ್ರ ಸಮಚಿತ್ತನಾಗಯ್ಯ ಎನ್ನಯ್ಯನೇ ನಿನ್ನಗಾಮೇಲೆ ವಿದ್ವೇಷ ಮಾಡೂವರಾರಿಲ್ಲವಂತಸ್ಸಿನಲ್ಲಿಪ್ಪ ಕಾಮಾದಿ ಷಡ್ವರ್ಗವೆಂಬಾ ಮಹಾವೈರಿಗಳ್ ಕಳ್ಳರಂತೆಲ್ಲರುಂ 70 ದೇಹವೆಂಬೋ ಮಹಾರಾಜಧಾನೀ ವೃಥಾಹಾನಿ ಮಾಡೂವರಂಥಾವರಂ ಗೆಲ್ಲದೇಕೆಲ್ವರೀ ದಿಕ್ಕುಗಳ್ ಸರ್ವವಂ ಗೆದ್ದವೆಂತೆಂದು ಹಿಗ್ಗೂವರಂತಸ್ಸಿನಲ್ಲಿಪ್ಪ ಕಾಮಾದಿ ಷಡ್ವರ್ಗ ಗೆದ್ದಾತಗೇ ಜ್ಞಾನಸಂಪೂತಗೇ ಸಾಧು ಸಂಭೂತ ಸರ್ವಂಸಮಂಚೇತಗಾಮೇಲೆ ತನ್ಮೋಹ ಸಂಜಾತವೆಂತಪ್ಪುದೋ ಶಾತ್ರವವ್ರಾತವೆಲ್ಲಿಪ್ಪುದಯ್ಯಾ ಸದಯ್ಯಾತ್ಮನೇ ತಿಳಿದು ನೋಡೆಂದು ತಾನಿಂದು ಮಾತಾಡಲು, ಶತ್ರುವಂತಿಪ್ಪ ಪು 80 ಇಂದು ನಾವೊಂದು ಪೇಳುತ್ತಿರುತ್ತಿದ್ದರೊಂದಕ್ಕೆ ಹತ್ತಾಗಿ ನೀನೇವನೋ ವಿಷ್ಣುವೆಂಬಾತ ಬೇರೊಬ್ಬ ತಾನಿಪ್ಪನೆಂದೂಹಿಸೂವೇಯ ಹೋ ಹೋಯೆಲಾಸಾವಿಗೀ ಬುದ್ಧಿ ನೀ ಸಿದ್ಧ ಮಾಡೀದಿ ಎಂಬೋದಿದಂ ವ್ಯಕ್ತವಂತೆಲ್ಲ ನಾಂ ಬಲ್ಲೆ ಇಂ 90 ತಲ್ಲದೇ ನಿನ್ನಗೀರೀತಿ ದುರ್ಬುದ್ಧಿ ಪುಟ್ಟೂವುದೇ ಮೃತ್ಯುಸಿದ್ಧರ್ಗೆ ವಿಷ್ಣುತ್ವ ಸಂಭಾಷೆಯಲ್ಲಿಚ್ಛೆ ಬೇಕಾಗಿ ಹೋದಲ್ಲದೇಬಲ್ಲೆನೆಲ್ಲಾ ಎಲೋ ಮಂದನೇ ಮಂದಭಾಗ್ಯೋಕ್ತಿಗಳ್ ಏಕೆ ನೀನಾಡುವೇ ಅಕ್ಕಟಾಎನ್ನಗಿನ್ನಾ ಜಗನ್ನಾಥನಿನ್ನಾವನೋಆತನೆಲ್ಲಿಪ್ಪ, ಸರ್ವತ್ರದಲ್ಲಿಪ್ಪ ನೀನೆಂದಡೇ ಡಿಂಭಕಾಡಂಭಕಾಡೋಣಗಳ್‍ಸಾಕು ಮಾಡಿನ್ನು ಮೇಲೀ ಸಭಾಸ್ತಂಭದಲ್‍ಶೀಘ್ರ ಸಂರಂಭದಲ್ ತೋರು ನೀ ತೋರದೇ 100 ಪೋದೆಯಾ ಇನ್ನು ನೀ ಮಾರುಮಾತಾಡದ್ಹಾಗೇ ಶಿರಚ್ಛೇದ ಮಾಡೂವೆನೋ ನಿನ್ನಗೀವೇಳೆಯಲ್ ವಿಷ್ಣುವೆಂತೆಂದದಾವಾತ ತಾನಡ್ಡ ಬಂದಾನೋ ನಾ ನೋಡುವೆಂ ವಿಷ್ಣುವೇಬೇಡಬೇಕಾದ ದಿಕ್ಕಾಗಿ ನಿನಗಿಪ್ಪಡೇಬೇಡಿಕೋ ಮೂರ್ಖನೇ ಎಂದು ಕ್ರೋಧಾಗ್ನಿಯಿಂದುರ್ಪಿ ದುರ್ಭಾಷೆಯಲ್ ತನ್ನ ಪುತ್ರನ್ನ ತಾದೂರುತಾ ಹಾರುತಾ ಕೈಲಿ ಖಟ್ ಪೆಟ್ಕವಂಖಡ್ಗವಂ ಕೊಂಡು ದುಷ್ಟಂ ಮಹಾದೋರ್ಬಲಿಷ್ಠಂ ಸ್ವಯಂ ಮುಷ್ಟಿಯಿಂದಲ್ಲಿ ಪೆಟ್ಟಿತ್ತನು. 110 ಆ ಭೀಕರಧ್ವಾನ ಸಂಭಿನ್ನ ದುಷ್ಟಾಸುರೀಗರ್ಭಸಂರಂಭವುಂ ಶುಂಭದಂಭೋದ ವೀಥೀ ಸಮಾರಂಭಿತೋ ಜೃಂಭವುಂ ವೈಷ್ಣವೋತ್ಕøಷ್ಟ ವಿಶ್ರಂಭವುಂ ಶಾತಕುಂಭೊಲ್ಲಸದ್ರತ್ನಚಿತ್ರಪ್ರಭಾಗುಂಭವುಂ ತತ್ಸಭಾಸ್ತಂಭವಂ ಆಗಲೇ ಬೇಗಲೇ ಘಳಾಘಳಾರಾವ ಉದ್ಭೂತವಾಗೆದ್ದು ಬ್ರಹ್ಮಾಂಡವೆಲ್ಲಾ ಪರಿಸ್ಫೋಟವಂ ಮಾಡುವಂತೊಪ್ಪೆ ಬ್ರಹ್ಮಾದಿಗಳ್ ತಮ್ಮ ಧಾಮಕ್ಕೆ ವ್ಯಾಘಾತವೇನಾದರುಂ ಬಾಹೋದೇನೋ ಇದೇನೆಂದು ವಿ 120 ಭ್ರಾಂತ ಚೇತಸ್ಕರಾಗಿಪ್ಪರಂತೇ ದುರಂತೇಕ್ಷಣಂಗಳ ಕುವರಾಗ್ರನಲ್ ತುಂಬುತಾಕತ್ತಿ ಕೈಹತ್ತಿ ಪುತ್ರನ್ನ ತಾ ಚಿತ್ರಹಿಂಸಿತ್ತು ಕೊಲ್ಲೂವೆನೆಂದಾಗ್ರಹೋಗ್ರ ಗ್ರಹಗ್ರಸ್ತನಾಗೇನು ಮೈತಿಳಿಯದೇ ಕೂಡಿಓಡ್ಯಾಡಿ ಬಾಹೋ ಹಿರಣ್ಯಾಖ್ಯಗಾ ವೇಳೆ ಕಾಲಾಡದದ್ಹಾಗೇ ಸಭಾಸ್ತಂಭದಲ್ ತನ್ಮಹಾರಾವ ತಾನಡ್ಡಕಟ್ಟಿಪ್ಪದಂತಾ ಮಹಾಧ್ವಾನ ಕೇಳುತ್ತಲೇ ನಿಂತನಾ ಹೇತುವಂ ಕಾಣದೇ ಆಗ ಆಯಾಸುರೀ ಹಿಂಡುಗಳ್ 130 ತುಂಬಿ ಕಾಳ್ಗಿಚ್ಚುಗಳ್ ಚೆಂದದಿಂಜಂತು ಸಂಘಕ್ಕೆ ಸಂತಾಪಗೈಸೇ ಛಿಟಾಛಿಟ್ ಛಿಟಾಂಗಾರಗಳ್ ಬೀಸೆ ಇದೇವುದೋಭೂತ ಉದ್ಭೂತವಾಗೊಪ್ಪಿತೆಂದಾಗ ಮೂರ್ಲೋಕವೆಲ್ಲಾ ಸಮುಲ್ಲೋಕವಾಗಿಪ್ಪುದಾವೇಳೆ ತದ್ಭøತ್ಯವಾಕ್ ಸತ್ಯವಂ ಮಾಡಬೇ 140 ಕಾಗಿ ಸರ್ವತ್ರ ತಾನ್ ತನ್ನ ವ್ಯಾಪ್ತತ್ವವಂಪಥ್ಯವಾಗಿಪ್ಪವೋಲ್ ಅದ್ಭುತಾಕಾರ ಪೊತ್ತಂ ಜಗದ್ಭರ್ತ ತಾನೊಂದೆ ಸಿಂಹಾಕೃತೀಯಾಗದೇ ಮತ್ರ್ಯಮೂತ್ರ್ಯಲ್ಲದೇ ತತ್ಸಭಾಸ್ತಂಭದಲ್ ಡಿಂಬ ಸಂಭಾವನಕ್ಕಾಗಿ ಸಂಭೂತನಾದಂ.ದಿತೀಪುತ್ರನಾ ರೂಪವಂಕಂಡಿದೇನೋ ಮಹಾ ಚಿತ್ರವಾಗಿಪ್ಪುದೇಸಿಂಹದಂತಲ್ಲದೇ ಮತ್ರ್ಯನಂತಲ್ಲದೇಯಾವುದೀ ಭೂತವೆಂತೆಂದು ಮೀಮಾಂಸಮಾನಾತ್ಮನಾದಂ.ಜಗತ್ಸ್ಯಾಮಿ ತಾನಾಗಲೇ 150 ತಪ್ತಭಾಂಗಾರ ಶೃಂಗಾರವಲ್ಯಂತೆ ಕಂಗಳ್ ಸಮುದ್ಯತ್ಸಟಾ ಕೇಸರಂಗಳ್‍ವಿಜೃಂಭತ್ಕರಾಳಾಸ್ಪದಂ ಉಗ್ರನಾಸಾಸಮುಚ್ಚಾಸ್ವ ನಿಶ್ವಾಸಗಳ್ ಸಂಚಲದ್ವಸ್ತವ್ಯಾಳ ಕ್ಷುರಾಂತೋಗ್ರ ಜಿಹ್ವಾಗ್ರ ಲೇಲೀಹನಂಗಳ್ ಭ್ರಮದ್ಭ್ರೂಲ್ಪಲಂಗಳ್ ಹನೊರೋಷಭೀಷ್ಣಂಗಳುಂ ಊಧ್ರ್ವಕರ್ಣಂಗಳುಂ ಭೂಮಿ ಭೃ ತ್ಕಂದರಾಶ್ಚರ್ಯವವ್ಯಾತ ಘೋರಾಸ್ಯನಾಸಾಪುಟಂಗಳ್ ಅದೀರ್ಘೊನ್ನತಗ್ರೀವವುಂದೀರ್ಘದಂತೊಪ್ಪುವೋ ದೇಹವಂ ವಿಸ್ತøತೋ160 ಶುಂಡಾಲ ಶುಂಡಪ್ರಕಾಂ170 ಡ ಪ್ರಚಂಡೋಲ್ಲಸದ್ದೋಹ ಸಾಹಸ್ರ ದೀಪ್ತಾಯುಧಾಭೋ ನಖಾನೀಕವುಂ ಚಕ್ರ ಶಂಖಾದಿ ನಾನಾಯುಧ ಶ್ರೇಷ್ಠ ವಿದ್ರಾವಿತಾsಭದ್ರ ರಕ್ಷಃ ಪಿಶಾಚಾಸುರೋದ್ರೇಕವುಂಪ್ರೋನ್ನಿತಂಬೋರು ಸತ್ಸಾನು ಜಂಘಪ್ರದೇಶಾವೃತ ಪ್ರೋಲ್ಲಸತ್ಪೀತ ಕೌಶೇಯವುಂಬದ್ಧಕಾಂಚೀಕಟಿಸ್ಥಾನವುಂ ಮಂಜುಮಂಜೀರ ಸಂಚಿನ್ನನಾದಾಂಘ್ರಿಕಂಜಾತ ವಿನ್ಯಾಸವುಂ ಕೋಟಿ ಮಾರ್ತಾಂಡ ಸಂಕಾಶವುಂಪೋಲ್ವುದಂಥಾ ದುರಾಲೋಕವಂತಿಪ್ಪ ಜ್ವಾ180 ಲಾ ನೃಸಿಂಹಾಕೃತಿ ಸ್ವಾಮಿನಂ ನೋಡುತಾದೃಷ್ಟಿಗಳ್ ಬಾಗೆ ತಾ ನಿಂತು ನನ್ನ ವರಜಾರಾತಿಯಾದ ಸ್ವಯಂ ಜ್ಯೋತಿ ಈ ರೀತಿ ತಾನಿಂದಿಗೇ ನಾರಸಿಂಹಾಕೃತೀಯಾಗಿ ನಾಂಪುತ್ರಂ ಸಂಹಾರಕುದ್ಯುಕ್ತನಾಗಿಪ್ಪೊಡೇಎನ್ನ ಸಂಹಾರಕಾಗಿಲ್ಲಿಗೇ ಬಂದನೋಇನ್ನು ಮೇಲೀತನಿಂದೆನ್ನಗೇ ಮೃತ್ಯು ತಾಸಿದ್ಧವಾಂತಿಪ್ಪುದೇನೋ ಪುರಾಣ ಪ್ರಸಿದ್ಧೋಕ್ತ್ಯಭಿವ್ಯಕ್ತಿಗೈತೇನಹೋ ಎಂದು ಮಾತಾಡುತಾ ನಿಂತು ಉದ್ಯದ್ಗದಾಧಾರಿ ತ 190 ಪೂರ್ವದಲ್‍ಅಸ್ಯತೇಜೋಂಶದಿಂದಲ್ ಜಗಧ್ವಾಂತ ಯಾವತ್ತುಮಿಂ ತಾ ಸ್ವಯಂ ಪಾನಮಾಡಿಪ್ಪ ಸತ್ಯಾತ್ಮಗೀ ನಾರಸಿಂಹಾತ್ಮಗೇ ಈ ಹಿರಣ್ಯಾಸುರ ಶ್ರೇಷ್ಠ ಸಂಹಾರ ಹೆಚ್ಚಲ್ಲವಂತಾದರುಂ ಲೋಕದೃಷ್ಟ್ಯಾನುಸಾರ ಕ್ರಿಯಾಕಾರಿಯಾಗಿಪ್ಪ ನೃಸಿಂಹನುದ್ಯದ್ಗದಾಧಾರಿ ತಾನಾಗಿ ಸದ್ವಿದ್ಯುದಾಭ್ಯೋದ್ಯದು 200 ದ್ವೇಗವೇಗೋರು ಸಂಪದ್ಗದಾ ದಂಡವಂಕೊಂಡು ಯುದ್ಧಕ್ಕೆ ಬಾಹೋ ಮಹಾದೈತ್ಯವರ್ಯನ್ನ ತಾ ನೋಡಿ ರೋಷೋಜ್ವಲ ಜ್ವಾಲೆಗಳ್‍ಲೇಲಿಹಾನೋಲ್ಲ್ಲಸಜ್ಜಿಹ್ವೆಯಿಂದಲ್ ಪ್ರಕಾಶೈಸುತಾ ಚೀರುತಾಗಾಟ್ಟಹಾಸಕ್ರಮನ್ಯಾಸದಿ ಹಾರುತಾ ಕೋಟಿ ಸೂರ್ಯಪ್ರಭಾಬೀರುತಾ ಆ ಗರುತ್ಮಂತ ಕಾಳಾಹಿಂಪಿಡಿವನಂತೊಪ್ಪಿ ತಾನಾ ದಿತೀಪುತ್ರನಲ್‍ನೂಕಿದಂ ಶೀಘ್ರದಲ್ ಪಿಡಿದನಾ ದೈತ್ಯರಾಜೇಂದ್ರನಾವೇಳೆ ತದ್ಧಸ್ತದೋಳ್ ಸಿಕ್ಕದೇ 210 ಸುಕ್ಕದೇ ಘಕ್ಕನೇ ಬಿಡಿಸಿಕೊಂಡಾ ಗದಾದಂಡವಂ ಕೊಂಡು ಸನ್ನದ್ಧ ಸದ್ಯುದ್ಧವಂಮಾಡುವೋನಂತೆ ಯಾವಾಗ ನೃಸಿಂಹನಲ್‍ಸಿಕ್ಕಿ ಮತ್ತೇಬಿಡೂವಾದನಾ ವೇಳೆಯಲ್‍ಶರ್ವ ಶಕ್ರಾದಿ ದಿಕ್ಪಾಲಕಾನೀಕವುಂಸೂರ್ಯಚಂದ್ರಾದಿ ಸರ್ವಗ್ರಹಕ್ರ್ಷಾವಳೀಲೋಕವುಂ ಮೇಘಸಂತಾನದೋಳ್ ಲೀನವಾಗಿದ್ದು ಇನ್ನೇನು ಈ ದೇವತಾರಾತಿ ಈನಾರಸಿಂಹಾತ್ಮನಲ್ ಸಿಕ್ಕದೇ ದಕ್ಕದಂತಿಪ್ಪನೇ ಈತನೀ ದುಷ್ಟ ದೈತ್ಯನ್ನ ಗೆ 220 ಲ್ಲಾರನೋ ಗೆಲ್ವನೋ ಎಂದು ತದ್ವೀರ್ಯವಂತಿಳಿಯದೇ ಭ್ರಾಂತಚಿಂತಾಂತರಂಗೋದ್ಯದುದ್ವೇಗದಿಂ ಕಾಂಬಂತಿಪ್ಪುದು.ಆಮೇಲೆ ಢಾಲ್ ಕತ್ತಿ ಕೈಗೊಂಡು ಆಯಾಸದಿಂದಲ್ಲಿ ಆ ದೈತ್ಯನಾನಾರಸಿಂಹಾತ್ಮನಲ್ ಸಂಗರ ಶ್ರಾಂತಿ ಮತ್ತೇನು ತಾ ಕಾಣದೇ ದೂಕಿದಂ ತಾಕಿದಂಸೋಕಿದಂ ಅಂಘ್ರಿವಿನ್ಯಾಸಗಳ್ ಕೂಡಿ ತಾಮೇಲೆಯುಂ ಕೆಳಗೆಯುಂ ಶ್ಯೇನಪಕ್ಷಂತೆ ಸುತ್ತಾಡುತಾ ಛಿದ್ರವಂ ಕಾಣದೇ ತನ್ನನೇಪಿಡಿವುದಕ್ಕಾತನಂತೋಡುತಾ ಬಾಹೊ ಬ 230 ಲ್ಲಿಷ್ಠನಾ ಅಟ್ಟಹಾಸೈಸಿಯುಕ್ಕೇಸರಂಗಳ್ ಪ್ರಸಾದೈಸಿ ಕ್ರೂರಾಹಿತಾನಂದಘಗ್ರಾಹಿಯಂತೇ ಸ್ವಭಾ ಸಾಸಿರಂ ಸೂಸಿ ಜಂಘಾಲ ಲೀಲಾ ಸಮುಲ್ಲಂಘನಾ ಗೋಪದಿಂಹಾರಿಯಾ ನಾರಹರ್ಯಕ್ಷನಾ ದೈತ್ಯದಕ್ಷನ್ಪಿಡಿರ್ದಂ ಫಟಾಫಟ್ ತಲಾಘಾತವಂಗೈಲ್ಬಡಿರ್ದಂ ಥಟಾಥಟ್ ಪದಾಘಾತದಿಂ ದಲ್ ಹೊಡೆರ್ದಂ ಗದಾಘಾತದಿಂದಲ್ ಮಹೋರಸ್ಕಿಡಿರ್ದಂ ಸಭಾದ್ವಾರದಲ್ ಹಾಕಿ ಭಾಸ್ವನ್ನಖ ಶ್ರೇಣಿಯಿಂದಲ್ ಫಟಾಫಟ್ ಗುರು240 ತ್ಮಂತಕಾಲಾಹಿನಂ ಸೀಳುವೋ ರೀತಿ ಜಂಭಾರಿದಂಭೋಳಿಯಂತಾಗಲುಂ ಸೀಳುತಿರ್ದಾಮಹಾದೇವನ್ನಾ ಹಗಲ್ ರಾತ್ರಿಯೊಂದಲ್ಲದ್ಹಾಗೇ ದಿವಾಸಂಧಿಯಲ್ ಸೀಳಿದಂ.ಘೋರ ಸಂರಂಭ ದಂಷ್ಟ್ರೇಕ್ಷವ್ಯಾವೃತ್ಕರಾಳಾಕ್ಷನಾಗಿ ಸ್ವಜಿಹ್ಪಾಗ್ರದಿಂದಲ್ ಲಸದ್ವ್ಯಾತ್ತ ವಕ್ತ್ರಾಂತ ಶೋಣಿಯ ಮಾನಾಧರಾದ್ಯಂತವಂ ಲೇಲಿಹಾನೋಗ್ರವಂ ತೋರುತಾರಾಕ್ಷಸ ಶ್ರೇಷ್ಠನಂ ಪಿಡಿದು ವಕ್ಷೋನ್ನತಸ್ಥಾನವಂ ತೋಡಿ ಕಾಸಾರವಂ ಮಾಡುತಾ 250 ತುಂಬಿ ಶುಂಡಾಲ ಸಂಹಾರದಲ್ ಮುಂಚುವೋ ಘೋರ ಪಂಚಾನನೋದಾರ ಲೀಲೆಂಗಳಂ ಬೀರುತಾ ರಾಕ್ಷಸಾಧ್ಯಕ್ಷ ವಕ್ಷಸ್ಸಿನೋಳ್ ಕಿತ್ತುತಾ ಹಾರಗಳ್‍ಮಾಡಿಕೊಂಡೊಪ್ಪಿ ತದ್ರಕ್ತ ಸಿಕ್ತಾನನೋದ್ಯಚ್ಛಟಾ ಕೇಸರಂಗಳ್ ಪ್ರಕಾಶೈಸುತಾ 260 ದೈತ್ಯರಾಜೇಂದ್ರನಾ ಪ್ರಾಣಗಳ್‍ಗೊಂಡನಾಮೇಲೆ ಸುತ್ತಿದ್ದ ತದ್ಭಂಧು ಸಂದೋಹದಲ್ಲಿದ್ದನೇಕಾಸುರೀನೀಕವಂ ಸಾಯುಧೋದ್ರೇಕವಂ ಅಲ್ಲಕಲ್ಲೋಲವಂ ಮಾಡಿ ಚಂಚನ್ನಖಶ್ರೇಣಿಯಿಂ ಸಂಹರಂ ಮಾಡಿದಂ.ಆಗ ತದ್ಭೀಕರಾಕಾರವಂ ಕಾಂಬ ಶಕ್ತ್ಯಾವುದಂ ಕಾಣದೇ ತತ್ಸಟಾ ಕೇಸರೋದ್ಭೂತ ಸಂಘಾತಗಳ್ ಘೋರ ಜೀಮೂತಗಳ್‍ಸರ್ವವಂ ನೋಡುತಾ ಮತ್ರ್ಯಸಿಂಹೋಗ್ರದೃಷ್ಟಿಜ್ವಲಜ್ವಾಲೆಗಳ್ ಸೈಸದೇ ಸೂರ್ಯಚಂ270 ಪಾದ ಸಂಘಟ್ಟದಿಂದಲ್ ಧರಾಚಕ್ರವಲ್ಲಾಡಿತಾಘೋರ ತೇಜಸ್ಸಿಗವಕಾಶಂಗಳಾಕಾಶವೂಬಾಡಿತಾ ಶಾಕಿನೀ ಡಾಕಿನೀ ಮುಖ್ಯ ದು 280 ಷ್ಟಗ್ರಹಾನೀಕವುಂ ಭೀತಿಗೊಂಡೋಡಿತಾಮೇಲೆ ಉದ್ಯತ್ಸಭಾ ಮಧ್ಯೆ ದೈತ್ಯೇಂದ್ರ ಸಿಂಹಾಸನಸ್ಥಾನದಲ್ ನಾರಸಿಂಹಂ ಸಮಾಸೀನನಾಗಿಪ್ಪನಾ ತೇಜ ಓಜ ಪ್ರಭಾಪುಂಜರಂಜನ್ನ ಭಾಸ್ವತ್ಕರಾಳೋಗ್ರ ಜಿಹ್ವ ಸ್ಫುರದ್ದಂಷ್ಟ್ರ ವಕ್ತ್ರನ್ನ ಬಿಭ್ರಲ್ಲಸದ್ಭ್ರೂತನಂ ಆ ಮಹಾಕೋಪ ಸಂರಂಭ ಗಂಭೀರ ನೇತ್ರನ್ನ ಕಣ್ಣೆತ್ತಿ ಕಾಂಬೋದರಲ್‍ಬ್ರಹ್ಮ ರುದ್ರಾದಿಗಳ ಶಕ್ತಿಯುಂ ಸಾಲದೇದೂರದಲ್ ಪಾಶ್ರ್ವ ಭಾಗಸ್ಥರಾಗಿಪ್ಪರಂತೇ.290 ಆಗ ಮೂರ್ಲೋಕ ಸಂತಾಪಿಯಾಗಿಪ್ಪ ದೈತ್ಯನ್ನ ನಾರಾಯಣಂ ನಾರಸಿಂಹಾಕೃತೀಯಾಗಿ ಸಂಹಾರವಂ ಮಾಡಿದಂ ಎಂಬುದಾವಾರ್ತೆ ಕೇಳುತ್ತಲೇ ದೇವನಾರೀಜನಂಗಳ್ ಪ್ರಹರ್ಷಾನನೋತ್ಪುಲ್ಲರುಲ್ಲಾಸದಿಂವಾಸಿತಾಮೋದ ಮಂದಾರ ಕುಂದಾರವಿಂದಾದಿ ಸತ್ಪುಷ್ಟ ಸಂತಾನ ವರ್ಷÀಂಗಳಂವರ್ಷಿಸುತ್ತಿಪ್ಪರಾಕಾಲಾವಾಕಾಶದಲ್‍ನಿಂತು ಕಾಣೂವರಾ ದೇವದೇವೀ ಸಮೂಹಂಗಳಾಯಾವಿಮಾನಂಗಳೆಲ್ಲಾ ಮಹಾ 300 ಸಂಕುಲೀ ಭೂತವಾಗಿಪ್ಪವಾ ದೇವತಾದುಂದುಭಿಧ್ವಾನ ಇಂಬಾಗಿ ತಾ ದೇವಗಂಧರ್ವ ಸಂಗೀತ ನಾಟ್ಯಂಗಳಿಂದಪ್ಸರಾಕಾಮಿನೀ ತಾನ ಗಾನಂಗಳಿಂದಾಗ ಆಕಾಶವುಂ ತುಂಬಿತಾ ಬ್ರಹ್ಮರುದ್ರೇಂದ್ರ ಮುಖ್ಯಾಮರ ಶ್ರೇಣೀಗಳ್ ಪಿತೃಗಳ ಮನ್ವುಗಳ್‍ಸಿದ್ಧ ವಿದ್ಯಾಧರಾನೀಕಗಳ್À ಅಪ್ಸರಾ ಕಾಮಿನೇರಾ ಪ್ರಜಾಪಾಲ ಗಂಧರ್ವರಾಯಕ್ಷ ಕಿಂಪುರುಷರಾ ಚಾರಣಾನೀಕವಾಕಿನ್ನರಸ್ತೋಮ ನಂದಾ ಸುನಂದಾದಿ ತ 310 ತ್ಪಾರ್ಷದಾನೀಕವೆಲ್ಲಾ ಶಿರೋಭಾಗದಲ್‍ಪಾಣಿಗಳ್ ಜೋಡಿಸೀತೆಲ್ಲ ಮುನ್ನಾತಿ ದೂರಸ್ಥರಾಗಿದ್ದು ನಿಂತಾಮೃಗೇಂದ್ರಾಸನಾಸೀನನಾಗಿಪ್ಪ ಅತ್ಯುಗ್ರ ತೇಜಸ್ವಿನಂಮೆಲ್ಲನೇ ಬೇರೆ ಬೇರಾಗಿ ಕೊಂಡಾಡುತಾನಿಂತರಾವೇಳೆಯಲ್ ಬ್ರಹ್ಮ ತಾ ಭಾಷಿಪಂನಿನಗೆ ವಂದೀಸುವೆಂ ತಂದೆ ನೀನೆ ಅನಂತಂ ದುರಂತ್ಯೋರು ಶಕ್ತ್ಯುಳ್ಳವಂ ಲೋಕಪಾವಿತ್ರ್ಯ ಕಮ್ರ್ಯಂ ಮಹಾಶ್ಚರ್ಯ ವೀರ್ಯ ಜಗತ್ಸøಷ್ಟಿ ಸಂರಕ್ಷ ಸಂಹಾರಗಳ್ ಲೀಲೆಯಿಂ320 ದಲ್ ಸದಾ ಮಾಳ್ಪೆಯೋ ಅವ್ಯಯಾತ್ಮನ್ನೆ ನೀ ನೆಂದನು.ಈಶ ತಾ ಬಂದೆಲೋ ತಾತನೇನಿನ್ನಗೀ ಕೋಪ ಬಾಹೋದಕಿಂದಾ ಯುಗಾಂತಾಖ್ಯ ವೇಳ್ಯಲ್ಲವೋ ಕ್ಷುಲ್ಲನೀ ದೈತ್ಯನೀವೇಳೆ ನಿನ್ನಿಂದ ತಾನ್ ಮೃತ್ಯುಪಾಲಾದನಂತಿನ್ನುಮೇಲ್ ಕೋಪ ಸಂಕ್ಷೇಪ ಮಾಡಯ್ಯ ಈದೈತ್ಯ ಪುತ್ರನ್ನ ಪ್ರಹ್ಲಾದನಂ ಸರ್ವದಾನಿನ್ನ ಭಕ್ತನ್ನ ಸಂರಕ್ಷಿಸೋ ಭಕ್ತವಾತ್ಸಲ್ಯದಿಂದೆಂದನು.ಇಂದ್ರ ತಾ ನಿಂತೆಲೋ ಸ್ವಾಮಿಯೇ ಅಣ್ಣತಮ್ಮಂದ್ರ ದೀಟಾಗಿ ನೀನೇ ಸದಾ ನಮ್ಮ ಸಂ330 ರಕ್ಷಿಸೂವೇಯೊ ನಿನ್ನಿಂದಲಾ ಯಜ್ಞ ಭಾಗಂಗಳುಂ ನಮ್ಮಗೇ ಮತ್ತೆ ಉಂಟಾದವಯ್ಯಾ ಹಿರಣ್ಯಾಸುರಂಗಾದುದೀಗೆಮ್ಮ ಸುಸ್ವಾಂತಗಳ್ ನಿನ್ನಗಾವಾಸಯೋಗ್ಯತ್ವ ಪೊಂದಿಪ್ಪುವಂತೆ ವಿಕಾಸ್ಯೆಸಿತೋ ನಿನ್ನ ಶುಶ್ರೂಷೆ ಬೇಕೆಂಬ ಲೋಕಾಳಿಗೇ ಕಾಲಸಂಗ್ರಸ್ತವಂತಿಪ್ಪ ಲೋಕಾಳಿಯಲ್ ಯಾವದೂಲಕ್ಷ್ಯವಿಲ್ಲಂತೆ ಮುಕ್ತ್ಯಾದರುಂ ಹೆಚ್ಚು ನಿಶ್ಬೈಸುವಂತೇ ನೃಹರ್ಯಾತ್ಮನೇ ಮಿಕ್ಕ ಸಂಭೂತಿಯಿಂದಾಗಬೇಕಾದುದೇ ನಿಪ್ಪುದೆಂದಂ.340 ಬೊಮ್ಮ ನೀನೆಮ್ಮ ಶ್ರೇಯಸ್ಸಿಗೆ ಮುನ್ನ ನಿನ್ನ ಸ್ವತೇಜಾಂಶವನ್ನೇ ತಪೋಯೋಗವಂ ನಮ್ಮಗೇಕೊಟ್ಟೆಯೊ ಆ ತಪಸ್ಸಿಂದ ನಿನ್ನಲ್ಲಿಹೋವಿಶ್ವವೆಲ್ಲಾ ಬಹೀರಂಗ ಮಾಡೀದೆಯೋನಮ್ಮದಂಥಾ ತಪಸ್ಸಂ ಹಿರಣ್ಯಾಸುರಶ್ರೇಷ್ಠತಾ ಕದ್ದನಂತಿದ್ದನೇ ಈಗ ನೀನೀ ಜಗದ್ರಕ್ಷಣಕ್ಕಾಗಿಯೇ ಭಕ್ತ ಸಂರಕ್ಷನೇ ನಾರಹರ್ಯಕ್ಷನಾಗಿನ್ನು ರಕ್ಷೋಗಣಾಧ್ಯಕ್ಷ ವಕ್ಷಸ್ಕವಂ ಸೀಳಿ ನೀ 350 ನಮ್ಮಗೆಲ್ಲಾ ತಪೋಯೋಗವಂ ಮತ್ತೆ ತಂದಿತ್ತೆಯಂತೆಂದರು.ಪಿತೃಗಳ್ ನಿಂತೆಲೋಧರ್ಮರೂಪೀಯೆ ಇಂಥಾ ಕ್ರಿಯಾಲಾಪಗಳ್‍ಪುತ್ರರಿಂದಲ್ ತಿಲೋದಂಗಳಿಂದಲ್ ಮಹಾಪುಣ್ಯ ತೀರ್ಥಂಗಳಲ್ ಕ್ಷೇತ್ರ ಪಾತ್ರಂಗಳಲ್‍ನಮ್ಮ ನಮ್ಮಲ್ಲಿ ಇಂತಿತ್ತ ಶ್ರಾದ್ಧಂಗಳಂತನ್ನ ಪ್ರೀತ್ಯರ್ಥವೆಂತಿರ್ದನೈ ನಾಥ ಸಂಪೂರ್ಣ ಸೌಭಾಗ್ಯ ಸಂಸ್ಥಾನಿಯೋ ನೀನು ಭಾಸ್ವನ್ನಖ ಶ್ರೇಣಿಯಿಂದಲ್ ಮಹಾ ದೈತ್ಯವಕ್ಷಸ್ಕವಂ ಸೀಳಿ ಇತ್ತಾವ ಪಾಂತ್ರಾತ್ಮಿಕಾ 360 ಶ್ರಾದ್ಧ ನಮ್ಮಲ್ಲಿ ತಾ ಸೇರಿತೈ ನಾರಹರ್ಯಾತ್ಮನೇ ನಿನ್ನಗೇ ನಾವು ಸಾಷ್ಟಾಂಗ ಪ್ರಣಾಮಗಳ ಮಾಡುವೇವೆಂದರು.ಸಿದ್ದರೆಲ್ಲಾಂಜಲೀಬದ್ಧರಾಗೆದ್ದೆಲೋಅಷ್ಟಸಿದ್ಧಾತ್ಮನೇ ನಮ್ಮಲಿದ್ದಾ ಮಹಾಯೋಗ ಸಿದ್ಧಿಂಗಳೆಲ್ಲಾ ತಪೋಯೋಗಸಾಮರ್ಥ್ಯದಿಂ ಕದ್ದನೇ ಗೆದ್ದೆನೆಂತಿದ್ದ ದೈತ್ಯ ಪ್ರಬುದ್ಧನ್ನ ವಕ್ಷಸ್ಕ ಸಂಭಿನ್ನವಂಮಾಡಿಯಾ ನಮ್ಮಗಾಧಾರವಾಗಿದ್ದ ಸದ್ಯೋಗ ಸಿದ್ಧಿಂಗಳಂ ಮತ್ತೆ ನೀನಿತ್ತೆಯೋ 370 ನಾರಸಿಂಹಾತ್ಮ ನಾವೆಲ್ಲರುಂ ನಿನ್ನಗೇವಂದನಂಗಳ್À ಸಮರ್ಪೀಂಸುವೇವೆಂದರು.ಆಮೇಲೆ ವಿದ್ಯಾಧರಾನೀಕಗಳ್ ನಿಂತೆಲೋಸರ್ವ ವಿದ್ಯಾತ್ಮನೇ ನಮ್ಮಲಿದ್ದಾ ಪೃಥಕ್‍ಧಾರಣಾಯೋಗ ಸಂಪಾದ್ಯಗಳ್ ವಿದ್ಯೆಗಳ್‍ನಷ್ಟಗೈಸಿದ್ದನತ್ಯಂತ ದರ್ಪಿಷ್ಠನೀಅಜ್ಞ ದೈತ್ಯೇಂದ್ರನಾ ಯಜ್ಞದೋಳ್‍ಬದ್ಧ ಪಶ್ವಂತೆ ತಾನಿಂದು ನಿನ್ನಿಂದಲಾ ಮೃತ್ಯುಪಾಲಾದನೇ ನಮ್ಮ ಸದ್ವಿದ್ಯೆಗಳ ಮತ್ತೆ ನಮ್ಮಲ್ಲೆ ಬಂದಿಪ್ಪುದಯ್ಯಾ ನೃಹರ್ಯಾತ್ಮ ತು 380 ನಾಗರಾವೇಳೆಲೋsನಂತನೇ ನಮ್ಮಲಿದ್ದಾ ಮಹಾರತ್ನಗಳ್‍ಮಾನಿನೀ ರತ್ನಗಳ್ ತಾ ಬಲಾತ್ಕಾರದಿಂಗೊಂಡನೀ ಪಾಪಿ ದೈತ್ಯನ್ನ ವಕ್ಷಸ್ಕವಂಸೇದಿ ಈ ರತ್ನಗಳ್ ಮತ್ತೆ ನೀ ನಮ್ಮಗೇಸೇರುವಂತೇ ದಯಾಮಾಡಿದೀಯೈ ನಮಸ್ತೇ ನಮೋ ಎಂದರು.ಮನ್ವುಗಳ್‍ನಿಂತೆಲೋಧರ್ಮ ಸಂರಕ್ಷನೇ ನಾವು ನಿನ್ನಾಜ್ಞೆಯಿಂದೀ ಪ್ರಜಾನೀಕಕೇರ್ಪಾಟು ಮಾಡಿದ್ದ ಮರ್ಯಾದೆಗಳ್ ಸರ್ವವೀ ದೈತ್ಯ ತಾ ಕೆಡಿಸಿ ಕ390 ಲ್ಲೋಲವಂ ಮಾಡಿ ನಿನ್ನಿಂದಲೀ ಈಗ ಸಂಹಾರಿಸಲ್ಪಟ್ಟನೇ ಇನ್ನು ಮೇಲ್ ನಾವು ನಿಮ್ಮುಟ್ಟಕ್ತಿಗಳ್ ನಡೆಸುವೇವೆಮ್ಮಗಾಜ್ಞಾಪಿಸೋನಾವು ತ್ವದ್ದಾಸ್ಯವಂ ಬಯಸಿದೇವೆಂದರು.ಆ ಪ್ರಜೇಶ್ಯಾಳಿಗಳ್À ನಿಂತು ಕೇಳೋ ``ಪ್ರಜೇಶಾ ವಯಂ ತೇ ಪರೇಶಾಭಿಸೃಷ್ಟಾ ನ ಯೇನ ಪ್ರಜಾ ವೈ ಸೃಜಾಮೋ ನಿಷಿದ್ಧಾಃ ಸ ಯೇಷ ತ್ವಯಾ ಭಿನ್ನವÀಕ್ಷಾನು ಶೇತೇ ಜಗನ್ಮಂಗಲಂ ಸತ್ವಮೂರ್ತೇವತಾರಃ’’ ಪ್ರಭೋಎಂದರು. ಆಗ ಗಂಧರ್ವರೆಲ್ಲಾ ಎಲೋ 400 ಸ್ವಾಮಿಯೇ ನಾವು ನಿಮ್ಮ ಪ್ರಸನ್ನಾವತಾರೈಕ ಲೀಲಾ ಕಥಾಸೂಕ್ತಿಗಳ್ ನಾಟ್ಯ ಶೃಂಗಾರ ಚೇಷ್ಟಾ ಕಳಾದರ್ಶನಾದ್ಯಭಿನಯಾವ್ಯಕ್ತಿಗಳ್ ತಾನ ಗಾನಾನುಸಂಧಾನ ಸಮ್ಮೋಹಿನೀ ಶಕ್ತಿಗಳ್ ಕೂಡಿ ಆಶ್ರಾಂತವುಂನಿನ್ನ ಕೊಂಡಾಡುತಾ ಗಾಯಕಶ್ರೇಷ್ಠರಂತಿಪ್ಪೆವೇ ತನ್ನ ಸದ್ವೀರ್ಯ ತೇಜೋಬಲೋಜಸ್ಕದಿಂದಲ್ ಪ್ರಭೋ ನಮ್ಮ ಸಾಮಥ್ರ್ಯಗಳ್‍ತನ್ನಗಾಧೀನ ಮಾಡಿಟ್ಟುಕೊಂಡಿದ್ದನೀದೈತ್ಯನೀ ವೇಳೆ ನಿನ್ನಿಂದ ಪಂಚತ್ವವಂ 410 ಆ ಯಕ್ಷರೆಲ್ಲಾ ಎಲೋ- 420 ಧ್ಯಕ್ಷನೇ ತ್ವನ್ಮನೋಭಿಜ್ಞ ಕರ್ಮಂಗಳಿಂದಲ್ ಸದಾ ನಿನ್ನಗೇ ಭೃತ್ಯರಾಗಿಪ್ಪ ನಾವೆಲ್ಲರುಂ ದೈತ್ಯಗೇ ಪಾಲಕೀ ಹೊರ್ವರಂತಾದೆವೇ ನಮ್ಮ ಸಂತಾಪಗಳ್ ಬಲ್ಲ ನಿನ್ನಿಂದಲೀ ದೈತ್ಯನೀ ವೇಳೆ ಪಂಚತ್ವವಂಹೊಂದಿದಂ ನಾವು ಸಂತೋಷವಂ ಕಂಡೆವಯ್ಯಾ ನೃಪಂಚಾಸ್ಯನೇ ಪಂಚವಿಂಶಾಖ್ಯ ನೀ ನೆಂದರು. ಆಮೇಲೆ ಕಿಂಪೂರುಷಾನೀಕವುಂಬಂದೆಲೋ ಪುರುಷನೇ ನಾವು ಕಿಂಪೂರುಷರ್‍ನೀಂ ಮಹಾಪೂರುಷಂ ಈಶ್ವರಂ ನಿನ್ನ ಕೈ 430 ನಿತ್ಯ ಕೊಂಡಾಡುತಾಭೂರಿಯೂಟಂಗಳಂ ಉಣ್ಣುತಾಲಿದ್ದೆವೇತಾನಿವೆಲ್ಲಾ ಪರಿಗ್ರಾಹಿಸೀ ದೈತ್ಯ ನಿನ್ನಿಂದ ಪೆಟ್ಟಾಂತು ತಾ ಪೋದನೇ ದೈವದಿಂ440 ಕಿನ್ನರ ಪ್ರಾಣಿಗಳ್‍ಪೂರ್ವದಲ್ ನಿನ್ನ ದಾಸಾನುದಾಸರ್ಗಳಾಗಿಪ್ಪೆವೀ ದೈತ್ಯ ನಮ್ಮಿಂದ ತಾ ಬಿಟ್ಟಿಕಾರ್ಯಂಗಳೆಲ್ಲಾ ಸದಾ ಮಾಡಿಸೂವಂ ವiಹಾದು:ಖಗೋಣಿಸುವಂ ಇಂಥ ಪಾಪಿಷ್ಠ ದೈತ್ಯನ್ನ ಸಂಹಾರ ವಂ ಮಾಡಿದೀ ಇನ್ನು ನೀನಮ್ಮಗೆಲ್ಲಾ ಸಮುಲ್ಲಾಸಗಳ ಶ್ರೇಯಗಳಕೊಟ್ಟು ಸಂರಕ್ಷಿಸೋ ನಾರಹರ್ಯಕ್ಷನೇ ಎಂದರು. 450 ಅಚ್ಯುತದ್ವಾರಪಾಲಾಳುಗಳ್‍ನಿಂತೆಲೋ ಭೂಮನೇ ಕಂಡೆವೋ ಇಂದಿಗೇನಾರಹರ್ಯದ್ಭುತಾಕಾರವಂ ಲೋಕಕೆಲ್ಲಾ ಸುಖಾನಂದವಂ ನಮ್ಮಗಾಧಾರ ನೀನಲ್ಲದಿನ್ನಿಲ್ಲವೋ ಈಗ ವೈಕುಂಠದಲ್‍ನಿನ್ನ ದ್ವಾರಸ್ಥನಾಗಿಪ್ಪನಾ ವಿಪ್ರರಿಂದಲ್ ಮಹಾದೈತ್ಯಜನ್ಮಕ್ಕೆ ತಾ ಬಂದನೇ ಬಂದನಂತಿಂದಿಗೇ ವೈರಮಾರ್ಗಕ್ಕೆ ನೀನಿಂದು ಗೈದಂಥ ಈ ದೈತ್ಯಸಂಹಾರ ವ್ಯಾಪಾರವೆಮ್ಮಲ್ ಮಹಾನುಗ್ರಹಕ್ಕಾಗಿ ನೀ ಬಂದೆ ನಾವ್ 460 ಸ್ವಾಂತ ಸಂತೋಷ ಮಾಡೆಂದು ಬಿನ್ನಾಹಗಳ ಮಾಳ್ಪರು.ಆಮೇಲೆ ಆ ಬಾಲೆ ಸಾಕ್ಷಾಜ್ಜಗನ್ಮೋಹಿನೀ ಲೀಲೆಗಳ್ ಮಿಂಚುತಾ 470 ಪೂಂಚುತಾ ಬಂದು ಸಿಂಹಾಸನಸ್ಥಾನದಲ್‍ಉಗ್ರನಂತಿಪ್ಪನೃಸಿಂಹ ಮೂತ್ರ್ಯುಗ್ರವಂಕಂಡತಿವ್ಯಗ್ರಳಂತಾಗಿ ಆ ತಾಯಿ ಹಿಂದಕ್ಕೆ ತಾ ಬಂದಳಮ್ಮಮ್ಮ ಏಂ ಗುಮ್ಮನಂತಪ್ಪÀನೇ ಸ್ವಾಮಿ ಮುನ್ನಿಂತು ಆಶ್ಚರ್ಯವಂಈಸು ವಿಕ್ರಮ್ಯವಂ ಎಂದಿಗಾನೆಲ್ಲಿ ಕಂಡಿಲ್ಲವಲ್ಲಾ ಕಿವಿಲ್ಯಾದರುಂ ಕೇಳಲೇ ಇಲ್ಲವಲ್ಲಾ ಇದೇನೋ ವಿಚಿತ್ರಾಕÀೃತೀಯಂತೆ ತೋರೂವನೆಂದಂಜಿಕೇಗೊಂಡ ರೀತಿಂದ ತಾ ಹೆಜ್ಜೆ ಕಾಲ್ಗೆಜ್ಜೆಗಳ್ ಸಪ್ಪುಳಂ480 ಮಾಡದೇ ಮೆಲ್ಲನೇ ಪಾಶ್ರ್ವದಲ್ ನಿಂತಳುಆಮೇಲೆ ಪ್ರಹ್ಲಾದನಂ ಕಂಡು ಸಂಭಾಷಿಪಂಬ್ರಹ್ಮ ಬಾರೈ ಎಲೋ ವತ್ಸ ನೀನೀ ನೃಸಿಂಹಾತ್ಮನಲ್ ಮೆಲ್ಲನೇ ಸೇರಿ ನಿಮ್ಮಪ್ಪಗಾ ಗಿಂದು ನಮ್ಮಪ್ಪನಲ್ಲಿಪ್ಪ ತತ್ಕೋಪ ಸಂಕ್ಷೇಪ ಗೈಸೆನ್ನೆ ತದ್ವಾಣಿಗಳ ಕೇಳುತಾಮೆಲ್ಲನೇ ಪಿಲ್ಲೆ ಪ್ರಹ್ಲಾದನಾಹ್ಲಾದದಲ್‍ವೈಷ್ಣವಶ್ರೇಷ್ಠ ತಾನಾಗ ಬಂದಂ ಮಹಾಭಕ್ತಿಯಿಂದಲ್ ಮಹೀಮಂಡಲೀ ಮೇಲೆ ಸಾಷ್ಟಾಂಗ ಬಿದ್ದಂ ನಮೋ ಎಂದು ದಂಡಪ್ರಣಾ 490 ಮಂಗಳಂ ಮಾಡುವೋ ವೇಳೆ ತನ್ನಂಘ್ರಿಕಂಜಾತದಲ್ ಬಿದ್ದ ಬಾಲನ್ನ ಬಾಳಾ ಸುಶೀಲನ್ನ ಕಂದನ್ನ ದೃಷ್ಟಿಂದ ತಾ ಕಾಣುತಾಚಕ್ರ ಶಂಖಾಂಕಿತಾ ಶ್ರೀಲಸದ್ಬಾಹುಗಳ್‍ಚಾಚಿ ಭಕ್ತನ್ನ ತಾನೆತ್ತಿ ತನ್ಮಸ್ತಕಸ್ಥಾನದಲ್ ಪೋಕಲಾಗಿನ್ನು ಸಂಸ್ರಸ್ತ ಚೇತೋಭಯಧ್ವಸ್ಥವಂ ಸ್ವಸ್ತಿದಾನ ಕ್ರಿಯಾಭ್ಯಸ್ತವಂ ಶ್ರೀ ಸತೀ ಸ್ತಂಬಕವಿನ್ಯಸ್ತವಂಹಸ್ತವನ್ನಿತ್ತನವ್ಯಾಹತ ಸ್ಪರ್ಶದಿಂದಲ್ ವಿಧೂತಾ ಶುಭವ್ರಾತನಾಗೀಯಭಿ 500 ವ್ಯಕ್ತ ಲಕ್ಷ್ಮೀವಿಲಾಸಾತ್ಮ ಸಂದರ್ಶನೈಶ್ವರ್ಯವಂ ಕೂಡಿ ತತ್ಪಾದ ಪದ್ಮಂಗಳಂಚಿತ್ತದಿಂದಿತ್ತನಾನಂದದಿಂದಲ್ ಪ್ರಹೃಷ್ಯತ್ತನು ಕ್ಲಿನ್ನ ಚಿತ್ತಾಶ್ರುನೇತ್ರಾಬ್ಜನಾಗಿದ್ದು ಪ್ರಹ್ಲಾದನುಂ ನಾರಸಿಂಹಾತ್ಮನಲ್‍ನಿಂತು ಸಂಸ್ತೋತ್ರಗಾರಂಭಿಪಂ. ಶ್ರೀರಮಾದೇವಿ ತಾನಾಗ ಸಮ್ಮೋಹಿನೀ ಸಂಪುಗಳ್‍ಕೂಡಿ ಬಂದಾ ನೃಸಿಂಹಾಂಕದಲ್ ನಿಂತಳಾಬ್ರಹ್ಮನಾವೇಳೆಯಲ್ ನಾರಸಿಂಹಾತ್ಮನಲ್‍ಸೇರಿ ಸುಕ್ಷೀರ ನೀರಾಭಿಷೇಕಂಗಳಂ 510 ಚೀನಿ ಚೀನಾಂಬರಂಗಳ್ ಮಹಾನಘ್ರ್ಯ ರತ್ನಾವಳೀ ಭೂಷಣಂಗಳ್ ಲಸನ್ಮೌಕ್ತಿಕಾಹೀರ ಹಾರಂಗಳಂ ಗಂಧ ಕಸ್ತೂರಿಕಾಲೇಪಗಳ್ ಶ್ರೀ ತುಳಸ್ಯಾಪ್ತ ಶಾಮಂತಿಕಾ
--------------
ಶ್ರೀಪಾದರಾಜರು
ಶ್ರೀಕೃಷ್ಣಾ ನೀನೇಕೊ ಗತಿಯೆಂದು---ಯರು ನಿಂದು -----ನಿನಗೆ ಹುಟ್ಟದೊ----ದು ಯಾಕಿಂದೂ ಪ ---ಹಾರೈಸಿಕೊಂಡೂ ----ದಯಾಸಿಂಧೂ ಅತಿಕಷ್ಟಾ---- ಇನ್ನೂ ಸೃಷ್ಟ್ಯಾದಿ -----ನಿಂದೂ 1 ಮಂದಾರಗಿರಿಯ ಪೊತ್ತ ಮಹಿಮನು---ಂದೂ ಇನ್ನೆಂದೂ--- ನಿನ್ನ ಹೊಂದಿದ----ದಿ ಮೊರೆಯಾ ಹೊಕ್ಕೆನಾ----- 2 ಅನ್ಯನಾನಲ್ಲ ನಿನ್ನ ಅಡಿಯನು ಎತ್ತಿಂದೂ----ಬಡುವೆ ಇಷ್ಟು ತಾರಿಸೊ----ಮಹಾಚಿನ್ಮಯ ರೂಪನಾದ ಶ್ರೀಹರಿ ಗೋವಿಂದೋ ಘನ ಹೊನ್ನಯ್ಯ ತೆರಹೀಕ ವಿಠ್ಠಲನೀನೆಂದೂ 3
--------------
ಹೆನ್ನೆರಂಗದಾಸರು
ಶ್ರೀದೇವಿ ಪ್ರಿಯ ವಿಠಲ | ಮೋದವಿತ್ತಿವನೀಗೆ ||ಕಾದುಕೋ ನೀ ದಯದಿ | ವೇದಾಂತ ವೇದ್ಯಾ ಪ ಮಾಧವನೆ ಬೇಡುತಿಹ | ಆದರದಿ ತವದಾಸ್ಯಸಾಧಿಸೋ ಇವನಲ್ಲಿ | ತದ್ಧರ್ಮ ಬಿಡದೇ ಅ.ಪ. ದುರಿತ ಗಜ ಸಿಂಹಾ 1 ಪ್ರಾಚೀನ ಕರ್ಮಾಳಿ | ಯೋಚಿಸಲು ಅಳವಲ್ಲವಾಚಾಮ ಗೋಚರನೆ | ಮೋಚ ಕೇಚ್ಛೆಯನೂಯಾಚಿಸುವೆ ಇವಗಾಗಿ | ಖೇಚರೋತ್ತಮ ಸವ್ಯಸಾಚಿ ಸಖನೇ ಹರಿಯೇ | ಸಚ್ಛಿದಾನಂದಾ 2 ಮೃಡ ಕರಿ | ಎಡರ ಪರಿಹರ್ತಾ 3 ನಿತ್ಯ ನಿತ್ಯ ನಿಗಮಾತೀತಭೃತ್ಯರೊಳು ವಾತ್ಸಲ್ಯ | ಪೊತ್ತ ನಗಧೀಶ4 ಬೋವ ನೀನಾಗುತಲಿಭಾವ ಮೈದುನಗೊಲಿದೆ | ದೇವ ದೇವೇಶಾ |ಭಾವುಕರ ಪಾಲಗುರು | ಗೋವಿಂದ ವಿಠ್ಠಲನೆತಾವಕನ ಪೊರೆಯೆಂಬ | ಭಾವ ಸಲಿಸುವುದೋ 5
--------------
ಗುರುಗೋವಿಂದವಿಠಲರು
ಶ್ರೀಶ ಕರುಣಾಭೂಷ ಶ್ರೀನಿವಾಸ ರಕ್ಷಿಸು ವೀಶಗಮನ ಪ. ತಂದೆ ತಾಯಿ ಸಹಜ ಮುಖ್ಯ ಬಂಧ ಬಳಗವೆಲ್ಲವು ನೀ- ಇಂದು ನಂಬಿದೆ ಇಂದಿರೇಶ ತನ್ನ ಮನಕೆ ಬಂದ ತೆರವ ಮಾಳ್ಪ ಭವ- ಸಿಂಧು ಪೊತ್ತ ನಿನ್ನ ದಾಸನೆಂದು ತಿಳಿದಾನಂದಗೊಳಿಸು 1 ನಿಗಮವೇದ್ಯ ನಿನ್ನೊಳಿರುವ ಅಘಟಿತಘಟನ ಶಕ್ತಿ ಬಗೆಯ ತೋರಿ ಪೊರೆವಿ ಎನ್ನ ಮಗುವಿನಂದದಿ ಅಗಣಿತಾನಂದ ಚಿದಾತ್ಮ ಜಗದಿ ನಿನ್ನ ಪೋಲ್ವ ಕರುಣಾ ಳುಗಳನೆಲ್ಯೂ ಕಾಣೆ ಶಕ್ರಾದಿಗಳು ಸೇರುವರು ನಿನ್ನನೆ 2 ಸರಸಿಜಾಕ್ಷ ಪಾದಪದ್ಮ ಸ್ಮರಣೆ ಮಾತ್ರದಿಂದ ಸರ್ವ ಪುರುಷಾರ್ಥಂಗಳೆಲ್ಲ ಸೇರಿ ಬರುವುದೆಂಬುದಾ ಅರಿಯದಂಥ ಮೂಢರೆಲ್ಲ ಬರಿದೆ ಬಯಲು ಭ್ರಾಂತಿಗೊಳಿಸುವ ಉರಗ ಶಿಖರವಾಸ ನೀನೆ ದೊರೆಯೆಂದು ನಾನೊರೆವೆ ಶ್ರೀಶ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿವಾಸುದೇವನೆ ಬ್ಯಾಸರಿಲ್ಲದೆ ದಾಸನ ಮೊರೆ ಕೇಳು ಜಗದೀಶ ನನ್ನ ಸಮಾನ ಕರುಣಾಭೂಪರುಂಟೆ ಪೇಳು ಪ. ಕಾಲಕಾಲಕೆ ಪೇಳಲಂಜುವೆ ಶ್ರೀಲಲಾಮ ಹರಿಯೆ ಆದರೆ ಬೀಳಗೊಳಿಸುವ ದೇಹಬಾಧೆಯು ತಾಳಲಾಪ ಹೊರೆಯೆ ಎರಡೇಳು ಭಕ್ತಿಯ ಮ್ಯಾಳವರಿಯದೆ ಹಾಳು ಮೋಹ ತೆರೆಯೆ ಮುಳಿಗೇಳಲಾರೆನು ಮಾಧವನೆ ಕರುಣಾಳು ಕಾಯೊ ದೊರೆಯೆ 1 ಯಾರ ಧನವಿನ್ಯಾರ ಭೂಮಿಯು ಯಾರ ವಸ್ತುಗಳಿವು ಕುಂಬಾರ ಭಾಂಡಗಳಂತೆ ನಶ್ವರ ತೋರಲ್ಯಾಕೆ ಫಲವು ಲಘು ನೀರಗುಳ್ಳೆಯ ಪೋಲ್ವ ದೇಹಕೆ ಸೇರಿದ ಸನ್ನಹವು ಬಿಳಿ ಭಾರ ಪೊತ್ತ ಥರವು 2 ಅದರಿಂದ ವೆಂಕಟಮಂದಿರನೆ ನಿನ್ನಿಂದ ಮಾತ್ರ ತಿಳಿಸು ಮೂರ್ತಿ ತಾಪಗಳಿಂದ ಬ್ಯಾರೆಗೊಳಿಸು ದ್ವಿಜ ವೃಂದ ರಕ್ಷಕನೆಂಬ ಬಿರುದನು ಎಂದೆಂದಿಗು ಘಳಿಸು ಭವ ಬಂಧ ಮೋಚಕ ನಿನ್ನ ಸೇವಾನಂದವಾರ್ಧಿಗಿಳಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿಸಿ ಕೇಳು ಕಂದನ ಮಾತನುಗರುಡವಾಹನಗಂಗಾಜನಕಶ್ರೀಹರಿಯೇಪಇತ್ತ ಬಾ ಎಂಬರಿಲ್ಲ ಇರವ ಕೇಳುವರಿಲ್ಲಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ||ತತ್ತರ ಪಡುತಿಹೆ ತಾವರೆಲೆಯ ನೀರಂತೆಹತ್ತು ನೂರು ನಾಮವ ಪೊತ್ತ ಶ್ರೀ ಹರಿಯೇ 1ಇಂದಿಗಶನವಿಲ್ಲ ನಿಂದಿರೆ ನೆರಳಿಲ್ಲಒಂದೆ ಸುತ್ತಿಗೆ ತುಂಡು ಅರಿವೆಯಿಲ್ಲ ||ಬೆಂದೊಡಲಿಗೆ ಒಬ್ಬರಯ್ಯೋ ಎಂಬುವರಿಲ್ಲಬಿಂದು ಮಾತ್ರದ ಸುಖಕಾಣಿನಾ ಹರಿಯೇ2ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀಹರಿಅಲ್ಲ ತಿಂದಿಲಿಯಂತೆ ಬಳಲುವೆನೊ ||ಘುಲ್ಲಲೋಚನ ಪೂರ್ಣ ದಯದಿ ಸಲಹೊ ಎನ್ನಸಲ್ಲದ ನಾಣ್ಯವ ಮಾಡುವರೆ ಹರಿಯೇ 3ನಖಶಿಖ ಪರ್ಯಂತ ನಾನಾ ಹಿಂಸೆಯ ಪಟ್ಟೆಸುಖವೆಂಬುದನು ಕಾಣೆ ಸ್ವಪ್ನದಲುಮುಖವರಿಯದ ರಾಜ್ಯಕ್ಕೆನ್ನನು ಎಳತಂದುಕಕಮಕ ಮಾಡುವುದುಚಿತವೆ ಹರಿಯೇ 4ಇಷ್ಟುದಿವಸ ನಿನ್ನನೆನೆಯದ ಕಾರಣಕಷ್ಟ ಪಟ್ಟೆನು ಸ್ವಾಮಿ ಕಾಯೊ ಎನ್ನ ||ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯವಿಟ್ಟು ಸಲಹೊ ಶ್ರೀಪುರಂದರವಿಠಲ5
--------------
ಪುರಂದರದಾಸರು
ತದಿಗೆಯ ದಿವಸ(ಶೇಷ ದೇವರನ್ನು ಕುರಿತು)ರಂಭೆ :ನ್ಯಾರೆಂಬುದನೆನಗೆ ಪೇಳೆಕ್ರೂರತನದಿ ತಾ ತೋರುವನೀಗ ಮ-ಹೋರಗನೆನ್ನುತ ಕೋರಿಕೆ ಬರುವದು 1ಒಂದೆರಡು ಶಿರವಲ್ಲ ಬಹುಹೊಂದಿಹವು ಸಟೆಯಲ್ಲಕಂಧರದಲಿ ಕಪ್ಪಂದದಿ ತೋರ್ಪವುಚಂದಿರಮುಖಿ ಯಾರೆಂದೆನಗರುಹೆಲೆ 2ಊರ್ವಶಿ : ಕೋಮಲಗಾತ್ರೆ ಮಹಾಮಹಿಮನು ಇವನ-ಸಾಮಾನ್ಯನೆ ಕಾಣೆಭೂಮಿಯ ಪೊತ್ತ ನಿರಾಮಯನಾದಸುಧೀಮನಿವನು ಜಾಣೆ 1ವಾಸುದೇವಗೆ ಈತ ಹಾಸಿಗೆಯವ ನಿ-ರ್ದೋಷನಿವನು ಜಾಣೆಸಾಸಿರಮುಖದ ವಿಲಾಸನಾಗಿಹ ಮಹಾ-ಶೇಷನಿವನು ಕಾಣೆ 2ಅದರಿಂದಲಿ ಕೇಳ್ ತದಿಗೆಯ ದಿವಸದಿಮಧುಸೂದನನಿವನಅಧಿಕಾನಂದದಿ ಒದಗಿಸಿ ಬರುವನುಇದೆಯಿಂದಿನಹದನ3ಎಂದಿನಂತೆ ಪುರಂದರವಂದ್ಯ ಮುಕುಂದಸಾನಂದದಲಿಅಂದಣವೇರಿ ಗೋವಿಂದ ಬರುವನೊಲ-ವಿಂದತಿ ಚಂದದಲಿ 4ಕಂಟಕಗಳು ಎಲ್ಲುಂಟೆಂಬಂತೆ ನೃಪ-ಕಂಠೀರವಗೈದಘಂಟಾನಾದದಿ ಮಂಟಪದೊಳು ವೈ-ಕುಂಠನು ಮಂಡಿಸಿದಾ 5ಕಾಂತಾಮಣಿ ಕೇಳಿಂತೀಪರಿ ಶ್ರೀ-ಕಾಂತ ನತತಂಡಸಂತವಿಸುತ ಮಹಾಂತಮಹಿಮನೇ-ಕಾಂತಸೇವೆಯಗೊಂಡ 6* * *ಪರಶಿವನನ್ನು ಕುರಿತುರಂಭೆ : ಯಾರಮ್ಮಾ ಮಹಾವೀರನಂತಿರುವನುಯಾರಮ್ಮಾ ಇವನ್ಯಾವ ಶೂರ ಯಾವಊರಿಂದ ಬಂದ ಪ್ರವೀರ ಆಹಾಮಾರಜನಕನ ವಿಸ್ತಾರಪೂಜೆಯ ವೇಳ್ಯಧೀರನಂದದಿ ತಾ ವಿಚಾರ ಮಾಡುವನೀತ 1ಕರದಿ ತ್ರಿಶೂಲವ ಧರಿಸಿ ಮತ್ತೆವರಕೃಷ್ಣಾಜಿನವನುಕರಿಸಿಹರಿಚರಣಸನ್ನಿಧಿಗೆ ಸತ್ಕರಿಸಿ ಆಹಾಜರಿಯ ದುಕೂಲವ ನಿರಿದುಟ್ಟುಕೊಂಡು ವಿ-ಸ್ತರವಾದ ತೋಷದಿ ಮೆರದು ನಲಿವ ಕಾಣೆ 2ಊರ್ವಶಿ : ಈತನೀಗ ಕಾಲಭೈರವ ಕೇಳೆಲೆಗೆ ನೀರ ಪ.ಈತನೀಗ ಪೂರ್ವದೊಳಗೆಭೂತನಾಥ ಸೇವೆಯೊಲಿದಓತು ವಿಷ್ಣುಭಕ್ತಿಯಿಂದಪೂತನಾದ ಪುಣ್ಯಪುರುಷ ಅ.ಪ.ಊರು ಇವಗೆ ಮೊದಲು ಗಂಗಾತೀರವಾಯ್ತುವೇಣುತಾ ವಿ-ಚಾರದಿಂದ ಪೊದನೈಉದಾರತನದಿ ರಾಮೇಶ್ವರಕೆಸಾರಗ್ರಹಿತ ಮುಕ್ತಿ ಪಥವನು ಕರುಣದಿಂದತೋರಿಸುವನು ವಿಷ್ಣುವೆಂದೆನುತ ಗಿರಿಯನೇರಿ ಕರುಣ ವಾರಿಧಿಯಪದಾರವಿಂದಸೇವೆಗೈದುಮಾರಪಿತನ ಭಕ್ತಿಯೊಳು ತಾ ಹೇರಿನಲಿವ ಚಾರುಚರಿತ 1ಪರಮಪುರುಷ ಹರುಷದಿಂದೀಪುರಕೆಬರುವಕಾಲದಲ್ಲಿಚರಣವನ್ನು ಬಿಡದೆ ಯಿಲ್ಲಿರುವನೈ ಮಹಾತ್ಮನೀತಸ್ಫುರಿತತೇಜೋಮೂರ್ತಿ ಈತನು ಲೋಕದೊಳಗೆಚರಿಸುವ ತ್ರಿಕಾಲಪ್ರಜÕನು ಇವನ ಗುಣವ-ನರಿವರ್ಯಾರು ಮನುಜಭುಜಂಗರಲಿಮಹತ್‍ಕಾರಣೀಕಪುರುಷನಿವ ಮಹಾ ಬಲಾಢ್ಯಕರುಣವುಳ್ಳ ವಿಷ್ಣುಭಕ್ತ 2ಶ್ರೀನಿವಾಸ ಕರುಣದಿಂಪ್ರಧಾನಿಯೆಂದು ನಡೆಸಿಕೊಡುವಏನಗೈದರೀತ ಮನದಿ ತಾನುತೋಷಪಟ್ಟು ಇರುವಕಾಣಿಕೆಗಳ ತರಿಸಿ ಇರಿಸುವ ಬೇತಾಳಪ್ರೇತನಾನಾ ಉಪದ್ರವಗಳ ಬಿಡಿಸುವ ಧನಿಯ ಆಜೆÕಏನ ದೊರಕಿತದನು ಬೇಗ ತಾನೆಬಂದು ಪೇಳಿ ಜನರಮಾನಿಸುತ ನಿಧಾನಗೊಳಿಸಿಕ್ಷೋಣಿಯೊಳಗೆ ಕೀರ್ತಿಪಟ್ಟ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ದೇವರನ್ನು ಹಸೆಗೆ ಕರೆದ ಪದಗಳುವೇದ ಉದ್ಧರಿಸೀದಾ ಮತ್ಸ್ಯಾವತಾರನೇ |ಆದಿತ್ಯಾರಿಗೊಲಿದಮೃತ ನೀಡಿದನೇ ||ಮೇದಿನಿಯನು ಪೊತ್ತ ವರಹವತಾರನೆ |ಆ ದೈತ್ಯನಳಿದು ಪ್ರಹ್ಲಾದಗೊಲಿದನೇ ||ಭೂ ದೇವಾ ರೂಪೀ ಹಸಿಗೇಳೂ 1ಭೃಗು ಕುಲೋದ್ಭವನೇ ಭೀಷ್ಮನ ಬೆಳಸಿದನೇ |ನಗಜ ರಮಣನ ಕಾರ್ಮೂಕ ಮುರಿದವನೇ ||ಹಗೆಯನಳಿದು ಪಾಂಚಜನ್ಯ ಘಳಿಸಿದನೆ |ಇಗಡ ದೈತ್ಯರ ಬುದ್ಧಿ ಭೇದ ಮಾಡಿದನೇ ||ಅಗಣಿತಮಹಿಮಾ ಹಸಿಗೇಳೂ 2ಕುದರೀಯೇರಿ ಕುಜನರಾ ಕುಲ ತರಿದವನೇ |ಬುಧರಗೋಸುಗ ಹತ್ತಾವತಾರವಾದವನೇ ||ಸುದರೂಶನ ಶಂಖ ಗದ ಜಲಜ ಧರನೇ |ವಿಧಿಪಿತಶ್ರೀ ರಮಣ ಪ್ರಾಣೇಶ ವಿಠ್ಠಲನೆ ||ಸುಧಿಗಡಲಾಲಯನೆ ಹಸಿಗೇಳೂ 3
--------------
ಪ್ರಾಣೇಶದಾಸರು
ಮಂಗಳಂಜಯಮಂಗಳಂ ಪ.ನಿಗಮವ ತಂದಾ ಮತ್ಸ್ಯನಿಗೆನಗವ ಬೆನ್ನಲಿ ಪೊತ್ತ ಕೂರ್ಮನಿಗೆ ||ಜಗವನುದ್ಧರಿಸಿದ ವರಹಾವತಾರಗೆಮಗುವನು ಕಾಯ್ದ ಮುದ್ದು ನರಸಿಂಹಗೆ 1ಭೂಮಿಯ ದಾನವ ಬೇಡಿದಗೆಆ ಮಹಾಕ್ಷತ್ರಿಯರ ಗೆಲಿದವಗೆ ||ರಾಮಚಂದ್ರನಾದ ಸ್ವಾಮಿಗೆ ಸತ್ಯಭಾಮೆಯರಸ ಗೋಪಾಲಕೃಷ್ಣಗೆ 2ಬತ್ತಲೆ ನಿಂತಿಹ ಬುದ್ಧನಿಗೆಉತ್ತಮ ಹಯವೇರಿದ ಕಲ್ಕಿಗೆ |ಹತ್ತವತಾರದಿ ಭಕ್ತರ ಸಲಹುವಸತ್ಯ ಶ್ರೀ ಪುರಂದರವಿಠಲನಿಗೆ 3
--------------
ಪುರಂದರದಾಸರು
ಶಿವ ಸತ್ತ ಎಂಥ ಆಶ್ಚರ್ಯವು ಇದು ನೋಡಿ |ಕವಿಗಳು ಮನಕ ತಂದು ||ಭುವನತ್ರಯಗಳಲ್ಲಿ ಪ್ರಖ್ಯಾತವಾಗಿದೆ |ಅವಿವೇಕಿಗಳ ಮಾತಲ್ಲಾ ಪಅಧಮರು ಬಹು ಬಗೆಯಿಂದಲ್ಲಿ ಘಳಿಸೀದಾ |ಬದುಕು ವ್ಯರ್ಥವಾಹದು ||ಬುಧರ ಪದಾರ್ಥವು ಸಾರ್ಥಕವಾಹದೆಂಬು |ದಿದೆ ಸಾಕ್ಷಿ ಎನಬಹುದೂ 1ಭೂಭುಜರಿಗೆ ಭೂಷಣಾದವು ಆಯುಧ |ಈ ಭೂಮಿ ಪೊತ್ತ ವ್ಯಾಳಾ ||ಆ ಭಿಕ್ಷುಕನ ಕುಟುಂಬವ ರಕ್ಷಿಸುತಿಹ್ಯದು |ಶೋಭಿಸುತಿಹ್ಯ ಕಪಾಲಾ 2ಮಂದೀಯ ನಂಜಿಸುತಿಪ್ಪದು | ಆತನಹಿಂದೆ ಮುಂದಿರುವ ಗಣಾ ||ನಂದೀ ಪಿತೃಗಳಿಗೆ ಕೈವಲ್ಲ್ಯಾ ತೋರಿತು |ಸಂದೇಹವಿನಿತಿಲ್ಲವೂ 3ಸೋಮಕಂಣಾದ ಜಗತ್ತೆಕ್ಕ ದಿಕ್ಕಿಗೆ |ಸ್ವಾಮಿ ಎನಿಸಿದ ವನ್ಹೀ ||ಧೀಮಂತರಾತನ ಮಡದೀಯ ಪೂಜಿಸಿ |ಶ್ರೀಮಂತರಾಗೂವರೂ 4ಮೌನಿಗಳಿಗೆ ಚರ್ಮ ವೈಷ್ಣವರಿಗೆ ಭಸ್ಮ |ತಾನು ಪ್ರೀಯಕರಾದೀತು ||ಪ್ರಾಣೇಶ ವಿಠಲಾನೊಳರ್ಧಾಂಗ ವಾಗಭಿ |ಮಾನಿಯೊಳರ್ಧವಿಟ್ಟಾ 5
--------------
ಪ್ರಾಣೇಶದಾಸರು
ಸುವ್ವಿ ಕೈಟಭಹಾರಿ ಸುವ್ವಿ ಚಾಣೂರದಾರಿಸುವ್ವಿಮಲ್ಲಮುಷ್ಟಿಕರವೈರಿಶ್ರೀ ಕೃಷ್ಣನ್ನಸುವ್ವೆಂದು ಪಾಡಿ ರಕ್ಷಿಪ ಸುವ್ವಿ ಪ.ವಿಶ್ವಬೀಜವ ಪೊತ್ತ ಗಿರಿ ಪೊತ್ತಧರೆಪೊತ್ತಶಿಶು ಕೃಷ್ಣಾಜಿನ ಪರಶು ಧನು ಪೊತ್ತಶಿಶು ಕೃಷ್ಣಾಜಿನ ಪರಶುಧನು ಪೊತ್ತಗವ ಪೊತ್ತ ದಿಗ್ವಸನ ಇಟ್ಟಿಯ ಪೊತ್ತ 1ಶ್ರುತಿಗೆದ್ದವನ ಗೆದ್ದಾಮೃತ ಗೆದ್ದಸತಿಗೆದ್ದದಿತಿಜಬಲಿಕ್ಷತ್ರಿಯರಾಕ್ಷಸರ ಗೆದ್ದದಿತಿಜಬಲಿಕ್ಷತ್ರಿಯ ರಾಕ್ಷಸರ ಗೆದ್ದ ಅಲರ ಗೆದ್ದಪತಿವ್ರತೆ ಅಧರ್ಮಿಗಳ ಗೆದ್ದ 2ಎವೆ ಇಲ್ಲ ಮೃದು ಇಲ್ಲ ಜವದೊಳೆಡಬಲವಿಲ್ಲಕುವರೇಂದ್ರ ವಿಪ್ರಮಾರ್ಗೆಡರಿಲ್ಲಕುವರೇಂದ್ರ ವಿಪ್ರಮಾರ್ಗೆಡರಿಲ್ಲ ಕೃಷ್ಣ ಪ್ರಸನ್ವೆಂಕಟಯೋಗಿಕೃಪೆಗೆ ಕಡೆಯಿಲ್ಲ3
--------------
ಪ್ರಸನ್ನವೆಂಕಟದಾಸರು