ರಂಗವಾಲಿಯನಿಡು ತಂಗಿ ನಿನ್ನಂತರಂಗ
ದಂಗಳ ಸಾರಿಸಿ ರಂಗಗರ್ಪಿತವೆಂದು ಪ.
ಮಂಗಳಮಹಿಮ ಶ್ರೀ ಕೃಷ್ಣ ತನ್ವಲಿವ
ಎಂದಂಗನೆ ಸುಭದ್ರೆಗೆ ರಂಗಹೇಳಿದ ಅ.ಪ.
ಅರಿಷಡ್ವರ್ಗಹಂಕಾರ ಮದಗಳೆಂಬ
ಮಮಕಾರವ ಬಿಟ್ಟು ಮುನ್ನ
ತೊಡರಬಿಡಿಸಿ ನಿನ್ನ ಕಡೆಹಾಯಿಸುವ ಪಥ
ದೊಡೆಯ ಶ್ರೀಧರಪಾದವದರೊಳು ನಿಲುವಂತೆ 1
ಶ್ವೇತ ಕಲ್ಲನೆ ಕುಟ್ಟಿ
ಅಚ್ಚುತನಾಮ ಪವಳ ಬೆರಸಿ
ಸ್ವಚ್ಛ ಮುತ್ತುಗಳೆಂಬಂಥ ಶೀಲತೆಯಿಂದ
ಅಚ್ಚ ಶ್ರೀ ತುಳಸಿಯ ಕಟ್ಟೆಯ ಬೆಳಗುವಂಥ2
ಹರಿನಾಮದರಿಶಿನವದರ ಮಧ್ಯದಿ ತುಂಬಿ
ಅರಿಗಳ ಕಡಿವಂಥ ಕುಂಕುಮವ
ಪರಮಾನಂದದಿನೆಲ್ಲಿ ಕರಿಯ ಬಣ್ಣ
ಹರುಷದಗಸೆ ಹಸುರ ಬೆರಸಿ ಶ್ರೀ ಶ್ರೀನಿವಾಸಗೆ 3