ಒಟ್ಟು 939 ಕಡೆಗಳಲ್ಲಿ , 78 ದಾಸರು , 728 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಹಯವದನ ಪ್ರಾರ್ಥನೆ) ಹಾರುತ ಬಂದಿಹ ಹಯಮುಖ ಮೂರುತಿಯನು ನೋಡಿ ಮಾರುತ ವಂದಿತ ಮಹಿಮೆಯ ತೋರುವ ಕಾಪಾಡಿ ಪ. ವೇದವ ಕದ್ದ್ಯೊದಸುರನ ಹಾದಿಯೊಳಡ್ಡಗಟ್ಟಿ ಮೇದಿನಿಗೊರಗಿಸಿ ಶ್ರುತಿಯನು ಕಾದನು ಜಗಜಟ್ಟಿ ವೇಧಗೆ ಪರತತ್ವಂಗಳ ಬೋಧಿಸಿ ಮನಮುಟ್ಟಿ ಶ್ರೀಧರ ದುರ್ಜನರೆದೆಗಳ ಭೇದಿಸುವನು ಮೆಟ್ಟಿ1 ವಾದಿನೃಪ ಯತೀಂದ್ರ ಮನೋಲ್ಲಾಸದಿ ಪದಾಂಭೋಜ ಸಾಧಿಸುವನು ಸಕಲಾರ್ಥನ ಸ್ವಜನಕೆ ಸುರರಾಜ ಸ್ವೋದರಗತ ವಿಶ್ವಂಭರ ಶಮಿತದುರಿತ ಬೀಜ ವ್ಯಾಧಿಯ ಹರಸುವ ವಿಭವಾಸಾದಿತ ಗಜರಾಜ 2 ಹೇಷಾ ನಿಭೃತಾಶಾನತ ಕೋಶಾಸ್ಪದ ರೂಪ ದೋಷಾಂಬುಧಿಶೋಷಾದ್ಭುತ ವೇಷಾಸುರ ತಾಪ ವೀಶಾಹಿ ಗಣೇಶಾದ್ಯಮರೇಶಾರ್ಚಿತ ಪಾದ ಶೇಷಾಚಲ ಭೂಷಾಗಮ ಭಾಷಾಮಿತವಾದ 3
--------------
ತುಪಾಕಿ ವೆಂಕಟರಮಣಾಚಾರ್ಯ
2. ಶ್ರೀ ವೆಂಕಟೇಶ ಸ್ತೋತ್ರ 6 ಶರಣಾಗತರ ಕಲ್ಪತರುವೆ ವೆಂಕಟ ಧರಾ ಧರನಾಥ ನಿನ್ನ ಚರಣಾಬ್ಜ | ಚರಣಾಬ್ಜಯುಗಳ ಸಂ ದರುಶನವ ಈಯೊ ಎಂದೆಂದು 1 7 ಸ್ವಾಮಿ ತೀರ್ಥ ನಿವಾಸ ಸು ಭಯಹಾರಿ ಸುರರ ಸಾರ್ವ ಭೌಮ ನೀ ಸಲಹೆಮ್ಮೆ 2 8ವೆಂಕಟಾಚಲನಿಲಯ ಪಂಕಜೋದ್ಭವನಯ್ಯ ಕಿಂಕರನೆನಿಸೊ ಶುಭಕಾಯ 3 9 ಸತ್ಯಸಂಕಲ್ಪ ಜಗದತ್ಯಂತ ಭಿನ್ನಸ ರ್ವೋತ್ತಮ ಪುರಾಣ ಪುರುಷೇಶ | ಪುರುಷೇಶ ಸತತತ್ವ ದ್ಭೈತ್ಯನ್ನ ಕಾಯೊ ಕರುಣಾಳೊ 4 10 ದೇವಶರ್ಮನ ತುತಿಗೆ ನೀನೊಲಿದು ಪಾಲಿಸಿದೆ ದೇವಕೀಕಂದ ದಯದಿಂದ | ದಯದಿಂದ ಒಲಿದೆನ್ನ ತಾವಕರೊಳಿಟ್ಟು ಸಲಹಯ್ಯ 5 11 ಕೃತಿಪತಿಯೆ ನಿನ್ನ ಸಂಸ್ಮøತಿಯೊಂದಿರಲಿ ಜನ್ಮ ಮೃತಿ ನರಕ ಭಯವು ಬರಲಂಜೆ | ಬರಲಂಜೆ ಎನಗೆಕೃಸಂ ತತ ನಿನ್ನ ಸ್ಮರಣೆ ಕರುಣೀಸೊ 6 12ಶುಚಿಸದ್ಮನೆ ಮನೋವಚನಾತ್ಮಕೃತ ಕರ್ಮ ನಿಚಯ ನಿನಗೀವೆ ಸುಚರಿತ್ರ | ಸುಚರಿತ್ರ ಸುಗುಣಗಳ ರಚನೆ ಸುಖವೀಯೊ ರುಚಿರಾಗ 7 13ಹೃದಯದಲಿ ತವರೂಪ ವದನದಲಿ ತವನಾಮ ಉದರದಲಿ ನೈವೇದ್ಯ ಶಿರದಲ್ಲಿ | ಶಿರದಲ್ಲಿ ನಿರ್ಮಾಲ್ಯ ಪದಜಲಗಳಿರಲು ಭಯವುಂಟೆ 8 14ಸತತ ಸ್ಮರಿಸುತ ನಿನ್ನ ನುತಿಸಿ ಬೇಡಿಕೊಳುವೆ ಹಿತದಿಂದ ನಿನ್ನ ವಿಜ್ಞಾನ | ವಿಜ್ಞಾನ ನಿಜ ಭಾಗ ವತರ ಸಂಗವನ್ನೇ ಕರುಣೀಸೊ 9 15ಪ್ರಕೃತಿ ಗುಣಗಳ ಕಾರ್ಯ ಸುಖ ದುಃಖ ಮೂಲ ಜಡ ಪತಿ ನಿನ್ನ ಭಕುತ ನಾನಯ್ಯ ಎಂದೆಂದು 10 16ಪುಣ್ಯಪಾಪಾದಿಗಳು ನಿನ್ನಾಧೀನದೊಳಿರಲು ಎನ್ನದೆಂದರುಹಿ ದಣಿಸುವಿ | ದಣಿಸುವುದು ಧರ್ಮವೇ ನಿನ್ನರಿವ ಜ್ಞಾನ ಕರುಣೀಸೊ 11 17ಝಷಕೇತು ಜನಕ ದುರ್ವಿಷಯಕೊಳಗಾಗಿ ಸಾ ಹಸ ಪಡುವ ಚಿತ್ತ ಪ್ರತಿದಿನ | ಪ್ರತಿದಿನಗಳಲ್ಲಿ ನಿನ್ನ ವಶಮಾಡಿಕೊಳ್ಳೊ ವನಜಾಕ್ಷ 12 18ಇನಿತಿದ್ದ ಬಳಿಕ ಯೋಚನೆ ಯಾಕೆ ಗರುಡವಾ ಹನನೆ ಮಹಲಕ್ಷ್ಮಿ ನರಸಿಂಹ/ನರಸಿಂಹ ಬಿನ್ನೈಪೆ ಘನತೆ ನಿನಗಲ್ಲ ಕರುಣಾಳು 13 19ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ ಬಲವಂತರುಂಟೆ ಸುರರೊಳು/ಸುರರೊಳು ನೀನು ಬೆಂ ಬಲವಾಗಿ ಇರಲು ಭಯವುಂಟೆ 14 20ಹಯವದನ ಸೃಷ್ಟಿ ಸ್ಥಿತಿಲಯ ಕಾರಣನುನೀನೆ ದಯವಾಗಲೆಮಗೆ ದುರಿತೌಘ / ದುರಿತೌಘರ್ಕಳು ಬಟ್ಟ ಬಯಲಾಗುತಿಹವೊ ಸುಕೃತಿಯಿಂದ 15 21ಕಲುಷವರ್ಜಿತನೆ ಮಂಗಳ ಚರಿತ ಭಕ್ತವ ತ್ಸಲ ಭಾಗ್ಯವ ಪುಷ ಬಹುರೂಪಿ /ಬಹುರೂಪಿ ಎನಗೆಚಂ ಚಲ ಬಿಡಿಸಿ ನೀ ಕರುಣೀಸೊ 16 22ಫಾಲಾಕ್ಷಪ್ರಿಯ ನಿನ್ನ ಲೀಲೆಗಳ ಮರೆಯದಲೆ ಕಾಲಕಾಲದಲಿ ಸ್ಮರಿಸುವ/ ಸ್ಮರಿಸಿ ಹಿಗ್ಗುವ ಭಾಗ್ಯ ಪಾಲಿಸೊ ಎನಗೆ ಪರಮಾತ್ಮ 17 23ಚತುರವಿಧ ಪುರುಷಾರ್ಥ ಚತುರಾತ್ಮ ನೀನಿರಲು ಇತರ ಪುರುಷಾರ್ಥ ನಾನೊಲ್ಲೆ | ನಾನೊಲ್ಲೆ ತ್ವತ್ಪಾದ ರತಿ ಭಾಗ್ಯ ನೀನೆ ಕರುಣೀಸೊ 18 24 ಜಯ ಮತ್ಸ್ಯ ಕೂರ್ಮ ವರಹ ನರಸಿಂಹ ಭೃಗುರಾಮರಘುರಾಮ ಜಯ ಬೌದ್ಧ ಕಲಿಹರ್ತಾ 19 25 ಜಯ ವಿಶ್ವತೈಜಸನೆ ಜಯ ಪ್ರಾಜ್ಞ ತುರ್ಯಾತ್ಮ ಜಯ ಅಂತರಾತ್ಮ ಪರಮಾತ್ಮ | ಪರಮಾತ್ಮ ಜ್ಞಾನಾತ್ಮ ಅನಿರುದ್ಧ ಪ್ರದ್ಯುಮ್ನ 20 26 ಜಯ ಸಂಕರುಷಣನೆ ಜಯ ವಾಸುದೇವನೆಜಯ ಜಯತು ಲಕ್ಷ್ಮೀನಾರಾಯಣಾ |ನಾರಾಯಣಾನಂತ ಜಯತು ಗೋವಿಂದಾಚ್ಯುತ ಶ್ರೀ ಕೃಷ್ಣ 21 27ಜಯ ಪೂರ್ಣ ಜ್ಞಾವಾತ್ಮ ಜಯ ಪೂರ್ಣೈಶ್ವರ್ಯ ಜಯ ಪ್ರಭಾ ಪೂರ್ಣ ತೇಜಾತ್ಮ | ತೇಜಾತ್ಮ ನಂದಾತ್ಮ ಜಯತು ಶಕ್ತ್ಯಾತ್ಮ ಕೃದ್ಧೋಲ್ಕ 22 28ಜಯ ಜಯತು ಮಹೋಲ್ಕ ಜಯತು ವೀರೋಲ್ಕ ಜಯ ಜಯತು ದ್ಯುಲ್ಕ ಸಹಸ್ರೊಲ್ಕ | ಸಹಸ್ರೊಲ್ಕ ಜಯ ಜಯ ಜಯತು ಜಗನ್ನಾಥ ವಿಠಲಾರ್ಯ 23 29 ಶ್ರೀನಿವಾಸನ ಪೋಲ್ವ ದೀನವತ್ಸಲರುಂಟೆ ದಾನಿಗಳುಂಟೆ ಜಗದೊಳು |ಜಗದೊಳು ನೀನೆ ಗತಿಯೆಂದನರರಿಗೆ ಆನಂದವೀವೆ ಅನುಗಾಲ 24 30ಒಪ್ಪಿಡಿ ಅವಲಕ್ಕಿಗೊಪ್ಪಿಕೊಂಡು ಮುಕುಂದ ವಿಪ್ರನಿಗೆ ಕೊಟ್ಟ ಸೌಭಾಗ್ಯ | ಸೌಭಾಗ್ಯ ಕೊಟ್ಟ ನ ಮ್ಮಪ್ಪಗಿಂತಧಿಕ ದೊರೆಯುಂಟೆ 25 31ಏನು ಕರುಣಾ ನಿಧಿಯೊ ಶ್ರೀನಿತಂಬಿನಿರಮಣ ತಾನುಮ್ಮನಗಲಿ ಸೈರಿಸ | ಸೈರಿಸದ ಕರುಣಿಯ ನಾನೆಂತು ತುತಿಸಿ ಹಿಗ್ಗಲಿ 26 32ಶ್ರೀನಿಧೆ ನಿನ್ನವರ ನಾನಾಪರಾಧಗಳ ನೀನೆಣಿಸದವರ ಸಲಹುವಿ | ಸಲಹುವಿ ಸರ್ವಜ್ಞ ಏನೆಂಬೆ ನಿನ್ನ ಕರುಣಕ್ಕೆ 27 33ಎನ್ನ ಪೋಲುವ ಭಕ್ತರನ್ನಂತ ನಿನಗಿಹರು ನಿನ್ನಂಥ ಸ್ವಾಮಿ ಎನಗಿಲ್ಲ | ಎನಗಿಲ್ಲವದರಿಂದ ಬಿನ್ನೈಪೆನಿನ್ನು ಸಲಹೆಂದು 28 34ಅಚ್ಯುತನೆ ನಿನ್ನಂಥ ಹುಚ್ಚು ದೊರೆಯನು ಕಾಣೆ ಕಚ್ಚಿ ಬಯದೊಡ್ಡೆ ಭಕುತರ | ಭಕುತರಪರಾಧಗಳ ತುಚ್ಛಗೈದವರ ಸಲಹೀದೆ 29 35ಎನ್ನ ಬಂಧುಗಳೆಲ್ಲ ನಿನ್ನ ದಾಸರು ಸ್ವಾಮಿ ಮನ್ನಿಸಬೇಕು ಮಹರಾಯ | ಮಹರಾಯ ನೀನಲ್ಲ ದನ್ಯರು ಸಾಕಲರಿಯರು 30 36 ತಂದೆ ತಾಯಿಯು ಭ್ರಾತ ಸಖ ಗುರು ಪುತ್ರ ಎಂದೆಂದು ನೀನೆ ಗತಿ ಗೋತ್ರ | ಗತಿಗೋತ್ರ ಇಹಪರಕೆ ಇಂದಿರಾರಾಧ್ಯ ಸಲಹೆಮ್ಮ 31 37 ಪತಿತ ನಾನಾದರೂ ಪತಿತ ಪಾವನ ನೀನು ರತಿನಾಥ ನಗಪಾಣಿ | ನಗಪಾಣಿ ನೀನಿರಲು ಇತರ ಚಿಂತ್ಯಾಕೊ ಎನಗಿನ್ನು 32 38 ನಡೆ ನುಡಿಗಳಪರಾಧ ಒಡೆಯ ನೀನೆಣಿಸಿದರೆ ಬಡವ ನಾನೆಂತು ಬದುಕಲಿ | ಬದುಕಲಿ ಕರುಣಿಯೆ ಕಡೆ ಬೀಳ್ವುದೆಂತೊ ಭವದಿಂದ 33 39ಏಸೇಸು ಜನ್ಮದಲಿ ದಾಸ ನಾ ನಿನಗಯ್ಯ ಈಶ ನೀನೆಂಬೊ ನುಡಿಸಿದ್ಧ | ನುಡಿಸಿದವಾಗಿರಲು ದಾಸೀನ ಮಾಡೋದುಚಿತಲ್ಲ 34 40ಆವ ಯೋನಿಯಲಿರಿಸು ಆವ ಲೋಕದಲಿರಿಸು ಆವಾಗ್ಯೆ ನಿನ್ನ ನೆನೆವಂತೆ | ನೆನೆವಂತೆ ಕರುಣಿಸೊ ದೇವಕೀಕಂದ ದಯದಿಂದ 35 41ಶಿಷ್ಟನೆಂದೆನಿಸೆನ್ನ ಭ್ರಷ್ಟನೆಂದೆನಿಸು ಸ ಜನರಿಂದ ನುಡಿಸಿದ್ದು
--------------
ಜಗನ್ನಾಥದಾಸರು
279ಹನುಮ ಭೀಮಾನಂದ ಮುನಿರಾಯ ಎನ್ನದು ಸಲಹೆಂದು ಬಿನ್ನೈಪೆವಿ ಜ್ಞಾನ ರೂಪ ವಿಜಿತಾತ್ಮ 1 280ತ್ರಿದಶವಿಂಶತಿ ರೂಪ ಸುದತಿಯಿಂದೊಡಗೊಡಿ ಪದುಮಜಾಂಡದೊಳು ಸರ್ವತ್ರ | ಸರ್ವತ್ರ ಭಕುತರಾ ಬದಿಗನಾಗಿದ್ದು ಸಲಹುವಿ 2 281ಕೋಟಿತ್ರಯ ಸ್ವರೂಪಿ ದಾಟಿಸು ಭವಾಬ್ಧಿಯ ನಿ ಭಯಹಾರಿ ರಣದೊಳು ಕಿ ರೀಟಿಯ ಕಾಯ್ದಿ ಧ್ವಜನಾಗಿ 3 282ಪ್ರಾಣನಾಯಕ ನಿನ್ನ ಕಾಣ ಬೇಕೆಂದೆನುತ ಸಾನುರಾಗದಲಿ ನಮಿಸುವೆ | ನಮಿಸುವೆನು ಮೂಜಗ ಪರಮೇಷ್ಟಿ 4 283ಚತುರವಿಂಶತಿ ತತ್ವ ಪತಿಗಳೊಳಗೆ ಗರುವ ನತಿಸುವೆನು ನಿನ್ನ ಚರಣಕ್ಕೆ | ಚರಣಕಮಲವ ತೋರಿ ಕೃತ ಕೃತ್ಯನೆನಿಸೊ ಕೃಪೆಯಿಂದ 5 284ಮೂರೇಳು ಸಾವಿರದ ಆರ್ನೂರು ಮಂತ್ರವ ಈರೇಳು ಜಗದಿ ಜನರೊಳು | ಜನರೊಳು ಮಾಡಿ ಉ ದ್ಧಾರ ಗೈಸುವಿಯೊ ಸುಜನರ 6 285ಪವಮಾನರಾಯ ನೀ ತ್ರಿವಿಧ ಜೀವರೊಳಿದ್ದು ವಿವಿಧ ವ್ಯಾಪಾರ ನೀ ಮಾಡಿ | ನೀ ಮಾಡಿ ಮಾಡಿಸಿ ಅವರವರ ಗತಿಯ ಕೊಡುತಿಪ್ಪ 7 286 ಮಿಶ್ರ ಜೀವ ರೊಳಿದ್ದು ಮಿಶ್ರಜ್ಞಾನವನಿತ್ತು ಮಿಶ್ರ ಸಾಧನವ ನೀ ಮಾಡಿ | ನೀ ಮಾಡಿ ಮಾಡಿಸಿ ಮಿಶ್ರಗತಿಗಳನೆ ಕೊಡುತಿಪ್ಪೆ 8 287ಅನಿಲದೇವನೆ ದೈತ್ಯದನುಜ ರಾಕ್ಷ ಸರೊಳಿದ್ದು ಅನುಚಿತ ಕುಕರ್ಮ ನೀ ಮಾಡಿ | ನೀ ಮಾಡಿ ಮೋಹಿಸಿ ದಣಿಸುವಿಯೊ ಅವರ ದಿವಿಜೇಶ 9 288ಕಾಲನಿಯಮಕನೆ ಕಾಲತ್ರಯಾದಿಗಳಲ್ಲಿ ಕಾಲ ಕರ್ಮ ಅನುಸಾರ | ಅನುಸಾರವಿತ್ತು ಪಾಲಿಸುವಿ ಜಗವ ಪವಮಾನ10 289ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ ಶ್ರೀಕಂಠ ಮುಖ್ಯ ಸುರರಿಗೆ | ಸುರರಿಗಿಲ್ಲವು ಭಾರ ತೀಕಾಂತ ನಿನಗೆ ಬಹದೆಂತೊ 11 290 ಕಲ್ಯಾದಿ ದೈತ್ಯಕುಲದಲ್ಲಣ ದಯಾಸಾಂದ್ರ ಬಲ್ಲಿದನು ಜಗಕೆ ಭಯದೂರ | ಭಯದೂರ ಭಕ್ತರ ನೆಲ್ಲ ಕಾಲದಲ್ಲಿ ಸಲಹಯ್ಯ 12 291ಕಾರುಣ್ಯನಿಧಿ ಜಗದ ಉದ್ಧಾರಕನು ನೀನೆ ಉ ದ್ಧಾರ ಮಾಡದಿರೆ ಭಕುತರ | ಭಕುತರನು ಕಾವ ರಿನ್ನಾರು ಲೋಕದಲಿ ಜಯವಂತ 13 292ತ್ರಿಜಗದ್ಗುರುವರೇಣ್ಯ ಋಜುಗಣಾಧಿಪ ಪಾದಾಂ ಬುಜ ಯುಗ್ಮಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಮನ್ಮನದಿ ನಿಜರೂಪ ತೋರಿ ಸಂತೈಸೊ 14 293ಅನಿಲದೇವನೆ ನಿನ್ನ ಜನುಮ ಜನುಮಗಳಲ್ಲಿ ಎಂದೆಂದು ವಿಷಯ ಚಿಂ ತನೆಯ ಕೊಡದೆನ್ನ ಸಲಹೆಂದು 15 294ತಾರತಮ್ಯ ಜ್ಞಾನ ವೈರಾಗ್ಯಭಕ್ತಿ ಧಾರಡ್ಯವಾಗಿ ಇರಲೆಂದು | ಇರಲೆಂದು ಬಿನ್ನೈಪೆ ಭಾರತೀರಮಣ ನಿನಗಾನು 16 295 ಮರಣ ಜನನಗಳು ಬಂದರೆ ಬರಲಿ ಪ್ರದ್ವೇಷ ಗುರು ಹಿರಿಯರಲ್ಲಿ ಹರಿಯಲ್ಲಿ | ಹರಿಯಲ್ಲಿ ಕೊಡದೆ ಉ ದ್ಧರಿಸಬೇಕೆನ್ನ ಪರಮಾಪ್ತ 17 296ವಿಷಯದಾಸೆಗಳ ಬಿಡಿಸಿ ಅಸುನಾಥ ಎನ್ನ ಪಾ ಲಿಸಬೇಕು ಮನವ ನಿನ್ನಲ್ಲಿ | ನಿನ್ನಲ್ಲಿ ನಿಲಿಸಿ ಸಂ ತಸದಿ ಕಾಯೆನ್ನ ಮರುದೀಶ 18 297 ವಾಯು ಹನುಮದ್ಭೀಮರಾಯ ಮಧ್ವರ ಸ್ತೋತ್ರ ಬಾಯೊಳುಳ್ಳವಗೆ ಜನ್ಮಾದಿ | ಜನ್ಮಾದಿ ರೋಗಭಯ ವೀಯನೆಂದೆಂದು ಭಗವಂತ 19 298ಮಾತರಿಶ್ವನೆ ಎನ್ನ ಮಾತುಗಳ ಲಾಲಿಸಿ ಜಗ ನ್ನಾಥ ವಿಠಲನ್ನ ಮನದಲ್ಲಿ | ಮನದಲ್ಲಿ ತೋರಿ ಭವ ಭೀತಿಯನು ಬಿಡಿಸೊ ಭವ್ಯಾತ್ಮ 20 299 ನಮ್ಮ ಗುರುಗಳ ಪಾದ ಒಮ್ಮೆ ನೆನೆಯಲು ಆ ಜನ್ಮ ಕೃತ ಪಾಪ ಪರಿಹಾರ | ಪರಿಹಾರವಾಗಿ ಸ ದ್ಬೊಮ್ಮಪದವಿಯಲಿ ಸುಖಿಸುವಿ 21 300ಮೂರೇಳು ಸಾವಿರದ ಆರುನೂರು ಹಂಸ ಮೂರು ಮಂತ್ರಗಳ ಜನರೊಳು | ಜನರೊಳು ಮಾಡ್ವ ಸ ಮೀರನ ಅಡಿಗೆ ಶರಣೆಂಬೆ 22 301ಅಂಜಿದವರಿಗೆ ವಜ್ರಪಂಜರನೆನಿಪ ಪ್ರ ಭಂಜನ ಪ್ರಭುವೆ ಪ್ರತಿದಿನ | ಪ್ರತಿದಿನ ನಮ್ಮ ಭಯ ಭಂಜಿಸಿ ಕಾಯೊ ಬಹುರೂಪ 23 302ಭವಿಷ್ಯದ್ವಿಧಾತನೆ ತವ ಚರಣ ಸೇವಿಪೆನು ಶ್ರವಣ ಮನನಾದಿ ಭಕುತಿಯ | ಭಕುತಿ ನಿನ್ನಲ್ಲಿ ಮಾ ಧವನಲ್ಲಿ ಕೊಟ್ಟು ಸಲಹಯ್ಯ24 303ಕಲಿಮುಖ್ಯ ದೈತ್ಯರುಪಟಳವ ಪರಿಹರಿಸಿ ಮ ಸಿಂಧು ನಿ ನ್ನೊಲುಮೆಯೊಂದಿ ಹರಿಕಾಯ್ವ 25 304 ಭಾರತೀ ರಮಣ ಮದ್ಭಾರ ನಿನ್ನದು ಎನ್ನ ಪಾರ ದೋಷಗಳ ಎಣಿಸದೆ | ಎಣಿಸದೆ ಸಂತೈಸೊ ಸಿಂಧು ಎಂದೆಂದು 26 305ಶ್ರೀಶಸದ್ಮನೆ ಜೀವರಾಶಿಯೊಳಗೊಂದಧಿಕ ವಿಂಶತಿ ಸಹಸ್ರದಾರ್ನೂರು | ಆರ್ನೂರು ಹಗಲಿರುಳು ಶ್ವಾಸ ಜಪಮಾಡಿ ಹರಿಗೀವಿ 27 306ತಾಸಿಗೊಂಭೈ ನೂರು ಶ್ವಾಸಜಪಗಳ ಮಾಡಿ ಬೇಸರದೆ ನಮ್ಮ ಸಲಹುವಿ | ಸಲಹುವಿ ಶ್ರೀ ಭಾರ ತೀಶ ನಿನ್ನಡಿಗೆ ಶರಣೆಂಬೆ 28 307ಬಲದೇವ ನೀನೆ ಬೆಂಬಲವಾಗಿ ಇರಲು ದು ರ್ಬಲ ಕಾಲಕರ್ಮ ಕೆಡಿಸೋದೆ | ಕೆಡಿಸೋದೆ ನಿನ್ನ ಹಂ ಬಲು ಉಳ್ಳ ಜನರ ಜಗದೊಳು 29 308ಹಾಲಾಹಲವನುಂಡು ಪಾಲಿಸಿದೆ ಜಗವ ಕರು ಣಾಳು ಪವಮಾನ ವಿಜ್ಞಾನ | ವಿಜ್ಞಾನ ಭಕುತಿ ಶ್ರೀ ಲೋಲನಲಿ ಕೊಟ್ಟು ಸಲಹಯ್ಯ 30 309ವಾತಾತ್ಮಜನೆ ನಿನ್ನ ಪ್ರೀತಿಯನೆ ಪಡೆದ ಖ ಪೊರೆದಂತೆ ಪೊರೆಯೆನ್ನ ನೀನಿಂತು ಕ್ಷಣದಿ ಕೃಪೆಯಿಂದ 31 310ಅಪರಾಜಿತನೆ ಮನದೊಳಪರೋಕ್ಷವಿತ್ತೆನಗೆ ಸುಖವೀಯೊ ಭಾವಿ ಲೋ ಕಪಿತಾಮಹನೆ ಎನಗೆ ದಯವಾಗೊ 32 311 ಬುದ್ಧಿ ಬಲ ಕೀರ್ತಿ ಪರಿಶುದ್ದ ಭಕ್ತಿಜ್ಞಾನ ಸದ್ಧೈರ್ಯಾಜಾಡ್ಯ ಆಯುಷ್ಯ | ಆಯುಷ್ಯ ವಿತ್ತಭಿ
--------------
ಜಗನ್ನಾಥದಾಸರು
5. ಅಹೋಬಲದಾಸರ ತೆಲುಗು-ಹಿಂದಿಮಿಶ್ರಿತ ಕೃತಿಗಳು ತಾನು ಹೇಳಿದನರ್ಜುನಗೇ ಪ ಷಡ್ವೈರಿ ವಿಸರ್ಜನೆಗೆ ಅ.ಪ ಅಪದಾರ್ಥವನ್ನಡಿಯೆನೊಂದಿಪೆ- ಕೋಪಮು ವಿಡಿಚಿತಿಳಿ ಸಮಜ ತಾ ವೊಯಾಪರ್‍ವರ್ದಿಗಾರನೆ ಬಲುಕುಟಿ ನಾಪನ್‍ವಳಿಯೊ ಭಲಾ 1 ಸತ್ವರಜೋಗುಣ ತಾಮಸರೂಪಿದು ಮತ್ವರಿತದಿ ನೋಡೊ ಯೀ ತತ್ವದ ಅರ್ಥವಳಿದವನಿಪ್ಪಡುಗು ಭಜನೆಯ ಮಾಡೋ 2 ವಿಜಯಪುರೀವರ ಅಜಪಿತನಹುದಲೊ ಭುಜಗಾಸನೆಧೀರಾ ಸಮಜತಾಕೇ ಳಜ ಮಹರಾಜನೆ ನಿಡಿಜಗುರು ತುಲಸಿ- ಮಣಿ ಆಧಾರಾ 3
--------------
ಚನ್ನಪಟ್ಟಣದ ಅಹೋಬಲದಾಸರು
ಅಂಕಿತ ಪದ ಕನಕಾದ್ರಿ ಹರಿ ವಿಠಲ | ಕಾಪಾಡೊ ಇವಳಾ ಪ ಪಾದ | ವನಜ ಸೇವಿಪಳಾ ಅ.ಪ. ನಿತ್ಯ ತೈಜಸ ಸೂಚ್ಯ | ಇತ್ತಿಹೆನೊ ಅಂಕಿತವಸಾರ್ಥಕೆನಿಪುದು ಇದನ | ಭಕ್ತನಾಭಯದನೇ 1 ಪತಿಸೇವೆ ದೊರಕಿಸುತಾ | ಮುಕ್ತಿ ಮಾರ್ಗದಿ ನಡೆಸಿಕೃತಕೃತ್ಯಳೆಂದೆನಿಸೊ | ಕೃತಿರಮಣದೇವಾ |ಹಿತವಹಿತ ವೆರಡುಗಳಾ | ಸಮತೆಯಲಿ ಉಂಬಂಥಧೃತಿಯನ್ನೆ ನೀಕೊಟ್ಟು | ಸತತ ಕೈ ಪಿಡಿಯೋ 2 ಮಧ್ವಮತ ತತ್ವಗಳ | ಶುದ್ಧಭಾವದಿ ತಿಳಿದುಅಧ್ವಯನು ಹರಿಯೆಂಬ | ಬುದ್ಧಿವೃದ್ಧಿಸುತಾಶ್ರದ್ದೆ ಭಕ್ತಿ ಜ್ಞಾನ | ಸಿದ್ಧಾಂತ ಅನುಸರಿಪಶುದ್ಧ ಬುದ್ಧಿಯನಿತ್ತು | ಉದ್ಧರಿಸೊ ಹರಿಯೇ 3 ಕಾಮಿತ ಪ್ರದನಾಗಿ | ಕಾಮಿತಂಗಳನಿತ್ತುಭೂಮಿಯೊಳು ಸದ್ವøಂದ್ಯ ಸ್ತೋಮದಲಿ ಮೆರೆಸೋಶ್ಯಾಮಸುಂದರ ಹರಿಯೆ | ಶ್ರೀಮಹೀ ಸೇವಿತನೆನೀ ಮನವ ಮಾಡೆ ಹರಿ | ಆವುದಾ ಸಾಧ್ಯಾ 4 ಭಾವ ಜ್ಞಾನೀನಿರಲು | ಪೇಳ್ವುದೇನಿಹುದಿನ್ನುಭಾವುಕಳ ಪೊರೆಯಿಂದು | ಓವಿ ಪ್ರಾರ್ಥಿಸುವೆ |ಭಾವಜನಯ್ಯಗುರು | ಗೋವಿಂದ ವಿಠ್ಠಲನೆ ನೀವೊಲಿಯದಿನ್ನಿಲ್ಲ | ಕಾವಕೊಲ್ಲುವನೆ 5
--------------
ಗುರುಗೋವಿಂದವಿಠಲರು
ಅಂಜನಾಸುತ ವರದ | ವಿಠಲ ಪೊರೆ ಇವನಾ ಪ ಕಂಜಜನಯ್ಯ ಹರಿ | ಸಂಜೆ ಚರಹರನೇ ಅ.ಪ. ಕರ್ಮ | ಮಾಡಿ ಮಾಡಿಸುತಾಮತಿರಹಿತ ಜೀವನಿಗೆ | ಫಲ ಎಂಬ ತೆರಮಾಳ್ವೆಕೃತುಭುಜನೆ ಈ ತರಳ | ನುದ್ಧಾರಗೈಯ್ಯೊ 1 ಆದ್ಯಂತರಹಿತ ಸ | ದ್ಬುದ್ಧಿಗಳ ಪ್ರೇರಕನೆಶ್ರ್ರದ್ಧಾಳು ಎನಿಸಿವನ | ಮಧ್ವಮತದಲ್ಲೀಪದ್ಧತಿಯ ಪ್ರಕಾರ | ಬದ್ದನಾಗಿಹದಾಸಶುದ್ಧ ದೀಕ್ಷೆಯಲಿವನ | ಉದ್ಧರಿಸೋ ದೇವ 2 ಉತ್ತಮಾಧಮರೆಂಬ | ತತ್ವ ತರತಮ ತಿಳಿಸಿಆರ್ಥಿಯಿಂದಿವನ ಭಾವ | ಉತ್ತರಿಸೊ ಹರಿಯೇ |ಕತೃ ಸರ್ವಕೆ ನೀನೆ | ಅತ್ಯಂತ್ಯ ಆಪ್ತ ತಮಮತ್ತೊಬ್ಬರಿಲ್ಲಿವಗೆ | ಸ್ತುತ್ಯ ಶ್ರೀಹರಿಯೇ 3 ಕಂಸಾರಿ ತವತಾಮಶಂಸನಕೆ ಎಡೆಗೊಟ್ಟು | ಸಲಹ ಬೇಕಿವನಾಅಂಶ ಅವತಾರಗಳ | ಶಂಸನದಿ ತವಪಾದಪಾಂಸುವನೆ ಭಜಿಪಂಥ | ಸನ್ಮತಿಯನೀಯೊ 4 ಸತ್ಸಂಗ ದೊರಕಿಸುತ | ಕುತ್ಸಿತರ ದೂರಗೈಮತ್ಸ್ಯಧ್ವಜ ಪಿತ ಶ್ರೀ | ವತ್ಸಲಾಂಛನನೇನಿತ್ಯ ತವ ಸಂಸ್ಮರಣೆ | ಇತ್ತುಪಾಲಿಪುದಿವನಚಿತ್ಸುಖಪ್ರದ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಅಂಜಿಕೆಯಾಗುತಿದೆ ುದನೋಡಿ ಅಂಜಿಕೆಯಾಗುತಿದೆಮಂಜಿನಂದದ ಮಾಯೆ ರಂಜನೆಯಾಗಿ ರಂಜನನರಿಯದಿರೆ ಪಹುಸಿಯೆಂದು ಶ್ರುತಿ ಸಾರ್ದರೂ ತಾನೊಮ್ಮೆ ನಸಿಯದೆ ನಿಜದಂತಿರೆಹೊಸದು ಕಟ್ಟಿದ ಬಲೆ ಹೊದಿಸಿದಂದದಿ ಮತ್ತೂ ಹೊಸಹೊಸತಾಗಿರಲುಹಸಿವು ತೃಷೆಗಳೆಂಬಿವು ದಿನದಿನ ಹಸಗೆಡಿಸುತಲಿರಲುಕುಸುಮಬಾಣನ ಕಾಟ ಕುಸಿಯ ಮೆಟ್ಟಲು ಮನ ಮಸಿಯಾಗಿ ಮುದ್ರಿಸಲು 1 ಪೇಳ್ವದು ಪರತತ್ವವು ಬುದ್ದಿಯ ಬಾಳ್ವಿಕೆ ಬಹು ಬದ್ಧವುಕೋಳ್ವೋದ ಶೂರನ ಕಲಿತನದಂತಿದು ಕೀಳ್ವಾಯಕಿಳೀಯುತಿರೆಕೇಳ್ವರೆ ಮಾರ್ಗವನು ಜ್ಞಾನಿಯು ಕೋಳ್ವಿಡಿಯಲಿ ಬದ್ಧನುಹಾಳ್‍ವಾದದಲಿ ಹೊತ್ತು ಹೋಗುತ ನಿಜವಾಗಿ ಆಳ್ವನನರಿಯದಿರೆ 2 ಯೋಗಿಗಳ್‍ಕಾಣದಿರೆ ಕರ್ಮದ ರಾಗಿಗಳ್ ಕಾಳಾಗಿರೆಭೋಗಿಗಳೆಲ್ಲರು ಭಯದಲ್ಲಿ ಮುಳುಗಿರೆ ರೋಗಗಳ್ ಬಹುವಾಗಿರೆಸಾಗದೆ ಮಾರ್ಗವಿರೆ ಪುನರಪಿ ಪ್ರಾಗನೆ ಪಡೆಯುತಿರೆಹಾಗೆ ವಾಸನೆಯನ್ನು ಹೊದ್ದಿ ಮತ್ತತಿಶಯವಾಗಿಯೆ ವರಕೊಂಡಿರೆ 3ಧರ್ಮವ ಮಾಡದಿರೆ ಮನ ಪಾಪ ಕರ್ಮವ ಕೂಡುತಿರೆದುರ್ಮಾರ್ಗವೆಂದರೆ ದೃಢವಾಗಿ ನಲಿದು ವಿಕರ್ಮಕ್ಕೆ ವೊಡಲಾಗಿರೆಹಮ್ಮನು ನೆಗ್ಗಿದರೆ ಹೋಗದೆ ಬಿಮ್ಮಾಗಿ ಬೆಳೆಯುತಿರೆನೆಮ್ಮುತ ವಿಷಯವ ನೆನೆಯುತಲೀ ಪರಿ ಹೆಮ್ಮೆಯೆ ಹೆಚ್ಚುತಿರೆ 4ಮೊಳೆಯುತ ಮೇಲ್ಮುಟ್ಟಿರೆ ಹಮ್ಮಿದು ಬೆಳೆಯುತ ಬೇರ್ಬಿಟ್ಟಿರೆಕಳಚಿದರ್ಕೆಡದಾಶೆ ಕಾಲ್ಕಟ್ಟಿ ಕೆಡಹಿರೆ ತಳತುದಿ ತೋರದಿರೆಅಳಿಯುವದೆಂದಿಗಿದು ಸುಖ ತಾನು ಹೊಳೆಯುವದೆಂದಿಗದುನಳಿನಾಕ್ಷ ತಿಳುಹಿಸು ನಂಬಿದೆ ತಿರುಪತಿನಿಳಯ ವೆಂಕಟನಾಥನೆ 5ಕಂ||ಎಡೆಬಿಡದನುತಪಿಸುತ ಪದವಿಡಿದೆರಗಿಯೆ ಬಿನ್ನವಿಸಲು ತಿರುಪತಿಯೊಡೆ ಯಂಕಡು ಕರುಣದಿಂದ ಗುರುತನು ವಿಡಿದಭಯವನಿತ್ತ ನುಡಿಯನನುವದಿಸುವೆನಾಂ ಓಂ ಪರಸ್ಮೈಬ್ರಹ್ಮಣೇ ನಮಃ
--------------
ತಿಮ್ಮಪ್ಪದಾಸರು
ಅಜ್ಞರಿಗೆಯಿದುನೋಡೆ ಹಾಸ್ಯವಾಗುವುದು ಪ ಜೀವ ಪರಮಾತ್ಮನಂ ತಿಳಿವದಡಕೆಲೆ ಶಾಸ್ತ್ರ ದೇವಧರ್ಮವು ಬರುವುದೇ ನಿಶ್ವಿತಾರ್ಥ ನಾವೆಂಬುವುದು ಬಿಡುವುದೆ ಭಾಜಾಭಜಂತ್ರಿಗಳು 1 ಗುರುಹಿರಿಯರಾಜ್ಞೆಯೆ ನಗನಾಣ್ಯಜವಳಿಗಳು ಸರವರಿಗು ಮರಿಯಾದೆ ಸಭೆಯ ಪೂಜೆ ದುರುಳನು ನಿಂದಿಪೋದು ಬೀಗತಿಯ ಹಾಡು 2 ಅಂತರ್ಮುಖತ್ವವೇ ಭೂಮದೂಟ ತತ್ವಗಳ ಮರೆಯದಿರುವುದೆ ದಿವ್ಯತಾಂಬೂಲ ಸತ್ವಗುಣ ವೃತ್ತಿಗಳೆ ನಿತ್ಯಸಂತೋಷ 3 ಕೊಬ್ಬಿದವರಿದು ಬಿಟ್ಟು ಹಣಕಾಸು ಕಳಕೊಂಡು ಕೋರಿಕೆಗಳಿಂದ ಸತಿಯೊಡನೆ ಕಾದುವರು 4 ಮಹಾಗುರುವೆ ಪರಮಾತ್ಮ ಶಿಷ್ಯರು ಜೀವರಾಶಿ ಅರಿತವರಿಗಿದರರ್ಥ ಅಮೃತಪಾನಕೆ ಸಮವು ಗುರುರಾಮ ವಿಠಲನು ಮನದಿ ಹೊಳೆಯುವನು 5
--------------
ಗುರುರಾಮವಿಠಲ
ಅಡಿಗೆಯನು ಮಾಡಬೇಕಣ್ಣ - ನಾನೀಗ ಜ್ಞಾನದಡಿಗೆಯನು ಮಾಡಬೇಕಣ್ಣ ಪ ಅಡಿಗೆಯನ್ನು ಮಾಡಬೇಕುಮಡಿಸಬೇಕು ಮದಗಳನ್ನುಒಡೆಯನಾಜ್ಞೆಯಿಂದ ಒಳ್ಳೆಸಡಗರದಲಿ ಮನೆಯ ಸಾರಿಸಿ ಅ ತನ್ನ ಗುರುವ ನೆನೆಯ ಬೇಕಣ್ಣತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ 1 ತತ್ವಭಾಂಡವ ತೊಳೆಯ ಬೇಕಣ್ಣ - ಸತ್ಯಾತ್ಮನಾಗಿಅರ್ತಿ ಅಕ್ಕಿಯ ಮಥಿಸಬೇಕಣ್ಣಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನುಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ 2 ಜನನ ಸೊಂಡಿಗೆ ಹುರಿಯಬೇಕಣ್ಣ - ನಿಜವಾಗಿ ನಿಂತುತನುವು ತುಪ್ಪವ ಕಾಸಬೇಕಣ್ಣಕನಕಗಿರಿ ಕಾಗಿನೆಲೆಯಾದಿಕೇಶವನ ದಾಸಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ 3
--------------
ಕನಕದಾಸ
ಅಂತರಾತ್ಮನ ದ್ಯಾನವನ್ನು ಅಂತರಂಗದಿ ಮಾಡೋ ನೀನು ಸಂತತ ನಿರ್ಮಲನಾಗಿ ನಲಿದಾಡು ಮನವೆ ಪ ನರದೇಹಕ್ಕೆ ಬಂದು ನೀನು ಇರುವಂಥಾ ಸಾರ್ಥಕವೇನು ಗುರುಕರುಣಕವಚವ ತೊಟ್ಟು ಕರ್ಮವ ಸುಟ್ಟು ಮಾಯಾ ಮೋಹವೆಲ್ಲವ ತರಿದು ಷಢ್ವೈರಿಗಳ ಶಿರವನು ಸರಸ ಹೃದಯದಿ ಮೆರೆವ ಜ್ಯೊತಿಯ ಬೆಳ ಗಿರುವ ಕೋಟಿಪ್ರಕಾಶದÀಂತಿಹ 1 ಬಿಡದೆ ಶ್ರೀ ಗುರುವಿನ ಪಾದಾ ಪಿಡಿದು ನಿತ್ಯಾನಂದ ಬೋಧಾ ಕಡಲ ತೆರೆಯೊಳು ಮಿಂದು ಕಾಮನ ಕೊಂದು ಅಡಿಗಡಿಗೆ ತತ್ವಾಮೃತರಸ ನಡುವಿರಳು ಶೀತ ಕಿರಣಕೋಟಿಯ ಪಡೆಯಕಟ್ಟಿದ ತರಣಿಯಂತಿಹ 2 ಮಂದಮತಿಯ ಕಳೆದು ಚಿದಾ ನಂದನ ಶ್ರೀ ದಿವ್ಯಪಾದ ಹೊಂದಿ ಬ್ರಹ್ಮಾ ನಂದರಸವಾ ಬಿಡದೆ ಸೇವಿಸುವ ಶಿವಾ ನಂದವನು ಕೈಕೊಂಡು ವಿಮಲಾ ನಂದ ದತ್ತಾತ್ರೇಯನೊಳಾಡುವಾ ಎಂದಿಗೂ ಆಳವಿಲ್ಲದಾತ್ಮನ ಚಂದವನು ನೋಡುತ್ತನಿನ್ನೊಳು 3
--------------
ಭಟಕಳ ಅಪ್ಪಯ್ಯ
ಅಧಿಕಾರಿ ಮೋಕ್ಷಾಧಿಕಾರಿ ಬಲುಗುದಿಗೆಯ ಮಾರಿ ಅನಧಿಕಾರಿ ಪ ಮುರುಕು ಮಾಳಿಗೆಯಲಿರೆ ಮರುಗುತಲ-ವರಿಗೆ ಮನೆಯ ಕೊಡುವನವನಧಿಕಾರಿಮರಗಳ ಕಡಿವನು ಮುಂದುಗಾಣದಲೆಮನೆ ಹೊಗಗೊಡದವ ಅನಧಿಕಾರಿ1 ಕೇಳುತ ತತ್ವವ ಆಲೋಚನೆಮಾಡಿ ಅಂತೆಯ ನಡೆವವನಧಿಕಾರಿಖೂಳರೊಳಾಡುತ ಕುಂಚಿತನೆ ಕುರುಡನವನು ಅನಧಿಕಾರಿ 2 ಪಡೆಯನು ಪಾಪವ ಬಿಡನವ ಸತ್ಯವನುಡಿವ ಸುವಾಕ್ಯವನಧಿಕಾರಿಮಡದಿಯ ಮೋಹಕೆ ಮುಂದುಗಾಣದಲಿಹಮುಡುದಾರನೆನಿಪವ ಅನಧಿಕಾರಿ 3 ತಿಳಿದರ ಸೇವೆಗೆ ತೇಯುವ ತನುವನು ತಗಲನು ನಿಂದ್ಯಕೆ ಅಧಿಕಾರಿತಲೆಯನು ಮಣಿಯನು ಮನದಲಿ ಮೋಸವ ಚಿಂತಿಪನವನು ಅನಧಿಕಾರಿ 4 ಚಿತ್ ಬಿಂದು ಉಕ್ಕುತ ಚಿತ್ಸುಖ ಸವಿದು ಚಿದಾನಂದನಾಗುವನಧಿಕಾರಿಎಡಬಲ ನೋಡುತ ಎತ್ತತ್ತ ಒಲೆವುತ ನಿಂತಿಹನವನು ಅನಧಿಕಾರಿ 5
--------------
ಚಿದಾನಂದ ಅವಧೂತರು
ಅನುದಿನ ನಿನ್ನ ನೆನೆದು ಮನವು ನಿನ್ನಲಿ ನಿಲ್ಲಲಿ ಪ. ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆ ಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ 1 ನಿನ್ನ ಗುಣ ವರ್ಣಿಸುತ ನಿನ್ನವರ ಮನ್ನಿಸುತ ನಿನ್ನ ಪಾವನ್ನ ಲಾವಣ್ಯ ಧ್ಯಾನಿಸೆ 2 ಸಂತೋಷ ನಿರಂತರವು ಸಂತ ಜನ ಸಹವಾಸವು ಶಾಂತತ್ವವಾಂತು ಮಹಾಂತಧೈರ್ಯದಿ3 ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣ ಚಿತ್ತದೊಳಿತ್ತೆಲ್ಲ ಹೊತ್ತು ಹೊತ್ತಿಗೆ4 ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನ ಧೈರ್ಯದಂತರ್ಯ ಗಾಂಭೀರ್ಯ ಭಾವದಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಅಭಿಮಾನ ಕಳೆವಂಥ | ಸುಲಭ ಮಾರ್ಗವನೇ |ಪ್ರಭುವೆ ಹರಿ ನಿನ್ನ ಸ್ಮøತಿ | ಸರ್ಬದಲಿ ಈಯೋ ಪ ಕರ್ಮ | ಸೃಷ್ಟಿ ನಡೆಸುವಲಿ |ಇಷ್ಟು ತತ್ವೇಶರನು | ಸುಷ್ಠು ಕರ್ಮವ ನಡೆಸೆಭ್ರಷ್ಟ ಎನ್ನಿಂದೆಂಬ | ಕರ್ತೃತ್ವದಲ್ಲಿರುವಾ 1 ಕರ್ಮ ಕರ್ಮ ನಾಮಕನೇ 2 ತನುನಿಷ್ಠ ತತ್ವೇಶರ | ಗಣಿತದ ಕರ್ಮಗಳತನು ತಮ್ಮ ಇಂದ್ರಿಯದಿ | ಅನುನಯದಿ ಗೈಯ್ಯೋ |ಎನ ತನುವು ಇಂದ್ರಿಯವೆ | ಕಾರಣವು ಎಂಬಂಥಹೀನ ಕಾರಕ ಸ್ವಾಮ್ಯ | ಮಾನವೆಂಬಂಥಾ 3 ಹಲವು ತತ್ವರು ದೇಹ | ದಲಿ ನಿಂತು ಕರ್ಮಗಳಹಲವು ಗೈಯುತ ಹರಿಗೆ | ಒಲಿದು ಅರ್ಪಿಸುತಿರೇ |ಫಲವು ಹಂಚಿಪ ಹರಿಯ | ಫಲಸ್ವಾಮ್ಯ ತಿಳಿಯದಿಹತಿಳಿಗೇಡಿ ಯೆನ್ನ ಭ್ರಮ | ಒಲಿದು ನೀ ಕಳೆಯೋ 4 ಅಹಿಕ ಪಾರತ್ರಿಕವು | ವಿಹಿತ ಸುಖವೆರಡರಲಿಅಹಿಕ ದುಃಖದ ವಿರಲು | ಬಹುದು ಮೋಕ್ಷೆರಿ ಬಾ |ಅಹಿತ ಮತಿ ಕಳೆಯುತ | ಶ್ರೀಹರಿಯೆ ನಿನ್ವೊಲಿಮೆಮಹಿತ ಮೋಕ್ಷದವೆಂಬ | ವಿಹಿತ ಮತಿ ಈ ಯೋ 5 ವಿಷಯದಲಿ ಮೈ ಮೆರೆತು | ವಿಷಯೋಪ ಭೋಗಗಳೆಅಸಮ ಪುರುಷಾರ್ಥಗಳ | ಲೇಸು ಪ್ರದವೆಂಬಾ |ವಿಷಯಾಭಿಮಾನಗಳು | ನಶಿಪಂತೆ ನೀ ಮಾಡಿವಿಷಯಾದಿಗಳಿಗೆಲ್ಲ | ಈಶ ನೀವೆನೆ ತಿಳಿಸೋ 6 ಕಕ್ಕಸದ ಅಭಿಮಾನ | ಷಟ್ಕಗಳ ನೀ ಕಳೆದುಅಕ್ಕರದಿ ತಾಯ್ತನ್ನ | ಮಕ್ಕಳನು ಪೊರೆವಂತೇ |ಲೆಕ್ಕಿಸದಲೆನ್ನಯ | ಲಕ್ಷ ಅಪರಾಧಗಳ ಕ್ಷಮಿಸಿಚೊಕ್ಕ ಗುರು ಗೋವಿಂದ | ವಿಠ್ಠಲನೆ ಸಲಹೋ 7
--------------
ಗುರುಗೋವಿಂದವಿಠಲರು
ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರ ಬೊಮ್ಮ ಮಗನೆಂಬೊ ಧೈರ್ಯಕೆ ಪ. ಬೊಮ್ಮನಯ್ಯನ ಸಿರಿರಮ್ಮೆ ಪತಿಯ ಘನ ಪೆರ್ಮೆ ಗುಣಗಣನಿಲಯನ ಅ.ಪ. ಹೊಳೆವ ಶ್ರೀರೂಪು ವಟಪತ್ರದಲ್ಲಿ ಪ್ರಳಯಜಲಧಿಯ ಶಯನನ ಸೆಳೆಮಂಚದ ಮ್ಯಾಲೆ ಮಗ್ಗುಲೊಳಿಟ್ಟು ತನ್ನ ಗೋಪಿ 1 ಚರಾಚರಂಗಳ ಸೃಷ್ಟಿ ಸ್ವಯಿಚ್ಛೆಯಿಂದ ಪುರುಷರೂಪವ ಧರಿಸಿದ ಪರಮಮಂಗಳ ಮೂರುತಿಯ ತನ್ನ ಗೋಪಿ 2 ಕತ್ತಲೆಯನು ನುಂಗಿ ತತ್ವಂಗಳನು ಕೊಂಡು ಮತ್ತೆ ಬೊಮ್ಮಾಂಡದೊಳಗೆ ಪೊಕ್ಕು ತತ್ವಸಾರದಿಂದೊಪ್ಪುವ ಕೊಮರನ ಗೋಪಿ 3 ಅದಭ್ರಸೃಷ್ಟಿಗಳಿಗಗೋಚರನಾದ ಆದಿಮೂರುತಿ ¸ಚ್ಚಿದಾನಂದನ ಸದಾ ತನಯನೆಂದೆತ್ತಿ ಮುದ್ದಿಸಿ ಸುಖ ಗೋಪಿ 4 ಚತುರುಭುಜ ಶಂಖ ಚಕ್ರ ಗದೆ ಪದುಮ ಸುತಪ ಪ್ರಶ್ನೆಗೆ ವರವಿತ್ತ ಶ್ರುತಿಶಿರೋಮಣಿಯೆಂದರಿಯದೆ ತಾ ಗೋಪಿ 5 ಬೊಮ್ಮಕಲುಷಾನಂತ ಸಹಸ್ರಗಳ ನಿಮಿಷಮಾತ್ರದಿ ಪಡೆದನ ಬೊಮ್ಮಾಂಡವೆ ತನ್ನ ರೋಮಕೂಪದಲ್ಲಿಪ್ಪ್ಪ ರನ್ನವೆ ಮಗನೆಂದಳೆ ಗೋಪಿ6 ಅನ್ನಂತ ರವಿತೇಜಕಿರೀಟದ ಅನ್ನಘ್ರ್ಯ ಸರ್ವಾಭರಣ ಪೊನ್ನ ವಸ್ತ್ರವನ್ನುಟ್ಟ ಅದ್ಭ್ಬುತ ಬಾಲಕನ ಗೋಪಿ 7 ಅನ್ನಂತಾನಂತ ಜೀವಗಣಗಳು ಅನ್ನಂತಾನಂತ ಕರ್ಮಗಳು ಅನ್ನಂತಾನಂತ ಗಾಯತ್ರಿಗೆ ಕÀರ್ತೃ ವಿಷ್ಣು ಗೋಪಿ 8 ಅನ್ನಂತಾಸನ ಶ್ವೇತದ್ವೀಪ ವೈಕುಂಠ ದನ್ನವರತ ವಾಸವಾಗಿಪ್ಪನ ಅನ್ನಿಮಿಷರ ಯೋಚನೆಗೆ ಒಲಿದನ ಗೋಪಿ 9 ಧರ್ಮದÀ ವೃದ್ಧಿಗೆ ಧರ್ಮದ ಹಾನಿಗೆ ತನ್ನಿಚ್ಛೆಯಲವತರಿಸಿದ ಮಮ ಪ್ರಾಣಾಹಿ ಪಾಂಡವನೆನಿಸಿದ ಗೋಪಿ 10 ಉದ್ದಾಮ ಕಾಂಚೀದಾಮ ಕಂಕಣ ಶ್ರೀ- ಮುದ್ರೆಯ ಶ್ರೀವತ್ಸಕೌಸ್ತುಭಧರನ ಮಧ್ವಮುನಿಗೆ ತಾನೊಲಿದು ಬಂದನ ಗೋಪಿ 11 ಸರಸಿಜಬೊಮ್ಮಾಂಡ ಒಡೆದಾಗ ವಿರಿಂಚಿ ತೊಳೆದ ಪಾದೋದಕವ ಹರ ಸೇವಿಸಲಾಗ ಶಿವನ ಮಾಡಿದ ಹರಿಯ ಮಗನೆಂದಳೆ [ಗೋಪಿ] 12 ದೇವಕಿ ಉದರದಲ್ಲಿದ್ದಾಗ ಬ್ರಹ್ಮಾದಿ ದೇವರಿಂದಲ್ಲಿ ಕೀರ್ತಿಸಿಕೊಂಡು ಭಾವಕಿ ದೇವಕಿ ವಸುದೇವನಲ್ಲಿ ಪಿತೃ ಗೋಪಿ 13 ಶಿಶುರೂಪವ ತೋರಿದ ಬೊಮ್ಮನ ಕಂಡು ವಸುದೇವಗೆ ನದಿ ಎಡೆ ಬಿಡೆ ಸಾಸಿರನಾಮ ಚಿತ್ರವಾಗಿದ್ದ ಜಗ- ಗೋಪಿ 14 ಪಾಲಗಡಲಲ್ಲಿ ಪವಡಿಸಿಪ್ಪನ ಕಾಲಮೇಲೆ ಮಲಗಿಸಿಕೊಂಡು ನೀಲಮೇಘಶ್ಯಾಮಯೆಂದು ಬಣ್ಣಿಸುತಲಿ ಗೋಪಿ 15 ಆದಿದೇವನು ಬ್ರಹ್ಮಸೂತ್ರವ ಕಲ್ಪಿಸಿ ವೇದ ವಿಭಾಗವ ಮಾಡಿದನ ಆದರದಿಂತುಂತೆಂದು ಕಲಿಸಿ ಸಂ ಗೋಪಿ 16 ಭಾನುಶತಕೋಟಿತೇಜಪ್ರಕಾಶನ್ನ ಆನಂದವನೆ ನೋಡಿ ಮನ ಉಬ್ಬಿ ಆನಂದನಿಧಿಯ ತೊಡೆಯ ಮ್ಯಾಲೆಯಿಟ್ಟು ಗೋಪಿ 17 ಶೃಂಗಾರನಿಧಿಯನ್ನು ಬಾಯೆಂದು ಕರೆದು ರ- ಥಾಂಗಪಾಣಿಯನೆ ಎತ್ತಿಕೊಂಡು ತಿಂಗಳನೋಡಯ್ಯ ಕಂದ ಎಂದಾತನ ಗೋಪಿ 18 ಸನ್ನಕಾದಿಗಳಯ್ಯನ ಪಿತನ ಕರೆ ದೆನ್ನ ಮಾಣಿಕವೆಯೆಂದಪ್ಪಿಕೊಂಡು ಹೊನ್ನ ತಾ ಗುಬ್ಬಿಯೆಂದಾಡು ಎನ್ನಯ್ಯನೆ ಗೋಪಿ 19 ಗಂಭೀರವಾರಿಧಿಗೆ ಅಂಬಾ ಹೂಡಿದ ತೋಳು ಇಂದಿರೆಯನೆ ಅಪ್ಪಿದ ತೋಳು ಶಂಭರಾರಿಯ ಪಿತ ತೋಳನ್ನಾಡೈ ಎಂದು ಗೋಪಿ 20 ಪಾದ ಉ- ದ್ದಂಡ ಬಲಿಯಮೆಟ್ಟಿದ ಪಾದ ಪುಂಡರೀಕಾಯತವಾದ ಪಾದದಿ ಪ್ರ- ಗೋಪಿ 21 ನಿತ್ಯತೃಪ್ತನು ಹಸ್ತ (ಸಿದ?) ನೆಂದೆನುತಲೆ ಇತ್ತ ಬಾ ಹೊರೀಯೆಂದಾದರಿಸಿ ಹೊತ್ತಾರಿಂದಮ್ಮೆ ಉಣ್ಣದಿರಲು ಹೊಟ್ಟೆ ಗೋಪಿ 22 ಅಮ್ಮೆ ಉಂಬುವ ಪುಟ್ಟ ಬಾಯ ಮುದ್ದಿನ ಮಾ ರಮ್ಮೆಯನರಸುವನಚ್ಚರಿಯ ಅಮ್ಮೆ ನೋಡಿ ನಗುವ ಮುದ್ದು ಬಾಲಕನ ಪರ ಗೋಪಿ 23 ತಾಯ ಮೊಗವ ನೋಡುತ್ತಾಕಳಿಸುತ ಬಾಯಲ್ಲೀರೇಳುಲೋಕವ ತೋರೆ ಆಯತೆ ನೋಡಿ ಮರಳಿ ಕಂಗೆಟ್ಟು ವಿಶ್ವ- ಗೋಪಿ 24 ಜ್ಞಾನಘನನ ವಿಶ್ವತೋನಯನನ ಆನಂದಚರಿತ್ರನ ಅವ್ಯಕ್ತನ ಜ್ಞಾನಿಗಳ ಹೃತ್ಕಮಲದೊಳಿಹನ ಕಣ್ಣಮುಚ್ಚಿ ಗೋಪಿ 25 ಹಾಲ ಹರವಿಯ ಒಡೆದು ಬಂದು ಗೋ- ಪಾಲ ನೀನೆಲ್ಲಿಗೆ ಪೋದೆಯೆಂದು ಕಾಲಕರ್ಮಂಗಳಿಗೆ ಕಾರಣವಾದೋನ ಗೋಪಿ 26 ಜಗದುದರ ಜಂಘಿಸುತ ಅಡಿಯಿಡೆ ಮೃಗಲೋಚನೆ ಮೈಮರೆದಿರೆ ಅಗಣಿತಮಹಿಮನು ಚರಿಸುತ ಬರ ಗೋಪಿ 27 ಆಮ್ಮಹಾ ಮತ್ತಿಯ ಮರನ ಮುರಿದು ಸುರರು ಜಯವೆನ್ನೆ ಶ್ರೀಮಣಿ ಶಿವರಿಂದ ಕೀರ್ತಿಸಿಕೊಂಬ ಗೋಪಿ 28 ಕತ್ತಲೆಯೊಳಗಿದ್ದು ಅಂಜಿದ ಮಗನೆಂದು ಶ್ರುತಿಮಂತ್ರಗಳಿಂದುಚ್ಚರಿಸಿ ಮೃತ್ಯುಂಜಯನ ಪಿರಿಯನೆತ್ತಿಕೊಂಡು ಗೋಪಿ 29 ಶೇಷಶಾಯಿಯ ಹಾಸಿ ಮಲಗಿಸಿ ಚಾರು- ವೇಷನ್ನ ನಿದ್ರಿಗೈಸುವೆನೆಂದು ಸಾಸಿರಮುಖಭೂಷಣನ ಪಾಡುತ್ತ ಸಂ- ತೋಷದಿ ಮೈಮರೆದಳೆ ಗೋಪಿ30 ತ್ರಿಗುಣಾತೀತನ್ನ ಪೊಂದೊಟ್ಟಿಲೊಳ್ಮಲಗಿಸಿ ಜೋಗುಳ ಪಾಡುವ ಯಶೋದೆÉಯ ಎಸೆವ ನೀಲವಸ್ತ್ರನು ಪಾಡೆನ್ನೆ ಕೃಷ್ಣ ಅನು- ಗೋಪಿ 31 ಹರಿಯ ಹೊರಿಸುವಳಲ್ಯಲ್ಲಿ ನಿಮ್ಮಣ್ಣ ವರ ಸಿಂಹಾಸನವಾಗಿಪ್ಪನೆಂದು ಸಿರಿಯಕೂಡೇಕಾಂತದಲಿಪ್ಪನ್ನ ಗೋಪಿ 32 ಪಾದ ನಿಮ್ಮಣ್ಣನ ಶಿರದಲೊಪ್ಪಿದೆÀಯೆಲೆ ಕಂದ ಸುರವರರ ಭಾಗ್ಯನಿಧಿಯೆ ಬಲರಾಮ ಗೋಪಿ 33 ಕಣ್ಣಮುಚ್ಚಿದ ಕೃಷ್ಣನೆಂದು ತೊಟ್ಟಿಲ ಬಿಟ್ಟು ಪುಣ್ಯಾಂಗನೆ ಮೈಮರೆದಿರೆ ಅಣ್ಣ ಆಶನು ಬೆಣ್ಣೆಯ ಕಳಹೋದ ಚಿಣ್ಣನ ಕಾಣೆನೆಂದಳೆ ಗೋಪಿ34 ನೀಲಾಂಬರನ ಬೆನ್ನ ಮೆಟ್ಟಿ ನೆಲವಿನ ಮ್ಯಾಲಿನ ಬೆಣ್ಣೆಯ ಮೆಲ್ಲೆ ಕೃಷ್ಣ ಬಾಲಕಿಯರು ಕೂಡಿ ಕಳ್ಳ ಸಿಕ್ಕಿದನೆಂದು ಗೋಪಿ 35 ಹುಟ್ಟ್ಟದ ಬೆಳೆಯದ ಹಸುಳೆ ಅಣ್ಣನ ಬೆನ್ನ ಮೆಟ್ಟಿ ನೆಲವು ಜಗ್ಗಿದನೆಂದು ರಟ್ಟು ಮಾಡಿದಿರೆಲ್ಲ ನೋಡಿರವ್ವಾ ಎನ್ನ ಗೋಪಿ 36 ಕಂದನ ಎತ್ತಿಕೊಂಡು ರಾಜ್ಯದಂಗನೆಯರ ಮಂದಿರವನೆ ಪೊಕ್ಕು ಬರುತಿರೆ ಒಂದೊಂದು ಕೌತುಕವನೆ ಕಂಡಾನಂದ ಗೋಪಿ 37 ಶಶಿಮುಖಿಯಂಗಳದ ಹಾಲಹಳ್ಳ ಮೊಸರ ಮಡುವು ಬಾಗಿಲ ಮುಂದೆ ಪ್ರಸಾದವೆಲ್ಲ ಬೆಣ್ಣೆ ಫಲಿತವಾಗಿರೆ ಗೋಪಿ 38 ವಾರಿಧಿಯೊಳಗಿದ್ದ ಪನ್ನಗಶಾಯಿಯ ತೇರ ಮೇಲೆ ಇದ್ದ ಬಾಲಕನ ಮೂರುತಿ ಒಂದೆಂಬೋ ಅ- ಗೋಪಿ 39 ದ್ರೌಪದಿಗಕ್ಷಯವಿತ್ತನ ಗುರು ಸಾಂ- ದೀಪಗೆ ಸುತನ ತಂದಿತ್ತನ ಪ್ರೀತಿಯಿಂದಲಿ ಯಜ್ಞಪತ್ಯರಿಗೊಲಿದ ಸುಪ್ರ- ಗೋಪಿ 40 ಘಾತಪುತ್ರರ ಆರು ಮಂದಿಯ ತರಹೇಳಿ ಮಾತೆಯೆಚ್ಚರಿಸೆ ಅಂಗೀಕರಿಸಿ ಅತಿ ಬೇಗದಿಂದಣ್ಣನ ತಂದು ತೋರಿದ ಅ- ಗೋಪಿ 41 ಭಕುತ ಶ್ರುತದೇವ ಬಹುಳಾಶ್ವರಾಯಗೊಲಿ ದೇಕ ಕಾಲದಿ ರೂಪೆರಡಾಗಿ ಆ ಕರುಣಾಬ್ಧಿಯ ಮಾಯಾರೂಪಿÀನ ಪರಿ- ಗೋಪಿ 42 ಪೂತನಿ ಶಕಟವತ್ಸಾಸುರ ವೃಷಭÀನ ಪಾತಕಿ ಚಾಣೂರ ಕುಂಜರನ ಘಾತಿಸಿ ಕಂಸನ್ನ ರಂಟೆಯಾಡಿದ ಬಲು ಭೂತನ್ನ ಮಗನೆಂದಳೆ ಗೋಪಿ43 ಬಾಲತನದಲ್ಲಿ ಸಖನಾಗಿ ಬಂದು ಕು- ಚೇಲ ತಂದವಲಕ್ಕಿಯ ಧರಿಸಿ ಮೇಲುತನದಿಂದ ಸೌಭಾಗ್ಯವಿತ್ತ ಶ್ರೀ ಲೋಲನ್ನ ಮಗನೆಂದಳೆ ಗೋಪಿ&ಟಿbsಠಿ
--------------
ವಾದಿರಾಜ
ಅರಿ ಬೇಗನೇ ಪರಮಾತ್ಮ ನೀನೈ ಪರತತ್ವನಾ ತ್ವರಿತದಲಿ ತಿಳಿಯೊ ಪ ಮೂರು ತಾಣಗಳ ಮೀರಿ ಗೋಚರಿಪ ತೋರುತಿಹ ಈ ದೇಹಾದಿಗಳಿಗೆ ಬೇರೆಯಾಗಿಪುದೆ ಪರಮಪದವು ಧೀರ ನೀನರಿಯೊ ಅದೆ ನಾನು ಎಂದು 1 ಕೋಶಪಂಚಕವ ಲೇಸಾಗಿ ಕಳೆದು ವಾಸನೆಯ ಪಾಶವನೆ ಹರಿದೊಗೆದು ಕ್ಲೇಶ ಪಡುವದನು ತ್ಯಜಿಸಿ ಮುದದಿ ನಾಶರಹಿತಾದ ಪದವು ತಾನೆಂದು 2 ಜನನಮರಣಗಳಿಗಾಚೆಗಿರುವಂಥ ಮನವಾಣಿಗಳಿಗೆ ನಿಲುಕದಿರುವಂಥ ಘನಪದವು ಇದುವೆ ಪರಮಾತ್ಮನೈ ಅನುನಯದಿ ಪೇಳ್ವ ಗುರುಶಂಕರಾರ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ