ಒಟ್ಟು 44 ಕಡೆಗಳಲ್ಲಿ , 21 ದಾಸರು , 43 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ಮಾಡಿದಕರ್ಮಬಲವಂತವಾದರೆ |ನೀ ಮಾಡುವುದೇನೊ ದೇವಾ ಪಸಾಮಾನ್ಯವಲ್ಲವಿದು ಬ್ರಹ್ಮಬರೆದ ಬರೆಹ |ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ ಅ.ಪಅತಿಥಿಗಳಿಗೆ ಅನ್ನ ಕೊಟ್ಟವನಲ್ಲ -ಪರ -|ಸತಿಯರ ಸಂಗವ ಗಳಿಗೆ ಬಿಟ್ಟವನಲ್ಲ ||ಮತಿಹೀನನಾಗಿ ಮರುಳಾಗಿದ್ದೆನೋ ದೇವ |ಗತಿಯಾವುದೈ ಎನಗೆ ಗರುಡವಾಹನ ಕೃಷ್ಣ1ಅನ್ನಪಾನಂಗಳಿಗೆ ಅಗ್ರಗಣ್ಯನು ಆಗಿ |ಸ್ನಾನ ಸಂಧ್ಯಾದಿ ಕರ್ಮಂಗಳನೀಗಿ||ದಾನವಾಂತಕ ನಿನ್ನ ಧ್ಯಾನವ ಮಾಡದೆ |ಶ್ವಾನನಂತೆ ಮನೆಮನೆ ತಿರುಗುತಲಿದ್ದೆ 2ಇನ್ನಾದರು ನಿನ್ನ ದಾಸ ಸಂಗವನಿತ್ತು |ಮನ್ನಿಸಿ ದಯಮಾಡೊ ಮನ್ಮಥಜನಕ ||ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ |ಪನ್ನಂಗಶಯನ ಶ್ರೀಪುರಂದರವಿಠಲ 3
--------------
ಪುರಂದರದಾಸರು
ನೀನೇಗತಿಮಾಧವಾ ದೇವರದೇವನೀನೇ ಗತಿಯು ನಮ್ಮ ಮಾನಾಭಿಮಾನವಹಾನಿಗೊಳಿಸದನುಮಾನವಿಲ್ಲದೆ ಕಾಯೋ ಪಸಾಕಾರ ಸೌಭಾಗ್ಯವೂ ಸರ್ವವೂ ಸರ್ವಶೋಕಕ್ಕೆ ಕಾರಣವೂಬೇಕಾದ ಕಡುರಸ ಶಾಕಪಾಕದ ರೂಪಿಶ್ರೀಕೃಷ್ಣ ನಿನ್ನಯ ನಾಮದಿಂದಧಿಕನೆ 1ಸಕಲ ಸಂಭ್ರಮವು ನೀನೇ ನಿನ್ನನು ಎನ್ನಸಖನೆಂದು ನಂಬಿದೆನುಸಕಲ ಚರಾಚರ ಪ್ರಾಣಿಗಳಿಗೆ ಸರ್ವಸುಖದುಃಖವುಣಿಸುವ ಸಕಲ ತಂತ್ರನೇ 2ಆದಿಮೂರುತಿಯು ನೀನೇ ಧರ್ಮಾಧರ್ಮಶೋಧಿಸುವವನು ನೀನೇವೇದಗಮ್ಯನೆ ಯೆನ್ನ ಖೇದಮೋದವ ನಿನ್ನಲ್ಲಿಪಾದಕರ್ಪಿಸಿದೆ ಗೋವಿಂದದಾಸನೆ ಕಾಯೊ 3
--------------
ಗೋವಿಂದದಾಸ
ಬಾ ಬಾ ಬಾ ಬಾರೋ ಕೃಷ್ಣಬಾರೋ ಮುಖವ ತೋರೋ ಪಬಾರೋ ಮುಖವ ತೋರೋಸರಸಾಮೃತ ಬೀರೋ ಬಾ ಬಾ ಬಾ 1ಸಾ ಸಾ ಸಾ ಸಾಕೋ ನಿನಗೀಲೋಕಮಾಯ ಮೋಹನಾ |ಲೋಕಮಾಯ ಮೋಹನಾ |ಶೋಕನೇಕ ನಾಶನಾ 2ಕೋ ಕೋ ಕೋ ಕೊಡಿಸೊನಮ್ಮ ಉಡುವ ಶೀರೆಕುಪ್ಪಸಾ |ಉಡುವ ಶೀರೆ ಕುಪ್ಪಸಾ |ಮಡದಿಯರಿಗೆ ಒಪ್ಪಿಸಾ 3ಅಲ್ಲ ಲ್ಲ ಲ್ಲ ಲ್ಲದಿದನೆಲ್ಲಗೋಪಿವಲ್ಲಭನೊಳ್ | ಎಲ್ಲಗೋಪಿವಲ್ಲಭನೊಳ್ |ಸೊಲ್ಲಿಸುವೆವು ನಿಲ್ಲದೇ 4ನಂದಂದನ ನಂದಗೋಪಿ|ಕಂದನೇ ಮುಕುಂದನೆ |ಕಂದನೇ ಮುಕುಂದನೇ|ಸುಂದರಾ ಗೋವಿಂದನೇ 5
--------------
ಗೋವಿಂದದಾಸ
ಬಾರೆ ಶ್ರೀ ಮಹಾಲಕ್ಷ್ಮಿದೇವಿಯೆ ಬೇಡುತಿರ್ಪೆವು ಪಸಾರಸಾಕ್ಷಿಯೆ ಸರ್ಪವೇಣಿಯೆನಾರಿಯೆ ವೈಯ್ಯಾರಿಯೆ ಶ್ರೀಹರಿ ಸಹಿತದಿ ಅ.ಪಯಜÕನಾಮಕ ಹರಿಯ ರಾಣಿಯಜÕ ಇಂದಿರಾಹಿರಣ್ಯಹರಿಣಿಸುಜÕರಾದ ಜನರ ಪೊರೆವೆಸತ್ಯಾಶ್ರಿ ನಿತ್ಯಾಶ್ರೀ ಸುಗಂಧಿ ಸುಂದರಿ 1ಪ್ರಾಜÕಸುಖಾ ಸುಗಂಧಿ ಸುಂದರಿವಿದ್ಯಾ ಶ್ರೀ ಸುಶೀಲದೇವಿಸುಜÕರಾದ ಜನರೊಳಿರಿಸುತಕ್ಷಣ ಈಕ್ಷಿಸು ಸುಲಕ್ಷಣ ದೇವಿಯೆ 2ಶಾಂತಿಮಾಯೆಕೃತಿಯೆಇಂದಿರೆಶಾಂತಚಿತ್ತದಿ ಧ್ಯಾನಿಸುವರಾ ನಿ-ರಂತರದಿ ಪೊರೆವೆ ಜಯಮಂಗಳೆ ಉತ್ತುಂಗಳೆ ಶೃಂಗಾರ ರೂಪಳೆ 3ನಗುತ ನಗುತ ಬಾರೆ ಬೇಗನಗಧರನ ಸನ್ನಿಧಿಗೆ ಈಗಖಗವಾಹನನ ಮಡದಿ ನಿನ್ನಅಡಿಗಳ ಪೂಜಿಪೆ ಸಡಗರದಿಂದಲಿ 4ಪರಿಮಳೋದಕದಿಂದ ನಿನ್ನಚರಣಗಳನು ತೊಳೆದು ದಿವ್ಯವರಮಣಿಯ ಪೀಠದಲಿ ಕೂಡಿಸಿಪರಿಪರಿ ಪುಷ್ಪದಿ ಪೂಜಿಸಿ ನಲಿಯುವೆ 5ಹರಿಯರಾಣಿ ನಿನಗೆ ದಿವ್ಯಹರಿದ್ರಾಕುಂಕುಮಾಕ್ಷತೆಗಳಿಂದವರಕಲ್ಹಾರಪೂವ್ಗಳಿಂದಲಿಸುರಗಿ ಶಾವಂತಿಗಿ ತುರುಬಿಗೆ ಮುಡಿಸುವೆ 6ಎಣ್ಣೂರಿಗೆ ಹೋಳಿಗೆಯು ಕಡಬುಸಣ್ಣನಕ್ಕಿ ಶಾಲ್ಯನ್ನಗಳುಇನ್ನು ಬಗೆ ಬಗೆಯ ಭಕ್ಷಂಗಳನೂಸ್ವರ್ಣ ಪಾತ್ರೆಗಳಲ್ಲಿ ಇರಿಸುತ ನಲಿವರು 7ಕ್ಷೀರಘೃತದಧ್ಯಾನ್ನ ಮಂಡಿಗೆಶಾವಿಗೆ ಪರಮಾನ್ನಗಳನುಶ್ರೀರಮೇಶನಿಗರ್ಪಿಸೆನುತಬೇಡುವೆ ಪಾಡುವೆ ಕೊಂಡಾಡುತ ನಲಿಯುವೆ 8ಮುದ್ದು ಮಹಾಲಕ್ಷ್ಮಿ ನಿನಗೆಇಡಲಿ ದೋಸೆಗಳ ಸಹಿತಪದ್ಮನಾಭನಿಗರ್ಪಿಸೆನುತಶ್ರದ್ಧೆಯಿಂ ನಮಿಸುತ್ತಾ ಬೇಡುತಲಿರುವರು 9ಗಂಗಾಜನಕನರಸಿ ನಿನಗೆಮಂಗಳಾರುತಿಗಳ ಮಾಡಿಹಿಂಗಿಸುವೆ ಪಾಪಗಳೆನುತಾವಂದಿಸಿ ಸಾಷ್ಟಾಂಗದಿಂ ಚಂದದಿ ಪ್ರಾರ್ಥಿಪೆ 10ಕರ್ಪೂರದ ಅಡಿಕೆ ವೀಳ್ಯಅರ್ಪಿಸುತಲಿ ನಿನ್ನ ಪೂಜಿಸಿಮುಪ್ಪುರಾಂತಕ ಕಮಲನಾಭವಿಠ್ಠಲ ವಿಠ್ಠಲ ವಿಠ್ಠಲನರಸಿಯೆ 11
--------------
ನಿಡಗುರುಕಿ ಜೀವೂಬಾಯಿ
ಯಾಕೆ ಮೂಕನಾದೆಲೋ ಗುರುವೆ ನೀ -ನ್ಯಾಕೆ ಮೂಕನಾದ್ಯೋ ಪಸಾಕುವೊರಾರಯ್ಯಾ ಶ್ರೀಕರ ರಾಘವೇಂದ್ರ ಅ.ಪಮಂದಿಯಂದಿದ ಎನ್ನ - ಮಂದನ ಮಾಡೀಗ 1ಬೇಕಾಗದಿದ್ದರೆನ್ನ - ಯಾಕೆ ಕೈಯಾ ಪಿಡಿದಿಕಾಕುಜನರೊಳೆನ್ನ- ನೂಕಿ ಬಿಟ್ಟು ಈಗ2ನಿನ್ನಂಥ ಕರುಣಿಲ್ಲ - ಎನ್ನಂಥ ಕೃಪಣಿಲ್ಲಘನ್ನ ಮಹಿಮ ನೀ - ಎನ್ನನು ಬಿಟ್ಟೀಗ 3ಇಂದುನೀ ಬಿಟ್ಟರೆನ್ನ- ಮುಂದೆ ಕಾಯುವರ್ಯಾರೋ4ಜನ್ಯಾನು - ನಾನಯ್ಯ - ಎನ್ನ ಜನಕನು ನೀನುಮನ್ನಿಸು ನೀ ನಿತ್ಯಾ - ನನ್ನ ಶರಣನಲ್ಲೆ 5ಈಗ ಪಾಲಿಸದರೆ-ಯೋಗಿಕುಲವರ್ಯರಾಘವೇಂದ್ರನೇಭವ- ಸಾಗುವಧ್ಯಾಗಯ್ಯ6ನಾಥನು ನೀನಯ್ಯಾ - ನಾಥನು ನಾನಯ್ಯಾಪಾಥೋಜ ಗುರುಜಗ -ನ್ನಾಥ ವಿಠಲ ಪ್ರೀಯ 7
--------------
ಗುರುಜಗನ್ನಾಥದಾಸರು
ಯಾದವ ಯದುಕುಲ ಬಾಲನೆ ಬಾರೋಮಾಧವಮದನಗೋಪಾಲನೆ ಬಾರೋ ಪಸಾಧುಗಳೊಡೆಯ ಯಶೋದೆ ನಂದನೆ ಬಾರೋಶ್ರೀಧರ ಸುಗುಣ ಶರೀರನೆ ಬಾರೋ ಅ.ಪಮನೆಮನೆಯೊಳು ಮೊಸರ ಕಡೆವರು ಬಾರೋವನಜಾಕ್ಷಿಯರು ಬೆಣ್ಣೆ ಕೊಡುವರು ಬಾರೋತನಯರೊಡನೆ ಚಂಡಿನಾಟವಾಡಲು ಬಾರೋಕೊನೆ ಬೆರಳೊಳು ಪಿಡಿದ ಕೊಳಲನೂದುತ ಬಾರೋ 1ಸುರರುನಾರದರೆಲ್ಲ ಸ್ಮರಿಸುವರ್ ಬಾರೋಕರವಮುಗಿವೆ ನಿನ್ನ ಚರಣಕ್ಕೆ ಬಾರೋನರನಸಾರಥಿಕೃಷ್ಣ ಹರುಷದಿ ಬಾರೋ 2ಪಾಂಡುಪುತ್ರರ ಪಾಲ ಪಾಹಿಯೆಂಬೆನು ಬಾರೋಕಂಡು ರಕ್ಷಿಸೋ ಎನ್ನಕಮಲನಯನ ಬಾರೋಪಂಡರೀಪುರವಾಸ ಚಂಡವಿಕ್ರಮ ಬಾರೋಅಂಡಜವಾಹನಮಾರ್ತಾಂಡನಂತಿಳಿದು ಬಾರೋ 3ಗಂಧಚಂದನ ಪುಷ್ಪದಿಂದ ಪೂಜಿಪೆ ಬಾರೋಸುಂದರ ಚಿನುಮಯ ಮೂರ್ತಿಯೆ ಬಾರೋಮಂದರಧರಮದನಜನಕನೆ ಬಾರೋಇಂದಿರೆಯರಸ ಗೋವಿಂದನೆ ಬಾರೋ 4
--------------
ಗೋವಿಂದದಾಸ
ಯಾರಲಿ ದೂರುವೆನೋ ಗಿರಿಯ ರಾಯಾಯಾರೆನ್ನ ಸಲಹುವರೋ ಪಸಾರಿದ ಭಕ್ತ ಸಂಸಾರಿ ನಿನ್ನಯ ಪದವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಅ.ಪಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳುದುಷ್ಟರಿಂದಲಿ ನೊಂದೆನೋ ||ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ 1ಹಿಂದೆ ಮಾಡಿದ ಕರ್ಮವು ಈ ಭವದೊಳುಮುಂದಾಗಿ ತೋರುತಿದೆ ||ಇಂದೇನುಗತಿಅದರಿಂದ ನೊಂದೆನು ನಾನುಮಂದರಧರಗೋವಿಂದ ನೀನಲ್ಲದೆ2ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತಹಗೆಗಳ ನಗಿಸುತಿದೆ ||ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ 3ಬಾಡಿದರಳಿಸಸಿಯ ಕಲ್ಲಿನ ಮೇಲೆಈಡಾಗಿ ನಾಟಿದರೆ ||ಬೇಡಿಕೊಂಡರೆತಳಿರುಮೂಡಿ ಬರುವುದುಂಟೆರೂಢಿಗೊಡೆಯ ನೀನು ನೋಡದಿದ್ದ ಮೇಲೆ 4ಹಲವು ಪರಿಯ ಕಷ್ಟವ ನಿನ್ನಯಪಾದಜಲಜದ ಕರುಣದಲಿ ||ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲಒಲವಾಗು ಎನ್ನೊಳು ಪುರಂದರವಿಠಲ 5
--------------
ಪುರಂದರದಾಸರು
ಯಾವ ಭಯವು ನಮಗೆ |ಶಂಕರ ದೇವನೊಲಿದು ಕಡೆಗೆ ಪಸಾವಧಾನದಿ ಸರ್ವಭಕ್ತ ಜನರಕಾವ|ದೇವ ದೇವೇಶ ಸರ್ವೇಶ ನೀನೊಲಿದರೆ ಅಪದುರಿತದ ಭಯವೇನಲೇ | ಶಂಕರ ನಿನ್ನ |ಸ್ಮರಿಸಲು ದೂರವಲೇ |ಮರಣದ ಭಯವೆನೆ | ಅಂತಕಾಂತಕ ನೀನು ||ಉರಗನ ಭಯವೆನೆ | ಗರಳಕಂಧರನೂ 1ಚೋರರ ಭಯವೇನೂ | ದಧಿಘೃತ |ಚೋರ ನಿನ್ನಯ ಸಖನೂ ||ನಾರೀ ಚೋರನ ದೇವ | ಧೀರಕೈರಾತನೀ |ಘೋರರಕ್ಕಸರೆನೆ | ತ್ರಿಪುರಸಂಹಾರ2ಮೃಗಪಕ್ಷಿ ಭಯವೆನಲೇ |ಸತಿಸುತಸಖ|ಖಗಮೃಗವೇರ್ದರೆಲೇ |ಜಗದೊಡತಿಯು ಲಕ್ಷ್ಮೀ | ಗಗ್ರಜನೆನಿಸಿಹೆ ||ಭಗಪೀಠನು ಧನ | ಮಾನಾಭಿಮಾನಕೇ 3ವಸನಕ್ಕೆ ಚರ್ಮಾಂಬರನೂ |ಸಂಸಾರವೆಂಬ ವ್ಯಸನಕೆ ದಿಗಂಬರನೂ ||ತೃಷೆಗೆ ಗಂಗಾಧರ | ಅಶನಕ್ಕೆ ಬಿಕ್ಷುಕನೀ |ಅಂಗ ಶೃಂಗಾರಕೆ | ಭಸ್ಮಲೇಪನನೂ 4ಪೊಗಳಲಳವೇ ನಿನ್ನಾ | ಮಹೇಶ್ವರ |ಜಗದಿ ಭಕ್ತರ ಸಂಪನ್ನಾ ||ಭೃಗುಲಾಂಛನಧರ ಗೋವಿಂದದಾಸನ |ಹಗಲಿರುಳೆನ್ನದೆಪೊರೆಯೋ ಮಹಾದೇವ 5
--------------
ಗೋವಿಂದದಾಸ
ವದರಿ ವದರಿ ತರ್ಕವ ಹೊದ್ದಿದೆ ನರಕವ ಪಸಾಧುಗಳ ಕಂಡು ಕ್ರೋಧಕೆಡೆಗೊಂಡುವಾದಿಸಿ ವಾದಿಸಿ ಕಂಡೆ ಏನ ಎಲೆ ಹಳ್ಳಿ ಕೋಣ1ನರಿಗೆ ಎತ್ತ ಸಿಂಹಕೆ ಎತ್ತಸರಿಯ ಮಾಡೆ ಸಾಟಿಯಹುದೇನೋಡು2ಹರಿಯ ವಂದಿಸಿ ಹರನ ನಿಂದಿಸಿಬರಿದೆ ಬರಿದೆ ಬೆಂಕಿ ಬಿದ್ದೆಯಲ್ಲೋ ರಣಹದ್ದೇ3ಈ ತೆರದಿಂದ ವಾದಗಳಿಂದಮಾತಿನ ಮಾತಿನ ಮಾಲೆಗಳಿಂದ ಕುನಿ ಜನ್ಮಕ್ಕೆ ಹೋದೆ4ಸತ್ಯದಿಂದ ಚಿದಾನಂದನಿತ್ಯನಿತ್ಯದಿ ತಿಳಿಯದುದೆ ವ್ಯರ್ಥ ಕೆಟ್ಟುಹೋದೆ5
--------------
ಚಿದಾನಂದ ಅವಧೂತರು
ಶ್ರೀ ಕರಾರ್ಚಿತ ಜಗದೇಕಕಾರಣ ಶ್ರೀಕರಾದೇವಾ ಪಸಾಕುವನಿಗೆ ನಾನ್ಯಾಕೆ ಬಾರೆನೊ ಮನಕೆ ಅ.ಪವಸತಿಸ್ಥಳವಿಲ್ಲಾವಸುಧೆತಿರುಗುವೆನಲ್ಲಾವಸುಧೆಭಾರಾದೆನಲ್ಲಾ ಸ್ವಾಮಿವ್ಯಸನ ಬಡುತಿಹ ದ್ವಿಪದ ಪಶುವಿನ ನೋಡಿ ನಿನಗೆ 1ಜನನಿಜನಕ ತನಯಾ ವನುತೆ ಈ ದೇಹಾಮನಕೆ ಬಾರೆನೊಅವರಅನುಕೂಲವಾಗದಲೆವನದಲ್ಲಿ ಸಂಚಾರ ಇನುತೆ ಮಾಳ್ಪನ ನೋಡಿ 2ವರಣಿಸಾಲೇನಿನ್ನು ಸುಪರಣವಹÀನಭವಕರಣರಹಿತಶಾಯಿ ಕರಣ ವೈರಿಯಮಿತ್ರಕರುಣಿಸ್ಯನ್ನನು ಎಂದು ಶರಣು ಪೊಕ್ಕದು ನೋಡೀ 3ನರರ ಸೇವೆಯ ಮಾಡಿ ನರರಗುಣಕೊಂಡಾಡಿನರರ ಮಾತನೆಕೇಳಿನರರಗಾಥವಕೇಳಿಹರಿನಿನ್ನ ಚರಣಾಶ್ರಯಸಿದವನಾ ನೋಡೀ4ವಾತದೇವನತಾತಸೀತಾನಾಥನೆ ನಿನ್ನತಾತಕೇಳೀಗೆನ್ನ ಮಾತು ಮನಸಿಗೆ ತಂದುದಾತನೀನೆಂದು ನಾ ಆತುರದಿ ಬೇಡಿದೆನೊನೀತ ಗುರುಜಗನ್ನಾಥವಿಠಲ ನಿನಗೆ 5
--------------
ಗುರುಜಗನ್ನಾಥದಾಸರು
ಶ್ರೀಪುರುಷೋತ್ತಮಪಾಹಿಜಯಜಯಮು-ರಾರೆ ನರಹರೆ ಸುರದೊರೆ ಪಸಾರಸನಯನ ಶ್ರೀ ಮುಕುಂದ ಹರೆ ಶ್ರಿತಜನರಕ್ಷಕಭಾನುಕೋಟಿ ಕಾಂತಿಸುಂದರ ಪ್ರಭÉೂೀ ನಮಿತಚರಣಕಾಮಜನಕ ಕಮಲವದನಶ್ರೀಮುಕುಂದ ಗರುಡಗಮನಉರಗಶಯನ ನಮಿಪೆನಿನ್ನಸುರರೊಡೆಯನೆ ತ್ವರದಿ ಬಾ 1ಚಂದದಿ ನಮಿಪೆ ಸುಂದರಾನನ ಮುನಿಹೃದಯಸದನಇಂದಿರಾ ರಮಣ ಮುರಮರ್ಧನ ಚಂದ್ರವದನಮಂದರಗಿರಿ ಎತ್ತಿದ ಬಲುಚಂದದಿಂದ ಸುರರ ಪೊರೆದವಂದಿಪೆ ಗೋವಿಂದ ನಿನ್ನಚಂದ ಪಾದಕ್ಕೆರಗಿ ನಮಿಪೆ 2ಕಾಮಿನಿರೂಪವ ಪ್ರೇಮದಿಂದಲಿ ನೀ ತಾಳುತಲಿಕಾಮಜನಕನೆಂದರಿಯದೆ ಭ್ರಾಮಕರಾಗಿರಲುಕಾಳಿಫಣಿಯ ತುಳಿದು ಹರಿಯುಅಸುರರಟ್ಟಿ ಸದೆದು ನೂಕಿಕಂಸ ಮರ್ಧನ ಕಮಲನಾಭವಿಠ್ಠಲ ವಸುಧೆಯೊಳಗೆ ಮೆರೆದ 3
--------------
ನಿಡಗುರುಕಿ ಜೀವೂಬಾಯಿ
ಸಚ್ಚಿದಾನಂದಾತ್ಮ ಶ್ರೀಪುರುಷೋತ್ತಮ ಶ್ರೀಮಾಧವಶೌರೇಸತ್ಯ ಸಂಕಲ್ಪ ಸರ್ವೇಶಾ ಸತ್ಯ ಭಾಮೆ ರುಕ್ಮಿಣೇಶ ಪಸಾರಸಾಕ್ಷನೆ ಪರಿವಾರ ರಕ್ಷನೆ ಕಮ-ಲಾಯತಾಕ್ಷ ನಿರುಪಮ ಚರಿತಾ ಶುಭಗುಣಭರಿತಾ ಸುರಮುನಿ ನಮಿತಶ್ರೀ ಅ.ಪಕರುಣಾಕರಸುಂದರ ಶ್ರೀರಂಗಾ ಶರಣಾಗತವತ್ಸಲ ಭವಭಂಗನಿರುತದಲೀ ಸ್ಮರಿಸುವರ ಕರುಣದಲೀತ್ವರಿತದಿ ಸಲಹುವ 1ಬಾ ಯದುವರ ಬಾ ರಘುವರ ಬಾನಗಧರಬಾ ಬಾ ಬಾಬಾಭವಹರಬಾಮುರಹರಬಾಸಿರಿವರ ಬಾ ಶ್ರೀಶಾ 2ಶ್ರೀಶನೆ ಬಾ ಬಾ ಬಾ ಕೇಶವ ಬಾ ಬಾ ಬಾಭೂಸುರ ಪಾಲಬಾ ಮುರಳಿಧರಾ ಸುರನÀುತ ಶ್ರೀಕಮಲನಾಭ ವಿಠ್ಠಲ ನರಹರಿ 3
--------------
ನಿಡಗುರುಕಿ ಜೀವೂಬಾಯಿ
ಹೇರೊಡಲ ತವ ಪಾದವಾರಿಜದ್ವಯ ಮನೋ -ನೀರಜಾಲಯದಿ ಭಜಿಪೆÉ ಪಸಾರಿದವರಘಸ್ತೋಮ ದೂರ ಓಡಿಸಿ ಬಯಕಿಪೂರೈಸಿ ಪೊರೆವೊದಾತಾ- ಖ್ಯಾತಾಅ.ಪಪ್ರದ್ಯುಮ್ನ ಪೌತ್ರಸುತ ಮುದ್ದುಗಣರಾಯಾ 1ಮಗ್ನವಾಗಲಿ ಚಿತ್ತ - ಭಗ್ನದಂತನೆ ನಿನ್ನಲಿಲಗ್ನಮನವಿತ್ತು ನಿರ್ವಿಘ್ನಕೃತಿನುಡಿಸೋ 2ಪ್ರೀತಿಯಿಂದಲಿ ಸ್ತುತಿಪೆ ನೀತಗುರುಜಗ -ನ್ನಾಥವಿಠಲ ಪಾದದೂತ ನೀ ಬಹು ಖ್ಯಾತಾ 3
--------------
ಗುರುಜಗನ್ನಾಥದಾಸರು