ಒಟ್ಟು 42 ಕಡೆಗಳಲ್ಲಿ , 19 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿದ್ರೆಯ ಬಿಟ್ಟೇಳಿದಧಿಮಥಿಸುವೇಳಿ ಬಲಭದ್ರ ಬಾಲಕೃಷ್ಣರುಲುಹು ಕೇಳಬರುತಿದೆ ಗಡಾ ಪ.ಗೊಲ್ಲರೆಳೆಯರ ಕೂಡಿ ಗೋಪಿಯ ಕುಮಾರರೀಗೆಚೆಲ್ಲಿಯಾಡಿ ಸೂರೆ ಮಾಡುತಾರೆ ಮೊಸರಚೆಲ್ಲೆಗಂಗಳೆಯರೊಳು ಸರಸವಾಡುತಲಿಹರೆಮೆಲ್ಲಗೆ ಸಪ್ಪಳಿಲ್ಲದೆ ಮನೆಯ ಪೊಗುವರಮ್ಮ 1ಕೇರಿ ಕೇರಿಯೊಳು ಹುಯ್ಯಲಿಡುತ ಬಂದರದಕೊಚೀರುತೈದಾರೆ ಬೆನ್ನಟ್ಟಿ ನಾರಿಯರಕೊಆರಿಗೆ ವಶವಾಗರು ದೂರುತಾರೆ ಬಾಲೆಯರುಧೀರ ಚೋರರಲ್ಲುದಾರ ಗೋರಸ ಉಣ್ಣುತಾರವ್ವ 2ಪೊಸಬೆಣ್ಣೆಯ ಕಂಡರೆ ಬಿಡರು ನಮ್ಮ ದೇವರಮೀಸಲಂಜಿಕೆಯಿಲ್ಲದುರುಳಮಕ್ಕಳಿಗೆಶಿಶುಗಳಟ್ಟುಳಿಯಾಗದ ಮುನ್ನೆಚ್ಚರವಮ್ಮಪ್ರಸನ್ನವೆಂಕಟಕೃಷ್ಣ ಬರುವ ನೋಡಿರಮ್ಮ 3
--------------
ಪ್ರಸನ್ನವೆಂಕಟದಾಸರು
ನಿಲ್ಲು ರಂಗ ನಿಲ್ಲು ರಂಗ ನಿಲ್ಲೆಲೊ ರಂಗನಿಲ್ಲು ಮಜ್ಜಿಗೆಯನೆಲ್ಲ ಚೆಲ್ಲಿ ಬೆಣ್ಣೆ ಮೆದ್ದ ಕಳ್ಳ ಪ.ಜಾವ ಜಾವಕೆ ಕಾಡುವೆ ನಾವು ಕಟ್ಟಿದರೋಡುವೆಹಾವಳಿಗಾರೆವೊ ನಿನ್ನ ದೇವಕಿ ಚಿನ್ನಗೋವಳೆಗಾರ್ತಿರ ಚಿತ್ತವ ಆವಾಗೆ ಗೆದ್ಯೊಮಾಧವದೇವಿ ಗೋಪಿಗೆ ಹೇಳುತೈದೆವೊ ನಡೆ ಯಾಕೊ ಪಿಂತೆ 1ಬಾಲ ಬಾಲ ಬಾಲನೆಂದು ತಾಳಬೇಕೆಷ್ಟು ದಿನೆಂದುಮೇಲೆ ಬಲ್ಲಿದರ ಮಗ ನೀಲಮೇಘಾಂಗಕಾಲಿಗೆರಗುವೆವಿನ್ನು ಪಾಲಿಸೊ ನಮ್ಮನು ನೀನುನಾಲಿಗೇಲಿ ನಿಮ್ಮ ಗುಣಂಗಳ ಹೇಳೋದು ಕಠಿಣ 2ಬಿಟ್ಟು ಕೆಟ್ಟೆವೊ ಪಾದವ ಕಟ್ಟೆವೊ ಬಾರೊ ದೇವಸಿಟ್ಟಲಿ ಯಶೋದೆ ಮೇಲೆ ಅಟ್ಟಿ ಬಿಡಲುಗಟ್ಟಿ ಮೊಸರು ಹಾಲನು ಅಷ್ಟು ಕುಡಿದಧಿಕನೊದಿಟ್ಟ ಪ್ರಸನ್ನವೆಂಕಟ ಕೃಷ್ಣ ನಿಮ್ಮಮ್ಮನಾಣಿಟ್ಟೆ 3
--------------
ಪ್ರಸನ್ನವೆಂಕಟದಾಸರು
ಷಷ್ಠಿಯ ದಿವಸ(ಶ್ರೀ ವೆಂಕಟೇಶನ ಅವಭೃಥ ಸ್ನಾನ)ಮುಕುತಿದಾಯಕ ಮೂಲಪುರುಷಗೆ 1ಭೇರಿಶಬ್ದವು ನಗಾರಿಘರ್ಜನೆಮೌರಿತಾಳವು ಮೃದಂಗಶಬ್ದವು 2ಉದಯಕಾಲದಿ ಒದಗಿ ಭಕುತರುಪದುಮನಾಭನ ಪಾಡಿ ಪೊಗಳ್ವರು 3ಭೂರಿಮಂಗಲಕರದ ಶಬ್ದವುಸೇರಿ ಕಿವಿಯೊಳು ತೋರುವುದಲ್ಲೆ 4ನಿದ್ದೆಬಾರದು ನಿಮಿಷಮಾತ್ರಕೆಎದ್ದು ಪೇಳೆಲೆ ಏಣಲೋಚನೆ 5ಸುಮ್ಮನೀನಿರು ಸುಳಿಯಬೇಡೆಲೆಎಮ್ಮುವುದು ನಿದ್ರೆ ಏನ ಪೇಳಲಿ 6ಬೊಮ್ಮಸುರರಿಗು ಪೊಗಳತೀರದುತಿಮ್ಮರಾಯನ ಮಹಿಮೆ ದೊಡ್ಡಿತು 7ನಿನ್ನೆ ದಿವಸದ ನಿದ್ರೆವಿಹುದೆಲೆಕಣ್ಣಿಗಾಲಸ್ಯ ಕಾಂಬುವದಲ್ಲೇ 8ಬಣ್ಣಿಸುವದೆಲೆ ಬಹಳವಿಹುದಲೆಪನ್ನಗವೇಣಿ ಪವಡಿಸೆ ನೀನು 9ಏಳು ಏಳಮ್ಮ ಅಲಸ್ಯವ್ಯಾತಕೆಕಾಲಿಗೆರಗುವೆ ಹೇಳಬೇಕಮ್ಮ 10ಜಯಜಯ ವಾಧಿಶಯನಜಯಜಯ ದೈತ್ಯವಿನಾಶ ಜಯಜಯ ಶ್ರೀನಿವಾಸ 1ಗಂಧಕಸ್ತೂರಿಪುಣುಗಚಂದನಪನ್ನೀರುಗಳಹೊಂದಿಸಿ ತೋಷದಿ ಮಂದರಧರಗೆ 2ಆಕಾಶರಾಯನ ಮಗಳು ಹರುಷದಿಂದೊಡಗೂಡಿಶ್ರೀಕರ ವೆಂಕಟಪತಿಯು ಸರಸವಾಡಿ 3ಶ್ರೀದೇವಿ ಭೂದೇವಿಮಾಧವಸಹಿತಲಿಸಾದರದಿಂದಲಿ ಸರಸವಾಡಿ 4ಬಡನಡು ಬಳುಕುತಲಿ ಎಡಬಲದಲಿ ಸುಳಿದುಕಡಲೊಡೆಯಗೆ ಲಕ್ಷ್ಮಿ ಚೆಲ್ಲಿದಳಾಗ 5ಛಲದಿ ಪದ್ಮಾವತಿಯು ಜಲಜನಾಭನ ಮೇಲೆಒಲವಿನಿಂದಲಿ ಬಂದು ಚೆಲ್ಲಿದಳಾಗ 6ಭರದಿ ಶ್ರೀದೇವಿಯು ಸರಸಿಜಮುಖದಲ್ಲಿಪರಮಸುಸ್ನೇಹದಿ ಬೆರಸಿದಳಾಗ7ಭೂದೇವಿ ಭುಲ್ಲವಿಸಿ ಮಾಧವನ ಮುಖದೊಳಗೆಮೋದದಿಂದಲಿ ಬಂದು ಚೆಲ್ಲಿದಳಾಗ 8ಸುತ್ತುಮುತ್ತಲು ಇವರ ಆರ್ತಿಯಿಂದಲಿ ಹರಿಯುವೃತ್ತಕುಚವ ನೋಡಿ ಚೆಲ್ಲಿದನಾಗ 9ಝಣಝಣಾಕೃತಿಯಿಂದ ಮಿನುಗುವಾಭರಣದಧ್ವನಿಯ ತೋರುತ ಬಲು ಸರಸವಾಡಿ 10ಓಕುಳಿಯಾಡಿದ ನೀರಾನೇಕಭಕ್ತರು ಮಿಂದುಏಕಮಾನಸರಾಗಿ ಪೊರಟರು ಕಾಣೆ 11* * *ಆಡಿದರೋಕುಳಿಯ ಶರಣರೆಲ್ಲಆಡಿದರೋಕುಳಿಯ ಪ.ಕಾಡುವ ಪಾಪವ ಓಜಿಸಿ ಹರಿಯೊಳ-ಗಾಡಿನಿತ್ಯಸುಖಬೀಡಿನ ಮಧ್ಯದಿ1ಅಬ್ಬರದಿಂದಲಿ ಉಬ್ಬಿ ಸಂತೋಷದಿಒಬ್ಬರ ಮೈಗಿನ್ನೊಬ್ಬರು ಚೆಲ್ಲುತ 2ಚೆಂಡು ಬುಗರಿನೀರುಂಡೆಗಳಿಂದಲಿಹಿಂಡುಕೂಡಿ ಮುಂಕೊಂಡು ಪಿಡಿಯುವರು3ಸುತ್ತುಮುತ್ತ ಒತ್ತೊತ್ತಿ ಮುತ್ತಿ ಜಲ-ವೆತ್ತಿ ಚಿತ್ತತನುನೆತ್ತಿಗೆ ಸೂಸುತ್ತ 4ರಂಭೆ : ನಾರಿ ಕೇಳೀಗ ಭೂರಿಭಕುತರುಶ್ರೀರಮಾಧವ ಸಹಿತ ಬಂದರು 1ಭಾವಶ್ರೀಹರಿ ಪ್ರತಿರೂಪದೋರುತದೇವ ತಾನೆ ನಿದ್ರ್ವಂದ್ವನೆನ್ನುತ 2ಹೇಮಖಚಿತವಾದಂದಣವೇರಿಪ್ರೇಮಿಯಾಗುತ ಪೊರಟು ಬರುವನು 3ವಲ್ಲಭೆಯರ ಕೂಡಿ ಈ ದಿನಫುಲ್ಲನಾಭನು ಪೊರಟನೆತ್ತಲು 4ಊರ್ವಶಿ : ನಾರಿ ನೀ ಕೇಳಿದರಿಂದ ಈಗಭೂರಿಭಕುತರಾನಂದಶ್ರೀರಮಾಧವ ಮಿಂದ ನೀರಿನೊಳಾಡುತ್ತಓರಂತೆ ತುಳಸಿಮಾಲೆಯ ಧರಿಸುತ್ತಭೇರಿಡಂಕನಗಾರಿಶಬ್ದ ಗಂ-ಭೀರದೆಸಕವ ತೋರಿಸುತ್ತ ವೈ-ಯಾರದಿಂದಲಿ ರಾಮವಾರ್ಧಿಯತೀರದೆಡೆಗೆಲೆ ಸಾರಿ ಬಂದರು 1ವರದಭಿಷೇಕವ ರಚಿಸಿ ಬಕು-ತರ ಸ್ನಾನವನನುಕರಿಸಿಭರದಿಂದ ಪೂಜಾಸತ್ಕಾರ ಸೇವೆ ಕೈಗೊಂಡುತ್ವರಿತದಿ ನಗರಾಂತರಕನುವಾದನುಬರುತ ದಿವ್ಯಾರತಿಗೊಳ್ಳುತಚರಣಸೇರಿದ ಭಕ್ತರಿಷ್ಟವನಿರುತ ಪಾಲಿಸಿ ಮೆರೆವ ಕರುಣಾ-ಕರಮನೋಹರ ಗರುಡವಾಹನ2ರಂಭೆ : ಸರಸಿಜಾನನೆ ಈ ಸೊಲ್ಲ ಲಾಲಿಸೆಕರವಮುಗಿಯುತ್ತಕೈಯ ತೋರುತ1ಪರಮಪುರುಷ ಗೋವಿಂದ ಎನುತಲಿಹೊರಳುತುರಳುತ ಬರುವದೇನಿದು 2ಭಂಗಿಪ ಸೇವೆಯೆಂಬುದನುಅಂಗಜಪಿತಚರಣಂಗಳ ರಜದಲಿ 1ಹೊಂಗಿ ಧರಿಸಿ ಲೋಟಾಂಗಣ ಎಂಬರುರಂಗನಾಥನ ಸೇವೆಗೈದ ಜ-ನಂಗಳಿಗೆ ಭಯವಿಲ್ಲವದರಿಂ-ದಂಗವಿಪ ಲೋಲೋಪ್ತಿ ಕೋಲಾ-ಟಂಗಳನು ನೀನೋಡುಸುಮನದಿ2* * *ಕೋಲು ಕೋಲೆನ್ನಿರೊ ರನ್ನದಕೋಲು ಕೋಲೆನ್ನಿರೊ ಪ .ಪಾಲಾಬ್ಧಿಶಯನ ನಮ್ಮಾಲಯಕೆದ್ದು ಬಂದಲೀಲೆಗಳಿಂದ ಜನಜಾಲಗಳೆಲ್ಲರು 1ಗುಂಗಾಡಿತಮನನ್ನು ಕೊಂದು ವೇದವ ತಂದುಬಂಗಾರದೊಡಲನಿಗಿಟ್ಟನು ನಮ್ಮ ದೇವ 2ಅಡ್ಡಿಮಾಡದೆ ಸುರವಡ್ಡಿಗೆ ಸುಧೆಯಿತ್ತುಗುಡ್ಡೆಯ ಬೆನ್ನಿಲಿ ಧರಿಸಿದ ನಮ್ಮ ದೇವ 3ರೂಢಿಯ ಕದ್ದನ ಓಡಿಸಿ ತನ್ನಯದಾಡೆಯಿಂದಲೆ ಸೀಳ್ದ ಕಾಡವರಾಹನಮ್ಮ 4ಸಿಂಗನ ರೂಪತಾಳಿ ಹೊಂಗಿ ಕಂಬದಿ ಬಂದುಬಂಗಾರಕಶ್ಯಪುವಂಗವ ಕೆಡಹಿದ 5ಗಿಡ್ಡನಾಗುತ ಕೈಯೊಡ್ಡಿ ದಾನಕೆ ಮನ-ಸಡ್ಡಿಮಾಡದೆ ಮೇಣು ದೊಡ್ಡವನಾದನಮ್ಮ 6ಕಾಮಧೇನುವಿಗಾಗಿ ಕಾರ್ತವೀರ್ಯನ ಕೊಂದುಭೂಮಿಯ ಬುಧರಿಗೆ ಪ್ರೇಮದಿನಿತ್ತನಮ್ಮ 7ಬೆಟ್ಟಗಳೆಲ್ಲ ತಂದೊಟ್ಟಿಸಿ ಶರಧಿಯಕಟ್ಟಿದೈತ್ಯರ ತಲೆ ಕುಟ್ಟಿದ ನಮ್ಮ ದೇವ8ಚಂಡಗೊಲ್ಲತಿಯರ ಹಿಂಡುಗಳೊಳು ಕೂಡಿಉಂಡ ಪಾಲ್‍ಬೆಣ್ಣೆಯ ಪುಂಡ ಗೋಪಾಲನಮ್ಮ 9ಯುವತಿಯರ ವ್ರತವ ತವಕದಿ ಖಂಡಿಸಿಶಿವನ ರಕ್ಷಿಸಿ ತ್ರಿಪುರವನು ಕೆಡಹಿಸಿದ 10ಕುದುರೆಯ ಮೇಲೇರಿ ಕುಮತಿ ಮ್ಲೇಂಛರನೆಲ್ಲಸದೆಬಡಿಯುವ ನಮ್ಮ ಮಧುಕೈಟಭಾರಿ ದೇವ 11ಕಲಿಯುಗದೊಳು ಬಂದು ನೆಲೆಯಾಗಿ ತಿರುಪತಿ-ಯೊಳಗೆ ಭಕ್ತರನೆಲ್ಲ ಸಲಹುವ ನಮ್ಮ ದೇವ 12ದುಷ್ಟರ ಬೇಗ ಕಂಗೆಟ್ಟು ಓಡುವ ಭಕ್ತ-ರಿಷ್ಟವ ಕೊಡುವರೆ ದೃಷ್ಟಿಗೋಚರನಾದ 13ತಪ್ಪದೆ ಸ್ವಪ್ನದಿ ಬಪ್ಪೆನೆನ್ನುತ ಪೇಳಿಸರ್ಪಪರ್ವತದಿಂದ ಒಪ್ಪಿಲ್ಲಿ ಬಂದನಮ್ಮ 14ಸೃಷ್ಟಿಯೊಳುತ್ತಮ ಶ್ರೇಷ್ಠ ಕಾರ್ಕಳದಲ್ಲಿಪಟ್ಟದರಸ ತಿಮ್ಮ ಸೆಟ್ಟಿಯೆಂದೆನಿಸಿದ 15ಊರ್ವಶಿ :ನಾರೀರನ್ನಳೆ ಕೇಳಿದ್ಯಾ ಶ್ರೀಹರಿನಿತ್ಯಭೂರಿಸೇವೆಗೆ ಸಾನ್ನಿಧ್ಯತೋರುತ ಆರತಿಯ ಶೃಂಗಾರದೋರುತ ಕಾಣಿಕೆಯ ಕಪ್ಪುವು ಸೇರಿತುಸೇರಿದಾನತಜನರ ಮನಸಿನಕೋರಿಕೆಗಳನ್ನಿತ್ತು ಸಲಹುವವೀರವೆಂಕಟಪತಿಯ ಸದನ-ದ್ವಾರ ದಾಟುತ ಸಾರಿಬಂದನು 1ಬಳಿಕಲ್ಲಿ ತುಲಾಭಾರದ ಹರಕೆಯನ್ನು ಕೈ-ಗೊಳುತಲೀಪರಿ ಮೋದವನಲವಿನಲಿ ಮಂಗಲದ ವಿಭವದಗೆಲುವಿನಲಿ ವಿಧಕಲಶ ವೇದದನಲವಿನಲಿ ಸುಲಲಿತಭಿಷೇಕವನು ಕೊಳುತಲಿಜಲಜನಾಭನು ಸುರಚಿರದ ನಿ-ಶ್ಚಲಿತ ಸಿಂಹಾಸನದಿ ಮಂಡಿಸಿಒಲಿದ ವಂದಿತ ಜನರ ಭಕ್ತಿಗೆ 2ವಲ್ಲಭೆಯರ ಸಹಿತ ಸಮರ್ಪಿಸಿ-ದೆಲ್ಲ ಸ್ವೀಕರಿಸಿ ಮತ್ತಾಪಲ್ಲವಪಾದಗಳ ತೋರಿಸಿಎಲ್ಲವ ರಕ್ಷಿಸಿ ದಯಾರಸವುಳ್ಳವಫುಲ್ಲನಾಭನು ಪೂರ್ಣಕಾಮ ಶ್ರೀ-ವಲ್ಲಭನು ನರನಾಟಕದಿ ಜಗ-ಎಲ್ಲ ರಕ್ಷಿಸಿ ಮೆರೆವ ಭಕ್ತರಸುಲ್ಲಭನು ಸುಮನೋನುರಾಗನು 3ಶರದಿಯೇಳರ ಮಧ್ಯದ ಧಾರಿಣಿಯೊಳುಮೆರೆವ ಹೇಮಾಚಲದಸ್ಫುರಿತದಾ ಮಹಾಜಂಬುದ್ವೀಪ ವಿ-ಸ್ತರಿತದಾ ಭರತಾಖ್ಯ ಖಂಡದಿಹರುಷದಿ ನಿರುತ ತೌಳವದೇಶಮಧ್ಯದಿಮೆರೆವ ಕಾರ್ಕಳಪುರವರವೆ ಪಡುತಿರುಪತಿಯು ಎಂದೆನಿಸಿ ಭಕುತರನೆರವಿಯನು ಪರಿಪಾಲಿಸುವನೆಲೆ 4ಈಪರಿವಿಭವದಲಿ ಪ್ರತಿವರುಷಕೆಶ್ರೀಪರಮ್ಮಾತನಲ್ಲಿವ್ಯಾಪಿಸಿ ಭಕ್ತರನುಕಾವನಿ-ರೂಪಿಸಿ ಸೇವೆಯನು ಕೈಕೊಂಡೊಪ್ಪಿಸಿಪಾಪವೆಲ್ಲವ ಪರಿಹರಿಸಿ ಚಿ-ದ್ರೂಪನಂದದಿ ಹೊಳೆವ ಪರತರ-ರೂಪಕರುಣಾಲಾಪ ಸದ್ಗುಣ-ದೀಪ ಚಪ್ಪರ ಶ್ರೀನಿವಾಸನು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ |ಭಕ್ತವತ್ಸಲ ದೇವನು ಪಮಕ್ಕಳ ಚೆಂಡಿಕೆ ಮರದ ಕೊನೆಗೆಕಟ್ಟಿ|ಗಕ್ಕನೆ ಕೃಷ್ಣ ಚೆಪ್ಪಾಳಿಕ್ಕಿದನಮ್ಮ ಅ.ಪಹೆಣ್ಣು ಮಕ್ಕಳು ಬಚ್ಚಲೊಳಗೆಣ್ಣೆ ಮಂಡೆಯೊಳು |ಬಣ್ಣವಸ್ತ್ರವ ಬಿಚ್ಚಿ ಬರಿಮೈಯಲಿರುತಿರೆ ||ಕಣ್ಣಿಗೆ ಬಿಸಿನೀರ ಚೆಲ್ಲಿ ಸೀರೆಯನೊಯ್ದು |ಉನ್ನತವಾದ ವೃಕ್ಷವನೇರಿದನೆ ರಂಗ 1ಪಟ್ಟೆಮಂಚದ ಮೇಲೆ ಪತಿಯಂತೆ ಕುಳಿತಿರುವ |ಎಷ್ಟು ಸ್ವಾತಂತ್ರ್ಯವೆಗೋಪಿ||ಉಟ್ಟ ಸೀರೆಯನೆಳೆದು ಬಟ್ಟಕುಚವ ಪಿಡಿದು |ಅಷ್ಟು ಮಂದಿಗಳೊಳಗೆ ಗಟ್ಟಿ ಅಪ್ಪಿಕೊಂಡನೆ 2ಸಡಗರದಿಂದ ಗೋವಳಿತಿಯರೊಡಗೂಡಿ |ನುಡಿಸುತ ಕೊಳಲನು ಪುರದೊಳಗೆ ||ಕಡೆವ ಮಡದಿಯರ ಕೈ ಪಿಡಿದಾಡುವ |ಒಡೆಯನೆ ನಮ್ಮ ಶ್ರೀಪುರಂದರವಿಠಲ 3
--------------
ಪುರಂದರದಾಸರು
ಸ್ತ್ರೀಯ ತ್ಯಜಿಸಲು ಬೇಕು ಶಿವಧ್ಯಾನಕೆಬಯ್ಯಬೇಡಿರಿ ಬುದ್ಧಿ ಎಂದೆನ್ನಿರಯ್ಯಪಮಹಿಳೆಯ ಮೋಹದಲಿ ಮಗನು ತನ್ನವನೆಂಬೆಮಹಿಳೆಯು ತೆರಳೆ ಮಗನಿಗಾರೋಇಹುದು ಪ್ರಪಂಚವೆಲ್ಲ ಎಲ್ಲ ಸತಿಯಿಂದಲಿಮಹಾದೇವ ಚಿಂತನೆಗೆ ಮರೆವೆ ಸ್ತ್ರೀಯಯ್ಯಾ1ಮಗನು ಶಿಶುವಾಗಿರಲು ಮಾನಿನಿಯ ಬಡಿವನುಮಗ ಬಲಿಯೆ ಮುರಿವನು ನಿನ್ನೆಲುಬನುಮಗನು ಯಾರವ ಹೇಳು ಮನೆಯು ಯಾರದು ಹೇಳುನಗುವು ಅಲ್ಲದೆ ನನ್ನದೆಂತೆನಲಿಕಯ್ಯಾ2ಪತ್ನಿಯನು ಬಯ್ಯೆ ಮಗ ಬಡಿವನು ಎಂಬಹೆತ್ತಾಕೆ ಬಯ್ಯೆ ಹೇವಿಲ್ಲದಿಹನುತೊತ್ತಿನ ಮಗನಾಗಿ ನಿನ್ನ ತಳ್ಳುವನುಮಿತ್ರನಾಗಿಹನವನು ತಾಯಿಗಯ್ಯಾ3ಮನೆಯು ಸವತಿಯವಳದು ಮಕ್ಕಳೆಲ್ಲ ಸವತಿಯದುಎನಿತೆನಿತು ಭಾಗ್ಯ ಸೊದೆ ಎಲ್ಲ ಸವತಿಯಳದುಮನಕೆ ಹೇಸಿಗೆ ಹುಟ್ಟಿ ಮಹಾತ್ಮನಾಗಲುತನ್ನ ಹಿಂದೆ ತಿರುಗುವರೆ ತಿಳಿದು ನೋಡಯ್ಯ4ಸಂಗತಿಯ ಮೂಲದಲಿ ಸುತ್ತಿಹುದು ಪ್ರಪಂಚಕಂಗಳೊಳು ಕಸ ಚೆಲ್ಲಿದಂತೆ ಇಹುದುಮಂಗಳ ಚಿದಾನಂದಮುಕ್ತತಾನಾಗುವುದಕೆಅಂಗನೆಯ ಬಿಡಬೇಕು ಚಿಂತೆ ಯಾಕಯ್ಯಾ5
--------------
ಚಿದಾನಂದ ಅವಧೂತರು