ಒಟ್ಟು 109 ಕಡೆಗಳಲ್ಲಿ , 33 ದಾಸರು , 90 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರಮ್ಮ ಶ್ರೀ ರಂಗಧಾಮನ ತಂದು ತೋರಮ್ಮ ಎನ್ನಯ ಪ್ರೇಮನ ವಾರಿಜಸಖಶತಕೋಟಿತೇಜನ ಹೊಂತ- ಕಾರಿಯ ನೀ ಕರತಾರೆ ಸೈರಿಸಲಾರೆ ಪ. ವೃಂದಾವನದೊಳಗಾಡುವ ಶ್ರೀ- ಗಂಧವ ಮೈಯೊಳು ತೀಡುವ ಚಂದದಿ ಕೊಳಲೂದಿ ಪಾಡುವ ನಮ್ಮ ಕಂದರ್ಪ ಜಲಕ್ರೀಡೆಯಾಡುವ ನಂದ ನಂದನ ಗೋವಿಂದನ ಕಾಣದೆ ಒಂದು ನಿಮಿಷ ಯುಗವಾಗಿ ತೋರುತಲಿದೆ 1 ಉಡುವ ಸೀರೆಯ ಸೆಳೆದೋಡುವ ದೊಡ್ಡ ಕಡಹದ ಮರವೇರಿ ನೋಡುವ ಕೊಡಲೊಲ್ಲದೆ ಬಹುಕಾಡುವ ಲಜ್ಜೆ- ಗೆಡಿಸಿ ಮಾನಿನಿಯರ ಕೂಡುವ ತಡವ್ಯಾತಕ್ಕೆ ಸಖಿ ತವಕದಿಂದಲಿ ಪೋಗಿ ಎ- ನ್ನೊಡೆಯನ ಕರತಾರೆ ಅಡಿಗೆರಗುವೆ ನಾ 2 ನೀಲವರ್ಣನ ನಿಜರೂಪನ ಶ್ರೀ- ಲೋಲ ಹೆಳವನಕಟ್ಟೆವಾಸನ ಜಾಲಿ ಹಾಳ ವೆಂಕಟೇಶನ ಭಕ್ತ- ಪಾಲಕ ಪರಮವಿಪೋಷನ ಆಲಸ್ಯವ್ಯಾಕೆನ್ನ ಇನಿಯನ ಕರೆತಾರೆ ಬಾಲೆ ನಿನಗೆ ಕಂಠಮಾಲೆಯ ಕೊಡುವೆ. 3
--------------
ಹೆಳವನಕಟ್ಟೆ ಗಿರಿಯಮ್ಮ
ತೊಡಕ ಹರವ ಮಾಡಿಕೊಳ್ಳಿರೊ ಹುಟ್ಟಿ ಬಾಹ್ವ ಮನುಜರೆಲ್ಲ ಧ್ರುವ ನಾನು ನನ್ನದೆಂದು ಜ್ಞಾನಹೀನನಾಗಿ ಬಾಳುತಿಹ್ಯ ಗಾಣ-ದೆತ್ತಿನಂತೆ ಮುಂದೆಗಾಣದಿಹ್ಯ ಭ್ರಮೆಯದ 1 ಜೀವ ಶಿವ ದಾವದೆಂದು ಠಾವಿಕಿಲ್ಲ ದಿಹ್ಯದಾಗಿ ನಾವು ನೀವು ಎಂದು ಹ್ಯಾವ ಹೊಮ್ಮಿ ಹೊಡೆದಾಡುವ 2 ಸಂಚಿತ ಪ್ರಾರಬ್ಧ ಕ್ರಿಯಮಾಣದೊಳು ಸಿಲ್ಕಿ ಪ್ರ ಪಂಚ ಪರಮಾರ್ಥ ದಾವದೆಂದು ಮುಂಚೆ ತಿಳಿಯದ 3 ತನವು ತಾನೆಂದು ಘನವು ಮರೆದು ದಣಿದು ತಿರುಗುತಿಹ್ಯ ಮನದ ಮಾಯದೊಳು ಸಿಲ್ಕಿ ತನಗೆ ತಾಂ ತಿಳಿಯದೆ 4 ತೊಡಕು ಹರವ ಮಾಡಿಗೊಳ್ಳಿ ಪಡದು ಙÁ್ಞನಭಕ್ತಿಯಿಂದ ಮೂಢ ಮಹಿಪತಿಯನ್ನೊಡೆಯ ಬಿಡದೆ ನೆಲೆಗೊಳ್ಳುವ್ಹಾಂಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತೋರಬಾರದೆ ನಿಮ್ಮ ಚರಿತೆಯನು ನರರೊಳು ನಗೆಗೀಡು ಮಾಡದ ಹಾಗೆ ಪ. ಕಲ್ಲೊಳು ಕಾಂತೆಯ ಮಾಡಿದವನೆಂ- ದೆಲ್ಲರು ಜಗÀದೊಳು ಪೇಳುವರು ಅಲ್ಲಿ ಮಾಡಿದ ಹಾಗೆ ಇಲ್ಲಿ ತೋರಿಸಿದರೆ ಬಲ್ಲಿದನೆನ್ನೊಡೆಯ ದೊಡ್ಡವನೆಂದು ಸಾರುವೆ 1 ಅಹಹ ಕುಬುಜೆಯಳ ತನುವನ್ನೆತ್ತಿ ಮಹಿಯೊಳು ಯುವತಿಯ ಮಾಡಿದೆಯೆಂಬರು ಬಹು ಪರಾಕ್ರಮವನ್ನು ಈಗ ತೋರಿಸಿದರೆ ಅಹುದೋ ಎನ್ನೊಡೆಯ ದೊಡ್ಡವನೆಂದು ಸಾರುವೆ 2 ನೀನೆ ಗತಿಯೆಂದು ಬಂದ ಭಕ್ತನ ಕ- ಣ್ಣುನವ ತಿದ್ದಿ ನಿಜವ ತೋರಿಸಯ್ಯ ದೀನದಯಾಳು ಹೆಳವನಕಟ್ಟೆ ರಂಗಯ್ಯ ದಾನಿ ಎನ್ನೊಡೆಯ ದೊಡ್ಡವನೆಂದು ಹೊಗಳುವೆ 3
--------------
ಹೆಳವನಕಟ್ಟೆ ಗಿರಿಯಮ್ಮ
ದಾಸ ದಾಸರ ಮನೆಯ ದಾಸಿಯರ ಮಗ ನಾನುಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಪ ಶಂಕು ದಾಸರ ಮನೆಯ ಮಂಕುದಾಸನು ನಾನುಮಂಕುದಾಸನು ನಾನು ಮರುಳುದಾಸಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ವ ಬಡ ದಾಸ ನಾನಯ್ಯ 1 ಕಾಳಿದಾಸರ ಮನೆಯ ಕೀಳುದಾಸನು ನಾನುಆಳುದಾಸನು ನಾನು ಮೂಳದಾಸಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯಆಳಿನಾಳಿನ ದಾಸ ಅಡಿದಾಸ ನಾನಯ್ಯ 2 ಹಲವು ದಾಸರ ಮನೆಯ ಹೊಲೆಯ ದಾಸನು ನಾನುಕುಲವಿಲ್ಲದ ದಾಸ ಕುರುಬ ದಾಸಛಲದಿ ನಿನ್ನ ಭಜಿಪರ ಮನೆಯ ಮಾದಿಗ ದಾಸಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ 3
--------------
ಕನಕದಾಸ
ಧ್ರುವತಾಳ ಬಂದೆನ್ನ ಕಾಯೊ ಕರುಣದಿಂದ ಕೈಪಿಡಿದು ದೀನ ಬಂಧುವೆ | ಒಂದೂರು ಮಂದಿರಾರ್ಯ | ಸಂದೇಹವ್ಯಾಕೆ ನಿನ್ನ ಪೊಂದಿದ ಸತ್ಯಶಿಷ್ಯವೃಂದದೊಳಗೆ ನಾ ಕಡೆಯವನೋ ತಂದೆ ನೀನಗಲಿದಕೆ ನೊಂದೆನೊ ನಾ ಭವ ಬಂಧದೊಳಗೆ ಬಿದ್ದು ಬಹುವಿಧದಿ ನಮಗಿನ್ನು ಹಿಂದು ಮುಂದು ಮನಕೆ ನೀ ತಾರದಲೆ ಕಣ್ಣೆರೆದು ಈಕ್ಷಿಸಿ ಎನ್ನೊಳಿದ್ದ | ಮಂದಮತಿಯ ಬಿಡಿಸಿ ಮಧ್ವಶಾಸ್ತ್ರವ ತಿಳಿಸೋ | ಮಂದರಕುಜ ಭಕ್ತಸಂದೋಹಕೆ | ಹಿಂದೆ ವರದಾತನೆಂದೆನಿಸಿದ ಕರ್ಮಂದಿಗಳರಸರ ಕ್ಷೇತ್ರದಲ್ಲಿ | ಬಂದ ಸಮಯವೆನ್ನ ಬಿನ್ನಪ ಚಿತ್ತಕೆ | ತಂದು ತವಕದಿಂದ ಭೂಸುರರ ಸಂದಣಿಯಲ್ಲಿ ನಿನ್ನ ಮಹಿಮೆ ಪ್ರಕಟಿಸಿ ಇಂದುವಿನಂತೆ ಪೊಳೆದು ಮೆರೆದ ಕರುಣೀ ಅಂದಿನಾರಭ್ಯ ನೀನೆ ಸ್ವರೂಪೋದ್ಧಾರಕರ್ತನೆಂದು ದೃಢನಾಗಿ ನಂಬಿ ತ್ವತ್ವಾದಕೆ ವಂದಿಸಿ ಮೊರೆ ಇಡೆ ಇಂದು ನೀನು ನಮ್ಮ ಛಾತ್ರಮಾಲೆಯಲ್ಲಿ ಸಂದವನೆಂದು ಮನದಿ ಭಾವಿಸಿದೆವು | ಎನುತ ಛಂದದಿ ಸಿಂಧು ಪೋಲುವ ಕರುಣಿ ಸುಜ್ಞಾನ ಸದ್ಭಕ್ತಿ ಕುಂದದ ವೈರಾಗ್ಯ ಭಾಗ್ಯವ ಕೊಟ್ಟು ಧಾಮ ಶಾಮಸುಂದರವಿಠಲನ ಒಂದೇ ಮನದಿ ಭಜಿಪಾನಂದ ಭಾಗ್ಯವ ನೀಡೋ 1 ಮಟ್ಟತಾಳ ಅನುಪಮಸುಚರಿತ್ರ | ಅನುದಿನದಲಿ ಎನ್ನ ಅಣುಗನೆಂದರಿತೊಂದು ಕ್ಷಣವಗಲದೆ ಇದ್ದು ಬಿನುಗು ಬುದ್ಧಿಯ ಕಳದು | ಧನದಾಶೆಯ ಕಡಿದು ಮನದ ಚಂಚಲ ಬಿಡಿಸಿ | ಹನುಮ ಭೀಮಾನಂದ ಮುನಿಕೃತ ಪಾದವನಜ ಸೇವಿಪುದಕೆ ತನುವಿಗೆ ಬಲವಿತ್ತು ದಿನದಿನದಲಿ ನೆನೆಯುವ ಸಂಪದ ಗುಣನಿಧಿಯನುಗ್ರಹಿಸೋ 2 ತ್ರಿವಿಡತಾಳ ಭವ ಮೊದಲಾದ ಬುಧರು ಹರಿಯಾಜ್ಞೆಯಲಿ ಮದಡಾರುದ್ಧರಿಸಲು ಜಗದಿ ಬಂದು | ಸುಧೆಯಂತೆ ಸವಿಯಾದ ಮಧುರ ಕನ್ನಡದಲ್ಲಿ | ಮುದದಿ ರಚಿಸಿದಂಥ | ಪದಸುಳಾದಿಗಳಲ್ಲಿ ಹುದುಗಿದ ವೇದಾರ್ಥ ತ್ವತ್ವಾದಾಶ್ರಿತರಿಗೆ | ವಿಧ ವಿಧದಿಂದಲಿ ಬೋಧಿಸುತಾ | ವದಗಿದ ಅಜ್ಞಾನ ಸದೆದು ಸುಮತಿ ಕೊಟ್ಟು ಸದಾಚಾರ ಸಂಪನ್ನನೆನಿಸಿ | ಅವರ ಬದಿಗನು ನೀನಾಗಿ ಸುಕ್ಷೇಮ ಚಿಂತಿಸಿ | ಅಧಮರಿಂದಲಿ ಬಾಧೆ ಬಾರದಂತೆ ಸದಯನೆ ಸಲಹಿದ ಕಾರಣದಿಂದಲಿ | ವಿದಿತವಾಯಿತು ನಿನ್ನ ಮಹಿಮೆ ಮನಕೆ ಪದೆ ಪದೆ ಪ್ರಾರ್ಥಿಪೆ ಸದಮಲಗಾತ್ರನೆ ಅಧೋಗತಿ ತಪ್ಪಿಸಿ ಬಿಡದೆ ಒಲಿದು | ಯದುಕುಲೋದ್ಭವ ಪೊಳೆವಂತೆ ಕೃಪೆಮಾಡು 3 ಅಟ್ಟತಾಳ ಗುರುವರ ಶ್ರೀ ನರದ್ವಿರದಾರಿ ನಾಮಕ | ವರ್ಣಿಸಲಳವಲ್ಲ ನಿನ್ನುಪಕಾರವು | ಜ್ವರಬಹುಜನರಿಗೆ ಪರಿಹಾರ ಮಾಡಿದಿ ತುರಗ ಕಚ್ಚಿದ ಘಾಯ ತಕ್ಷಣ ಮಾಯಿಸಿದಿ | ಶರಣಗೆ ಬಂದಪಮೃತ್ಯು ಓಡಿಸಿದಿ | ಅರಿಯದರ್ಭಕಿ ಹೋಮಕುಂಡದಿ ಬೀಳೆ | ತ್ವರಿತಭಿಮಂತ್ರಿಸಿ | ಭಿಸ್ಮವಲೇಪಿಸಿ ಉರಿತಂಪುಗೈಸಿದಿ || ಪುರದವರ ಮೊರೆ ಕೇಳಿ ಮಾರಿಯ ಭಯ ಕಳೆದಿ | ತರುಳರು ದಕ್ಕದ ದೀನಕುಟುಂಬಕ್ಕೆ ಚಿರಕಾಲ ಬಾಳುವ ಸಂತಾನ ನೀಡಿದಿ | ಸ್ಮರದೂರ ನಿಮ್ಮಾಜ್ಞೆ ಮೀರದ ಕಿಂಕರನ ತರುಣಿಗೆ ಸೋಂಕಿದ ಭೂತವ ಬಿಡಿಸಿದಿ | ನೆರೆನಿನ್ನ ಪದವನುಸರಿಸೀದ ಸುಜನಕ್ಕೆ ವರಭಾಗವತಶಾಸ್ತ್ರ ಅರುಹೀದಿ ಸಲುಹೀದಿ | ಹರಿಕಥಾಮೃತಸಾರವ ಸಾರೀದಿ | ತರತಮದ ಭೇದಜ್ಞಾನವ ಬೀರಿದಿ | ವರದಾಯಕ ಸತ್ಯದೇವನ ಪಾವನ ಚರಿತೆ ವಿಚಿತ್ರವಾಗಿ ಪರಿಪರಿ ಪೇಳುತ್ತ ಪೊರೆದೆ ನಿನ್ನವರನ್ನು ಧರೆ ಋಣ ತೀರಿದ ಕುರುಹು ಅರಿತು ಒಬ್ಬರಿಗೆ ಸೂಚಿಸದೆ ಪರಲೋಕಯಾತ್ರೆಗೆ ತೆರಳಿದದಕೆ ನಿನ್ನ ಪರಿವಾರದ ನಾವೆಲ್ಲರೂ ನಿತ್ಯಸಿರಿಯ ಕಳೆದುಕೊಂಡ ಲೋಭಿಗಳಂದದಿ ಶರಧಿ ಕಾಯ ತೊರೆದರೇನಾಯಿತು ಮರೆಯಾದೆ ಗೋವತ್ಸನ್ಯಾಯದಂತೆ ನೀ ದರುಶನ ಸ್ವಪ್ನದಿಗರೆದು ಸಂತೈಸುತ ನಿರಯಕೆ ನಮ್ಮನು ಗುರಿಮಾಡದೆ ಪೊರೆ ತರುಳಗೊಲಿದ ಶಾಮಸುಂದರವಿಠಲ ಸರಸಿಜಾಂಘ್ರಿಯುಗ್ಮ ಮಧುಪನೆಂದೆನಿಸಿ 4 ಆದಿತಾಳ ಭೂಮಿ ವಿಬುಧವರ ರಾಮವಿಠಲಾರ್ಯರ ಶ್ರೀ ಮುಖದಿಂದ ಸಕಲಶಾಸ್ತ್ರಮನನಮಾಡಿ | ಶ್ರೀಮತ್ಸು ಶೀಲೇಂದ್ರಸ್ವಾಮಿಗಳಿಂದಲಿ ನೀ ಮಾನಿತನಾಗಿ ಕಾಮಿತಫಲಪ್ರದ ರಾಯರ ದಯಪಡೆದು ಕಾಮಾದಿ ಷಡ್ರಿಪುವರ್ಗ ಜಯಿಸುತಲಿ | ನೇಮನಿಷ್ಟೆಯಲಿ ಜಪತಪಾಚರಿಸುತ ಹೇಮರಜತಧನ ತೃಣಸಮಾನೆನಿಸುತ ಸಾಮಜವರದನ ಕಳೆಯದೆ ಪಾಮರ ಜನರನು ಪ್ರೇಮದಿಂದದ್ಧರಿಸಿ | ಸಾಮಗಾನಪ್ರೇಮ ಶಾಮಸುಂದರನ ಧಾಮವ ಸೇರಿದ ಹೇ ಮಹಾಮಹಿಮನೆ 5 ಜತೆ ನಿನ್ನೊಡೆಯನ ದ್ವಾರಾ ಶ್ರೀ ಶಾಮಸುಂದರನ ಎನ್ನಂತರಂಗದಿ ನೋಳ್ವಂತೆ ಕರುಣಿಸೋ ||
--------------
ಶಾಮಸುಂದರ ವಿಠಲ
ನಡೆದು ಬಾರಯ್ಯ ಕೃಷ್ಣ ನಡೆದು ಪ ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗ ರಕ್ಷಿಸುವಾತನೆಂದು ವಕ್ಷಸ್ಥಳದಿ ಶ್ರೀಮಾ- ರೀಕ್ಷಕನುಳುಹಿದಂತಕ್ಷದಿ ನೋಡುತಧೋಕ್ಷಜ ಹರಿಯೆ 1 ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ- ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿ ಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನ ಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನ ಕರಿ ಸರ್ವೋತ್ತಮ ಹರಿಯೆ 2 ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊ ಶೂರ ಸುತಗೆ ಸುಕುಮಾರನೆನಿಸಿದಂಥ ಅ- ಸಮೀರಜ ಭವ ಸುರ ನಾರದಪ್ರಿಯನೆ ಉದ್ಧಾರಮಾಡು ಎನ್ನನು 3 ಧ್ವಜ ವಜ್ರಾಂಕುಶ ಪಾದಭಜಕರೆನಿಸುವಂಥ ಸುಜನರ್ವಂದಿತನಾದ ಕುಜನ ಕುಠಾರಿಯೆ ನೀ ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ ನಿಜವಾಗಿ ನೋಡೆನ್ನ ರಜತಮ ಕಳೆಯುವ 4 ಕಡಲಶಯನನಾದ ಉಡುರಾಜ್ವದನ ಬಿಟ್ಟು ಭಿಡಿಯ ಭೀಮೇಶ ಕೃಷ್ಣ್ನೆನ್ನೊಡೆಯನೆನುತ ಬಂದ ಬಡವ ಸುದಾಮಗಿಟ್ಟಿ ಹಿಡಿ ಹಿಡೀ ಎಂದು ಭಾಗ್ಯ ತಡೆಯದೆ ನಾ ನಿನ್ನಡಿಗಳಿಗೆರಗುವೆ ಕೊಡು ಕೊಡು ವರಗಳ ಪೊಡವಿ ಪಾಲಿಪನೆ 5
--------------
ಹರಪನಹಳ್ಳಿಭೀಮವ್ವ
ನಂಬಿದೆ ಧನ್ವಂತ್ರಿ ನಿನ್ನ ಕರುಣಾಂಬುಧಿ ಚಿನ್ಮಯ ಪರಿಪಾಲಿಸೆನ್ನ ಪ. ದೇವಾಸುರರೆಲ್ಲ ಸೇರಿ ಏಕ ಭಾವದಿಂದಲಿ ತಮ್ಮ ಸಾಹಸವ ತೋರಿ ತಾವಾಗಿ ಕಡೆಯಲಂಬುಧಿಯ ಭವ ನಾವನ ಸಮಯದಿ ಬಂದಿಯನ್ನೊಡೆಯ 1 ಕುಲಿಶಧರಗೆ ಯುಕ್ತಿ ಕಲಿಸಿ ಬಲಿವಲ ಶಂಬರಾದಿ ದೈತ್ಯರ ಮೋಹಗೊಳಿಸಿ ಕಲಶಪೂರಿತ ದಿವ್ಯ ಸುಧೆಯ ದೇವ ಬಲಕಿತ್ತು ಸಲಿಸಿದ ಸಾಮ್ರಾಜ್ಯನಿಧಿಯ 2 ಪೂರ್ಣೇಂದು ಗಣಜಾಯಿ ಸುಮುಖಾ ಶ್ಯಾಮ ವರ್ಣ ಸುಬಾಲಕ ದುರ್ಜನ ವಿಮುಖಾ ಸ್ವರ್ಣಾವದಾತ ಸುವಾಸ ದಿವ್ಯ ಕರ್ಣಾಭರಣಾದಿ ಭೂಷ ಸುನಾಸಾ 3 ದೀರ್ಘಪೀವರ ದೋರ್ದಂಡ ಪಂಚ ಶುಭ ಶುಂಡಾ ಜನಿತ ಬ್ರಹ್ಮಾಂಡ ವ್ಯಾಧಿ ವರ್ಗವ ಓಡಿಸುವರೆ ಸುಪ್ರಚಂಡಾ 4 ಕಂಬುಗ್ರೀನ ಪರೇಶ ಅರು- ಣಾಂಬುಜಾಕ್ಷ ಸುಖ ಚಿದ್ಘನ ವೇಷಾ ನಂಬಿದವರ ಕಾವ ಶ್ರೀಶಯನ ನಿಂಬಾಗಿ ರಕ್ಷಿಸು ಶ್ರೀ ವೆಂಕಟೇಶಾ 5
--------------
ತುಪಾಕಿ ವೆಂಕಟರಮಣಾಚಾರ್ಯ
ನಮೋ ನಮೋ ನಂದಕುಮಾರ ನಿನ- ಗೆದುರ್ಯಾರೊ ಯದುಕುಲ ವೀರ ಭಜಿ- ಸುವ ಭಕ್ತ ಜನರುದ್ಧಾರ ಮಾಡೊ ಪರಮ ದಯಾಳು ನೀ ಸರ್ವ ಸ್ವತಂತ್ರ ನಿನ್ನ ಧ್ವಜ ವಜ್ರಾಂಕುಶ ರೇಖಾ ವೆಂಕಟಾದ್ರೀಶ ನಮೋ ನಮೋ ಪ ಶ್ರೀಶ ಜಗದ್ಭರಿತ ನೀನು ಒಂದು- ಕಾಸಿಗ್ವಿಷಯಗಳಲ್ಲ ನಾನು ನಿನ್ನ ದ(ರ್ಶ)ನ ಹಾರೈಸುವೆನು ಪರಮ ನುಗ್ರ(ಹ)ದಿ ಪಾಲಿಸೋ ನೀನು ಹರೇ ದೋಷರಹಿತ ಎನ್ನ ದೋಷನಾಶನ ಮಾಡಿ ಶೇಷಶಯನ ಶ್ರೀನಿವಾಸ ನೀ ದಯಮಾಡೊ1 ಬಾಯಿ ಬೀಗವನ್ಹಾಕಿ ಚರಿಯೆ ಗಂ- ಡಾರತಿ(?) ಶಿರದ ಮೇಲ್ಹೊರೆಯೆ ನಿನ್ನ ನಾಮವ ಕೊಂಡಾಡಲರಿಯೆ ಪಾದ- ಚಾರ್ಯಾಗಿ ಬರುವುದೀಪರಿಯೆ ತಿಳಿದು ಮಾನ್ಯದೊಕ್ಕಲು ಎಂದು ಬಹುಮಾನದಿಂದಿಟ್ಟು ಮಾಧವ ಕರುಣದಿ 2 ಬಾಡಿಗಿದ್ದರಾಯನ್ಹಿಡಿಯ (?) ನಿನ್ನ ಅನುಮತಿಲ್ಲದೆ ದಾರಿ ನಡೆಯ ಬ್ಯಾಡ ಬಿಡು ಲೋಭಿತನವ ಎ- ನ್ನೊಡೆಯ ಬಿಡದೆ ಕಾಡುತ ಕಾಸು ಕವಡೆ ಕಡ್ಡಿ ಕಣಜಕ್ಕೆ ಈ ಪರಿ ಗಳಿಕೆ ದೇಶದ ಮೇಲೆ ಕಾಣೆನು 3 ಮುಡಿಪು ಬೇಡುವುದ್ಹೇಳೊ ಎಷ್ಟು ನಿನ್ನ ಬಡಿತ ತಡೆಯಲಾರೆ ಪೆಟ್ಟು ಮಡಿ ಮೈಲಿಗೆಂದರೆ ಅತಿಸಿಟ್ಟು ನಾ ಬಿಚ್ಚಾಡುವೆನೊ ಬೀಡ ಬಿಟ್ಟು ಪ ್ರ- ಸಾದ ತೀರ್ಥ ಬೇಕಾದರೆ ಕ್ರಯಕಟ್ಟಿ ಗಂ- ಟ್ಯಾರಿಗೆ ಮಾಡುವಿ ಹೇಳೆನಗೊಂದಿಷ್ಟು 4 ಸತಿಗೆ ಮಾಡುವೆ ಲಕ್ಷ್ಮೀಪತಿಯೆ ನಿನ ಸುತ ಸತ್ಯಲೋಕದಧಿಪತಿಯೆ ಅತಿ ಹಿತ ಭಕ್ತರಿಗೆ ಭಿಕ್ಷೆಗತಿಯೇ ನೀಡಲು ಧನವೊಲ್ಲದೆ ಬೇಡುವರೊ ಸದ್ಗತಿಯ ನಿನ- ಗತಿಯಾಸೆ ಘನತ್ಯಲ್ಲ ಗತಿಪ್ರದಾಯಕ ಕೇಳೊ ಪೃಥುವೀಶ ನಿನ್ನದಲ್ಲವೆ ಸಕಲೈಶ್ವರ್ಯ 5 ಕನಕಗಿರಿದೊರೆಯೆಂಬೊದೆಲ್ಲೊ ಬಂದ ಜನಕೆ ಅನ್ನವ ನೀಡಲೊಲ್ಲ್ಯೊ ಜಗ- ಜನಕ ನಿನ್ನನು ಕಾಣಲಿಲ್ಲೋ ನಾನಿ- ರ್ಧನಿಕನೆಂಬುವುದು ನೀ ಬಲ್ಲ್ಯೊ ಎನ- ಗನುಕೂಲ ಧೈರ್ಯವ ಕೊಟ್ಟು ನಿನ್ನ ದರುಶನ ಸನಕಾದಿಗಳೊಡೆಯ ನಿನ್ನ ಮನಕೆ ಬಂದರೆ ನೀಡೊ6 ಶಂಕರ ಸುರರಿಂದ್ವಂದಿತನೊ ನಾ ಕಿಂಕರ ನರರಿಂದ ನಿಂದಿತನೊ ನೀ ಮಂಕುಜನರ ಪಾಪ ಪರಿಹಾರಕನೊ ಹರೇ ಶಂಖ ಚಕ್ರಾಂಕಿತ ಭೀಮೇಶಕೃಷ್ಣನ ನಾಮ ಶಂಕೆಯಿಲ್ಲದೆ ಕೊಟ್ಟು ವೆಂಕಟ ದಯಮಾಡೊ 7
--------------
ಹರಪನಹಳ್ಳಿಭೀಮವ್ವ
ನರಸಿಂಹ ಪಾಹಿ ಲಕ್ಷ್ಮೀ ನರಸಿಂಹ ಪ ನರಸಿಂಹ ನಮಿಪೆ ನಾ ನಿನ್ನ ಚಾರುಚರಣಕಮಲಕೆ ನೀ ಎನ್ನ ಕರವ ಪಿಡಿದು ನಿಜ ಶರಣನೆಂದೆನಿಸೊ ಭಾ ಸುರ ಕರಣಾಂಬುಧೆ ಗರುಡವಾಹನ ಲಕ್ಷ್ಮೀ ಅ ತರಳ ಪ್ರಹ್ಲಾದನ್ನ ನುಡಿಯಾ ಕೇಳಿ ತ್ವರಿತದಿ ಬಂದ್ಯೊ ಎನ್ನೊಡೆಯ ನಾನು ಕರುಣಾಳೊ ಭಕ್ತರ ಭಿಡೆಯ ಮೀರ ಲರಿಯೆ ಎಂದೆಂದು ಕೆಂಗಿಡಿಯ ಅಹ ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿಕ ರ್ಬುರ ಕಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀ 1 ಪ್ರಳಯಾಂಬುನಿಧಿ ಘನಘೋಷದಂತೆ ಘುಳಿ ಘುಳಿಸುತಲಿ ಪ್ರದೋಷ ಕಾಲ ತಿಳಿದು ದೈತ್ಯನ ಅತಿರೋಷದಿಂದ ಪ್ಪಳಿಸಿ ಮೇದಿನಿಗೆ ನಿದೋಷ ಅಹ ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ 2 ಕ್ರೂರ ದೈತ್ಯನ ತೋರಗರುಳಾ ತೆಗೆ ದ್ಹಾರ ಮಾಡಿದೆ ನಿಜಕೊರಳ ಕಂಡು ವಾರಿಜಾಸನ ಮುಖದಯರ್ಕಳ ಪುಷ್ಪ ಧಾರಿಗೆರೆದು ವೇಗ ತರಳಾ ಆಹ ಸೂರಿ ಪ್ರಹ್ಲಾದಗೆ ತೋರಿ ತವಾಂಘ್ರಿ ಸ ರೋರುಹಾವನು ಕಾಯ್ದೆ ಕಾರಣ್ಯನಿಧಿ 3 ಜಯಜಯ ದೇವವರೇಣ್ಯ ಮಹ ದ್ಭಯ ನಿವಾರಣನೆ ಅಗಣ್ಯ ಗುಣಾ ಶ್ರಯ ಘೋರ ದುರಿತಾರಣ್ಯ ಧನಂ ಜಯ ಜಗದೇಕ ಶರಣ್ಯ ಅಹ ಲಯವಿವರ್ಜಿತ ಲೋಕ ತ್ರಯ ವ್ಯಾಪ್ತ ನಿಜಭಕ್ತ ಪ್ರಿಯ ಘೋರಮಯ ಹರ ದಯ ಮಾಡೆನ್ನೊಳು ಲಕ್ಷ್ಮೀ 4 ಕುಟಲ ದ್ವೇಷದವನು ನೀನಲ್ಲ ನಿನ್ನಾ ರ್ಭಟಕಂಜಿದರು ಸುರರೆಲ್ಲ ನರ ನಟನೆ ತೋರಿದ್ಯೋ ಲಕ್ಷ್ಮೀನಲ್ಲ ನಾ ಪಾ ಸಟಿ ಕಾಣೆನಪ್ರತಿಮಲ್ಲ ಅಹ ವಟಪತ್ರಶಯನ ಧೂ ರ್ಜಟಿವಂದ್ಯ ಜಗನ್ನಾಥ ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ5
--------------
ಜಗನ್ನಾಥದಾಸರು
ನಾರಾಯಣ ನಿಮ್ಮ ನಾಮ ನಾಲಿಗೆಲಿರಲಿ ನಾರಾಯಣ ಘೋರಪಾತಕವೆಲ್ಲ ಹಾರಿ ಹೋಗುವುದಯ್ಯ ನಾರಾಯಣ 1 ಸಾರ್ಯವಾಗುವುದು ಶ್ರೀಹರಿಯ ಪುರ ಅವರಿಗೆ ನಾರಾಯಣ ಮಾರಜನಕನÀ ಮೊದಲೆ ಮರೆಯದಿರೊ ಮನವೆ ನಾರಾಯಣ 2 ಎಷ್ಟೆಷ್ಟು ದುರಿತಗಳು ನಷ್ಟವಾಗಿ ಹೋಗುವುವು ನಾರಾಯಣ ಎಷ್ಟು ನಾಮವ ಬಿಡದೆ ನೆನೆಕಂಡ್ಯ ಮನವೆ ನಾರಾಯಣ 3 ಅಂತ್ಯಜಸ್ತ್ರೀ ಕೂಡಿ ಭ್ರಾಂತನಾಗ್ಯಜಮಿಳನು ನಾರಾಯಣ ಕಂತುನಯ್ಯನ ಮರೆತು ಕಾಲವನು ಕಳೆಯಲು ನಾರಾಯಣ 4 ಅಂತ್ಯಕಾಲಕೆ ಹರಿಯ ಸ್ಮರಣೆ ಜಿಹ್ವೆಗೆ ಬರಲು ನಾರಾಯಣ ಲಕ್ಷ್ಮೀ- ಕಾಂತ ಕರುಣಿಸಿ ಅವಗೆ ಕರೆದÀು ಮುಕ್ತಿಯ ಕೊಟ್ಟ ನಾರಾಯಣ5 ಲಕ್ಕುಮೀರಮಣನೆ ಸಕಲಗುಣಪರಿಪೂರ್ಣ ನಾರಾಯಣ ಮುಖ್ಯ ನೀ ಎನ ಮನದಿ ಹೊಕ್ಕರ್ಹೊಗಳುವೆನಯ್ಯ ನಾರಾಯಣ 6 ಘೋರ ವೇದವ ಕದ್ದು ನೀರೊಳಗಡಗಲು ನಾರಾಯಣ ಭೇದಿಸವನಕೊಂದು ವೇದವನು ತಂದಿಟ್ಟ ನಾರಾಯಣ 7 ಶ್ರುತಿಯ ಸುತಗೆ ಕೊಟ್ಟಿ ಸ್ತುತ್ಯನಾಗಜನಿಂದ ನಾರಾಯಣ ಮಚ್ಛರೂಪವ ಧರಿಸಿದಚ್ಯುತಗೆ ಶರಣೆಂಬೆ ನಾರಾಯಣ 8 ದೇವದೈತ್ಯರು ಕೂಡಿ ಸಾಗರವ ಕಡೆಯಲು ನಾರಾಯಣ ವಾಸುಕಿ ಸುತ್ತೆ ನಾರಾಯಣ 9 ಆಗ ಸುರರಸುರರಿಬ್ಭಾಗವಾಗಿ ನಿಂತು ನಾರಾಯಣ ಭಾಳ ತುಚ್ಛದಿ ಬಲಬಿಟ್ಟು ಬಾಯಿಂದೆಳೆಯೆ ನಾರಾಯಣ 10 ವಾಸುಕಿ ಬಿಡಲು ಅಸುರಜನ ಮಡಿದ್ಹೋಗೆ ನಾರಾಯಣ ಕುಸಿದು ಹೋಗಲು ಗಿರಿ ಕೂರ್ಮರೂಪಾದಿ ನಾರಾಯಣ11 ಅಮೃತ ದೈತ್ಯರು ಕೊಂಡೋಡಲು ನಾರಾಯಣ ಸೃಷ್ಟಿ ಆದಿಕರ್ತ ಶ್ರೀ (ಸ್ತ್ರೀ?) ರೂಪವನು ಧರಿಸಿದ ನಾರಾಯಣ 12 ಮುಂಚೆ ಮೋಹವ ಮಾಡಿ ವಂಚಿಸಿ ದೈತ್ಯರನೆ ನಾರಾಯಣ ಹಂಚಿ ಸುರರಿಗೆ ಅಮೃತಪಾನ ಮಾಡಿಸಿದಯ್ಯ ನಾರಾಯಣ 13 ದಿತಿಯ ಸುತನು ಬಂದು ಪೃಥಿವಿಯನೆ ಸುತ್ತೊಯ್ಯೆ ನಾರಾಯಣ ಅತಿಬ್ಯಾಗದಿಂದ ರಸಾತಳ ಭೇದಿಸಿ ನಾರಾಯಣ 14 ಕ್ರೂರ ಹಿರಣ್ಯಾಕ್ಷನ್ನ ಕೋರೆದಾಡೆಲಿ ಸೀಳಿ ನಾರಾಯಣ ವರಾಹ ನಾರಾಯಣ 15 ಬ್ರಹ್ಮನಿಂದ್ವರ ಪಡೆದು ಹಮ್ಮಿಂದ ಕÉೂಬ್ಬ್ಯಸುರ ನಾರಾಯಣ ದುರ್ಮತಿಯಿಂದ್ಹರಿಯ ದೂಷಿಸುತಲಿದ್ದ ನಾರಾಯಣ16 ಮತಿಹೀನ ತನ ಸುತಗೆ ಮತಿಯ ಹಿಡಿಸುವೆನೆಂದ ನಾರಾಯಣ ಪಾರ್ವತೀಪತಿ ನಾಮವನು ಹಿತದಿಂದ ಬರೆಯೆಂದ ನಾರಾಯಣ 17 ಹರಿ ಹರಿ ಹರಿಯೆಂದು ಬರೆಯಾ(ಯಲಾ?) ಬಾಲಕನೋಡಿ ನಾರಾಯಣ ಉರಿಯ ಹೊಗಿಸುವೆನೆಂದ ಉಗ್ರಕೋಪಗಳಿಂದ ನಾರಾಯಣ18 ಮೆಟ್ಟಿ ಸಾಗೀಯಿಂದೆ ಬೆಟ್ಟದಿಂದಲಿ ಕೆಡೆವೆ ನಾರಾಯಣ ಕಟ್ಟಿ ಶರಧಿಯಲ್ಲÁ್ಹಕಿ ವಿಷ್ಣುಭಕ್ತನು ಬರಲು ನಾರಾಯಣ19 ಪ್ರಹ್ಲಾದ ನಿನ್ನೊಡೆಯ ಎಲ್ಹಾನೆ ತೋರೆನಗೆ ನಾರಾಯಣ ಮಲ್ಲಮರ್ದನ ಸ್ವಾಮಿ ಇಲ್ಲದೇ ಸ್ಥಳವುಂಟೆ ನಾರಾಯಣ20 ಪೃಥ್ವಿಪರ್ವತದಲ್ಲಿ ಸಪ್ತದ್ವೀಪಗಳಲ್ಲಿ ನಾರಾಯಣ ಸುತ್ತೇಳು ಸಾಗರದಿ ವ್ಯಾಪ್ತನಾಗ್ಹರಿಯಿರುವ ನಾರಾಯಣ21 ಅಣುರೇಣು ತೃಣದಲ್ಲಿ ಇರುವ ಆಕಾಶದಲಿ ನಾರಾಯಣ ರವಿ ಸೋಮ ತಾರಾಮಂಡಲದಲ್ಲಿ ತಾನಿರುವ ನಾರಾಯಣ 22 ಹದಿನಾಲ್ಕು ಲೋಕದಲಿ ಹರಿ ವಿಶ್ವವ್ಯಾಪಕನು ನಾರಾಯಣ ಸರ್ವದಿಕ್ಕುಗಳಲ್ಲಿ ಸನ್ನಿಹಿತನಾಗಿರುವ ನಾರಾಯಣ 23 ಆರಣಿಯೊಳಗಗ್ನಿಯಂದದಿ ಜನಕೆ ತೋರದಿರೆ ನಾರಾಯಣ ಜನನ ಮರಣಿಲ್ಲ ಜಗಜನ್ಮಾದಿಕಾರಣಗೆ ನಾರಾಯಣ 24 ನೀನರಿಯೆ ನಿನ್ನಲ್ಲೆ ಜೀವರಾಶಿಗಳಲ್ಲೆ ನಾರಾಯಣ ಈ ಜಗತ್ತಿಗೊಬ್ಬ ಇದ್ದಾನೆ ಎನ್ನೊಡೆಯ ನಾರಾಯಣ25 ಮಂದಭಾಗ್ಯನೆಯೆನ್ನ ಮಾತು ನಿಜವೆಂದು ತಿಳಿ ನಾರಾಯಣ ಈ ಸ್ತಂಭದಲ್ಲಿದ್ದಾನೆ ಮಂದರೋದ್ಧರ ಸ್ವಾಮಿ ನಾರಾಯಣ26 ಬಂದು ಭರದಿಂದಸುರ ಕಂಬ ಕಾಲಿಂದೊದೆಯೆ ನಾರಾಯಣ ತುಂಬಿತಾ ಘನಘೋಷದಿಂದ ಘುಡಿಘುಡಿಸುತಲಿ ನಾರಾಯಣ27 ಸಿಡಿಲು ಗರ್ಜಿಸಿದಂತೆ ಖಡಿ ಖಡಿ ಕೋಪದಲಿ ನಾರಾಯಣ ಕಿಡಿಗಳ್ಹಾರುತ ಕಂಬವೊಡೆದು ರೋಷದಿ ಬಂದ ನಾರಾಯಣ 28 ಖಳನ ಸೆಳೆದಪ್ಪಳಿಸಿ ದುರುಳನುದರವ ಬಗೆದÀು ನಾರಾಯಣ ಕರುಳ ವನಮಾಲೆ ತನ ಕೊರಳಲ್ಲಿ ಧರಿಸಿದ ನಾರಾಯಣ29 ತಲ್ಲಣಿಸಿ ಸುರರಾಗ ಮಲ್ಲಿಗೆಮಳೆ ಕರೆಯೆ ನಾರಾಯಣ ಪ್ರಹ್ಲಾದಸಹಿತ ಶ್ರೀದೇವಿ ಮುಂದಕೆ ಬರಲು ನಾರಾಯಣ30 ಕರದಿ ಕಂಗಳ ಮುಚ್ಚಿ ಸಿರಿಯ ತೋಳಿಂದಪ್ಪಿ ನಾರಾಯಣ ತೊಡೆಯನÉೀರಿಸಿ ತನ್ನ ತರುಣಿಗಭಯವನಿಟ್ಟ ನಾರಾಯಣ 31 ಸ್ತೋತ್ರವನು ಮಾಡಲಜ ಬಿಟ್ಟುಗ್ರಕÉೂೀಪವನು ನಾರಾಯಣ ಕೊಟ್ಟ ಪ್ರಹ್ಲಾದ(ಗ್ವ)ರಗಳ ಲಕ್ಷ್ಮೀನರಸಿಂಹ ನಾರಾಯಣ32 ಅಜ್ಞಾನದಿಂದ ತಾ ಯಜ್ಞ ಮಾಡುತಲಿರಲು ನಾರಾಯಣ33 ಅದಿತಿಯಲ್ಲವತರಿಸೆ ಅತಿಬ್ಯಾಗ ಕಶ್ಯಪರು ನಾರಾಯಣ ಸುತಗೆ ಉಪನಯನ ಭಾಳ್ಹಿತದಿಂದ ಮಾಡಲು ನಾರಾಯಣ 34 ಯಜÉೂೀಪವೀತ ಕೈಪು ಕೃಷ್ಣಾಂಜಿನ ಧರಿಸಿ ನಾರಾಯಣ ಶೀಘ್ರದಿಂದ ವಟು ವಾಮನ್ಯಜಶಾಲೆಗೆ ಬರಲು ನಾರಾಯಣ35 ಬಲಿಯ ಯಜ್ಞದಿ ಬಂದು ಭಾಳ ಪೂಜಿತನಾಗಿ ನಾರಾಯಣ ಛಲವಿಟ್ಟು ಮನದೊಳಗೆ ಬಲಿಯ ಯಾಚನೆ ಮಾಡೆ ನಾರಾಯಣ 36 ನಾ ಕೊಡುವೆ ಬೇಡು ಬೇಕಾದಷ್ಟು ಅರ್ಥವನು ನಾರಾಯಣ ಸಾಕಾಗದೇನಯ್ಯ ಸಲ್ಲ ಧನದಾಸ್ಯೆನಗೆ ನಾರಾಯಣ 37 ದೃಢಮನಸಿನಲಿ ಭೂಮಿ ಕೊಡು ಮೂರು ಪಾದವನು ನಾರಾಯಣ ಕೊಡುವೆನೆಂದಾಕ್ಷಣದಿ ಎರಡು ಚರಣವ ತೊಳೆದ ನಾರಾಯಣ38 ಒಂದು ಪಾದದಲಿ ಭೂಮಂಡಲವ ವ್ಯಾಪಿಸಿ ನಾರಾಯಣ ಪಾದ ನಾರಾಯಣ 39 ಕಂಡು ಕಮಲಜನು ಕಮಂಡಲೋದಕ(ದಿ) ತೊಳೆಯ ನಾರಾಯಣ ಉಂಗುಷ್ಠ ನಖದಿ ಉತ್ಪನ್ನಳಾದಳು ಗಂಗೆ ನಾರಾಯಣ40 ರಕ್ಕಸಾಂತಕನು ತ್ರಿವಿಕ್ರಮ ರೂಪಾಗಿ ನಾರಾಯಣ ಆಕ್ರಮಿಸಿಕೊಂಡ ಹದಿನಾಲ್ಕು ಲೋಕವ ಸ್ವಾಮಿ ನಾರಾಯಣ41 ಕೊಟ್ಟ ವಚನವ ತಪ್ಪಿ ಭ್ರಷ್ಟÀನಾಗದೆ ಭೂಮಿ ನಾರಾಯಣ ಕೊಟ್ಟರಿನ್ನೀಪಾದಯಿಟ್ಟು ಬಿಡುವೇನೆಂದ ನಾರಾಯಣ 42 ಕಟ್ಟಿ ಪಾಶದಲಿ ಕಂಗೆಟ್ಟಾಗ ಬಲಿರಾಯ ನಾರಾಯಣ ಕೆಟ್ಟೆನೆನ್ನದಲೆ ಮನಮುಟ್ಟಿ ಸ್ತೋತ್ರವ ಮಾಡೆ ನಾರಾಯಣ43 ದುಷ್ಟಜನ ಮರ್ದಕನು ಸೃಷ್ಟಿಸ್ಥಿತಿಲಯ ಕರ್ತೃ ನಾರಾಯಣ ಸೃಷ್ಟಿಗೊಡೆಯಗೆ ದಾನಕೊಟ್ಟರೆಂಬುವರುಂಟೆ ನಾರಾಯಣ 44 ಬಂಧನ ಬಿಡಿಸಿ ಬಲಿರಾಯಗ್ವರಗ¼
--------------
ಹರಪನಹಳ್ಳಿಭೀಮವ್ವ
ನಿನ್ನ್ಹೊರತು ನಾನಿನ್ನು ಅನ್ಯದೇವರರಿಯೆ ಪನ್ನಂಗಶಾಯಿಯೇ ಪರಿಪಾಲಿಸಭವ ಪ ನಿನ್ನಿಂದಜನಿಸಿ ನಾ ನಿನ್ನಿಂದ ಬೆಳೆದಿರುವೆ ನಿನ್ನಿಂದ ಮಲಗಿ ನಾ ನಿನ್ನಿಂದ ಏಳ್ವೆ ನಿನ್ನಿಂದ ನಡೆಯುವೆ ನಿನ್ನಿಂದ ಕೂಡುವೆನು ನಿನ್ನಿಂದ ಸುಖಬಡುವ ನಿನ್ನಣುಗ ನಾನು1 ನಿನ್ನದೇ ಉಣ್ಣುವೆನು ನಿನ್ನದೇ ತಿನ್ನುವೆನು ನಿನ್ನದೇ ಉಟ್ಟು ನಾ ನಿನ್ನದೇ ತೊಡುವೆ ನಿನ್ನದೇ ಹಾಸಿ ನಾ ನಿನ್ನದೇ ಹೊದೆಯುವೆ ನಿನ್ನ ಸೂತ್ರದಿ ಕುಣಿವ ನಿನ್ನ ಶಿಶು ನಾನು 2 ಎನ್ನ ಮಾತೆಯು ನೀನೆ ಎನ್ನ ತಾತನು ನೀನೆ ಎನ್ನ ಅರಸನು ನೀನೆ ನಿನ್ನ ಪ್ರಜೆ ನಾನು ಎನ್ನ ಬಂಧುವು ನೀನೆ ಎನ್ನ ಬಳಗವು ನೀನೆ ಎನ್ನೊಡೆಯ ಶ್ರೀರಾಮ ನಿನ್ನ ದಾಸ ನಾನು 3
--------------
ರಾಮದಾಸರು
ನೋಡಲುಬೇಕೇ ಎನ್ನೊಡೆಯನನೂ ನೋಡಿದಿರೇ ತಾಳಪಾಕಂ ಚಿಣ್ಣೈಯಾ ಪ ದಿಕ್ಕುಗಳನು ಬೆಳಗುವ ಸುಕೀರಿಟವ ನಿಕ್ಕಿಹ ಮಾಣಿಕದೋಲೆಯನೂ ಚೊಕ್ಕಟ ಮೂಗುತಿಯಿಂದೊಪ್ಪುವನ್ನ ಜ ಗಕ್ಕೆ ಪತಿಯೆನ್ನೆರೆಯ ಚೆನ್ನಿಗನಾ 1 ಕಂಬು ಚಕ್ರಗದೆ ಪದುಮವ ಪಿಡಿದು ಪೀ ತಾಂಬರದಂಗಿಯ ಧರಿಸಿಕೊಂಡೂ ತುಂಬಿದ ವಕ್ಷದಿ ರಮೆ ಕೌಸ್ತುಭದಿಂ ಗಂಭೀರಾರ್ಣವನಾದ ಚೆನ್ನಿಗನ 2 ಸುರರೆಲ್ಲರು ಪೂಜಿಸುವ ಚರಣದೊಳು ಕಿರುಗೆಜ್ಜೆ ಪೆಂಡೆಯವಿಟ್ಟವನಾ ವರವೈಕುಂಠ ವೇಲಾಪುರದರಸನ ಶರಣ ವತ್ಸಲನಾದ ಕರುಣಾಂಬುಧಿಯಾ 3
--------------
ಬೇಲೂರು ವೈಕುಂಠದಾಸರು
ನೋಡುವ ಬನ್ನಿ ಪೂಜೆ ಮಾಡುವ ಬನ್ನಿ | ಪಾಡಿ ನಲಿದಾಡುತಲಿ ಎನ್ನೊಡೆಯಾ ಲಿಂಗಗ ಪ ದೇಹ ದೇವಾಲಯದಲ್ಲಿ ಹೃದಯ ಜಲ ಹರಿಯಲಿ | ಊಹಿಸಿ ನೆಲೆಯಾಗಿ ಹೊಳೆವ ಆತ್ಮಲಿಂಗಗ 1 ಜ್ಞಾನದಭಿಷೇಕ ಸಮ್ಯಕ್ ಜ್ಞಾನದಾ ವಸ್ತ್ರ ನೀಡಿ | ಧ್ಯಾನದೀಪಾ ಸಂಚಿತದ ಧೂಪಾರತಿಯಾ ಲಿಂಗಗ 2 ಭಾವಭಕ್ತಿ ಗಂಧಾಕ್ಷತೆ ಸುಮನ ಪುಪ್ಪದಲಿಂದು ಅವಗು ಸುವಾಸನೆಯು ಪರಿಮಳ ಲಿಂಗಗ 3 ಘನ ಗುರು ಮಹಿಪತಿ ಸುತ ಪ್ರಭುಲಿಂಗಗ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾದ ಕಿಂಕರ ನನ್ನ ಕೈಬಿಡು- ವುದುಚಿತವೇ ರಂಗ ಪ. ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ- ತದಿ ನೀ ಕಾಯೊ ಎನ್ನೊಡೆಯ ರಂಗ ಅ.ಪ. ಅಜಗರಶಯನನೆ ಬುಧಜನ ನಮಿತನೆ ತ್ರಿಜಗವಂದಿತಪಾದ ಪದುಮಜ ಜನಕನೆ 1 ಶಿಶುವಾಗಿ ಗೋಕುಲದ ಪಶುಗಳ ಸಲಹಿದೆ ಶಶಿಭೂಷಣಸಖ ಶಿಶುವ ಕಾಪಾಡೊ 2 ಸಾಂದೀಪಗೊಲಿದೆ ಸಂದೇಹವಿಲ್ಲ ತಂದೆ ಹೆಳವನಕಟ್ಟೆ ರಂಗ ಕೃಪಾಂಗ 3
--------------
ಹೆಳವನಕಟ್ಟೆ ಗಿರಿಯಮ್ಮ
ಪಾದ ಬಿಡಲಾರೆ ಎನ್ನೊಡೆಯ ರಂಗ ಭಾರ ನಿನ್ನಗೆ ಕೂಡಿತು ಪ ನೀನೆ ಚಿಂತಾಮಣಿ ನೀನೆ ಪರುಷದ ಖಣಿ ನೀನೆ ಎನ್ನಗೆ ಧಣಿ ವೇಣುಗೋಪಾಲ 1 ಪಕ್ಷಿವಾಹನ ಲೋಕರಕ್ಷಿಪನು ನೀನೆಲೊ ಅಕ್ಷಯದಿ ದ್ರೌಪದಿಯ ರಕ್ಷಿಸಿದವ ನೀನೆ 2 ಪಾರ ಮಹಿಮನೆ ಸರ್ವಭಾರ ನಿನ್ನದಯ್ಯ ಸೇರಿದೆನು ನಿಮ್ಮ ಪದಕೆ ಮಾರಪಿತ ಶ್ರೀರಾಮ 3
--------------
ರಾಮದಾಸರು