ಒಟ್ಟು 33 ಕಡೆಗಳಲ್ಲಿ , 15 ದಾಸರು , 33 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹನುಮವಂದಿತ ವಿಠಲ | ಅಣುಗನನ ಪೊರೆಯೋಮಣಿದು ಪ್ರಾರ್ಥಿಪೆನಯ್ಯ | ಪಿಡಿ ಇವನ ಕೈಯ ಪ ಯೇಸೋ ಜನ್ಮದ ಪುಣ್ಯ | ರಾಶಿವದಗುತ ನಿನ್ನದಾಸತ್ವ ಪ್ರಾರ್ಥಿಸುವ | ಯೆನ್ನೊಳಗೆ ಹರಿಯೇ |ಕೇಶವನೆ ಸ್ವಪ್ನದೊಳು | ಸೂಸಿಸೂಚಿಸಿದ ಉಪ-ದೇಶವಿತ್ತಿಹೆ ಇವಗೆ | ಶ್ರೀಶಉದ್ಧರಿಸೋ 1 ತೀರ್ಥಕ್ಷೆತ್ರವ ಚರಿಸಿ | ಗಾತ್ರಪಾವಿತ್ರತೆಲಿಅರ್ಥನಾಗಿಹ ಭಕ್ತ | ಪ್ರಾರ್ಥನೆಯ ಸಲಿಸೇ |ಕೀರ್ತಿಸಿಹೆ ರಾಮತವ | ಮೂರ್ತಿಜಪಿಸಲು ನಿತ್ಯಗೋತ್ರಾರಿಸುಪ್ರಿಯ | ಸೂತ್ರಾಂತರಾತ್ಮಾ 2 ಶ್ರವಣಸಾಧನವಿತ್ತು | ಭವವನದಿ ಉದ್ಧರಿಸುಪವನ ಮೂರಲಿ ನಿನ್ನ | ಪಾವನಸ್ಮøತಿಯಾ |ಹವಣಿಸುತ ತ್ರೈತಾಪ | ಬವಣೆಗಳ ಕಳೆಯೊತ್ರೈಭುವನಗಳ ಒಡೆಯ ಮಾಧವನೆ ಭಿನ್ನವಿಪೇ 3 ಸುಪ್ತಿಜಾಗರತ್ರಯಾ | ವಸ್ಥೆಗಳ ಪ್ರೇರಕನೆಉತ್ತಮನು ಸಾಧನದಿ | ಯುಕ್ತನೆನಿಸಿವನಾ |ಕರ್ತೃಕರ್ಮವುಕರಣ | ಎತ್ತನೋಡಿದರುತವಾವ್ಯಾಪ್ತಿಯನೂ ತಿಳಿಸೂ | ಸರ್ವೋತ್ತಮನೆ ಹರಿಯೇ 4 ಶರ್ವಾದಿ ದಿನಿ ಜೇಡ್ಯ | ನಿರ್ವಿಕಾರನೆ ದೇವಗುರ್ವಂತರಾತ್ಮಗುರು | ಗೋವಿಂದ ವಿಠಲಾ |ಸರ್ವಜ್ಞ ನೀನಿರಲು | ಪೇಳ್ವುದೇನಿಹುದಿನ್ನುದುರ್ವಿಜೀವಿಯ ಕಾವ ಹವಣೆನಿನದಲ್ಲೇ 5
--------------
ಗುರುಗೋವಿಂದವಿಠಲರು
ಹ್ಯಾಗೆ ದರುಶನ ಪಾಲಿಸುವೆ ವಿಠ್ಠಲನೆ ಹ್ಯಾಗೆನ್ನ ಪೊರೆವೆ ವಿಠ್ಠಲನೆ ಪ. ನಾಗಶಯನನೆ ನಿನ್ನ ನೋಡಬೇಕೆಂದು ಮನ ಈಗ ತವಕಿಸುತಿಹುದು ಹ್ಯಾಗೆ ಮಾಡಲಿ ವಿಠಲ ಅ.ಪ. ಅರಿಯದಾ ದೇಶದಲಿ ಆಲ್ಪರಿದು ಅನ್ಯರಿಗೆ ಬರಿದಾಯ್ತು ಬಯಕೆ ವಿಠ್ಠಲನÉ ಪರಿ ಹರಿಯೆ ನೀನಲ್ಲದಲೆ ಪೊರೆಯುವರ ಕಾಣೆ ವಿಠ್ಠಲನÉ 1 ಕೈಯಲ್ಲಿ ಕಾಸಿಲ್ಲ ಮೈಯಲ್ಲಿ ಬಲವಿಲ್ಲ ಹ್ಯಾಗೆ ಬರಲಿನ್ನು ವಿಠ್ಠಲನೆ ನ್ಯಾಯದಿಂದಲಿ ಹಿಂದಿನಾ ಭಕ್ತರಂದದಲಿ ಕಾಯಬಾರದೆ ಎನ್ನ ಪೇಳೂ ವಿಠ್ಠಲನೆ 2 ಭಕ್ತ ಸುರಧೇನೆಂಬೊ ಬಿರುದು ಕೇಳೀ ಬಂದೆ ಚಿತ್ತಕ್ಕೆ ಬರದೆ ವಿಠ್ಠಲನೆ ಭಕ್ತರಾ ಕೂಟದಲಿ ಸೇರಲಿಲ್ಲವೆ ನಾನು ಭಕ್ತವತ್ಸಲನಲ್ಲವೇನೊ ವಿಠ್ಠಲನೆ 3 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ ಇಂದಿರೇಶನೆ ಕಾಯೊ ಸತತ ವಿಠ್ಠಲನೇ ಹಿಂದಿನವರನು ಪೊರೆದ ಕೀರ್ತಿ ಉಳಿಯಲು ಈಗ ಕುಂದನೆಣಿಸದೆ ಕಾಯಬೇಕೊ ವಿಠ್ಠಲನೇ 4 ಕರುಣಿ ಎನ್ನಯ್ಯ ಕಂಗೆಡಿಸದಲೆ ಕಾಪಾಡೊ ಚರಣವೇ ಗತಿ ಎಂದು ಬಂದೆ ವಿಠ್ಠಲನೆ ಗುರು ಅಂತರ್ಯಾಮಿ ಎನ್ನಭಿಮಾನ ನಿನದೈಯ್ಯ ಸಿರಿಯರಸ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಎಲೊ ರಮಾಪತಿ ಹಕ್ಕಿಗಳು ಬಾಯಿ ಬಿಡುವಂತೆಬಳಲುವೆವೊ ಈಗ ನಾವೆಲ್ಲ | (ನಾವೆಲ್ಲ) ಈ ಬ್ರಹ್ಮಕುಲದ ಅಭಿಮಾನ ನಿನದಲ್ಲೆ ಪಗೌಡ ಪ್ರಬಲಾಗೆ ತಲೆಗೂಡೆನಿಸಿತೆನಗೆ ನೋಡ ಮನೆಕಡೆಗೆ ಮಡಿವಾಳ | (ಮಡಿವಾಳ) ಮರ ಹಾಳುಮಾಡುವರು ದ್ವಿಜರೆಂಬನು ಜೀಯ 1ಗಡಿಗೆಗಳು ಒಂದನ್ನ ಕೊಡನು ಗ್ರಹಣಗಳು ಹನ್ನೆ-ರಡೂ ಆದರನ್ನಾ ಕುಂಬಾರ | (ಕುಂಬಾರ)ನಿದ ಸ್ಮರಿಸಿಅಡವಿಯೊಳು ಕುಳಿತು ಆ(ಅ ?)ಳಬೇಕು 2ಭಕ್ರಿಯೆಂಬುದು ತುಪ್ಪ ಸಕ್ರಿ ಮಾಡಿದ ಬಡಿಗಅಕ್ರೂರ ವರದ ದಯಾಸಿಂಧು | (ದಯಾಸಿಂಧು) ಎಂದು ಈಅಕ್ರಮವ ನಿನಗೇ ಉಸಿರುವೆ3ಕಾಲರಕ್ಷೆಯ ಹೊಲಿಯ ಧಾಳಾಯ ಕೊಡುಯೆಂದುಗೋಳಾಡಿಸುವನು ಅತಿಶೂದ್ರ | (ಅತಿಶೂದ್ರ) ಈ ದುಃಖಕೇಳುವರೇ ಇಲ್ಲೋ ಪರಮಾತ್ಮ 4ಯರಿಬೀಳು ಅದಕೂ ಮತ್ತೇರಿಸುವನೋ ಎಲ್ಲೋ ಎಂ-ದಿರುಳೆಲ್ಲ ನಿದ್ರಿಲ್ಲೋ ಮೇಲ್ಪøತ್ತಿ | (ಮೇಲ್ಪøತ್ತಿ)ಯೆಂಬುವದುಗುರುತಿಲ್ಲಧೋಯ್ತೋ ಗುರುವರ್ಯ 5ಇದ್ದ ಜ್ಞಾತಿಗಳಿಂದೆ ಮುದ್ದ್ಯಾಗಬೇಕೆಂಬಶ್ರದ್ಧೆಯನೇ ಬಿಟ್ಟು ಅವನನ್ನೇ | (ಅವನನ್ನೇ) ಕೊಂಡಾಡಿಹೊದ್ದಿ ದಿನಗಳದೂ ಬದುಕುವರು6ಈ ರೀತಿ ನೋಡಲ್ಕೆ ಮೂರನೆ ಕಾಲವೇಂತೋರುವದೊ ಯಮಗೆ ಪ್ರಾಣೇಶ | (ಪ್ರಾಣೇಶ) ವಿಠಲ ಉ-ದ್ಧಾರ ಮಾಡುವದು ನೀ ಬಲ್ಲೆ7
--------------
ಪ್ರಾಣೇಶದಾಸರು